Tag: mass marriage

  • ಸಾಮೂಹಿಕ ವಿವಾಹ | 101 ಜೋಡಿಗಳಿಗೆ ಸ್ಥಳದಲ್ಲೇ ಸೀಮೆಹಸು ಗಿಫ್ಟ್‌ ಕೊಟ್ಟ ಶಾಸಕ

    ಸಾಮೂಹಿಕ ವಿವಾಹ | 101 ಜೋಡಿಗಳಿಗೆ ಸ್ಥಳದಲ್ಲೇ ಸೀಮೆಹಸು ಗಿಫ್ಟ್‌ ಕೊಟ್ಟ ಶಾಸಕ

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ (SN Subbareddy) ಪ್ರತಿ ವರ್ಷದಂತೆ ಈ ವರ್ಷವೂ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಿದ್ದು 101 ಜೋಡಿಗಳು ಸಾಮೂಹಿಕ ವಿವಾಹ (Mass Marriage) ಕಾರ್ಯಕ್ರಮದಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಬಾಗೇಪಲ್ಲಿ ತಾಲೂಕಿನ ಗಡಿದಂ ಗ್ರಾಮದ ಶ್ರೀಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನೇರವೇರಿದ್ದು, ಮದುವೆಯಾದ ನೂತನ ವಧು-ವರರಿಗೆ ಸ್ಥಳದಲ್ಲೇ ಒಂದೊಂದು ಸೀಮೆ ಹಸು ವಿತರಣೆ ಮಾಡಲಾಯಿತು. ಇದನ್ನೂ ಓದಿ: ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಶಾಸಕರ ಭರ್ಜರಿ ಆಫರ್‌ – ಮದ್ವೆಯಾಗಲು ಅಪ್ರಾಪ್ತರಿಂದಲೂ ಅರ್ಜಿ!

    ಇನ್ನೂ ನೂತನ ವಧುವರರಿಗೆ ಸರ್ಕಾರದಿಂದ 50,000 ಪ್ರೋತ್ಸಾಹ ಧನ ಕೊಡಿಸಲಿದ್ದಾರೆ. ಜೊತೆಗೆ ಸಣ್ಣ ರೈತರಾದವರಿಗೆ ಉಚಿತ ಕೊಳವೆಬಾವಿ, ಡಿಎಲ್ ಇದ್ದ ವರನಿಗೆ 4 ಚಕ್ರದ ವಾಹನ ಕೊಡಿಸುವುದಾಗಿ ಸುಬ್ಬಾರೆಡ್ಡಿ ಭರವಸೆ ನೀಡಿದ್ದಾರೆ.

    ಇನ್ನೂ ಮದುವೆಗೆ ಯಾವುದೂ ಕೊರತೆ ಆಗದಂತೆ ವಧು-ವರ ಸೇರಿ ಅವರ ತಂದೆ ತಾಯಿಗೂ ಹೊಸ ಬಟ್ಟೆಗಳನ್ನ ಕೊಡಿ, ತಲಾ ಒಂದೊಂದು ಜೋಡಿಗೂ ಒಬ್ಬೊಬ್ಬರು ಅರ್ಚಕರಂತೆ ಕಾಲುಂಗುರ, ಚಿನ್ನದ ತಾಳಿ ಕೊಟ್ಟು ಶಾಸ್ತ್ರೋಕ್ತವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು. ಇದನ್ನೂ ಓದಿ: ನನಗೆ ಮಿನಿಸ್ಟರ್ ಪೋಸ್ಟ್ ಬೇಕೇ ಬೇಕು – ಶಾಸಕ ಸುಬ್ಬಾರೆಡ್ಡಿ ಡಿಮ್ಯಾಂಡ್!

    ಕಾರ್ಯಕ್ರಮದಲ್ಲಿ 20,000ಕ್ಕೂ ಹೆಚ್ಚು ಮಂದಿ ಆಗಮಿಸಿದ್ದು ಎಲ್ಲರಿಗೂ ಭರ್ಜರಿ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಸೀಮೆ ಹಸು ಸಾಕಾಣಿಕೆ ಮೂಲಕ ನವ ದಂಪತಿ ಸುಃಖ ಜೀವನ ನಡೆಸಲಿ, ಅವರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲಿ ಅಂತ ಶಾಸಕ ಸುಬ್ಬಾರೆಡ್ಡಿ ಶುಭ ಹಾರೈಸಿದರು. ಇದನ್ನೂ ಓದಿ: ಬಾಲಕಿಯರ ಮೇಲೆ ಬಾಲಮಂದಿರದ ಅಧೀಕ್ಷಕಿಯಿಂದಲೇ ಹಲ್ಲೆ, ದೌರ್ಜನ್ಯ – ಕ್ರಿಮಿನಲ್ ಕೇಸ್ ದಾಖಲು

  • ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಶಾಸಕರ ಭರ್ಜರಿ ಆಫರ್‌ – ಮದ್ವೆಯಾಗಲು ಅಪ್ರಾಪ್ತರಿಂದಲೂ ಅರ್ಜಿ!

    ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಶಾಸಕರ ಭರ್ಜರಿ ಆಫರ್‌ – ಮದ್ವೆಯಾಗಲು ಅಪ್ರಾಪ್ತರಿಂದಲೂ ಅರ್ಜಿ!

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಸುಬ್ಬಾರೆಡ್ಡಿ (SN SubbaReddy) ನೇತೃತ್ವದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾದವರಿಗೆ ಜೊತೆಗೆ ಸೀಮೆ ಹಸು, 50,000 ರೂ. ನಗದು ಹಣ, ಕೊಳವೆಬಾವಿ ಸೇರಿದಂತೆ ಡಿ.ಎಲ್ ಇದ್ದವರಿಗೆ ವಾಹನ ಹೀಗೆ ಹತ್ತು ಹಲವು ಅಫರ್‌ ಘೋಷಿಸಿದ್ದರು. ಇದರಿಂದ ಆಫರ್‌ಗೆ ಮನಸೋತು ಅಪ್ರಾಪ್ತರೂ ಮದುವೆಯಾಗಲು ಅರ್ಜಿ ಹಾಕಿದ್ದು ಕೊನೆ ಕ್ಷಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child Welfare Department) ಅಧಿಕಾರಿಗಳ ಎಂಟ್ರಿಯಿಂದ ಅಪ್ರಾಪ್ತರ ಮದುವೆಗೆ ಬ್ರೇಕ್ ಬಿದ್ದಿದೆ.

    ಹೌದು. ಡಿಸೆಂಬರ್ 06 ರಂದು ಗಡಿದಂ ದೇವಾಲಯದ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮದುವೆಯಲ್ಲಿ ವಧು-ವರ ಹಾಗೂ ಅವರ ತಂದೆ ತಾಯಿಗೆ ಹೊಸ ಬಟ್ಟೆ ಸೇರಿದಂತೆ ನೂತನ ದಂಪತಿಗೆ ಒಂದು ಸೀಮೆ ಹಸು, ಸರ್ಕಾರದಿಂದ 50,000 ರೂ. ಪ್ರೋತ್ಸಾಹ ಧನ, ಸೇರಿದಂತೆ ಕಡು ಬಡವರಾದಲ್ಲಿ ಸಣ್ಣ ರೈತರಾಗಿದ್ರೆ ಉಚಿತ ಕೊಳವೆಬಾವಿ, ಡಿಎಲ್ ಇರುವ ವರನಿಗೆ ಒಂದು ವಾಹನ ಸಹ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಮಾಸುವ ಮುನ್ನವೇ ಹೆರಿಗೆ ಬಳಿಕ ಮಗು ಸಾವು!

    ಶಾಸಕರ ಆಫರ್‌ಗಳಿಗೆ ಮನಸೋತ ನೂರಾರು ಮಂದಿ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆಯಾಗಲು ತುದಿಗಾಲಲ್ಲಿ ನಿಂತಿದ್ದು, ನಾ ಮುಂದು ತಾ ಮುಂದು ಅಂತ ಅರ್ಜಿ ಸಲ್ಲಿಸಿದ್ದರು. ಬರೋಬ್ಬರಿ 160ಕ್ಕೂ ಹೆಚ್ಚು ಜೋಡಿಗಳು ಮದುವೆಯಾಗಲು ಅರ್ಜಿ ಸಲ್ಲಿಸಿದ್ದರು. ಆದ್ರೆ ಅವರಲ್ಲಿ 50 ರಿಂದ 60 ಮಂದಿ 18 ವರ್ಷ ತುಂಬದ ಬಾಲಕಿಯರು, 21 ವರ್ಷ ಆಗದ ಯುವಕರು ಇದ್ದಿದ್ದು ಕಂಡುಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಂಟ್ರಿಯಾದ ನಂತರ 60ಕ್ಕೂ ಹೆಚ್ಚು ಅರ್ಜಿಗಳನ್ನ ತಿರಸ್ಕಾರ ಮಾಡಲಾಗಿದೆ. ಅದ್ರಲ್ಲೂ 18 ವರ್ಷ ಆಗಲು ಒಂದು ವಾರ, ಒಂದು ತಿಂಗಳು, 2-3 ವಾರ ಹೀಗೆ ಹಲವು ಜೋಡಿಗಳಿದ್ದು ಅವರ ಅರ್ಜಿಗಳನ್ನ ಅಂಗೀಕಾರ ಮಾಡಿಲ್ಲ ಅಂತ ಸ್ವತಃ ಶಾಸಕ ಸುಬ್ಬಾರೆಡ್ಡಿ ಹೇಳಿದರು. ಇದನ್ನೂ ಓದಿ: ಆಧ್ಯಾತ್ಮಿಕ ಶುದ್ಧೀಕರಣ ಕಾರ್ಯಕ್ರಮದಲ್ಲಿ ಕಪ್ಪೆಯ ವಿಷ ಸೇವಿಸಿ ಮೆಕ್ಸಿಕನ್‌ ನಟಿ ಸಾವು!

    ಸಲ್ಲಿಕೆಯಾಗಿದ್ದ ಅರ್ಜಿಗಳನ್ನ ಬಾಲ್ಯವಿವಾಹಗಳನ್ನ ತಡೆಯುವ ಸಲುವಾಗಿ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಒಂದೊಂದಾಗಿ ಪರಿಶೀಲನೆ ನಡೆಸಿದಾಗ ಅಪ್ರಾಪ್ತರು ಸಹ ಮದುವೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿರೋದು ಬೆಳಕಿಗೆ ಬಂದಿದೆ. ಇದ್ರಿಂದ ಎಚ್ಚೆತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಕಾನೂನು ಪ್ರಕಾರ 18 ವರ್ಷ ವಯಸ್ಸಾಗಿರುವ ವಧು ಹಾಗೂ 21 ವರ್ಷ ತುಂಬಿದ ವರನ ವಿವಾಹಕ್ಕೆ ಮಾತ್ರ ಅನುಮತಿ ಕೊಟ್ಟಿದ್ದಾರೆ. ಇನ್ನೂ ಶಾಸಕರ ಆಫರ್ಸ್ ಕೇಳಿದ ಕೂಡಲೇ ಮತ್ತೆ ಈ ಆಫರ್ಸ್ ಸಿಗುತ್ತೋ ಇಲ್ವೋ ಅಂತ ಅಪ್ರಾಪ್ತರು ಸಹ ಮದುವೆಯಾಗುವ ಬಯಕೆ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿಕೊಂಡಿದ್ರು. ಆದ್ರೆ ಅಪ್ರಾಪ್ತರ ಮದುವೆಗೆ ಬ್ರೇಕ್ ಹಾಕಿದ್ದಾರೆ.

  • ಬಿಜೆಪಿ ಅವಧಿಯ ಸಾಮೂಹಿಕ ವಿವಾಹಕ್ಕೆ ‘ಮಾಂಗಲ್ಯ ಭಾಗ್ಯ’ ಎಂದು ಮರುನಾಮಕರಣ

    ಬಿಜೆಪಿ ಅವಧಿಯ ಸಾಮೂಹಿಕ ವಿವಾಹಕ್ಕೆ ‘ಮಾಂಗಲ್ಯ ಭಾಗ್ಯ’ ಎಂದು ಮರುನಾಮಕರಣ

    ಬೆಂಗಳೂರು: ಬಿಜೆಪಿ (BJP) ಸರ್ಕಾರದ ಸಪ್ತಪದಿ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹದ (Mass Marriage) ಹೆಸರನ್ನು ಇದೀಗ ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಮಾಂಗಲ್ಯ ಭಾಗ್ಯ (Mangalya Bhagya) ಎಂದು ಮರುನಾಮಕರಣ ಮಾಡಿದೆ.

    ನವೆಂಬರ್‌ನಿಂದ ಜನವರಿಯವರೆಗೆ ರಾಜ್ಯದ ಮುಜರಾಯಿ ದೇಗುಲಗಳಲ್ಲಿ ನಿಗದಿತ ದಿನಕ್ಕೆ ಸಾಮೂಹಿಕ ಸರಳ ವಿವಾಹ ಜರುಗುತ್ತದೆ. ಆಯಾಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮುಜರಾಯಿ ಇಲಾಖೆಯ ಎ ಮತ್ತು ಬಿ ದೇಗುಲಗಳಲ್ಲಿ ಮಾಂಗಲ್ಯ ಭಾಗ್ಯ ವಿವಾಹ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: Diwali: ದೀಪಾವಳಿಗೆ ಅಯೋಧ್ಯೆಯಲ್ಲಿ ಬೆಳಗಲಿವೆ 24 ಲಕ್ಷ ದೀಪಗಳು – ವಿಶ್ವ ದಾಖಲೆಗೆ ವೇದಿಕೆ ಸಜ್ಜು

    ದೇಗುಲದಲ್ಲಿ ವೆಚ್ಚ ಭರಿಸಲು ಹಣ ಇಲ್ಲದ ಸಂದರ್ಭದಲ್ಲಿ ಸಾಮಾನ್ಯ ಸಂಗ್ರಹಣ ನಿಧಿಯಿಂದ 60 ಸಾವಿರ ರೂ. ಬಳಕೆಗೆ ಅನುಮತಿಸಲಾಗಿದೆ. ನವೆಂಬರ್ 16, 19, 19, ಡಿಸೆಂಬರ್ 7, 10 ಮತ್ತು ಜನವರಿಯಲ್ಲಿ 28, 31 ರಂದು ಮಾಂಗಲ್ಯ ಭಾಗ್ಯ ಯೋಜನೆಯ ಸಾಮೂಹಿಕ ವಿವಾಹ ನಡೆಯಲಿದೆ. ಇದನ್ನೂ ಓದಿ: ಎಫ್‍ಡಿಎ ಪರೀಕ್ಷೆ ಅಕ್ರಮ ತನಿಖೆ ಚುರುಕು – ಕಿಂಗ್‍ಪಿನ್‍ನಿಂದ ಜಾಮೀನಿನ ಮೊರೆ

  • ಕೊರೊನಾ ಭೀತಿ – ಸಾಮೂಹಿಕ ವಿವಾಹ ಮುಂದೂಡಿಕೆ

    ಕೊರೊನಾ ಭೀತಿ – ಸಾಮೂಹಿಕ ವಿವಾಹ ಮುಂದೂಡಿಕೆ

    ಚಾಮರಾಜನಗರ: ಕೊರೊನಾ ಸೋಂಕಿನ ಭೀತಿ ಸಾಮೂಹಿಕ ವಿವಾಹ ಮಹೋತ್ಸವ, ದೇವಸ್ಥಾನದ ಉದ್ಘಾಟನೆಯಂತಹ ಕಾರ್ಯಕ್ರಮಗಳಿಗೂ ತಟ್ಟಿದೆ.

    ಚಾಮರಾಜನಗರ ಜಿಲ್ಲೆ ಹರವೆ ಮಠದಲ್ಲಿ ಭಾನುವಾರ ನಡೆಯಬೇಕಿದ್ದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

    ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ನಿರ್ಬಂಧಿಸಿರುವುದರಿಂದ ಭಾನುವಾರ ನಡೆಯಬೇಕಿದ್ದ ವೀರಶೈವ ಲಿಂಗಾಯತ ವಧು-ವರರ ಸಾಮೂಹಿಕ ವಿವಾಹ ಸಮಾರಂಭ, ಧಾರ್ಮಿಕ ಸಭೆ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರಗಳನ್ನು ಮುಂದೂಡಲಾಗಿದೆ ಎಂದು ಮಠದ ಸರ್ಪಭೂಷಣ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

    ಇದೇ ವೇಳೆ ಮಹದೇಶ್ವರ ದೇವಸ್ಥಾನದ ಉದ್ಘಾಟನೆಗೂ ಕೊರೊನಾ ವೈರಸ್ ಭೀತಿಯ ಬಿಸಿ ತಟ್ಟಿದೆ. ಚಾಮರಾಜನಗರ ತಾಲೂಕು ಬೆಟ್ಟದಪುರದಲ್ಲಿ ಮಾರ್ಚ್ 16ರಂದು ನಡೆಯಬೇಕಿದ್ದ ಶ್ರೀ ಮಹದೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಾಗೂ ಧಾರ್ಮಿಕ ಸಭೆಗಳನ್ನು ಮುಂದೂಡಲಾಗಿದೆ. ಸಿದ್ದಗಂಗಾ ಹಾಗು ಸುತ್ತೂರು ಶ್ರೀಗಳು ಈ ದೇವಸ್ಥಾನವನ್ನು ಉದ್ಘಾಟಿಸಬೇಕಿತ್ತು.

  • ಸರ್ಕಾರದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಶರವಣ ವಿರೋಧ

    ಸರ್ಕಾರದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಶರವಣ ವಿರೋಧ

    ಬೆಂಗಳೂರು: ಬಿಜೆಪಿ ಸರ್ಕಾರದ ಬಹು ನಿರೀಕ್ಷಿತ ಸಾಮೂಹಿಕ ವಿವಾಹ ಕಾರ್ಯಕ್ರಮ “ಸಪ್ತಪದಿ”ಗೆ ವಿರೋಧಗಳು ಪ್ರಾರಂಭವಾಗಿದೆ. ದೇವಾಲಯಕ್ಕೆ ಜನರು ಕೊಡೋ ಹಣದಲ್ಲಿ ಬಿಜೆಪಿ ಸರ್ಕಾರದ ಕಾರ್ಯಕ್ರಮ ಮಾಡೋದು ಬೇಡ ಅಂತ ವಿಧಾನ ಪರಿಷತ್ ಸದಸ್ಯ ಶರವಣ ನೇರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

    ವಿಧಾನ ಪರಿಷತ್‍ನ ಅಧಿವೇಶನದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶರವಣ, ದೇವಾಲಯದ ಅಭಿವೃದ್ಧಿಗೆ ಜನ ಹುಂಡಿಗಳಲ್ಲಿ ಹಣ ಹಾಕ್ತಾರೆ. ಅ ಹಣವನ್ನು ದೇವಾಲಯ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಅದು ಬಿಟ್ಟು ನಿಮ್ಮ ಯೋಜನೆಗೆ ಹಣ ಬಳಸಿಕೊಳ್ಳೋದು ಸರಿಯಲ್ಲ ಅಂತ ಸರ್ಕಾರದ ಕ್ರಮವನ್ನ ವಿರೋಧಿಸಿದರು. ಅಲ್ಲದೆ ದೇವಾಲಯದ ದುಡ್ಡನ್ನ ಬಳಸಿಕೊಂಡರೆ ಅರ್ಚಕರಿಗೆ ಸಂಬಳ ಕೊಡೋದು ಹೇಗೆ ಅಂತ ಪ್ರಶ್ನೆ ಮಾಡಿದ್ರು. ಉಚಿತ ಸಾಮೂಹಿಕ ವಿವಾಹ ಮಾಡೋದಾದ್ರೆ ಸರ್ಕಾರವೇ ಹಣ ಬಿಡುಗಡೆ ಮಾಡಲಿ ಅಂತ ಸರ್ಕಾರವನ್ನ ಒತ್ತಾಯಿಸಿದರು. ಇದನ್ನೂ ಓದಿ: ಸರ್ಕಾರದಿಂದ ಸಾಮೂಹಿಕ ವಿವಾಹ ಯೋಜನೆಗೆ ಅನುಷ್ಠಾನ

    ಪರಿಷತ್ ಸದಸ್ಯ ಶರವಣರ ವಿರೋಧಕ್ಕೆ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಡವರ ಕಲ್ಯಾಣ ಕಾರ್ಯಕ್ರಮಕ್ಕೆ ಹೀಗೆ ವಿರೋಧ ಮಾಡೋದು ಸರಿಯಲ್ಲ ಅಂತ ತಿಳಿಸಿದರು. ಸಾಮೂಹಿಕ ವಿವಾಹಕ್ಕಾಗಿ ರಾಜ್ಯದ “ಎ” ದರ್ಜೆಯ 100 ದೇವಾಲಯಗಳನ್ನ ಗುರುತಿಸಲಾಗಿದೆ. ಆರ್ಥಿಕವಾಗಿ ಸಧೃಡವಾಗಿರೋ ದೇವಾಲಯಗಳಲ್ಲಿ ವಿವಾಹ ಕಾರ್ಯಕ್ರಮ ಮಾಡಲಾಗ್ತಿದೆ. ದೇವಾಲಯ ಅಭಿವೃದ್ಧಿಗೆ ಇದರಿಂದ ಯಾವುದೇ ತೊಂದರೆ ಆಗೋದಿಲ್ಲ. ಒಂದು ವೇಳೆ ಹಣ ಸಮಸ್ಯೆ ಬಂದರೆ ಸರ್ಕಾರವೇ ಹಣ ನೀಡಲಿದೆ ಅಂತ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬಿಎಸ್‍ವೈ ಸರ್ಕಾರದಿಂದ `ಬಡವರ ಕಲ್ಯಾಣ’ – ಸರ್ಕಾರಿ ಮದ್ವೆಗೆ ಷರತ್ತುಗಳು ಅನ್ವಯ

    ಸಾಮೂಹಿಕ ವಿವಾಹ ಕಾರ್ಯಕ್ರಮ ಏಪ್ರಿಲ್ 26 ಮತ್ತು ಮೇ 24 ರಂದು ನಡೆಯಲಿದೆ. ಹೀಗಾಗಿ ಮದುವೆ ಆಗೋ ಜೋಡಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಮೂಹಿಕ ವಿವಾಹಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಒಂದೊಂದು ದೇವಾಲಯಗಳಲ್ಲಿ 2 ಸಾವಿರಕ್ಕೂ ಹೆಚ್ಚು ಅರ್ಜಿ ಬಂದಿವೆ ಅಂತ ಸಚಿವರು ಮಾಹಿತಿ ಕೊಟ್ಟರು. ಮದುವೆ ಆದ ತಕ್ಷಣದ ದೇವಾಲಯದಲ್ಲೆ ಮದುವೆ ರಿಜಿಸ್ಟರ್ ಮಾಡೋ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ. ವಿವಾಹವಾಗೋ ಪ್ರತಿ ಜೋಡಿಗೆ 55 ಸಾವಿರ ಪ್ರೊತ್ಸಾನ ಧನ ಸರ್ಕಾರ ನೀಡುತ್ತಿದೆ. ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ 5 ಸಾವಿರ ಪ್ರೋತ್ಸಾಹ ಧನ ನೀಡಲಾಗ್ತಿದೆ. ವಧುವಿಗೆ ಹೂವಿನ ಹಾರ, ಧಾರೆ ಸೀರೆ ಮತ್ತು ರವಿಕೆಗೆ 10 ಸಾವಿರ ನೀಡಲಾಗುತ್ತಿದೆ. ವಧುವಿಗೆ 8 ಗ್ರಾಂ ತೂಕ ಚಿನ್ನದ ತಾಳಿ ಮತ್ತು ಎರಡು ಚಿನ್ನದ ಗುಂಡುಗಳನ್ನ 40 ಸಾವಿರ ವೆಚ್ಚದಲ್ಲಿ ನೀಡಲಾಗುತ್ತಿದೆ. ಇದನ್ನೂ ಓದಿ: ‘ಸಪ್ತಪದಿ’ ಸಾಮೂಹಿಕ ವಿವಾಹಕ್ಕೆ ಪೂರ್ವ ಸಿದ್ಧತೆ- ‘ಎ’ ದರ್ಜೆಯ ದೇವಸ್ಥಾನಗಳಿಗೆ ಸಚಿವರ ಭೇಟಿ

  • ಗಟ್ಟಿಮೇಳದ ವೇಳೆ ತಾಳಿ ನಾಪತ್ತೆ – ತಾಳಿ ಇಲ್ಲದೆ ವಧು ವರರು ಗಲಿಬಿಲಿ

    ಗಟ್ಟಿಮೇಳದ ವೇಳೆ ತಾಳಿ ನಾಪತ್ತೆ – ತಾಳಿ ಇಲ್ಲದೆ ವಧು ವರರು ಗಲಿಬಿಲಿ

    ಬೆಂಗಳೂರು: ಸಾಮೂಹಿಕ ವಿವಾಹ ನೆರವೇರುತ್ತಿದ್ದ ಸಂದರ್ಭದಲ್ಲಿ ಗಟ್ಟಿಮೇಳದ ವೇಳೆ ತಾಳಿ ನಾಪತ್ತೆಯಾಗಿ, ವಧು-ವರರು ಗಲಿಬಿಲಿಯಾದ ಘಟನೆ ನೆಲಮಂಗಲ ಸಮೀಪದ ಕಾಚೋಹಳ್ಳಿ ಕಲ್ಯಾಣ ಮಂಟಪದಲ್ಲಿ ಇಂದು ನಡೆದಿದೆ.

    ಪಟ್ಟನಾಯಕನಹಳ್ಳಿ ನಂಜಾವದೂತ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಶುಭಕಾರ್ಯ ನಡೆಯುತ್ತಿತ್ತು. ಈ ಶುಭಸಮಾರಂಭದಲ್ಲಿ ಅಡಮಾರನಹಳ್ಳಿ ಗ್ರಾಮಸ್ಥರು 15 ಜೋಡಿಗಳ ಮದುವೆ ಮಾಡಿಸುತ್ತಿದ್ದರು. ಆದರೆ ಈ ಖುಷಿ ನಡುವೆ ಕಳ್ಳನೊಬ್ಬ ತಾಳಿಯನ್ನೇ ಕದ್ದು ಪರಾರಿ ಆಗಿದ್ದಾನೆ.

    ಕಳೆದ ನಾಲ್ಕು ವರ್ಷದಿಂದ ಗ್ರಾಮಸ್ಥರು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಹಿಂದೆಂದು ಈ ರೀತಿ ಆಗಿರಲಿಲ್ಲ. ಆದರೆ ಮದುವೆ ಸಮಾರಂಭದಲ್ಲಿ ಎಲ್ಲರೂ ಬ್ಯುಸಿಯಾಗಿರುವಾಗ ಕ್ಷಣಾರ್ಧದಲ್ಲಿ ತಾಳಿ ಕದ್ದು ಕಲ್ಯಾಣ ಮಂಟಪದಿಂದ ಕಳ್ಳ ನಾಪತ್ತೆಯಾಗಿದ್ದಾನೆ. ಚಾಲಕಿ ಕಳ್ಳ ತನ್ನ ಕೈಚಳಕ ತೋರಿದ್ದು, ಶುಭ ಸಮಾರಂಭದಲ್ಲಿ ಹೀಗಾಯ್ತಲ್ಲಾ ಎಂದು ಕುಟುಂಬಸ್ಥರು ಹಾಗೂ ಸ್ಥಳದಲ್ಲಿದ್ದವರು ತಳಮಳಗೊಂಡಿದ್ದಾರೆ.

    ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಸಾಮೂಹಿಕ ವಿವಾಹದಲ್ಲಿ ಜಗತ್ತೆ ಮೆಚ್ಚುವ ಕೆಲಸ ಮಾಡಿದ 51 ಜೋಡಿಗಳು

    ಸಾಮೂಹಿಕ ವಿವಾಹದಲ್ಲಿ ಜಗತ್ತೆ ಮೆಚ್ಚುವ ಕೆಲಸ ಮಾಡಿದ 51 ಜೋಡಿಗಳು

    ಕೊಪ್ಪಳ: ಮದುವೆ ಎನ್ನುವುದು ಎಲ್ಲರಿಗೂ ಮರೆಯಲಾಗದ ದಿನವಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಮದುವೆ ದಿನ ಕುಣಿದು ಕುಪ್ಪಳಿಸ್ತಾರೆ. ಆದರೆ ಕೊಪ್ಪಳದಲ್ಲಿ ಸಾಮೂಹಿಕ ವಿವಾಹದಲ್ಲಿ 51 ಜೋಡಿಗಳು ಜಗತ್ತೆ ಮೆಚ್ಚುವ ಕೆಲಸ ಮಾಡಿದ್ದಾರೆ.

    ಎಲ್ಲರ ಜೀವನದಲ್ಲೂ ಮದುವೆ ಎನ್ನುವುದು ಒಂದು ಸಂತಸದ ಕ್ಷಣ. ಮದುವೆಯ ಆ ಕ್ಷಣ ನೆನಪಿನಲ್ಲಿ ಉಳಿಯೋಕೆ ಕೆಲವರು ದಾಮ್ ದುಮ್ ಎಂದು ಖರ್ಚು ಮಾಡಿ ಮದುವೆ ಮಾಡಿಕೊಳ್ಳುತ್ತಾರೆ. ಆದರೆ ಕೊಪ್ಪಳದ ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿ ನೆಡೆದ ಸಾಮೂಹಿಕ ಮದುವೆ ಎಲ್ಲರ ಗಮನ ಸೆಳೆಯಿತು. ಭಾನುವಾರ ಬರೋಬ್ಬರಿ 51 ನವ ಜೋಡಿಗಳು ಹಸೆಮಣೆ ಎರಿದರು. ಈ ವೇಳೆ ನವ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು ಸಾಮೂಹಿಕವಾಗಿ ನೇತ್ರದಾನದ ಶಪಥ ಮಾಡಿದರು.

    ಅಂಧರ ಬಾಳಿಗೆ ಬೆಳಕು ಕೊಡುವುದಕ್ಕೆ ನಿರ್ಧಾರ ಮಾಡಿದ ನವ ಜೋಡಿಗಳು ಮದುವೆಯ ಸಂದರ್ಭದಲ್ಲೆ ಇಂತಹದೊಂದು ನಿರ್ಣಯ ತೆಗೆದುಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇನ್ನೂ ನಾವು ಸತ್ತ ಮೇಲೂ ಜಗತ್ತನ್ನೂ ನೋಡಬೇಕು ಅಂದರೆ ನೇತ್ರದಾನ ಮಾಡಬೇಕು ಎಂದು ನವ ಜಿವನಕ್ಕೆ ಕಾಲಿಟ್ಟ ವಧು ಹೇಳಿದ್ದರು.

    ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ ನವಜೋಡಿಗಳು ನೇತ್ರದಾನ ಶಪಥ ಮಾಡಿದ್ದಾರೆ. ಡಾ. ಬಿ.ಆರ್ ಅಂಬೇಡ್ಕರ್ ಯುವಕ ಸಂಘ, ಸಮರ್ಪಣಾ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ 51 ಜೋಡಿಗಳ ಸರಳ ಸಾಮೂಹಿಕ ವಿವಾಹದಲ್ಲಿ ಅಂಧರ ಬಾಳಿಗೆ ಬೆಳಕಾಗಲು ಮುಂದಾಗಿದ್ದಾರೆ. ದಾನದಲ್ಲಿ ಶ್ರೇಷ್ಠದಾನ ನೇತ್ರದಾನ, ಇಂತಹ ನೇತ್ರದಾನ ಮಾಡುವ ಮೂಲಕ ಈ ನವ ದಂಪತಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ. ಪ್ರತಿ ವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳುವ ಅಂಬೇಡ್ಕರ್ ಯುವಕ ಸಂಘ ಈ ಬಾರಿ ತುಸು ವಿಭಿನ್ನವಾಗಿ ಸಾಮಾಜಿಕ ಜಾಗೃತಿ ಕಾರ್ಯಕ್ರಮದ ಮೂಲಕ ಮದುವೆ ಮಾಡಿಕೊಟ್ಟರು. ಮದುವೆಯಾದ 51 ಜೋಡಿಗಳಿಗೆ ಸಸಿ ವಿತರಣೆ ಮಾಡಿ ಮದುವೆಯಲ್ಲಿ ಪರಿಸರ ಕಾಳಜಿ ಮೆರೆದಿದ್ದಾರೆ.

  • ಸಾಮೂಹಿಕ ವಿವಾಹದಲ್ಲಿ ಪುತ್ರನ ಮದುವೆ ನೆರವೇರಿಸಿದ ಶಾಸಕ

    ಸಾಮೂಹಿಕ ವಿವಾಹದಲ್ಲಿ ಪುತ್ರನ ಮದುವೆ ನೆರವೇರಿಸಿದ ಶಾಸಕ

    ಶಿವಮೊಗ್ಗ: ತೀರ್ಥಹಳ್ಳಿ ಶಾಸಕ, ಬಿಜೆಪಿ ಮುಖಂಡ ಅರಗ ಜ್ಞಾನೇಂದ್ರ ಸಾಮೂಹಿಕ ವಿವಾಹದಲ್ಲಿ ಪುತ್ರನ ಮದುವೆ ನೆರವೇರಿಸಿ ಎಲ್ಲರಿಗೂ ಮಾದರಿ ಆಗಿದ್ದಾರೆ.

    ಜ್ಞಾನೇಂದ್ರ ಪುತ್ರ ಅಭಿನಂದನ್ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸಾಮೂಹಿಕ ವಿವಾಹ ನಡೆದಿದ್ದು, ನೂತನ ವಧು-ವರರಿಗೆ ಆಶೀರ್ವದಿಸಲು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿವೈ ರಾಘವೇಂದ್ರ ಭಾಗಿಯಾಗಿದ್ದರು.

    ಈ ವೇಳೆ ಊಟಕ್ಕೆ ಕುಳಿತವರ ಬಳಿ ಪ್ರತ್ಯೇಕವಾಗಿ ತೆರಳಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಕೈ ಮುಗಿದು ತೆರಳಿದ್ದಾರೆ. ಯಡಿಯೂರಪ್ಪ ಹಾಗೂ ರಾಘವೇಂದ್ರ ನೀತಿ ಸಂಹಿತೆ ಕಾರಣದಿಂದ ಯಾರೊಂದಿಗೆ, ಏನೂ ಮಾತಾಡದೆ ಕೈಮುಗಿದು ತೆರಳಿದ್ದಾರೆ. ಶಾಸಕ ಜ್ಞಾನೇಂದ್ರ ಮಗನಿಗೆ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಸುವ ಮೂಲಕ ಸರಳತೆ ಮೆರೆದಿದ್ದಾರೆ.

    ಸಾಮೂಹಿಕ ವಿವಾಹದಲ್ಲಿ ಐದು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶಾಸಕರಾದ ಕುಮಾರ್ ಬಂಗಾರಪ್ಪ, ಸಿ.ಟಿ.ರವಿ, ಹರತಾಳು ಹಾಲಪ್ಪ, ವಿಶೇಶ್ವರ ಹೆಗಡೆ ಕಾಗೇರಿ, ಬೆಳ್ಳಿ ಪ್ರಕಾಶ್, ಮಾಜಿ ಸಭಾಪತಿ ಡಿ.ಹೆಚ್ ಶಂಕರ್ ಮೂರ್ತಿ ಹಾಗೂ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜನರೇ ನಮ್ಮ ತಂದೇ ಮಾಡಿರುವ ಆಸ್ತಿ: ನಿಖಿಲ್ ಕುಮಾರಸ್ವಾಮಿ

    ಜನರೇ ನಮ್ಮ ತಂದೇ ಮಾಡಿರುವ ಆಸ್ತಿ: ನಿಖಿಲ್ ಕುಮಾರಸ್ವಾಮಿ

    ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಅವರು ನಡೆದ ಹಾದಿಯಲ್ಲೇ ನಾನು ಹೋಗಲು ಇಷ್ಟ ಪಡುತ್ತೇನೆ. ಜನರೇ ನಮ್ಮ ತಂದೆ ಮಾಡಿರುವ ಆಸ್ತಿ ಎಂದು ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

    ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ನಿಖಿಲ್ ಅವರು ವಿವಾಹಕ್ಕೂ ಮೊದಲು ನಡೆದ ಕಲ್ಯಾಣೋತ್ಸವದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ನಿಖಿಲ್ ಅವರಿಗೆ ಸಚಿವ ಸಿ.ಎಸ್ ಪುಟ್ಟರಾಜು ಕೂಡ ಸಾಥ್ ನೀಡಿದರು. ಬಳಿಕ ಮಾತನಾಡಿದ ಅವರು, ಜೆಡಿಎಸ್ ಪಕ್ಷದಿಂದ ಎಲ್ಲರ ಅಭಿಪ್ರಾಯ ಪಡೆದುಕೊಂಡು ನನ್ನನ್ನ ಲೋಕಸಭೆ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಜಿಲ್ಲೆಯ ಮೂವರು ಸಚಿವರು, ಶಾಸಕರು ಹಾಗೂ ಜಿಲ್ಲೆಯ ಜನರ ನಾಡಿ ಮಿಡಿತ ಅರಿತು ಹೆಸರು ಘೋಷಣೆ ಮಾಡಿದ್ದಾರೆ. ನಾನು ನಿಮ್ಮ ಗುಲಾಮನಾಗಿ ಕೆಲಸ ಮಾಡ್ತಿನಿ, ಒಂದು ಅವಕಾಶ ಮಾಡಿಕೊಡಿ ಎಂದು ವಿನಂತಿ ಮಾಡಿಕೊಂಡರು.

    ತಾತ ಹಾಗೂ ತಂದೆಯ ಹಾದಿಯಲ್ಲಿ ನಾನು ಸಾಗುತ್ತೇನೆ. ನನ್ನ ತಂದೆ ಆಸ್ತಿ ಅಂತ ಗಳಿಸಿದ್ದು ಜನರನ್ನ. ನೀವೇ ನಮಗೆ ಆಸ್ತಿ. ಜಿಲ್ಲೆಯ ಅಭಿವೃದ್ದಿಗಾಗಿ ಸಿಎಂ 9 ಸಾವಿರ ಕೋಟಿ ರೂ. ಘೋಷಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಹೊಸ ಸಕ್ಕರೆ ಕಾರ್ಖಾನೆ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ ಎಂದು ತಿಳಿಸಿದರು.

    ಬಳಿಕ ಮಂಡ್ಯ ಕ್ಷೇತ್ರದಲ್ಲಿ ಚುನಾವಣಾ ಅಭ್ಯರ್ಥಿ ವಿಚಾರವಾಗಿ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ನಾನು ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ. ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇನೆ. ಜಿಲ್ಲೆಯ ಜನರು ನಮ್ಮ ತಂದೆಗೆ ಪುನರ್ಜನ್ಮ ನೀಡಿದ್ದಾರೆ. ನಾನು ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಮೂಹಿಕ ವಿವಾಹ ಸಂಭ್ರಮದಲ್ಲಿ ಭಾಗಿಯಾದ ಸುದೀಪ್ ದಂಪತಿ

    ಸಾಮೂಹಿಕ ವಿವಾಹ ಸಂಭ್ರಮದಲ್ಲಿ ಭಾಗಿಯಾದ ಸುದೀಪ್ ದಂಪತಿ

    ಮಂಗಳೂರು: ಧರ್ಮಸ್ಥಳದಲ್ಲಿ ಭಾನುವಾರ 47ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆದಿದ್ದು, ಇಡೀ ದಿನ ಧರ್ಮಸ್ಥಳ ಮದುವೆ, ಸಂಭ್ರಮ ಮತ್ತು ಸಡಗರದಿಂದ ರಾರಾಜಿಸುತ್ತಿತ್ತು.

    ಭಾನುವಾರ ಸಂಜೆ ಸುಮಾರು 6.40ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಮಂಗಳವಾದ್ಯ, ವೇದ ಘೋಷ ಮೊಳಗುತ್ತಿದ್ದಂತೆ 131 ಜೊತೆ ವಧೂ-ವರರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಸಾಮೂಹಿಕ ವಿವಾಹ ಸಮಾರಂಭಕ್ಕೆ ಸುದೀಪ್ ದಂಪತಿ ಆಗಮನಿಸಿದ್ದು, ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

    ಈ ವೇಳೆ ನಟ ಸುದೀಪ್ ಮಾತನಾಡಿ, “ಎಲ್ಲರಿಗೂ ನನ್ನ ನಮಸ್ಕಾರ ಎಂದು ಭಾಷಣ ಪ್ರಾರಂಭಿಸಿ ಕನ್ನಡಿಗರ ಪ್ರೀತಿ-ವಿಶ್ವಾಸ, ಅಭಿಮಾನವೇ ತನ್ನ ಅಮೂಲ್ಯ ಆಸ್ತಿಯಾಗಿದೆ. ಕಲಾಭಿಮಾನಿಗಳು ಕಲಾವಿದನನ್ನು ಮರೆತರೆ ಆತ ಸತ್ತ ಹಾಗೆ ಎಂದು ಹೇಳಿದರು. ಹೆಗ್ಗಡೆಯವರೇ ನನ್ನ ಚಲನಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ತನಗೆ ದೊರೆತ ದೊಡ್ಡ ಗೌರವವಾಗಿದೆ” ಎಂದು ಹೇಳಿದ್ದಾರೆ.

    ಮದುವೆಯಲ್ಲಿ ಪ್ರತಿಜ್ಞೆ  ಮಾಡುವುದನ್ನು ಪ್ರಥಮ ಬಾರಿಗೆ ತಾನು ನೋಡಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಭಾನುವಾರ ಮುಂಜಾನೆಯಿಂದಲೇ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬೀಡಿನಲ್ಲಿ ವಧುವಿಗೆ ಸೀರೆ ಮತ್ತು ರವಿಕೆ ಕಣ ಹಾಗೂ ವರನಿಗೆ ಧೋತಿ, ಶಾಲು ಮತ್ತು ಅಂಗಿ ವಿತರಿಸಿದರು. ವಧು-ವರರು ಸಂಜೆ 5 ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾ ಭವನಕ್ಕೆ ತೆರಳಿದರು. ಅಲ್ಲಿ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಚಲನಚಿತ್ರ ನಟ ಸುದೀಪ್ ಹಾಗೂ ಗಣ್ಯ ಅತಿಥಿಗಳು ಮಂಗಳಸೂತ್ರ ನೀಡಿದ್ರು.

    ವಧು-ವರರ ಪ್ರತಿಜ್ಞೆ : ಧರ್ಮಸ್ಥಳದಲ್ಲಿ ಮಂಗಲ ಮುಹೂರ್ತದಲ್ಲಿ ಸತಿ – ಪತಿಗಳಾಗಿ ಪವಿತ್ರ ಬಾಂಧವ್ಯ ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ, ಅರ್ಥ ಮತ್ತು ಕಾಮಗಳದಲ್ಲಿ ಸಹಚರರಾಗಿ ಪರಸ್ಪರ ಪ್ರೀತಿ ? ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ ಹಾಗೂ ಯಾವುದೇ ದುರಭ್ಯಾಸಗಳಿಗೆ ಬಲಿಯಾಗದೆ ಬದುಕುತ್ತೇವೆ ಎಂದು ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಮತ್ತು ಪೂಜ್ಯ ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣ ವಚನ ಬದ್ಧರಾಗುತ್ತಿದ್ದೇವೆ.

    ಸುಖೀ ದಾಂಪತ್ಯ ಜೀವನಕ್ಕೆ ಹೊಂದಾಣಿಕೆ ಅಗತ್ಯ: ನೂತನ ದಂಪತಿಗಳಿಗೆ ಶುಭ ಹಾರೈಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಜಾತಿ-ಮತ, ಸಂಪ್ರದಾಯದ ಎಲ್ಲೆಯನ್ನು ಮೀರಿ 23 ಜೊತೆ ಅಂತರ್ಜಾತಿಯ ವಿವಾಹವಾಗಿರುವುದು ಶ್ಲಾಘನೀಯವಾಗಿದೆ. ಹಲವು ಕಾರಣಗಳಿಂದ ಹೆಚ್ಚು ಪ್ರಾಯವಾದ ಬಳಿಕ ಮದುವೆ ಆಗುವುದು ದೊಡ್ಡ ಸಮಸ್ಯೆ ಆಗಿದೆ. ಪರಸ್ಪರ ಪ್ರೀತಿ-ವಿಶ್ವಾಸ, ನಂಬಿಕೆಯಿಂದ ಸತಿ-ಪತಿ ಹೊಂದಿಕೊಂಡು ನೆಮ್ಮದಿ ಜೀವನ ನಡೆಸಬೇಕು. ವಿಚ್ಛೇದನವೇ ಸಮಸ್ಯೆಗೆ ಪರಿಹಾರವಲ್ಲ ಎಂದು ಕಿವಿ ಮಾತು ಹೇಳಿದರು. ವಿವಾಹದ ಪಾವಿತ್ರ್ಯತೆ ಮತ್ತು ಜೀವನದ ಗೌರವ ಕಾಪಾಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದ್ದಾರೆ.

    ಈ ಸಾಮೂಹಿಕ ಮದುವೆಗೆ ಬಿರ್ಲಾ ಕಂಪೆನಿಯ ಜಂಟಿ ಅಧ್ಯಕ್ಷ ಮನೋಜ್ ಕುಮಾರ್ ಮೆಹತಾ ಶುಭಾಶಂಸನೆ ಮಾಡಿದ್ದು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಪ್ರಿಯಾ ಸುದೀಪ್ ಮತ್ತು ಶಾಸಕ ಕೆ. ವಸಂತ ಬಂಗೇರ ಉಪಸ್ಥಿತರಿದ್ದರು.