Tag: Minister Satish Jarkiholi

  • ನನ್ನದು ಮಾನವ ಕುಲ, ಮಾನವ ನಕ್ಷತ್ರ – ಕುಲ, ಗೋತ್ರ ಕೇಳಿದ ಪುರೋಹಿತರಿಗೆ ಸತೀಶ್‌ ಜಾರಕಿಹೊಳಿ ಉತ್ತರ

    ನನ್ನದು ಮಾನವ ಕುಲ, ಮಾನವ ನಕ್ಷತ್ರ – ಕುಲ, ಗೋತ್ರ ಕೇಳಿದ ಪುರೋಹಿತರಿಗೆ ಸತೀಶ್‌ ಜಾರಕಿಹೊಳಿ ಉತ್ತರ

    ಕಾರವಾರ: ಪೂಜಾ ಕಾರ್ಯವೊಂದಕ್ಕೆ ಕುಲ, ಗೋತ್ರ ಕೇಳಿದ ಪುರೋಹಿತರಿಗೆ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಉತ್ತರ ವಿಶಿಷ್ಟವಾಗಿದೆ. ಪುರೋಹಿತರಿಗೆ ನಾಸ್ತಿಕ ಮನೋಭಾವದ ಸಚಿವರು ಮಾನವೀಯತೆ ಪಾಠ ಹೇಳಿದ್ದಾರೆ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ತಾಲೂಕಿನ ಶಿವಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹೆಗ್ಗಾರ ಗ್ರಾಮದಲ್ಲಿ ಕಾಲುಸಂಕ ನಿರ್ಮಾಣ ಕಾಮಗಾರಿಯ ಉದ್ಘಾಟನಾ ಸಮಾರಂಭಕ್ಕೆ ಸಚಿವ ಸತೀಶ್‌ ಜಾರಕಿಹೊಳಿ ಆಗಮಿಸಿದ್ದರು. ಗಣಪತಿ ಪೂಜೆ ಸಂದರ್ಭದಲ್ಲಿ ಪೂಜಾ ಕಾರ್ಯ ನೆರವೇರಿಸಲು ಹೆಗ್ಗಾರಿನ ಮಹಾಬಲೇಶ್ವರ ಗೋಪಾಲಕೃಷ್ಣ ದೀಕ್ಷಿತ್ ಎಂಬ ಪುರೋಹಿತರು ಇದ್ದರು. ಇದನ್ನೂ ಓದಿ: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಬಾವ ನಾಪತ್ತೆ – ಕಿಡ್ನ್ಯಾಪ್ ಶಂಕೆ

    ಈ ವೇಳೆ ಪುರೋಹಿತರು, ಜಾರಕಿಹೊಳಿ ಅವರಿಗೆ ನಿಮ್ಮ ಕುಲ, ನಕ್ಷತ್ರ ಯಾವುದು ಎಂದು ಪೂಜಾ ಕಾರ್ಯಕ್ಕಾಗಿ ಕೇಳಿದ್ದಾರೆ. ನನ್ನ ಕುಲ ಮಾನವ ಕುಲ, ಮಾನವ ನಕ್ಷತ್ರ ಎಂದು ಹೇಳುವ ಮೂಲಕ ಮಾನವತಾ ವಾದದ ಪಾಠ ಮಾಡಿದ್ದಾರೆ. ಇನ್ನು ಪುರೋಹಿತರು ಸಹ ಅವರು ಹೇಳಿದಂತೆಯೇ ನಕ್ಷತ್ರವನ್ನು ಮಾನವ ನಕ್ಷತ್ರ, ಮನುಷ್ಯ ಕುಲ ಎಂದು ಮಂತ್ರಹೇಳುವ ಮೂಲಕ ಗಣಪತಿ ಪೂಜೆ ನೆರವೇರಿಸಿದರು.

    ನಾಸ್ತಿಕ ಮನೋಭಾವ ಹೊಂದಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಜನರಲ್ಲಿ ಜಾಗೃತಿ ಮೂಡಿಸಲು ಧಾರ್ಮಿಕ ಅನಿಷ್ಟ ಪದ್ದತಿ, ಮೂಡ ನಂಬಿಕೆ ವಿರುದ್ಧ ನಿರಂತರವಾಗಿ ಸಮರ ಸಾರುತ್ತಾ ಬಂದಿದ್ದಾರೆ. ಇದನ್ನೂ ಓದಿ: ಡಾಕ್ಟರ್‌ ಆಗಬೇಕೆಂದು ಕನಸು ಕಂಡಿದ್ದ ಹುಡುಗಿ ರಕ್ತದ ಕ್ಯಾನ್ಸರ್‌ಗೆ ಬಲಿ – ಮಗಳ ಆಸೆಯಂತೆ ದೇಹದಾನ ಮಾಡಿದ ಪೋಷಕರು

  • ಕುಂದಗೋಳದಲ್ಲಿ ‘ಕೈ’ಗೆ ಬಂಡಾಯದ ಬಿಸಿ

    ಕುಂದಗೋಳದಲ್ಲಿ ‘ಕೈ’ಗೆ ಬಂಡಾಯದ ಬಿಸಿ

    – ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಿದ್ದಕ್ಕೆ ಭಾರೀ ವಿರೋಧ
    – ನಡು ರಸ್ತೆಯಲ್ಲಿಯೇ ಸಚಿವರ ಕಾರು ನಿಲ್ಲಿಸಿ ಆಕ್ರೋಶ

    ಹುಬ್ಬಳ್ಳಿ: ಸಿ.ಎಸ್.ಶಿವಳ್ಳಿ ಅವರ ಪತ್ನಿಗೆ ಕುಂದಗೋಳ ಉಪಚುನಾವಣೆಯ ಟಿಕೆಟ್ ನೀಡಿದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಎದುರಲ್ಲೆ ಕೈ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಕುಂದಗೋಳದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಬಂಡಾಯ ಎದ್ದಿದ್ದರು. ಹೀಗಾಗಿ ಬಂಡಾಯ ಶಮನ ಮಾಡಲು ಸಚಿವ ಸತೀಶ್ ಜಾರಕಿಹೊಳಿ ಅವರು ಕುಂದಗೋಳಕ್ಕೆ ಭೇಟಿ ನೀಡಿ, ಹಿಂದುಳಿದ ವರ್ಗಗಳ ನಾಯಕರ ಸಭೆ ನಡೆಸಿದರು. ಈ ವೇಳೆ ಸಚಿವರ ಎದುರೇ ಟಿಕೆಟ್ ಆಕಾಂಕ್ಷಿ ಶಿವಾನಂದ್ ಬೆಂತೂರು ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

    ಸಭೆಯಲ್ಲಿ ಅಸಮಾಧಾನ ಹೊರ ಹಾಕಿದ ಸ್ಥಳೀಯ ಕಾಂಗ್ರೆಸ್ ಮುಖಂಡ ಶಿವಾನಂದ್ ಬೆಂತೂರ್ ಅವರು, ಕಾಂಗ್ರೆಸ್ ಹೈಕಮಾಂಡ್ ಏಕಪಕ್ಷಿಯ ನಿರ್ಧಾರ ತೆಗದುಕೊಂಡಿದೆ. ಈ ಆಯ್ಕೆಯು ನಮಗೆ ನೋವು ತಂದಿದೆ. ಕುಂದಗೋಳದಲ್ಲಿ ಕಾಂಗ್ರೆಸ್ ಶಿವಳ್ಳಿ ಅವರದ್ದೇ ಎಂಬಂತಾಗಿದೆ. ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸುತ್ತೇನೆ. ಇಲ್ಲವೇ ನಾಲ್ಕೈದು ಜನ ಆಕಾಂಕ್ಷಿಗಳ ಜೊತೆ ಚರ್ಚಿಸಿ ಒಬ್ಬರು ಬಂಡಾಯ ಅಭ್ಯರ್ಥಿಯಾಗುತ್ತೇವೆ ಎಂದು ಹೇಳಿದರು.

    ಅತೃಪ್ತರ ಸಭೆಯ ಬಳಿಕ ಮಾತನಾಡಿ ಸಚಿವರು, ಬಹಳ ಜನ ಆಕಾಂಕ್ಷಿಗಳಿದ್ದಾಗ ಈ ರೀತಿ ಆಗುವುದು ಸಹಜ. ನಾನು ಅವರ ಜೊತೆ ಮಾತನಾಡಿದ್ದೇನೆ. ಪಕ್ಷದ ವರಿಷ್ಠರು ನಾಳೆ ನಾಮಪತ್ರ ಸಲ್ಲಿಸಲು ಬರುತ್ತಾರೆ. ಅವರ ಗಮನಕ್ಕೆ ತರುತ್ತೇನೆ. ಪಕ್ಷದಲ್ಲಿ ಬಂಡಾಯವಿಲ್ಲ. ಈ ರೀತಿ ಅಸಮಾಧಾನ ಸಹಜ ಎಂದು ಹೇಳಿದರು.

    ಕುಂದಗೋಳದಿಂದ ಹುಬ್ಬಳ್ಳಿಗೆ ಸಚಿವ ಸತೀಶ್ ಜಾರಕಿಹೊಳಿ ಮರಳುತ್ತಿದ್ದಾಗ, ನಡು ರಸ್ತೆ ಅವರ ಕಾರು ನಿಲ್ಲಿಸಿ ಆಕ್ರೋಶ ಹೊರ ಹಾಕಿದರು. ಈ ವೇಳೆ ಮನವೊಲಿಕೆಗೆ ಮುಂದಾದ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಶಿವಾನಂದ ಬೆಂತೂರು, ಬೆಂಬಲಿಗರೂ ಕ್ಯಾರೆ ಎನ್ನಲಿಲ್ಲ. ಸ್ಥಳೀಯ ಮುಖಂಡರ ಅಭಿಪ್ರಾಯ ಕೇಳದೇ ಟಿಕೆಟ್ ನೀಡಿದ್ದು ಖಂಡನೀಯ ಎಂದು ಗುಡುಗಿದರು.

  • ತಮ್ಮನಿಂದ ಸಚಿವ ಸ್ಥಾನ ಕಿತ್ತುಕೊಂಡಿಲ್ಲ: ಸತೀಶ್ ಜಾರಕಿಹೊಳಿ

    ತಮ್ಮನಿಂದ ಸಚಿವ ಸ್ಥಾನ ಕಿತ್ತುಕೊಂಡಿಲ್ಲ: ಸತೀಶ್ ಜಾರಕಿಹೊಳಿ

    – ರಮೇಶ್ ಜಾರಕಿಹೊಳಿ ಲೋಕಸಭೆ ಟಿಕೆಟ್ ಕೇಳಿದ್ರೆ ನಾಯಕರು ಕೊಡ್ತಾರೆ

    ಧಾರವಾಡ: ನಾನೇನು ಸಹೋದರ ರಮೇಶ್ ಜಾರಕಿಹೊಳಿ ಅವರಿಂದ ಸಚಿವ ಸ್ಥಾನ ಕಿತ್ತುಕೊಂಡಿಲ್ಲ. ಮೈತ್ರಿ ಸರ್ಕಾರ, ಪಕ್ಷದ ನಾಯಕರೇ ನನಗೆ ಮಂತ್ರಿಗಿರಿ ನೀಡಿದ್ದಾರೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್‍ನ ಅತೃಪ್ತ ಶಾಸಕರು ನಮ್ಮೊಂದಿಗೆ ಇದ್ದಾರೆ. ನಮ್ಮೊಂದಿಗೆಯೇ ಇರುತ್ತಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಲೋಕಸಭಾ ಟಿಕೆಟ್ ಕೇಳಿದರೆ ಪಕ್ಷದ ನಾಯಕರು ಕೊಡುತ್ತಾರೆ. ಅದೇನು ದೊಡ್ಡ ವಿಷಯ ಅಲ್ಲವೇ ಅಲ್ಲ. ಶಾಸಕರ ಸಮಸ್ಯೆಯನ್ನು ಪಕ್ಷದ ವರಿಷ್ಠರೇ ಬಗೆಹರಿಸುತ್ತಾರೆ ಎಂದು ಸಹೋದರ ರಮೇಶ್ ಜಾರಕಿಹೊಳಿ ಅವರ ಪರ ಬ್ಯಾಟ್ ಬೀಸಿದರು.

    ಪುಲ್ವಾಮಾದಲ್ಲಿ ಉಗ್ರರ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಇಡೀ ದೇಶವೇ ದಾಳಿಯನ್ನು ಖಂಡಿಸುತ್ತಿದೆ. ಮುಂದೆ ಇಂತಹ ಘಟನೆಗಳು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.

    ಬೆಳಗಾವಿ ಜಿಲ್ಲೆಯ ಯುವತಿ ದೇಶದ್ರೋಹದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಈ ಕುರಿತು ಸ್ಥಳೀಯ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ. ದೇಶದ್ರೋಹ ನಡೆಯಿಂದಾಗಿ ಕೆಲವರು ಯುವತಿಯ ಮನೆಯ ಮೇಲೆ ಕಲ್ಲು ತೂರಿ, ಹಾನಿ ಮಾಡಿದ್ದಾರೆ. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದು, ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು. ಇದನ್ನು ಓದಿ: ಪಾಕಿಸ್ತಾನಕ್ಕೆ ಜೈ ಎಂದ ಶಿಕ್ಷಕಿ ಪೊಲೀಸರ ವಶಕ್ಕೆ- ಮನೆಗೆ ಬೆಂಕಿ

    ಅರಣ್ಯ ಇಲಾಖೆ ಸಿಬ್ಬಂದಿ ವೇತನ ತಾರತಮ್ಯವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಈ ತಾರತಮ್ಯವನ್ನು ಸರಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆದಷ್ಟು ಬೇಗ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv