Tag: Mayuri Kyatari

  • ಮತ್ತೆ ಕ್ಯಾಮೆರಾ ಮುಂದೆ ಮಿಂಚಲು ಸಜ್ಜಾದ ‘ಕೃಷ್ಣಲೀಲಾ’ ಮಯೂರಿ

    ಮತ್ತೆ ಕ್ಯಾಮೆರಾ ಮುಂದೆ ಮಿಂಚಲು ಸಜ್ಜಾದ ‘ಕೃಷ್ಣಲೀಲಾ’ ಮಯೂರಿ

    ಸ್ಯಾಂಡಲ್ವುಡ್ (Sandalwood) ಬ್ಯೂಟಿ ಮಯೂರಿ ಅವರು ಮದುವೆಯಾಗಿ ಒಂದು ಮಗುವಾಗಿದ್ರು ಕೂಡ ಬ್ಯೂಟಿ ಮತ್ತು ಫಿಟ್‌ನೆಸ್ ಹೆಚ್ಚಿನ ಗಮನ ಕೊಡ್ತಾರೆ. ಬ್ರೇಕ್ ನಂತರ ಮತ್ತೆ ಕ್ಯಾಮೆರಾ ಮುಂದೆ ಮಿಂಚಲು ಕೃಷ್ಣನ ಲೀಲಾ(Krishnaleela) ಮಯೂರಿ (Mayuri) ರೆಡಿಯಾಗಿದ್ದಾರೆ.

    ಕಿರುತೆರೆಯ ‘ಅಶ್ವಿನಿ ನಕ್ಷತ್ರ’ (Ashwini Nakshatra) ಸೀರಿಯಲ್ ಮೂಲಕ ನಟನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಮಯೂರಿ ಕ್ಯಾತರಿ, ಕೃಷ್ಣ ಅಜಯ್ ರಾವ್‌ಗೆ ನಾಯಕಿಯಾಗಿ ಮಿಂಚಿದ್ದರು. ಸಾಕಷ್ಟು ಸಿನಿಮಾಗಳ ಜೊತೆ ರಿಯಾಲಿಟಿ ಶೋ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಕಳೆದ ಬಿಗ್ ಬಾಸ್ (Bigg Boss Kannada) ಸೀಸನ್ 9ರಲ್ಲಿ ಮಯೂರಿ ಮಿಂಚಿದ್ದರು. ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಅವರು ಇದ್ದ ಸೀಸನ್‌ಲ್ಲಿ ಗಟ್ಟಿ ಸ್ಪರ್ಧಿಯಾಗಿ ಮಯೂರಿ ಕಾಣಿಸಿಕೊಂಡಿದ್ದರು.

    ಸಹಜ ನಟನೆ, ಮುದ್ದು ಮುಖದಿಂದ ಮಯೂರಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕಡೆಯದಾಗಿ ಪೊಗರು, ವೀಲ್‌ಚೇರ್ ರೋಮಿಯೊ ಸಿನಿಮಾ ನಟಿಸಿದ್ದರು. ಈಗ ಮತ್ತಷ್ಟು ಫಿಟ್ ಆಗಿ ಕ್ಯಾಮೆರಾ ಮುಂದೆ ನಟಿ ಬರುತ್ತಿದ್ದಾರೆ. ವಾಹಿನಿಯಲ್ಲಿ ಪ್ರಸಾರವಾಗುವ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಎಂಬ ಸೀರಿಯಲ್‌ನಲ್ಲಿ ನಟಿ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ:ಕೆಟ್ಟ ಸಿನಿಮಾ ಬಗ್ಗೆ ಬಾಯ್ಬಿಟ್ಟ ತಮನ್ನಾ ನೇರ ಮಾತಿಗೆ ವಿಜಯ್ ಫ್ಯಾನ್ಸ್ ಕಿಡಿ

    ಮಾಟಗಾತಿ ಕನಕಾಂಬರಿ ಎಂಬ ವಿಶೇಷ ಪಾತ್ರಕ್ಕೆ ಮಯೂರಿ ಜೀವತುಂಬಿದ್ದಾರೆ. ಆಗಸ್ಟ್ 6ರಂದು ಸಂಜೆ 6:30ಕ್ಕೆ ಈ ಸೀರಿಯಲ್ ಪ್ರಸಾರವಾಗಲಿದೆ. 3 ಗಂಟೆಗಳ ಕಾಲ ಮೂಡಿ ಬರಲಿದೆ. ಎಂದೂ ಕಾಣಿಸಿಕೊಂಡಿರದ, ನಟಿಸಿರದ ಲುಕ್‌ನಲ್ಲಿ ಕೃಷ್ಣಲೀಲಾ ಚೆಲುವೆ ಎಂಟ್ರಿ ಕೊಡ್ತಿದ್ದಾರೆ.

    ಕೃಷ್ಣಲೀಲಾ ಬೆಡಗಿಯ ಹೊಸ ಅವತಾರ ಪ್ರೋಮೋ ನೋಡಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅಸಲಿ ಡ್ರಾಮಾ ನೋಡೊದಕ್ಕೆ ಸೀರಿಯಲ್ ನೋಡಬೇಕಿದೆ. ಈ ವಾರಾಂತ್ಯ ಟಿವಿ ಪರದೆಯಲ್ಲಿ ಮಯೂರಿ ಮಿಂಚಲಿದ್ದಾರೆ. ಹಾಗೆಯೇ ಹೊಸ ಬಗೆಯ ಕಥೆಯನ್ನ ಕೇಳ್ತಿರೋ ಮಯೂರಿ ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿಕ್ಕತಿರುಪತಿಯಲ್ಲಿ ಮಗನ ಕೇಶಮುಂಡನ ಮಾಡಿಸಿದ ನಟಿ ಮಯೂರಿ

    ಚಿಕ್ಕತಿರುಪತಿಯಲ್ಲಿ ಮಗನ ಕೇಶಮುಂಡನ ಮಾಡಿಸಿದ ನಟಿ ಮಯೂರಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮಯೂರಿ ಕ್ಯಾತರಿ ತಮ್ಮ ಮಗ ಆರವ್ ತಲೆ ಕೂದಲು ತೆಗೆಸಿದ್ದಾರೆ. ಈ ಫೋಟೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಆರವ್‍ಗೆ ಕೇಶಮುಂಡನ ಮಾಡಿದ್ದಾರೆ. ಗೋವಿಂದಾ ಗೋವಿಂದಾ ಎಂದು ಬರೆದುಕೊಂಡು ಆರವ್ ಕೂದಲು ತೆಗೆಸಿದ ನಂತರದಲ್ಲಿ ಕ್ಲಿಕ್ಕಿಸಿಕೊಂಡಿರುವ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ದಂಪತಿ ಮುಗುವನ್ನು ಇತ್ತಿಕೊಂಡು ದೇವಸ್ಥಾನದ ಎದುರು ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ಮುದ್ದಾದ ಆರವ್ ಫೋಟೋಗೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.  ಇದನ್ನೂ ಓದಿ: ನಾನು ತಾಯಿಯಾಗಿದ್ದು ನನ್ನ ಬದುಕಿನ ಅತೀ ಸಂಭ್ರಮದ ಕ್ಷಣ: ಮಯೂರಿ

     

    View this post on Instagram

     

    A post shared by mayuri (@mayurikyatari)

    2020 ಜೂನ್ 12ರಂದು ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆಗೆ ಮಯೂರಿ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದರು. ನಂತರ ತಾಯಿ ಆಗುತ್ತಿರುವ ವಿಚಾರ, ಸಿಮಂತ  ಫೋಟೋಗಳು ಹಾಗೂ ಬೇಬಿ ಬಂಪ್ ಫೋಟೋಗಳನ್ನು ಮಯೂರಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮಗ ಹುಟ್ಟಿದ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ಹೀಗೆ ಮಗನಿಗಾಗಿ ಸ್ಟಾರ್‍ಬಾಯ್ ಎನ್ನುವ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆಯನ್ನು ತೆರೆದು ಮಗನ ಕೆಲವು ಮುದ್ದಾದ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮಗನಿಗೆ ಕೇಶಮುಂಡನ ಮಾಡಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ನಾವು ನಿಮ್ಮನ್ನು ಹತ್ಯೆ ಮಾಡುತ್ತೇವೆ – ಗಂಭೀರ್‌ಗೆ ಐಸಿಸ್ ಕಾಶ್ಮೀರದಿಂದ ಜೀವ ಬೆದರಿಕೆ

  • ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ನಟಿ ಮಯೂರಿ

    ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ನಟಿ ಮಯೂರಿ

    ಬೆಂಗಳೂರು: ‘ಕೃಷ್ಣ ಲೀಲಾ’ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಸೌಂಡ್ ಮಾಡಿದ ನಟಿ ಮಯೂರಿ ಕ್ಯಾತರಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ಬಹುಕಾಲದ ಗೆಳೆಯ ಅರುಣ್ ಜೊತೆ ಸಪ್ತಪದಿ ತುಳಿಯೋದಕ್ಕೆ ನಟಿ ಮಯೂರಿ ಸಜ್ಜಾಗಿದ್ದಾರೆ. ಭರ್ತಿ 10 ವರ್ಷಗಳಿಂದ ಪ್ರೀತಿಯಲ್ಲಿ ಬಂಧಿಯಾಗಿರುವ ಮಯೂರಿ ಹಾಗೂ ಅರುಣ್, ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಅಡಿಯಿಡಲು ರೆಡಿಯಾಗಿದ್ದಾರೆ. ಶುಕ್ರವಾರ ಮಯೂರಿ ಮದುವೆ ನಡೆಯಲಿದ್ದು, ಕುಟುಂಬಸ್ಥರು-ಆಪ್ತರು ಭಾಗಿಯಾಗಲಿದ್ದಾರೆ. ದೇವಸ್ತಾನದಲ್ಲಿ ಕೃಷ್ಣಲೀಲಾ ಸುಂದರಿಯ ಮದುವೆ ನೆರವೇರುತ್ತಿದೆ.

    ಮಯೂರಿ ಅವರು ‘ಅಶ್ವಿನಿ ನಕ್ಷತ್ರ’ ಕಿರುತೆರೆ ಪ್ರವೇಶಿಸಿ, ಬಳಿಕ ‘ಕೃಷ್ಣ ಲೀಲಾ’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟವರು. ‘ಇಷ್ಟಕಾಮ್ಯ’, ‘ರುಸ್ತುಂ’ನಂತಹ ಭಿನ್ನ ಬಗೆಯ ಸಿನಿಮಾಗಳಲ್ಲಿ ನಟಿಸಿದ ನಂತರ, ಮಯೂರಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’, ‘ಮೌನಂ’ ಚಿತ್ರಗಳಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ.

    ಸಂಪೂರ್ಣ ಹೊಸಬರೇ ಇರುವ ‘ಮೌನಂ’ ಸಿನಿಮಾದಲ್ಲಿ ಮಯೂರಿ ಅವರು ನಾಯಕಿಯಾಗಿ ನಟಿಸಿದ್ದರು. ರಾಜ್ ಪಂಡಿತ್ ನಿರ್ದೇಶನದ ಈ ಸಿನಿಮಾ ಇದೇ ವರ್ಷ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು.

  • ‘ಮೌನಂ’ ಡಬ್ಬಿಂಗ್ ಮುಕ್ತಾಯ

    ‘ಮೌನಂ’ ಡಬ್ಬಿಂಗ್ ಮುಕ್ತಾಯ

    ಬೆಂಗಳೂರು:  ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಿಸಿರುವ ‘ಮೌನಂ’ ಚಿತ್ರಕ್ಕೆ ಚಂದ್ರಾ ಲೇಔಟ್‍ನಲ್ಲಿರುವ ವೈನಾಟ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ.

    ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ- ರಾಜ್ ಪಂಡಿತ್, ಛಾಯಾಗ್ರಹಣ – ಶಂಕರ್, ಸಂಗೀತ – ಆರವ್ ರಿಶಿಕ್, ಸಂಕಲನ – ಗುರುಮೂರ್ತಿ ಹೆಗಡೆ, ಸಾಹಸ – ಕೌರವ ವೆಂಕಟೇಶ್, ಅಲ್ಟಿಮೇಟ್ ಶಿವು, ಸಾಹಿತ್ಯ – ಆಕಾಶ್ ಎಸ್., ಸಹ ನಿರ್ದೇಶಕರು- ರಿತೇಶ್, ಗುಣವಂತ ಮಂಜು, ತಾರಾಗಣದಲ್ಲಿ – ಅವಿನಾಶ್- (6 ಶೇಡ್‍ಗಳಿರುವ ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದಾರೆ.) ಮಯೂರಿ (ಕೃಷ್ಣಲೀಲಾ) ಹೋಮ್ಲಿ ಮತ್ತು ಆಕ್ಷನ್ ಸೀಕ್ವೆನ್ಸ್‍ಗಳಲ್ಲಿ ಮಿಂಚಿದ್ದಾರೆ.

    ಬಾಲಾಜಿ ಶರ್ಮ (ಅಮೃತವರ್ಷಿಣಿ ಖ್ಯಾತಿ), ಹನುಮಂತೇಗೌಡ, ರಿತೇಶ್, ಕೆಂಪೇಗೌಡ, ಗುಣವಂತ ಮಂಜು, ನಯನ (ಕಾಮಿಡಿ ಕಿಲಾಡಿಗಳು), ಸಿಂಚನ, ಮಂಜುಳಾ ರೆಡ್ಡಿ, ಮುಂತಾದವರಿದ್ದಾರೆ. ಮನುಷ್ಯನಿಗೆ ಮನುಷ್ಯನೇ ಶತ್ರು, ನಾವೇ ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು ನಮ್ಮ ಒಳಗಡೆ ಇರುವ ಶತ್ರುವನ್ನು ಮಟ್ಟಹಾಕಬೇಕು ಎಂಬ ಅಂಶದ ಸುತ್ತ ಕತೆ ಸಾಗುತ್ತದೆ.