Tag: Men

  • ‘ಅವಳಿ’ ಅಪ್ಪ, ಜವಳಿ ಮಕ್ಕಳು – 8 ತಿಂಗಳ ನಂತ್ರ 19ರ ಯುವತಿಯ ರಹಸ್ಯ ಬಯಲು

    ‘ಅವಳಿ’ ಅಪ್ಪ, ಜವಳಿ ಮಕ್ಕಳು – 8 ತಿಂಗಳ ನಂತ್ರ 19ರ ಯುವತಿಯ ರಹಸ್ಯ ಬಯಲು

    ಬ್ರೆಸಿಲಿಯಾ: ಒಂದೇ ದಿನ ಇಬ್ಬರು ಪುರುಷರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ 19 ವರ್ಷದ ಯುವತಿಯೊಬ್ಬಳು ಇಬ್ಬರಿಂದಲೂ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದಾಗಿ ತಿಳಿಸಿದ್ದಾಳೆ.

    ಎರಡು ಮಗುವಿನ ತಂದೆ ಯಾರೆಂದು ಪತ್ತೆಹಚ್ಚಲು ಮುಂದಾದ ಯುವತಿ ಡಿಎನ್‍ಎ ಟೆಸ್ಟ್ ರಿಪೋರ್ಟ್ ಶಾಕ್ ಆಗಿದ್ದಾಳೆ. ತನ್ನ ಇಬ್ಬರು ಮಕ್ಕಳು ವಿಭಿನ್ನ ವ್ಯಕ್ತಿಗಳಿಂದ ಜನಿಸಿರುವ ವಿಚಾರ ತಿಳಿದುಬಂದಿದ್ದು, ಈ ರೀತಿ ಆಗುತ್ತದೆ ಅಂತ ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಯುವತಿ ಹೇಳಿದ್ದಾಳೆ.

    ಈ ಕುರಿತಂತೆ ಯುವತಿಗೆ ಚಿಕಿತ್ಸೆ ನೀಡಿದ ವೈದ್ಯ ತುಲಿಯೊ ಜಾರ್ಜ್ ಫ್ರಾಂಕೊ ಅವರು ಪ್ರತಿಕ್ರಿಯಿಸಿ, ಈ ರೀತಿಯ ಪ್ರಕರಣಗಳು ಬಹಳ ಅಪರೂಪ. 10 ಲಕ್ಷದಲ್ಲಿ ಒಂದು ಪ್ರಕರಣ ಇಂತಹ ರೀತಿ ಇರುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೇ ಹೆಟೆರೊಪರೆಂಟಲ್ ಸೂಪರ್‍ಫೆಕಂಡೇಶನ್ ಪ್ರಪಂಚದಾದ್ಯಂತ ಕೇವಲ 20 ಪ್ರಕರಣಗಳಿವೆ. ವಿವಿಧ ವ್ಯಕ್ತಿಗಳ ಅವಳಿ ಮಕ್ಕಳಿಗೆ ಮಹಿಳೆ ಜನ್ಮ ನೀಡುವ ಅತ್ಯಂತ ಅಪರೂಪದ ವಿದ್ಯಮಾನವಾಗಿದೆ ಎಂದು ಹೇಳಿದ್ದಾರೆ.

    ಋತುಚಕ್ರದ ಸಮಯದಲ್ಲಿ ಬಿಡುಗಡೆಯಾದ ಎರಡನೇ ಅಂಡಾಣುವು ಪ್ರತ್ಯೇಕ ಲೈಂಗಿಕ ಸಂಭೋಗದಲ್ಲಿ ಬೇರೆ ಪುರುಷರ ವೀರ್ಯ ಕೋಶಗಳಿಂದ ಹೆಚ್ಚುವರಿಯಾಗಿ ಫಲವತ್ತಾದಾಗ ಇದು ಸಂಭವಿಸುತ್ತದೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ವಿವರಿಸುತ್ತದೆ. ಇದನ್ನೂ ಓದಿ: ವೆಬ್ ಸರಣಿ ರೂಪದಲ್ಲಿ ಬರಲಿದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ

    ಒಂದೇ ತಾಯಿಯಿಂದ ಎರಡು ಮೊಟ್ಟೆಗಳನ್ನು ವಿಭಿನ್ನ ಪುರುಷರು ಫಲವತ್ತಾಗಿಸಿದಾಗ ಇದು ಸಂಭವಿಸಬಹುದು. ಶಿಶುಗಳು ತಾಯಿಯ ಆನುವಂಶಿಕ ವಸ್ತುಗಳನ್ನು ಹಂಚಿಕೊಳ್ಳುತ್ತವೆ, ಆದರೆ ಅವು ವಿಭಿನ್ನ ಜರಾಯುಗಳಲ್ಲಿ ಬೆಳೆಯುತ್ತವೆ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ‘ತಾಂಟ್ರೆ ನೀ ಬಾ ತಾಂಟ್’ ಖ್ಯಾತಿಯ ರಿಯಾಝ್ ಫರಂಗಿಪೇಟೆ ಮನೆಗೆ NIA ದಾಳಿ

    ಈ ವಿಚಾರವಾಗಿ ಪರತಿಕ್ರಿಯಿಸಿದ ಯುವತಿ ತನ್ನ ಇಬ್ಬರೂ ಮಕ್ಕಳಿಗೆ ಹೋಲಿಕೆ ಇರಲಿಲ್ಲ. 8 ತಿಂಗಳ ಬಳಿಕ ತಂದೆ ಯಾರಿರಬಹುದು ಎಂಬುವುದರ ಬಗ್ಗೆ ಅನುಮಾನ ಮೂಡಲು ಆರಂಭವಾಯಿತು. ಹೀಗಾಗಿ ಎಂಟು ತಿಂಗಳ ಶಿಶುಗಳನ್ನು ಡಿಎನ್‍ಎ ಪರೀಕ್ಷೆಗೆ ಒಳಪಡಿಸಿದಾಗ ಫಲಿತಾಂಶದಲ್ಲಿ ಒಂದು ಮಗು ಮಾತ್ರ ತಂದೆಯ ಹೋಲಿಕೆಯನ್ನು ಹೊಂದಿದೆ. ಅನುಮಾನದಿಂದ ಮತ್ತೆ ಪರೀಕ್ಷಿಸಿದಾಗಲೂ ಇದೇ ಫಲಿತಾಂಶ ಬಂದಿದೆ. ಈ ವೇಳೆ ಯುವತಿ ಒಂದೇ ದಿನ ಇಬ್ಬರ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ ವಿಚಾರ ಬೆಳಕಿಗೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಮಳೆಗಾಲದಲ್ಲಿ ಧರಿಸಬಹುದಾದ ಆರಾಮದಾಯಕ ರೈನ್‍ಕೋಟ್‍ಗಳು

    ಮಳೆಗಾಲದಲ್ಲಿ ಧರಿಸಬಹುದಾದ ಆರಾಮದಾಯಕ ರೈನ್‍ಕೋಟ್‍ಗಳು

    ಳೆಗಾಲದಲ್ಲಿ ಜೋರಾಗಿ ಗಾಳಿ ಬೀಸುವುದು, ಭಾರೀ ಮಳೆಯಾಗಿ ಹಲವೆಡೆ ಪ್ರವಾಹ ಉಂಟಾಗುವುದನ್ನು ನಾವು ನೋಡಿರುತ್ತೇವೆ. ಅದರಲ್ಲಿಯೂ ವಿಶೇಷವಾಗಿ ಭಾರತದಲ್ಲಿ ಮಳೆಯನ್ನು ಪ್ರೀತಿಸುವುದರ ಜೊತೆಗೆ ದ್ವೇಷಿಸುವವರ ಸಂಖ್ಯೆ ಕೂಡ ಸಮವಾಗಿದೆ. ಅದರಲ್ಲಿಯೂ ಪ್ರಣಯ ಪಕ್ಷಿಗಳಿಗೆ ಮಳೆಗಾಲ ಬಹಳ ಅಚ್ಚುಮೆಚ್ಚು. ಆದರೆ ಎಲ್ಲಾದರೂ ಹೊರಡುವಾಗ ಮಳೆಯಲ್ಲಿ ಸಿಕ್ಕಿಹಾಕಿಕೊಂಡರೇ ಅಷ್ಟೇ ಕಿರಿಕಿರಿ ಕೂಡ ಉಂಟಾಗುತ್ತದೆ. ಎಷ್ಟೋ ಜನ ಮಳೆಗಾಲದಲ್ಲಿ ಛತ್ರಿಯನ್ನು ಉಪಯೋಗಿಸುತ್ತಾರೆ. ಛತ್ರಿ ನಿಮ್ಮ ಮೇಲ್ಭಾಗ ಮಾತ್ರ ತೇವವಾಗುವುದರಿಂದ ರಕ್ಷಿಸಿದರೆ, ನಿಮ್ಮ ಮೊಣಕಾಲಿನಿಂದ ಒದ್ದೆಯಾಗಿಸುತ್ತದೆ. ಇದರಿಂದ ನಿಮಗೆ ನಡೆದಾಡಲೂ ಸಹ ಕಷ್ಟವಾಗುತ್ತದೆ. ಅಲ್ಲದೇ ಮಳೆ ಬರುವ ಸಂದರ್ಭದಲ್ಲಿ ಬ್ಯಾಗ್‍ಗಳು, ವ್ಯಾಲೆಟ್‍ಗಳು ಅಥವಾ ಸ್ಮಾರ್ಟ್‍ಫೋನ್‍ಗಳ ಜೊತೆಗೆ ಛತ್ರಿಯನ್ನು ಹಿಡಿದಿಟ್ಟುಕೊಳ್ಳಲು ಮತ್ತಷ್ಟು ಕಿರಿಕಿರಿಯಾಗುತ್ತದೆ. ಈ ಎಲ್ಲದಕ್ಕೂ ಪರಿಹಾರ ಅಂದರೆ ರೈನ್ ಕೋಟ್. ಮಳೆಗಾಲದಲ್ಲಿ ರೈನ್ ಕೋಟ್ ಧರಿಸುವುದು ಬಹಳ ಉತ್ತಮವಾಗಿದೆ.

    ಮಳೆಗಾಲಗಳು ಛತ್ರಿಗಳಿಗಿಂತಲೂ ಹೆಚ್ಚಾಗಿ ರೈನ್‍ಕೋಟ್‍ಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಇದು ನಿಮ್ಮ ಬ್ಯಾಗ್ ಅಲ್ಲದೇ ತಲೆಯಿಂದ ಪಾದದವರೆಗೂ ನಿಮ್ಮನ್ನು ಮಳೆಯಿಂದ ರಕ್ಷಿಸುತ್ತದೆ. ಅಲ್ಲದೇ ರೈನ್ ಕೋಟ್‍ನಲ್ಲಿ ಹಲವಾರು ವೆರೈಟಿ ಡಿಸೈನ್, ಸೈಜ್, ಅನೇಕ ನ್ಯೂ ಪ್ಯಾಟನ್‍ಗಳು ದೊರೆಯುತ್ತದೆ. ಈ ಕುರಿತಂತೆ ನಿಮಗೆ ತಿಳಿಯದೇ ಇರುವ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ.

    ಪುರುಷರ ರೈನ್ ಕೋಟ್
    ಪುರುಷರ ಈ ರೈನ್ ಕೋಟ್ ನಿಮಗೆ ಕೆಳಗಿನವರೆಗೂ ರಕ್ಷಣೆ ನೀಡುತ್ತದೆ. ಇದರಲ್ಲಿ ಜಾಕೆಟ್ ಜೊತೆಗೆ ಬಾಟಮ್ ಕೂಡ ಬರುತ್ತದೆ. ಈ ರೇನ್‍ಕೋಟ್ ನಿಮಗೆ ಮೇಲಿನ ಮತ್ತು ಕೆಳಗಿನವರೆಗೂ ರಕ್ಷಣೆ ನೀಡುತ್ತದೆ. ಇದು ಜಾಕೆಟ್ ಜೊತೆಗೆ ಬಾಟಮ್‍ನೊಂದಿಗೆ ಬರುತ್ತದೆ. ಈ ಜಾಕೆಟ್ ಇದು ಡ್ರಾಸ್ಟಿಂಗ್ ಮತ್ತು ಎಲಾಸ್ಟಿಕ್ ವೆಸ್ಟ್ ನೊಂದಿಗೆ ಬರುತ್ತದೆ. ಇದನ್ನು ನೀವು ನಿಮಗೆ ಹೇಗೆ ಬೇಕೋ ಹಾಗೇ ಅಡ್ಜೆಸ್ಟ್ ಮಾಡಿಕೊಳ್ಳಬಹುದು. ಇದು 100% ನಿಮ್ಮನ್ನು ಮಳೆ ಹಾಗೂ ಗಾಳಿಯಿಂದ ರಕ್ಷಣೆ ನೀಡುತ್ತದೆ.

    ಮಹಿಳೆಯರ ವಾಟರ್‌ಪ್ರೂಫ್ ಜಾಕೆಟ್
    ಮಹಿಳೆಯರು ಯಾವಾಗಲೂ ಒಂದೇ ರೀತಿಯ ರೈನ್ ಕೋಟ್ ಮೇಲೆ ಅವಲಂಬಿತರಾಗಿರುವುದಿಲ್ಲ. ಹಲವಾರು ವೇಳೆ ರೈನ್ ಕೋಟ್ ಬದಲಾಯಿಸುತ್ತಿರಬೇಕಾಗುತ್ತದೆ. ಸದ್ಯ ಈ ನೀಡಲಾಗಿರುವ ರೈನ್ ಕೋಟ್ ಅನ್ನು ಸೈಕ್ಲಿಂಗ್ ಹಾಗೂ ಬೈಕ್‍ನಲ್ಲಿ ಸವಾರಿ ಮಾಡುವಾಗ ಧರಿಸಬಹುದಾಗಿದೆ. ಮಳೆ ಬರುವ ವೇಳೆ ರಸ್ತೆಯಲ್ಲಿ ಹೋಗುವಾಗ ಬಸ್, ಕಾರು ಅಥವಾ ಇತರೆ ವಾಹನಗಳು ಜೋರಾಗಿ ಸಂಚರಿಸು ವೇಲೆ ರಸ್ತೆ ಗುಂಡಿಯಲ್ಲಿರುವ ಕೊಚ್ಚೆ ನೀರು, ಮಳೆ ಹನಿಗಳಿಂದ ನಿಮ್ಮನ್ನು ರಕ್ಷಿಸುವುದರ ಜೊತೆಗೆ ನಿಮ್ಮ ಪ್ರಯಾಣವನ್ನು ಸರಾಗಗೊಳಿಸುತ್ತದೆ. ಇದನ್ನೂ ಓದಿ: ಮುರುಘಾ ಶ್ರೀ ವಿರುದ್ಧ ಕಿಡ್ನಾಪ್ ಕೇಸ್ ಕೂಡಾ ದಾಖಲಾಗಿದ್ದು, ತನಿಖೆ ನಡೀತಿದೆ: ಬೊಮ್ಮಾಯಿ

    ವಾಟರ್‌ಪ್ರೂಫ್ ಪಾಲಿಯೆಸ್ಟರ್ ರೈನ್ ಪೊಂಚೊ ವಿತ್ ಹುಡ್
    ವಾಟರ್‌ಪ್ರೂಫ್ ಪಾಲಿಯೆಸ್ಟರ್ ರೈನ್ ಪೊಂಚೊ ವಿತ್ ಹುಡ್ ಯುನಿಸೆಕ್ಸ್ ರೈನ್‍ಕೋಟ್ ಆಗಿದ್ದು, ಇದು ನಿಮ್ಮ ಜೊತೆಗೆ ನಿಮ್ಮ ಬ್ಯಾಗ್ ಅನ್ನು ಸಹ ತೇವದಿಂದ ರಕ್ಷಿಸುತ್ತದೆ. ಇದು ಪ್ಯಾಕಿಂಗ್ ಪೌಚ್‍ನೊಂದಿಗೆ ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದೆ. ಈ ರೈನ್ ಕೋಟ್ ಅನ್ನು ಸುಲಭವಾಗಿ ಧರಿಸಬಹುದಾಗಿದೆ.

    ಮೆನ್ ವಾಟರ್‌ಪ್ರೂಫ್ ಡಬಲ್ ಲೇಯರ್ ರಿವರ್ಸಿಬಲ್ ರೈನ್‍ಕೋಟ್
    ಈ ರಿವರ್ಸಿಬಲ್ ರೇನ್‍ಕೋಟ್ ಪುರುಷರಿಗೆಂದೇ ಮೀಸಲಾಗಿದೆ. ಇದು ಜಾಕೆಟ್ ಜೊತೆಗೆ ಬರುತ್ತದೆ ಮತ್ತು ಭಾರೀ ಮಳೆಯಾಗುತ್ತಿರುವ ವೇಳೆ ಕೂಡ ನಡೆಯಲು ಸಾಕಷ್ಟು ಆರಾಮದಾಯಕವಾಗಿರುತ್ತದೆ. ಈ ರೈನ್‍ಕೋಟ್ ಅನ್ನು ಭಾರತದಲ್ಲಿಯೇ ತಯಾರಿಸಲಾಗುತ್ತದೆ ಮತ್ತು ಇದು ಬೇಗನೆ ಒದ್ದೆಯಿಂದ ಒಣಗುತ್ತದೆ. ಇದನ್ನೂ ಓದಿ: ಸಾನ್ಯ ಒಳ ಉಡುಪಿನ ಬಗ್ಗೆ ಮಾತನಾಡಿದ್ದ ಉದಯ್- ಚಳಿ ಬಿಡಿಸಿದ ಕಿಚ್ಚ

    Live Tv
    [brid partner=56869869 player=32851 video=960834 autoplay=true]

  • ರೈತನ ಬಳಿ ಹಣ ಕಸಿದು ನಂದಿಬೆಟ್ಟಕ್ಕೆ ಹೋಗಿ ಮಜಾ ಮಾಡಿದ್ದ ಯುವಕರು ಅರೆಸ್ಟ್

    ರೈತನ ಬಳಿ ಹಣ ಕಸಿದು ನಂದಿಬೆಟ್ಟಕ್ಕೆ ಹೋಗಿ ಮಜಾ ಮಾಡಿದ್ದ ಯುವಕರು ಅರೆಸ್ಟ್

    ಚಿಕ್ಕಬಳ್ಳಾಪುರ: ರೈತನ ಬಳಿ ಹಣ ಕಸಿದು ನಂದಿಬೆಟ್ಟಕ್ಕೆ ಹೋಗಿ ಮಜಾ ಮಾಡಿದ್ದ ಯುವಕರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

    ನಂದಿಬೆಟ್ಟ ನೋಡಬೇಕು ಅಂತ ಬೆಂಗಳೂರಿನಿಂದ ಬೈಕ್ ಏರಿ ನಂದಿಬೆಟ್ಟಕ್ಕೆ ಬಂದಿದ್ದ ಯುವಕರು ಚೆಕ್ ಪೋಸ್ಟ್‌ನಲ್ಲಿ ಟಿಕೆಟ್ ಖರೀದಿ ಮಾಡಲು ಹಣ ಇಲ್ಲದೆ, ರೈತರೊಬ್ಬರ ಬಳಿ ಹಣ ಹಾಗೂ ಮೊಬೈಲ್ ಸುಲಿಗೆ ಮಾಡಿ ನಂದಿಬೆಟ್ಟಕ್ಕೆ ಹೋಗಿ ಮೋಜು ಮಸ್ತಿ ಮಾಡಿರುವ ಘಟನೆ ಈ ಹಿಂದೆ ನಡೆದಿತ್ತು.

    ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಈಗ ಬಂಧಿಸಿದ್ದಾರೆ. ಬೆಂಗಳೂರಿನ ನಾಗವಾರದ ಗೋವಿಂದಪುರದ ಸಯ್ಯದ್ ಸಲೀಂ, ಸಯ್ಯದ್ ಅಬೀಬ್ ಉಲ್ಲಾ ಬಂಧಿತ ಆರೋಪಿಗಳು. ಇದನ್ನೂ ಓದಿ: ಮುಳಬಾಗಿಲು ಗಂಗಮ್ಮ ದೇವಾಲಯ ಮುಂಭಾಗವೇ ಕೈ ನಗರಸಭೆ ಸದಸ್ಯನ ಬರ್ಬರ ಕೊಲೆ

    BRIBE

    ಗೋವಿಂದಪುರದ 7 ಮಂದಿ ಆರೋಪಿಗಳು ಏಪ್ರಿಲ್ 29 ರಂದು ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಬಂದಿದ್ದರು. ಚೆಕ್ ಪೋಸ್ಟ್ ಬಳಿ ಟಿಕೆಟ್ ಖರೀದಿ ಮಾಡೋಕು ದುಡ್ಡಿಲ್ಲದೆ ವಾಪಾಸ್ಸಾಗಿದ್ದಾರೆ. ಆದರೆ ಈ ವೇಳೆ ದೊಡ್ಡಬಳ್ಳಾಪುರ ಮಾರ್ಗದ ಕಡೆಗೆ ಬಂದ ಮೂವರು ಯುವಕರು ಮೇಳೆಕೋಟೆ ಕ್ರಾಸ್ ಬಳಿ ಮೇಳೆಕೋಟೆ ಗ್ರಾಮದ ರೈತ ರಾಜಣ್ಣ ನನ್ನ ಬೆದರಿಸಿ ರಾಜಣ್ಣನ ಬಳಿ ಇದ್ದ ಮೊಬೈಲ್ ಹಾಗೂ 25,200 ರೂಪಾಯಿ ಹಣ ಕಸಿದು ಪರಾರಿಯಾದ್ದರು. ಇದನ್ನೂ ಓದಿ: ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣು

    ಕದ್ದ ಹಣದಿಂದ ಮತ್ತೆ ನಂದಿಬೆಟ್ಟಕ್ಕೆ ಹೋಗಿ ಮಸ್ತ್ ಮಜಾ ಮಾಡಿದ್ದಲ್ಲದೇ ನಂದಿಬೆಟ್ಟದಿಂದ ವಾಪಸ್ ಬಂದು ಮದ್ಯ, ಚಿಕನ್ ಮಟನ್ ಪಾರ್ಟಿ ಅಂತ ಹಣ ಖರ್ಚು ಮಾಡಿದ್ದಾರೆ. ಆದರೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬೆಂಗಳೂರು ಮೂಲದ ಇಬ್ಬರು ಯುವಕನರನ್ನು ಬಂಧಿಸಿದ್ದೇವೆ ಅಂತ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಎಸ್ಪಿ ಕೋನವಂಶಿ ಕೃಷ್ಣ ತಿಳಿಸಿದರು.

    ಏಪ್ರಿಲ್ 29 ರಂದು ರೈತ ರಾಜಣ್ಣ ತಾನು ಬೆಳೆದಿದ್ದ ಬೀನ್ಸ್‌ನ್ನು ದೊಡ್ಡಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಗೆ ಹಾಕಿ ಬಂದು 25,200 ರೂಪಾಯಿ ಹಣ ಜೇಬಲ್ಲಿ ಇಟ್ಟು ಕೊಂಡು ತನ್ನದೇ ಸ್ಕೂಟಿಯಲ್ಲಿ ಸ್ವಗ್ರಾಮ ಮೇಳೆಕೋಟಗೆ ಬರುತ್ತಿದ್ದರು. ಈ ವೇಳೆ ಮೇಳೆಕೋಟೆ ಕ್ರಾಸ್‍ನಿಂದ ಮೇಳೆಕೋಟೆ ಗ್ರಾಮದ ಕಡೆಯು ರಸ್ತೆ ಮಧ್ಯೆ ಬಂದ ಈ ಸಯ್ಯದ್ ಸಲೀಂ, ಹಾಗೂ ಸಯ್ಯದ್ ಅಬೀಬ್ ಉಲ್ಲಾ ಹಾಗೂ ಮತ್ತೋರ್ವ ಯುವಕ ಘಾಟಿ ದೇವಾಲಯಕ್ಕೆ ಹೇಗೆ ಹೋಗಬೇಕು ಅಂತ ಅಡ್ರೆಸ್ ಕೇಳೋ ನೆಪದಲ್ಲಿ ಅಡಗಟ್ಟಿದ್ದರು.

    ರಾಜಣ್ಣ ಸ್ಕೂಟಿ ನಿಲ್ಲಿಸಿ ಅಡ್ರೆಸ್ ಹೇಳುತ್ತಿದ್ದರೆ ಇತ್ತ ಮೂವರು ಯುವಕರು ಚಾಕು ಹಿಡಿದು ರಾಜಣ್ಣನಿಗೆ ಕುತ್ತಿಗೆ ಹೊಟ್ಟೆ ಬೆನ್ನಿಗೆ ಚುಚ್ಚಿ ಹಿಡಿದಿದ್ದಾರೆ. ಈ ವೇಳೆ ಯುವಕರೇ ಕೈ ಹಾಕಿ ರಾಜಣ್ಣ ಜೇಬಿನಲ್ಲಿದ್ದ ಹಣ ಹಾಗೂ ಮೊಬೈಲ್ ತೆಗೆದುಕೊಂಡು ಎಸ್ಕೇಪ್ ಆಗಿದ್ದರು. ರೈತ ರಾಜಣ್ಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು 2 ತಿಂಗಳ ನಂತರ ಕದ್ದಿದ್ದ ಮೊಬೈಲ್ ಲೋಕೇಷನ್ ಪತ್ತೆ ಹಚ್ಚಿ ಇಬ್ಬರು ಯುವಕರನ್ನ ಬಂಧಿಸಿದ್ದಾರೆ. ಬಂಧಿತರಿಂದ 10,000 ರೂ. ನಗದು ಒಂದು ಮೊಬೈಲ್ ವಶಪಡಿಸಿಕೊಂಡು ಉಳಿದವರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

  • ಜುಟ್ಟು ಅಂದಿದ್ದಕ್ಕೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹೊಡೆದ್ರು

    ಜುಟ್ಟು ಅಂದಿದ್ದಕ್ಕೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹೊಡೆದ್ರು

    ಬೆಂಗಳೂರು: ಗ್ಯಾಂಗ್‍ವೊಂದು ಜುಟ್ಟು ಅಂದಿದ್ದಕ್ಕೆ ಸಿನಿಮಾ ಸ್ಟೈಲ್‍ನಲ್ಲಿ ಮೂವರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹೊಡೆದು ಹಲ್ಲೆಗೈದ ಘಟನೆ ನಗರದ ರಾಮಮೂರ್ತಿ ನಗರ ಟಿಸಿ ಪಾಳ್ಯದಲ್ಲಿ ನಡೆದಿದೆ.

    ವಿನಯ್, ಬಸವರಾಜು, ಗುರು, ಹಲ್ಲೆಗೊಳಾದ ಯುವಕರು. ತರುಣ್, ರಾಹುಲ್, ವಿಕ್ಕಿ, ಆ್ಯಂಡ್ ಗ್ಯಾಂಗ್‍ನಿಂದ ಹಲ್ಲೆ ನಡೆದಿದೆ. ಯುವಕರು ಮದ್ಯಪಾನ ಮಾಡಲು ಬಾರ್‍ಗೆ ತೆರಳಿದ್ದರು. ಇದೇ ವೇಳೆ ತರುಣ್ ಗ್ಯಾಂಗ್ ಅಲ್ಲಿಗೆ ಬಂದಿತ್ತು. ಗ್ಯಾಂಗ್‍ನಲ್ಲಿ ರಾಹುಲ್ ಜುಟ್ಟು ಬಿಟ್ಟಿದ್ದನ್ನು ನೋಡಿ ಯುವಕರು ನಕ್ಕಿದ್ದಾರೆ. ಇದೇ ವಿಚಾರಕ್ಕೆ ಎರಡು ಗ್ಯಾಂಗ್‍ಗಳ ನಡುವೆ ಮಾರಮಾರಿ ನಡೆದು ಗಲಾಟೆ ಶುರುವಾಗಿದೆ. ಇದನ್ನೂ ಓದಿ: ಎನ್‍ಟಿಆರ್ ಸಾಂಗ್‍ಗೆ ಸಖತ್ ಸ್ಟೆಪ್ ಹಾಕಿದ ರಮೇಶ್ ಕುಮಾರ್

    ನಂತರ ಆ ಮೂವರು ಯುವಕರ ಮೇಲೆ ತರುಣ್ ಆ್ಯಂಡ್ ಗ್ಯಾಂಗ್ ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹಲ್ಲೆ ನಡೆಸಿದೆ. ಗಾಯಗೊಂಡ ಯುವಕರು ರಾಮಮೂರ್ತಿ ನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿದ್ದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಈದ್ಗಾ ಮೈದಾನ ವಿವಾದ- ಗ್ರೌಂಡ್‍ನಲ್ಲಿ ಹಿಂದೂ ಸಂಘಟನೆಯ ಮುಖಂಡರ ಹೈಡ್ರಾಮಾ

    ಪೆÇಲೀಸರು ತರುಣ್‍ನನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಪುರುಷರು ಮೊದಲಿಗಿಂತಲೂ ಹೆಚ್ಚು ಮಾಂಸಾಹಾರ ಸೇವಿಸುತ್ತಿದ್ದಾರೆ: ಆರೋಗ್ಯ ಸಮೀಕ್ಷಾ ವರದಿ

    ಪುರುಷರು ಮೊದಲಿಗಿಂತಲೂ ಹೆಚ್ಚು ಮಾಂಸಾಹಾರ ಸೇವಿಸುತ್ತಿದ್ದಾರೆ: ಆರೋಗ್ಯ ಸಮೀಕ್ಷಾ ವರದಿ

    ನವದೆಹಲಿ: ಪುರುಷರು ಈ ಹಿಂದಿದೆಂದಿಗಿಂತಲೂ ಹೆಚ್ಚು ಹೆಚ್ಚು ಮಾಂಸಾಹಾರ ಸೇವಿಸುತ್ತಿದ್ದಾರೆ. 2015ರ ಬಳಿಕದ ಈ 6 ವರ್ಷಗಳಲ್ಲಿ ಭಾರತೀಯ ಪುರುಷರು ಮಾಂಸಾಹಾರ ಸೇವಿಸುವ ಪ್ರಮಾಣ ತೀವ್ರವಾಗಿ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(ಎನ್‌ಎಫ್‌ಹೆಚ್‌ಎಸ್) ವರದಿ ತಿಳಿಸಿದೆ.

    2019-21ರಲ್ಲಿ ಎನ್‌ಎಫ್‌ಹೆಚ್‌ಎಸ್ ನಡೆಸಿದ ಸಮೀಕ್ಷೆಯ ವರದಿ ಇತ್ತೀಚೆಗೆ ಬಿಡುಗಡೆಯಾಗಿದೆ. ಇದರ ಡೇಟಾದಲ್ಲಿ 15 ರಿಂದ 49 ವರ್ಷ ವಯಸ್ಸಿನ, ಈ ಹಿಂದೆ ಎಂದಿಗೂ ಮಂಸಾಹಾರಿ ಆಹಾರವನ್ನು ಸೇವಿಸದ ಪುರುಷರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇದರ ವರದಿ ಶೇ.16.6 ರಷ್ಟು ಇದ್ದು, 2015-16ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ವರದಿ ಶೇ.21.6 ರಷ್ಟು ಬಂದಿತ್ತು. ಇದರರ್ಥ ಸಸ್ಯಾಹಾರಿ ಪುರುಷರು ಮಾಂಸಾಹಾರ ಸೇವಿಸುವ ಪ್ರಮಾಣ ಶೇ.5 ರಷ್ಟು ಹೆಚ್ಚಾಗಿದೆ. ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ರಜೆ ಘೋಷಿಸಿದ ಸ್ಪೇನ್

    ಮಹಿಳೆಯರ ಸಮೀಕ್ಷೆಯ ವರದಿಯಲ್ಲಿ, 14 ರಿಂದ 49 ವರ್ಷ ವಯಸ್ಸಿನ ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. 2019-21ರ ವರದಿಯಲ್ಲಿ ಶೇ.29.4 ರಷ್ಟು ಮಹಿಳೆಯರ ಪ್ರಮಾಣ ವರದಿಯಾಗಿದ್ದು, 2015-16ರಲ್ಲಿ ಶೇ.29.9 ಇತ್ತು. ಮಹಿಳೆಯರ ಮಾಂಸಾಹಾರ ಸೇವನೆಯ ಪ್ರಮಾಣದಲ್ಲಿ ಸ್ವಲ್ಪ ಮಟ್ಟದ ಏರಿಕೆಯಾಗಿದೆ.

    ಸಮೀಕ್ಷೆಯ ಪ್ರಕಾರ ಶೇ.83.4 ರಷ್ಟು ಪರುಷರು ಹಾಗೂ ಶೇ.70.6 ರಷ್ಟು ಮಹಿಳೆಯರು ಮಾಂಸಾಹಾರವನ್ನು ಪ್ರತೀದಿನ, ವಾರಕ್ಕೆ ಒಮ್ಮೆ ಅಥವಾ ಸಾಂದರ್ಭಿಕವಾಗಿ ತಿನ್ನುತ್ತಾರೆ ಎಂದು ಅಂಕಿ ಅಂಶದಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಇನ್‍ಸ್ಟಾದಲ್ಲಿ ಆರಂಭ ಬೀದಿಯಲ್ಲಿ ಮಾರಾಮಾರಿ – ರಸ್ತೆಯಲ್ಲೇ ವಿದ್ಯಾರ್ಥಿನಿಯರ ಗ್ಯಾಂಗ್‍ವಾರ್

    ವಾರಕ್ಕೊಮ್ಮೆ ಮಾಂಸಾಹಾರ:
    ಶೇ.57.5 ರಷ್ಟು ಪುರುಷರು ಹಾಗೂ ಶೇ.45.1 ರಷ್ಟು ಮಹಿಳೆಯರು ವಾರದಲ್ಲಿ ಒಮ್ಮೆ ಮೀನು, ಕೋಳಿ ಅಥವಾ ಮಾಂಸವನ್ನು ತಿನ್ನುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.

  • ಪುರುಷ-ಮಹಿಳೆ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವಂತಿಲ್ಲ, ಪಾರ್ಕ್‌ಗೆ ಹೋಗುವಂತಿಲ್ಲ: ತಾಲಿಬಾನ್‌

    ಪುರುಷ-ಮಹಿಳೆ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವಂತಿಲ್ಲ, ಪಾರ್ಕ್‌ಗೆ ಹೋಗುವಂತಿಲ್ಲ: ತಾಲಿಬಾನ್‌

    ಕಾಬೂಲ್‌: ಪಶ್ಚಿಮ ಆಫ್ಘಾನಿಸ್ತಾನದ ಹೆರಾತ್‌ ನಗರದಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕುಳಿತು ಊಟ ಮಾಡುವುದು ಹಾಗೂ ಉದ್ಯಾನಗಳಿಗೆ ಭೇಟಿ ನೀಡುವುದನ್ನು ತಾಲಿಬಾನ್‌ ನಿಷೇಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆಫ್ಘಾನಿಸ್ತಾನವು ಸಂಪ್ರದಾಯವಾದಿ ಮತ್ತು ಪಿತೃಪ್ರಭುತ್ವದ ರಾಷ್ಟ್ರವಾಗಿದೆ. ಆದರೆ ರೆಸ್ಟೋರೆಂಟ್‌ಗಳಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕುಳಿತು ಊಟ ಮಾಡುವುದನ್ನು ಸಾಮಾನ್ಯ ಎನ್ನುವಂತಾಗಿದೆ. ಮುಖ್ಯವಾಗಿ ಆಫ್ಘಾನ್‌ ಮಾನದಂಡಗಳನ್ನು ಮೀರಿ ಉದಾರವಾದಿ ನಗರ ಎನಿಸಿರುವ ಹೆರಾತ್‌ನಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿದೆ. ಇಲ್ಲೂ ಸಹ ತಾಲಿಬಾನ್‌ ಕಠಿಣ ನಿಯಮಗಳನ್ನು ವಿಧಿಸಿದೆ. ಇದನ್ನೂ ಓದಿ: ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ನಿರ್ಬಂಧ ಖಂಡಿಸಿದ G7

    ಆಗಸ್ಟ್‌ನಲ್ಲಿ ಆಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಮರಳಿದ ನಂತರ ತಾಲಿಬಾನ್‌, ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವ ನಿರ್ಬಂಧಗಳನ್ನು ವಿಧಿಸುತ್ತಿದೆ.

    ಹೆರಾತ್‌ನಲ್ಲಿ ಸದ್ಗುಣ ಪ್ರಚಾರ ಮತ್ತು ದುರಾಚಾರ ತಡೆಗಟ್ಟುವಿಕೆ ಸಚಿವಾಲಯದ ತಾಲಿಬಾನ್ ಅಧಿಕಾರಿ ರಿಯಾಜುಲ್ಲಾ ಸೀರತ್, ರೆಸ್ಟೋರೆಂಟ್‌ಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ನಿಯಮ ಕೇವಲ ಪುರುಷ ಮತ್ತು ಮಹಿಳೆಯರಿಗಷ್ಟೇ ಅಲ್ಲ, ಗಂಡ-ಹೆಂಡತಿಗೂ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಿ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿದ ತಾಲಿಬಾನ್‌ ವಕ್ತಾರ

    ಹೆರಾತ್ ರೆಸ್ಟೋರೆಂಟ್‌ನಲ್ಲಿ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ನನಗೆ ಮತ್ತು ನನ್ನ ಪತಿಗೆ ಮ್ಯಾನೇಜರ್‌ ಹೇಳಿದ್ದರು ಎಂದು ಹೆಸರು ಹೇಳಲಿಚ್ಛಿಸದ ಮಹಿಳೆಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

    ರೆಸ್ಟೋರೆಂಟ್‌ ಮಾಲೀಕ ಸಫೀವುಲ್ಲಾ ಅವರು ತಾಲಿಬಾನ್‌ ಕಠಿಣ ನಿಯಮ ವಿಧಿಸಿರುವುದನ್ನು ಖಚಿತಪಡಿಸಿದ್ದಾರೆ. ನಾವು ಆದೇಶವನ್ನು ಅನುಸರಿಸಬೇಕು. ಆದರೆ ಇದು ನಮ್ಮ ವ್ಯವಹಾರದ ಮೇಲೆ ಬಹಳ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಸಫೀವುಲ್ಲಾ ತಿಳಿಸಿದ್ದಾರೆ.

  • ಸೀಸನ್‍ಗೆ ತಕ್ಕಂತೆ ಹೇರ್‌ಸ್ಟೈಲ್‌ ಮೇಂಟೈನ್ ಮಾಡೋದು ಹೇಗೆ ಗೊತ್ತಾ?

    ಸೀಸನ್‍ಗೆ ತಕ್ಕಂತೆ ಹೇರ್‌ಸ್ಟೈಲ್‌ ಮೇಂಟೈನ್ ಮಾಡೋದು ಹೇಗೆ ಗೊತ್ತಾ?

    ಬದಲಾದ ಹವಮಾನದಿಂದಾಗಿ ಹುಡುಗರ ಹೇರ್‌ಸ್ಟೈಲ್‌ ಹಾಳಾಗುತ್ತದೆ. ಕೆಲವೊಂದು ಕ್ರಮಗಳನ್ನು ಅನುಸರಿಸಿದಲ್ಲಿ ನಾನಾ ಬಗೆಯ ಹೇರ್‌ಸ್ಟೈಲ್‌ ಮ್ಯಾನೇಜ್ ಮಾಡಬಹುದು. ಹಾಗೆಯೇ ಸೀಸನ್‍ನ ಸಂತಸಕ್ಕೆ ಸಾಥ್ ನೀಡುವ ಹುಡುಗರ ನಾನಾ ಬಗೆಯ ಹೇರ್‌ಸ್ಟೈಲ್‌ ಕಾಳಜಿ ಬಗ್ಗೆ ಇಲ್ಲಿದೆ ಸರಳ ಮಾಹಿತಿ.

     

    ಜೆಲ್ ಕಡಿಮೆ ಬಳಸಿ
    ಚಳಿಗಾಲದಲ್ಲಿ ಸಾಧ್ಯವಾದಷ್ಟು ಕೂದಲಿಗೆ ಕಡಿಮೆ ಹೇರ್‌ಜೆಲ್‌ ಬಳಸಿ. ಇದು ಕೂದಲನ್ನು ಮತ್ತಷ್ಟು ಒರಟಾಗಿಸುವುದನ್ನು ತಡೆಯುತ್ತದೆ. ಅನಿವಾರ್ಯತೆ ಎನಿಸಿದಾಗ ಮಾತ್ರ ಬಳಸಿ. ಪ್ರತಿನಿತ್ಯ ಬಳಸುವುದನ್ನು ಕಡಿಮೆ ಮಾಡಿ. ಎಕ್ಸ್‌ಪೈರಿ ಡೇಟ್ ನೋಡಿಕೊಂಡು ಬಳಸಿದರೆ ಉತ್ತಮ.

    ವಾರಕ್ಕೊಮ್ಮೆ ತಲೆಗೆ ಎಣ್ಣೆ ಹಚ್ಚಿ
    ಹುಡುಗರೂ ಕೂಡ ಕೂದಲ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ, ಅವರಿಗೆ ಬೇಕಾದ ಹೇರ್‌ಸ್ಟೈಲ್‌ಲನ್ನು ಮಾಡಿಕೊಳ್ಳಬಹುದು. ವಾರಕ್ಕೊಮ್ಮೆ ಕೊಬ್ಬರಿ ಅಥವಾ ಹರಳೆಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ಹಚ್ಚಿಕೊಂಡರೆ ದೇಹ ಕೂಡ ತಂಪಾಗುತ್ತದೆ. ಕೂದಲು ಆರೋಗ್ಯಯುತವಾಗಿರುತ್ತದೆ.

    ಹೆಲ್ಮೆಟ್ ಧರಿಸಿದಾಗ
    ಪ್ರತಿನಿತ್ಯ ಹೆಲ್ಮೆಟ್ ಧರಿಸುವುದರಿಂದ ಯಾವುದೇ ಹೇರ್‌ಸ್ಟೈಲ್‌ ಮಾಡಿಕೊಂಡರೂ ಹಾಳಾಗಿ ಹೋಗುತ್ತದೆ. ಆದ್ದರಿಂದ ಹುಡುಗರು ಮನೆಯಿಂದ ಹೊರಡುವಾಗ ಜೊತೆಯಲ್ಲಿ ಕಾಟನ್ ಕ್ಲಾತನ್ನು ತಲೆಯ ಸುತ್ತ ಕಟ್ಟಿ. ನಂತರ ಹೆಲ್ಮೆಟ್ ವೇರ್ ಮಾಡಿ. ನೀವು ಸ್ಥಳವನ್ನು ತಲುಪಿದ ನಂತರ ಕ್ಲಾತ್ ತೆಗೆಯಿರಿ. ಸಾಧ್ಯವಾದಲ್ಲಿ ಬಾಚಿ ಕೊಳ್ಳಿ.

    ಧ್ಯಾನ ಮಾಡಿ
    ಇಂದಿನ ಬಿಝಿ ಲೈಫ್‍ನಲ್ಲಿ ಪದೇ ಪದೇ ಟೆನ್ಷನ್ ತೆಗೆದುಕೊಳ್ಳುವುದರಿಂದ ಕೂದಲು ಉದುರಿ, ಮಧ್ಯ ವಯಸ್ಸಿನಲ್ಲಿಯೇ ಬೋಳಾಗುತ್ತದೆ. ಆದ್ದರಿಂದ ಬೆಳಗ್ಗೆ ಕನಿಷ್ಟ 20 ನಿಮಿಷವಾದರೂ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನರಗಳು ಬಲಿಷ್ಟಗೊಳ್ಳುವುದರಿಂದ ಆರೋಗ್ಯ, ಆಯಸ್ಸು, ಸೌಂದರ್ಯ ಎಲ್ಲ ವೃದ್ಧಿಸುತ್ತದೆ. ಕೂದಲು ಕೂಡ ಉದುರುವುದು ನಿಲ್ಲುತ್ತದೆ.

    ದಾಸವಾಳ ಬಳಕೆ
    ದಾಸವಾಳದ ಬಳಕೆಯಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಜೊತೆಗೆ ಉದ್ದ ಹಾಗೂ ಕಾಂತಿಯತವಾಗಿ ಬೆಳೆಯುತ್ತದೆ. 15 ದಿನಕ್ಕೊಮ್ಮೆಯಾದರೂ ದಾಸವಾಳವನ್ನು ತಲೆಗೆ ಹಚ್ಚಿಕೊಂಡಾಗ ನಮಗೆ ಬೇಕಾದ ರೀತಿಯಲ್ಲಿ ಸೆಟ್ ಮಾಡಿಕೊಳ್ಳಲು ಸುಲಭವಾಗುತ್ತದೆ. ಇದೇ ಕಾರಣಕ್ಕಾಗಿ ದಾಸವಾಳವನ್ನು ಆಯುರ್ವೇದ ಶಾಂಪೂ ಅಥವಾ ಕೂದಲಿಗೆ ಉಪಯೋಗಿಸುವ ಎಣ್ಣೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ.

     

  • ನೈಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರು ಸಾವು

    ನೈಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರು ಸಾವು

    ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೈಸ್ ರಸ್ತೆಯಲ್ಲಿ ನಡೆದಿದೆ.

    ಸುಮುಖ್ (22), ಲೀನಾ ನಾಯ್ಡು (19) ಮೃತ ದುರ್ದೈವಿಗಳು. ಸುಮುಖ್ ಸಂಜೆ 5 ಗಂಟೆ ಸುಮಾರು ಲೀನಾರ ಜೊತೆಗೆ ಕಾರಿನಲ್ಲಿ ಪಿಇಎಸ್ ಕಾಲೇಜು ಕಡೆಯಿಂದ ನೈಸ್ ರೋಡ್ ಮುಖಾಂತರ ಸೋಂಪುರ ಕಡೆ ಅತಿವೇಗವಾಗಿ ಕಾರು ಚಲಾಯಿಸಿದ್ದಾನೆ. ಈ ವೇಳೆ ನೈಸ್ ರಸ್ತೆಯ ಬಿಡಿಎ ಟೋಲ್ ಬಳಿ ಕಾರು ನಿಯಂತ್ರಣ ತಪ್ಪಿ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಬಸ್‍ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ಪರಿಣಾಮ ಹಿಂದೆ ಇದ್ದ ಬರುತ್ತಿದ್ದ ಮತ್ತೊಂದು ಕಾರು ಕೂಡಾ ಪಲ್ಟಿಯಾಗಿದೆ.

    ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮಿನಿ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಹೋಗಿದ್ದು ಬಸ್ ಚಾಲಕನ ಎರಡು ಕಾಲುಗಳು ತುಂಡಾಗಿದೆ. ಬೇರೊಂದು ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಹೋಂಡಾ ಸಿಟಿ ಕಾರ್‍ನಲ್ಲಿದ್ದ ಸುಮುಖ್, ಲೀನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಇಬ್ಬರು ಬೇರೆ ಬೇರೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಲೀನಾ ಪಿಇಎಸ್ ಕಾಲೇಜ್‍ನಲ್ಲಿ ಬಿಸಿಎ, ಸುಮುಖ್ ರಾಮಯ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರು. ಘಟನೆ ಸಂಬಂಧ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪುರುಷರಿಗೆ ಸೂಟ್ ಆಗುವಂತಹ ನೂತನ ಸ್ಟೈಲಿಶ್ ಗಡ್ಡಗಳು

    ಪುರುಷರಿಗೆ ಸೂಟ್ ಆಗುವಂತಹ ನೂತನ ಸ್ಟೈಲಿಶ್ ಗಡ್ಡಗಳು

    ಟ್ಟೆಗಳು ಮತ್ತು ಇತರ ಫ್ಯಾಷನ್ ವಿಚಾರಗಳೊಂದಿಗೆ ಗಡ್ಡಗಳು ಕೂಡ ಪುರುಷರಿಗೆ ಸ್ಟೈಲಿಶ್ ಲುಕ್ ನೀಡುತ್ತದೆ. ಸ್ಟೈಲ್ ವಿಚಾರಕ್ಕೆ ಬಂದರೆ ಮಹಿಳೆಯರಿಗಿಂತ ಪುರುಷರಿಗೆ ಆಯ್ಕೆಗಳು ಬಹಳ ಕಡಿಮೆ. ಆದರೂ ಸ್ಟೈಲಿಶ್ ಗಡ್ಡಗಳು ಪುರುಷರ ಮುಖದಲ್ಲಿ ಬದಲಾವಣೆ ತರುವುದರ ಜೊತೆಗೆ ಅವರು ಸ್ಮಾರ್ಟ್ ಆಗಿ ಕಾಣಿಸಲು ಸಹಾಯಕವಾಗಿದೆ. ಕೆಲವರು ಕುರುಚಲು ಗಡ್ಡ ಹೊಂದಲು ಇಷ್ಟಪಟ್ಟರೆ, ಮತ್ತೆ ಕೆಲವರು ದೊಡ್ಡ ಗಡ್ಡ ಹೊಂದಲು ಇಷ್ಟ ಪಡುತ್ತಾರೆ. ಇನ್ನೂ ಕೆಲವರಿಗೆ ಫ್ರೆಂಚ್ ಗಡ್ಡ ಪ್ರೊಫೆಶನಲ್ ಲುಕ್ ನೀಡುತ್ತದೆ. ಒಟ್ಟಾರೆ ಗಡ್ಡದಲ್ಲಿ ಹಲವು ವಿಧವಾದ ಸ್ಟೈಲಿಶ್ ಗಡ್ಡಗಳಿದ್ದು, 2021ರಲ್ಲಿ ಗಡ್ಡವನ್ನು ಸ್ಟೈಲಿಶ್ ಗೊಳಿಸುವುದು ಟ್ರೆಂಡ್ ಆಗಿದೆ.

     Stylish Beard

    ಫ್ರೆಂಚ್ ಗಡ್ಡ
    ಫ್ರೆಂಚ್ ಸ್ಟೈಲಿಶ್ ಗಡ್ಡವನ್ನು ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಏಕೆಂದರೆ ಇದು ಸ್ಟೈಲಿಶ್ ಗಡ್ಡಗಳಲ್ಲಿ ಸಖತ್ ಫೇಮಸ್ ಆಗಿದೆ. ಇದನ್ನು ಗಲ್ಲದ ಅಕ್ಕ-ಪಕ್ಕ ಸಮನಾಗಿ ಕೂದಲನ್ನು ಕತ್ತರಿಸಿವಿನ್ಯಾಸಗೊಳಿಸಲಾಗಿದ್ದು, ಇದು ನಿಮಗೆ ಕ್ಲಾಸಿ ಲುಕ್ ನೀಡುತ್ತದೆ. ಜೊತೆಗೆ ನೀವು ಸಖತ್ ಹಾಟ್ ಮತ್ತು ಆ್ಯಟ್ರಕ್ಟಿವ್ ಆಗಿ ಕಾಣಲು ಸಹಾಯವಾಗಿದೆ.

    Stylish Beard

    ಉದ್ದಗಿನ ಗಡ್ಡ
    ಇದೊಂದು ಉದ್ದವಾದ ಗಡ್ಡವಾಗಿದ್ದು, ದವಡೆಯವರೆಗೂ ಈ ಗಡ್ಡವನ್ನು ಜನರು ಬಿಡುತ್ತಾರೆ. ಈ ಗಡ್ಡ 2021ರ ಟ್ರೆಂಡ್ ಸೃಷ್ಟಿಸಿದ್ದು, ಇದು ನಿಮಗೆ ಸ್ಟೈಲಿಶ್ ಲುಕ್ ನೀಡುತ್ತದೆ. ಈ ಗಡ್ಡ ಬೆಳೆಸಲು ನಿಮಗೆ ಬಹಳ ತಾಳ್ಮೆ ಬೇಕಾಗುತ್ತದೆ. ಈ ರೀತಿಯ ಗಡ್ಡ ಬಿಡುವುದಾದರೆ ಹೆಚ್ಚು ಉದ್ದ ಬರುವಾಗ ಟ್ರಿಮ್ ಮಾಡಿ, ಎಣ್ಣೆ ಹಚ್ಚಿ ಆರೈಕೆ ಮಾಡಬೇಕು. ಈ ಗಡ್ಡದ ಸ್ಟೈಲ್ ನೋಡಲು ಆಕರ್ಷಕವಾಗಿ ಕಾಣುವುದು.

    ಕುರುಚಲು ಗಡ್ಡ
    ಪುರುಷರು ಬೇಗ ಸುಲಭವಾಗಿ ಟ್ರಿಮ್ ಮಾಡಿಕೊಳ್ಳಬಹುದಾದ ಮತ್ತು ಕೂಲ್ ಲುಕ್ ನೀಡುವಂತಹ ಸ್ಟೈಲಿಶ್ ಗಡ್ಡ ಇದಾಗಿದೆ. ಈ ರೀತಿ ಗಡ್ಡ ಬಿಟ್ಟವರು ಎರಡರಿಂದ ಮೂರು ದಿನಕ್ಕೊಮ್ಮೆ ಕತ್ತರಿಸಬೇಕು. ಈ ರೀತಿಯ ಸ್ಟೈಲ್ ಮಾಡುವವರು ಟ್ರಿಮ್ಮರ್ ಬಳಸುವ ಬದಲು ಕತ್ತರಿ ಬಳಸುವುದು ಸೂಕ್ತ.

    ಚಿಕ್ಕಗಡ್ಡ
    ಬೇಸಿಗೆ ಸಮಯದಲ್ಲಿ ಚಿಕ್ಕಗಡ್ಡ ಬಹಳ ಉತ್ತಮವಾಗಿರುತ್ತದೆ. ಇದು ಪುರಷರಿಗೆ ಕ್ರಿಯೆಟಿವ್ ಲುಕ್ ನೀಡುತ್ತದೆ. ಬೇಸಿಗೆಯಲ್ಲಿ ಮತ್ತು ಉದ್ಯೋಗ ಸ್ಥಳಗಳಲ್ಲಿ ಉದ್ದಗಿನ ಗಡ್ಡ ಬಿಡಲು ಸಾಧ್ಯವಾಗದಿದ್ದಲ್ಲಿ ಈ ಸ್ಟೈಲಿಶ್ ಗಡ್ಡವನ್ನು ಟ್ರೈ ಮಾಡಬಹುದಾಗಿದೆ. ಇತ್ತೀಚೆಗೆ ಈ ಗಡ್ಡ ಸಖತ್ ಟ್ರೆಂಡ್ ಆಗಿದೆ.

  • ಕ್ರಿಕೆಟ್‍ನಲ್ಲಿ ಲಿಂಗ ಸಮಾನತೆಗಾಗಿ ಬ್ಯಾಟ್ಸ್‌ಮ್ಯಾನ್‌ ಬದಲಾಗಿ ‘ಬ್ಯಾಟರ್’ ಪದ ಬಳಕೆ

    ಕ್ರಿಕೆಟ್‍ನಲ್ಲಿ ಲಿಂಗ ಸಮಾನತೆಗಾಗಿ ಬ್ಯಾಟ್ಸ್‌ಮ್ಯಾನ್‌ ಬದಲಾಗಿ ‘ಬ್ಯಾಟರ್’ ಪದ ಬಳಕೆ

    ಲಂಡನ್: ಕ್ರಿಕೆಟ್‍ನಲ್ಲಿ ಮಹಿಳಾ ಮತ್ತು ಪುರುಷರ ಲಿಂಗ ಸಮಾನತೆ ಸಲುವಾಗಿ ಪ್ರಸ್ತುತ ಬಳಕೆಯಲ್ಲಿರುವ ಬ್ಯಾಟ್ಸ್‌ಮ್ಯಾನ್‌ ಪದದ ಬದಲಾಗಿ ಬ್ಯಾಟರ್ ಪದ ಬಳಸುವಂತೆ ಮಾರ್ಲೆಬೋನ್  ಕ್ರಿಕೆಟ್ ಸಂಸ್ಥೆ(ಎಂಸಿಸಿ) ತೀರ್ಮಾನಿಸಿದೆ.

    ಎಂಸಿಸಿ ಜಾರಿಗೊಳಿಸುವ ಕ್ರಿಕೆಟ್ ನಿಯಮಗಳನ್ನು ಪಾಲಿಸುವ ಐಸಿಸಿ ಇದೀಗ ಈ ಮಹತ್ವದ ಬದಲಾವಣೆಯನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಎಂಸಿಸಿ ಕ್ರಿಕೆಟ್‍ನಲ್ಲಿ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ಕಾನೂನು ಉಪ ಸಮಿತಿಯ ಜೊತೆ ಚರ್ಚಿಸಿ ಕ್ರಿಕೆಟ್‍ನಲ್ಲಿ ನಿಯಮಗಳನ್ನು ಜಾರಿಗೊಳಿಸುತ್ತದೆ. ಇದೀಗ ಮಹಿಳಾ ಕ್ರಿಕೆಟ್ ಕೂಡ ಪುರುಷ ಕ್ರಿಕೆಟ್ ನಂತೆ ಜನಪ್ರಿಯತೆ ಗಳಿಸುತ್ತಿದೆ. ಆದರೆ ಕ್ರಿಕೆಟ್‍ನಲ್ಲಿ ಬ್ಯಾಟ್ಸ್‌ಮ್ಯಾನ್‌ ಎಂಬ ಪದ ಮಹಿಳಾ ಕ್ರಿಕೆಟ್‍ನಲ್ಲಿ ಸರಿಹೊಂದುತ್ತಿರಲಿಲ್ಲ. ಹಾಗಾಗಿ ಈ ಬದಲಾವಣೆಗೆ ಮುಂದಾಗಿದೆ. ಇದನ್ನೂ ಓದಿ: ಐಪಿಎಲ್‍ಗೂ ತಟ್ಟಿದ ಕೊರೊನಾ – ನಟರಾಜನ್‍ಗೆ ಸೋಂಕು, 6 ಮಂದಿ ಕ್ವಾರಂಟೈನ್

    ಈಗಾಗಲೇ ಕ್ರಿಕೆಟ್‍ನಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮನಾಗಿ ಬೌಲರ್ ಮತ್ತು ಫೀಲ್ಡರ್ ಎಂಬ ಪದ ಬಳಕೆಯಾಗುತ್ತಿದೆ. ಇದೀಗ ಬ್ಯಾಟ್ಸ್‌ಮ್ಯಾನ್‌ ಬದಲಾಗಿ ಬ್ಯಾಟರ್ ಅಥವಾ ಬ್ಯಾಟರ್ಸ್ ಪದ ಬಳಕೆಗೆ ಎಂಸಿಸಿ ಮುಂದಾಗಿದ್ದು, ಈ ಮೂಲಕ ಕ್ರಿಕೆಟ್‍ನಲ್ಲಿ ಲಿಂಗ ಸಮಾನತೆಗಾಗಿ ಶ್ರಮಿಸಿದೆ. ಇದನ್ನೂ ಓದಿ: ಸ್ಟೇಡಿಯಂನಲ್ಲಿ ಮಹಿಳಾ ಪ್ರೇಕ್ಷಕರು ಇದ್ದಾರೆ, ಪ್ರಸಾರ ಮಾಡಬೇಡಿ – ಅಫ್ಘಾನಿಸ್ಥಾನದಲ್ಲಿ ಐಪಿಎಲ್ ಬ್ಯಾನ್