Tag: md venki mysuru

  • ರಾಜ್ಯದ ಹವಾಮಾನ ವರದಿ: 04-12-2023

    ರಾಜ್ಯದ ಹವಾಮಾನ ವರದಿ: 04-12-2023

    ರಾಜ್ಯದ ವಿವಿಧ ಜಿಲ್ಲೆಗಳಲ್ಲಿಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಮುಂಜಾನೆ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ದಕ್ಷಿಣ ಕನ್ನಡ ಕರಾವಳಿ ಭಾಗದಲ್ಲಿಯೂ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-19
    ಮಂಗಳೂರು: 33-26
    ಶಿವಮೊಗ್ಗ: 32-20
    ಬೆಳಗಾವಿ: 31-19
    ಮೈಸೂರು: 28-19

    ಮಂಡ್ಯ: 28-20
    ಮಡಿಕೇರಿ: 27-17
    ರಾಮನಗರ: 27-20
    ಹಾಸನ: 27-18
    ಚಾಮರಾಜನಗರ: 28-20
    ಚಿಕ್ಕಬಳ್ಳಾಪುರ: 22-18

    ಕೋಲಾರ: 28-23
    ತುಮಕೂರು: 26-19
    ಉಡುಪಿ: 34-26
    ಕಾರವಾರ: 34-25
    ಚಿಕ್ಕಮಗಳೂರು: 28-18
    ದಾವಣಗೆರೆ: 31-20

    ಹುಬ್ಬಳ್ಳಿ: 33-20
    ಚಿತ್ರದುರ್ಗ: 29-19
    ಹಾವೇರಿ: 33-20
    ಬಳ್ಳಾರಿ: 30-22
    ಗದಗ: 32-20
    ಕೊಪ್ಪಳ: 32-21

    ರಾಯಚೂರು: 31-22
    ಯಾದಗಿರಿ: 32-23
    ವಿಜಯಪುರ: 32-21
    ಬೀದರ್: 29-20
    ಕಲಬುರಗಿ: 32-22
    ಬಾಗಲಕೋಟೆ: 33-22

  • ಐಪಿಎಲ್ 2022: ಕೆಕೆಆರ್ ನಾಯಕನಾಗಿ ಶ್ರೇಯಸ್ ಅಯ್ಯರ್ ನೇಮಕ

    ಐಪಿಎಲ್ 2022: ಕೆಕೆಆರ್ ನಾಯಕನಾಗಿ ಶ್ರೇಯಸ್ ಅಯ್ಯರ್ ನೇಮಕ

    ಬೆಂಗಳೂರು: ಕೋಲ್ಕತ್ತಾ ನೈಟ್ ರೈಡರ್ಸ್ ಬುಧವಾರ ಫೆಬ್ರವರಿ 16ರಂದು ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಮುಂಬರುವ ಆವೃತ್ತಿಗೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ.

    ಐಪಿಎಲ್ ಹರಾಜಿನಲ್ಲಿ ಶ್ರೇಯಸ್ ಅವರನ್ನು ಯಶಸ್ವಿಯಾಗಿ ಬಿಡ್ ಮಾಡಿದ್ದೇವೆ. ಕೆಕೆಆರ್ ತಂಡವನ್ನು ಮುನ್ನಡೆಸುವ ಅವಕಾಶವನ್ನು ಶ್ರೇಯಸ್ ಅವರಿಗೆ ನೀಡಲು ನಾವು ಸಂತೋಷಪಡುತ್ತೇವೆ. ಅವರು ಈಗಾಗಲೇ ಒಬ್ಬ ಒಳ್ಳೆಯ ಗುಣಮಟ್ಟದ ಬ್ಯಾಟ್ಸ್‌ಮನ್ ಆಗಿ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಅವರು ತಂಡದ ನಾಯಕರಾಗಿ ಮಿಂಚುತ್ತಾರೆ ಅಂತ ನಮಗೆ ವಿಶ್ವಾಸವಿದೆ ಎಂದು ಕೆಕೆಆರ್ ತಂಡದ (ಸಿಇಒ) ಮತ್ತು ಎಂಡಿ ವೆಂಕಿ ಮೈಸೂರು ಅವರು ಟ್ವೀಟ್ ಮಾಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ತಮಿಳುನಾಡಿನ ಅಳಿಯ – ಆಮಂತ್ರಣ ಪತ್ರಿಕೆ ವೈರಲ್

    ಶ್ರೇಯಸ್ ಅಯ್ಯರ್ ಅವರು ಭಾರತದ ಉಜ್ವಲ ಭವಿಷ್ಯದ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರನ್ನು ಕೆಕೆಆರ್ ತಂಡದ ನಾಯಕರನ್ನಾಗಿ ನೋಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಾನು ಅವರ ಆಟವನ್ನು ಮತ್ತು ಅವರ ನಾಯಕತ್ವ ಕೌಶಲ್ಯಗಳನ್ನು ದೂರದಿಂದಲೇ ಆನಂದಿಸಿದ್ದೇನೆ. ಕೆಕೆಆರ್ ತಂಡದ ಯಶಸ್ಸು ಮತ್ತು ಅವರ ಆಟದ ಶೈಲಿಯನ್ನು ಮುನ್ನಡೆಸಲು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಅವರು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

    ಕೆಕೆಆರ್‌ನ ನಾಯಕತ್ವವನ್ನು ಸ್ವೀಕರಿಸಿದ ಶ್ರೇಯಸ್ ಅಯ್ಯರ್ ಮಾತನಾಡಿ, ಕೆಕೆಆರ್‌ ನಂತಹ ಪ್ರತಿಷ್ಠಿತ ತಂಡವನ್ನು ಮುನ್ನಡೆಸುವ ಅವಕಾಶವನ್ನು ಪಡೆದಿರುವುದಕ್ಕೆ ನನಗೆ ಅತ್ಯಂತ ಗೌರವವಾಗಿದೆ. ಐಪಿಎಲ್ ಪಂದ್ಯಾವಳಿಯಾಗಿ ವಿವಿಧ ದೇಶಗಳು ಮತ್ತು ಸಂಸ್ಕೃತಿಗಳ ಅತ್ಯುತ್ತಮ ಆಟಗಾರರನ್ನು ಒಟ್ಟಿಗೆ ತರುತ್ತದೆ. ಪ್ರತಿಭಾವಂತ ವ್ಯಕ್ತಿಗಳ ಈ ಶ್ರೇಷ್ಠ ತಂಡವನ್ನು ಮುನ್ನಡೆಸಲು ನಾನು ಎದುರು ನೋಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಶಕೀಬ್ ಐಪಿಎಲ್‍ನಲ್ಲಿ ಮಾರಾಟವಾಗಲಿಲ್ಲ ಯಾಕೆ – ರಿವಿಲ್ ಮಾಡಿದ ಪತ್ನಿ

    ಈ ತಂಡವನ್ನು ಮುನ್ನಡೆಸಲು ನನಗೆ ಅವಕಾಶ ನೀಡಿದ ಕೆಕೆಆರ್‌ನ ಮಾಲೀಕರು, ನಿರ್ವಹಣೆಗಾರರು ಮತ್ತು ಬೆಂಬಲ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ತಂಡದ ಗುರಿಗಳನ್ನು ಸಾಧಿಸಲು ನಾವು ಸರಿಯಾದ ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ ಎಂದು ನನಗೆ ವಿಶ್ವಾಸವಿದೆ.

    ಭಾರತೀಯ ಕ್ರಿಕೆಟ್‍ಗೆ ಬಂದಾಗ ಕೋಲ್ಕತ್ತಾ ಮತ್ತು ಈಡನ್ ಗಾರ್ಡನ್‍ಗಳು ಬಹಳ ಶ್ರೀಮಂತ ಇತಿಹಾಸವನ್ನು ಹೊಂದಿವೆ. ಈ ಶ್ರೀಮಂತ ಇತಿಹಾಸಕ್ಕೆ ಕೊಡುಗೆ ನೀಡಲು ಮತ್ತು ನಮ್ಮ ಅಭಿಮಾನಿಗಳು ನಮ್ಮ ಬಗ್ಗೆ ಹೆಮ್ಮೆಪಡಲು ನಾನು ಎದುರು ನೋಡುತ್ತಿದ್ದೇನೆ. ಕೊರ್ಬೊ ಲೋರ್ಬೊ ಜೀಟ್ಬೊ! ಎಂಬ ತಂಡದ ಘೋಷ ವಾಕ್ಯವನ್ನು ಬರೆದು ಟ್ವೀಟ್ ಮಾಡಿದ್ದಾರೆ.