Tag: MB Patil

  • ನನ್ನ ಮನೆ ಮೇಲೆ ದಾಳಿ ನಡೆಸಿದ್ರೆ ಐಟಿ ಅಧಿಕಾರಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸುತ್ತೇನೆ: ಎಂಬಿ ಪಾಟೀಲ್

    ನನ್ನ ಮನೆ ಮೇಲೆ ದಾಳಿ ನಡೆಸಿದ್ರೆ ಐಟಿ ಅಧಿಕಾರಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸುತ್ತೇನೆ: ಎಂಬಿ ಪಾಟೀಲ್

    ಬೆಂಗಳೂರು: ನನ್ನ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದರೆ ಅವರಿಗೆ ಹೂ ಗುಚ್ಛ ನೀಡಿ ಸ್ವಾಗತಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

    ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ದಾಳಿ ಆಗಿದ್ದಕ್ಕೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸದ್ಯದಲ್ಲೇ ನನ್ನ ಮನೆ ಮೇಲೂ ದಾಳಿ ನಡೆಯುತ್ತದೆ ಎನ್ನುವ ಮಾಹಿತಿ ಬಿಜೆಪಿ ಮೂಲಗಳಿಂದ ಸಿಕ್ಕಿದೆ. ನನ್ನ ಪ್ರಭಾವ ಕಡಿಮೆ ಮಾಡಬೇಕು, ನನ್ನ ಹೆಸರನ್ನು ಕೆಡಿಸಲು ಈ ಹುನ್ನಾರ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

    ಐಟಿ ಅಧಿಕಾರಿಗಳು ಬಂದು ನನ್ನ ಮನೆ ಮೇಲೆ ದಾಳಿ ನಡೆಸಲಿ. ಕಪ್ಪು ಹಣ ಇದೆಯೋ ಇಲ್ಲವೋ ಎನ್ನುವುದು ಅವರಿಗೆ ತಿಳಿಯುತ್ತದೆ. ಅಧಿಕಾರಿಗಳು ಬಂದರೆ ಹೂಗುಚ್ಛ ನೀಡಿ ಸ್ವಾಗತಿಸುತ್ತೇನೆ ಎಂದು ಅವರು ಹೇಳಿದರು.

    ನನಗೆ ಐಟಿ ಇಲಾಖೆ ದಾಳಿ ಬಗ್ಗೆ ಯಾವುದೇ ಆತಂಕ ಇಲ್ಲ. ಸ್ವತಂತ್ರವಾಗಿ ತನಿಖೆ ಮಾಡಲಿ. ಆದರೆ ಯಾರದ್ದೋ ಮಾತು ಕೇಳಿ ದಾಳಿ ಮಾಡುವಂತದ್ದಲ್ಲ. ನನ್ನ ಮೇಲೆ ಈ ವಾರ, ತಿಂಗಳು ಇಲ್ಲ ಚುನಾವಣೆಗೆ ಮೊದಲು ದಾಳಿ ಮಾಡಿಸಲು ಮೂರು ದಿನಗಳಿಂದ ಹುನ್ನಾರ ನಡೆಯುತ್ತಿದೆ. ಹೀಗಾಗಿ ನಾನು ನನ್ನ ಕಾರ್ಯಕ್ರಮಗಳನ್ನ ಬಿಟ್ಟು ಬಂದಿದ್ದೇನೆ. ಡಿ ಕೆ ಶಿವಕುಮಾರ್ ಮನೆ ಮೇಲೆ ನಡೆದಿರುವ ದಾಳಿ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

    ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಮನೆ ಮೇಲಿನ ದಾಳಿ ಕೇವಲ ನೆಪ ಮಾತ್ರ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು, ಕೈ ನಾಯಕರನ್ನು ದುರ್ಬಲಗೊಳಿಸಲು ಬಿಜೆಪಿ ಈ ಅಸ್ತ್ರ ಪ್ರಯೋಗಿಸಿದೆ. ಗೋವಿಂದರಾಜು ಡೈರಿ ಬಗ್ಗೆ ಶೀಘ್ರ ಇತ್ಯರ್ಥ ಆಗಬೇಕು. ಇನ್ಶಿಯಲ್ ಏನು? ಯಾರದ್ದು ಎನ್ನುವುದು ಬಗೆಹರಿಯಬೇಕು. ಚುನಾವಣೆ ತನಕ ಗೋವಿಂದರಾಜು ಡೈರಿ ಇಟ್ಟುಕೊಂಡು ರಾಜಕಾರಣ ಮಾಡಬಾರದು ಎಂದು ಅವರು ಹೇಳಿದರು.

    ಇದನ್ನೂ ಓದಿ: ಕೈ ನಾಯಕರ ಮನೆ ಮೇಲೆ ಐಟಿ ದಾಳಿ: ಎಷ್ಟು ಕೋಟಿ ಹಣ ಸಿಕ್ಕಿದೆ ಗೊತ್ತಾ?

     

  • ನಮ್ಮ ಸಮಾಜದ ವಿಚಾರದಲ್ಲಿ ಪೇಜಾವರ ಶ್ರೀಗಳ ಹಸ್ತಕ್ಷೇಪ ಅಗತ್ಯವಿಲ್ಲ: ಎಂಬಿ ಪಾಟೀಲ್

    ನಮ್ಮ ಸಮಾಜದ ವಿಚಾರದಲ್ಲಿ ಪೇಜಾವರ ಶ್ರೀಗಳ ಹಸ್ತಕ್ಷೇಪ ಅಗತ್ಯವಿಲ್ಲ: ಎಂಬಿ ಪಾಟೀಲ್

    ಬೆಂಗಳೂರು: ನಮ್ಮ ಸಮಾಜಕ್ಕೆ ಸಂಬಂಧಿಸಿದ ವಿಷಯದಲ್ಲಿ ಲಿಂಗಾಯತ ಮುಖಂಡರು, ಸ್ವಾಮೀಜಿಗಳು ನಿರ್ಧಾರ ಮಾಡುತ್ತಾರೆ. ಇದರಲ್ಲಿ ಪೇಜಾವರ ಶ್ರೀಗಳು ಹಸ್ತಕ್ಷೇಪ ಮಾಡುವ ಅವಶ್ಯಕತೆ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

    ವೀರಶೈವ ಮತ್ತು ಲಿಂಗಾಯತ ಹಿಂದೂ ಧರ್ಮದ ಅಂಗ ಎನ್ನುವ ಪೇಜಾವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಬೌದ್ಧ, ಸಿಖ್ ಧರ್ಮಗಳಂತೆ ಬಸವ ಧರ್ಮ ಜಾಗತಿಕ ಧರ್ಮವಾಗಬೇಕಿದೆ. ಆರ್‍ಎಸ್‍ಎಸ್ ಬೆಂಬಲಿತರ್ಯಾರೂ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬಾರದು. ಆರ್‍ಎಸ್‍ಎಸ್ ಒತ್ತಡಕ್ಕೆ ಮಣಿದು ನಮ್ಮದೇ ಸಮುದಾಯದ ಯಡಿಯೂರಪ್ಪ ಏನೇನೋ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಸಿಎಂ ಸಿದ್ದರಾಮಯ್ಯ ಯಾವತ್ತೂ ಧರ್ಮವನ್ನ ಒಡೆಯುವ ಕೆಲಸ ಮಾಡುತ್ತಿಲ್ಲ. ಈ ಹಿಂದೆಯೇ ಲಿಂಗಾಯತ ಸಮುದಾಯದ ಪ್ರತ್ಯೇಕತೆಗೆ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಎಂ.ಬಿ ಪಾಟೀಲ್ ಹೇಳಿದರು.

    ಸ್ವತಂತ್ರ ಧರ್ಮವಾಗಿ ವೀರಶೈವ ಘೋಷಣೆಗಾಗಿ ಕಾನೂನು ಹೋರಾಟಕ್ಕೂ ಸಿದ್ಧ. ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಕೇಂದ್ರಕ್ಕೂ ಮನವಿ ಮಾಡುತ್ತೇವೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

    ಇದನ್ನೂ ಓದಿ: ಮೋದಿ, ಶಾ, ಬಿಎಸ್‍ವೈ ಕಟ್ಟಿಹಾಕಲು ಸಿಎಂ ಕಟ್ಟುತ್ತಿದ್ದಾರೆ LDMK ಸೇನೆ!

  • ವರುಣನಿಗಾಗಿ ತಲಕಾವೇರಿಯಲ್ಲಿ ಪರ್ಜನ್ಯ ಜಪ – ತ್ರಿವೇಣಿ ಸಂಗಮದಲ್ಲಿ ಸಚಿವರಿಂದ ಬಾಗಿನ

    ವರುಣನಿಗಾಗಿ ತಲಕಾವೇರಿಯಲ್ಲಿ ಪರ್ಜನ್ಯ ಜಪ – ತ್ರಿವೇಣಿ ಸಂಗಮದಲ್ಲಿ ಸಚಿವರಿಂದ ಬಾಗಿನ

    ಮಡಿಕೇರಿ: ಮಳೆಗಾಗಿ ಪ್ರಾರ್ಥಿಸಿ ಜೀವ ನದಿ ತಲಕಾವೇರಿ ಸನ್ನಿಧಿಯಲ್ಲಿ ಪರ್ಜನ್ಯ ಜಪ ಆರಂಭವಾಗಿದೆ.

    ವರುಣನ ಕೃಪೆಗಾಗಿ ಕಾವೇರಿ ಉಗಮಸ್ಥಾನ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ಪರ್ಜನ್ಯ ಜಪ ಆಯೋಜನೆ ಮಾಡಿದ್ದ ಸಚಿವ ಎಂ.ಬಿ ಪಾಟೀಲ್ ವಿವಾದದಿಂದ ದೂರ ಉಳಿಯಲು ಎಂಜಿನಿಯರ್‍ಗಳ ಮೂಲಕ ಪರ್ಜನ್ಯ ಜಪ ಮಾಡಿಸಿದ್ರು.

    ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಬಸವರಾಜ್, ಪತ್ನಿ ಜಯಶ್ರೀ ಜೊತೆಗೆ ಪರ್ಜನ್ಯ ಜಪ ನಡೆಸಿದರು. ಅರ್ಚಕರಾದ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಮುಂಜಾನೆ 9 ಗಂಟೆಯಿಂದ 11 ಗಂಟೆಯ ವರೆಗೆ ಪೂಜಾ ವಿಧಿ ವಿಧಾನಗಳು ನಡೆದವು.

    ಸರ್ಕಾರದಿಂದ ಮಳೆಗಾಗಿ ಪೂಜೆ ಮಾಡುವುದಕ್ಕೆ ವಿರೋಧ ವ್ಯಕ್ತವಾದ್ದರಿಂದ ವೈಯಕ್ತಿಕವಾಗಿ ಪೂಜೆ ಮಾಡೋದಾಗಿ ಹೇಳಿದ್ದ ನೀರಾವರಿ ಸಚಿವ ಎಂ.ಬಿ.ಪಾಟಿಲ್ ತಲಕಾವೇರಿ-ಭಾಗಮಂಡಲ ಕ್ಷೇತ್ರಕ್ಕೆ ಭೇಟಿ ನೀಡಿ, ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಿಸಿದ್ರು. ಸಚಿವರಿಗೆ ಕಲಾ ತಂಡಗಳ ಅದ್ದೂರಿ ಸ್ವಾಗತ ಸಿಕ್ತು.

     

  • ಮಳೆಗಾಗಿ ನಡೆಸುವ ವಿಶೇಷ ಪೂಜೆಗೆ ಸರ್ಕಾರದ ಹಣ ಬಳಸಲ್ಲ: ಎಂಬಿ ಪಾಟೀಲ್

    ಮಳೆಗಾಗಿ ನಡೆಸುವ ವಿಶೇಷ ಪೂಜೆಗೆ ಸರ್ಕಾರದ ಹಣ ಬಳಸಲ್ಲ: ಎಂಬಿ ಪಾಟೀಲ್

    ಬೆಂಗಳೂರು: ಮಳೆಗಾಗಿ ನಡೆಸುವ ವಿಶೇಷ ಪೂಜೆಗೆ ಸರ್ಕಾರದ ಹಣ ಬಳಕೆ ಮಾಡುವುದಿಲ್ಲ. ಈ ಪೂಜೆಯ ವೆಚ್ಚಕ್ಕೆ ತಗಲುವ ಖರ್ಚನ್ನು ನಾನು ಮತ್ತು ಸ್ನೇಹಿತರು ಭರಿಸಲು ತೀರ್ಮಾನ ಕೈಗೊಂಡಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

    ಮಾಧ್ಯಮಗಳಿಗೆ ಹೇಳಿಕೆಯನ್ನು ಬಿಡುಗಡೆ ಮಾಡಿದ ಅವರು, ಮಾಧ್ಯಮಗಳಲ್ಲಿ ನಮ್ಮ ಉದ್ದೇಶವನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಅಗತ್ಯವಾಗಿ ಹಣವನ್ನು ಖರ್ಚು ಮಾಡಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ ಎಂದು ತಿಳಿಸಿದರು.

    ಹೇಳಿಕೆಯಲ್ಲಿ ಏನಿದೆ?
    ಕೃಷ್ಣಾ ಮತ್ತು ಕಾವೇರಿ ನದಿಗಳು ಕರ್ನಾಟಕದ 6 ಕೋಟಿ ಜನತೆಯ ಜೀವನಾಡಿಗಳು. ಕುಡಿಯುವ ನೀರನ್ನು ಒದಗಿಸುವ ಹಾಗೂ ರೈತರ ಪಾಲಿಗೆ ಈ ನದಿಗಳು ದೇವತೆ ಸಮಾನವಾಗಿದ್ದು, ಈ ಎರಡೂ ನದಿಗಳಿಗೆ ಪೂಜಾ ಕೈಂಕರ್ಯ ನಡೆಸುವುದು, ನಮ್ಮ ಸಂಸ್ಕೃತಿ ಪರಂಪರೆ ಹಾಗೂ ಧರ್ಮದ ಭಾಗವಾಗಿದೆ.

    ಈ ಎರಡೂ ನದಿಗಳಿಂದ ರಾಜ್ಯದ ಜನತೆಗೆ ಉಪಕಾರವಾಗಿದ್ದು, ಹಾಗೂ ಮುಂದಿನ ದಿನಗಳಲ್ಲೂ ತಾಯಿಯ ಕರುಣೆಯನ್ನು ಬಯಸಿ ಕೃತಜ್ಞತಾ ಪೂರ್ವಕವಾಗಿ ನಮನ ಸಲ್ಲಿಸಲು ಈ ಹಿಂದೆ ಕಾವೇರಿ ನಿಗಮದ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಈ ಉದ್ದೇಶಕ್ಕೆ ತಲಾ 10 ಲಕ್ಷ ರೂ. ವೆಚ್ಚ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಈ ಪೂಜಾ ಕಾರ್ಯಕ್ಕೆ ತಗಲುವ ವೆಚ್ಚವನ್ನು ನಾನು ಮತ್ತು ಸ್ನೇಹಿತರು ಭರಿಸುವ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಸರ್ಕಾರದ ಒಂದು ರೂಪಾಯಿ ಹಣವನ್ನು ಈ ಪೂಜೆಗೆ ಬಳಸುವುದಿಲ್ಲ.

    ಇಂದು ಕೃಷ್ಣಾ ನದಿಯ ಉಗಮಸ್ಥಾನವಾದ ಮಹಾಬಲೇಶ್ವರದಲ್ಲಿ ಮೂಜೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ತರಹದ ಪೂಜೆಯನ್ನು ಕಾವೇರಿಯ ಉಗಮಸ್ಥಳವಾದ ಭಾಗಮಂಡಲದಲ್ಲಿ ಜೂನ್ 4ರಂದು ನಡೆಯಲಿದೆ.

    ಈ ಸಂದರ್ಭದಲ್ಲಿ ಈ ಭಾಗದ ಜನಪ್ರತಿನಿಧಿಗಳು ಸೇರಿದಂತೆ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಯವರು ಭಾಗಿಯಾಗುತ್ತಿದ್ದಾರೆ ಎಂದು ಎಂಬಿ ಪಾಟೀಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  • ಮೌಢ್ಯ ವಿರೋಧಿ ಸರ್ಕಾರದಿಂದ ಮೌಢ್ಯಾಚರಣೆ: ಮಳೆಗಾಗಿ ಪರ್ಜನ್ಯ ಹೋಮಕ್ಕೆ ಸಿದ್ಧತೆ

    ಮೌಢ್ಯ ವಿರೋಧಿ ಸರ್ಕಾರದಿಂದ ಮೌಢ್ಯಾಚರಣೆ: ಮಳೆಗಾಗಿ ಪರ್ಜನ್ಯ ಹೋಮಕ್ಕೆ ಸಿದ್ಧತೆ

    ಬೆಂಗಳೂರು: ರಾಜ್ಯದಲ್ಲಿ ರಣಭೀಕರ ಬರ ಇದ್ದರೂ ಸಮರ್ಪಕವಾಗಿ ನಿಭಾಯಿಸದ ಆಡಳಿತ-ವಿಪಕ್ಷ, ರಾಜ್ಯ-ಕೇಂದ್ರ ಅಂತ ಹೇಳಿ ಸರ್ಕಾರ-ಜನಪ್ರತಿನಿಧಿಗಳು ಕೆಸರೆರಚಾಟದಲ್ಲೇ ಕಾಲಕಳೆದ್ರು. ವಿಪಕ್ಷಗಳು ಮಳೆಗಾಲದ ಆರಂಭದಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡು ನಗೆಪಾಟಲಿಗೀಡಾದ್ರೆ, ಈಗ ಸರ್ಕಾರ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಪರ್ಜನ್ಯ ಹೋಮ ನಡೆಸಲು ಮುಂದಾಗಿದೆ.

    ಅದರಲ್ಲೂ ಮೌಢ್ಯ ವಿರೋಧಿ ಅಂತ ಹೇಳೋ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕೇರಳ ಪಂಡಿತರನ್ನ ಕರೆಸಿ ನೀರಾವರಿ ನಿಗಮ ಹೋಮ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

    ರಾಜ್ಯದ ಜೀವನದಿಗಳಾದ ಉತ್ತರದ ಕೃಷ್ಣಾನದಿ ಮೂಲದ ಮಹಾಬಲೇಶ್ವರದಲ್ಲಿ ಶುಕ್ರವಾರ, ದಕ್ಷಿಣದ ಕಾವೇರಿ ನದಿಮೂಲ ಭಾಗಮಂಡಲದಲ್ಲಿ ಶನಿವಾರ ಪರ್ಜನ್ಯ ಹೋಮ ನಡೆಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಎರಡೂ ಕಡೆ 20 ಲಕ್ಷ ರೂ. ಖರ್ಚು ಮಾಡಲು ಸರ್ಕಾರ ಮುಂದಾಗಿದೆ.

    ಟಿಆರ್‍ಪಿಗಾಗಿ ಮಾಡ್ತಿದ್ದೀರಿ: ಪರ್ಜನ್ಯ ಹೋಮ ಮಾಡ್ತಿರೋದ್ರ ಬಗ್ಗೆ ಸಂಜೆ 5 ಗಂಟೆ ನ್ಯೂಸ್‍ನಲ್ಲಿ ಜಲಸಂಪನ್ಮೂಲ ಸಚಿವರಾದ ಎಂ.ಬಿ. ಪಾಟೀಲ್ ಅವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿತು. ಈ ವೇಳೆ ದೂರವಾಣಿಯಲ್ಲಿ ಮಾತನಾಡಿದ ಸಚಿವರು ಸರ್ಕಾರದ ನಡೆಯನ್ನ ಬಲವಾಗಿ ಸಮರ್ಥಿಸಿಕೊಂಡು, ಇದ್ದಕ್ಕಿದ್ದಂತೆ ಭಾವೋದ್ವೇಗಕ್ಕೆ ಒಳಗಾಗಿ, ಟಿಆರ್‍ಪಿಗಾಗಿ ನೀವಿದನ್ನು ವಿವಾದ ಮಾಡ್ತಿದ್ದೀರಾ ಅಂದ್ರು. ಅಷ್ಟೇ ಅಲ್ಲ, ಇಂಥದ್ದನ್ನ ಕಡಿವಾಣ ಹಾಕೋಕೆ ಸದನ ಸಮಿತಿ ಮಾಡ್ತಿದ್ದೀವಿ ಅಂತ ಹೇಳಿದರು.

    ಈ ಸಂಬಂಧ ಫೇಸ್‍ಬುಕ್‍ನಲ್ಲಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಎಂಬಿ ಪಾಟೀಲ್, ನಗರೀಕರಣದ ಪರಿಣಾಮದಿಂದಾಗಿ ಕರ್ನಾಟಕ ಭೀಕರ ಬರವನ್ನು ಎದುರಿಸುತ್ತಿದೆ. ಹೀಗಾಗಿ ರೈತರ ಸಲಹೆಯ ಮೇರೆಗೆ ನಾವು ಪೂಜೆಯನ್ನು ನಡೆಸುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಪೂಜೆಗೆ ಆಗಮಿಸಬೇಕೆಂದು ಅವರು ಕೇಳೀಕೊಂಡಿದ್ದಾರೆ.

    ನಾವು ನಂಬಲ್ಲ: ಮಳೆಗಾಗಿ ಪರ್ಜನ್ಯ ಹೋಮದ ಮೂಲಕ ಮೌಢ್ಯ ಆಚರಣೆ ಮಾಡ್ತಿರೋ ಸಿಎಂ, ನಾವಿದನ್ನೆಲ್ಲಾ ನಂಬೋದಿಲ್ಲ ಅಂತ ಬೆಂಗಳೂರಿನಲ್ಲಿ ರಾಗ ಎಳೆದಿದ್ದಾರೆ. ವಿಕಾಸಸೌಧದಲ್ಲಿ ಮಕ್ಕಳ ಜೊತೆ ಮಕ್ಕಳ ರಕ್ಷಣೆ, ಆರೋಗ್ಯ, ಶಿಕ್ಷಣ, ಸಂಬಂಧಪಟ್ಟಂತೆ ಸಂವಾದ ನಡೆಸಿದ್ರು.

    ಈ ವೇಳೆ, ಸಿಎಂಗೆ ಮಕ್ಕಳು ಪ್ರಶ್ನೆಗಳ ಸುರಿಮಳೆ ಎದುರಾಯ್ತು. ಅದರಲ್ಲಿ ಗಮನ ಸೆಳೆದಿದ್ದು, ವಾಮಾಚಾರ, ಮೂಢನಂಬಿಕೆ ಹೆಸರಲ್ಲಿ ಮಕ್ಕಳ ಬಲಿ. ಇದರ ಬಗ್ಗೆ ಸರ್ಕಾರ ಯಾವ ಕ್ರಮಕೈಗೊಂಡಿದೆ ಅಂತ ರಾಮನಗರದ ವಿದ್ಯಾರ್ಥಿನಿ ಅಮೂಲ್ಯ ಪ್ರಶ್ನಿಸಿದ್ರು.

    ಉತ್ತರ ಕೊಟ್ಟ ಸಿಎಂ, ಸಮಾಜದಲ್ಲಿ ಮೂಢನಂಬಿಕೆ ಹೆಚ್ಚಿದೆ. ಮೌಢ್ಯದ ವಿರುದ್ಧ ಕಾನೂನಿಗೆ ಚಿಂತನೆ ನಡೆದಿದೆ ಅಂದ್ರು. ತಮ್ಮ ಕಾರಿನ ಮೇಲೆ ಕಾಗೆ ಕೂತದ್ದು, ಚಾಮರಾಜನಗರಕ್ಕೆ ಎಂಟ್ರಿ ಕೊಟ್ಟದ್ದು ಎಲ್ಲವನ್ನೂ ಉದಾಹರಣೆ ಸಹಿತ ವಿವರಿಸಿದ್ರು. ಇದೇ ವೇಳೆ, ನಾನು ಮೊದಲು ಸಿಗರೇಟ್ ಸೇದ್ತಿದೆ. ಸಮಸ್ಯೆ ಆದ ಕಾರಣ ಬಿಟ್ಟುಬಿಟ್ಟೆ ಅಂತ ಹೇಳಿದ್ರು. ಇನ್ನು, ತಂದೆ ಸಾಲತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿ ಕುಟುಂಬಕ್ಕೆ ದಿಕ್ಕಿಲ್ಲದಂತಾಗಿದೆ ಅಂತ ನೋವು ತೋಡಿಕೊಂಡ ರೈತನ ಮಗನಿಗೆ 5 ಲಕ್ಷ ಕೊಡುವಂತೆ ಸಿಎಂ ಸೂಚಿಸಿದ್ರು.

    ಪಬ್ಲಿಕ್ ಟಿವಿಗೆ ನೀರಾವರಿ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ ವಿಡಿಯೋ ಇಲ್ಲಿದೆ.

    https://www.youtube.com/watch?v=Uz2rsEJ-xKw

  • ಕಾಂಗ್ರೆಸ್‍ನಿಂದ ಮಲಪ್ರಭಾ ಕಾಲುವೆ ನವೀಕರಣದಲ್ಲಿ 600 ಕೋಟಿ ಗುಳುಂ: ಬಿಎಸ್‍ವೈ ಬಾಂಬ್

    ಕಾಂಗ್ರೆಸ್‍ನಿಂದ ಮಲಪ್ರಭಾ ಕಾಲುವೆ ನವೀಕರಣದಲ್ಲಿ 600 ಕೋಟಿ ಗುಳುಂ: ಬಿಎಸ್‍ವೈ ಬಾಂಬ್

    ಗದಗ: ಮಲಪ್ರಭಾ-ಘಟಪ್ರಭಾ ಕಾಲುವೆಯ ಆಧುನೀಕರಣದಲ್ಲಿ ಸುಮಾರು 600 ಕೋಟಿ ರೂ. ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊಸ ಬಾಂಬ್‍ವೊಂದನ್ನು ಸಿಡಿಸಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಲುವೆಗಳ ಆಧುನೀಕರಣಕ್ಕಾಗಿ 400 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಸರ್ಕಾರ ವೆಚ್ಚವನ್ನು 800 ಕೋಟಿ ರೂ,ಗೆ ಹೆಚ್ಚಿಸಲು ಅಧಿಕಾರಿಗಳಿಗೆ ಒತ್ತಡ ಹೇರಿದ್ದರು. ಇದಕ್ಕೆ ಒಪ್ಪದ ಅಧಿಕಾರಿಗಳನ್ನು ರಾತ್ರೋ ರಾತ್ರಿ ವರ್ಗಾವಣೆ ಮಾಡಿ, ತಮಗೆ ಅನುಕೂಲವಾದ ಅಧಿಕಾರಿಗಳನ್ನು ಸೇರ್ಪಡೆ ಮಾಡಿಕೊಂಡಿದ್ದರು. ಒಟ್ಟು ಮಲಪ್ರಭಾ ಮತ್ತು ಘಟಪ್ರಭಾ ಕಾಲುವೆಗಳ ನವೀಕರಣಕ್ಕೆ 1000 ಕೋಟಿ ರೂ. ವೆಚ್ಚವಾಗಿದೆ ಎಂದು ಆರೋಪಿಸಿದರು.

    ನಾಲಾ ಕಾಮಗಾರಿಯ ಬಗ್ಗೆ ಸಮಗ್ರ ತನಿಖೆ ಆಗಬೇಕು. ಅಕ್ರಮ ಹಣದಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾಲೆಷ್ಟು ಎನ್ನುವುದು ತನಿಖೆಯಿಂದ ಬಹಿರಂಗವಾಗಬೇಕಿದೆ. ಸತ್ಯಾಸತ್ಯತೆಯಿಂದ ತನಿಖೆಯಾದ್ರೆ ಎಂ.ಬಿ.ಪಾಟೀಲ್ ಮನೆಗೆ ಹೋಗ್ತಾರೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದ್ರು.

     

  • ಕೆಪಿಸಿಸಿ ಪಟ್ಟ ಕೊಡಿ ಅಂತಾ ಯಾರನ್ನೂ ಕೇಳಲ್ಲ, ನಮ್ಮಲ್ಲೇ ಪಿತೂರಿ ಮಾಡೋರಿದ್ದಾರೆ: ಡಿಕೆಶಿ

    ಕೆಪಿಸಿಸಿ ಪಟ್ಟ ಕೊಡಿ ಅಂತಾ ಯಾರನ್ನೂ ಕೇಳಲ್ಲ, ನಮ್ಮಲ್ಲೇ ಪಿತೂರಿ ಮಾಡೋರಿದ್ದಾರೆ: ಡಿಕೆಶಿ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಅರ್ಜಿ ಹಾಕ್ಕೊಂಡು ಕುಳಿತಿಲ್ಲ. ಕೆಲವರು ಮುಂದೆ ಚೆನ್ನಾಗಿ ಮಾತಾಡಿ, ಹಿಂದೆ ಪಿತೂರಿ ಮಾಡ್ತಾರೆ ಅಂತಾ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಹುದ್ದೆಗೆ ನಾನು ಸ್ಪರ್ಧಿಯಲ್ಲ. ಪಕ್ಷದ ಎಲ್ಲರೂ ಸಾಮೂಹಿಕವಾಗಿ ಒಪ್ಪಿದ್ರೆ ಆಗ ಯೋಚನೆ ಮಾಡೋಣ. ಕೆಲವರು ನಾನು ಅಷ್ಟು ಬಾರಿ ಗೆದ್ದಿದ್ದೇನೆ, ಇಷ್ಟು ಸೀನಿಯರ್ ಅಂತ ಮಾತಾಡ್ತಿದ್ದಾರೆ ಅಂತಾ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಆಕಾಂಕ್ಷಿ ಸಂಸದ ಮುನಿಯಪ್ಪ ಅವರಿಗೆ ಟಾಂಗ್ ಕೊಟ್ರು.

    ಕೆಲವರು ನಾನು ಅಧ್ಯಕ್ಷ ಆಗ್ಬೇಕು ಅಂತಾ ಬಯಸ್ತಾರೆ. ಇನ್ನೂ ಕೆಲವರು ಆಗೋದೇ ಬೇಡಾ ಅಂತಾರೆ ಅಂದ್ರು. ಸಿಎಂ ಸಿದ್ದರಾಮಯ್ಯ ನಿಮ್ಮ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರಾ ಅನ್ನೋ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸಿದ ಡಿಕೆಶಿ, ಈ ಬಗ್ಗೆ ಸಿಎಂ ಅವರನ್ನೇ ಕೇಳಿ. ಡಿಕೆ ಶಿವಕುಮಾರ್ ಅಧ್ಯಕ್ಷ ಆಗೋದು ಬೇಡ ಅಂತ ಸಿಎಂ ಎಲ್ಲಿಯೂ ಹೇಳಿಲ್ಲ ಅಂದ್ರು.

    ನಾನು ಯಾವುದೇ ಕಾರಣಕ್ಕೂ ಹೈಕಮಾಂಡ್ ಬಳಿ ಹೋಗಲ್ಲ. ನನಗೆ ಅದರ ಅವಶ್ಯಕತೆ ಇಲ್ಲ. ಹೈಕಮಾಂಡ್ ಮತ್ತು ಸಿಎಂ ಸಿದ್ದರಾಮಯ್ಯ ಕೊಟ್ಟ ಎಲ್ಲ ಜವಾಬ್ದಾರಿಗಳನ್ನ ಸಮರ್ಥವಾಗಿ ನಿಭಾಯಿಸಿದ್ದೇನೆ ಅಂದ್ರು. ಎಂಬಿ ಪಾಟೀಲ್ ಹಾಗೂ ಹೆಚ್‍ಸಿ ಮಹದೇವಪ್ಪ ಅವರ ಹೆಸರು ಕೇಳಿ ಬರ್ತಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರೇ ಆಗಲಿ ಅಥವಾ ಬೇರೆ ಯಾರಾದ್ರೂ ಅಧ್ಯಕ್ಷರಾಗಲಿ ನನಗೆ ಬೇಸರವಿಲ್ಲ ಅಂದ್ರು.

    ಪಕ್ಷದ ನಿರ್ಧಾರಕ್ಕೆ ತಲೆಬಾಗ್ತೀವಿ: ಈ ನಡುವೆ 1 ವರ್ಷದ ಹಿಂದೆ ನಾನು ನಮ್ಮ ಅಧ್ಯಕ್ಷರು ಸೋನಿಯಾಗಾಂಧಿ ಭೇಟಿಯಾಗಿದ್ವಿ. ಆಗ ಕೆಪಿಸಿಸಿ ಅಧ್ಯಕ್ಷರಾಗಿ ಅಂತಾ ಮೇಡಂ ಸೋನಿಯಾ ಗಾಂಧಿ ಹೇಳಿದ್ರು ಅಂತಾ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಆಗ ಬೇಡ ಅಂದಿದ್ದೆ. ಈಗ ಪಕ್ಷ ಏನೇ ನಿರ್ಧಾರ ಕೈಗೊಂಡ್ರೂ ಅದಕ್ಕೆ ನಾವೆಲ್ಲರೂ ತಲೆಬಾಗುತ್ತೇವೆ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಅಂತಾ ಅವರು ಹೇಳಿದ್ರು.

    ಅನೇಕರು ಸಮರ್ಥರಿದ್ದಾರೆ: ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರ ಹೈಕಮಾಂಡ್‍ಗೆ ಬಿಟ್ಟಿದ್ದು. ವೈಯಕ್ತಿಕ ಪ್ರತಿಷ್ಠೆಗಿಂತ ಪಕ್ಷದ ಪ್ರತಿಷ್ಠೆ ಮುಖ್ಯ ಅಂತಾ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾಗಲು ಅನೇಕರು ಸಮರ್ಥರಿದ್ದಾರೆ. ಡಿಕೆ ಶಿವಕುಮಾರ್ ಅವರೂ ಸಮರ್ಥರಿದ್ದಾರೆ. ನಮ್ಮಲ್ಲಿ ಅನೇಕರು ದೇಶ ಕಟ್ಟುವ ನಾಯಕರಿದ್ದಾರೆ. ನಾನಂತೂ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸ್ತೇನೆ ಅಂತಾ ಪರೋಕ್ಷವಾಗಿ ಅಧ್ಯಕ್ಷಗಾದಿಯಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸಾಮೂಹಿಕ ನಾಯಕತ್ವ ಇನ್ನಷ್ಟು ಬಲಗೊಳ್ಳಬೇಕು. ಎರಡು ಸ್ಥಾನ ಗೆದ್ದಿದ್ದಕ್ಕೆ ಬೀಗುವ ಅಗತ್ಯವಿಲ್ಲ. ಅದು ಜನ ನಮಗೆ ಕೊಟ್ಟ ಬೆಂಬಲವಾಗಿದೆ. ಈಗಿನಿಂದಲೇ ಚುನಾವಣೆಗೆ ಸಿದ್ಧರಾಗಬೇಕಿದೆ ಅಂದ್ರು. ನಾನು, ಸಿಎಂ, ಕಾರ್ಯಾಧ್ಯಕ್ಷರು ದೆಹಲಿಗೆ ಹೋಗಿ ಬಂದಿದ್ದೇವೆ. ಉಪಚುನಾವಣೆಗಳಲ್ಲಿ ಪಡೆದ ಗೆಲುವಿನ ಬಗ್ಗೆ ತಿಳಿಸಲು ಹೋಗಿದ್ದೆವು. ರಾಜ್ಯದಲ್ಲಿ ಪಕ್ಷ ಸದೃಢವಾಗಿದೆ ಎಂದು ಸಂದೇಶ ನೀಡಲು ಹೋಗಿದ್ದೆವು. ಇನ್ನಷ್ಟು ಪಕ್ಷ ಸಂಘಟನೆಗೆ ವರಿಷ್ಠರು ನಮಗೆ ಸೂಚನೆ ಕೊಟ್ಟು ಕಳಿಸಿದ್ದಾರೆ. ನಮಗೆ ಇನ್ನಷ್ಟು ಜವಾಬ್ದಾರಿಯಿಂದ ಕೆಲಸ ಮಾಡುವಂತೆ ವರಿಷ್ಠರು ಸೂಚಿಸಿದ್ದಾರೆ ಅಂದ್ರು.

    ಜೂನ್ 27ಕ್ಕೆ ಕೆಂಪೇಗೌಡ ಜಯಂತಿ: ಕರ್ನಾಟಕ ಸರ್ಕಾರದ ಪರವಾಗಿ ಜೂನ್ 27ಕ್ಕೆ ಕೆಂಪೇಗೌಡ ಜಯಂತಿ ಆಚರಣೆ ಮಾಡ್ತೀವಿ ಅಂತಾ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೆಂಪೇಗೌಡ ಜಯಂತಿ ಆಚರಣೆ ವಿಚಾರವಾಗಿ ದಿನಾಂಕದ ಬಗ್ಗೆ ಗೊಂದಲ ಇತ್ತು. ಮಠದಲ್ಲಿ ಸ್ವಾಮೀಜಿಗಳು ಸಭೆ ಮಾಡಿ ಜೂನ್ 27ಕ್ಕೆ ಇತಿಹಾಸದ ಪ್ರಕಾರ ಜಯಂತಿ ಅಂತ ಹೇಳಿದ್ದಾರೆ. ಹೀಗಾಗಿ ಅದನ್ನ ಅಧಿಕೃತವಾಗಿ ಗೆಜೆಟ್ ಮಾಡುತ್ತಿದ್ದೇವೆ. ಜಯಂತಿಗೂ ಮುನ್ನ ಪ್ರಾಧಿಕಾರದ ಸಭೆ ಮಾಡಿ ಸಿದ್ಧತೆ ಮಾಡಿಕೊಳ್ತೀವಿ ಅಂತಾ ಹೇಳಿದ್ದಾರೆ.

     

  • ಕೆಪಿಸಿಸಿ ಅಧ್ಯಕ್ಷಗಾದಿಗಾಗಿ ಕಾಂಗ್ರೆಸ್‍ನಲ್ಲಿ ಬಿಗ್ ಫೈಟ್ – ನಾಲ್ವರಲ್ಲಿ ಯಾರಾಗ್ತಾರೆ ಪ್ರೆಸಿಡೆಂಟ್

    ಕೆಪಿಸಿಸಿ ಅಧ್ಯಕ್ಷಗಾದಿಗಾಗಿ ಕಾಂಗ್ರೆಸ್‍ನಲ್ಲಿ ಬಿಗ್ ಫೈಟ್ – ನಾಲ್ವರಲ್ಲಿ ಯಾರಾಗ್ತಾರೆ ಪ್ರೆಸಿಡೆಂಟ್

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ನೇಮಕದ ಗೊಂದಲ ಇನ್ನೂ ಮುಂದುವರಿಯಲಿದೆ. ಅಧ್ಯಕ್ಷರನ್ನಾಗಿ ಯಾರನ್ನು ಮಾಡಬೇಕು ಎಂಬುದು ಹೈಕಮಾಂಡ್‍ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

    ಕೆಪಿಸಿಸಿ ಅಧ್ಯಕ್ಷರ ರೇಸ್‍ನಲ್ಲಿ ಡಿಕೆ ಶಿವಕುಮಾರ್, ಎಂಬಿ ಪಾಟೀಲ್ ಮತ್ತು ಎಸ್‍ಆರ್ ಪಾಟೀಲ್ ಹೆಸರು ಬಲವಾಗಿ ಕೇಳಿಬರುತ್ತಿದ್ದು ಮತ್ತೊಂದು ಕಡೆ ಹಾಲಿ ಅಧ್ಯಕ್ಷ ಪರಮೇಶ್ವರ್ ಹುದ್ದೆಯಲ್ಲಿ ಮುಂದುವರಿಯುವ ಇಂಗಿತವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಆಯ್ಕೆಗೆ ಸಚಿವರಲ್ಲೇ ಒಮ್ಮತ ಇಲ್ಲ ಎಂಬುದು ಹೈಕಮಾಂಡ್ ಗಮನಕ್ಕೆ ಬಂದಿದೆ. ಆದ್ರೆ ಡಿಕೆ ಶಿವಕುಮಾರ್ ಎಲ್ಲರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು ಕೆಪಿಸಿಸಿ ಅಧ್ಯಕ್ಷರ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

    ಹೈಕಮಾಂಡ್ ಜೊತೆಯೂ ಸಿಎಂ ಮಾತುಕತೆ ನಡೆಸಿದ್ದು ಪರಮೇಶ್ವರ್ ಅವರನ್ನು ಮುಂದುವರಿಸಲು ನಿರಾಸಕ್ತಿ ತೋರಿದ್ದಾರೆ. ಶಿವಕುಮಾರ್ ಆಯ್ಕೆಗೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗೀ ಹೈಕಮಾಂಡ್ ಕೂಡಾ ಗೊಂದಲಕ್ಕೆ ಈಡಾಗಿದ್ದು ಯಾವುದೇ ನಿರ್ಣಯ ತೆಗೆದುಕೊಳ್ಳಲು ತಯಾರಿಲ್ವಂತೆ. ಆದ್ರೆ ಶೀಘ್ರದಲ್ಲಿ ಅಧ್ಯಕ್ಷರ ಆಯ್ಕೆ ಮಾಡುವ ಭರವಸೆಯನ್ನ ಹೈಕಮಾಂಡ್ ನೀಡಿದೆಯಂತೆ.

    ಡಿಕೆ ಶಿವಕುಮಾರ್ ಇಲ್ಲವೇ ಎಂಬಿ ಪಾಟೀಲ್ ಅವರನ್ನ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದ್ದು ಒಂದು ವೇಳೆ ಪರಮೇಶ್ವರ್ ಮುಂದುವರಿಯುವುದಾದ್ರೆ ಎರಡು ತಿಂಗಳಲ್ಲಿ ಗೃಹ ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಸಂಘಟನೆಗೆ ಒತ್ತು ನೀಡುವಂತೆ ಹೈಕಮಾಂಡ್ ಕೆಲವು ಷರತ್ತುಗಳನ್ನು ಹಾಕಿ ಮಂದುವರಿಸುವ ಸಾಧ್ಯತೆಯೂ ಇದೆ.

    ಇತ್ತ ವಿಧಾನ ಪರಿಷತ್‍ನ ಮೂರು ಸ್ಥಾನಕ್ಕೆ ಮೋಹನ್ ಕೊಂಡಜ್ಜಿ, ಸಿ.ಪಿ ಲಿಂಗಪ್ಪ ಹಾಗೂ ಕೆ.ಪಿ ನಂಜುಡಿ ಅವರ ಹೆಸರುಗಳು ಬಹುತೇಕ ಖಚಿತವಾಗಿದ್ದು ಅಂತಿಮ ಘೋಷಣೆ ಬಾಕಿ ಉಳಿದಿದೆ. ಸಿಎಂ ಬೆಂಗಳೂರಿಗೆ ಬಂದ ಬಳಿಕ ಘೋಷಣೆ ಮಾಡಲಿದ್ದಾರೆ.