Tag: meghana raj sarja

  • ಸ್ಯಾಂಡಲ್ ವುಡ್ ನಲ್ಲೂ ರಂಗೇರಿದ ಚುನಾವಣೆ ಚಟುವಟಿಕೆ: ಯಾರು, ಯಾವ ಕ್ಷೇತ್ರ?

    ಸ್ಯಾಂಡಲ್ ವುಡ್ ನಲ್ಲೂ ರಂಗೇರಿದ ಚುನಾವಣೆ ಚಟುವಟಿಕೆ: ಯಾರು, ಯಾವ ಕ್ಷೇತ್ರ?

    ವಿಧಾನಸಭಾ (Assembly) ಚುನಾವಣೆ (Election) ಘೋಷಣೆಯಾದ ಬೆನ್ನಲ್ಲೇ ಚಿತ್ರರಂಗದಲ್ಲೂ ಅದರ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ನಾನಾ ರೀತಿಯ ಚಟುವಟಿಕೆಗಳು ಕೂಡ ಗರಿಗೆದರಿವೆ. ಈಗಾಗಲೇ ಸುಮಲತಾ ಅಂಬರೀಶ್, ತಾರಾ, ಜಗ್ಗೇಶ್, ಬಿ.ಸಿ.ಪಾಟೀಲ್, ಕುಮಾರ ಬಂಗಾರಪ್ಪ, ಮುಖ್ಯಮಂತ್ರಿ ಚಂದ್ರು, ಟೆನ್ನಿಸ್ ಕೃಷ್ಣ, ಶ್ರುತಿ, ಜಯಮಾಲಾ, ಉಮಾಶ್ರೀ, ಸಾಯಿಕುಮಾರ್, ಅನಂತ್ ನಾಗ್, ನಿಖಿಲ್ ಕುಮಾರಸ್ವಾಮಿ, ಪೂಜಾ ಗಾಂಧಿ ನೇರವಾಗಿ ನಾನಾ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದರೆ, ಇನ್ನೂ ಅಚ್ಚರಿಯ ಹೆಸರುಗಳು ಪಕ್ಷಕ್ಕೆ ಆಗಮಿಸುತ್ತಿರುವ ಕುರಿತು ಮಾಹಿತಿಗಳು ಹೊರಬೀಳುತ್ತಿವೆ.

    ಎರಡ್ಮೂರು ವಾರಗಳ ಹಿಂದೆಯಷ್ಟೇ ಅನಂತ್ ನಾಗ್ (Anant Nag) ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎನ್ನುವ ಸುದ್ದಿಯಿತ್ತು. ಈ ಕುರಿತು ಬಿಜೆಪಿ ಮುಖಂಡರು ಕೂಡ ಮಾಹಿತಿ ಹಂಚಿಕೊಂಡಿದ್ದರು. ಕೊನೆ ಕ್ಷಣದಲ್ಲಿ ಅನಂತ್ ನಾಗ್ ಬಿಜೆಪಿ ಸೇರಿಕೊಳ್ಳಲೇ ಇಲ್ಲ. ನಡೆಯಬೇಕಿದ್ದ ಕಾರ್ಯಕ್ರಮ ಅವರ ಅನುಪಸ್ಥಿತಿಯಲ್ಲಿ  ನೆರವೇರಿತು. ಆದರೆ, ಅವರು ಗೈರಿಗೆ ಕಾರಣವನ್ನು ಯಾರೂ ನೀಡಲಿಲ್ಲ. ಸ್ವತಃ ಅನಂತ್ ನಾಗ್ ಅವರೇ ಈ ಕುರಿತು ಮಾತನಾಡಲಿಲ್ಲ. ಇದನ್ನೂ ಓದಿ: ಐಟಂ ಸಾಂಗ್ ಒಪ್ಪಿಕೊಂಡಿದ್ದಕ್ಕೆ ಕಾರಣವಿದೆ : ಸಮಂತಾ ಸಿಡಿಸಿಸ ಹೊಸ ಬಾಂಬ್

    ಈಗ ಮತ್ತೊಂದು ಅಚ್ಚರಿಯ ಹೆಸರು ಕೇಳಿ ಬಂದಿದೆ. ನಟ ಮೇಘನಾ ರಾಜ್ ಸರ್ಜಾ (Meghana Raj Sarja) ಬಿಜೆಪಿಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಈ ಕುರಿತು ಅವರು ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎನ್ನುವ ಸುದ್ದಿಯೂ ಬಲವಾಗಿ ಕೇಳಿ ಬರುತ್ತಿದೆ. ಮೇಘನಾ ತಂದೆ ತಾಯಿ ಒಪ್ಪಿದ್ದಾರೆ ಎಂದು, ಸರ್ಜಾ ಕುಟುಂಬ ಒಪ್ಪಿಲ್ಲ ಎನ್ನುವ ಸುದ್ದಿಗಳು ರೆಕ್ಕೆಪುಕ್ಕದೊಂದಿಗೆ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿವೆ. ಆದರೆ, ಮೇಘನಾ ಈ ಕುರಿತು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಹಾಗಾಗಿ ಅವರೇ ಈ ಕುರಿತು ಅಧಿಕೃತ ಮಾಹಿತಿ ಕೊಡಬೇಕು.

    ಈ ನಡುವೆ ನಟಿ ರಮ್ಯಾ (Ramya) ಅವರ ಹೆಸರು ಆಗಾಗ್ಗೆ ಕೇಳಿ ಬರುತ್ತಿದೆ. ಈ ಬಾರಿ ಕಾಂಗ್ರೆಸ್ ನಿಂದ ರಮ್ಯಾ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಪದ್ಮನಾಭ ನಗರ, ಮಂಡ್ಯ ಹಾಗೂ ಚನ್ನಪಟ್ಟಣ ಮೂರು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ರಮ್ಯಾ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಕೂಡ ಅಧಿಕೃತವಾಗಬೇಕು.

    ನಾನು ರಾಜಕಾರಣದಲ್ಲಿ ಇರುವತನಕ ನನ್ನ ಪುತ್ರ ಅಭಿಷೇಕ್ (Abhishek Ambarish) ಚುನಾವಣೆ ಕಣದಲ್ಲಿ ಇರುವುದಿಲ್ಲ ಎಂದು ಸ್ವತಃ ಸುಮಲತಾ ಅಂಬರೀಶ್ ಅವರೇ ಹೇಳಿದ್ದರೂ, ಆಗಾಗ್ಗೆ ಅಭಿಷೇಕ್ ಹೆಸರು ಚುನಾವಣೆಯ ಅಖಾಡದಲ್ಲಿ ಕೇಳಿ ಬರುತ್ತಿದೆ. ಮಂಡ್ಯ ಜಿಲ್ಲೆಯಲ್ಲೇ ಒಂದು ಕ್ಷೇತ್ರವನ್ನು ಅಭಿಷೇಕ್ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವುದು ಮಂಡ್ಯ ರಾಜಕೀಯ ವಲಯದ ಮಾತು. ಆದರೆ, ಅಭಿಷೇಕ್ ಚುನಾವಣೆಗೆ ನಿಲ್ಲಲಾರರು ಎನ್ನುವುದು ಅವರ ಆಪ್ತರು ಪ್ರತಿಕ್ರಿಯೆ.

    ಈ ಹಿಂದೆ ರಾಜಕಾರಣ ಪ್ರವೇಶಿಸಿರುವ ನಿರ್ಮಾಪಕ ಕೆ.ಮಂಜು ಈ ಬಾರಿ ಪದ್ಮನಾಭ ನಗರದಿಂದ ಅಖಾಡಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಯಾವ ಪಕ್ಷದಿಂದ ಅವರು ಸ್ಪರ್ಧಿಸುತ್ತಾರೆ ಎನ್ನುವುದು ಇನ್ನೂ ಅಧಿಕೃತವಾಗಿಲ್ಲವಾದ್ದರೂ, ಈ ಸುದ್ದಿಯಂತೂ ಬಲವಾಗಿ ಕೇಳಿ ಬರುತ್ತಿದೆ. ಯಾವ ಪಕ್ಷದಿಂದ ಇವರು ಸ್ಪರ್ಧಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    ಈಗಾಗಲೇ ಆಮ್ ಆದ್ಮಿ ಪಾರ್ಟಿ ಕನ್ನಡದ ನಟ ಟೆನ್ನಿಸ್ ಕೃಷ್ಣ ಮತ್ತು ನಿರ್ದೇಶಕ ಸ್ಮೈಲ್ ಶ್ರೀನು ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಟೆನ್ನಿಸ್ ಕೃಷ್ಣ ಅವರು ತುರುವೇಕೆರೆಯಿಂದ ಸ್ಪರ್ಧಿಸುತ್ತಿದ್ದರೆ, ಸ್ಮೈಲ್ ಶ್ರೀನು ಅವರಿಗೆ (ಶ್ರೀನಿವಾಸ್ ಎನ್) ಕೂಡ್ಲಿಗಿ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಆಗಿದೆ. ಇಬ್ಬರೂ ಹಲವಾರು ದಿನಗಳಿಂದ ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಕೂಡ ಆರಂಭಿಸಿದ್ದಾರೆ.

  • ಎಮೋಷನಲ್ ನಿಂದನೆ ಬಗ್ಗೆ ಮೌನ ಮುರಿದ ಮೇಘನಾ ರಾಜ್

    ಎಮೋಷನಲ್ ನಿಂದನೆ ಬಗ್ಗೆ ಮೌನ ಮುರಿದ ಮೇಘನಾ ರಾಜ್

    ಸ್ಯಾಂಡಲ್‌ವುಡ್ (Sandalwood) ನಟಿ ಮೇಘನಾ ರಾಜ್ (Meghana Raj) `ತತ್ಸಮ ತದ್ಭವ’ ಚಿತ್ರದ ಮೂಲಕ ಕಮ್‌ಬ್ಯಾಕ್ ಮಾಡ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಈ ಚಿತ್ರದ ಮೂಲಕ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ಕೊಡಲು ಬರುತ್ತಿದ್ದಾರೆ. ಹಾಗೆಯೇ ತಮ್ಮ ಎಮೋಷನಲ್ ಜರ್ನಿಯ ಬಗ್ಗೆ ನಟಿ ಮಾತನಾಡಿದ್ದಾರೆ. ಹೆಣ್ಣು ಮಕ್ಕಳಿಗಿರುವ ಸಮಾಜದ ಚೌಕಟ್ಟು ಅವರ ದೃಷ್ಟಿಕೋನದ ಬಗ್ಗೆ ಮೇಘನಾ ಮೌನ ಮುರಿದಿದ್ದಾರೆ.

    ಸಮಾಜದಲ್ಲಿ ಹೆಣ್ಣು ಹೀಗೆಯೇ ಇರಬೇಕು. ಇಂತಹ ಕೆಲಸಗಳನ್ನೇ ಮಾಡಬೇಕು ಎಂದೆಲ್ಲಾ ನಿರೀಕ್ಷೆ ಮಾಡುತ್ತಿದ್ದರು. ಅದರಿಂದ ನನಗೆ ತುಂಬಾ ಹಿಂಸೆ ಆಗುತ್ತಿತ್ತು. ನನ್ನ ಪ್ರಕಾರ ದೇಶದಲ್ಲಿ ಅತಿ ದೊಡ್ಡ ನಿಂದನೆ ಅಂದ್ರೆ ಅದು ಭಾವನಾತ್ಮಕ ನಿಂದನೆ ಎನ್ನಬಹುದು. ನನ್ನ ಭಾವನೆಗಳನ್ನು ವ್ಯಕ್ತ ಪಡಿಸುವುದಕ್ಕೆ ತುಂಬಾ ಇಷ್ಟ ಪಡುವ ವ್ಯಕ್ತಿನಾನು ಅದು ಹೇಗೆ ಇರಲಿ ನಾನು ವ್ಯಕ್ತಪಡಿಸುವೆ. ಆದರೆ ತುಂಬಾ ಭಾವನೆಗಳನ್ನು ಹಿಡಿದಿಟ್ಟಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು ಹಾಗೆ ಆಗಬಾರದು ಎಂದು ಮೇಘನಾ ರಾಜ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    ನಾವು ನಮ್ಮಂತೆಯೇ ಸಮಾಜದ ಮುಂದೆ ಇರುವುದಕ್ಕೆ ಅದೆಷ್ಟೋ ಹೆಣ್ಣು ಮಕ್ಕಳು ಹೆದರಿಕೊಳ್ಳುತ್ತಾರೆ. ಕಾರಣ ಜನರು ನಮ್ಮನ್ನು ಜಡ್ಜ್ ಮಾಡುತ್ತಾರೆ ಎಂದು. ನನ್ನ ನಿಜವಾದ ಭಾವನೆಗಳನ್ನು ತೋರಿಸಿಕೊಂಡರೆ ನಮ್ಮನ್ನು ತಪ್ಪಾಗಿ ನೋಡುತ್ತಾರೆ ಎನ್ನುವ ಭಾವನೆ ಮೂಡುತ್ತದೆ. ಪುರುಷರಿಗೆ ಹೋಲಿಸಿಕೊಂಡರೆ ನಾವು ತುಂಬಾನೇ ಕಂಟ್ರೋಲ್ ಮಾಡುತ್ತೀವಿ ಎಂದು ಮೇಘನಾ ಹೇಳಿದ್ದಾರೆ. ಇದನ್ನೂ ಓದಿ: ಕಿಚ್ಚ ಸುದೀಪ್ ನಟನೆಯ ಹೊಸ ಸಿನಿಮಾ ಏಪ್ರಿಲ್ ನಲ್ಲಿ ಘೋಷಣೆ

    ಕಳೆದ 30 ವರ್ಷಗಳಲ್ಲಿ ಪುರುಷ ಪ್ರಧಾನ ಸಿನಿಮಾಗಳು ಹೆಚ್ಚಾಗಿದೆ. ಈಗ ಟ್ರೆಂಡ್ ಬದಲಾಗಿದೆ. ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಿವೆ. ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ 13 ವರ್ಷ ಹುಡುಗಿ. ನಾಯಕಿಯರಿಗೆ ಹೆಚ್ಚ ಸಮಯ ಇರುವುದಿಲ್ಲ ಎಂದು ಈಗಲೂ ಹಾಗೆ ಯೋಚನೆ ಮಾಡಬಾರದು. ಸಿನಿಮಾ ಅಂದ್ರೆ ಬರೀ ಗ್ಲಾಮರ್ ಅಲ್ಲ ಅದಕ್ಕೂ ಮೀರಿದ ಕಲೆಯದು. ಬಾಲಿವುಡ್‌ನಲ್ಲಿ 40 ವರ್ಷದವರು ಇಂದಿಗೂ ನಾಯಕಿಯರು ನಟಿಸುತ್ತಾರೆ. ಜನರು ಯೋಚಿಸುವ ರೀತಿ ಬದಲಾಗಬೇಕು ಎಂದು ನಟಿ ಮೇಘನಾ ಮಾತನಾಡಿದ್ದಾರೆ.

    `ತತ್ಸಮ ತದ್ಭವ’ (Tatsama Tadbhava) ಚಿತ್ರವನ್ನು ಪನ್ನಗಾಭರಣ ನಿರ್ಮಾಣ ಮಾಡ್ತಿದ್ದಾರೆ. ಮೇಘನಾ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅರವಿಂದ್ ಅಯ್ಯರ್, ಮಹತಿ ಭಟ್, ಟಿ.ಎಸ್ ನಾಗಾಭರಣ, ರಾಜಶ್ರೀ, ಬಾಲಾಜಿ ಮನೋಹರ್ ಸೇರಿದಂತೆ ಹಲವರು ನಟಿಸಿದ್ದಾರೆ.

  • ಸಿಹಿಸುದ್ದಿ ಹಂಚಿಕೊಂಡ ಮೇಘನಾ ರಾಜ್‌: ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ

    ಸಿಹಿಸುದ್ದಿ ಹಂಚಿಕೊಂಡ ಮೇಘನಾ ರಾಜ್‌: ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ

    ಸ್ಯಾಂಡಲ್‌ವುಡ್ (Sandalwood) ನಟಿ ಮೇಘನಾ ರಾಜ್ ಸರ್ಜಾ (Meghana Raj Sarja) ಕೊನೆಗೂ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ನೀವೆಲ್ಲರೂ ಕೇಳುವ ಪ್ರಶ್ನೆಗೆ ಉತ್ತರ ನೀಡುವ ಸಮಯ ಬಂದಿದೆ ಎಂದು ಪೋಸ್ಟ್ ಮಾಡುವ ಮೂಲಕ ನಟಿ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದ್ದರು. ಈಗ ಹೊಸ ಸಿನಿಮಾ ಅನೌನ್ಸ್ ಮಾಡುವ ಮೂಲಕ ಆ ಕುತೂಹಲಕ್ಕೆ ತೆರೆಬಿದ್ದಿದೆ.

    ಕನ್ನಡದ ಪ್ರತಿಭಾನ್ವಿತ ನಟಿ ಮೇಘನಾ ರಾಜ್ ಅವರು ಪತಿ ಚಿರು (Chiranjeevi Sarja) ನಿಧನದ ನಂತರ ಸಾಕಷ್ಟು ನೋವು, ಸಂಕಷ್ಟಗಳನ್ನ ಎದುರಿಸಿದ್ದರು. ನಟಿಯ ಎರಡನೇ ಮದುವೆ ಬಗ್ಗೆ, ಸಿನಿಮಾಗೆ ಕಮ್‌ಬ್ಯಾಕ್ ಆಗುವ ಬಗ್ಗೆ ಹಲವು ಪ್ರಶ್ನೆಗಳನ್ನ ಮೇಘನಾಗೆ ಕೇಳುತ್ತಿದ್ದರು. (ಫೆ.18)ರಂದು ಶನಿವಾರ ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. 2020, ಭಾನುವಾರವಾಗಿತ್ತು ನನ್ನ ವಿಚಾರದಲ್ಲಿ ತೀವ್ರವಾದ ಬದಲಾವಣೆಯಾದವು. ಆಗಿನಿಂದಲೂ ನನಗೆ ಒಂದು ಪ್ರಶ್ನೆಯನ್ನು ಕೇಳಲಾಗುತ್ತಿದೆ. ಫೆಬ್ರವರಿ 19ರ ಭಾನುವಾರ ನಾನು ಆ ಪ್ರಶ್ನೆಗೆ ಉತ್ತರ ಕೊಡ್ತೀನಿ. 2023ರ ಫೆಬ್ರವರಿ 19ರ ಬೆಳಗ್ಗೆ 10:35ಕ್ಕೆ ಎಂದು ಅಪ್‌ಡೇಟ್‌ ನೀಡಿದ್ದರು. ಆ ಕುತೂಹಲಕ್ಕೆ ಈಗ ತೆರೆಬಿದ್ದಿದೆ.

    ಬಹುಭಾಷಾ ನಟಿ ಮೇಘನಾ ರಾಜ್ ಅವರು `ತತ್ಸಮ ತದ್ಭವ’ (Tatsama Tadbhava) ಸಿನಿಮಾ ಮೂಲಕ ಮತ್ತೆ ನಟನೆಗೆ ಕಮ್ ಬ್ಯಾಕ್ ಆಗಿದ್ದಾರೆ. ಸ್ತ್ರೀ ಪ್ರಧಾನ ಪಾತ್ರದ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಲಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನ ರಿಲೀಸ್ ಮಾಡುವ ಮೂಲಕ ಮೋಹಕತಾರೆ ರಮ್ಯಾ ಅವರು ಮೇಘನಾಗೆ ಸಾಥ್‌ ನೀಡಿದ್ದಾರೆ. ಜೊತೆಗೆ ಕಮ್ ಬ್ಯಾಕ್‌ಗೆ ಶುಭಹಾರೈಸಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ವಿಶಾಲ್ ಅತ್ರೇಯಾ ನಿರ್ದೇಶನದ `ತತ್ಸಮ ತದ್ಭವ’ ಚಿತ್ರದಲ್ಲಿ ಮೇಘನಾ (Meghana Raj) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘನಾ ರಾಜ್ ಅವರ ಬಾಯಿಯನ್ನು ಬಲವಂತವಾಗಿ ಮುಚ್ಚಲಾಗಿದೆ. ಪೋಸ್ಟರ್ ಲುಕ್ ಕುತೂಹಲ ಕೆರಳಿಸಿದೆ. ಕನ್ನಡ ಮತ್ತು ಮಲಯಾಳಂನಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಪನ್ನಗ ಭರಣ (Pannaga Bharana) ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ʻಕೆಆರ್‌ಜಿʼ (KRG Studio) ಸಂಸ್ಥೆ ಈ ಚಿತ್ರವನ್ನು ವರ್ಲ್ಡ್ ವೈಡ್ ರಿಲೀಸ್ ಮಾಡಲಿದ್ದಾರೆ. ಇದನ್ನೂ ಓದಿ: ಖ್ಯಾತ ತಮಿಳು ಹಾಸ್ಯ ನಟ ಮಯಿಲ್‌ಸಾಮಿ ಹಠಾತ್ ನಿಧನ

    ನಿಮ್ಮನ್ನು ಮತ್ತೆ ಬೆಳ್ಳಿತೆರೆಯಲ್ಲಿ ನೋಡುವುದು ಯಾವಾಗ? ಎಂದು ಹೆಚ್ಚು ಕೇಳಲಾದ ಪ್ರಶ್ನೆಗೆ ಅಂತಿಮವಾಗಿ ಉತ್ತರ ಇಲ್ಲಿದೆ ಎಂದು ಹೇಳಿದ್ದಾರೆ.ಭಯದಿಂದ ಸಿಕ್ಕಿಹಾಕಿಕೊಂಡಾಗ ನಿರ್ಭಯವಾಗಿರುವುದು ಅವಳ ಏಕೈಕ ಮಾರ್ಗವಾಗಿದೆ ಎಂದು ಕ್ಯಾಪ್ಷನ್ ನೀಡಿ ಪೋಸ್ಟರ್ ಶೇರ್ ಮಾಡಿದ್ದಾರೆ. ನಟಿಯ ಹೊಸ ಹೆಜ್ಜೆಗೆ ಅಭಿಮಾನಿಗಳು ಶುಭಕೋರಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಯನ್‍ಗೆ 11 ತಿಂಗಳು- ಕ್ಯೂಟ್ ವೀಡಿಯೋ ಹಂಚಿಕೊಂಡ ಮೇಘನಾ

    ರಾಯನ್‍ಗೆ 11 ತಿಂಗಳು- ಕ್ಯೂಟ್ ವೀಡಿಯೋ ಹಂಚಿಕೊಂಡ ಮೇಘನಾ

    ಬೆಂಗಳೂರು: ರಾಯನ್ ಇಷ್ಟು ಬೇಗ ಬೆಳೆಯುತ್ತಿದ್ದಾನಾ, ಆಗಲೇ 11 ತಿಂಗಳು ಆಗೋಯ್ತಾ ಎಂದು ಮೇಘನಾ ರಾಜ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ರಾಯನ್ ಆಟವಾಡುತ್ತಿರುವ ಕ್ಯೂಟ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

    ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ಆಗಲೇ 11 ತಿಂಗಳಾ?! ರಾಯನ್ ಎಷ್ಟು ಬೇಗ ಬೆಳೆಯುತ್ತಿದ್ದಾನೆ. ನನ್ನ ಪ್ರೀತಿಯ ಅಭಿಮಾನಿಗಳು ಖಂಡಿತವಾಗಿಯೂ ಯಾವಾಗಲೂ ನಮ್ಮೊಂದಿಗೆ ಪ್ರತಿ ತಿಂಗಳು ಆಚರಿಸುತ್ತಾರೆ. ಅವರಿಗಾಗಿ ರಾಯನ್ ವೀಡಿಯೋ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸೂಪರ್ ಮ್ಯಾನ್ ಆದ ರಾಯನ್

    ವೀಡಿಯೋದಲ್ಲಿ ಯಲ್ಲೋ ಟಿಶರ್ಟ್ ಹಾಕಿರುವ ರಾಯನ್, ಗೊಂಬೆ ಜೊತೆ ಆಟವಾಡುತ್ತಿದ್ದಾನೆ. ಈ ವೇಳೆ ಯಾರದು ನಿನ್ನ ತರಾನೆ ಇದಾರೆ ಎಂದು ಮೇಘನಾ ಕೇಳಿದ್ದಾರೆ. ಆಗ ರಾಯನ್ ಕೂಗಾಡಿ, ನಕ್ಕಿದ್ದಾನೆ.

     

    View this post on Instagram

     

    A post shared by Meghana Raj Sarja (@megsraj)

    ಮೇಘನಾ ರಾಜ್ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ರಾಯನ್ ರಾಜ್ ಸರ್ಜಾ ಫೋಟೋ ಹಾಗೂ ವೀಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ರಾಯನ್ ಸೂಪರ್ ಮ್ಯಾನ್ ಬ್ಯಾಂಡ್ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ನೆರವಿಗೆ ಸಹಾಯ ಕೋರಿದ ಮಂಜು

    ಇತ್ತೀಚೆಗಷ್ಟೇ ರಾಯನ್ ರಾಜ್ ಸರ್ಜಾ ನಾಮಕರಣವನ್ನು ಅದ್ಧೂರಿಯಾಗಿ ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಂತೆ ಮಾಡಲಾಗಿದ್ದು, ಸಿನಿ ತಾರೆಯರು, ಗಣ್ಯರು, ಕುಟುಂಬಸ್ಥರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು. ಈ ವೇಳೆ ಪೋಸ್ಟ್ ಮಾಡಿ, ಪುಟ್ಟ ರಾಯನ್ ರಾಜ್ ಸರ್ಜಾಗೆ ದೇವರು ಪ್ರಪಂಚದ ಪ್ರತಿಯೊಂದು ಸಂತೋಷವನ್ನು ನೀಡಲಿ ಎಂದು ಬರೆದುಕೊಂಡಿದ್ದರು. ರಾಯನ್ ರಾಜ್ ಸರ್ಜಾ ಎಂಬ ಹೆಸರಿನ ಬಗ್ಗೆ ಸಹ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಇದಕ್ಕೆ ಖುದ್ದು ಮೇಘನಾ ಸ್ಪಷ್ಟನೆ ನೀಡಿದ್ದರು.

  • ಸೂಪರ್ ಮ್ಯಾನ್ ಆದ ರಾಯನ್

    ಸೂಪರ್ ಮ್ಯಾನ್ ಆದ ರಾಯನ್

    ಬೆಂಗಳೂರು: ಮೇಘನಾ ರಾಜ್ ಸರ್ಜಾ ಪುತ್ರ, ಜೂನಿಯರ್ ಚಿರು ಎಂದೇ ಜನಪ್ರಿಯವಾಗಿರುವ ರಾಯನ್ ರಾಜ್ ಸರ್ಜಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಈ ಮೂಲಕ ಅಭಿಮಾನಿಗಳಿಗೆ ಅಪ್‍ಡೇಟ್ಸ್ ನೀಡುತ್ತಿರುತ್ತಾರೆ. ಅದೇ ರೀತಿ ಇದೀಗ ಸೂಪರ್ ಮ್ಯಾನ್ ಬ್ಯಾಂಡ್ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಈ ಕುರಿತು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿರುವ ಅವರು, ದಿಸ್ ಈಸ್ ಫನ್, ವೇರಿಂಗ್ ಮೈ ಫುಲ್ ಟೈಮ್ ಜಾಬ್ ಟ್ಯಾಗ್. ಮಾಮ್ ಆ್ಯಂಡ್ ಮೈ ಲಿಟಲ್ ಸೂಪರ್ ಮ್ಯಾನ್ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿರಂಜೀವಿ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾಗೆ ನಾಮಕರಣ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಸೂಪರ್ ಮ್ಯಾನ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋಗಳನ್ನು ಮೇಘನಾ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಫೋಟೋ ಚೆನ್ನಾಗಿ ಬಂದಿದ್ಯಾ ಅಂತ ಚೆಕ್ ಮಾಡ್ತಿದ್ದಾನೆ ರಾಯನ್: ಸುಧಾರಾಣಿ

     

    View this post on Instagram

     

    A post shared by Meghana Raj Sarja (@megsraj)

    ಇತ್ತೀಚೆಗಷ್ಟೇ ರಾಯನ್ ರಾಜ್ ನಾಮಕರಣವನ್ನು ಅದ್ಧೂರಿಯಾಗಿ ಮಾಡಲಾಗಿದ್ದು, ಸಿನಿ ತಾರೆಯರು, ಗಣ್ಯರು, ಕುಟುಂಬಸ್ಥರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು. ಅಲ್ಲದೆ ಈ ಹಿಂದೆ ಸಂಸದೆ ಸುಮಲತಾ, ಅಭಿಷೇಕ್ ಅಂಬರೀಶ್, ಸುಂದರ್ ರಾಜ್, ಧ್ರುವ ಸರ್ಜಾ ಭಾಗಿಯಾಗಿದ್ದರು. ಅಲ್ಲದೆ ಪುಟ್ಟ ರಾಯನ್ ರಾಜ್ ಸರ್ಜಾಗೆ ದೇವರು ಪ್ರಪಂಚದ ಪ್ರತಿಯೊಂದು ಸಂತೋಷವನ್ನು ನೀಡಲಿ ಎಂದು ಬರೆದುಕೊಂಡಿದ್ದರು.

    ಹೀಗೆ ಮೇಘನಾ ರಾಜ್ ಸರ್ಜಾ ಮಗನ ನಾಮಕರಣ ಕಾರ್ಯಕ್ರಮ ಇತ್ತೀಚೆಗೆ ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಂತೆ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನಟ- ನಟಿಯರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ರಾಯನ್ ರಾಜ್ ಸರ್ಜಾ ಎಂಬ ಹೆಸರಿನ ಬಗ್ಗೆ ಸಹ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಇದಕ್ಕೆ ಖುದ್ದು ಮೇಘನಾ ಸ್ಪಷ್ಟನೆ ನೀಡಿದ್ದರು.

  • ಬ್ಯಾಕ್ ಟು ಬೇಸಿಕ್ಸ್ – ಮೇಘನಾ ಪೋಸ್ಟ್​ಗೆ ಹಿರಿ ಹಿರಿ ಹಿಗ್ಗಿದ ಫ್ಯಾನ್ಸ್

    ಬ್ಯಾಕ್ ಟು ಬೇಸಿಕ್ಸ್ – ಮೇಘನಾ ಪೋಸ್ಟ್​ಗೆ ಹಿರಿ ಹಿರಿ ಹಿಗ್ಗಿದ ಫ್ಯಾನ್ಸ್

    ಬೆಂಗಳೂರು: ನಟಿ ಮೇಘನಾ ರಾಜ್ ಸರ್ಜಾ ತಾಯಿಯಾದ ಬಳಿಕ ಮೊದಲ ಬಾರಿಗೆ ಕ್ಯಾಮೆರಾ ಫೇಸ್ ಮಾಡಿರುವ ಸಂತಸದ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕ್ಯಾಮೆರಾ ಮುಂದೆ ಸ್ಕ್ರಿಪ್ಟ್ ಓದುತ್ತಿರುವ ಫೋಟೋ ಶೇರ್ ಮಾಡಿಕೊಂಡಿರುವ ಮೇಘನಾ ಸರ್ಜಾಗೆ ಆಪ್ತರು ಸೇರಿದಂತೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

    ಮೇಘನಾ ಸರ್ಜಾ ತಾಯಿಯಾದ ಬಳಿಕ ಶೀಘ್ರದಲ್ಲೇ ಬಣ್ಣದ ಲೋಕಕ್ಕೆ ಹಿಂದಿರುಗುವ ಸುಳಿವನ್ನು ಕೆಲ ದಿನಗಳ ಹಿಂದೆಯೇ ನೀಡಿದ್ದರು. ಇದೀಗ ಕ್ಯಾಮೆರಾ ಫೇಸ್ ಮಾಡಿ, ಮತ್ತೆ ಹಳೆಯ ಜೀವನದ ಲಯಕ್ಕೆ ಮರಳುತ್ತಿದ್ದಾರೆ. ಇವತ್ತು ಜೂನಿಯರ್ ಚಿರುಗೆ ಒಂಬತ್ತು ತಿಂಗಳು. ವರ್ಷದ ಬಳಿಕ ಕ್ಯಾಮೆರಾ ಫೇಸ್ ಮಾಡುತ್ತಿದ್ದೇನೆ ಎಂದು ಬರೆದು ಹಾರ್ಟ್ ಎಮೋಜಿ ಹಾಕಿ, ಬ್ಯಾಕ್ ಟು ಬೇಸಿಕ್ಸ್ ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಇದನ್ನೂ ಓದಿ: ಅಪ್ಪ ಚಿರುವನ್ನು ಗುರುತಿಸುತ್ತಿರೋ ನನ್ನ ಮಗನನ್ನು ನೋಡಲು ಹೆಮ್ಮೆಯಾಗ್ತಿದೆ: ಮೇಘನಾ

     

    View this post on Instagram

     

    A post shared by Meghana Raj Sarja (@megsraj)

    ಇನ್ನು ಮೇಘನಾ ಸರ್ಜಾ ಪೋಸ್ಟ್ ಗೆ ರಾಗಿಣಿ ಪ್ರಜ್ವಲ್, ಸಂಯುಕ್ತಾ ಹೊರನಾಡ, ಸಿಂಪಲ್ ಸುನಿ ಸೇರಿದಂತೆ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. ಪತಿ ಚಿರಂಜೀವಿ ಸರ್ಜಾ ನಿಧನದ ಬಳಿಕ ಮೇಘನಾ ರಾಜ್ ಮೊಗದಲ್ಲಿ ಜೂನಿಯರ್ ಚಿರು ಮಂದಹಾಸ ತಂದಿದ್ದಾನೆ. ಇದನ್ನೂ ಓದಿ: ಮೇಘನಾ, ಜೂ. ಚಿರುವಿಗೆ ಆಂಜನೇಯನ ದರ್ಶನ ಮಾಡಿಸಿದ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ!

  • ಅಮ್ಮನ ಕಿರುಬೆರಳು ಹಿಡಿದ ಜೂನಿಯರ್ ಚಿರು

    ಅಮ್ಮನ ಕಿರುಬೆರಳು ಹಿಡಿದ ಜೂನಿಯರ್ ಚಿರು

    ಬೆಂಗಳೂರು: ಜೂನಿಯರ್ ಚಿರು ಅಮ್ಮನ ಕಿರುಬೆರಳು ಹಿಡಿದಿರುವ ಮುದ್ದಾದ ಫೋಟೋವನ್ನ ಮೇಘನಾ ರಾಜ್ ಸರ್ಜಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಹಾಲಿನಲ್ಲಿ ಅದ್ದಿದಂತೆ ಕಾಣುವ ಪುಟ್ಟ ಕಂದನ ಕೋಮಲ ಕರಗಳಿಗೆ ನೋಡುಗರ ದೃಷ್ಟಿ ತಾಕುವಂತಿದೆ.

    ಮಹಿಳೆಗೆ ಅಮ್ಮನ ಪದವಿಯೇ ಅತ್ಯುನ್ನತ ಸ್ಥಾನ ಅನ್ನೋ ಮಾತಿದೆ. ಮಗುವಿನ ಆಗಮನದ ಜೊತೆಯಲ್ಲಿ ಅಮ್ಮನ ಜನ್ಮವೂ ಆಗುತ್ತೆ. ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತವನ್ನ ತಾಯಿ ಸೂಕ್ಷ್ಮವಾಗಿ ಗಮನಿಸುತ್ತಾಳೆ. ಅದು ಕಿರುಬೆರಳು ಹಿಡಿದು, ಅಮ್ಮ ಎಂದು ಕರೆಯುವರೆಗೂ ಪ್ರತಿ ಹಂತದಲ್ಲಿಯೂ ತಾಯಿ ಜೊತೆಯಲ್ಲಿರುತ್ತಾಳೆ. ಕಂದನ ಪ್ರತಿ ಬೆಳವಣಿಗೆ ಹಂತಗಳು ತಾಯಿಯನ್ನ ಪುಳುಕವನ್ನುಂಟು ಮಾಡುತ್ತೇವೆ.

     

    View this post on Instagram

     

    A post shared by Meghana Raj Sarja (@megsraj)

    ಹಳದಿ ಮತ್ತು ಕಪ್ಪು ಬಣ್ಣದ ಶ್ವೆಟರ್ ತೊಟ್ಟು ಕೈಗೊಂದು ಕೆಂಪು ಲೇಸ್ ಕಟ್ಟಿಕೊಂಡ ಜೂನಿಯರ್ ಚಿರು, ತಾಯಿ ಮೇಘಾನ ಕಿರುಬೆರಳನ್ನ ತನ್ನ ಇಡೀ ಕೈಯಿಂದ ಹಿಡಿಯುವ ಪ್ರಯತ್ನದಲ್ಲಿದ್ದಾನೆ. ಇದೊಂದು ಮಿರಾಕಲ್. ನನ್ನ ಪುಟ್ಟ ಕಂದ ತನ್ನ ಪುಷ್ಪ ದಳದಂತಹ ಕೈಗಳಿಂದ ನನ್ನನ್ನ ಬೆರಳು ಹಿಡಿಯಲು ಪಯತ್ನಿಸುತ್ತಿದೆ. ಇದು ದೇವರು ನೀಡಿದ ಅಮೂಲ್ಯ ಉಡುಗೊರೆ ಎಂದು ಮೇಘನಾ ರಾಜ್ ತಾಯಿಯ ಅನುಭವವನ್ನ ಕೆಲ ಸಾಲುಗಳಲ್ಲಿ ಬರೆದುಕೊಂಡಿದ್ದಾರೆ.

  • ಶೀಘ್ರದಲ್ಲೇ ನಟನೆಗೆ ಮರಳುತ್ತೇನೆ: ಮೇಘನಾ ರಾಜ್ ಸರ್ಜಾ

    ಶೀಘ್ರದಲ್ಲೇ ನಟನೆಗೆ ಮರಳುತ್ತೇನೆ: ಮೇಘನಾ ರಾಜ್ ಸರ್ಜಾ

    ಬೆಂಗಳೂರು: ನಟಿ ಮೇಘನಾ ರಾಜ್ ಸರ್ಜಾ ಮತ್ತೆ ನಟನೆಗೆ ಹಿಂದಿರುಗುವದಾಗಿ ಹೇಳಿದ್ದಾರೆ. ಇದಕ್ಕೆ ತಮ್ಮ ಪತಿ ಚಿರಂಜೀವಿ ಸರ್ಜಾ ಕಾರಣ ಎಂದಿದ್ದಾರೆ.

    ನಟನೆ ನನ್ನ ಬದುಕಾಗಿದ್ದು, ಅದು ನನ್ನ ರಕ್ತದಲ್ಲಿ ಇದೆ. ಪತಿ ಚಿರಂಜೀವಿ ಸರ್ಜಾ, ಇಷ್ಟಪಡುವ ವಸ್ತು ಅಥವಾ ಕೆಲಸದಿಂದ ಎಂದೂ ಹಿಂದೆ ಸರಿಯಕೂಡದು ಅಂತ ಹೇಳುತ್ತಿದ್ದರು. ಹಾಗಾಗಿ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತೇನೆ. ನನ್ನಿಂದ ಎಲ್ಲಿಯವರೆಗೂ ಸಾಧ್ಯವೂ ಅಲ್ಲಿಯವರೆಗೂ ಕಲಾ ವೃತ್ತಿಯಲ್ಲಿ ತೊಡಗಿಕೊಂಡಿರುತ್ತೇನೆ. ಶೀಘ್ರದಲ್ಲೇ ಖಂಡಿತವಾಗಿ ನಟನೆಗೆ ಮರಳುತ್ತೇನೆ ಎಂದು ಮೇಘನಾ ಹೇಳಿಕೊಂಡಿದ್ದಾರೆ.

    ಸದ್ಯ ಮೇಘನಾ ಸರ್ಜಾ ಮತ್ತು ಅವರ ಮಗನಿಗೂ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲು ಮೇಘಾನ ಅವರ ತಾಯಿ ಪ್ರಮಿಳಾ ಜೋಷಾಯ್ ಮತ್ತು ತಂದೆ ಸುಂದರ್ ರಾಜ್ ಕೊರೊನಾ ಸೋಂಕು ತಗುಲಿತ್ತು. ಜೋಕುಮಾರಸ್ವಾಮಿ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸುವ ಮೂಲಕ ಮೇಘನಾ ರಾಜ್ ಬಣ್ಣದ ಲೋಕ ಪ್ರವೇಶಿಸಿದ್ದರು.

  • ನಟಿ ಪ್ರಮಿಳಾ ಜೋಷಾಯ್‍ಗೆ ಕೊರೊನಾ ಪಾಸಿಟಿವ್ – ಆಸ್ಪತ್ರೆಗೆ ದಾಖಲು

    ನಟಿ ಪ್ರಮಿಳಾ ಜೋಷಾಯ್‍ಗೆ ಕೊರೊನಾ ಪಾಸಿಟಿವ್ – ಆಸ್ಪತ್ರೆಗೆ ದಾಖಲು

    ಬೆಂಗಳೂರು: ಹಿರಿಯ ನಟಿ ಪ್ರಮಿಳಾ ಜೋಷಾಯ್ ಕೊರೊನಾ ಸೋಂಕು ತಗುಲಿದ್ದು, ಭಾನುವಾರ ಜಯನಗರದ ಎಕ್ಸೆಲ್ ಆಸ್ಪತ್ರೆಗೆ ತಡರಾತ್ರಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಕೋವಿಡ್-19 ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ವರದಿಯಲ್ಲಿ ಸೋಂಕು ತಗುಲಿರೋದು ದೃಢವಾಗಿದೆ. ಇನ್ನು ಪತಿ ಸುಂದರ್ ರಾಜ್, ಪುತ್ರಿ ಮೇಘನಾ ರಾಜ್ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ತಿಳಿದು ಬಂದಿದೆ.

    ಸದ್ಯ ಪ್ರಮಿಳಾ ಜೋಷಾಯ್ ಆರೋಗ್ಯವಾಗಿದ್ದು, ವೈದ್ಯರ ಸಲಹೆ ಮೇರೆಗೆ ಐಸೋಲೇಷನ್ ನಲ್ಲಿದ್ದಾರೆ. ಪ್ರಮೀಳಾ ಜೋಷಾಯ್ ಹಿರಿಯ ನಟ ಸುಂದರ್ ರಾಜ್ ಅವರ ಪತ್ನಿಯಾಗಿದ್ದು, ಕೆಲ ದಿನಗಳ ಹಿಂದೆ ಮುದ್ದಾದ ಮೊಮ್ಮಗು ಬರಮಾಡಿಕೊಂಡಿದ್ದು, ಜೂನಿಯರ್ ಚಿರು ತೊಟ್ಟಿಲು ಶಾಸ್ತ್ರ ಸಹ ನಡೆದಿತ್ತು.

  • ಮೂರು ತಿಂಗಳ ನಂತರ ಅದ್ಧೂರಿ ನಾಮಕರಣ – ಜೂನಿಯರ್ ಚಿರುಗೆ ಎರಡು ನಿಕ್ ನೇಮ್

    ಮೂರು ತಿಂಗಳ ನಂತರ ಅದ್ಧೂರಿ ನಾಮಕರಣ – ಜೂನಿಯರ್ ಚಿರುಗೆ ಎರಡು ನಿಕ್ ನೇಮ್

    ಬೆಂಗಳೂರು: ನಟಿ ಮೇಘನಾ ರಾಜ್ ಸರ್ಜಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮೂರು ತಿಂಗಳ ನಂತರ ಅದ್ಧೂರಿಯಾಗಿ ನಾಮಕರಣ ಮಾಡಲಾಗುವುದು ಎಂದು ಮೇಘನಾ ತಂದೆ ಸುಂದರ್ ರಾಜ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸುಂದರ್ ರಾಜ್, ತಿರುಪತಿ ತಿಮ್ಮಪ್ಪನ ಹರಕೆಯಿಂದ ನನ್ನ ಮೊಮ್ಮಗ ಹುಟ್ಟಿದ್ದಾನೆ. ಕನ್ನಡದ ನೆಲದಲ್ಲಿ ದಸರಾ ಹಬ್ಬದ ವೇಳೆ ಮೊಮ್ಮಗು ಹುಟ್ಟಿರೋದು ಶುಭ ಸೂಚಕ. ನವೆಂಬರ್ 1 ರಂದು ಮೇಘನಾ ರಾಜ್ ಎಲ್ಲರ ಜೊತೆ ಮಾತನಾಡುತ್ತಾರೆ. ಕೊರೊನಾ ಕಾಲದಿಂದಾಗಿ ಮೇಘನಾ ರಾಜ್ ಹೊರಗೆ ಬರುವಂತಿಲ್ಲ ಎಂದರು. ಇದನ್ನೂ ಓದಿ: ಜೂನಿಯರ್ ಚಿರುಗೆ ಬೆಳ್ಳಿ ತೊಟ್ಟಿಲು, ಚಿನ್ನದ ಬಟ್ಟಲು ಖರೀದಿಸಿದ ಧ್ರುವ ಸರ್ಜಾ

    ಅರ್ಜುನ್ ಸರ್ಜಾ ಫೋನ್ ಮಾಡಿ ಮಗುವನ್ನ ಬರಮಾಡಿಕೊಳ್ಳುವದರ ಕುರಿತು ಮಾತಾನಾಡಿದ್ರು. ಅರ್ಜುನ್ ಸರ್ಜಾ ಜೆಂಟಲ್‍ಮ್ಯಾನ್, ಧೃವ ಸರ್ಜಾ ಸೂಪರ್ ಶೋ ಮ್ಯಾನ್. ಮಗು ಹುಟ್ಟಿದ ತಕ್ಷಣ ಎಲ್ಲರಿಗೂ ತೋರಿಸಿ ಸಂಭ್ರಮಿಸಿದರು. ಆದ್ರೆ ತಂದೆ ಮಗಳನ್ನು ನೋಡಿಕೊಳ್ಳುವವನು ವಾಚ್ ಮ್ಯಾನ್. ಆ ಕೆಲಸವನ್ನ ಕೊನೆಯವರೆಗೂ ನಾನು ನಿರ್ವಹಿಸುತ್ತೇನೆ. ಚಿರಂಜೀವಿ ಸರ್ಜಾ ಇಲ್ಲ ಅನ್ನೋದನ್ನ ನಂಬಲು ಆಗುತ್ತಿಲ್ಲ. ಮದುವೆಯಾದ ಎರಡೇ ವರ್ಷದಲ್ಲಿ ಚಿರಂಜೀವಿ ನಮ್ಮನ್ನ ಅಗಲಿ ಹೋದ ಎಂದು ಹೇಳುತ್ತಾ ಭಾವುಕರಾದರು. ಇದನ್ನೂ ಓದಿ: ಮೇಘನಾ, ಜ್ಯೂನಿಯರ್ ಚಿರು ನೋಡಲು ಆಸ್ಪತ್ರೆಗೆ ಬಂದ ಮಲಯಾಳಂ ಸ್ಟಾರ್ ಜೋಡಿ

    ಮಗಳನ್ನ ಕೊಟ್ಟು ಮದುವೆ ಮಾಡಿ ಜವಾಬ್ದಾರಿ ಮುಗಿತು ಅಂದುಕೊಳ್ಳವಾಗಲೇ ಚಿರು ಹೋಗಿ ಬಿಟ್ಟ. ಮದ್ವೆ ಆಗದೆ ಇದ್ರೆ ಯೋಚನೆ ಇರ್ತಾಯಿರಲಿಲ್ಲ. ಈ ರೀತಿಯಾಗಿ ಮಗಳನ್ನು ನೋಡೋಕೆ ಕಷ್ಟ ಆಗುತ್ತದೆ. ಆ ಕುಟುಂಬಕ್ಕೆ ಮಗನ ಕಳೆದುಕೊಂಡ ನೋವಿದೆ, ನಮಗೆ ಅಳಿಯನ ಕಳೆದುಕೊಂಡ ದುಃಖವಿದೆ. ದೇವರು ಸುಂದರವಾದ ಮಗಳನ್ನ ಕೊಟ್ಟ. ಆದ್ರೆ ಆಕೆಗೆ ಸುಂದರವಾದ ಜೀವನ ಕೊಡಲಿಲ್ಲ. ಮಗು ಬೆಳೆಯುವವರೆಗೂ ನನಗೆ ಆಯಸ್ಸು ಕೊಡು ಅಂತ ಕೇಳುತ್ತೇನೆ ಎಂದು ದೇವರಲ್ಲಿ ಪ್ರಾರ್ಥಿಸಿದರು. ಇದನ್ನೂ ಓದಿ: ಥೇಟ್ ಚಿರು ಮೂಗಿನಂತೆ ಮಗುವಿನ ಮೂಗಿದೆ: ಐಶ್ವರ್ಯಾ ಸರ್ಜಾ

    ಎರಡು ನಿಕ್‍ನೇಮ್: ಮಗುವಿಗೇ ಮೇಘನಾಳೇ ತಂದೆ-ತಾಯಿಯಾಗಿದ್ದಾಳೆ. ನಾನು ಪ್ರೀತಿಯಿಂದ ಮಗುವಿಗೆ ಚಿಂಟೂ ಎಂದು ಕರೆಯಬೇಕೆಂದುಕೊಂಡಿದ್ದೇನೆ. ಚಿಂಟೂ ಅಂದ್ರೆ ಚಿಂತೆಯನ್ನ ದೂರ ಮಾಡಲಿ ಅನ್ನೋದಕ್ಕೆ ಆ ಹೆಸರು ಆಯ್ಕೆ ಮಾಡಿದ್ದೇನೆ. ಆದ್ರೆ ಮೇಘನಾ ಮಗುವನ್ನ ಪಾಪು ಎಂದು ಕರೆಯುತ್ತಾಳೆ ಎಂದು ಹೇಳಿದರು. ಇದನ್ನೂ ಓದಿ: ಮೇಘನಾ ಆಸೆಯಂತೆ ಹುಟ್ಟಿದ ತಕ್ಷಣ ಚಿರುಗೆ ಮಗು ತೋರ್ಸಿದ್ದೇವೆ: ಲಕ್ಷ್ಮಿ ಅಮ್ಮ

    ಚಿರು ಪರವಾಗಿ ಮನೆಗೆ ಬಂದ ಅವನ ಮಗನನ್ನ ಗೋದೂಳಿ ಮುಹೂರ್ತದಲ್ಲಿ ಮನೆಗೆ ಕರೆದುಕೊಂಡು ಬಂದಿದ್ದೇವೆ. ನಾವು ಈ ಮಹೂರ್ತವನ್ನ ನೋಡಿ ಮಗುವನ್ನು ತೋರಿಸಿಬೇಕು ಅಂದು ಕೊಂಡಿದ್ದೇವೆ. ಮೊದಲಿಗೆ ಮಗುವನ್ನ ಪತ್ನಿ ಪರಿಮಳ ಅವರು ನೋಡಿದ್ರು. ಆ ನಂತರ ನಮಗೆ ಮಗು ತೋರಿಸಲಾಯ್ತು. ಆಸ್ಪತ್ರೆಗೆ ಬಂದ ವೀರಾಂಜನೇಯ ಧ್ರುವ ಸರ್ಜಾ, ಸಂಜೀವಿನಿ ಬೆಟ್ಟ ಹಿಡಿದಂತೆ ಮಗು ಹಿಡಿದು ಎಲ್ಲರಿಗೂ ತೋರಿಸಿದನು. ಇದನ್ನೂ ಓದಿ: ಚಿರು ಮಗನನ್ನ 20 ವರ್ಷದ ನಂತ್ರ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ

    ಈ ಮಗು ಸರ್ಜಾ ಕುಟುಂಬದ ಕುಡಿ. ಚಿರು ಅನುಪಸ್ಥಿತಿಯಲ್ಲಿಯೇ ಮಗುವನ್ನ ನೋಡಿಕೊಳ್ಳುವುದು ತಾಯಿಯ ಕರ್ತವ್ಯ. ಈ ಸ್ಥಿತಿಯಲ್ಲಿ ಮಗಳನ್ನ ಆರೈಕೆ ಮಾಡೋದು ನಮ್ಮ ಕರ್ತವ್ಯ. ಹಾಗಾಗಿ ಜೂನಿಯರ್ ಚಿರು ನಮ್ಮ ಮನೆಯಲ್ಲಿಯೇ ಬೆಳೆಯಲಿದ್ದಾನೆ. ಮಗು ಇಲ್ಲಿಯೂ ಇರುತ್ತೆ, ಅಲ್ಲಿಯೂ ಇರಬೇಕು. ಎರಡೂ ಕುಟುಂಬಗಳ ಆರೈಕೆಯಲ್ಲಿ ಮಗು ಬೆಳೆಯಲಿದೆ. ಮಗುವಿನ ಮೂಗು ತುಂಬಾನೇ ಚೆನ್ನಾಗಿದೆ. ಅದುವೇ ಮಗುವಿನ ಟ್ರೇಡ್ ಮಾರ್ಕ್ ಎಂದರು.