Tag: meat

  • ಮಾಂಸಾಹಾರ ಸೇವಿಸಬೇಡಿ ಎಂದಿದ್ದಕ್ಕೆ ನಿವೃತ್ತ ಪೊಲೀಸ್ ಆತ್ಮಹತ್ಯೆ!

    ಮಾಂಸಾಹಾರ ಸೇವಿಸಬೇಡಿ ಎಂದಿದ್ದಕ್ಕೆ ನಿವೃತ್ತ ಪೊಲೀಸ್ ಆತ್ಮಹತ್ಯೆ!

    ಮಡಿಕೇರಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮಾನಸಿಕವಾಗಿ ನೊಂದವರೇ ಹೆಚ್ಚು ಇರುತ್ತಾರೆ. ಆದರೆ ಮಾಂಸಾಹಾರ ಸೇವನೆ ಮಾಡಬೇಡಿ ಎಂದು ಸಲಹೆ ನೀಡಿದ್ದಕ್ಕೆ ನಿವೃತ್ತ ಪೊಲೀಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಬಲಮುರಿ ನಿವಾಸಿ ಬೆಳ್ಳಿಯಪ್ಪ (64) ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬೆಳ್ಳಿಯಪ್ಪ ಕಳೆದ ಹಲವು ವರ್ಷಗಳಿಂದ ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಇದಕ್ಕೆ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇತ್ತೀಚೆಗೆ ಡಾಕ್ಟರ್ ನೀವು ಮಾಂಸಾಹಾರ ಸೇವನೆ ಮಾಡಬಾರದು ಅಂತ ಸಲಹೆ ನೀಡಿದ್ದಾರೆ.

    ವೈದ್ಯರು ಮಾಂಸಾಹಾರವನ್ನು ತ್ಯಜಿಸಬೇಕು ಎಂದು ಸಲಹೆ ನೀಡಿದ ಬಳಿಕ ಬೆಳ್ಳಿಯಪ್ಪ ಮಾನಸಿಕ ಖಿನ್ನತೆಗೆ ಜಾರಿದ್ದರು. ಸೋಮವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ನಾಪೊಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮರುನಾಮಕರಣ ಬೆನ್ನಲ್ಲೇ ಅಯೋಧ್ಯಾದಲ್ಲಿ ಮದ್ಯ, ಮಾಂಸಹಾರ ನಿಷೇಧಕ್ಕೆ ಯೋಗಿ ಸರ್ಕಾರ ಚಿಂತನೆ

    ಮರುನಾಮಕರಣ ಬೆನ್ನಲ್ಲೇ ಅಯೋಧ್ಯಾದಲ್ಲಿ ಮದ್ಯ, ಮಾಂಸಹಾರ ನಿಷೇಧಕ್ಕೆ ಯೋಗಿ ಸರ್ಕಾರ ಚಿಂತನೆ

    ಲಕ್ನೋ: ಫೈಜಾಬಾದ್ ನಗರವನ್ನು ಅಯೋಧ್ಯಾ ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಮದ್ಯ ಹಾಗೂ ಮಾಂಸಹಾರ ಮಾರಾಟವನ್ನು ನಿಷೇಧ ಮಾಡಲು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಸ್ಥಳೀಯ ಶ್ರೀಗಳಿಂದ ಜಿಲ್ಲೆಯಲ್ಲಿ ಮದ್ಯ ಹಾಗೂ ಮಾಂಸಹಾರ ನಿಷೇಧ ಮಾಡುವಂತೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸರ್ಕಾರದ ಈ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಉತ್ತರ ಪ್ರದೇಶ ಸರ್ಕಾರದ ವಕ್ತಾರ ಶ್ರೀಕಾಂತ್ ಶರ್ಮಾ, ಸ್ಥಳೀಯ ಶ್ರೀಗಳು ಸರ್ಕಾರ ಮುಂದಿಟ್ಟಿರುವ ಬೇಡಿಕೆ ಬಗ್ಗೆ ನಮಗೆ ಅರಿವಿದೆ. ಸರ್ಕಾರ ಕಾನೂನಾತ್ಮಕವಾಗಿ ಮದ್ಯ ಹಾಗೂ ಮಾಂಸಮಾರಾಟ ನಿಷೇಧ ಮಾಡಲಿದೆ ಎಂದು ತಿಳಿಸಿದ್ದಾರೆ.

    ಅಯೋಧ್ಯಾ ನಗರ ಧಾರ್ಮಿಕ ಕೇಂದ್ರವಾಗಿದ್ದು, ಇಂತಹ ನಗರದಲ್ಲಿ ಮದ್ಯ ಹಾಗೂ ಮಾಂಸ ಮಾರಾಟ ಮಾಡಬಾರದು. ಇವುಗಳನ್ನು ನಿಷೇಧ ಮಾಡುವುದು ನಗರದ ಜನತೆಗೆ ಆರೋಗ್ಯಕರ ಜೀವನ ಶೈಲಿ ಮಾಡಲು ಕಾರಣವಾಗಲಿದೆ. ಇದರಿಂದ ನಗರದ ಸ್ವಚ್ಛತೆ ಹೆಚ್ಚಾಗಲಿದ್ದು, ಮಾಲಿನ್ಯ ಕಡಿಮೆ ಮಾಡಿ ಶುದ್ಧತೆಯ ಭಾವನೆ ಮೂಡಿಸುತ್ತದೆ ಎಂದು ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.

    ಸತ್ಯೇಂದ್ರ ದಾಸ್ ಅವರ ಹೇಳಿಕೆಗೆ ಹಲವು ಶ್ರೀಗಳು ತಮ್ಮ ಸಹಮತಿಯನ್ನು ವ್ಯಕ್ತಪಡಿಸಿದ್ದು, ಇಡೀ ಜಿಲ್ಲೆಗೆ ಅನ್ವಯ ಆಗುವಂತೆ ಇದನ್ನು ನಿಷೇಧ ಮಾಡಬೇಕು ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಾಬ್ರಿ ಮಸೀದಿ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಮೊಹಮ್ಮದ್ ಇಕ್ಭಾಲ್ ಅನ್ಸಾರಿ ಅವರು ಈ ಕುರಿತು ರಾಜ್ಯ ಸರ್ಕಾರವೇ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

    ಆಯೋಧ್ಯಾನಗರದಲ್ಲಿ ಮದ್ಯ ಮತ್ತು ಮಾಂಸಹಾರ ಮಾರಾಟ ನಿಷೇಧ ಕ್ರಮದ ಕುರಿತು ಸಾರ್ವಜನಿಕರ ವಲಯದಿಂದ ಮಿಶ್ರಾ ಪ್ರತಿಕ್ರಿಯೆ ಕೇಳಿಬಂದಿದ್ದು, ಎರಡು ಉದ್ಯಮಗಳಲ್ಲಿ ತೊಡಗಿರುವವರು ಸರ್ಕಾರ ಚಿಂತನೆ ತಪ್ಪು. ಈಗಾಗಲೇ ನಗರದಲ್ಲಿ 200 ರಿಂದ 250 ಮಾಂಸ ಮಾರಾಟ ಮಳಿಗೆಗಳಿದ್ದು, ಕೇವಲ ಹೆಸರು ಬದಲಿಸಿದ ಮಾತ್ರಕ್ಕೆ ಇಂತಹ ನಿರ್ಧಾರ ಮಾಡುವುದು ಉತ್ತಮವಲ್ಲ. ಇದರಿಂದ ನಮ್ಮಂತಹ ಕುಟುಂಬಗಳು ಆದಾಯವನ್ನು ಕಳೆದುಕೊಳ್ಳಲಿದೆ. ಸರ್ಕಾರ ಈ ನಿರ್ಧಾರ ಕೈಗೊಂಡರೆ ನಮಗೇ ಸೂಕ್ತ ಉದ್ಯೋಗ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮಂಡ್ಯದಲ್ಲಿ ಆಷಾಢ ವಿಶೇಷ ಪೂಜೆ – ಹರಿಸೇವೆ ಬಳಿಕ ತಾವರೆ ಎಲೆಯಲ್ಲಿಯೇ ಊಟ

    ಮಂಡ್ಯದಲ್ಲಿ ಆಷಾಢ ವಿಶೇಷ ಪೂಜೆ – ಹರಿಸೇವೆ ಬಳಿಕ ತಾವರೆ ಎಲೆಯಲ್ಲಿಯೇ ಊಟ

    ಮಂಡ್ಯ: ಆಷಾಢ ಮಾಸ ಅಂದರೆ ಆದಿ ಶಕ್ತಿ, ಚಾಮುಂಡೇಶ್ವರಿ ಸೇರಿದಂತೆ ಶಕ್ತಿ ದೈವ ಆರಾಧಿಸುವುದು ವಿಶೇಷ. ಆದರೆ ಜಿಲ್ಲೆಯ ಆಬಲವಾಡಿಯಲ್ಲಿ ಇದಕ್ಕೆ ತದ್ವಿರುದ್ಧವಾಗಿದೆ. ಯಾಕೆಂದರೆ ಇಲ್ಲಿ ಹರಿಸೇವೆ ಮಾಡುತ್ತಾರೆ.

    ಜಿಲ್ಲೆಯ ಮದ್ದೂರು ತಾಲೂಕಿನ ಅಬಲವಾಡಿ ಗ್ರಾಮದಲ್ಲಿರೋ ತಿಮ್ಮಪ್ಪ ದೇವರಿಗೆ ಆಷಾಢ ಮಾಸದ ಮೊದಲ ಶನಿವಾರ ವಿಶೇಷ ಪೂಜೆಯನ್ನು ಗ್ರಾಮಸ್ಥರು ಸೇರಿದಂತೆ ದೇವರ ಮನೆತನದವರು ಮಾಡಿಕೊಂಡು ಬರುತ್ತಿದ್ದಾರೆ. ಈ ವಿಶೇಷ ಪೂಜೆ ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿರುವುದು ವಿಶೇಷ. ಈ ಬಾರಿಯೂ ಶನಿವಾರ ರಾತ್ರಿಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ ಪ್ರಾರಂಭಗೊಂಡು, ಶನಿವಾರ ರಾತ್ರಿಯೆಲ್ಲಾ ಗ್ರಾಮದಲ್ಲಿ ತೋಪಿನ ತಿಮ್ಮಪ್ಪನ ಉತ್ಸವ ಮೂರ್ತಿಯನ್ನು ಗ್ರಾಮದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.

    ಈ ತಿಮ್ಮಪ್ಪನ ಆರಾಧಕರು ಉತ್ಸವ ಮೂರ್ತಿಯನ್ನು ಒತ್ತು ಮೆರವಣಿಗೆ ಮಾಡಿ ಹರಕೆ ತೀರಿಸಿದರು. ನಂತರ ಮುಂಜಾನೆಯೇ ಇಲ್ಲಿ ಬಂದ ಭಕ್ತರಿಗೆ ವಿಶೇಷವಾಗಿ ಪ್ರಸಾದವನ್ನು ನೀಡಲಾಯಿತು. ಪ್ಲಾಸ್ಟಿಕ್ ಮುಕ್ತ ಮಾಡುವ ಉದ್ದೇಶದಿಂದ ಈ ಬಾರಿ ಪ್ರಸಾದ ಸೇವಿಸುವ ಭಕ್ತರಿಗೆ ಸ್ವಯಂ ಸೇವಕರಿಂದ ಸ್ಟೀಲ್ ಲೋಟದಲ್ಲಿ ನೀರು ನೀಡಲಾಯಿತು.

    ದೇವರ ಉತ್ಸವ ಆರಂಭ ಆಗುತ್ತಿದ್ದಂತೆ ಟನ್ ಗಟ್ಟಲೆ ಅನ್ನವನ್ನು ಬೇಯಿಸುವ ಜೊತೆಗೆ ಕೊಪ್ಪರಿಕೆಗಳಲ್ಲಿ ಸಾಂಬಾರು ಮಾಡಿ ಸಿದ್ಧ ಮಾಡಿಕೊಳ್ಳಲಾಗುತ್ತದೆ. ನಂತರ ದೇವರ ಪೂಜೆ ಸಲ್ಲಿಸಿದ ನಂತರ ದೇವಸ್ಥಾನದ ಸುತ್ತ ಭಕ್ತರಿಗೆ ಪ್ರಸಾದದ ಹಂಚಿಕೆ ಕಾರ್ಯ ಆರಂಭ ಆಗುತ್ತದೆ. ಇಲ್ಲೆಗೆ ಬಂದ ಭಕ್ತರಿಗೆ ತಾವರೆ ಎಲೆಯಲ್ಲಿ ಪ್ರಸಾದ ಹಂಚಿಕೆ ಮಾಡೋದು ಇಲ್ಲಿನ ವಿಶೇಷ. ಎಲ್ಲರನ್ನೂ ಸರಥಿ ಸಾಲಿನಲ್ಲಿ ಕೂರಿಸಿ, ತಾವರೆ ಎಲೆಯನ್ನು ಮೊದಲು ಕೊಡಲಾಗುತ್ತದೆ. ನಂತರ ದೊಡ್ಡದೊಡ್ಡ ಪಾತ್ರೆಗಳಲ್ಲಿ ಒಮ್ಮೆ ಮಾತ್ರ ಅನ್ನವನ್ನು ಎಲೆಗೆ ಬಡಿಸಲಾಗುತ್ತದೆ. ಹಿಂದೆಯಿಂದಲೇ ಸಾಂಬರು ಹಾಕಲಾಗುತ್ತದೆ. ಮತ್ತೊಂದು ವಿಚಾರ ಅಂದರೆ ಇಲ್ಲಿ ಎಲ್ಲರಿಗೂ ಹಿಡಿ ಅನ್ನ ಹಾಕೋದು. ಒಮ್ಮೆ ಹಾಕಿದರೆ ಇಡೀ ತಾವರೆ ಎಲೆಯ ತುಂಬೆಲ್ಲಾ ಈ ಹಿಡಿ ಅನ್ನ ಹರಡಿಕೊಳ್ಳುತ್ತದೆ ಎಂದು ಅರ್ಚಕ ಹರಿಪ್ರಸಾದ್ ಹೇಳಿದ್ದಾರೆ.

    ಈ ಉತ್ಸವದಲ್ಲಿ ಮಂಡ್ಯ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ಸಾವಿರಾರು ಜನರು ಬಂದು ಪಾಲ್ಗೊಂಡಿದ್ದರು. ಈ ದೇವರ ಮನೆತನದವರು ಪ್ರತಿ ವರ್ಷ ಬಂದು ತಾವರೆ ಎಲೆ ಊಟ ಮಾಡಿ, ಪೂಜೆ ಸಲ್ಲಿಸಿದರೆ ಹರಕೆ ತೀರಿಸಿದಂತೆ ಎಂಬ ಪ್ರತೀತಿಯಿದ್ದು, ಈ ವರ್ಷವೂ ತೋಪಿನ ತಿಮ್ಮಪ್ಪನ ಹರಿಸೇವೆ ಅದ್ಧೂರಿಯಾಗಿ ನಡೆದಿದೆ.

  • ನಾನ್ ವೆಜ್ ತಿಂತೀರಾ? ಎಚ್ಚರ.. ಮಟನ್, ಜಿಂಕೆ, ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಕೊಡ್ತಾರೆ!

    ನಾನ್ ವೆಜ್ ತಿಂತೀರಾ? ಎಚ್ಚರ.. ಮಟನ್, ಜಿಂಕೆ, ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಕೊಡ್ತಾರೆ!

    ವಿಜಯವಾಡ: ನಿಮಗೆ ಮಟನ್ ಅಂದ್ರೆ ತುಂಬಾ ಇಷ್ಟಾನಾ..? ವೀಕೆಂಡಲ್ಲಿ ಯಾಕೆ ಮಟನ್ ಹೆಸರೇಳಿ ಬಾಯಲ್ಲಿ ನೀರೂರಿಸ್ತಿದೀರಿ ಅಂದ್ಕೋತಿದೀರಾ.. ಕಾರಣವಿದೆ, ಇನ್ಮುಂದೆ ಹೋಟೆಲ್ ಗೆ ಹೋಗಿ ನಾನ್ ವೆಜ್ ತಿನ್ನಬೇಕಾದರೆ ಸ್ವಲ್ಪ ಜಾಗರೂಕರಾಗಿರಿ. ಯಾಕೆಂದರೆ ನಿಮಗೆ ಮಟನ್ ಅಂತಾ ನಾಯಿ ಮಾಂಸವನ್ನು ಕೊಟ್ಟರೂ ಕೊಡಬಹುದು. ಅದರಲ್ಲೂ ಆಂಧ್ರದ ಮೈಲಾವರಂಗೆ ಹೋದರೆ ಮಾತ್ರ ಯಾವ ಕಾರಣಕ್ಕೂ ನಾನ್ ವೆಜ್ ತಿನ್ನಲೇಬೇಡಿ.

    ಬೀದಿ ನಾಯಿಗಳನ್ನು ಹಿಡಿದು ಹಣಕ್ಕಾಗಿ ನಾಯಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೃಷ್ಣಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಜಿ.ಕೊಂಡೂರಿನ ಕೋಡೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

    ಏನಿದು ಘಟನೆ?: ಕೋಡೂರು ಗ್ರಾಮದ ಕಟ್ಟಾ ಆದಿನಾರಾಯಣ ಹಾಘೂ ದೇಗು ಲಕ್ಷ್ಮಣ ರಾವ್ ಎಂಬಿಬ್ಬರು ಕೆಲ ತಿಂಗಳಿಂದ ಬೀದಿ ನಾಯಿಗಳನ್ನು ಹಿಡಿಯೋದನ್ನೇ ಕಾಯಕ ಮಾಡಿದ್ದರು. ಆದರೆ ಕಳೆದ ಶುಕ್ರವಾರ ಇವರ ನಸೀಬು ಕೆಟ್ಟಿತ್ತು. ಅಂದು ಇವರು ನಾಯಿ ಹಿಡಿದು ಮಾಂಸವನ್ನು ಮಾರಾಟ ಮಾಡಿ ನಾಯಿಯ ಚರ್ಮವನ್ನು ಎಸೆಯಲು ಹೋಗುತ್ತಿದ್ದಾಗ ಗ್ರಾಮಸ್ಥರು ರೆಡ್ ಹ್ಯಾಂಡಾಗಿ ಇವರನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಈ ವೇಳೆ ಇಬ್ಬರು ಖತರ್ನಾಕ್ ಗಳು ತಾವು ಇದುವರೆಗೆ 20ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹಿಡಿದು ಅದರ ಮಾಂಸ ಮಾರಾಟ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

    ನಾಯಿ ಮಾಂಸವನ್ನೇ ಇವರು ಜಿಂಕೆ ಹಾಗೂ ಕುರಿ ಮಾಂಸ ಎಂದು ನಂಬಿಸಿ ಕೆಲವು ವ್ಯಕ್ತಿಗಳಿಗೆ ಹಾಗೂ ಹೋಟೆಲ್ ಗಳಿಗೆ ಮಾರಾಟ ಮಾಡುತ್ತಿದ್ದರು. ನಾಯಿ ಮಾಂಸದ ರುಚಿ ಹಿಡಿದ ಕೆಲವರು ಜಿಂಕೆ ಮಾಂಸವೆಂದು ಇವರ ಬಳಿ ಪದೇ ಪದೇ ಮಾಂಸಕ್ಕಾಗಿ ಬೇಡಿಕೆ ಇಡುತ್ತಿದ್ದರು. ಪ್ರತಿ ಕೆಜಿ ನಾಯಿ ಮಾಂಸಕ್ಕೆ ಇವರು 300 ರಿಂದ 400 ರೂ. ಪಡೆಯುತ್ತಿದ್ದರು. ಈ ಮೂಲಕ ಪ್ರತಿ ನಾಯಿಯನ್ನು ಕೊಂದು ಸರಾಸರಿ 3000 ರೂ. ಆದಾಯ ಗಳಿಸುತ್ತಿದ್ದರು. ಪ್ರಾಣಿ ಕಾಯ್ದೆ ಪ್ರಕಾರ ಇವರ ವಿರುದ್ಧ ದೂರು ದಾಖಲಿಸಿ ಪೊಲಿಸರು ತನಿಖೆ ಮುಂದುವರಿಸಿದ್ದಾರೆ. ಜೊತೆಗೆ ಇವರಿಂದ ಮಾಂಸ ಖರೀದಿ ಮಾಡುತ್ತಿದ್ದವರ ವಿವರವನ್ನೂ ಪಡೆದುಕೊಂಡಿದ್ದು ಅವರ ವಿಚಾರಣೆಯೂ ನಡೆಯಲಿದೆ ಎನ್ನಲಾಗಿದೆ. ಇವರಿಬ್ಬರೂ ಮೈಲಾವರಂ ಮತ್ತು ಅಕ್ಕಪಕ್ಕದ ಹಳ್ಳಿಗಳಿಗೆ ಮಾಂಸ ಪೂರೈಸುತ್ತಿದ್ದರು.

    ಪ್ರಕರಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿ.ಕೊಂಡೂರು ಎಸ್‍ಐ ಜಿ.ರಾಜೇಶ್ ನಾಯಿಗಳನ್ನು ಕೊಂದಿದ್ದಕ್ಕೆ ಹಾಗೂ ಪ್ರಾಣಿ ಹಿಂಸೆಗೆ ಕನಿಷ್ಠ 7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಸದ್ಯ ಪಶುವೈದ್ಯರು ಮಾಂಸದ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿ ಬಂದ ನಂತರ ಕ್ರಮಕೈಗೊಳ್ಳೋದಾಗಿ ಹೇಳಿದ್ದಾರೆ.

    https://www.youtube.com/watch?v=i-BbqCr-Org

  • ಮಾಂಸಾಹಾರ ತಿನ್ನುವಂತೆ ಪತಿಯಿಂದ ಕಿರುಕುಳ-ಮನನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ

    ಮಾಂಸಾಹಾರ ತಿನ್ನುವಂತೆ ಪತಿಯಿಂದ ಕಿರುಕುಳ-ಮನನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ

    ಹೈದರಾಬಾದ್: ಪತಿ ಮಾಂಸಾಹಾರ ಸೇವಿಸುವಂತೆ ಕಿರುಕುಳ ನೀಡುತ್ತಿದ್ದಕ್ಕೆ ಮನನೊಂದ ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಿಯಾಪುರ್‍ನಲ್ಲಿ ನಡೆದಿದೆ.

    23 ವರ್ಷದ ಶ್ವೇತಾ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಸಂಗಾರೆಡ್ಡಿ ಪಟ್ಟಣದ ಶ್ವೇತಾರನ್ನು ವಿಕರಾಬಾದ್ ನಿವಾಸಿ ಮರಿಚೆನ್ನ ರೆಡ್ಡಿ ಎಂಬರೊಂದಿಗೆ 2017 ಮೇ ನಲ್ಲಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಕೆಲ ತಿಂಗಳ ನಂತರ ಪತಿ ಮತ್ತು ಆತನ ತಂದೆ ತಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ.

    ಮದುವೆ ವೇಳೆ ಶ್ವೇತಾ ಪೋಷಕರು 4 ಲಕ್ಷ ರೂ. ಕ್ಯಾಶ್ ಮತ್ತು 10 ತೊಲಾ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು. ಮದುವೆ ಬಳಿಕ ಇನ್ನೂ ವರದಕ್ಷಿಣೆಯನ್ನು ನೀಡುವದಾಗಿ ಭರವಸೆಯನ್ನು ನೀಡಿದ್ದರು.

    ಈ ದಂಪತಿ ಮಿಯಾಪುರದಿಂದ ವಿಕರಾಬಾದ್‍ನ ಸಿರಿಪುರಂಗೆ ಸೆಪ್ಟಂಬರ್‍ನಲ್ಲಿ ಹೋಗಿ ವಾಸವಾಗಿದ್ದಾರೆ. ಅಲ್ಲಿ ಪತಿಯ ಪೋಷಕರು ಶ್ವೇತಾಗೆ ಮಾಂಸವನ್ನು ತಿನ್ನವಂತೆ ಬಲವಂತ ಮಾಡಿದ್ದಾರೆ. ಶ್ವೇತಾ ಸಸ್ಯಹಾರಿ ಆಗಿದ್ದರಿಂದ ಮಾಂಸವನ್ನು ತಿನ್ನಲು ನಿರಾಕರಿಸಿದ್ದಾರೆ. ಆದರೆ ಪತಿ ಬಿಡದೇ ಅವರ ಮುಂದೆ ಮಾಂಸ ಇಟ್ಟು ತಿನ್ನುವಂತೆ ಬಲವಂತ ಮಾಡಿದ್ದಾನೆ ಎಂದು ಪೊಲೀಸರು ತಿಳಿದ್ದಾರೆ.

    ಗಂಡನ ಮನೆಯವರ ಕಿರುಕುಳವನ್ನು ಸಹಿಸಿಕೊಳ್ಳಲಾಗದೇ ಶ್ವೇತಾ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಡ ಮತ್ತು ಆತನ ತಂದೆ-ತಾಯಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ್ದಾರೆ.

     

  • ಬೀಫ್ ರಫ್ತಿನಲ್ಲಿ ಭಾರತ ನಂಬರ್ 1 ಅನ್ನೋದು ಸುಳ್ಳು: ನಿರ್ಮಲಾ ಸೀತಾರಾಮನ್

    ಬೀಫ್ ರಫ್ತಿನಲ್ಲಿ ಭಾರತ ನಂಬರ್ 1 ಅನ್ನೋದು ಸುಳ್ಳು: ನಿರ್ಮಲಾ ಸೀತಾರಾಮನ್

    ಉಡುಪಿ: ಬೀಫ್ ರಫ್ತಿನಲ್ಲಿ ಭಾರತ ನಂಬರ್ 1 ಎನ್ನುವುದು ಸುಳ್ಳು ಆರೋಪ ಎಂದು ಕೇಂದ್ರ ಕೈಗಾರಿಕಾ ಮತ್ತು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಇದೊಂದು ತಪ್ಪು ಕಲ್ಪನೆ. ಬೀಫ್ ಅಂದ್ರೆ ದನದ ಮಾಂಸ. ದನದ ಮಾಂಸ ರಫ್ತು ಮಾಡೋದು ನಿಷೇಧವಾಗಿದೆ. ಆದ್ರೆ ನಮ್ಮಿಂದ ರಫ್ತಾಗುತ್ತಿರುವುದು ಖಾರ ಬೀಫ್ ಎಂದು ತಿಳಿಸಿದರು.

    ಖಾರ ಬೀಫ್ ಅಂದ್ರೆ ಎಮ್ಮೆ ಮತ್ತು ಕೋಣದ ಮಾಂಸ. ಖಾರ ಬೀಫ್ ರಫ್ತು ನಿಷೇಧವಾಗಿಲ್ಲ. ಇಷ್ಟಾದ್ರೂ ಗೊಂದಲ ಸೃಷ್ಟಿಸಲಾಗುತ್ತಿದೆ. ಹಲವು ಬಾರಿ ಸ್ಪಷ್ಟೀಕರಣ ನೀಡಿದರೂ ಕೆಲವರು ಖಾರ ಪದವನ್ನು ಬಳಸದೇ ಕೇವಲ ಬೀಫ್ ಪದವನ್ನು ಮಾತ್ರ ಬಳಸುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

     

  • ನೀವು ಹಂದಿ, ಕುರಿ ಮಾಂಸ ತಿನ್ನುತ್ತೀರಾ? ಹಾಗಾದ್ರೆ ಈ ಸುದ್ದಿ ಓದಿ

    ನೀವು ಹಂದಿ, ಕುರಿ ಮಾಂಸ ತಿನ್ನುತ್ತೀರಾ? ಹಾಗಾದ್ರೆ ಈ ಸುದ್ದಿ ಓದಿ

    ಮಂಗಳೂರು: ನೀವು ಹಂದಿ, ಕುರಿ ಮಾಂಸ ತಿನ್ನುವುವರಾದರೆ ಈ ಸುದ್ದಿ ನೋಡಲೇ ಬೇಕು. ಈ ಮಾಂಸಗಳನ್ನು ತಿನ್ನುವವರು ಎಚ್ಚರ ವಹಿಸಲೇಬೇಕು. ಯಾಕಂದ್ರೆ ರೆಡ್ ಮೀಟ್ ತಿಂದರೆ ನಿಮಗೆ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ. ಮಂಗಳೂರಿನ ಎಂಐಓ ಕ್ಯಾನ್ಸರ್ ಆಸ್ಪತ್ರೆಯು ಇಂತಹದ್ದೊಂದು ಆಘಾತಕಾರಿ ಸಂಶೋಧನಾ ವರದಿ ನೀಡಿದೆ.

    ಮಂಗಳೂರಿನ ಇನ್ಸ್ ಟಿಟ್ಯೂಟ್ ಆಫ್ ಒಂಕಾಲಜಿ ಆಸ್ಪತ್ರೆಯ ನುರಿತ ತಜ್ಞರ ತಂಡವೊಂದು ಆಘಾತಕಾರಿ ವರದಿ ನೀಡಿದೆ. ಪ್ರದೇಶವಾರು ಸುಮಾರು 900 ಕ್ಯಾನ್ಸರ್ ರೋಗಿಗಳನ್ನ ವೈದ್ಯರು ಸರ್ವೇ ಮಾಡಿದ್ದಾರೆ. ಕೇರಳ, ಕಾಸರಗೋಡು, ಮಂಜೇಶ್ವರ ಭಾಗದ ಜನ ಕುರಿ, ದನ, ಹಂದಿ ಮಾಂಸ ತಿನ್ನುತ್ತಿದ್ದು, ಅಂಥವರಲ್ಲಿ ಅತಿಹೆಚ್ಚು ಸ್ತನ ಹಾಗೂ ಕರಳು ಕ್ಯಾನ್ಸರ್ ಕಂಡುಬಂದಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ.

    ರೆಡ್ ಮೀಟ್‍ನಲ್ಲಿರುವ ಕೊಬ್ಬಿನ ಅಂಶ ಹಾಗೂ ಪದೇ ಪದೇ ಬೇಯಿಸಿ ತಿನ್ನೋದ್ರಿಂದ ಕ್ಯಾನ್ಸರ್ ಬರುತ್ತಂತೆ. ಹೀಗಾಗಿ ರೆಡ್ ಮೀಟ್ ಆಹಾರದ ಬಗ್ಗೆ ಜಾಗ್ರತೆ ವಹಿಸುವಂತೆ ಹಾಗೂ ವಾರಕ್ಕೆ 500 ಗ್ರಾಂ ಮಾತ್ರ ಸೇವಿಸುವಂತೆ ಸೂಚನೆ ನೀಡಿದ್ದಾರೆ. ಮಂಗಳೂರು ವೈದ್ಯರ ತಂಡ ಮಾಂಸ ಪ್ರಿಯರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

     

  • ಉಲ್ಲಾಳ ಕೆರೆಯಂಗಳದಲ್ಲಿ ಎಲ್ಲಿ ನೋಡಿದ್ರೂ ಮಾಂಸ, ಮೆಡಿಕಲ್ ವೇಸ್ಟ್; ಅನಾಹುತದ ಬಗ್ಗೆ ಸ್ಥಳೀಯರ ಆತಂಕ

    ಉಲ್ಲಾಳ ಕೆರೆಯಂಗಳದಲ್ಲಿ ಎಲ್ಲಿ ನೋಡಿದ್ರೂ ಮಾಂಸ, ಮೆಡಿಕಲ್ ವೇಸ್ಟ್; ಅನಾಹುತದ ಬಗ್ಗೆ ಸ್ಥಳೀಯರ ಆತಂಕ

    – ಪವಿತ್ರ ಕಡ್ತಲ
    ಬೆಂಗಳೂರು: ಇಲ್ಲಿನ ಬೆಂಗಳೂರಿನ ಉಲ್ಲಾಳ ಕೆರೆಯಂಗಳದಲ್ಲಿ ಜೀವ ಉಳಿಸುವ ಆಸ್ಪತ್ರೆಗಳು ಇಲ್ಲಿನ ಜನ್ರ ಪಾಲಿಗೆ ಜೀವ ತೆಗೆಯಲು ಸಜ್ಜಾಗಿದೆ.

    ಹೌದು. ಬೆಂಗಳೂರಿನ ಉಲ್ಲಾಳ ಕೆರೆ ಪಕ್ದಲ್ಲಿರೋ ರಸ್ತೆ ಬದಿ ಎಲ್ಲಿ ನೋಡಿದ್ರೂ ಬರೀ ಇಂಜೆಕ್ಷನ್, ಮೆಡಿಸಿನ್ ಬಾಟಲ್‍ಗಳು, ಮಾತ್ರೆಗಳು, ಕಪ್ಪು ಕವರ್‍ನಲ್ಲಿ ಸುತ್ತಿದ ತ್ಯಾಜ್ಯಗಳೇ ಕಾಣಸಿಗುತ್ತವೆ. ಈ ಏರಿಯಾದ ಸುತ್ತುಮುತ್ತ ಇರುವ ನರ್ಸಿಂಗ್ ಹೋಂಗಳು ರಾತ್ರೋರಾತ್ರಿ ಮೆಡಿಕಲ್ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ.

    ನರ್ಸಿಂಗ್ ಹೋಂಗಳಷ್ಟೇ ಅಲ್ಲ, ಮಾಂಸದಂಗಡಿಗಳು ವೇಸ್ಟೇಜ್‍ಗಳನ್ನು ಎಸೆದು ಹೋಗ್ತಾರೆ. ಈ ಬಗ್ಗೆ ಇಲ್ಲಿನ ಸ್ಥಳೀಯರು ಪಾಲಿಕೆಗೆ ದೂರು ನೀಡಿದ್ರೂ ಯಾವ್ದೆ ಪ್ರಯೋಜನವಾಗಿಲ್ಲ. ಇದ್ರಿಂದ ಎಲ್ಲಿ ಭೂಮಿ ಕಾದ ಕೆಂಡಂತಾಗಿ ಅನಾಹುತ ಸಂಭವಿಸುತ್ತೋ ಅಂತಾ ಇಲ್ಲಿನ ಸ್ಥಳೀಯರು ಆತಂಕಗೊಂಡಿದ್ದಾರೆ. ಅಲ್ಲದೆ ರಸ್ತೆಯಲ್ಲಿ ಓಡಾಡೋಕು ಸಾಧ್ಯವಾಗ್ತಿಲ್ಲ ಅಂತಾ ಸ್ಥಳೀಯರು ಹೇಳುತ್ತಿದ್ದಾರೆ.

    ಮೆಡಿಕಲ್ ತ್ಯಾಜ್ಯ ಸಂಸ್ಕರಣೆಗೆ ಅದ್ರದ್ದೇ ಆದ ವಿಧಾನವಿದೆ. ಈ ರೀತಿ ಸಿಕ್ಕಸಿಕ್ಕಲ್ಲಿ ಮೆಡಿಕಲ್ ತ್ಯಾಜ್ಯವನ್ನ ಎಸೆಯುವಂತಿಲ್ಲ. ಆದ್ರೆ ಸಮಾಜದ ಸ್ವಾಸ್ಥ್ಯದ ಬಗ್ಗೆ ಗಮನಹರಿಸಬೇಕಾದ ಆಸ್ಪತ್ರೆಯವರೇ ಈ ರೀತಿ ವರ್ತನೆ ತೋರಿರೋದು ನಿಜಕ್ಕೂ ನಾಚಿಕೆಗೇಡು.