Tag: Mini Goods Vehicle

  • ಚಿತ್ರದುರ್ಗದಲ್ಲಿ ಲಾರಿಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ – ಇಬ್ಬರು ದುರ್ಮರಣ

    ಚಿತ್ರದುರ್ಗದಲ್ಲಿ ಲಾರಿಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ – ಇಬ್ಬರು ದುರ್ಮರಣ

    ಚಿತ್ರದುರ್ಗ: ಲಾರಿಗೆ (Lorry) ಮಿನಿ ಗೂಡ್ಸ್ ವಾಹನ (Goods Vehicle) ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ಪಟ್ಟಣದ ಬಳಿ ನಡೆದಿದೆ.

    ಅಪಘಾತದ ಪರಿಣಾಮ ಮಿನಿಗೂಡ್ಸ್ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದ ರಮೇಶ್ (55), ಬೆಳಗೆರೆ ಗ್ರಾಮದ ಶಿವಲಿಂಗಪ್ಪ (65) ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಚಳ್ಳಕೆರೆಯಿಂದ ಹಿರಿಯೂರು ಕುರಿ ಮಾರುಕಟ್ಟೆಗೆ ತೆರಳುತ್ತಿದ್ದ ಸಂದರ್ಭ ರಾಷ್ಟ್ರೀಯ ಹೆದ್ದಾರಿ 150ಎರಲ್ಲಿ ಲಾರಿಗೆ ಹಿಂಬದಿಯಿಂದ ಗೂಡ್ಸ್ ವಾಹನ ಡಿಕ್ಕಿಯಾಗಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣ ಹೋಗಿದ್ದು ಎಲ್ಲಿಗೆ? – ಬೆಂಗಳೂರು ಕಂಪನಿಗಳೇ ಅಧಿಕ

    ಘಟನಾ ಸ್ಥಳಕ್ಕೆ ಹಿರಿಯೂರು ಠಾಣೆ ಸಿಪಿಐ ಕಾಳಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ ಕೇಸ್ – ಆರೋಪಿ ಅಪ್ರಾಪ್ತನ ತಾಯಿ ಬಂಧನ

  • ಹಸುಗೂಸು ಜೊತೆ ಬಾಣಂತಿ ಬಯಲಲ್ಲೇ ಜೀವನ – ಮಿನಿ ಗೂಡ್ಸ್ ವಾಹನದಲ್ಲಿ ಬದುಕು

    ಹಸುಗೂಸು ಜೊತೆ ಬಾಣಂತಿ ಬಯಲಲ್ಲೇ ಜೀವನ – ಮಿನಿ ಗೂಡ್ಸ್ ವಾಹನದಲ್ಲಿ ಬದುಕು

    – ವಲಸಿಗರ ಬದುಕು ಕಸಿದ ಡೆಡ್ಲಿ ಕೊರೊನಾ
    – ತಾಯಿ, ಮಗುವಿಗೆ ವಾಹನವೇ ಮನೆ

    ಧಾರವಾಡ: ಕೊರೊನಾ ಲಾಕ್‍ಡೌನ್‍ನಿಂದ ಅನೇಕ ಜನರ ಜೀವನ ಅಸ್ತವ್ಯಸ್ತವಾಗಿದೆ. ಇದೀಗ ಜಿಲ್ಲೆಯಲ್ಲಿ ಎರಡು ವಾರದ ಹಸುಗೂಸು ಮತ್ತು ಬಾಣಂತಿ ಬಯಲಿನಲ್ಲೇ ಮಿನಿಗೂಡ್ಸ್ ವಾಹನದಲ್ಲಿ ವಾಸ ಮಾಡುತ್ತಿದ್ದಾರೆ.

    ಲಾಕ್‍ಡೌನ್‍ಗೂ ಮುನ್ನ ಧಾರವಾಡ ಹಾಗೂ ಹಾವೇರಿ ಗಡಿ ಭಾಗದ ಹೆಳವರು ಎಂಬ ಸಮುದಾಯದ ಜನರು ಜಿಲ್ಲೆಯ ಹಳಿಯಾರ ರಸ್ತೆಯಿರುವ ಹಳ್ಳಿಗಳಲ್ಲಿ ಸಂಚಾರ ಮಾಡುತ್ತ ಬಣದೂರ ಗ್ರಾಮದ ಬಳಿ ಬಂದಿದ್ದರು. ಆದರೆ ತಮ್ಮ ತಮ್ಮ ಊರುಗಳನ್ನು ಸೇರಬೇಕು ಎನ್ನುವಾಗಲೇ ಕೊರೊನಾದ ಲಾಕ್‍ಡೌನ್ ಜಾರಿಯಾಗಿ ಇವರೆಲ್ಲ ಬಣದೂರ ಬಯಲಿನಲ್ಲೇ ಲಾಕ್ ಆದರು. ಇಲ್ಲಿಯೇ ಕೆಲ ಹೆಳವರ ಮನೆಗಳು ಸಹ ಇರುವುದರಿಂದ ಇವರೆಲ್ಲ ಇಲ್ಲಿಯೇ ಉಳಿದರು. ಇವರೊಂದಿಗೆ ತನ್ನ ತಾಯಿ ಬಸವ್ವಳ ಮನೆಗೆ ಹೆರಿಗೆಗೆ ಬಂದಿದ್ದ ಸರಸ್ವತಿ ಸಹ ಇದ್ದಳು.

    ದಿನ ತುಂಬುವುದರೊಳಗಾಗಿ ಇವರೆಲ್ಲ ತಮ್ಮ ತಮ್ಮ ಊರುಗಳನ್ನು ಸೇರಿ ಹೆರಿಗೆಯೂ ಆಗೋದಿತ್ತು. ಆದರೆ ಲಾಕ್‍ಡೌನ್ ಆಗಿದ್ದರಿಂದ ಎರಡು ವಾರದ ಹಿಂದೆಯಷ್ಟೇ ಸರಸ್ವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸಲಾಗಿದೆ. ನಂತರ ತನ್ನವರೆಲ್ಲ ಬಣದೂರ ಬಯಲಿನಲ್ಲಿ ಇದ್ದ ಕಾರಣ ಬಾಣಂತಿ ಸರಸ್ವತಿ ಕೂಡ ಅಲ್ಲಿಗೆ ವಾಪಸ್ ಬಂದಿದ್ದಾರೆ.

    ಮಿನಿ ಗೂಡ್ಸ್‌ನ ಹಿಂಭಾಗಕ್ಕೆ ಕೌದಿಗಳನ್ನು ಹಾಕಿ ಕೋಣೆಯನ್ನಾಗಿ ಮಾಡಿ ಮಗುವಿಗೆ ಆರೈಕೆ ಮಾಡುತ್ತಿದ್ದಾರೆ. ಆದರೆ ಒಂದಷ್ಟು ರೇಷನ್ ಮಾತ್ರ ಬಂದಿದ್ದು, ಉಳಿದಂತೆ ಕೈಯಲ್ಲಿರುವುದು ಎಲ್ಲವೂ ಖಾಲಿಯಾಗುತ್ತಿದೆ. ಹೀಗಾಗಿ ಮುಂದೇನು ಎನ್ನುವ ಚಿಂತೆ ಕೂಡ ಇವರನ್ನು ಕಾಡುತ್ತಿದೆ.

    ಸರಸ್ವತಿ ಹೆರಿಗೆಗೆ ಆಸ್ಪತ್ರೆಗೆ ಕೂಡ ಬೈಕ್‍ನಲ್ಲಿ ಹೋಗಿದ್ದು, ಮೈಯಲ್ಲಿ ರಕ್ತ ಕಡಿಮೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಪೌಷ್ಟಿಕ ಆಹಾರ ಕೊಡೋಣ ಎಂದರೆ ಅಗತ್ಯ ವಸ್ತುಗಳನ್ನು ಖರೀದಿಸಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ಈ ಸಮುದಾಯದವರು ವರ್ಷಗಟ್ಟಲೆ ಹೊರಗೆ ಜೀವನ ಕಳೆಯುವುದು. ಇದೇ ರೀತಿ ವಾಹನದಲ್ಲಿ ತಮ್ಮ ಮನೆ ಮಾಡಿ ಇರುತ್ತಾರೆ. ಕೆಲವರು ಚಕ್ಕಡಿಯಲ್ಲಿ ಮನೆ ಮಾಡಿಕೊಂಡು ಇರುತ್ತಾರೆ. ಇನ್ನೂ ಕೆಲವರು ಈ ರೀತಿ ವಾಹನದಲ್ಲೇ ಕಾಲ ಕಳೆಯುತ್ತಾರೆ. ಸದ್ಯ ಸರಸ್ವತಿ ಹಾಗೂ ಅವರ ಮಗುವಿಗೆ ಈ ಲಾಕ್ ಡೌನ್‍ನಿಂದ ವಾಹನವೇ ಮನೆ ಆಗಿದೆ.