Tag: Megan Hospital Shivamogga

  • ಅಮಾನವೀಯ ದೃಶ್ಯದ ವಿಡಿಯೋ ಮಾಡಿದ್ದು ಯಾಕೆ? ನೋವಿನ ಕಥೆಯನ್ನು ಮುರಳಿ ನಾಯಕ್ ಹೇಳ್ತಾರೆ ಓದಿ

    ಅಮಾನವೀಯ ದೃಶ್ಯದ ವಿಡಿಯೋ ಮಾಡಿದ್ದು ಯಾಕೆ? ನೋವಿನ ಕಥೆಯನ್ನು ಮುರಳಿ ನಾಯಕ್ ಹೇಳ್ತಾರೆ ಓದಿ

    ಬೆಂಗಳೂರು: ರೋಗಿಗಳನ್ನು ಆಸ್ಪತ್ರೆ ಹೇಗೆ ನಿರ್ಲಕ್ಷ್ಯದಿಂದ ನೋಡುತ್ತದೆ ಎನ್ನುವುದನ್ನು ತಿಳಿಸುವುದಕ್ಕಾಗಿ ಈ ವಿಡಿಯೋವನ್ನು ನಾನು ಸೆರೆ ಹಿಡಿದಿದ್ದೇನೆ ಹೊರತು ಬೇರೆ ಯಾವುದೇ ಉದ್ದೇಶ ಇದರಲ್ಲಿ ಇಲ್ಲ ಎಂದು ಮುರಳಿ ನಾಯಕ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು ಈ ಘಟನೆ ಹೇಗಾಯ್ತು ಎನ್ನುವುದನ್ನು ವಿವರಿಸಿದ್ದು ಹೀಗೆ

    ಮೇ 31 ರಂದು ಮಧ್ಯಾಹ್ನ ನಾನು ನಮ್ಮ ಸಂಬಂಧಿಯನ್ನು ನೋಡಲು ಆಸ್ಪತ್ರೆಗೆ ಹೋಗಿದ್ದೆ. ಈ ವೇಳೆ ಮಹಿಳೆಯೊಬ್ಬರು ಧರಧರನೇ ವ್ಯಕ್ತಿಯೊಬ್ಬರನ್ನು ಎಳೆದುಕೊಂಡು ಬರುವುದನ್ನು ನಾನು ನೋಡಿದೆ.

    ಇದನ್ನು ನೋಡಿ ನಾನು ಶಾಕ್ ಆದೆ. ನಾನು ನೋಡುವವರೆಗೆ ಆಗಲೇ ಅವರು ಬಹಳ ದೂರದವರೆಗೆ ಎಳೆದುಕೊಂಡು ಬಂದಿದ್ದರು. ಈ ದೃಶ್ಯವನ್ನು ನಾನು ನೋಡಿದ ಕೂಡಲೇ ಅವರ ಬಳಿ ಹೋಗಿ ಯಾಕೆ ಈ ರೀತಿ ಎಳೆದುಕೊಂಡು ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಇದಕ್ಕೆ ಅವರು, ಪತಿಗೆ ಎಕ್ಸ್ ರೇ ಮಾಡಿಸಬೇಕು. ಡಾಕ್ಟರ್ ಕರೆದುಕೊಂಡು ಬನ್ನಿ ಎಂದು ಹೇಳಿದ್ದಾರೆ. ಆದರೆ ಪತಿಯನ್ನು ಕರೆದುಕೊಂಡು ಹೋಗಲು ವೀಲ್ ಚೇರ್ ಕೊಡಿ ಎಂದು ಕೇಳಿದ್ದಕ್ಕೆ ಯಾರು ಕೊಟ್ಟಿಲ್ಲ. ಸಾಕಷ್ಟು ಬಾರಿ ಕೇಳಿದರೂ ವೀಲ್ ಚೇರ್ ಇಲ್ಲ ಎಂದೇ ಹೇಳಿದರು. ಹೀಗಾಗಿ ಅನಿವಾರ್ಯವಾಗಿ ಎಳೆದುಕೊಂಡು ಹೋಗುತ್ತಿದ್ದೇನೆ ಎಂದು ತಿಳಿಸಿದರು.

    ಈ ಮಾತನ್ನು ಕೇಳಿ ನನಗೆ ಶಾಕ್ ಆಯ್ತು. ಈ ಆಸ್ಪತ್ರೆಯಲ್ಲಿ ವ್ಯವಸ್ಥೆ ಇಷ್ಟೊಂದು ಹಾಳಾಗಿದ್ಯಾ ಎಂದು ತಿಳಿದು ನಾನು ವಿಡಿಯೋ ಮಾಡಿದೆ. ಈ ವೇಳೆಗೆ ಅಲ್ಲಿದ್ದ ಜನರು ನನ್ನ ಜೊತೆಗೆ ಸೇರಿ ಧೈರ್ಯ ತುಂಬಿದರು.

    ಈ ವಿಚಾರವನ್ನು ನಾನು ನರ್ಸ್ ಜೊತೆ ತಿಳಿಸಿದಾಗ ಅವರು ನಮ್ಮ ಜೊತೆ ಗಲಾಟೆ ಮಾಡಿದರು. ನಂತರ ಎಂಡಿ ಸತ್ಯನಾರಾಯಣ ಅವರ ಬಳಿ ಈ ವಿಡಿಯೋವನ್ನು ತೋರಿಸಿದಾಗ ಕೂಡಲೇ ಅವರು ಫೋನ್ ಮಾಡಿ ನರ್ಸ್ ಗಳಿಗೆ ವಿಷಯ ಮುಟ್ಟಿಸಿದರು. ಈ ವೇಳೆ ನನ್ನ ಜೊತೆ ಬಂದಿದ್ದ ಜನರು ವೀಲ್ ಚೇರ್ ಗಳು ಎಲ್ಲ ಎಮರ್ಜೆನ್ಸಿಗೆ ಬಳಕೆ ಆಗುತ್ತಿದೆ. ನಮ್ಮ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸಿಗುವುದಿಲ್ಲ ಎಂದು ತಿಳಿಸಿದರು. ಅಷ್ಟೇ ಅಲ್ಲದೇ ಆಸ್ಪತ್ರೆಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಹೇಳಿಕೊಂಡರು.

    ಈ ವೇಳೆ ಪಬ್ಲಿಕ್ ಟಿವಿ ನೀವು ಯಾವುದೋ ದುರುದ್ದೇಶವನ್ನು ಇಟ್ಟಕೊಂಡು ವಿಡಿಯೋ ಮಾಡಿದ್ದೀರಿ ಎನ್ನುವ ಸುದ್ದಿ ಬಂದಿದೆ ಎಂದು ಪ್ರಶ್ನಿಸಿದ್ದಕ್ಕೆ, ವ್ಯವಸ್ಥೆ ಎಷ್ಟು ಹಾಳಾಗಿದೆ ಎನ್ನುವುದನ್ನು ತೋರಿಸಲು ಈ ವಿಡಿಯೋ ಮಾಡಿದ್ದೇನೆ. ನಾನು ನೋಡುವ ಮೊದಲೇ ಅವರು ವಾರ್ಡ್ ರೂಮಿನಿಂದ ಪತಿಯನ್ನು ಎಳೆದುಕೊಂಡೇ ಬಂದಿದ್ದರು. ಎಕ್ಸ್ ರೇ ಮಾಡಿಸಲು ವೀಲ್  ಚೇರ್ ಕೊಡಿ ಎಂದು ಅವರು ಸಾಕಷ್ಟು ಬಾರಿ ಮನವಿ ಮಾಡಿದರೂ ನೀಡದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳಿಗೆ ತೋರಿಸಲು ಈ ವಿಡಿಯೋ ಮಾಡಿದ್ದೇನೆ ಹೊರತು ಬೇರೆ ಯಾವುದೇ ಉದ್ದೇಶ ಇದರಲ್ಲಿ ಇಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.

    ಇದನ್ನೂ ಓದಿ: ಅಮಾನವೀಯ ಘಟನೆ: ರೋಗಿಯ ಪತ್ನಿಯನ್ನೇ ಆರೋಪಿಯನ್ನಾಗಿಸಿದ ಮೆಗ್ಗಾನ್ ಆಸ್ಪತ್ರೆ

    https://www.youtube.com/watch?v=zvOMuW_nmN8

    https://www.youtube.com/watch?v=FIfROhD1LVc

    https://www.youtube.com/watch?v=u4vG0bvZ8Eg

  • ಮೆಗ್ಗಾನ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ: ಪ್ರಶ್ನೆ ಕೇಳಿದ್ದಕ್ಕೆ ಗರಂ ಆಗಿ ಉಡಾಫೆಯ ಉತ್ತರ ನೀಡಿದ ಸಿಎಂ

    ಮೆಗ್ಗಾನ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ: ಪ್ರಶ್ನೆ ಕೇಳಿದ್ದಕ್ಕೆ ಗರಂ ಆಗಿ ಉಡಾಫೆಯ ಉತ್ತರ ನೀಡಿದ ಸಿಎಂ

    ಬೆಂಗಳೂರು: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಯಲ್ಲಿನ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಉಡಾಫೆಯ ಉತ್ತರ ನೀಡಿದ್ದಾರೆ.

    ಮಾಧ್ಯಮಗಳು ವಿಧಾನಸೌಧದಲ್ಲಿ ಪ್ರತಿಕ್ರಿಯೆ ಕೇಳಿದ್ದಕ್ಕೆ, ಕೋಪದಿಂದ “ಏಯ್ ಬಿಡ್ರಿ, ಯಾವ ಮೆಗ್ಗಾನ್ ಇಲ್ಲ” ಎಂದು ಸಿಟ್ಟಿನಿಂದ ಲೋಗೋವನ್ನು ತಳ್ಳಿಕೊಂಡೇ ಕಚೇರಿಯ ಒಳಗಡೆ ಹೋಗಿದ್ದಾರೆ.

    ಏನಿದು ಪ್ರಕರಣ?
    ಮೆಗ್ಗಾನ್ ಆಸ್ಪತ್ರೆಯ ಕಾರಿಡಾರ್‍ನಲ್ಲಿ ವಯೋವೃದ್ಧರೊಬ್ಬರನ್ನು ಅವರ ಪತ್ನಿ ನೆಲದ ಮೇಲೆ ಮಲಗಿಸಿ ಪ್ರಾಣಿಯಂತೆ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಗುರುವಾರ ಮಧ್ಯಾಹ್ನ ಕಂಡು ಬಂದಿತ್ತು.

    ಎರಡನೇ ಮಳಿಗೆಯಿಂದ ಈ ವೃದ್ಧರನ್ನು ಕೆಳಗೆ ಕರೆದುಕೊಂಡು ಹೋಗಲು ಗಾಲಿ ಕುರ್ಚಿ ಕೇಳಿದರೂ ಆಸ್ಪತ್ರೆ ಸಿಬ್ಬಂದಿ ಕೊಟ್ಟಿರಲಿಲ್ಲ. ಇವತ್ತೂ ಎಕ್ಸರೇ ತೆಗೆಸದಿದ್ದರೆ ತೊಂದರೆ ಆದೀತು ಎಂದು ಫಾಮಿದಾ ಗಂಡನನ್ನು ಎಳೆದುಕೊಂಡು ಎಕ್ಸರೇ ತೆಗೆಸಲು ಹೋಗಿದ್ದರು.

    ಈ ಬಗ್ಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದು ರಾಜ್ಯದ ಜನತೆಯ ಕ್ಷಮೆ ಕೇಳಿದ್ದಾರೆ. ನಮಗೆ ಈ ಸ್ಥಾನದಲ್ಲಿ ಕುಳಿತುಕೊಳ್ಳೊದಕ್ಕೂ ನಾಚಿಕ ಆಗುತ್ತದೆ. ನಾನು ಈಗಾಗಲೇ ಶಿವಮೊಗ್ಗ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಆಸ್ಪತ್ರೆಗೆ ಭೇಟಿ ಮಾಡಲು ತಿಳಿಸಿದ್ದೇನೆ. ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಮಾತನಾಡಿ ಕೂಡಲೇ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇನೆ ಅಂದ್ರು.

    ಇದನ್ನೂ ಓದಿ: ವ್ಹೀಲ್‍ಚೇರ್ ಕೊಡದ ಆಸ್ಪತ್ರೆ ಸಿಬ್ಬಂದಿ- ಪತಿಯನ್ನು ನೆಲದ ಮೇಲೆಯೇ ಎಳೆದುಕೊಂಡು ಹೋದ ಪತ್ನಿ

    https://www.youtube.com/watch?v=Yce9ghRNKJ4