Tag: maulana

  • ನಾಲ್ವರು ಯುವಕರಿಂದ ಮೌಲಾನಾ ಮೇಲೆ ಹಲ್ಲೆ ಆರೋಪ – ನೂರಾರು ಮುಸ್ಲಿಂ ಮುಖಂಡರಿಂದ ಪ್ರತಿಭಟನೆ

    ನಾಲ್ವರು ಯುವಕರಿಂದ ಮೌಲಾನಾ ಮೇಲೆ ಹಲ್ಲೆ ಆರೋಪ – ನೂರಾರು ಮುಸ್ಲಿಂ ಮುಖಂಡರಿಂದ ಪ್ರತಿಭಟನೆ

    ಬಾಗಲಕೋಟೆ: ಅಂಜುಮಾನ್‌ ಮಸೀದಿ (Anjuman Mosque) ಮೌಲಾನಾ ಮೇಲೆ ನಾಲ್ವರು ಯುವಕರಿಂದ ಹಲ್ಲೆ ನಡೆಸಿರುವ ಆರೋಪ ಬಾಗಲಕೋಟೆಯಲ್ಲಿ (Bagalakote) ಕೇಳಿಬಂದಿದೆ.

    ಬಾಗಲಕೋಟೆಯ ನವನಗರದ (Navanagara Police) ಸೆಕ್ಟರ್ ನಂ.4 ರಲ್ಲಿ ಘಟನೆ ನಡೆದಿದ್ದು, ಮೌಲಾನಾ ಮೇಲಿನ ಹಲ್ಲೆ ಖಂಡಿರಿ ನೂರಾರು ಮುಸ್ಲಿಂ ಮುಖಂಡರು ರಾತ್ರೋ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ನವನಗರ ಪೊಲೀಸ್ ಠಾಣೆಮುಂದೆ ಜಮಾಯಿಸಿದ ನೂರಾರು ಮುಸ್ಲಿಂ ಮುಖಂಡರು ಕಾರ್ತಿಕ್, ಗಣೇಶ್, ಶಿವು ಹಾಗೂ ಆದಿತ್ಯ ಎಂಬ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಈ ಬೆನ್ನಲ್ಲೇ ನಾಲ್ವರು ಆರೋಪಿಗಳ (Accused) ಪೈಕಿ ಆರೋಪಿ ಕಾರ್ತಿಕ್‌ ಹಾಗೂ ಪ್ರೀತಮ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ. ಸದ್ಯ ನವನಗರ ಪೊಲೀಸ್ ಠಾಣೆ ಬಳಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಪ್ರತಿಭಟನಾ ನಿರತರನ್ನ ಪೊಲೀಸರು ಚದುರಿಸಿದ್ದಾರೆ.

  • ಮಕ್ಕಳು ಓಡಿ ಹೋಗದಂತೆ ತಡೆಯಲು ಕಾಲಿಗೆ ಕಬ್ಬಿಣ ಸರಪಳಿ ಕಟ್ಟಿದ ಮೌಲಾನಾ

    ಮಕ್ಕಳು ಓಡಿ ಹೋಗದಂತೆ ತಡೆಯಲು ಕಾಲಿಗೆ ಕಬ್ಬಿಣ ಸರಪಳಿ ಕಟ್ಟಿದ ಮೌಲಾನಾ

    ಲಕ್ನೋ: ಮದರಸಾ ಬಿಟ್ಟು ಓಡಿ ಹೋಗಬಾರದೆಂದು ಇಬ್ಬರು ಬಾಲಕರ ಕಾಲಿಗೆ ಮೌಲಾನಾ ಕಬ್ಬಿಣದ ಸರಪಳಿಯನ್ನು ಕಟ್ಟಿ ಕೂಡಿಹಾಕಿದ್ದಾರೆ ಎಂಬ ಆರೋಪ ಉತ್ತರ ಪ್ರದೇಶದ ಲಕ್ನೋದಲ್ಲಿ ಕೇಳಿಬಂದಿದೆ.

    ಸ್ಥಳೀಯರೊಬ್ಬರು ಈ ವೀಡಿಯೋವನ್ನು ಸೆರೆ ಹಿಡಿದು ಪೊಲೀಸರಿಗೆ ಕಳುಹಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಮೌಲಾನಾ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಬಯಸುವುದಿಲ್ಲ ಎಂದು ಬಾಲಕರ ಪೋಷಕರು ಲಿಖಿತ ಅರ್ಜಿ ಸಲ್ಲಿಸಿದ್ದಾರೆ.

    ASSAM MADARASA MADRASA

    ಓದುವುದರಿಂದ ತಪ್ಪಿಸಿಕೊಳ್ಳಲು ತಮ್ಮ ಮಕ್ಕಳು ಹಲವು ಬಾರಿ ಓಡಿಹೋಗಲು ಪ್ರಯತ್ನಿಸುತ್ತಿದ್ದರು. ಇದರಿಂದಾಗಿ ಮೌಲಾನಾ ಮಕ್ಕಳೊಂದಿಗೆ ಕಟ್ಟುನಿಟ್ಟಾಗಿ ವರ್ತಿಸುತ್ತಿದ್ದರು ಎಂದು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: PFI ರ್‍ಯಾಲಿಯಲ್ಲಿ ಪ್ರಚೋದನಕಾರಿ ಘೋಷಣೆ – 18 ಮಂದಿ ಅರೆಸ್ಟ್

    ಓದಲು ಬಾರದ ಕಾರಣ ಮಕ್ಕಳು ಓಡಿಹೋಗಲು ಯತ್ನಿಸುತ್ತಿದ್ದರು. ಅಲ್ಲದೇ ಓದುವುದರಿಂದ ತಪ್ಪಿಸಿಕೊಳ್ಳಲು ಓರ್ವ ಬಾಲಕ ಶೌಚಾಲಯದಲ್ಲಿ ಅಡಗಿ ಕುಳಿತುಕೊಂಡಿದ್ದನು ಎಂದು ಹೇಳಿದರು. ಇದನ್ನೂ ಓದಿ: ಸಾಕ್ಷ್ಯಾಧಾರಗಳ ಕೊರತೆ- ಆರ್ಯನ್ ಖಾನ್ ಸೇರಿ 6 ಮಂದಿಗೆ ಎನ್‍ಸಿಬಿ ಕ್ಲೀನ್‌ಚಿಟ್

  • ಮಸೀದಿಯಲ್ಲಿ ಮೊಬೈಲ್ ಬಳಸ್ಬೇಡಿ ಎಂದಿದ್ದಕ್ಕೆ ಮೌಲನಾರನ್ನು ಎತ್ತಂಗಡಿ ಮಾಡಿಸಿದ ಪರಮೇಶ್ವರ್ ನಾಯ್ಕ್

    ಮಸೀದಿಯಲ್ಲಿ ಮೊಬೈಲ್ ಬಳಸ್ಬೇಡಿ ಎಂದಿದ್ದಕ್ಕೆ ಮೌಲನಾರನ್ನು ಎತ್ತಂಗಡಿ ಮಾಡಿಸಿದ ಪರಮೇಶ್ವರ್ ನಾಯ್ಕ್

    ಬಳ್ಳಾರಿ: ಹೂವಿನಹಡಗಲಿ ಶಾಸಕ ಪರಮೇಶ್ವರ ನಾಯ್ಕ್ ಸಚಿವರಾಗಿದ್ದಾಗ ಫೋನ್ ಹೋಲ್ಡ್ ಮಾಡಿದ್ರು ಅಂತ ಕೂಡ್ಲಗಿ ಡಿವೈಎಸ್‍ಪಿ ಅನುಪಮಾ ಶಣೈ ಅವ್ರನ್ನೇ ಎತ್ತಂಗಡಿ ಮಾಡಿಸಿದ್ರು. ಈಗ ಮಸೀದಿಯಲ್ಲಿ ಮೊಬೈಲ್ ಫೋನ್ ಬಳಸಬೇಡಿ ಅಂತ ಪರಮೇಶ್ವರ್ ನಾಯ್ಕ್ ಆಪ್ತರಿಗೆ ಸೂಚಿಸಿದ್ದಕ್ಕೆ ಮುಸ್ಲಿಂ ಮೌಲಾನಾರಿಗೆ ಮಸೀದಿಯಿಂದಲೇ ಗೇಟ್‍ಪಾಸ್ ಕೊಟ್ಟಿದ್ದಾರೆ.

    ನಾಯ್ಕ್ ಸಹಚರ ವರದಾ ಗೌಸ್ ಎಂಬವರ ಸಹೋದರ ನಿಯಾಜ್‍ಗೆ ಬುದ್ಧಿ ಹೇಳಿದ್ದಕ್ಕೆ ಧರ್ಮಗುರುಗಳು ಪರಮೇಶ್ವರ್ ನಾಯ್ಕ್ ವಕ್ರದೃಷ್ಠಿಗೆ ಗುರಿಯಾಗಿದ್ದಾರೆ. ಮೆಹಮೂದ್ ಆಲಂ 18 ವರ್ಷಗಳಿಂದ ಹಡಗಲಿಯ ಜಾಮಿಯಾ ಮಸೀದಿ ಧರ್ಮಗುರುವಾಗಿ ಸೇವೆ ಸಲ್ಲಿಸ್ತಿದ್ದಾರೆ. ಆದ್ರೆ ಮೌಲನಾರನ್ನು ಎತ್ತಂಗಡಿ ಮಾಡದಿದ್ದರೆ ದೊಂಬಿ, ಕೋಮು ಗಲಭೆ, ರಕ್ತಪಾತ ಸೃಷ್ಟಿಯಾಗುತ್ತೆ ಅಂತಾ ತಹಶೀಲ್ದಾರ್‍ರಿಂದ ವಕ್ಫ್ ಬೋರ್ಡ್‍ಗೆ ವರದಿ ಸಲ್ಲಿಸಿದ್ದಾರೆ. ಅಲ್ಲದೆ ಮೌಲನಾರ ವಿರುದ್ಧ ನಡೆದ ಷಂಡ್ಯತ್ರದ ಆಡಿಯೋ ಸಂಭಾಷಣೆ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಆಡಿಯೋದಲ್ಲೇನಿದೆ?: ನಾಳೆ ಬೆಳಗ್ಗೆ ಒಂದು ಡ್ರಾಪ್ ಮಾಡು, ಒಂದು ಕಾಪಿ ದೈವಕ್ಕೂ, ಒಂದು ಕಾಪಿ ಮಸೀದಿ ಕಮಿಟಿಗೆ ಕಳಿಸು. ಹತ್ತತ್ತು ಮಂದಿದಾ ಸಹಿ ಮಾಡಿಸ್ಕೋ. ಸಹಿ ಯಾಕೆ ಅಂತಾ ಅವರಿಗೆ ಏನೂ ಹೇಳ್ಬೇಡ. ನಾಲ್ಕು ಜನ ಮಿನಿಸ್ಟರ್ ಹತ್ತಿರ ಹೋಗಿ ಮಿನಿಸ್ಟರ್‍ನಿಂದ ಡಿವೈಎಸ್‍ಪಿಗೆ ಫೋನ್ ಮಾಡ್ಸಿ. ಆತ ಮೌಲನಾ ಆದ್ರೆ ಕೋಮು ಗಲಭೆ ಮಾಡಿಸ್ತಾನೆ. ಯೆಂಡಾ ಪಂಡಾ ಕಟ್ಟಿಸ್ತಾನೆ. ಪೊಲೀಸ್ರು ಎಂಎಲ್‍ಎ ಮಂತ್ರಿನಾ ಬೈತಾನೆ. ಊರಮ್ಮನ ಜಾತ್ರೆ ಮಾಡಬೇಡ ಅಂತಾನೆ ಅಂತ ಹೇಳು. ಮಸೀದಿ ಕಮಿಟಿ ರದ್ದು ಮಾಡೋದೆ ನಮ್ಮ ಕೆಲಸ ಗೊತ್ತಾಯ್ತಾ.

    https://www.youtube.com/watch?v=UWEQaBKFeRw&feature=youtu.be

    ಹೀಗೆ ಮಸಲತ್ತು ಮಾಡಿ ಮೌಲಾನರನ್ನ ಮಸೀದಿಯಿಂದ ಓಡಿಸಿದ್ದಕ್ಕೆ ಮುಸ್ಲಿಮರು ಸಿಟ್ಟಿಗೆದ್ದಿದ್ದಾರೆ. ಹೀಗಾಗಿ ಮಸೀದಿಯ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ವರದಾ ಗೌಸ್

    ನಿಯಾಜ್‍