ಢಾಕಾ: ಬಾಂಗ್ಲಾದೇಶದ (Bangladesh) ಮೀರ್ಪುರದ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯವನ್ನು (Test Cricket) ಭಾರತ 3 ವಿಕೆಟ್ಗಳಿಂದ ಜಯಗಳಿಸಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಈ ಪಂದ್ಯದಲ್ಲಿ ತನ್ನ ವಿಕೆಟ್ ಪಡೆದ ಬಾಂಗ್ಲಾದೇಶದ ಆಫ್ ಸ್ಪಿನ್ನರ್ ಮೆಹಿದಿ ಹಸನ್ ಮಿರಾಜ್ಗೆ (Mehidy Hasan Miraz) ವಿರಾಟ್ ಕೊಹ್ಲಿ (Virat Kohli) ವಿಶೇಷ ಉಡುಗೊರೆ ನೀಡಿ ಅಭಿನಂದಿಸಿದ್ದಾರೆ.
2ನೇ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ ದಾಳಿ ನಡೆಸಿದ ಮಿರಾಜ್ ಟೀಂ ಇಂಡಿಯಾ (Team India) ಎದುರು ಅಬ್ಬರಿಸಿದರು. 6 ಓವರ್ಗಳಲ್ಲಿ 36 ರನ್ ನೀಡಿ ಪ್ರಮುಖ 6 ವಿಕೆಟ್ಗಳನ್ನು ಪಡೆದು ಮಿಂಚಿದ್ದರು. ಇದೇ ವೇಳೆ ತಮ್ಮ ಸ್ಪಿನ್ ಕೈಚಳಕದಿಂದ ಟೀಂ ಇಂಡಿಯಾ ಬ್ಯಾಟ್ಸ್ಮ್ಯಾನ್ ವಿರಾಟ್ ಕೊಹ್ಲಿ ಅವರನ್ನ ಕೇವಲ 1 ರನ್ಗಳಿಗೆ ಔಟ್ ಮಾಡಿ ಪೆವಿಲಿಯನ್ ದಾರಿ ತೋರಿಸಿದ್ರು. ಇದರಿಂದ ಮಿರಾಜ್ ಬೌಲಿಂಗ್ ಕೈಚಳಕ ಮೆಚ್ಚಿಕೊಂಡ ಕೊಹ್ಲಿ ತಮ್ಮ ವಿಕೆಟ್ ಪಡೆದಿದ್ದಕ್ಕಾಗಿ ಸ್ಮರಣಿಕೆಯಾಗಿ ಸಹಿ ಮಾಡಿದ ಜೆರ್ಸಿ ನೀಡಿ ಅಭಿನಂದಿಸಿದ್ದಾರೆ.
2000 ಇಸವಿಯಿಂದ ಈವರೆಗೆ ನಡೆದ ಬಾಂಗ್ಲಾದೇಶ ಹಾಗೂ ಭಾರತದ ನಡುವಿನ 12 ಟೆಸ್ಟ್ ಪಂದ್ಯಗಳಲ್ಲಿ ಭಾರತ 10 ರಲ್ಲಿ ಜಯ ಸಾಧಿಸಿದೆ. 2015ರಲ್ಲಿ ಎರಡು ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದ್ದವು. ಇದನ್ನೂ ಓದಿ: #WTC2023 ಫೈನಲ್ ರೇಸ್ನಲ್ಲಿ ಭಾರತ – ಆಸೀಸ್ ಸರಣಿ ನಿರ್ಣಾಯಕ
Live Tv
[brid partner=56869869 player=32851 video=960834 autoplay=true]
ಢಾಕಾ: ಶಕೀಬ್ ಅಲ್ ಹಸನ್ (Shakib Al Hasan) ಆಲ್ರೌಂಡರ್ ಆಟ, ಕೊನೆಯಲ್ಲಿ ಮೆಹಿಡಿ ಹಸನ್ ಮಿರಾಜ್ (Mehidy Hasan Miraz) ಜವಾಬ್ದಾರಿ ಬ್ಯಾಟಿಂಗ್ ಪ್ರದರ್ಶನದಿಂದ ಬಾಂಗ್ಲಾದೇಶ ತಂಡವು ಭಾರತದ ವಿರುದ್ಧ 1 ವಿಕೆಟ್ ರೋಚಕ ಜಯ ಸಾಧಿಸಿತು.
ಢಾಕಾದ ಷೇರ್ ಬಾಂಗ್ಲಾ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ (Bangladesh) ವಿರುದ್ಧ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 50 ಓವರ್ ಪೂರ್ಣಗೊಳಿಸುವಲ್ಲಿ ವಿಫಲವಾಯಿತು. 41.2 ಓವರ್ಗಳಲ್ಲಿ 186 ರನ್ಗಳಿಗೆ ಸರ್ವಪತನ ಕಂಡಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾದೇಶ ದೇಶ 46 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ ಟೀಂ ಇಂಡಿಯಾ (Team India) ಎದುರು ರೋಚಕ ಜಯ ಸಾಧಿಸಿತು.
ಟೀಂ ಇಂಡಿಯಾ (Team India) ಸವಾಲು ಸ್ವೀಕರಿಸಿ ಕಣಕ್ಕಿಳಿದ ಬಾಂಗ್ಲಾದೇಶಕ್ಕೂ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ನಜ್ಮುಲ್ ಹೊಸೈನ್ ಶಾಂಟೊ, ದೀಪಕ್ ಚಹಾರ್ ಮಾರಕ ಬೌಲಿಂಗ್ ದಾಳಿಗೆ ತುತ್ತಾಗಿ ಒಂದೇ ಎಸೆತಕ್ಕೆ ಔಟಾದರು. ನಂತರ ನಿಧಾನಗತಿಯಲ್ಲೇ ಬ್ಯಾಟಿಂಗ್ ಆರಂಭಿಸಿದ ನಾಯಕ ಲಿಟ್ಟನ್ ದಾಸ್ 63 ಎಸೆತಗಳಲ್ಲಿ 41 ರನ್ (1 ಸಿಕ್ಸರ್, 3 ಬೌಂಡರಿ) ಗಳಿಸಿ ತಂಡಕ್ಕೆ ಆಸರೆಯಾದರು. 3ನೇ ಕ್ರಮಾಂಕದಲ್ಲಿ ಬಂದ ಅನಾಮುಲ್ ಹಕ್ ಕೇವಲ 14 ರನ್ಗಳಿಸಿ ಪೆವಿಲಿಯನ್ ಸೇರಿದ್ರು.
ಇನ್ನೂ ಬೌಲಿಂಗ್ನಲ್ಲಿ ಮಿಂಚಿದ್ದ ಶಕೀಬ್ ಬ್ಯಾಟಿಂಗ್ನಲ್ಲೂ ಸಮಾಧಾನಕರ ಪ್ರದರ್ಶನ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಶಕೀಬ್ 38 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 29 ರನ್ ಕಲೆಹಾಕಿದರು. ನಂತರ ಜೊತೆಯಾದ ಮುಷ್ಫಿಕೂರ್ ರಹೀಮ್ ಮತ್ತು ಮಹಮದುಲ್ಲಾ ಜೋಡಿ ಉತ್ತಮ ಇನ್ನಿಂಗ್ಸ್ ಕಟ್ಟಲು ಮುಂದಾಯಿತು. 80 ಎಸೆತಗಳನ್ನು ಎದುರಿಸಿದ ಈ ಜೋಡಿ 32 ರನ್ ಗಳಿಸಿ ಸ್ಥಿರವಾಗಿತ್ತು. ಈ ವೇಳೆ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಇವರಿಬ್ಬರ ಆಟಕ್ಕೆ ಬ್ರೇಕ್ ಹಾಕಿದರು. ಮುಷ್ಫಿಕೂರ್ ರಹೀಮ್ 45 ಎಸೆತಗಳಲ್ಲಿ 18 ರನ್ ಗಳಿಸಿದ್ರೆ, 35 ಎಸೆತ ಎದುರಿಸಿದ ಮಹಮದುಲ್ಲಾ ಕೇವಲ 14 ರನ್ಗಳಿಸಿ ಪೆವಿಲಿಯನ್ನತ್ತ ಮುಖ ಮಾಡಿದರು.
ಕೊನೆಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಮೆಹಿಡಿ ಹಸನ್ ಮಿರಾಜ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ನಿಧಾನಗತಿಯಲ್ಲೇ ಸಿಕ್ಸರ್, ಬೌಂಡರಿಗಳನ್ನು ಪೇರಿಸುತ್ತಾ ಭಾರತದ ಬೌಲರ್ಗಳ ಬೆವರಿಳಿಸಿದರು. 39 ಎಸೆತ ಎದುರಿಸಿದ ಮಿರಾಜ್ 38 ರನ್ (2 ಸಿಕ್ಸರ್, 4 ಬೌಂಡರಿ) ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು. ಮುಸ್ತಫಿಜೂರ್ ರಹಮಾನ್ 10 ರನ್ ಗಳಿಸಿ ಕೊನೆಯ ವರೆಗೂ ಸಾಥ್ ನೀಡಿದರು. ಇಯಾಡೋಟ್ ಹೊಸೈನ್ ಮತ್ತು ಹಸನ್ ಮಹಮ್ಮದ್ ಶೂನ್ಯಕ್ಕೆ ನಿರ್ಗಮಿಸಿದರು. ಅಫಿಫ್ ಹೊಸೈನ್ 6 ರನ್ ಗಳಿಸಿದರು.
ಟೀಂ ಇಂಡಿಯಾ ಪರ ಮೊಹಮ್ಮದ್ ಸಿರಾಜ್ 3 ವಿಕೆಟ್, ಕುಲ್ದೀಪ್ ಸೇನ್ ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದರು. ದೀಪಲ್ ಚಹಾರ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಕಿಂಗ್ ಕೊಹ್ಲಿ, ಧವನ್ ಕಳಪೆ ಬ್ಯಾಟಿಂಗ್:
ಆರಂಭಿಕರಾಗಿ ಕಣಕ್ಕಿಳಿದ್ದ ರೋಹಿತ್ ಶರ್ಮಾ (Rohit Sharma) ಹಾಗೂ ಶಿಖರ್ ಧವನ್ ಅಲ್ಪಮೊತ್ತಕ್ಕ ಔಟಾದರು. ರೋಹಿತ್ 27 ರನ್ ಗಳಿಸಿದ್ರೆ, ಶಿಖರ್ ಧವನ್ ಕೇವಲ 7 ರನ್ಗಳಿಸಿದ್ರು. ಕಿಂಗ್ ಕೊಹ್ಲಿ (Virat Kohli) ಸಹ ನಿರೀಕ್ಷಿತ ಆಟವಾಡದೇ 9 ರನ್ಗಳಿಗೆ ಪೆವಿಲಿಯನ್ ಸೇರಿದ್ರು. ಮೊದಲ 10 ಓವರ್ಗಳಲ್ಲಿ 49 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಜೊತೆಗೂಡಿದ ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್ ರಾಹುಲ್ (KL Rahul) ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದ್ರು. ಆದರೆ 43 ರನ್ ಜೊತೆಯಾಟದ ನಂತರ 39 ಎಸೆತಗಳಲ್ಲಿ 24 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ ಔಟಾದರು. ಇದರಿಂದ ಟೀಂ ಇಂಡಿಯಾ ಮತ್ತೆ ಹಿನ್ನಡೆ ಅನುಭವಿಸಿತ್ತು.
ರಾಹುಲ್ ಏಕಾಂಗಿ ಹೋರಾಟ:
ಟೀಂ ಇಂಡಿಯಾ ಉಪನಾಯಕ ಕೆ.ಎಲ್ ರಾಹುಲ್ ಮಾತ್ರ ಏಕಾಂಗಿಯಾಗಿ ಹೋರಾಡಿದರು. 70 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 5 ಬೌಂಡರಿ ಮತ್ತು 4 ಸಿಕ್ಸರ್ಗಳ ಸಮೇತ 73 ರನ್ ಗಳಿಸಿದರು. ಉಳಿದೆಲ್ಲ ಬ್ಯಾಟ್ಸ್ಮ್ಯಾನ್ಗಳು ಬಾಂಗ್ಲಾ ಬೌಲರ್ಗಳ ದಾಳಿಗೆ ಧೂಳಿಪಟವಾದ್ರು.
ನಂತರ ಕ್ರೀಸ್ ಗಿಳಿದ ವಾಷಿಂಗ್ಟನ್ ಸುಂದರ್ ಅವರು ಕೆ.ಎಲ್ ರಾಹುಲ್ ಜೊಡಿ 60 ರನ್ಗಳ ಜೊತೆಯಾಟವಾಡಿ, ಭಾರತದ ಪಾಳಯದಲ್ಲಿ ನಗು ಮೂಡಿಸಿದ್ದರು. ಆದರೆ 42 ಎಸೆತಗಳಲ್ಲಿ 19 ರನ್ಗಳಿಸಿದ್ದ ವಾಷಿಂಗ್ಟನ್ ಸುಂದರ್ 43ನೇ ಎಸೆತದಲ್ಲಿ ಔಟಾದರು. ಶಾರ್ದೂಲ್ ಠಾಕೂರ್ 2 ರನ್, ಮೊಹಮ್ಮದ್ ಸಿರಾಜ್ 9 ರನ್ ಗಳಿಸಿದ್ರೆ, ಶಹಬಾಜ್ ಅಹ್ಮದ್, ದೀಪಕ್ ಚಹಾರ್ ಶೂನ್ಯಕ್ಕೆ ನಿರ್ಗಮಿಸಿದ್ರು. ಕುಲ್ದೀಪ್ ದೇನ್ 2 ರನ್ಗಳಿಸಿ ಅಜೇಯರಾಗುಳಿದರು.
ರೋಹಿತ್ ಉತ್ತಮ ಬ್ಯಾಟಿಂಗ್ ಪಡೆ ಹೊಂದಿದ್ದರೂ ಬಾಂಗ್ಲಾದೇಶ ಯುವ ಬೌಲರ್ಗಳ ಬೌಲಿಂಗ್ ದಾಳಿ ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಹೀಗಾಗಿ ಭಾರತ 200ರ ಗಡಿ ಮುಟ್ಟಲೂ ಅಸಾಧ್ಯವಾಯಿತು.
ಬಾಂಗ್ಲಾದೇಶದ ಪರ ಆಲ್ರೌಂಡರ್ ಶಕೀಬ್ ಅಲ್ ಹಸನ್ 36 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಎಬಾಡೋಟ್ ಹೊಸೈನ್ 47 ರನ್ಗಳಿಗೆ 4 ವಿಕೆಟ್ ಪಡೆದು ಮಿಂಚಿದರು. 43 ರನ್ ನೀಡಿದ ಮೆಹಿಡಿ ಹಸನ್ ಮಿರಾಜ್ 1 ವಿಕೆಟ್ಗೆ ತೃಪ್ತಿಪಟ್ಟುಕೊಂಡರು.
Live Tv
[brid partner=56869869 player=32851 video=960834 autoplay=true]