Tag: Matte Udbhava

  • ‘ಮತ್ತೆ ಉದ್ಭವ’ದಲ್ಲಿ ಮತ್ತದೇ ಮನರಂಜನೆ, ರಾಜಕೀಯ ವಿಡಂಬನೆ- ನೈಜ ಘಟನೆಗಳೇ ಚಿತ್ರದ ಜೀವಾಳ!

    ‘ಮತ್ತೆ ಉದ್ಭವ’ದಲ್ಲಿ ಮತ್ತದೇ ಮನರಂಜನೆ, ರಾಜಕೀಯ ವಿಡಂಬನೆ- ನೈಜ ಘಟನೆಗಳೇ ಚಿತ್ರದ ಜೀವಾಳ!

    ಕೋಡ್ಲು ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದಿರೋ ‘ಮತ್ತೆ ಉದ್ಭವ’ ಚಿತ್ರ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. 90ರ ದಶಕದಲ್ಲಿ ತಾವೇ ನಿರ್ದೇಶಿಸಿ ಗೆದ್ದಿದ್ದ ಉದ್ಭವ ಚಿತ್ರದ ಮುಂದುವರಿದ ಭಾಗ ಚಿತ್ರದಲ್ಲಿದ್ದು, ರಂಗಾಯಣ ರಘು ಇಲ್ಲಿ ಅನಂತ್ ನಾಗ್ ಪಾತ್ರ ನಿರ್ವಹಿಸಿದ್ದು, ಮಗನ ಪಾತ್ರದಲ್ಲಿ ನಟ ಪ್ರಮೋದ್ ನಟಿಸಿದ್ದಾರೆ.

    ಜನರ ಮೂಡನಂಬಿಕೆ, ಮುಗ್ಧತೆ, ರಾಜಕೀಯ ವಿಡಂಬನೆಯನ್ನೇ ಬಂಡವಾಳವಾಗಿಟ್ಟುಕೊಂಡು ಜನರನ್ನು ಯಾಮಾರಿಸೋ ಅಪ್ಪ ಮಗನಾಗಿ ರಂಗಾಯಣ ರಘು, ಪ್ರಮೋದ್ ನಟಿಸಿದ್ದಾರೆ. ಜನರನ್ನು ಮೂರ್ಖರನ್ನಾಗಿಸುವುದನ್ನೇ ಪ್ರಧಾನವಾಗಿಟ್ಟುಕೊಂಡು ದುಡ್ಡು ಮಾಡುವ ಅಪ್ಪ ಮಗನ ಆಟ ತೆರೆ ಮೇಲೆ ಚೆಂದವಾಗಿ ಭಿತ್ತರವಾಗಿದೆ. ಗಣೇಶ ಮೂರ್ತಿಯ ಸುತ್ತ ಏಳುವ ಪ್ರಶ್ನೆಗಳು, ಟ್ವಿಸ್ಟ್ ಗಳು ಮಜಾ ನೀಡುತ್ತವೆ.

    ನೈಜ ಘಟನೆಗಳೇ ‘ಮತ್ತೆ ಉದ್ಭವ’ ಚಿತ್ರದ ಕಥೆಯಾಗಿದ್ದು, ಪ್ರಸ್ತುತ ರಾಜಕೀಯ ಘಟನೆಗಳು, ಸ್ವಾಮೀಜಿಗಳ ರಾಸಲೀಲೆ ಇವೆಲ್ಲವನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಎಲ್ಲವನ್ನು ಮಿಶ್ರ ಮಾಡಿ ಹೇಳುವಲ್ಲಿ ಕೊಂಚ ಎಡವೋ ನಿರ್ದೇಶಕರು ಸೆಕೆಂಡ್ ಹಾಫ್ ಲ್ಯಾಗ್ ಮಾಡಿದ್ದಾರೆ. ಒಂದಷ್ಟು ಮೈನಸ್ ಪಾಯಿಂಟ್‍ಗಳನ್ನ ಹೊರತು ಪಡಿಸಿದ್ರೆ ‘ಮತ್ತೆ ಉದ್ಭವ’ ಸಖತ್ ಮಜಾ ನೀಡುತ್ತೆ.

    ಪ್ರಮೋದ್ ಅಭಿನಯದಲ್ಲಿ ಮಾಗಿದ್ದಾರೆ, ಮಿಲನ ನಾಗರಾಜ್ ರಾಜಕರಣಿ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಎಲ್ಲ ಪಾತ್ರಗಳು ಅಚ್ಚುಕಟ್ಟಾಗಿ ಅಭಿನಯಸಿ ಚಿತ್ರಕ್ಕೆ ಜೀವ ತುಂಬಿದ್ದಾರೆ.

    ಚಿತ್ರ: ಮತ್ತೆ ಉದ್ಭವ
    ನಿರ್ದೇಶನ: ಕೋಡ್ಲು ರಾಮಕೃಷ್ಣ
    ಛಾಯಾಗ್ರಹಣ: ಮೋಹನ್
    ಸಂಗೀತ: ವಿ. ಮನೋಹರ್
    ತಾರಾಬಳಗ: ಪ್ರಮೋದ್, ರಂಗಾಯಣ ರಘು, ಮಿಲನಾ ನಾಗರಾಜ್, ಅವಿನಾಶ್, ಸುಧಾ ಬೆಳವಾಡಿ, ಇತರರು.

    ರೇಟಿಂಗ್: 3.5/5

  • ‘ಮತ್ತೆ ಉದ್ಭವ’ ಫುಲ್ ಮನರಂಜನೆ- ನಕ್ಕು ನಗಿಸಲು ‘ಮತ್ತೆ ಉದ್ಭವ’ವಾದ ಆ ಗಣಪ!

    ‘ಮತ್ತೆ ಉದ್ಭವ’ ಫುಲ್ ಮನರಂಜನೆ- ನಕ್ಕು ನಗಿಸಲು ‘ಮತ್ತೆ ಉದ್ಭವ’ವಾದ ಆ ಗಣಪ!

    ದ್ಭವ’ ಸಿನಿಮಾ ನೋಡಿದವರು ‘ಮತ್ತೆ ಉದ್ಭವ’ಕ್ಕಾಗಿ ಕಾಯುತ್ತಿದ್ದಾರೆ. ನೋಡದವರೆಲ್ಲ ‘ಮತ್ತೆ ಉದ್ಭವ’ ಹೆಸರು ಕೇಳಿದ್ದೇ ತಡ ‘ಉದ್ಭವ’ ಸಿನಿಮಾವನ್ನ ಒಂದು ರೌಂಡ್ ನೋಡಿ, ‘ಮತ್ತೆ ಉದ್ಭವ’ ಇನ್ನೇಗಿರಬಹುದು ಎಂಬ ಅಂದಾಜು ಹಾಕುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಸಿನಿಮಾದ ರುವಾರಿ ನಿರ್ದೇಶನ ಕೂಡ್ಲು ರಾಮಕೃಷ್ಣ.

    ಕೂಡ್ಲು ರಾಮಕೃಷ್ಣ ಅವರ ನಿರ್ದೇಶನದ ಸಿನಿಮಾಗಳನ್ನೆಲ್ಲ ನೋಡಿದ್ದವರು ಈ ಸಿನಿಮಾದ ನಿರ್ಮಾಪಕರು. ಹೀಗಾಗಿಯೇ ಈ ಸಿನಿಮಾದ ನಿರ್ಮಾಣಕ್ಕೆ ನಿತ್ಯಾನಂದ ಭಟ್, ಸತ್ಯಾ ವೆಂಕಟೇಶ್, ಮಹೇಶ್ ಮತಗತು ರಾಜೇಶ್ ಕೈ ಹಾಕಿದ್ದಾರೆ. ಈ ಮುಂಚೆ ಕಾಫಿತೋಟ ಸಿನಿಮಾಗೆ ಬಂಡವಾಳ ಹೂಡಿದ್ದ ರಾಜೇಶ್, ಸಿನಿಮಾ ಗೆದ್ದರೆ ಮಾತ್ರ ನೆಕ್ಸ್ಟ್ ಮೂವಿ ಅಂತ ತೀರ್ಮಾನಿಸಿದ್ದರಂತೆ. ಕಾಫಿತೋಟ ಗೆದ್ದ ಕಾರಣ ಇಂದು, ಈ ನಾಲ್ಕು ಜನ ಸ್ನೇಹಿತರು ಸೇರಿ ಒಂದು ನಿರ್ಮಾಣ ಸಂಸ್ಥೆಯೊಂದನ್ನು ಕಟ್ಟಿ ‘ಮತ್ತೆ ಉದ್ಭವ’ ಮಾಡಿದ್ದಾರೆ.

    ಈ ಸಿನಿಮಾಗಾಗಿ ಅದರಲ್ಲೂ ಕ್ಲೈಮ್ಯಾಕ್ಸ್ ಸೆಟ್‍ಗಾಗಿಯೇ 22 ಲಕ್ಷ ಖರ್ಚಾಗಿದೆಯಂತೆ. ಕೇಳಿದ ಎಲ್ಲಾ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದು, 150 ಜನ ಜೂನಿಯರ್ಸ್ ಕರೆಸಿ ಅಂದ್ರೆ 200 ಜನ ಕರೆಸ್ತಾ ಇದ್ರು. ಯಾವುದಕ್ಕೂ ಕೊರತೆ ಕಾಡದಂತೆ ನಿರ್ಮಾಪಕರು ನೋಡಿಕೊಂಡಿದ್ದಾರೆ ಎಂದು ನಿರ್ದೇಶಕ ಕೂಡ್ಲು ರಾಮಕೃಷ್ಣ ಹೇಳಿಕೊಂಡಿದ್ದಾರೆ.

    ಈ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರಗಳು ತುಂಬಾ ಮುಖ್ಯವಾಗುತ್ತವೆ. `ಉದ್ಭವ’ದಲ್ಲಿ ಅನಂತ್ ನಾಗ್ ಇದ್ರು. ಮುಂದುವರಿದ ಅವರ ಪಾತ್ರವನ್ನ ನಿರ್ವಹಿಸೋದಕ್ಕೆ ರಂಗಾಯಣ ರಘು ಸೂಕ್ತವಾಗಿದ್ದಾರೆ. ಹಾಗೇ ಉಳಿದೆಲ್ಲಾ ಪಾತ್ರಗಳು ಕೂಡ ಅಷ್ಟೇ ಮುಖ್ಯವಾಗುತ್ತವೆ. ಇಲ್ಲಿ ರಂಗಾಯಣ ರಘು ಹೆಂಡತಿ ಪಾತ್ರದಲ್ಲಿ ಸುಧಾ ಬೆಳವಾಡಿಯವರು ಮಾಡಿದ್ದಾರೆ. ಸಿನಿಮಾದಲ್ಲಿನ ಕೆಲವೊಂದು ಅನುಭವಗಳನ್ನ ಸುಧಾ ಬೆಳವಾಡಿ ಅವರು ಹಂಚಿಕೊಂಡಿದ್ದಾರೆ. `ಕೂಡ್ಲು ರಾಮಕೃಷ್ಣ ಅವರ ಜೊತೆ `ಮಿಸ್ಟರ್ ಡೂಪ್ಲಿಕೇಟ್’ ಅನ್ನೋ ಸಿನಿಮಾವನ್ನ ಮಾಡಿದ್ದೀನಿ. ರಂಗಾಯಣ ರಘು ಕಾಂಬಿನೇಶನ್ ನಲ್ಲಿ ಹೀರೋ ಅಮ್ಮನಾಗಿ ಮಾಡಿದ್ದೀನಿ. ಒಮ್ಮೊಮ್ಮೆ ಕಾಮಿಡಿ, ಇನ್ನೊಂದೊಮ್ಮೆ ಎಮೋಷನಲ್ಲಾಗಿರೋ ಪಾತ್ರ ನಿರ್ವಹಣೆ ಮಾಡಿದ್ದೇನೆ ಅಂತಾರೆ.

    ಸಿನಿಮಾದಲ್ಲಿ ಪ್ರಮೋದ್‍ಗೆ ನಾಯಕಿಯಾಗಿ ಮಿಲನ ನಾಗರಾಜ್ ಅಭಿನಯಿಸಿದ್ದು, ಸುಧಾ ಬೆಳವಾಡಿ, ರಂಗಾಯಣ ರಘು ಕಾಂಬಿನೇಷನ್ ಜನರನ್ನ ಮತ್ತಷ್ಟು ಮನರಂಜಿಸುತ್ತೆ. ವಿ. ಮನೋಹರ್ ಸಂಗೀತದಲ್ಲಿ ಕಿವಿಗೆ ತಂಪೆನಿಸುವ ಹಾಡುಗಳಿದ್ದು, ಥ್ರಿಲ್ಲರ್ ಮಂಜು ಸಾಹಸವಿದೆ. ಫುಲ್ ಮನರಂಜನೆ ನೀಡಲು ಕೂಡ್ಲು ಟೀಂ ರೆಡಿಯಾಗಿದೆ. ಇನ್ನೆನಿದ್ರು ಆ ಮೀಲ್ಸ್‍ನ ಜನ ಸವಿದು ತೃಪ್ತಿ ಪಟ್ಟುಕೊಳ್ಳಬೇಕಷ್ಟೆ.

  • ‘ಮತ್ತೆ ಉದ್ಭವ’ಕ್ಕೆ ‘ಉದ್ಭವ’ವೇ ಸ್ಫೂರ್ತಿ!

    ‘ಮತ್ತೆ ಉದ್ಭವ’ಕ್ಕೆ ‘ಉದ್ಭವ’ವೇ ಸ್ಫೂರ್ತಿ!

    ‘ಉದ್ಭವ’ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. 91ರ ದಶಕದಲ್ಲೇ ಹೊಸ ಕಲ್ಪನೆಯೊಂದಿಗೆ ಬಂದ ‘ಉದ್ಭವ’ ಎಲ್ಲರ ಮನಸ್ಸಿನೊಳಗೆ ಕುಳಿತುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಅದ್ಭುತ ಕಥೆಯೊಂದಿಗೆ ಕೂಡ್ಲು ರಾಮಕೃಷ್ಣ ಹಾಗೂ ಅನಂತ್ ನಾಗ್ ಜೋಡಿ ಗೆದ್ದಿತ್ತು. ಸಿನಿಮಾ ಎಲ್ಲರ ಮನಸ್ಸಿನೊಳಗೆ ಕುಳಿತುಕೊಂಡಿತ್ತು. ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಕೂಡ್ಲು ರಾಮಕೃಷ್ಣ ಅವರು ‘ಮತ್ತೆ ಉದ್ಭವ’ ನಿರ್ದೇಶಿಸಿದ್ದಾರೆ. ಒಂದು ಅದ್ಭುತವಾದ ಕಾಮಿಡಿ ಜಾನರ್ ಸಿನಿಮಾ ಇದಾಗಿದ್ದು, ಇಡೀ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದು. ಉದ್ಭವದ ಸೀಕ್ವೆನ್ಸ್ ಎಂದಾಗಲೇ ಸಹಜವಾಗಿಯೇ ಸಿನಿಮಾದ ಮೇಲೆ ಕುತೂಹಲ ಮೂಡಿದೆ. ಯಾವಾಗ ರಿಲೀಸ್ ಆಗುತ್ತೆ ಅಂತ ಕಾಯುತ್ತಿದ್ದವರಿಗೆ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ.

    ಕೂಡ್ಲು ರಾಮಕೃಷ್ಣ ಅವರು ಚಂದನವನದ ಹಿರಿಯ ನಿರ್ದೇಶಕ. ಹಲವು ಸದಾಭಿರುಚಿಯ ಸಿನಿಮಾಗಳನ್ನು ನೀಡಿದವರು. ಅವರ ಬಹುತೇಕ ಚಿತ್ರಗಳು ಕಾದಂಬರಿಯಾಧಾರಿತ, ಸಾಮಾಜಿಕ, ರಾಜಕೀಯ ಅವ್ಯವಸ್ಥೆಗಳನ್ನು ವಿಡಂಬನಾತ್ಮಕವಾಗಿ ಚಿತ್ರೀಸುವ ಅವರ ಶೈಲಿ ಎಲ್ಲರಿಗೂ ಅಚ್ಚುಮೆಚ್ಚು. ‘ಉದ್ಭವ’ದಲ್ಲಿ ನಕ್ಕುನಲಿಸಿದ್ದಲ್ಲದೆ, ‘ಮತ್ತೆ ಉದ್ಭವ’ದಲ್ಲೂ ನಗಿಸಲು ಬಂದಿದ್ದಾರೆ. ‘ಉದ್ಭವ’ ಸಿನಿಮಾ ರಿಲೀಸ್ ಆದಾಗ 1 ಗಂಟೆ ಇದ್ದ ಶೋ ಗೆ 11 ಗಂಟೆಗೆಲ್ಲಾ ಥಿಯೇಟರ್ ಹೌಸ್ ಫುಲ್ ಆಗಿತ್ತಂತೆ. ಅವತ್ತು ಕೂಡ್ಲು ರಾಮಕೃಷ್ಣ ಅವರು ಸ್ನೇಹಿತರನ್ನು ಕರೆದುಕೊಂಡು ಸಿನಿಮಾಗೇ ಹೋಗಿದ್ರಂತೆ. ಆದ್ರೆ ಕ್ಯೂ ನಿಲ್ಲದೆ ನೇರವಾಗಿ ಟಿಕೆಟ್ ಕೌಂಟರ್ ಬಳಿ ಹೋಗಿದ್ರಂತೆ. ಸೆಕ್ಯೂರಿಟಿ ಬಂದು ಕಾಲಿಗೆ ಒಡೆದು, ಅಲ್ಲಿ ಎಲ್ಲಾ ಕ್ಯೂನಲ್ಲಿ ನಿಂತಿದ್ದಾರೆ. ದೊಡ್ಡ ಮನುಷ್ಯ ನೀನು ಬಂದುಬಿಟ್ಯಾ ಅಂತ ಗದರಿದ್ದರಂತೆ. ಆ ಕ್ಯೂನಲ್ಲಿ ಡೈರೆಕ್ಟರ್ ವಿ.ಸೋಮಶೇಖರ್, ರಮನಾಥ್ ರೈ, ಶ್ರೀನಿವಾಸ್ ಪ್ರಸಾದ್ ಕೂಡ ನಿಂತಿದ್ದರಂತೆ. ಸೆಕ್ಯೂರಿಟಿ ಹೊಡೆದ ತಕ್ಷಣ ಅವ್ರೆಲ್ಲಾ ಅವ್ರೆ ಕಣಪ್ಪ ಡೈರೆಕ್ಟರ್ ಅಂದಾಗ ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ರಂತೆ. ಆಗ ಬಿದ್ದ ಒದೆಗಿಂತ ಜನ ನನ್ನ ಸಿನಿಮಾ ಪ್ರೀತಿಸಿದ ರೀತಿ ನೋಡಿ ನೋವು ಮಾಯಾ ಆಯ್ತು ಅಂತಾರೆ ನಿರ್ದೇಶಕ ಕೂಡ್ಲು ರಾಮಕೃಷ್ಣ.

    ಇನ್ನು ಆ ಸಿನಿಮಾ ಮುಗಿದು 29 ವರ್ಷಗಳಾಯ್ತು. ‘ಮಾರ್ಚ್-22’ ರಿಲೀಸ್ ಆದ್ಮೇಲೆ ಸುಮಾರು ಒಂದು ಒಂದೂವರೆ ವರ್ಷ ಕೂಡ್ಲು ಸುಮ್ನೆ ಕುಳಿತಿದ್ದರಂತೆ. ಎಲ್ಲಿ ಹೋದ್ರು ಸರ್ ಮತ್ತೆ ‘ಉದ್ಭವ’ದಂತ ಸಿನಿಮಾ ಮಾಡಿ ಸರ್ ಅನ್ನೋ ಮಾತು ಕೇಳಿ ಕೇಳಿ ಪಡೆದ ಸ್ಫೂರ್ತಿಯೇ ಇವತ್ತಿನ ‘ಮತ್ತೆ ಉದ್ಭವ’ ಅಂತಾರೆ ನಿರ್ದೇಶಕ. ಆ ಚಿತ್ರದಲ್ಲಿ ದೇವಸ್ಥಾನ ಇತ್ತು. ಈಗ ದೇವಸ್ಥಾನದ ಬದಲಿಗೆ ಟೆಂಪಲ್ ಮಾಲ್ ಆಗಿದೆ. ಟೆಂಪಲ್ ಮಾಲ್ ಅನ್ನೋ ಒಂದೇ ಪದದ ಮೇಲೆ ಇಡೀ ಸಿನಿಮಾ ನಿಂತಿದೆ ಅಂತೇಳೋ ನಿರ್ದೇಶಕರು, ಕನ್ನಡ ಚಿತ್ರರಂಗದಲ್ಲಿ ಅಲ್ಲ ಭಾರತೀಯ ಚಿತ್ರರಂಗದಲ್ಲೇ ಯಾರು ನಿರೀಕ್ಷೆ ಮಾಡದಿರುವಂತ ಚಿತ್ರ ಅದು. ಯಾರು ಕೂಡ ಊಹೆ ಮಾಡದೆ ಇರುವಂತ ಕ್ಲೈಮ್ಯಾಕ್ಸ್ ಅದು ಎಂದು ತುಂಬಾ ಕುತೂಹಲಕಾರಿಯಾಗಿ ಹೇಳಿದ್ದಾರೆ.

    ಈಗಾಗಲೇ ಚಿತ್ರದ ಪೋಸ್ಟರ್, ಟ್ರೇಲರ್ ನಿಂದಲೇ ಸಿನಿಮಾದಲ್ಲಿರುವ ನಗುವಿನ ಬಗ್ಗೆ ಅರ್ಥೈಸಿಕೊಳ್ಳಲಾಗಿದೆ. ಪ್ರಮೋದ್, ಮಿಲನಾ ನಾಗರಾಜ್, ರಂಗಾಯಣ ರಘು, ಸುಧಾ ಬೆಳವಾಡಿ, ಮೋಹನ್ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ. ಮೋಹನ್ ಛಾಯಾಗ್ರಹಣ, ವಿ ಮನೋಹರ್ ಸಂಗೀತ ನೀಡಲಿದ್ದಾರೆ. ಉಳಿದಂತೆ ಅವಿನಾಶ್, ಸುಧಾ ಬೆಳವಾಡಿ, ಶುಭಾ ರಕ್ಷಾ ಸೇರಿ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ವೈಟ್ ಪ್ಯಾಂಥರ್ಸ್ ಕ್ರಿಯೇಟಿವ್ಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಲಿದೆ.

  • ‘ಉದ್ಭವ’ದಲ್ಲಿ ಅಪ್ಪ ಕಿಲಾಡಿ ‘ಮತ್ತೆ ಉದ್ಭವ’ದಲ್ಲಿ ಮಗ ಪ್ರಳಯಾಂತಕ!

    ‘ಉದ್ಭವ’ದಲ್ಲಿ ಅಪ್ಪ ಕಿಲಾಡಿ ‘ಮತ್ತೆ ಉದ್ಭವ’ದಲ್ಲಿ ಮಗ ಪ್ರಳಯಾಂತಕ!

    ಈ ಹಿಂದೆ ಬಾಲಿವುಡ್, ಟಾಲಿವುಡ್‍ಗಳಲ್ಲಿ ಒಂದು ಸಿನಿಮಾ ಬಂದರೆ ಅದರ ಮುಂದುವರಿದ ಭಾಗವಾಗಿ ಮತ್ತದೇ ಹೆಸರಲ್ಲಿ ಸಿನಿಮಾ ಬರ್ತಾ ಇತ್ತು. ಇದೀಗ ಸ್ಯಾಂಡಲ್‍ವುಡ್‍ನ ಭಾಗ-2ರ ಅಬ್ಬರ ಜೋರಾಗಿದೆ. 1990ರಲ್ಲಿ ತೆರೆಕಂಡು ಯಶಸ್ಸು ಗಳಿಸಿದ ಸಿನಿಮಾವೊಂದು ಈ ಸಾಲಿಗೆ ಸೇರಿದೆ. ಬಿ.ವಿ.ವೈಕುಂಠರಾಜು ಅವರ ಕಾದಂಬರಿ ಆಧರಿಸಿ ಕೂಡ್ಲು ರಾಮಕೃಷ್ಣ ಅವರ ನಿರ್ದೇಶನದಲ್ಲಿ ಅನಂತ್ ನಾಗ್ ಅಭಿನಯದಲ್ಲಿ ಮೂಡಿಬಂದ ಚಿತ್ರ ‘ಉದ್ಭವ’. 29 ವರ್ಷಗಳ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ಭಾಗ್ಯ ಸಿಕ್ಕಿದ್ದು ‘ಮತ್ತೆ ಉದ್ಭವ’ ಆರಂಭವಾಗುತ್ತಿದೆ.

    ‘ಉದ್ಭವ’ ನಿರ್ದೇಶಿಸಿದ್ದ ಕೂಡ್ಲು ರಾಮಕೃಷ್ಣ ಅವರೇ ‘ಮತ್ತೆ ಉದ್ಭವ’ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಅಂದಿನ ಸಿನಿಮಾಗಳಲ್ಲಿ ಇದ್ದಂತ ಕುತೂಹಲ ಈ ಸಿನಿಮಾದಲ್ಲೂ ಕ್ಯಾರಿ ಆಗಲಿವೆ. ‘ಉದ್ಭವ’ದಲ್ಲಿ ಅನಂತ್‍ನಾಗ್‍ಗೆ ಇಬ್ಬರು ಮಕ್ಕಳಿದ್ದರು 29 ವರ್ಷಗಳಲ್ಲಿ ಆ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಇಂದಿನ ‘ಮತ್ತೆ ಉದ್ಭವ’ದಲ್ಲಿ ಮಕ್ಕಳ ಜೊತೆ ಜೊತೆ ಕಥೆ ಸಾಗುತ್ತದೆ.

    ‘ಉದ್ಭವ’ದಲ್ಲಿ ಅನಂತ್ ನಾಗ್ ಕಾರ್ಪೊರೇಟರ್ ಲೆವೆಲ್‍ನಲ್ಲಿ ತನ್ನ ಆಟವನ್ನ ತೋರಿಸಿದ್ರು. ಮಗ ‘ಮತ್ತೆ ಉದ್ಭವ’ದಲ್ಲಿ ಬೆಳೆದು ದೊಡ್ಡವನಾಗಿದ್ದಾನೆ. ಇಲ್ಲಿ ಯಾವ ರೀತಿಯ ಆಟವನ್ನ ತೋರಿಸುತ್ತಾನೆ ಅನ್ನೋ ಕುತೂಹಲ ನಮ್ಮದು. ಉದ್ಭವ ನೋಡಿದವರಿಗೆ ಅನಂತ್ ನಾಗ್ ನಟನೆ ಕಣ್ಣ ಮುಂದೆ ಇದ್ದೆ ಇರುತ್ತೆ. ಈ ಸಿನಿಮಾ ಮುಂದುವರಿದ ಭಾಗವಾಗಿರುವ ಕಾರಣ ಅಪ್ಪನಿಗೆ ಹೋಲಿಕೆಯಾಗುವಂತ ಪಾತ್ರ ಮುಂದುವರೆಯಲೇ ಬೇಕಾಗುತ್ತದೆ. ಒಂದು ಟೆಂಪಲ್ ಮಾಲ್ ಮೇಲೆ ಸಿನಿಮಾದ ಕಥೆ ಓಡುತ್ತದೆಯಂತೆ. ಈಗಾಗಲೇ ‘ಪ್ರೀಮಿಯರ್ ಪದ್ಮಿನಿ’ ಎಂಬ ಚಿತ್ರದಲ್ಲಿ ಸಕ್ಸಸ್ ಕಂಡಿರುವ ನಟ ಪ್ರಮೋದ್ ಮತ್ತೊಂದು ಹಿಟ್ ಚಿತ್ರ ಇದಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇನ್ನು ‘ಬೃಂದಾವನ’ ದಲ್ಲಿ ಎಂಟ್ರಿ ಕೊಟ್ಟ ನಟಿ ಮಿಲನಾ ನಾಗರಾಜ್ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸ್ತಾ ಇದ್ದಾರೆ. ಅವ್ರ ಪಾತ್ರ ಎರಡು ಶೇಡ್‍ಗಳಲ್ಲಿ ಮುಂದುವರಿಯಲಿದ್ದು, ಮಿಲನಾ ನಾಗರಾಜ್ ಸಿನಿಮಾಗೆ ಮಾತ್ರ ನಾಯಕಿ ಅಲ್ಲ ಸಿನಿಮಾದ ಒಳಗೂ ನಾಯಕಿಯ ಪಾತ್ರ ಮಾಡಿದ್ದಾರೆ. ಮತ್ತೊಂದು ಶೇಡ್‍ನಲ್ಲಿ ರಾಜಕಾರಣಿ ಪಾತ್ರದಲ್ಲಿ ಮಿಂಚಿದ್ದಾರೆ.

    ಚಿತ್ರವನ್ನು ನಿತ್ಯಾನಂದ ಭಟ್, ಸತ್ಯ, ಮಹೇಶ್ ಮುದ್ಗಲ್ ಮತ್ತು ರಾಜೇಶ್ ನಿರ್ಮಾಣ ಮಾಡಿದ್ದಾರೆ. ಅಂದು ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದ್ದ ‘ಉದ್ಭವ’ದಲ್ಲಿ ಅನಂತ್ ನಾಗ್, ಬಾಲಕೃಷ್ಣ, ಕೆ.ಎಸ್.ಅಶ್ವತ್ಥ್, ಸುಂದರ್ ರಾಜ್ ಕಾಣಿಸಿಕೊಂಡಿದ್ದರು. ‘ಮತ್ತೆ ಉದ್ಭವ’ದಲ್ಲಿ ಅನಂತ್ ನಾಗ್ ನಟಿಸುತ್ತಿಲ್ಲ ಅವರ ಪಾತ್ರವನ್ನು ರಂಗಾಯಣ ರಘು ನಿರ್ವಹಿಸುತ್ತಿದ್ದು, ಉಳಿದಂತೆ ಪ್ರಮೋದ್ ಪಂಜು, ಮಿಲನಾ ನಾಗರಾಜ್ ಮತ್ತಿತರರು ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಾಮಿಡಿ, ಥ್ರಿಲ್ಲರ್ ಸೇರಿದಂತೆ ಮಿಕ್ಸ್ ಮಸಾಲೆ ಕೊಡೋಕೆ ಚಿತ್ರತಂಡ ರೆಡಿ ಆಗಿದೆ. ಜಯಂತ್ ಕಾಯ್ಕಣಿ, ಪ್ರಹ್ಲಾದ್ ಸಾಹಿತ್ಯದ ಮೂರು ಗೀತೆಗಳಿಗೆ ವಿ. ಮನೋಹರ್ ಸಂಗೀತ ನೀಡಿದ್ದಾರೆ. ಮೋಹನ್ ಛಾಯಾಗ್ರಹಣ ಮಾಡಿದ್ದಾರೆ.