Tag: medical shop

  • 2012ರಲ್ಲಿ ತಯಾರಾದ ಗ್ಲೂಕೋಸ್ – 2021ರ ಲೇಬಲ್ ಹಾಕಿ ಮಾರಾಟ

    2012ರಲ್ಲಿ ತಯಾರಾದ ಗ್ಲೂಕೋಸ್ – 2021ರ ಲೇಬಲ್ ಹಾಕಿ ಮಾರಾಟ

    ಚಿಕ್ಕಮಗಳೂರು: 2012ರ ಏಪ್ರಿಲ್ ತಿಂಗಳಲ್ಲಿ ತಯಾರಾಗಿರುವ ರೋಗಿಗಳ ದೇಹದಲ್ಲಿ ಶಕ್ತಿ ವೃದ್ಧಿಸಲು ಬಳಸುವ ಗ್ಲೂಕೋಸ್ ಪ್ಯಾಕೇಟಿನ ಮೇಲೆ 2021ರ ಏಪ್ರಿಲ್ ತಿಂಗಳ ಲೇಬಲ್ ಹಾಕಿ 9 ವರ್ಷದ ಹಳೇ ಗ್ಲೂಕೋಸನ್ನು ಮಾರಾಟ ಮಾಡುತ್ತಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನರಿಕ್ ಮೆಡಿಸನ್ ಔಷಧಿ ಕೇಂದ್ರದಲ್ಲಿ ಈ ರೀತಿಯ ಗ್ಲೂಕೋಸ್ ಪ್ಯಾಕೇಟ್ ಪತ್ತೆಯಾಗಿದೆ. ಸೋಮವಾರ ನಗರದ ಗುರು ಎಂಬವರು ತಮ್ಮ ಸಂಬಂಧಿಕರಿಗೆ ಆರೋಗ್ಯ ಸರಿ ಇಲ್ಲ ಎಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ವೈದ್ಯರು ಎಳನೀರು ಹಾಗೂ ಗ್ಲೂಕೋಸ್ ಕೊಡಲು ಹೇಳಿದ್ದರು. ಆಸ್ಪತ್ರೆಯ ಆವರಣದಲ್ಲೇ ಇದ್ದ ಮೆಡಿಕಲ್ ಸ್ಟೋರ್‍ನಲ್ಲಿ ಗ್ಲೂಕೋಸ್ ಪ್ಯಾಕೇಟ್ ಖರೀದಿಸಿದ್ದಾರೆ.

    26 ರೂಪಾಯಿ ಇದ್ದ ಗ್ಲೂಕೋಸ್‍ಗೆ 13 ರೂಪಾಯಿ ತೆಗೆದುಕೊಂಡಿದ್ದಾರೆ. ಗ್ಲೂಕೋಸ್ ಖರೀದಿಸಿದ ಗುರು, ಅರ್ಧ ಹಣ ತೆಗೆದುಕೊಂಡದ್ದನ್ನ ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದರು. ಆದರೆ ಗುರು ಆಸ್ಪತ್ರೆಯ ವಾರ್ಡಿಗೆ ಬಂದು ನೋಡಿದಾಗ ಲೇಬಲ್ ಹಚ್ಚಿರುವುದು ಗೊತ್ತಾಗಿದೆ. ಲೇಬಲ್ ತೆಗೆದು ನೋಡಿದಾಗ ಮೂಲ ಪ್ಯಾಕೇಟ್ ಮೇಲಿದ್ದ 2012ನೇ ಇಸವಿಗೆ ಬ್ಲಾಕ್ ಮಾರ್ಕರ್‌ನಿಂದ ರಬ್ ಮಾಡಿ ಅದರ ಮೇಲೆ 2021ನೇ ಇಸವಿಯ ಲೇಬಲ್ ಹಾಕಿದ್ದಾರೆ.

    ಕೂಡಲೇ ಒಂದು ಹೀಗಾಗಿರಬೇಕೆಂದು ಗುರು ತನ್ನ ಚಿಕ್ಕಪ್ಪನ ಮೂಲಕ ಅದೇ ಮೆಡಿಕಲ್ ಸ್ಟೋರ್‍ನಿಂದ ಮತ್ತೊಂದು ಗ್ಲೂಕೋಸ್ ಪ್ಯಾಕೇಟ್ ಖರೀದಿಸಿದ್ದಾರೆ. ಅದರ ಮೇಲೂ ಅದೇ ರೀತಿಯ ಲೇಬಲ್ ಹಾಕಿರುವುದು ಕಾಣಿಸಿದೆ. ಅದನ್ನು ಕಿತ್ತಾಗಲು ಆ ಪ್ಯಾಕೇಟ್ ಕೂಡ 2012ರಲ್ಲಿ ತಯಾರಾಗಿರುವುದಾಗಿತ್ತು. ಇದನ್ನು ಮಕ್ಕಳು ರೋಗಿಗಳಿಗೆ ಕೊಟ್ಟರೆ ಕಥೆ ಏನೆಂದು ಖರೀದಿಸಿದ ಗುರು ಕೂಡ ಕಂಗಾಲಾಗಿದ್ದಾರೆ.

    ಇದು 9 ವರ್ಷ ಹಿಂದಿನ ಗ್ಲೂಕೋಸ್. ಇದರ ವಾಯಿದೆ ಇರುವುದೇ 24 ತಿಂಗಳು ಮಾತ್ರ. ಬಳಿಕ ಇದು ಔಷಧಿಯಾದರೂ ವಿಷವಾಗುತ್ತೆ. ಇದನ್ನು ರೋಗಿಗಳು ಬಳಸಿದರೆ ಅವರ ಆರೋಗ್ಯ ಏನಾಗಬೇಡ ಎಂದು ಖರೀದಿಸಿದಾತ ಆತಂಕಕ್ಕೀಡಾಗಿದ್ದಾರೆ. 24 ತಿಂಗಳು ವ್ಯಾಲಿಡಿಟಿಯ ಈ ಗ್ಲೂಕೋಸ್ ಪ್ಯಾಕೇಟಿನ ವಾಯಿದೆ ಮುಗಿದೇ 9 ವರ್ಷ ಕಳೆದಿವೆ. ಇದನ್ನು ಹೇಗೆ ಮಾರಾಟ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಹಕ ಗುರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

  • ಜ್ವರ, ಕೆಮ್ಮಿಗೆ ಮಾತ್ರೆ ತೆಗೆದುಕೊಳ್ಳುವರ ವಿವರವನ್ನು ತೆಗೆದುಕೊಳ್ಳಿ

    ಜ್ವರ, ಕೆಮ್ಮಿಗೆ ಮಾತ್ರೆ ತೆಗೆದುಕೊಳ್ಳುವರ ವಿವರವನ್ನು ತೆಗೆದುಕೊಳ್ಳಿ

    – ಮೆಡಿಕಲ್ ಸ್ಟೋರ್‌ಗಳಿಗೆ ಆಂಧ್ರ ಸರ್ಕಾರ ಸೂಚನೆ

    ಹೈದರಾಬಾದ್: ಜ್ವರ, ಕೆಮ್ಮು ಮತ್ತು ಶೀತ ಎಂದು ಬಂದು ಮಾತ್ರೆ ತೆಗದುಕೊಂಡು ಹೋಗುವವರ ವಿವರವನ್ನು ಪಡೆದುಕೊಳ್ಳಿ ಎಂದು ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಮೆಡಿಕಲ್ ಶಾಪ್‍ಗಳಿಗೆ ಸೂಚನೆ ನೀಡಿವೆ.

    ದೇಶದಲ್ಲಿ ದಿನೇ ದಿನೇ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ದೇಶನ್ನೇ ಲಾಕ್‍ಡೌನ್ ಮಾಡಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಸೋಂಕಿತರ ಪತ್ತೆಗಾಗಿ ರಾಜ್ಯ ಸರ್ಕಾರಗಳು ವಿವಿಧ ನಿಯಮಗಳನ್ನು ಅನುಸರಿಸುತ್ತಿವೆ. ಈ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಈ ನಿರ್ಧಾರವನ್ನು ಕೈಗೊಂಡಿವೆ.

    ಲಾಕ್‍ಡೌನ್ ಇದ್ದರೂ ದೇಶದ್ಯಾಂತ ಮೆಡಿಕಲ್ ಶಾಪ್‍ಗಳು ಓಪನ್ ಇವೆ. ಈ ಮೆಡಿಕಲ್‍ಗಳಿಗೆ ನಮಗೆ ಶೀತ, ಕೆಮ್ಮು ಮತ್ತು ಜ್ವರ ಇದೆ ಎಂದು ಮಾತ್ರೆ ತೆಗೆದುಕೊಳ್ಳಲು ಬರುವವರ ವಿವರವನ್ನು ಮೆಡಿಕಲ್ ಶಾಪ್ ಮಾಲೀಕರು ಪಡೆದುಕೊಳ್ಳಬೇಕು. ಜೊತೆಗೆ ಪ್ರತಿದಿನ ನಾವು ಸೂಚಿಸಿದ ಸ್ಥಳೀಯ ಅಧಿಕಾರಿಗಳಿಗೆ ಅದನ್ನು ನೀಡಬೇಕು. ಆ ಅಧಿಕಾರಿಗಳು ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುತ್ತಾರೆ ಎಂದು ಸರ್ಕಾರಗಳು ತಿಳಿಸಿವೆ.

    ಇತ್ತೀಚೆಗೆ ಕೊರೊನಾ ಲಕ್ಷಣಗಳು ಇಲ್ಲದಿರುವ ವ್ಯಕ್ತಿಗಳಲ್ಲಿ ಸೋಂಕು ಇರುವುದು ಪರೀಕ್ಷೆಯಲ್ಲಿ ಪತ್ತೆಯಾಗುತ್ತಿದೆ. ಕೆಲವರು ರೋಗದ ಲಕ್ಷಣ ಇದ್ದರೂ ಕೊರೊನಾ ಪರೀಕ್ಷೆಗೆ ಒಳಗಾಗುತ್ತಿಲ್ಲ ಆದ್ದರಿಂದ ಸರ್ಕಾರಗಳು ಈ ನಿರ್ಧಾರವನ್ನು ಕೈಗೊಂಡಿವೆ. ಈಗಾಗಲೇ ಅಂಧ್ರಪ್ರದೇಶದಲ್ಲಿ 603 ಕೊರೊನಾ ಪ್ರಕರಣಗಳು ಮತ್ತು ತೆಲಂಗಾಣದಲ್ಲಿ 800 ಕೊರೊನಾ ಪ್ರಕರಣಗಳು ದಾಖಲಾಗಿವೆ.

    ಇಡೀ ಭಾರತದಲ್ಲಿ 15,712 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, 507 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 2,231 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಈವರೆಗೆ ಇಡೀ ವಿಶ್ವದಲ್ಲಿ 23,29,651 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 1,60,721 ಜನರು ಮೃತಪಟ್ಟಿದ್ದಾರೆ. ವಿಶ್ವವ್ಯಾಪಿ 5,95,433 ಜನರು ರೋಗದಿಂದ ಗುಣವಾಗಿ ಹೊರಬಂದಿದ್ದಾರೆ.

  • ಕೊರೊನಾ ಎಫೆಕ್ಟ್- ಕಳೆದೊಂದು ವಾರದಿಂದ ಕಾಂಡೋಮ್ ಖರೀದಿ ಹೆಚ್ಚಳ

    ಕೊರೊನಾ ಎಫೆಕ್ಟ್- ಕಳೆದೊಂದು ವಾರದಿಂದ ಕಾಂಡೋಮ್ ಖರೀದಿ ಹೆಚ್ಚಳ

    – ಪುರುಷರಿಗಿಂತ ಮಹಿಳೆಯರ ಪ್ರಮಾಣ ಹೆಚ್ಚು

    ಮುಂಬೈ: ಕೊರೊನಾ ವೈರಸ್ ಇಡೀ ಭಾತರವನ್ನೇ ಲಾಕ್‍ಡೌನ್ ಮಾಡಿದೆ. ಜನರು ಕೂಡ ಕೊರೊನಾ ವೈರಸ್ ಭೀತಿಯಿಂದ ಮನೆಯಿಂದ ಹೊರಗೆ ಬರುತ್ತಿಲ್ಲ. ಹೀಗಾಗಿ ಪ್ರಪಂಚದಾದ್ಯಂತ ಕೊರೊನಾ ಹರಡುತ್ತಿರುವುದರಿಂದ ಜನರು ಮನೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಕಾಂಡೋಮ್‍ಗಳ ಖರೀದಿ ಕೂಡ ಹೆಚ್ಚಳವಾಗಿದೆ.

    ಕೊರೊನಾದಿಂದ ಜಿಮ್‍ಗಳು, ಪಾರ್ಕ್ ಮತ್ತು ಥಿಯೇಟರ್ ಎಲ್ಲವೂ ಬಂದ್ ಆಗಿವೆ. ಅಲ್ಲದೇ ಅನೇಕ ಕಾರ್ಪೋರೇಟ್‍ಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಜನರು ಆಹಾರ, ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇದರ ಜೊತೆಗೆ ಕಾಂಡೋಮ್ ಖರೀದಿ ಕೂಡ ಹೆಚ್ಚಾಗುತ್ತಿದೆ. ಅನೇಕ ವ್ಯಾಪಾರಿಗಳು ಕಳೆದ ಒಂದು ವಾರದಲ್ಲಿ ಕಾಂಡೋಮ್ ಮಾರಾಟವು ಶೇ.25 ರಿಂದ ಶೇ.50 ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

    ದೇಶಾದ್ಯಂತ ಲಾಕ್‍ಡೌನ್ ಆಗಿದೆ. ಹೀಗಾಗಿ ಜನರಿಗೆ ಈಗ ತುಂಬಾ ಸಮಯ ಸಿಗುತ್ತಿದೆ. ಅಲ್ಲದೇ ಮನೆಯಲ್ಲಿ ಇದ್ದು ಬೇಸರಗೊಂಡಿದ್ದಾರೆ. ಈ ಕಾರಣದಿಂದಲೇ ಕಾಂಡೋಮ್‍ಗಳ ಬೇಡಿಕೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಜನರು ಮೂರು ಕಾಂಡೋಮ್‍ಗಳ ಸಣ್ಣ ಪ್ಯಾಕ್ ಖರೀದಿಸುತ್ತಿದ್ದರು. ಆದರೆ ಕಳೆದೊಂದು ವಾರದಿಂದ 10 ಮತ್ತು 20 ಕಾಂಡೋಮ್‍ಗಳಿರುವ ದೊಡ್ಡ ಪ್ಯಾಕ್‍ಗಳನ್ನು ಖರೀದಿಸುತ್ತಿದ್ದಾರೆ ಎಂದು ಅಂಗಡಿ ಮಾಲೀಕ ಹರ್ಷಲ್ ಷಾ ತಿಳಿಸಿದ್ದಾರೆ.

    ಮತ್ತೊಬ್ಬ ಅಂಗಡಿ ಮಾಲೀಕ ಅಜಯ್ ಸಬ್ರವಾಲ್ ಮಾತನಾಡಿ, ಇದು ತಮಾಷೆಯಾಗಿದೆ. ಯಾಕೆಂದರೆ ಸಾಮಾನ್ಯವಾಗಿ ಹಬ್ಬ ಅಥವಾ ಹೊಸ ವರ್ಷದ ಸಂದರ್ಭದಲ್ಲಿ ಕಾಂಡೋಮ್‍ಗಳ ಮಾರಾಟದಲ್ಲಿ ಏರಿಕೆ ಕಂಡುಬರುತ್ತಿತ್ತು. ಆದರೆ ಈಗ ಜನರು ಔಷಧಿಗಳನ್ನು ಸಂಗ್ರಹಿಸುವುದರ ಜೊತೆ ಅಧಿಕ ಕಾಂಡೋಮ್‍ಗಳನ್ನು ಸಹ ಖರೀದಿಸುತ್ತಿದ್ದಾರೆ. ನನ್ನ ಅಂಗಡಿಯಲ್ಲಿ ಕಾಂಡೋಮ್ ಸ್ಟಾಕನ್ನು ಶೇ.25 ಹೆಚ್ಚಿಸಿದ್ದೇನೆ ಎಂದು ಹೇಳಿದ್ದಾರೆ.

    ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ. ಅದರಲ್ಲೂ ಕಚೇರಿಗಳು ಮತ್ತು ಮಾರುಕಟ್ಟೆಗಳು ಸ್ಥಗಿತಗೊಂಡ ಸಮಯದಿಂದ ಕಾಂಡೋಮ್‍ಗಳ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ವರದಿಯಾಗಿದೆ.

    ಕಾಂಡೋಮ್ ಖರೀದಿಸುವವರಲ್ಲಿ ಪುರುಷರಿಗಿಂತ ಮಹಿಳೆಯರ ಪ್ರಮಾಣ ಹೆಚ್ಚಾಗಿದೆ. ಅನೇಕ ಗೃಹಿಣಿಯರು ಸಹ ಕಾಂಡೋಮ್ ಕೇಳುತ್ತಿದ್ದಾರೆ. ಮಾರಾಟದಲ್ಲಿ ಶೇ.15 ರಷ್ಟು ಹೆಚ್ಚಳವಾಗಿದೆ. ಗರ್ಭನಿರೋಧಕ ಮಾತ್ರೆಗಳ ಮಾರಾಟವು ಸಹ ಹೆಚ್ಚಾಗಿದೆ ಎಂದು ಮೆಡಿಕಲ್ ಶಾಪ್ ಮಾಲಕಿ ವಿಶಾಲ್ ಜೋಶಿ ಹೇಳಿದ್ದಾರೆ.

  • ಮಾಸ್ಕ್ ಕೊರತೆ ನೀಗಿಸಲು ಮುಂದಾದ ಮಹಿಳಾ ಸ್ವಸಹಾಯ ಸಂಘ

    ಮಾಸ್ಕ್ ಕೊರತೆ ನೀಗಿಸಲು ಮುಂದಾದ ಮಹಿಳಾ ಸ್ವಸಹಾಯ ಸಂಘ

    ಚಾಮರಾಜನಗರ: ಕೊರೊನಾ ಭೀತಿ ಶುರುವಾದ ನಂತರ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮಾಸ್ಕ್‌ಗಳ ಕೊರತೆ ಎದುರಾಗಿದೆ. ಜಿಲ್ಲೆಯ ಮೆಡಿಕಲ್ ಸ್ಟೋರ್ ಗಳಲ್ಲಿ ಮಾಸ್ಕ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಹೆಚ್ಚಾದಂತೆ ಮಾಸ್ಕ್‌ಗಳ ದರವೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಮಾಸ್ಕ್‌ಗಳ ಅವಶ್ಯಕತೆಯನ್ನರಿತ ಚಾಮರಾಜನಗರ ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘವೊಂದು ಗುಣಮಟ್ಟದ ಮಾಸ್ಕ್‌ಗಳನ್ನು ತಯಾರಿಸಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಪೂರೈಸಲು ಆರಂಭಿಸಿದೆ.

    ವಿಶ್ವದೆಲ್ಲೆಡೆ ಹರಡುತ್ತಿರುವ ಕೊರೊನಾ ಭೀತಿಯಿಂದ ಜನರು ಮಾಸ್ಕ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮಾಸ್ಕ್‌ಗಳ ಕೊರತೆ ಹೆಚ್ಚಾಗಿದೆ. ಜಿಲ್ಲೆಯ ಮೆಡಿಕಲ್ ಸ್ಟೋರ್ ಗಳಲ್ಲಿ ಬೇಡಿಕೆಗೆ ತಕ್ಕಂತೆ ಮಾಸ್ಕ್‌ಗಳು ಲಭ್ಯವಾಗುತ್ತಿಲ್ಲ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಮಾಸ್ಕ್‌ಗಳ ದರವೂ ದುಪ್ಪಾಟ್ಟಾಗುತ್ತಿದೆ. ಈ ಹಿನ್ನೆಲೆ ಮಾಸ್ಕ್‌ಗಳ ಅವಶ್ಯಕತೆಯನ್ನು ಅರಿತ ಚಾಮರಾಜನಗರ ತಾಲೂಕಿನ ಬೂದಂಬಳ್ಳಿ ಮಹಿಳಾ ಸ್ವಸಹಾಯ ಸಂಘವೊಂದು ಗುಣಮಟ್ಟದ ಮಾಸ್ಕ್‌ಗಳನ್ನು ತಯಾರಿಸಿ, ಕಡಿಮೆ ದರದಲ್ಲಿ ಗ್ರಾಹಕರಿಗೆ ಪೂರೈಸಲು ಆರಂಭಿಸಿದೆ.

    ಜಿಲ್ಲಾ ಪಂಚಾಯ್ತಿಯ ಎನ್‌ಆರ್‌ಎಲ್‌ಎಂ ಯೋಜನೆಯಡಿ ಭುವನೇಶ್ವರಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು ಸಾಲ ಸೌಲಭ್ಯ ಪಡೆದು, ಹೊಲಿಗೆ ಯಂತ್ರ ಖರೀದಿಸಿ ಸ್ವ ಉದ್ಯೋಗ ಕೈಗೊಂಡಿದ್ದಾರೆ. ಮಾಸ್ಕ್‌ಗಳ ಅವಶ್ಯಕತೆ ಅರಿತು ಕಡಿಮೆ ದರದಲ್ಲಿ ಗುಣಮಟ್ಟದ ಮಾಸ್ಕ್‌ಗಳನ್ನು ತಯಾರಿಸುತ್ತಿದ್ದಾರೆ.

    ಸಾಮಾನ್ಯರಿಗೂ ಮಾಸ್ಕ್ ದೊರೆಯುವಂತೆ ಮಾಡುವ ಉದ್ದೇಶದಿಂದ ಈ ಮಹಿಳೆಯರು ಮಾಸ್ಕ್ ತಯಾರಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದ ಉತ್ತಮ ಗುಣಮಟ್ಟದ ಹತ್ತಿ ಬಟ್ಟೆ ಉಪಯೋಗಿಸಿ, ಬಳಸಲು ಸುಲಭವಾಗುವ ರೀತಿಯ ಮಾಸ್ಕ್‌ಗಳನ್ನು ತಯಾರಿಸುತ್ತಿದ್ದಾರೆ.

    ಈ ಮಾಸ್ಕ್‌ಗಳು ಪುನರ್ ಬಳಸಬಹುದಾಗಿದ್ದು, ಬೆಲೆಯು ಕೂಡ ಕಡಿಮೆ ಇದೆ. ಇಲ್ಲಿ ಮಾಸ್ಕ್‌ಗಳು ಕಡಿಮೆ ಬೆಲೆಗೆ ದೊರೆಯುವುದನ್ನು ಮನಗಂಡು ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಮೆಡಿಕಲ್ ಶಾಪ್‍ಗಳಿಂದಲೂ ಬೇಡಿಕೆ ಬಂದಿದ್ದು, ಬೇಡಿಕೆಗೆ ಅನುಗುಣವಾಗಿ ಮಾಸ್ಕ್‌ಗಳನ್ನು ಪೂರೈಸಲು ಮಹಿಳೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ.

  • ಕೊರೊನಾ ಎಫೆಕ್ಟ್ – ಬೆಂಗಳೂರಲ್ಲಿ ದಿಢೀರ್ ಭಾರೀ ಏರಿಕೆ ಆಯ್ತು ಮಾಸ್ಕ್ ಬೆಲೆ

    ಕೊರೊನಾ ಎಫೆಕ್ಟ್ – ಬೆಂಗಳೂರಲ್ಲಿ ದಿಢೀರ್ ಭಾರೀ ಏರಿಕೆ ಆಯ್ತು ಮಾಸ್ಕ್ ಬೆಲೆ

    ಬೆಂಗಳೂರು: ಕೊರೊನಾ ವೈರಸ್ ಕುರಿತು ದೇಶದೆಲ್ಲೆಡೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರೂ ಸಹ ಅಷ್ಟೇ ಎಚ್ಚರದಿಂದ ಇರಬೇಕು ಎಂದು ಸೂಚಿಸಲಾಗುತ್ತಿದೆ. ಮಾಸ್ಕ್ ಧರಿಸುವುದು ಉತ್ತಮ ಎಂದು ಸೂಚಿಸಿದ ಬೆನಲ್ಲೇ ದರ ದಿಢೀರ್ ಏರಿಕೆಯಾಗಿದೆ.

    ಸಿಲಿಕಾನ್ ಸಿಟಿಯಲ್ಲಿ ಮಾಸ್ಕ್‍ಗೆ ಬರ ಎಂಬಂತಾಗಿದ್ದು, ಕೊರತೆ ಕಾಡುತ್ತಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ವ್ಯಾಪಾರಿಗಳು ದುಪ್ಪಟ್ಟು ದರ ನಿಗದಿ ಮಾಡುತ್ತಿದ್ದಾರೆ. ಹೀಗಾಗಿ ಮಾಸ್ಕ್ ಕೊಳ್ಳಲು ಹೋದ ಜನ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ. ಸಿಲಿಕಾನ್ ಸಿಟಿಯ ಬಹುತೇಕ ಮೆಡಿಕಲ್‍ಗಳಲ್ಲಿ ಮಾಸ್ಕ್ ಲಭ್ಯವಿಲ್ಲ. ಕೆಲವೇ ಮೆಡಿಕಲ್ ಶಾಪ್‍ಗಳಲ್ಲಿ ಸ್ಟಾಕ್ ಲಭ್ಯವಿದ್ದು, ಆದರೆ ದರ ದುಪ್ಪಟ್ಟು ಹೇಳುತ್ತಿದ್ದಾರೆ.

    ಕರೊನಾ ವೈರೆಸ್ ಎಫೆಕ್ಟ್ ಹಿನ್ನೆಲೆಯಲ್ಲಿ 3 ರೂ. ಇದ್ದ ಮಾಸ್ಕ್ ದರ 10 ರೂ. ಆಗಿದೆ. 10 ರೂ. ಇದ್ದ ಮಾಸ್ಕ್ ಬೆಲೆ ಈಗ 38 ರೂ. ಆಗಿದೆ. ಸಾಮಾನ್ಯವಾಗಿ ಮಾಸ್ಕ್ ಯಾರೂ ಹೆಚ್ಚಾಗಿ ಬಳಸದ ಸ್ಟಾಕ್ ಇರಲಿಲ್ಲ. ಇದೀಗ ಸರಬಾರಜು ಕೂಡ ಬರುತ್ತಿಲ್ಲ. ಆದರೆ ಇದ್ದಕ್ಕಿದ್ದಂತೆ ಬೇಡಿಕೆ ಹೆಚ್ಚಾಗಿದೆ. ಇದನ್ನು ಸರಿದೂಗಿಸಲು ಆಗುತ್ತಿಲ್ಲ. ಹೀಗಾಗಿ ದರ ಹೆಚ್ಚು ಮಾಡಿ ಮಾರಾಟ ಮಾಡಲಾಗುತ್ತಿದೆ.

    ದುಬಾರಿ ಬೆಲೆಯ ಮಾಸ್ಕ್ ತಯಾರಿಗೆ 2 ರೂ. ಸಹ ಬೀಳಲ್ಲ. ಆದರೂ ಮಾಸ್ಕ್ ದರ ಮಾತ್ರ ಸಿಕ್ಕಪಟ್ಟೆ ಹೆಚ್ಚಾಗಿದೆ ಎಂದು ಮೆಡಿಕಲ್ ಶಾಪ್ ಬಳಿ ಗ್ರಾಹಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

  • ಮೆಡಿಕಲ್ ಶಾಪ್ ಮಾಲೀಕನಿಂದ ಇಂಜೆಕ್ಷನ್ – ರಕ್ತಕಾರಿ ಸತ್ತ 2ರ ಬಾಲಕಿ

    ಮೆಡಿಕಲ್ ಶಾಪ್ ಮಾಲೀಕನಿಂದ ಇಂಜೆಕ್ಷನ್ – ರಕ್ತಕಾರಿ ಸತ್ತ 2ರ ಬಾಲಕಿ

    ನವದೆಹಲಿ: ಮೆಡಿಕಲ್ ಶಾಪ್ ಮಾಲೀಕ ನೀಡಿದ ಇಂಜೆಕ್ಷನ್‍ಯಿಂದ 2 ವರ್ಷದ ಬಾಲಕಿ ರಕ್ತಕಾರಿ ಸಾವನ್ನಪ್ಪಿರುವ ಘಟನೆ ದೆಹಲಿಯ ಶಹದಾರಾ ಜಿಟಿವಿ ಎನ್‍ಕ್ಲೇವ್ ಪ್ರದೇಶದಲ್ಲಿ ನಡೆದಿದೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಬುಧವಾರ ಮಗುವಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿದೆ. ಅದಕ್ಕೆ ತಾಯಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಮೆಡಿಕಲ್ ಶಾಪ್‍ಗೆ ತೆರಳಿ ಮಾತ್ರ ತಂದು ನೀಡಿದ್ದಾಳೆ. ಆದರೆ ಮಾತ್ರೆ ಸೇವಿಸಿದರೂ ಮಗುವಿನ ಕಾಯಿಲೆ ವಾಸಿ ಆಗಿರಲಿಲ್ಲ.

    ಮಾತ್ರೆ ನೀಡಿದರೂ ಜ್ವರ ಮತ್ತು ಕೆಮ್ಮು ಹೋಗಿಲ್ಲ ಎಂದು ಮಗುವನ್ನು ಆಕೆ ಗುರುವಾರ ಮೆಡಿಕಲ್ ಶಾಪ್‍ಗೆ ಮತ್ತೆ ಕರೆದುಕೊಂಡು ಹೋಗಿದ್ದಾಳೆ. ಆಗ ಅಲ್ಲಿ ಮೆಡಿಕಲ್ ಶಾಪ್ ಮಾಲೀಕ ಮಗುವಿಗೆ ಇಂಜೆಕ್ಷನ್ ಮಾಡಿದ್ದಾನೆ. ನಂತರ ಮನೆಗೆ ಬಂದಾಗ ಮಗು ತೀವ್ರ ಅಸ್ವಸ್ಥವಾಗಿ ರಕ್ತದ ವಾಂತಿ ಮಾಡಲು ಶುರು ಮಾಡಿದೆ. ಆಗ ಹೆದರಿದ ತಾಯಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ ಅಲ್ಲಿ ಮಗು ಮೃತಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ

  • ಮೆಡಿಕಲ್ ಸ್ಟೋರ್ಸ್ ಬಂದ್ ಮಾಡಿದ್ರೆ, ಪರವಾನಗಿ ರದ್ದು ಮಾಡ್ತೀನಿ: ಡಿಕೆಶಿ

    ಮೆಡಿಕಲ್ ಸ್ಟೋರ್ಸ್ ಬಂದ್ ಮಾಡಿದ್ರೆ, ಪರವಾನಗಿ ರದ್ದು ಮಾಡ್ತೀನಿ: ಡಿಕೆಶಿ

    ಬೆಂಗಳೂರು: ಮೆಡಿಕಲ್ ಸ್ಟೋರ್ಸ್ ಗಳನ್ನು ಬಂದ್ ಮಾಡಿದರೆ ಅಂತಹ ಅಂಗಡಿಗಳ ಪರವಾನಗಿಯನ್ನು ರದ್ದು ಮಾಡುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    ಮೆಡಿಕಲ್ ಶಾಪ್ ಬಂದ್ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, ಸರ್ಕಾರಿ ಆಸ್ಪತ್ರೆಗಳು ಹಾಗೂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಆವರಣದಲ್ಲಿರುವ ಔಷಧ ವ್ಯಾಪಾರ ಮಳಿಗೆಗಳು (ಮೆಡಿಕಲ್ ಸ್ಟೋರ್ಸ್) ಶುಕ್ರವಾರ ಎಂದಿನಂತೆ ಕಾರ್ಯನಿರ್ವಹಿಸಬೇಕು. ಒಂದೊಮ್ಮೆ ಯಾವುದಾದರೂ ಮಳಿಗೆಗಳು ಬಂದ್ ನಲ್ಲಿ ಪಾಲ್ಗೊಂಡಿದ್ದೇ ಆದಲ್ಲಿ, ಅಂತಹ ಮಳಿಗೆಗಳ ಪರವಾನಗಿ ರದ್ದುಪಡಿಸಿ, ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಆವರಣದಿಂದ ತೆರವು ಮಾಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಅಗತ್ಯ ಸೇವಾ ಕಾಯ್ದೆ ವ್ಯಾಪ್ತಿಯಲ್ಲಿ ಬರುವ ಔಷಧ ಮಳಿಗೆಗಳು ಯಾವುದೇ ಕಾರಣಕ್ಕೂ ಬಂದ್ ನಲ್ಲಿ ಭಾಗವಹಿಸುವಂತಿಲ್ಲ. ಭಾಗವಹಿಸಿದರೆ ಕಠಿಣ ಕ್ರಮ ಎದುರಿಸಬೇಕಾದೀತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇ-ಫಾರ್ಮಸಿಗೆ ವಿರೋಧ – ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್!

    ಬಂದ್ ಯಾಕೆ?
    ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರಲು ಹೊರಟಿರುವ ಇ-ಫಾರ್ಮಸಿ ವ್ಯವಸ್ಥೆಗೆ, ವಿರೋಧ ವ್ಯಕ್ತಪಡಿಸಿರುವ ಔಷಧಿ ಮಾರಾಟ ವ್ಯಾಪಾರಿಗಳು ಇಂದು ದೇಶಾದ್ಯಂತ ಬಂದ್‍ಗೆ ಕರೆ ನೀಡಿದ್ದಾರೆ. ಹೀಗಾಗಿ ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಮಧ್ಯರಾತ್ರಿಯವರೆಗೆ ದೇಶದ ಯಾವುದೇ ಮೆಡಿಕಲ್ ಶಾಪ್‍ಗಳು ಕಾರ್ಯನಿರ್ವಹಿಸುತ್ತಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇ-ಫಾರ್ಮಸಿಗೆ ವಿರೋಧ – ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್!

    ಇ-ಫಾರ್ಮಸಿಗೆ ವಿರೋಧ – ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್!

    ಬೆಂಗಳೂರು: ಕೇಂದ್ರ ಸರ್ಕಾರ ಇ-ಫಾರ್ಮಸಿ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿರುವುದಕ್ಕೆ ವಿರೋಧಿಸಿ ಅಖಿಲ ಭಾರತೀಯ ಔಷಧಿ ಮಾರಾಟ ವ್ಯಾಪಾರಿಗಳ ಸಂಘ ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿದೆ.

    ಹೌದು, ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರಲು ಹೊರಟಿರುವ ಇ-ಫಾರ್ಮಸಿ ವ್ಯವಸ್ಥೆಗೆ, ವಿರೋಧ ವ್ಯಕ್ತಪಡಿಸಿರುವ ಔಷಧಿ ಮಾರಾಟ ವ್ಯಾಪಾರಿಗಳು ಇಂದು ದೇಶಾದ್ಯಂತ ಬಂದ್‍ಗೆ ಕರೆ ನೀಡಿದ್ದಾರೆ. ಹೀಗಾಗಿ ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಮಧ್ಯರಾತ್ರಿಯ ವರೆಗೆ ದೇಶದ ಯಾವುದೇ ಮೆಡಿಕಲ್ ಶಾಪ್‍ಗಳು ಕಾರ್ಯನಿರ್ವಹಿಸುತ್ತಿಲ್ಲ.

    ಈ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗಿನಿಂದಲೇ ರಾಜಧಾನಿ ಬೆಂಗಳೂರಿನಲ್ಲಿಯೂ ಸಹ ಮೆಡಿಕಲ್ ಶಾಪ್ ಬಂದ್ ಬಿಸಿ ತಟ್ಟಿದೆ. ಮೆಡಿಕಲ್ ಶಾಪ್‍ಗಳು ಬಂದ್ ಆಗಿರುವ ಕಾರಣ, ತುರ್ತು ಔಷಧಿಗಾಗಿ ಜನರು ಪರದಾಟ ನಡೆಸುತ್ತಿದ್ದಾರೆ. ಅಲ್ಲದೇ ಕೆಲ ಆಸ್ಪತ್ರೆಗೆ ಹೊಂದಿಕೊಂಡಿರುವ ಮೆಡಿಕಲ್ ಶಾಪ್‍ಗಳು ಸಹ ಸಂಪೂರ್ಣವಾಗಿ ಸ್ಥಗಿತವಾಗಿದೆ.

    ಕರ್ನಾಟಕ ರಾಜ್ಯದಲ್ಲಿ ಒಟ್ಟು 24 ಸಾವಿರ ಮೆಡಿಕಲ್ ಹಾಗೂ ಬೆಂಗಳೂರಿನಲ್ಲಿ ಆರೂವರೆ ಸಾವಿರಕ್ಕೂ ಹೆಚ್ಚು ಮೆಡಿಕಲ್ ಶಾಪ್‍ಗಳು ಬಂದ್ ಆಗಲಿದೆ. ಇನ್ನು ದೇಶಾದ್ಯಂತ ಸುಮಾರು 85 ಲಕ್ಷ ಮೆಡಿಕಲ್ ಶಾಪ್ ಗಳು ಸಹ ಬಂದ್ ಸಂಪೂರ್ಣ ಬೆಂಬಲ ಸೂಚಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಡಿಯೋ: ಮೆಡಿಕಲ್ ಶಾಪಲ್ಲಿ ನಗದು ಸಿಗದೆ ಪರ್ಫ್ಯೂಮ್ ಬಾಟಲಿ ಕದ್ದೊಯ್ದ ಖದೀಮರು

    ವಿಡಿಯೋ: ಮೆಡಿಕಲ್ ಶಾಪಲ್ಲಿ ನಗದು ಸಿಗದೆ ಪರ್ಫ್ಯೂಮ್ ಬಾಟಲಿ ಕದ್ದೊಯ್ದ ಖದೀಮರು

    ತುಮಕೂರು: ನಗರದ ಎಂಜಿ ರಸ್ತೆಯಲ್ಲಿರುವ ಶ್ರೀನಿವಾಸ್ ಮೆಡ್ ಪ್ಲಸ್ ಅಂಗಡಿಯಲ್ಲಿ ತಡರಾತ್ರಿ ಕಳ್ಳತನವಾಗಿದೆ. ಈ ಹೈಫೈ ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಇಬ್ಬರು ಕಳ್ಳರು ಶೆಟ್ಟರ್ ಮೀಟಿ ಒಳನುಗ್ಗುತ್ತಾರೆ. ಇದರಲ್ಲಿ ಓರ್ವ ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಕ್ಯಾಪ್ ಧರಿಸಿಕೊಂಡು ಗುರುತು ಸಿಗದಂತೆ ಬಂದು ಕಳ್ಳತನ ಮಾಡಿದ್ದಾನೆ. ಕೆಲ ಹೊತ್ತು ಅಂಗಡಿಯಲ್ಲಿ ಹುಡುಕಾಡಿದ್ರೂ ಕಳ್ಳರಿಗೆ ಏನೂ ಸಿಕ್ಕಿಲ್ಲ.

    ಮೆಡಿಕಲ್ ಶಾಪಲ್ಲಿ ನಗದು ಇಲ್ಲದಿದ್ದರಿಂದ ಕೇವಲ ಮೂರು ಪರ್ಫ್ಯೂಮ್ ಬಾಟಲಿ ಕದ್ದೊಯ್ದಿದಾರೆ. ಕಳ್ಳತನದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=jM05ymKnj1Q&feature=youtu.be

  • ಹೈವೇಯಲ್ಲಿದ್ದ ಬಾರ್ ಕ್ಲೋಸ್ ಆದ್ರೇನು ಮೆಡಿಕಲ್ ಶಾಪಲ್ಲಿ ಮದ್ಯ ಸಿಗ್ತಿತ್ತು!

    ಹೈವೇಯಲ್ಲಿದ್ದ ಬಾರ್ ಕ್ಲೋಸ್ ಆದ್ರೇನು ಮೆಡಿಕಲ್ ಶಾಪಲ್ಲಿ ಮದ್ಯ ಸಿಗ್ತಿತ್ತು!

    ಕಾಸರಗೋಡು: ಸುಪ್ರೀಂ ಕೋರ್ಟ್ ಆದೇಶದ ಅನ್ವಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಆದ್ರೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೇರಳದಲ್ಲಿ ಮೆಡಿಕಲ್ ಶಾಪ್‍ನಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಕಾಸರಗೋಡು ಜಿಲ್ಲೆಯ ಬಂದ್ಯೋಡ್ ಎಂಬಲ್ಲಿರುವ ಮೆಡಿಕಲ್ ಶಾಪ್‍ನಲ್ಲಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಅಬಕಾರಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

    ಬೆಸ್ಟ್ ಮೆಡಿಕಲ್ ಶಾಪ್‍ನಲ್ಲಿ ಮದ್ಯ ಮಾರಾಟ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿಯನ್ನು ಆಧರಿಸಿ ಅಬಕಾರಿ ಪೊಲೀಸರು ಮಾರುವೇಷದಲ್ಲಿ ಬೆಸ್ಟ್ ಮೆಡಿಕಲ್ ಶಾಪ್‍ಗೆ ತೆರಳಿ ಮದ್ಯ ಕೇಳಿದ್ದಾರೆ. ಈ ವೇಳೆ ಪೊಲೀಸರಿಗೆ ಮದ್ಯ ಸಿಕ್ಕಿದ್ದು, ಕೂಡಲೇ ಮೆಡಿಕಲ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೂರಂಬೈಲ್ ಉದಯ್ ಎಂಬಾತನನ್ನು ಬಂಧಿಸಿದ್ದಾರೆ.

    ಇನ್ಸ್ ಪೆಕ್ಟರ್ ಪಿಜಿ ರಾಬಿನ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ಅಬಕಾರಿ ಪೊಲೀಸರು ಕರ್ನಾಟಕದಲ್ಲಿ ತಯಾರಾಗಿರುವ 49 ಬಾಟಲ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

    ಸುಪ್ರೀಂ ಹೇಳಿದ್ದು ಏನು?
    ಮದ್ಯಪಾನದಿಂದಾಗಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 2017ರ ಏಪ್ರಿಲ್ 1ರ ಒಳಗಡೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಎರಡೂ ಬದಿಯ 500 ಮೀಟರ್ ವ್ಯಾಪ್ತಿಯಲ್ಲಿನ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಆದೇಶ ನೀಡಿತ್ತು. ಅಷ್ಟೇ ಅಲ್ಲದೇ ಈ ಮದ್ಯದ ಅಂಗಡಿಗಳ ಪರಾವನಗಿಗಳನ್ನು ಮಾರ್ಚ್ 31ರ ಬಳಿಕ ನವೀಕರಿಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರ ನೇತೃತ್ವದ ಪೀಠ ಹೇಳಿತ್ತು.

      ಫೋಟೋ ಕೃಪೆ: ಕಾಸರಗೋಡುವಾರ್ತಾ.ಕಾಂ