Tag: medical officer

  • ಜಿಲ್ಲಾಧಿಕಾರಿ ಸಭೆಗೆ ಗೈರಾದ ತಾಲೂಕು ವೈದ್ಯಾಧಿಕಾರಿಗಳು ಅಮಾನತು

    ಜಿಲ್ಲಾಧಿಕಾರಿ ಸಭೆಗೆ ಗೈರಾದ ತಾಲೂಕು ವೈದ್ಯಾಧಿಕಾರಿಗಳು ಅಮಾನತು

    ರಾಯಚೂರು: ಜಿಲ್ಲೆಯಲ್ಲಿನ ಗರ್ಭಿಣಿ ತಾಯಿ ಹಾಗು ಶಿಶು ಮರಣ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳು ಕರೆದಿದ್ದ ಸಭೆಗೆ ಗೈರಾದ ಇಬ್ಬರು ತಾಲೂಕು ವೈದ್ಯಾಧಿಕಾರಿಗಳು ಅಮಾನತ್ತಾಗಿದ್ದಾರೆ.

    ದೇವದುರ್ಗ ತಾಲೂಕು ವೈದ್ಯಾಧಿಕಾರಿ ಡಾ.ಬನದೇಶ್, ಸಿಂಧನೂರು ತಾಲೂಕು ವೈದ್ಯಾಧಿಕಾರಿ ಅಯ್ಯನಗೌಡ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣಗೆ ಅಮಾನತ್ತು ಆದೇಶ ಹೊರಡಿಸುವಂತೆ ಸೂಚಿಸಿದ್ದಾರೆ. ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಗೆ ಸಿಂಧನೂರು ಹಾಗೂ ದೇವದುರ್ಗ ಟಿಎಚ್‍ಓಗಳು ಗೈರು ಹಾಜರಾಗಿದ್ದರು. ಇದನ್ನೂ ಓದಿ: ತನ್ನ ಕಥೆಯನ್ನು ಪಠ್ಯದಿಂದ ಕೈ ಬಿಡಿ: ದೇವನೂರು ಮಹಾದೇವ 

    ತಾಯಿ ಶಿಶು ಮರಣ ಆಡಿಟ್ ಕಮಿಟಿಯಲ್ಲಿ ಕಳೆದ ಒಂದು ವರ್ಷದ ಮರಣಗಳ ಬಗ್ಗೆ ಆಡಿಟ್ ಮಾಡಬೇಕಿತ್ತು. ಆದರೆ ಅಧಿಕಾರಿಗಳ ಗೈರು ಹಾಜರಿಯಿಂದ ಕೈಗೆತ್ತಿಕೊಂಡ 16 ಪ್ರಕರಣಗಳಲ್ಲಿ ಕೇವಲ 5 ಪ್ರಕರಣಗಳ ಬಗ್ಗೆ ಮಾತ್ರ ಚರ್ಚೆ ಮಾಡಲಾಯಿತು. ಮೆಟರನಿಟಿ ಸಾವುಗಳನ್ನು ತಡೆಯುವ ನಿಟ್ಟಿನಲ್ಲಿ ಕರೆಯಲಾಗಿದ್ದ ಜಿಲ್ಲಾ ಮಟ್ಟದ ಪ್ರಮುಖ ಸಭೆಗೆ ಗೈರಾಗಿದ್ದಕ್ಕೆ ಜಿಲ್ಲಾಧಿಕಾರಿಗಳು ಗರಂ ಆಗಿದ್ದು, ಅಮಾನತ್ತು ಆದೇಶ ಹೊರಡಿಸಿದ್ದಾರೆ.

    ಅಧಿಕಾರಿಗಳ ಗೈರು ಹಾಜರಿ ಬಗ್ಗೆ ಪರಿಶೀಲನಾ ವರದಿ ನೀಡುವಂತೆ ಲಿಂಗಸುಗೂರು ಹಾಗೂ ರಾಯಚೂರು ಸಹಾಯಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಮುಂದೆಯೂ ಪ್ರಮುಖ ಸಭೆಗಳಿಗೆ ಗೈರಾದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮೇ 26 ರಿಂದ ಮಸೀದಿ ಪರ ಅರ್ಜಿ ವಿಚಾರಣೆ, ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್ ಆದೇಶ

  • ವೈದ್ಯಕೀಯ ಸಲಕರಣೆ ನೀಡದ್ದಕ್ಕೆ ವೈದ್ಯಾಧಿಕಾರಿ ವಿರುದ್ಧ ಸ್ಪೀಕರ್ ಕೆಂಡಾಮಂಡಲ

    ವೈದ್ಯಕೀಯ ಸಲಕರಣೆ ನೀಡದ್ದಕ್ಕೆ ವೈದ್ಯಾಧಿಕಾರಿ ವಿರುದ್ಧ ಸ್ಪೀಕರ್ ಕೆಂಡಾಮಂಡಲ

    ಕೋಲಾರ: ಶಟಪ್, ನೀವೆಲ್ಲಾ ಸ್ಕೌಂಡ್ರಲ್ಸ್. ನಿಮಗೆ ಈಗಲೇ ಏನಾದರು ಆಗುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಜಿಲ್ಲಾ ವೈದ್ಯಾಧಿಕಾರಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

    ಇಂದು ಬೆಳಗ್ಗೆ ಆಯುರ್ವೇದ ಆಸ್ಪತ್ರೆ ಹಾಗೂ ಕ್ಷೇತ್ರದ ಸಮಸ್ಯೆ ಪರಿಶೀಲನೆ ನಡೆಸಿದ ರಮೇಶ್ ಕುಮಾರ್, ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಸೂಕ್ತ ವೈದ್ಯಕೀಯ ಉಪಕರಣಗಳನ್ನು ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಬಡ ರೋಗಿಗಳ ಸೇವೆಗೆ ಬೇಕಾದ ಉಪಕರಣಗಳನ್ನು ನೀಡಲು ನಿಮಗೇನು ಕಷ್ಟ? ಶಟಪ್ ನೀವೆಲ್ಲ ಸ್ಕೌಂಡ್ರಲ್ಸ್, ನಿಮಗೆಲ್ಲ ಮಾನವೀಯತೆ ಇದೆಯಾ? ಬಡತನದ ಬಗ್ಗೆ ಕಿಂಚಿತ್ತಾದರೂ ಕರುಣೆ ಇದೆಯಾ? ಭಗವಂತ ಏನಾದರೂ ಇದ್ದರೆ, ನಿಮಗೆಲ್ಲ ಈಗಿಂದಿಗಲೇ ಏನಾದರೂ ತೊಂದರೆಯಾಗುತ್ತದೆ ಎಂದು ಹೇಳಿ ಕೆಂಡಾಮಂಡಲರಾಗಿದ್ದಾರೆ.

    ಒಂದೆಡೆ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರದ ವಿಚಾರದಲ್ಲಿ ಸುದ್ದಿಯಾಗುತ್ತಿರುವ ರಮೇಶ್ ಕುಮಾರ್ ಕ್ಷೇತ್ರದ ಸಮಸ್ಯೆ ಪರಿಶೀಲನೆ ವೇಳೆ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಸಲಕರಣೆಗಳಿಲ್ಲದ್ದನ್ನು ಕಂಡು ಇನ್ನೂ ಸಿಟ್ಟಾಗಿದ್ದಾರೆ.

    ಜಿಲ್ಲಾ ವೈದ್ಯಾಧಿಕಾರಿ ಡಾ.ವಿಜಯ್ ಕುಮಾರ್ ಸ್ಪಷ್ಟನೆ ನೀಡಲು ಬಂದರೂ ಸಹ, ಕೇಳದ ಸ್ಪೀಕರ್ ರಮೇಶ್ ಕುಮಾರ್ ಸಿಕ್ಕಾಪಟ್ಟೆ ತರಾಟೆ ತೆಗದುಕೊಂಡಿದ್ದಾರೆ. ಅಗತ್ಯವಿರುವ ಔಷಧಿ ಹಾಗೂ ವೈದ್ಯಕೀಯ ಉಪಕರಣಗಳನ್ನು ಕಳುಹಿಸಲಾಗಿದೆ ಎಂದು ಹೇಳಿದರೂ ಸಹ, ಶಟಪ್ ಸ್ಕೌಂಡ್ರಲ್ ಎಂದು ಬೈಯ್ಯುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

  • ಮಹಿಳಾ ಸಿಬ್ಬಂದಿಗೆ ಮೆಮೋ ಕೊಟ್ಟಿದ್ದಕ್ಕೆ ವೈದ್ಯಾಧಿಕಾರಿಗೆ ಅವಾಜ್ ಹಾಕಿದ ಜೆಡಿಎಸ್ ಶಾಸಕ

    ಮಹಿಳಾ ಸಿಬ್ಬಂದಿಗೆ ಮೆಮೋ ಕೊಟ್ಟಿದ್ದಕ್ಕೆ ವೈದ್ಯಾಧಿಕಾರಿಗೆ ಅವಾಜ್ ಹಾಕಿದ ಜೆಡಿಎಸ್ ಶಾಸಕ

    ಮಂಡ್ಯ: ಮಹಿಳಾ ಸಿಬ್ಬಂದಿಗೆ ಮೆಮೋ ನೀಡಿದ್ದಕ್ಕೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಜೆಡಿಎಸ್ ಶಾಸಕ ಕೆ.ಸಿ.ನಾರಾಯಣ ಗೌಡ ಸರ್ಕಾರಿ ವೈದ್ಯಾಧಿಕಾರಿಗೆ ಕರೆ ಮಾಡಿ ಅವಾಜ್ ಜೊತೆಗೆ ಬೆದರಿಕೆ ಹಾಕಿದ್ದಾರೆ.

    ಮದ್ದೂರು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಮುರಳಿಕೃಷ್ಣ ಅವರಿಗೆ ಕೆ.ಸಿ.ನಾರಾಯಣ ಗೌಡ ಕರೆ ಮಾಡಿ ಆವಾಜ್, ಬೆದರಿಕೆ ಹಾಕಿದ್ದಾರೆ. ಮದ್ದೂರು ಸಾರ್ವಜನಿಕ ಆಸ್ಪತ್ರೆಯ ಕ್ಲರ್ಕ್ ಆಗಿರುವ ತುಳಸಿ ಅವರಿಗೆ ನಿಧಾನಗತಿಯಲ್ಲಿ ಸಾಗುತ್ತಿದ್ದ ಕೆಲವನ್ನು ಆದಷ್ಟು ಬೇಗನೆ ಮುಗಿಸಿ ಎಂದು ವೈದ್ಯಾಧಿಕಾರಿ ಮೆಮೋ ಕೊಟ್ಟಿದ್ದರು.

    ಈ ವಿಚಾರವಾಗಿ ವೈದ್ಯಾಧಿಕಾರಿಗೆ ಶಾಸಕ ಕರೆ ಮಾಡಿ, ಊರಿಗೆ ಹೋಗಬೇಕಾ, ಇಲ್ಲ ಕೈ ಕಾಲು ಮುರಿಸಿಕೊಳ್ಳಬೇಕಾ ನೀನು? ಒಬ್ಬ ಹೆಣ್ಣು ಮಗಳಿಗೆ ಏನು ಮಾತಾಡಿದ್ದೀಯ ನೀನು? 8 ಗಂಟೆಗೆ ಡ್ಯೂಟಿಗೆ ಕರೆಯೋಕೆ ನಿನಗೆ ಏನು ಅಧಿಕಾರವಿದೆ? ಆ ಹೆಣ್ಣು ಮಗಳ ಹತ್ತಿರ ಮೊದಲು ಕ್ಷಮೆ ಕೇಳು. ಆಮೇಲೆ ಡ್ಯೂಟಿಗೆ ಬಾ ನೀನು. ಇಲ್ಲ ಅಂದರೆ ಬೇರೆ ಥರ ಆಗುತ್ತೆ. ಯಾವ ಮೂಲೆಯಲ್ಲಿ ಇದ್ದರೂ ಬಿಡಲ್ಲ ಮಂಡ್ಯದವರು ನಾವು ಎಂದು ಆವಾಜ್ ಹಾಕಿದ್ದಾರೆ.

    ನಾಳೆ ಬೆಳಿಗ್ಗೆ 8-9 ಗಂಟೆಗೆ ಬಂದು ನನಗೆ ಸಿಗಬೇಕು ನೀನು. ಏನ್ ತಿಳ್ಕೊಂಡಿದಿಯಪ್ಪ? ಯಾವ ಊರು? ಏನ್ ಬ್ಯಾಕ್ ಗ್ರೌಂಡ್ ನಿಂದು? ಎಲ್ಲಿಯವನು ನೀನು? ಬೆಂಗಳೂರಲ್ಲಿ ಯಾರ ಕುಟುಂಬದಲ್ಲಿ ಹುಟ್ಟಿದ್ದೀಯ ನೀನು? ತಂದೆ-ತಾಯಿ, ಸಿಸ್ಟರ್ ಇಲ್ಲವಾ ನಿನಗೆ ಎಂದು ಹೇಳಿ ಕ್ಲಾಸ್ ತೆಗೆದುಕೊಂಡಿದ್ದಾರೆ.