Tag: medical

  • ಇಂದು ದೇಶದಾದ್ಯಂತ ನೀಟ್ ಪರೀಕ್ಷೆ

    ಇಂದು ದೇಶದಾದ್ಯಂತ ನೀಟ್ ಪರೀಕ್ಷೆ

    ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳ ಹಂಚಿಕೆಗೆ ನೀಟ್ ಪರೀಕ್ಷೆ ಕಡ್ಡಾಯವಾದ ಬಳಿಕ ಇವತ್ತು ದೇಶದಾದ್ಯಂತ ನೀಟ್ ಪರೀಕ್ಷೆ ನಡೆಯುತ್ತಿದೆ.

    ಸಿಬಿಎಸ್‍ಇ ರಾಷ್ಟ್ರಾದ್ಯಂತ ಏಕರೂಪ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ನಡೆಸುತ್ತಿದೆ. 11 ಲಕ್ಷದ 35 ಸಾವಿರದ 104 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. 103 ನಗರಗಳ 2,200 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ, ಮೈಸೂರು, ಕಲಬುರ್ಗಿ, ಬೆಳಗಾವಿಯಲ್ಲಿ ಪರೀಕ್ಷೆಗಳು ನಡೆಯಲಿವೆ.

    ಪರೀಕ್ಷೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಸೂಕ್ತ ದಾಖಲಾತಿ ಸಲ್ಲಿಸದ ವಿದ್ಯಾರ್ಥಿಗಳು ಇಂದಿನ ಪರೀಕ್ಷೆಗೆ ಪ್ರವೇಶ ಪತ್ರದ ಜೊತೆ ಆಧಾರ್ ಕಾರ್ಡ್ ಕಡ್ಡಾಯವಾಗಿ ತೆಗದುಕೊಂಡು ಹೋಗಬೇಕು. ಆಧಾರ್ ಕಾರ್ಡ್ ಇಲ್ಲದವರು ಸರ್ಕಾರದ ಯಾವುದಾದರೂ ಗುರುತಿನ ಪತ್ರವನ್ನ ತೆಗೆದುಕೊಂಡು ಹೋಗೋದು ಕಡ್ಡಾಯ. ಪರೀಕ್ಷೆಗಳ ಬೆಳಗ್ಗೆ 10.30ಕ್ಕೆ ಪ್ರಾರಂಭವಾಗಿದೆ. ಅಭ್ಯರ್ಥಿಗಳು 9.30ರ ಒಳಗೆ ಪರೀಕ್ಷಾ ಕೇಂದ್ರದಲ್ಲಿ ಇರೋದು ಕಡ್ಡಾಯ. ಒಂದು ನಿಮಿಷ ತಡ ಆದ್ರು ಪರೀಕ್ಷಾ ಕೇಂದ್ರಕ್ಕೆ ನೋ ಎಂಟ್ರಿ.

    ಪರೀಕ್ಷೆಯನ್ನ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಬೋರ್ಡ್ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಹಾಗೂ ಇನ್ನಿತರ ವಸ್ತುಗಳ ನಿಷೇಧ ಮಾಡಿದ್ದು ಅವುಗಳು ಹೀಗಿವೆ:
    > ವಿದ್ಯಾರ್ಥಿಗಳು ಜುಬ್ಬಾ-ಪೈಜಾಮ, ಶೂ, ಫುಲ್ ತೋಳಿನ ಶರ್ಟ್, ವಾಚ್ ಧರಿಸುವಂತಿಲ್ಲ. ಬದಲಿಗೆ ಜೀನ್ಸ್ ಪ್ಯಾಂಟ್, ಲೈಟ್ ಕಲರ್ ಹಾಫ್ ಶರ್ಟ್, ಚಪ್ಪಲಿ ಧರಿಸಬೇಕು.
    > ವಿದ್ಯಾರ್ಥಿನಿಯರು ಹೀಲ್ಡ್ ಶೂ – ಸಾಕ್ಸ್, ಕತ್ತಿಗೆ ಸರ, ವಾಚ್ ,ದೊಡ್ಡ ಗುಂಡಿಗಳ ಡ್ರೆಸ್ ಹಾಕುವಂತಿಲ್ಲ. ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷೆ ಕೇಂದ್ರಕ್ಕೆ ತರುವಂತಿಲ್ಲ.

  • ತಾಯಿ, ತಂಗಿಯ ಜವಾಬ್ದಾರಿ ಹೊತ್ತ ಕೊಪ್ಪಳದ ಅಂಗವಿಕಲ ಯುವಕನಿಗೆ ಬೇಕಿದೆ ಬೆಳಕು

    ತಾಯಿ, ತಂಗಿಯ ಜವಾಬ್ದಾರಿ ಹೊತ್ತ ಕೊಪ್ಪಳದ ಅಂಗವಿಕಲ ಯುವಕನಿಗೆ ಬೇಕಿದೆ ಬೆಳಕು

    ಕೊಪ್ಪಳ: ಅದು ಅತ್ಯಂತ ಕಡು ಬಡತನದ ಕುಟುಂಬ. ಆ ಕುಟುಂಬದ ಯಜಮಾನ ಮಗ ಅಂಗವಿಕಲ ಹುಟ್ಟಿದ್ದಾನೆಂಬ ಕಾರಣಕ್ಕೆ 17 ವರ್ಷಗಳ ಹಿಂದೆಯೇ ಮನೆ ಬಿಟ್ಟು ಪತ್ನಿ ಹಾಗೂ ಮಗನನ್ನು ಹೊರ ಹಾಕಿ ಬೇರೊಂದು ಮದುವೆಯಾಗಿದ್ದಾನೆ. ಅಂಗವಿಕಲ ಮಗನನ್ನೆ ತಂದು ಸಾಕಿದ ತಾಯಿ ಈಗ ವಯೋವೃದ್ಧೆಯಾಗಿದ್ದಾರೆ. ಇನ್ನು ಈಗ ಆ ಅಂಗವಿಕಲನೇ ತಾಯಿ ಹಾಗೂ ತನ್ನ ತಂಗಿಯನ್ನು ಚಿಕ್ಕ ಪಾನ್ ಶಾಪ್ ಒಂದನ್ನು ಇಟ್ಟುಕೊಂಡು ಸಂಸಾರದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆದ್ರೆ ತಾಯಿ ಹಾಗೂ ತಂಗಿಯನ್ನು ಸಾಕ್ತಿರೋ ಇವರಿಗೆ ಅಂಗಡಿ ಬಾಡಿಗೆ ಹಾಗೂ ಮನೆ ಬಾಡಿಗೆ ಕಟ್ಟಲಾಗುತ್ತಿಲ್ಲ.

    ಹೌದು. ಇದು ಕೊಪ್ಪಳ ತಾಲೂಕಿನ ಹುಲಗಿಯಲ್ಲಿ ಕಳೆದ 25 ವರ್ಷಗಳ ಹಿಂದೆ ಗಂಗಾವತಿ ಮೂಲದ ಕೃಷ್ಣಾಚಾರಿ ಎಂಬಾತನೊಂದಿಗೆ ಹೊಸಪೇಟೆ ಮೂಲದ ರುಕ್ಮಿಣಿಗೆ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದೆ. ಆರಂಭಿಕ ಹಂತದಲ್ಲಿ ಇವರ ಸಂಸಾರ ಕೂಡಾ ಚೆನ್ನಾಗಿಯೇ ನಡೆಯುತ್ತಿತ್ತು. ಇವರ ಸಂಸಾರಕ್ಕೆ ಸಾಕ್ಷಿ ಎಂಬಂತೆ 3 ಮಕ್ಕಳು ಕೂಡಾ ಜನಿಸಿದರು. ಆದರೆ ಮೊದಲ ಮಗ ಉಮೇಶ್ ಅಂಗವಿಕಲನಾದ ಕಾರಣ ಮನೆಯಲ್ಲಿ ಪ್ರತಿ ದಿನ ಕಿರುಕುಳ ನೀಡಿ ರುಕ್ಮಿಣಿಯನ್ನು ಅಂಗವಿಕಲ ಮಗನ ಸಮೇತ ಕಳೆದ 17 ವಷಗಳ ಹಿಂದೆಯೇ ಕೃಷ್ಣಾಚಾರಿ ಹೊರ ಹಾಕಿದ್ದಾನೆ. ಇನ್ನಿಬ್ಬರು ಮಕ್ಕಳಾದ ರಾಜೇಶ್ ಹಾಗೂ ಗಾಯತ್ರಿಯನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ.

    ಹೋಟೆಲ್‍ಗಳಲ್ಲಿ ಕೆಲಸ ಮಾಡುತ್ತಾ ಅಂಗವಿಕಲ ಮಗನನ್ನೆ ಸಾಕಿದಳು ಈ ಮಹಾತಾಯಿ. ಕಳೆದ ನಾಲ್ಕು ವರ್ಷಗಳ ಹಿಂದೆ ಇನ್ನೊಂದು ಮದೆವೆಯಾದ ಕೃಷ್ಣಾಚಾರಿ ಮಗಳಿಗೂ ಕೂಡಾ ಕಿರುಕುಳ ನೀಡಲು ಆರಂಭಿಸಿದ್ದಾನೆ. ಸದ್ಯ ತಂದೆಯ ಕಿರುಕುಳದಿಂದ ಬೇಸತ್ತು ಆಕೆ ಕೂಡಾ ಕಳೆದ 3 ವರ್ಷಗಳ ಹಿಂದೆ ಮನೆ ಬಿಟ್ಟು ಓಡಿ ಬಂದು ತಾಯಿ ಬಳಿ ಸೇರಿದ್ದಾಳೆ. ಆದ್ರೆ ಇನ್ನೊಬ್ಬ ಮಗ ರಾಜೇಶ್ ಮಾತ್ರ ತಂದೆಯೊಂದಿಗೆ ಇದ್ದಾನೆ. ತಾಯಿಗೆ ಪೋನ್ ಕರೆಯೂ ಆತ ಮಾಡಲ್ಲವಂತೆ.

    ವಿಕಲಚೇತನ ಮಗ ಉಮೇಶ್ ಹಾಗೂ ಮಗಳು ಗಾಯತ್ರಿಯೊಂದಿಗೆ ಕೊಪ್ಪಳ ತಾಲೂಕಿನ ಹುಲಗಿಯಲ್ಲಿ ರುಕ್ಮಿಣಿ ವಾಸವಾಗಿದ್ದಾರೆ. ಉಮೇಶನಿಗೆ ಹುಲಗಿಯಲ್ಲಿಯೇ ಪಾನ್ ಶಾಪ್ ಹಾಕಿ ಕೊಡಲಾಗಿದ್ದು, ತಾಯಿಗೆ ವಯಸ್ಸಾದ ಕಾರಣ ಅವರೇ ಸಂಸಾರದ ನೇಗಿಲನ್ನು ಹೊತ್ತಿದ್ದಾರೆ. ಇನ್ನು ತಂಗಿ ಗಾಯತ್ರಿ ಕೂಡಾ ದ್ವಿತಿಯ ವರ್ಷದ ಪಿಯುಸಿಯನ್ನು ಓದುತ್ತಿದ್ದು ಆಕೆಯ ಓದಿನ ಜವಾಬ್ದಾರಿ ಕೂಡಾ ಇವರ ಹೆಗಲ ಮೇಲಿದೆ.

    ಸದ್ಯ ಪ್ರತಿ ತಿಂಗಳು ಪಾನ್ ಶಾಪ್‍ಗೆ 1500 ರೂಪಾಯಿ ಬಾಡಿಗೆ ಹಾಗೂ ಮನೆಗೆ 1500 ಬಾಡಿಗೆ ಕಟ್ಟುವುದು ಇವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇವರು ಈಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಹೋಗಿದ್ದಾರೆ. ಬೆಳಕು ಕಾರ್ಯಕ್ರಮದ ಮೂಲಕ ತನಗೆ ಸ್ವಂತ ಪಾನ್ ಶಾಪ್ ಒಂದನ್ನು ಹಾಕಿಕೊಟ್ಟರೆ ಪಾನ್ ಶಾಪ್ ಅಂಗಡಿಯ ಬಾಡಿಗೆ ಕಟ್ಟೋದು ತಪ್ಪುತ್ತೆ. ಹಾಗೆಯೇ ತಂಗಿಯ ಓದಿಗೆ ಸ್ವಲ್ಪ ಸಹಾಯ ಮಾಡಿ ಎಂದು ಅಂಗಲಾಚುತ್ತಿದ್ದಾರೆ.

    ಸದ್ಯ ತಾಯಿಗೆ ಕೂಡಾ ವಯಸ್ಸಾಗಿದ್ದು ಸಂಪೂರ್ಣವಾಗಿ ತಾಯಿ ಮತ್ತು ತಂಗಿಯನ್ನೇ ಅವಲಂಬಿಸಿ ಬದುಕುತ್ತಿರುವ ಉಮೇಶ್ ಕುಟುಂಬಕ್ಕೆ ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಕೇಳುತ್ತಿದ್ದಾರೆ.

    https://www.youtube.com/watch?v=ltAvEyRpenQ

  • 17 ವರ್ಷಗಳಿಂದ ಬಿಸ್ಕೆಟ್, ಗಂಜಿ ತಿನ್ನೋ ಯುವತಿಯ ಚಿಕಿತ್ಸೆಗೆ ಬೇಕಿದೆ ಸಹಾಯ

    17 ವರ್ಷಗಳಿಂದ ಬಿಸ್ಕೆಟ್, ಗಂಜಿ ತಿನ್ನೋ ಯುವತಿಯ ಚಿಕಿತ್ಸೆಗೆ ಬೇಕಿದೆ ಸಹಾಯ

    ಧಾರವಾಡ: ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ನಿವಾಸಿ ಸಿದ್ದವ್ವ ಶೆರೆವಾಡರಿಗೆ ಹುಟ್ಟಿದಾಗಿನಿಂದ ಒಂದು ತೊಂದರೆ ಇದೆ. ಅದೇನಪ್ಪಾ ಅಂದ್ರೇ, ಅವರಿಗೆ ಬಾಯಿನೇ ಬಿಡಲು ಆಗಲ್ಲ. ಹೀಗಾಗಿ ಅವರು ಗಂಜಿ ಹಾಗೂ ಬಿಸ್ಕೆಟ್ ಬಿಟ್ಟು ಏನೂ ತಿನ್ನೊಲ್ಲ. ಸದ್ಯ ಅವರ ಬಾಯಿಯ ಶಸ್ತ್ರ ಚಿಕಿತ್ಸೆ ಮಾಡಿಸಿದ್ರೆ, ತಿನ್ನಬಹುದು ಹಾಗೂ ಮಾತನಾಡೊದು ಸಾಧ್ಯ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಇದೀಗ ಈ ಯುವತಿಯ ಕುಟುಂಬ ಸಹಾಯಕ್ಕಾಗಿ ಪಬ್ಲಿಕ್ ಟಿವಿಯ ಮೊರೆ ಬಂದಿದೆ.

    ಹೌದು. 17 ವರ್ಷ ವಯಸ್ಸಿನ ಸಿದ್ದವ್ವ ಶೆರೆವಾಡ ಬಾಯಿ ತೆರೆಯೋಕೆ ಆಗದೇ ಅದೇಷ್ಟು ಒದ್ದಾಟ ನಡೆಸಿದ್ದಾರೆ. ನೀರು ಕುಡಿಯಲು ಕೂಡಾ ಪರದಾಡುತ್ತಾರೆ. ಇನ್ನು ಹುಟ್ಟಿದಾಗಿನಿಂದ ಇವರು ಅನ್ನ, ರೊಟ್ಟಿಯಂಥ ಪದಾರ್ಥಗಳನ್ನು ತಿಂದಿಲ್ಲ. ಕೇವಲ ಗಂಜಿ, ಪುಡಿ ಮಾಡಿದ ಬಿಸ್ಕೆಟ್ ಮಾತ್ರ ತಿನ್ನೊಕೆ ಇವರಿಗೆ ಆಗತ್ತೆ. ಇದು ಇವರ ವೈಯಕ್ತಿಕ ಸಮಸ್ಯೆಯಾದ್ರೆ, ಇನ್ನೊಂದು ಕಡೆ ಇವರದ್ದು ಕಿತ್ತು ತಿನ್ನುವ ಬಡತನದ ಕುಟುಂಬ.

    ಕಳೆದ 5 ವರ್ಷಗಳ ಹಿಂದೆ, ಯುವತಿಯ ತಂದೆ ಬಸಪ್ಪ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇನ್ನು ಮನೆಯಲ್ಲಿ ತಾಯಿಯೊಬ್ಬಳೇ ಕೂಲಿ-ನಾಲಿ ಮಾಡಿ ಮೂರು ಮಕ್ಕಳನ್ನ ಸಾಕಬೇಕು. ಸಿದ್ದವ್ವಳ ತಂಗಿ ಶಾಲೆ ಕಲಿಯುತಿದ್ರೆ, ಅಣ್ಣ ಕಾಲೇಜಿಗೆ ಹೋಗ್ತಾರೆ. ಸಿದ್ದವ್ವ ಕೂಡಾ ಬಾಯಿ ತೆರೆಯೊಕೆ ಆಗದೇ ಇದ್ರೂ ಎಸ್‍ಎಸ್‍ಎಲ್‍ಸಿ ಮುಗಿಸಿದ್ದಾರೆ. ಆದರೆ ಇವರ ಬಾಯಿ ಶಸ್ತ್ರ ಚಿಕಿತ್ಸೆಗೆ ಹಣ ಇಲ್ಲದೇ 17 ವರ್ಷಗಳಿಂದ ಇದೇ ರೀತಿ ಬಿಸ್ಕೆಟ್ ಹಾಗೂ ಗಂಜಿಯ ಮೇಲೆ ಜೀವನ ಸಾಗಿಸುತ್ತಿದ್ದಾರೆ.

    ಮಗಳ ಸ್ಥಿಯಿಂದ ಕಂಗೆಟ್ಟ ತಾಯಿ ಬಾಯಿ ಶಸ್ತ್ರ ಚಿಕಿತ್ಸೆ ಮಾಡಿಸಲೆಂದು ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವು ಆಸ್ಪತ್ರೆಗೆ ಅಲೆದಾಡಿದ್ದಾರೆ. ಆದ್ರೆ ಮಗಳ ಚಿಕಿತ್ಸೆ ಸಾಧ್ಯವಿಲ್ಲ ಅಂತಾ ವೈದ್ಯರ ಉತ್ತರ. ಕೊನೆಗೆ ಧಾರವಾಡದ ಎಸ್‍ಡಿಎಂ ಆಸ್ಪತ್ರೆಯಲ್ಲಿ ಬಾಯಿ ಶಸ್ತ್ರ ಚಿಕಿತ್ಸೆ ಬಗ್ಗೆ ಕೇಳಿದಾಗ ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡ್ತೀವಿ ಅಂತಾ ಹೇಳಿದಾಗ ತಾಯಿಗೆ ಸ್ವಲ್ಪ ನಿಟ್ಟುಸಿರು ಬಿಟ್ಟಂತಾಗಿದೆ. ಆದರೆ ಅದಕ್ಕೆ ಹಣ ಬೇಕಲ್ಲ.

    ಹೇಗಾದ್ರು ಮಾಡಿ ಹಣದ ಸಹಾಯವಾದ್ರೆ ಮಗಳಿಗೆ ಹೊಸ ಜೀವನ ಸಿಗುತ್ತೆ ಅನ್ನೊದು ತಾಯಿಯ ಆಸೆ. ಸಿದ್ದವ್ವಳಿಗೆ ಕೂಡಾ ಮುಂದೆ ಕಲಿಬೇಕು ಅನ್ನೋ ಆಸೆಯೂ ಇದೆ. ಯುವಕರು ಬಾಯಿ ನೋಡಿ ಚುಡಾಯಿಸಿದ್ದಕ್ಕೆ ಬೇಸರಗೊಂಡು ಕಾಲೇಜ್ ಮೆಟ್ಟಿಲು ಕುಡಾ ಏರಲಿಲ್ಲ ಸಿದ್ದವ್ವ. ಸದ್ಯ 1 ಲಕ್ಷ ರೂಪಾಯಿ ಇದ್ರೆ ಇವಳು ಬಾಯಿ ಬಿಚ್ಚಿ ಮಾತನಾಡಬಹುದು ಹಾಗೂ ಬೇಕಾದ್ದನ್ನು ತಿನ್ನಬಹುದು. ಹೀಗಾಗಿ ಪಬ್ಲಿಕ್ ಟಿವಿ ಮೊರೆ ಬಂದಿರುವ ಈ ಕುಟುಂಬ, ಸಹಾಯಕ್ಕೆ ಮನವಿ ಮಾಡುತ್ತಿದೆ.

    https://www.youtube.com/watch?v=ltAvEyRpenQ