Tag: Martyr Warrior

  • ಕೇಂದ್ರ ಸಚಿವರ ಎಡವಟ್ಟು- ಹುತಾತ್ಮ ಯೋಧನ ಬದಲು, ಕರ್ತವ್ಯ ನಿರತ ಯೋಧನ ಕುಟುಂಬಕ್ಕೆ ಸಾಂತ್ವನ

    ಕೇಂದ್ರ ಸಚಿವರ ಎಡವಟ್ಟು- ಹುತಾತ್ಮ ಯೋಧನ ಬದಲು, ಕರ್ತವ್ಯ ನಿರತ ಯೋಧನ ಕುಟುಂಬಕ್ಕೆ ಸಾಂತ್ವನ

    ಗದಗ: ಹುತಾತ್ಮ ಯೋಧನ ಕುಟುಂಬಕ್ಕೆ ಭೇಟಿ ನೀಡಬೇಕಿದ್ದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಸ್ಥಳೀಯ ಬಿಜೆಪಿ ಮುಖಂಡರ ಮಾಹಿತಿ ಕೊರತೆಯಿಂದಾಗಿ, ಕರ್ತವ್ಯ ನಿರತ ಯೋಧನ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿರುವ ಘಟನೆ ಜಿಲ್ಲೆಯ ಮುಳಗುಂದ ಪಟ್ಟಣದಲ್ಲಿ ನಡೆದಿದೆ.

    ಗುರುವಾರ ರಾತ್ರಿ ಗದಗನಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಜನಾಶೀರ್ವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಮುಳಗುಂದ ಪಟ್ಟಣದ ಹುತಾತ್ಮ ಯೋಧನ ಕುಟುಂಬಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿಬರುವ ಪ್ಲಾನ್ ಹಾಕಿಕೊಂಡಿದ್ದರು. ಈ ವೇಳೆ ಬಿಜೆಪಿ ಸ್ಥಳೀಯ ಕಾರ್ಯಕರ್ತರ ಮಾಹಿತಿ ಕೊರತೆಯಿಂದಾಗಿ ಎಡವಟ್ಟಾಗಿದೆ. ಇದನ್ನೂ ಓದಿ: ಭಾರೀ ಮೊತ್ತಕ್ಕೆ ಕೆಜಿಎಫ್ ಸ್ಯಾಟಲೈಟ್ ಹಕ್ಕು ಖರೀದಿಸಿದ ಜೀ ಸ್ಟುಡಿಯೋಸ್

    ಒಂದೂವರೆ ವರ್ಷದ ಹಿಂದೆ ಮುಳಗುಂದ ಪಟ್ಟಣದ ಯೋಧ ಬಸವರಾಜ್ ಹಿರೇಮಠ ಮಹಾರಾಷ್ಟ್ರದ ಪುಣೆಯಲ್ಲಿ ಕರ್ತವ್ಯನಿರತರಾಗಿದ್ದ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಸವರಾಜ್ ಹಿರೇಮಠ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಬೇಕಿತ್ತು. ಆದರೆ ಸ್ಥಳೀಯ ಕಾರ್ಯಕರ್ತರ ಎಡವಟ್ಟಿನಿಂದ ಸದ್ಯ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವ ಯೋಧ ರವಿಕುಮಾರ್ ಹನುಮಂತಪ್ಪ ಕಟ್ಟಿಮನಿ ಅವರ ಮನೆಗೆ ಭೇಟಿ ನೀಡಿದ್ದರು.

    ಕುಟುಂಬದವರ ಯೋಗಕ್ಷೇಮ ವಿಚಾರಿಸಿ, ಕರ್ತವ್ಯ ನಿರತ ಸೈನಿಕನ ಪತ್ನಿಗೆ ಸರ್ಕಾರಿ ಕೆಲಸ ಹಾಗೂ ಕುಟುಂಬಕ್ಕೆ ಜಮೀನು ಕೊಡುವ ಭರವಸೆಯನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ನೀಡಿದ್ದರು. ಕೇಂದ್ರ ಸಚಿವರ ತರಾತುರಿ ಹೇಳಿಕೆಯಿಂದ ಹಾಲಿ ಯೋಧನ ಕುಟುಂಬಸ್ಥರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಸ್ಥಳೀಯ ಕಾರ್ಯಕರ್ತರು ಮಾಡಿದ ಎಡವಟ್ಟಿನಿಂದ ಕೇಂದ್ರ ಸಚಿವರು ಪೇಚಿಗೆ ಸಿಲುಕಿದಂತಾಗಿದೆ.

  • ಇಂದಿಗೂ ಅಂದಿನ ಕಾರ್ಗಿಲ್ ಯುದ್ಧವೇ ನೆನಪಾಗುತ್ತೆ: ಹುತಾತ್ಮ ಯೋಧ ಕಾವೇರಪ್ಪನ ಪತ್ನಿ

    ಇಂದಿಗೂ ಅಂದಿನ ಕಾರ್ಗಿಲ್ ಯುದ್ಧವೇ ನೆನಪಾಗುತ್ತೆ: ಹುತಾತ್ಮ ಯೋಧ ಕಾವೇರಪ್ಪನ ಪತ್ನಿ

    – ಅವರು ದೇಶಕ್ಕಾಗಿ ಪ್ರಾಣ ಬಿಟ್ಟರು ನಾವು ಏನು ಮಾಡಿದ್ದೇವೆ?

    ಮಡಿಕೇರಿ: ಇಂದು ಜುಲೈ 26 ಇಡೀ ದೇಶವೇ ಮರೆಯದ ದಿನ. 1999ರಲ್ಲಿ ಪಾಪಿಸ್ತಾನದ ಶತ್ರುಗಳ ಎದೆಸೀಳಿದ ಭಾರತೀಯ ಸೈನಿಕರ ಜೊತೆಯಲ್ಲಿ ವೀರರ ನಾಡು ಕೊಡಗಿನ ಸೈನಿಕ ಕಾವೇರಪ್ಪ ಇದ್ದರು. ಶತ್ರುಗಳ ವಿರುದ್ಧ ಹೋರಾಡುತ್ತಲೇ ವೀರ ಮರಣ ಹೊಂದಿದ್ದರು.

    ಕೊಡಗು ಎಂದ ಕೂಡಲೇ ನೆನಪಾಗೋದೆ ಇಲ್ಲಿನ ವೀರತ್ವ. ಭಾರತೀಯ ಸೇನೆಗೆ ಕೊಡಗಿನ ಜನತೆ ವಿಶೇಷ ಸೇವೆ ನೀಡಿದೆ. ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತ ಮಹಾನ್ ವ್ಯಕ್ತಿಗಳನ್ನು ನೀಡಿದ ಜಿಲ್ಲೆ ಕೊಡಗು. ಹಾಗೆಯೇ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಶತ್ರುಗಳೊಂದಿಗೆ ಹೋರಾಡುತ್ತಲೇ ವೀರಮರಣವನ್ನಪ್ಪಿದ ಹುತಾತ್ಮರು ಇದ್ದಾರೆ.

    ಹೌದು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮೈತಡಿ ಗ್ರಾಮದ ಕಾವೇರಪ್ಪ ಭಾರತೀಯ ಸೇನೆಗೆ ಸೇರಿ 7 ವರ್ಷಗಳ ಕಾಲ ಶತ್ರುಗಳ ವಿರುದ್ಧ ಹೋರಾಡಿದ್ದರು. ಸೇನೆಗೆ ಸೇರಿದ್ದ ಕೆಲವೇ ವರ್ಷಗಳಲ್ಲಿ ಶೋಭಾ ಅವರನ್ನು ವರಿಸಿದ್ದರು. ಇನ್ನು ಏಳೆಂಟು ವರ್ಷ ಸೇನೆಯಲ್ಲಿ ದುಡಿದು ಜಿಲ್ಲೆಗೆ ವಾಪಸ್ ಆಗಲು ನಿರ್ಧರಿಸಿದ್ದರು. ಇದನ್ನು ಓದಿ: 16 ದಿನ ಊಟ, ಸ್ನಾನವಿಲ್ಲದೆ ಕೆಚ್ಚೆದೆಯ ಹೋರಾಟ – ಕಾರ್ಗಿಲ್ ಗೆದ್ದು ಬಂದ ಸೇನಾನಿಯ ರೋಚಕ ಕಥೆ

    ಆದರೆ 1999ರಲ್ಲಿ ಪಾಕಿಗಳ ಎದುರು ಕಾರ್ಗಿಲ್‍ನಲ್ಲಿ ಹತ್ತಾರು ದಿನಗಳ ಶತ್ರುಗಳ ಎದೆ ಸೀಳಿ ಭಾರತಾಂಬೆಯ ರಕ್ಷಣೆಗೆ ನಿಂತಿದ್ದರು. ಆದರೆ ಪಾಪಿ ಪಾಕಿಸ್ತಾನದ ಕುತಂತ್ರದಿಂದ ಕೊಡಗಿನ ವೀರ ಯೋಧ ಕಾವೇರಪ್ಪ ಹುತಾತ್ಮರಾಗಿದ್ದರು. ತಾನು ಮದುವೆಯಾದ ಸ್ವಲ್ಪ ದಿನಕ್ಕೆ ಅವರು ಕರ್ತವ್ಯದ ನಿಮಿತ್ತ ತೆರಳಿದರು. ಮತ್ತೆ ನಾನು ಅವರನ್ನು ನೋಡಲು ಸಾಧ್ಯವಾಗದೆ, ಹುತಾತ್ಮರಾದಾಗ ನನ್ನ ನೋವು ಯಾರಿಗೂ ಹೇಳ ತೀರದು ಎಂದು ಕಾವೇರಪ್ಪ ಅವರ ಪತ್ನಿ ಶೋಭ ಅವರು ಕಣ್ಣೀರು ಹಾಕುತ್ತಾರೆ.

    ಇಂದಿಗೂ ಅಂದಿನ ಕಾರ್ಗಿಲ್ ಯುದ್ಧವೇ ನೆನಪಾಗುತ್ತೆ. ಅಂದು ನಾನಷ್ಟೆ ಅಲ್ಲ, ನನಗಿಂತ ಚಿಕ್ಕ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ಕಾರ್ಗಿಲ್ ಯುದ್ಧದಲ್ಲಿ ತಮ್ಮ ಪತಿಯರನ್ನು ಕಳೆದುಕೊಂಡಿದ್ದಾರೆ. ಆ ನೋವುಗಳು ಇಂದಿಗೂ ತೀವ್ರವಾಗಿ ಕಾಡುತ್ತವೆ. ದೇಶಕ್ಕಾಗಿ ಅವರು ಪ್ರಾಣವನ್ನೇ ತೆತ್ತರು. ನಾನು ದೇಶಕ್ಕಾಗಿ ಏನು ಕೊಟ್ಟೆದ್ದೇನೆ ಎನ್ನುವ ಪ್ರಶ್ನೆಗಳು ಕಾಡುತ್ತವೆ. ಭಾರತವು ಕಾರ್ಗಿಲ್ ಅನ್ನು ಜಯಿಸಿದ ದಿನ ಇಂದಿಗೂ ಮೈತಡಿಯಲ್ಲಿರುವ ನನ್ನ ಪತಿಯ ಸಮಾಧಿ ಮುಂದೆ ನಿಂತು ನಮಸ್ಕರಿಸುತ್ತೇನೆ. ಕೊಡಗಿನಲ್ಲಿ ಸೇನೆಗೆ ಅಪಾರ ಸೇವೆ ಸಲ್ಲಿಸಿದವರಿದ್ದಾರೆ. ಆದರೆ ಇತ್ತೀಚೆಗೆ ಸೇನೆಗೆ ಸೇರುವವರ ಸಂಖ್ಯೆಯೇ ಕಡಿಮೆ ಆಗಿದೆ ಎಂದು ಶೋಭಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.