Tag: masala vada

  • ತಿರುಪತಿ ಅನ್ನ ಪ್ರಸಾದಕ್ಕೆ ಮಸಾಲೆ ವಡೆ ಸೇರ್ಪಡೆ- ತಿಮ್ಮಪ್ಪನ ಭಕ್ತರಿಗೆ ದ.ಭಾರತದ ಖಾದ್ಯ

    ತಿರುಪತಿ ಅನ್ನ ಪ್ರಸಾದಕ್ಕೆ ಮಸಾಲೆ ವಡೆ ಸೇರ್ಪಡೆ- ತಿಮ್ಮಪ್ಪನ ಭಕ್ತರಿಗೆ ದ.ಭಾರತದ ಖಾದ್ಯ

    ಅಮರಾವತಿ: ತಿರುಪತಿಗೆ (Tirupati) ಬರುವ ಭಕ್ತರಿಗೆ ನೀಡುವ ಅನ್ನ ಪ್ರಸಾದದಲ್ಲಿ ಈ ಮತ್ತೊಂದು ಹೊಸ ಖಾದ್ಯ ಸೇರ್ಪಡೆಗೊಂಡಿದೆ. ಪ್ರಸಾದದ ಮೆನುವಿನಲ್ಲಿ ಮಸಾಲೆ ವಡೆ (Masala Vada) ಸೇರಿಸಲಾಗಿದೆ.

    ಹೊಸ ಖಾದ್ಯವನ್ನು ಗುರುವಾರ ಬೆಳಗ್ಗೆ ತಿರುಮಲದ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದ ಭವನದಲ್ಲಿ ಬಿಡುಗಡೆ ಮಾಡಲಾಯಿತು. ಭಕ್ತರಿಗೆ ಅನ್ನ ಪ್ರಸಾದದಲ್ಲಿ ಮಸಾಲ ವಡೆಯನ್ನೂ ಬಡಿಸುವ ಮೂಲಕ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಚಾಲನೆ ಕೊಟ್ಟರು. ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲಾ ರಾವ್ ಮತ್ತು ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಚ್. ​​ವೆಂಕಯ್ಯ ಚೌಧರಿ ಉಪಸ್ಥಿತರಿದ್ದರು.

    ಟಿಟಿಡಿ ಅಧ್ಯಕ್ಷ ನಾಯ್ಡು ಅವರು ಅಧಿಕಾರ ವಹಿಸಿಕೊಂಡಾಗ, ಅನ್ನ ಪ್ರಸಾದ ಮೆನುವಿನಲ್ಲಿ ದಕ್ಷಿಣ ಭಾರತದ ಖಾದ್ಯವನ್ನು ಸೇರಿಸುವ ಆಲೋಚನೆ ಇದೆ ಎಂದು ಹೇಳಿದ್ದರು. ನಾನು ಈ ಆಲೋಚನೆಯನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಪ್ರಸ್ತಾಪಿಸಿದಾಗ, ಅವರು ತುಂಬಾ ಬೆಂಬಲ ನೀಡಿದರು. ತಕ್ಷಣವೇ ಯೋಜನೆಗೆ ಅನುಮೋದನೆ ನೀಡಿದರು. ನಮ್ಮ ಪ್ರಸಾದ ಅರ್ಪಣೆಯ ಭಾಗವಾಗಿ ಮಸಾಲೆ ವಡೆಯನ್ನು ಪರಿಚಯಿಸುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.

    ದೇವಾಲಯವು ಭಕ್ತರಿಗೆ ಪೌಷ್ಟಿಕ, ರುಚಿಕರವಾದ ಮತ್ತು ವೈವಿಧ್ಯಮಯ ಆಹಾರ ಒದಗಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

    ಮಸಾಲ ವಡೆ ತಯಾರಿಸಲು ಬೇಳೆ, ಹಸಿರು ಮೆಣಸಿನಕಾಯಿ, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು, ಪುದೀನ ಮತ್ತು ಸೋಂಪು ಪದಾರ್ಥಗಳನ್ನು ಬಳಸಲಾಗುತ್ತದೆ. ಇವುಗಳನ್ನು ಮಿಶ್ರಣ ಮಾಡಿ ರುಚಿಕರವಾಗಿ ವಡೆ ತಯಾರಿಸಲಾಗುತ್ತದೆ.

  • ಬೇಳೆ ಬಳಸದೇ ಗರಿ ಗರಿಯಾದ ಮಸಲಾ ವಡೆ ಮಾಡುವ ವಿಧಾನ

    ಬೇಳೆ ಬಳಸದೇ ಗರಿ ಗರಿಯಾದ ಮಸಲಾ ವಡೆ ಮಾಡುವ ವಿಧಾನ

    ಹಾಮಾರಿ ಕೊರೊನಾ ಆತಂಕದಿಂದ ಹೊರಗಿನ ತಿಂಡಿ ತಿನ್ನೋದಕ್ಕೆ ಜನರು ಭಯಪಡುತ್ತಿದ್ದಾರೆ. ಇನ್ನು ಕೊರೊನಾ ಭಯದಿಂದಾಗಿ ಮಕ್ಕಳು ಸಹ ಮನೆಯಲ್ಲಿರೋದರಿಂದ ಪ್ರತಿನಿತ್ಯ ಹೊಸ ತಿಂಡಿಯನ್ನು ಕೇಳುತ್ತಿರುತ್ತಾರೆ. ಇನ್ನೂ ಪೋಷಕರು ಉದ್ಯೋಗಿಗಳಾಗಿದ್ರೆ ರುಚಿ ರುಚಿಯಾದ ತಿಂಡಿ ಮಾಡೋದಕ್ಕೆ ಸಮಯವೇ ಇರಲ್ಲ. ಕೇವಲ 15 ನಿಮಿಷದಲ್ಲಿ ಮಕ್ಕಳು ಇಷ್ಟಪಡುವ ಯಾವುದೇ ಬೇಳೆ ಬಳಸದೇ ಗರಿ ಗರಿಯಾದ ಮಸಾಲೆ ವಡೆ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    * ಸಣ್ಣ ರವೆ- 1 ಕಪ್
    * ಮೊಸರು- ಮುಕ್ಕಾಲು ಕಪ್
    * ಆಲೂಗಡ್ಡೆ- ಎರಡು ಕಪ್ (ಮಧ್ಯಮ ಗಾತ್ರದ್ದು)
    * ಈರುಳ್ಳಿ- 1 (ಮಧ್ಯಮ ಗಾತ್ರದ್ದು)
    * ಹಸಿ ಮೆಣಸಿನಕಾಯಿ – ಎರಡರಿಂದ ಮೂರು
    * ಸಬ್ಬಕ್ಕಿ ಸೊಪ್ಪು- ಅರ್ಧ ಕಪ್
    * ಕೋತಂಬರಿ- ಸ್ವಲ್ಪ
    * ಅಡುಗೆ ಸೋಡಾ- ಅರ್ಧ ಟೀ ಸ್ಪೂನ್
    * ಉಪ್ಪು- ರುಚಿಗೆ ತಕ್ಕಷ್ಟು
    * ಎಣ್ಣೆ- ಕರಿಯಲು

    ಮಾಡುವ ವಿಧಾನ
    * ಮೊದಲಿಗೆ ಆಲೂಗಡ್ಡೆಯನ್ನು ಕುದಿಸಿ, ಸಿಪ್ಪೆ ಬೇರ್ಪಡಿಸಿ ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ
    * ನಂತರ ಒಂದು ಬೌಲ್ ನಲ್ಲಿ ರವೆ, ಸ್ಮ್ಯಾಶ್ ಮಾಡಿದ ಆಲೂಗಡ್ಡೆ ಮತ್ತು ಮೊಸರು ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ. ಮುಚ್ಚಳ ಮುಚ್ಚಿ 5 ರಿಂದ 10 ನಿಮಿಷ ನೆನೆಯಲು ಬಿಡಿ.
    * 5 ನಿಮಿಷದ ಬಳಿಕ ಹಿಟ್ಟಿಗೆ ಕತ್ತಿರಿಸಿಕೊಂಡಿಟ್ಟುಕೊಂಡಿರುವ ಈರುಳ್ಳಿ, ಹಸಿ ಮೆಣಸಿನಕಾಯಿ, ಸಬ್ಬಕ್ಕಿ ಸೊಪ್ಪು, ಕೋತಂಬರಿ ಸೊಪ್ಪು, ಅಡುಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಬೇಕು.
    * ಸ್ಟೌವ್ ಆನ್ ಮಾಡಿಕೊಂಡು ಒಂದು ಬಾಣಲೆಯಲ್ಲಿ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ. ಬಾಣಲೆಯಲ್ಲಿನ ಎಣ್ಣೆ ಬಿಸಿಯಾಗ್ತಿದ್ದಂತೆ ಕಲಿಸಿದ ಹಿಟ್ಟನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಉಂಡೆಯನ್ನಾಗಿ ತಟ್ಟಿ ಎಣ್ಣೆಯಲ್ಲಿ ಕರಿದ್ರೆ ಗರಿ ಗರಿಯಾದ್ರೆ ಮಸಲಾ ವಡೆ ರೆಡಿ.
    * ಮಸಲಾ ವಡೆ ಜೊತೆ ಕಾಯಿ ಚಟ್ನಿ ಇದ್ರೆ ತಿನ್ನಲು ಮತ್ತಷ್ಟು ರುಚಿಯಾಗಿರುತ್ತದೆ.