Tag: mars

  • ರಾಹುಲ್ ಮಂಗಳ ಗ್ರಹದಿಂದ ಬಂದಿದ್ದಾರೆ: ಕಂಗನಾ ಹೇಳಿಕೆಗೆ ‘ಕೈ’ ಕಾರ್ಯಕರ್ತರು ತಿರುಗೇಟು

    ರಾಹುಲ್ ಮಂಗಳ ಗ್ರಹದಿಂದ ಬಂದಿದ್ದಾರೆ: ಕಂಗನಾ ಹೇಳಿಕೆಗೆ ‘ಕೈ’ ಕಾರ್ಯಕರ್ತರು ತಿರುಗೇಟು

    ಕಾಂಗ್ರೆಸ್ ಪಕ್ಷದ ಯುವ ನಾಯಕ, ಸಂಸದ ರಾಹುಲ್ ಗಾಂಧಿ ಅವರನ್ನು ಮಂಗಳ ಗ್ರಹದಿಂದ (Mars) ಬಂದಿರುವ ವ್ಯಕ್ತಿ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಟೀಕಿಸಿದ್ದರು. ಕಂಗನಾ ಮಾತಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಿರುಗೇಟು ನೀಡಿದ್ದಾರೆ. ಕಂಗನಾ ಅವರ ಅನೇಕ ಮಾತುಗಳನ್ನು ಟ್ರೋಲ್ ಮಾಡಿ, ನೀವು ಯಾವ ಗ್ರಹದಿಂದ ಬಂದಿದ್ದೀರಿ ಉತ್ತರಿಸಿ ಎಂದು ಕೇಳುತ್ತಿದ್ದಾರೆ.

    ಪದೇ ಪದೇ ರಾಹುಲ್ ಅವರನ್ನು ಕಂಗನಾ ಟಾರ್ಗೆಟ್ ಮಾಡುತ್ತಿದ್ದಾರೆ. ಈವರೆಗೂ ಬಾಲಿವುಡ್ ನಲ್ಲಿನ ನೆಪೋಟಿಸಂ (Nepotism) ಬಗ್ಗೆ ಮಾತನಾಡುತ್ತಿದ್ದ ಕಂಗನಾ ರಣಾವತ್, ಇದೀಗ ರಾಜಕಾರಣಕ್ಕೂ ಎಂಟ್ರಿ ಕೊಟ್ಟಿರುವುದರಿಂದ, ಇಲ್ಲಿನ ನೆಪೋಟಿಸಂ ಬಗ್ಗೆ ಟೀಕಿಸಿದ್ದಾರೆ. ಅದು ಕೇವಲ ಕಾಂಗ್ರೆಸ್ ಪಕ್ಷದೊಳಗಿನ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ.

    ಮೊದಲಿನಿಂದಲೂ ನಾನು ಕಾಂಗ್ರೆಸ್ ಅನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದಕ್ಕೆ ಕಾರಣ ಕುಟುಂಬ ರಾಜಕಾರಣ. ರಾಹುಲ್ ಗಾಂಧಿ (Rahul Gandhi) ಹೆಸರನ್ನು ನೇರವಾಗಿಯೇ ತಗೆದುಕೊಳ್ಳುತ್ತೇನೆ. ಈ ನೆಪೋಟಿಸಂ ಅಂತ್ಯವಾಗಬೇಕು. ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಕಂಗನಾ ರಣಾವತ್ ಕಟು ನುಡಿಯಲ್ಲೇ ಟೀಕೆ ಮಾಡಿದ್ದಾರೆ.

     

    ಸದ್ಯ ಲೋಕಸಭಾ ಅಖಾಡದಲ್ಲಿ ಕಸರತ್ತು ಮಾಡುತ್ತಿದ್ದಾರೆ ನಟಿ ಕಂಗನಾ ರಣಾವತ್. ಇದೇ ವೇಳೆಯಲ್ಲಿ ಮಾಧ್ಯಮಗಳ ಜೊತೆಯೂ ಅವರು ಮಾತನಾಡಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಸೂಪರ್ ಸ್ಟಾರ್ ಅನಿಸಿಕೊಂಡ ಶಾರುಖ್ (Shahrukh Khan) ಕೂಡ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಸೋಲುಂಡಿದ್ದಾರೆ. ನಾನು ಮತ್ತು ಶಾರುಖ್ ಈ ಯುಗದ ಕೊನೆಯ ಸೂಪರ್ ಸ್ಟಾರ್ಸ್ ಎಂದು ಬಣ್ಣಿಸಿಕೊಂಡಿದ್ದಾರೆ.

  • ಮಂಗಳ ಗ್ರಹಕ್ಕೆ ಸೋಲಾರ್‌ ಚಾಲಿತ ವಿಮಾನ ಕಳಿಸಲು ನಾಸಾ ಚಿಂತನೆ – ಏನಿದರ ವಿಶೇಷ?

    ಮಂಗಳ ಗ್ರಹಕ್ಕೆ ಸೋಲಾರ್‌ ಚಾಲಿತ ವಿಮಾನ ಕಳಿಸಲು ನಾಸಾ ಚಿಂತನೆ – ಏನಿದರ ವಿಶೇಷ?

    ಸೌರಮಂಡಲದ ಅನೇಕ ಗ್ರಹ ಉಪಗ್ರಹಗಳ ಬಗ್ಗೆ ಮನುಷ್ಯನ ಕುತೂಹಲ ಮುಗಿಯುವುದೇ ಇಲ್ಲ. ಈ ವಿಚಾರದಲ್ಲಿ ಇಂದು ತಿಳಿದ ವಿಷಯ ನಾಳೆಗೆ ಇನ್ನೊಂದು ತಿರುವು ಪಡೆದು ಬಿಡುತ್ತದೆ. ಇದೇ ಕಾರಣಕ್ಕೆ ನಿರಂತರ ಸಂಶೋಧನೆ, ಉಪಗ್ರಹಗಳ ಉಡಾವಣೆಯನ್ನು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಮಾಡುತ್ತಿವೆ. ಇನ್ನೂ ಹೊಸ ಹೊಸ ಯೋಜನೆಯನ್ನು ಈ ಬಗ್ಗೆ ರೂಪಿಸುತ್ತಿವೆ. 

    ಅಮೆರಿಕದ ನಾಸಾ (NASA) ಈ ಹಿಂದೆ ಮಂಗಳನಲ್ಲಿಗೆ (Mars) ಕಳಿಸಿದ್ದ ಹೆಲಿಕಾಪ್ಟರ್‌ ಮಾದರಿಯ ನೌಕೆ ಹಲವು ವರ್ಷಗಳ ಕಾಲ ತನ್ನ ಕೆಲಸ ಮಾಡಿ ವಾರದ ಹಿಂದೆ ಹಾನಿಗೊಳಗಾಗಿದೆ. ಇದೀಗ ನಾಸಾ ಮತ್ತೆ ಮಂಗಳನಲ್ಲಿಗೆ ವಿಮಾನದ ಮಾದರಿಯ ಉಪಗ್ರಹವೊಂದನ್ನು ಕಳುಹಿಸುವ ಚಿಂತನೆಯಲ್ಲಿದೆ. ಮಂಗಳನಲ್ಲಿ ನೀರಿನ ಅಂಶ ಇರುವ ಬಗ್ಗೆ ಅಧ್ಯಯನ ಮಾಡುವುದು ಇದರ ಮೂಲ ಉದ್ದೇಶವಾಗಿದೆ. 

    ಇದಕ್ಕಾಗಿ ದೈತ್ಯ ಸ್ಥಿರ ರೆಕ್ಕೆಯ ವಿಮಾನವನ್ನು ಕಳುಹಿಸುವ ಆಲೋಚನೆಯಲ್ಲಿ ಅಮೆರಿಕದ ವಿಜ್ಞಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಮ್ಯಾಗಿ ಎಂಬ ಹೆಸರಿನ ಈ ವಿಮಾನ, ಮಾರ್ಸ್ ಏರಿಯಲ್ ಮತ್ತು ಗ್ರೌಂಡ್ ಇಂಟೆಲಿಜೆಂಟ್ ಎಕ್ಸ್‌ಪ್ಲೋರರ್ ಸೌರಶಕ್ತಿ ಚಾಲಿತ ವಿಮಾನವಾಗಿದೆ. ಟೇಕ್ ಆಫ್ ಮತ್ತು ಲಂಬವಾಗಿ ಇಳಿಯಲು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. 

    ಈ ವಿಮಾನ ಒಂದೇ ಚಾರ್ಜ್‍ನಲ್ಲಿ 179 ಕಿ.ಮೀ ದೂರದವರೆಗೆ ಹಾರಬಲ್ಲದು. ಅಲ್ಲದೇ ಒಂದೇ ಮಂಗಳನ ವರ್ಷದಲ್ಲಿ 16,000 ಕಿ.ಮೀ ಗಿಂತಲೂ ಹೆಚ್ಚು ಪ್ರಯಾಣಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಈ ಅವಧಿ ಭೂಮಿಯ ಮೇಲೆ ಸರಿಸುಮಾರು 24 ತಿಂಗಳುಗಳಿಗೆ ಸಮಾನವಾಗಿರುತ್ತದೆ. ಮ್ಯಾಗಿಯು ಮಂಗಳನ ಅಂಗಳದಿಂದ 1,000 ಮೀಟರ್ ಎತ್ತರದಲ್ಲಿ ಹಾರುತ್ತದೆ. ಇದು ಮೂರು ವಿಷಯದ ಬಗ್ಗೆ ಮಾಹಿತಿ ಕಲೆ ಹಾಕಲಿದೆ. ಮೊದಲನೆಯದಾಗಿ ಅಲ್ಲಿ ನೀರಿನ ಅಂಶ ಇರುವುದರ ಬಗ್ಗೆ, ಎರಡನೇಯದಾಗಿ ದುರ್ಬಲ ಕಾಂತೀಯ ಕ್ಷೇತ್ರದ ಮೂಲದ ಬಗ್ಗೆ ಹಾಗೂ ಕೊನೆಯದಾಗಿ ಮೀಥೇನ್‍ನ ಇರುವ ಬಗ್ಗೆ ಹುಡುಕಾಟ ನಡೆಸಲಿದೆ. ವಿಜ್ಞಾನಿಗಳ ಈ ಕಲ್ಪನೆ ಇನ್ನೂ ಅಭಿವೃದ್ಧಿಯ ಆರಂಭಿಕ ಹಂತದಲ್ಲಿದೆ. 

    ಮಂಗಳನ ಅಂಗಳಕ್ಕೆ ತೆರಳಿದ್ದ ನಾಸಾ ಹೆಲಿಕಾಪ್ಟರ್‌!

    ಮಂಗಳ ಗ್ರಹದ ಅಧ್ಯಯನಕ್ಕೆ ತೆರಳಿದ್ದ ನಾಸಾದ ಬಾಹ್ಯಾಕಾಶ ನೌಕೆ ಇಂಜೆನ್ಯುಯಿಟಿ ತನ್ನ ಹಾರಾಟವನ್ನು ಇತ್ತೀಚೆಗೆ ನಿಲ್ಲಿಸಿತ್ತು. ಹೆಲಿಕಾಪ್ಟರ್‌ನಂತಿರುವ ಪುಟ್ಟ ನೌಕೆ 1.8 ಕೆ.ಜಿ ತೂಕವಿತ್ತು. ಇದೀಗ ನೌಕೆಯ ರೆಕ್ಕೆಗಳು ಜಖಂಗೊಂಡಿದ್ದು, ಇದರ ಕಾರ್ಯಸ್ಥಗಿತವಾಗಿದೆ. ಪ್ರಸ್ತುತ ಬಿದ್ದಿರುವ ನೌಕೆ ಮಂಗಳ ಗ್ರಹದಲ್ಲಿಯೇ ಇರಲಿದ್ದು, ನಿಯಂತ್ರಣ ಕೊಠಡಿ ಜೊತೆ ಸಂಪರ್ಕದಲ್ಲಿರಲಿದೆ.

    ಅಲ್ಪಾವಧಿಯ ತಾಂತ್ರಿಕ ಪ್ರಾತ್ಯಕ್ಷಿಕೆ ಉದ್ದೇಶದ ಇಂಜೆನ್ಯುಯಿಟಿ ಹೆಲಿಕಾಪ್ಟರ್ 2021ರಲ್ಲಿ ಮಂಗಳ ಗ್ರಹಕ್ಕೆ ಹೆಜ್ಜೆ ಇಟ್ಟಿತ್ತು. ಮೂರು ವರ್ಷಗಳಲ್ಲಿ 72 ಬಾರಿ ಹಾರಾಟ ನಡೆಸಿದ್ದು, 19 ಕಿ.ಮೀ. ಕ್ರಮಿಸಿತ್ತು. ಇದು, ಉದ್ದೇಶಿತ ಯೋಜನೆಗಿಂತಲೂ 14 ಪಟ್ಟು ಅಧಿಕ. 24 ಮೀಟರ್ ಎತ್ತರದಲ್ಲಿ ಗಂಟೆಗೆ 36 ಕಿ.ಮೀ ವೇಗದಲ್ಲಿ ಈ ಹೆಲಿಕಾಪ್ಟರ್ ಕ್ರಮಿಸಿತ್ತು.

  • ಸ್ಪೇಸ್‌ಎಕ್ಸ್‌ನ ದೈತ್ಯ ರಾಕೆಟ್ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟ

    ಸ್ಪೇಸ್‌ಎಕ್ಸ್‌ನ ದೈತ್ಯ ರಾಕೆಟ್ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟ

    ಟೆಕ್ಸಾಸ್‌:  ಬಾಹ್ಯಾಕಾಶ ಅಧ್ಯಯನಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ಎಲೋನ್‌ ಮಸ್ಕ್‌ ಸ್ಪೇಸ್‍ಎಕ್ಸ್ (Space X) ವಿನ್ಯಾಸಗೊಳಿಸಿದ್ದ ಅತ್ಯಂತ ಶಕ್ತಿಶಾಲಿ ರಾಕೆಟ್(Rocket) ಸ್ಟಾರ್‌ಶಿಪ್‌ನ (Starship) ಪರೀಕ್ಷಾರ್ಥ ಹಾರಾಟದ ವೇಳೆ ಗುರುವಾರ ಸ್ಫೋಟಗೊಂಡಿದೆ.

    ಟೆಕ್ಸಾಸ್‍ನ (Texas) ಬೊಕಾ ಚಿಕಾದಲ್ಲಿರುವ (Boca Chica) ಸ್ಪೇಸ್‍ಎಕ್ಸ್ ಬಾಹ್ಯಾಕಾಶ ಕೇಂದ್ರದಿಂದ ಸ್ಟಾರ್‌ಶಿಪ್‌ನ ಮೊದಲ ಪರೀಕ್ಷಾರ್ಥ ಹಾರಾಟ ಬೆಳಗ್ಗೆ 8:33ಕ್ಕೆ ನಡೆಯಿತು. ಇದನ್ನೂ ಓದಿ: ಸೇನಾ ವಾಹನಕ್ಕೆ ಬೆಂಕಿ ತಗುಲಿ 4 ಯೋಧರು ಸಜೀವದಹನ

    ರಾಕೆಟ್ ಮೂರು ನಿಮಿಷಗಳ ಉಡಾವಣೆಯಾದ ಬಳಿಕ ಸ್ಟಾರ್‌ಶಿಪ್‌ ಬಾಹ್ಯಾಕಾಶ ನೌಕೆಯನ್ನು ಮೊದಲ ಹಂತದಲ್ಲಿ ಬೇರ್ಪಡಿಸಲು ನಿಗದಿಪಡಿಸಲಾಗಿತ್ತು. ಆದರೆ ಬೇರ್ಪಡಿಸಲು ವಿಫಲವಾಗಿ ರಾಕೆಟ್ ಸ್ಫೋಟಗೊಂಡಿತು ಎಂದು ಸ್ಪೇಸ್‍ಎಕ್ಸ್ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದೆ. ಸ್ಟಾರ್‌ಶಿಪ್‌ನ್ನು ಚಂದ್ರ ಹಾಗೂ ಮಂಗಳನಲ್ಲಿಗೆ (Mars) ಕಳುಹಿಸುವ ಯೋಜನೆ ರೂಪಿಸಲಾಗಿತ್ತು. ಇದನ್ನೂ ಓದಿ: 8 ವರ್ಷಗಳ ಬಳಿಕ ಭಾರತದ ನೆಲಕ್ಕೆ ಕಾಲಿಡುತ್ತಿರುವ ಪಾಕ್ ಸಚಿವ

  • ಇನ್ನು ಐದೇ ವರ್ಷಗಳಲ್ಲಿ ಮಾನವ ಮಂಗಳ ಗ್ರಹಕ್ಕೆ ಪ್ರಯಾಣಿಸಬಹುದು: ಎಲೋನ್ ಮಸ್ಕ್ ಭರವಸೆ

    ಇನ್ನು ಐದೇ ವರ್ಷಗಳಲ್ಲಿ ಮಾನವ ಮಂಗಳ ಗ್ರಹಕ್ಕೆ ಪ್ರಯಾಣಿಸಬಹುದು: ಎಲೋನ್ ಮಸ್ಕ್ ಭರವಸೆ

    ವಾಷಿಂಗ್ಟನ್: ಸ್ಪೇಸ್‍ಎಕ್ಸ್ ಕಂಪನಿಯ ಸಿಇಒ ಎಲೋನ್ ಮಸ್ಕ್ ಒಂದು ಹೊಸ ಹೇಳಿಕೆಯನ್ನು ನೀಡುವ ಮೂಲಕ ಬಾಹ್ಯಾಕಾಶ ಲೋಕದಲ್ಲಿ ಮುಂದೆ ನಡೆಯಬಹುದಾದ ಭವಿಷ್ಯದ ಸುಳಿವು ನೀಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಮಾನವನೂ ಮಂಗಳ ಗ್ರಹಕ್ಕೆ ಪ್ರಯಾಣ ಬೆಳೆಸಬಹುದು ಎಂದು ಎಲೋನ್ ಮಸ್ಕ್ ತಿಳಿಸಿದ್ದಾರೆ.

    ಮಾನವ ಮಂಗಳ ಗ್ರಹದೆಡೆ ಪ್ರಯಾಣಿಸಬೇಕೆಂಬ ಕನಸು ಹಲವು ವಿಜ್ಞಾನಿಗಳದ್ದು. ಈ ವಿಚಾರ ಹೊಸದೇನಲ್ಲ. ಕಳೆದ 2 ದಶಕಗಳಿಂದಲೂ ಇದರ ಬಗ್ಗೆ ಹಲವು ಅನ್ವೆಷಣೆಗಳೂ, ತಂತ್ರಜ್ಞಾನದ ಪರೀಕ್ಷೆಗಳೂ ನಡೆದಿವೆ. ಇದೀಗ ವಿಶ್ವದ ಅತ್ಯಂತ ಶ್ರೀಮಂತನ ಹೇಳಿಕೆಯಿಂದಾಗಿ ವಿಶ್ವವ್ಯಾಪಿ ಜನರು ಮುಂದೆ ನಡೆಯಬಹುದಾದ ಭವಿಷ್ಯವನ್ನು ನೋಡಲು ಕಾತುರರಾಗಿದ್ದಾರೆ. ಇದನ್ನೂ ಓದಿ: ಜನವರಿ 1 ರಿಂದ ಜಿಎಸ್‍ಟಿ ನಿಯಮಗಳ ಬದಲಾವಣೆ – ಹೀಗಿದೆ ಮುಖ್ಯ ಬೆಲೆ ಏರಿಕೆಗಳ ಪಟ್ಟಿ

    ಸ್ಪೇಸ್‍ಎಕ್ಸ್‍ನ ಸ್ಟಾರ್‍ಶಿಪ್ ರಾಕೆಟ್‍ಗಳಲ್ಲಿನ ಬೆಳವಣಿಗೆಯ ಆಧಾರಗಳ ಮೇಲೆ ಎಲೋನ್ ಮಸ್ಕ್ ಈ ಸುಳಿವನ್ನು ನೀಡಿದ್ದು, ಕಂಪನಿಯ ಪ್ರಯತ್ನ ಎಷ್ಟೊಂದು ಗಂಭೀರವಾದುದು ಎಂಬುದನ್ನು ತಿಳಿಸುತ್ತದೆ.

    ಇತ್ತೀಚಿನ ಸಂದರ್ಶನವೊಂದರಲ್ಲಿ ಮಸ್ಕ್‍ಗೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಸ್ಪೇಸ್‍ಎಕ್ಸ್ ಮಂಗಳ ಗ್ರಹದ ಮೇಲೆ ಮಾನವನನ್ನು ಯಾವಾಗ ಹೊತ್ತೊಯ್ಯಬಹುದು ಎಂಬ ಪ್ರಶ್ನೆಗೆ ಮಸ್ಕ್ ಒಳ್ಳೆಯ ಸನ್ನಿವೇಶವಿದ್ದರೆ ಮುಂದಿನ 5 ವರ್ಷಗಳೊಳಗೆ ಮಾನವ ಮಂಗಳ ಗ್ರಹದೆಡೆ ಪ್ರಯಾಣಿಸಬಹುದು. ಅದೇ ಸನ್ನಿವೆಶ ಚೆನ್ನಾಗಿಲ್ಲವೆಂದಾದಲ್ಲಿ ಈ ಸಮಯಾವಕಾಶ 10 ವರ್ಷಗಳ ವರೆಗೆ ವಿಸ್ತರಿಸಬಹುದು ಎಂದಿದ್ದಾರೆ. ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

    ಮಂಗಳ ಗ್ರಹದ ಮೇಲೆ ಮನುಷ್ಯರು ಇಳಿಯುವ ಬಗ್ಗೆ ಎಲೋನ್ ಮಸ್ಕ್ ಹೇಳಿಕೆ ನೀಡಿರುವುದು ಇದು ಮೊದಲೇನಲ್ಲ. ಈ ತಿಂಗಳಿನ ಪ್ರಾರಂಭದಲ್ಲಿಯೂ ಸಂದರ್ಶನವೊಂದರಲ್ಲಿ ನಾವು 5 ವರ್ಷಗಳಲ್ಲಿ ಮಂಗಳ ಗ್ರಹದ ಮೇಲೆ ಇಳಿಯದಿದ್ದರೆ ನನಗೇ ಆಶ್ಚರ್ಯವಾಗುತ್ತದೆ ಎಂದು ಮಸ್ಕ್ ಹೇಳಿಕೆ ನೀಡಿದ್ದರು.

  • ಮಂಗಳ ಗ್ರಹದಲ್ಲಿ ಮೂರು ಮನೆ ನಿರ್ಮಾಣದ ನಕ್ಷೆ ಅಂತಿಮ

    ಮಂಗಳ ಗ್ರಹದಲ್ಲಿ ಮೂರು ಮನೆ ನಿರ್ಮಾಣದ ನಕ್ಷೆ ಅಂತಿಮ

    ವಾಷಿಂಗ್ಟನ್: ಮಂಗಳ ಗ್ರಹದಲ್ಲಿಯ ಜೀವ ಸಂಕುಲದ ಕುರಿತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (National Aeronautics and Space Administration) ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಾ ಬಂದಿದೆ. ಇದೀಗ ನಾಸಾ ಮಂಗಳ ಗ್ರಹದ ಮೇಲೆ ನಿರ್ಮಿಸಲು ನಿರ್ಧರಿಸಿರುವ ಮೂರು ಮನೆಗಳ ತ್ರೀಡಿ ನೀಲ ನಕ್ಷೆಯನ್ನು ಅಂತಿಮಗೊಳಿಸಿದೆ.

    ‘3 ಡಿ ಪ್ರಿಂಟೆಂಡ್ ಹೆಬಿಟೆಟ್ ಚಾಲೆಂಜ್’ ಎಂಬ ಸ್ಪರ್ಧೆಯನ್ನು ನಾಸಾ 2015ರಿಂದ ಆರಂಭಿಸಿತ್ತು. ಈ ಸ್ಪರ್ಧೆಯಲ್ಲಿ ಮೂರು ಅಂತಿಮ ಸ್ಪರ್ಧಿಗಳ ಹೆಸರನ್ನು ಅಂತಿಮ ಮಾಡಲಾಗಿದೆ. ಈ ಸ್ಪರ್ಧೆಯ ಸ್ಪರ್ಧಿಗಳು ಚಂದ್ರ ಮತ್ತು ಮಂಗಳನ ಅಂಗಳದಲ್ಲಿ ವಾಸಿಸಲು ಯೋಗ್ಯ ಮನೆಗಳ ನಿರ್ಮಿಸಲು ತಂತ್ರಜ್ಞಾನವನ್ನು ಸಿದ್ಧಪಡಿಸಬೇಕಿತ್ತು.

    ಮಾಡಲಿಂಗ್ ಸಾಫ್ಟವೇರ್ ತಂತ್ರಜ್ಞಾನ: ಸ್ಪರ್ಧೆಯ ಮೂರನೇ ಹಂತಕ್ಕೆ ಆಯ್ಕೆಯ ಮೊದಲು ಅಂದರೇ ನಾಲ್ಕನೇ ಹಂತದಲ್ಲಿ 11 ತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ತಂಡಗಳು ಕಿರು ವಿಡಿಯೋಗಳ ಮೂಲಕ ತಮ್ಮ ತಂತ್ರಜ್ಞಾನವನ್ನು ಪರಿಚಯಿಸಬೇಕಿತ್ತು. ಮನೆ ನಿರ್ಮಾಣದ ನೀಲ ನಕ್ಷೆ, ಲೇಔಟ್, ಒಳಗಡೆಯ ತಂತ್ರಜ್ಞಾನವನ್ನು ವೀಕ್ಷಕರಿಗೆ (ತೀರ್ಪುಗಾರರು) ತಿಳಿಸಬೇಕಿತ್ತು. ಇಲ್ಲಿಯ ತೀರ್ಪುಗಾರರು ಎಲ್ಲ ತಂಡಗಳಿಗೆ ತಂತ್ರಜ್ಞಾನ, ವಿನ್ಯಾಸ, ಪ್ರಾಯೋಗಿಕವಾಗಿ ಎಷ್ಟು ಸರಿ, ಉಪಯುಕ್ತತೆ ಎಂಬಿತ್ಯಾದಿ ಅಂಶಗಳನ್ನು ಪರಿಶೀಲಿಸಿ ಅಂಕಗಳನ್ನು ನೀಡಿದೆ.

    ಟಾಪ್ ಮೂವರಿಗೆ ಬಹುಮಾನ:
    ನ್ಯೂಯಾರ್ಕ್ ಮೂಲದ ‘ಸರ್ಚ್ ಪ್ಲಸ್/ಎಪಿಸ್ ಕಾರ್’ ತಮ್ಮ ವಿಭಿನ್ನ ತಂತ್ರಜ್ಞಾನವನ್ನು ಪ್ರಸ್ತುತ ಪಡಿಸುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದೆ. ಮಾಡ್ಯೂಲರ್ ವಿಜ್ಞಾನದ ತಂತ್ರಜ್ಞಾನ ಪಸ್ತುತಪಡಿಸಿದ್ದ ‘ಜಾಪರಹಾಂಸ್’ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು. ಮೊದಲ ಮೂರು ಸ್ಥಾನ ಪಡೆದ ತಂಡಗಳಿಗೆ ಬಹುಮಾನದ ಮೊತ್ತ 1 ಲಕ್ಷ ಡಾಲರ್ (69.35 ಲಕ್ಷ ರೂ) ಹಣವನ್ನು ಸಮಾನವಾಗಿ ಹಂಚಲಾಗಿದೆ.

    ಮತ್ತೊಂದು ಸುತ್ತು ಮೇ ತಿಂಗಳಲ್ಲಿ ಆರಂಭವಾಗಲಿದೆ. ವಿಜೇತ ತಂಡಗಳು ಈ ಹಂತದಲ್ಲಿ 3ಡಿ ಪ್ರಿಂಟ್ ಸ್ಕೇಲ್ ಮಾಡೆಲ್ ತಯಾರಿಸಲಿವೆ. ಈ ಸುತ್ತಿನಲ್ಲಿರುವ ತಂಡಗಳಿಗೆ 8 ಲಕ್ಷ ಡಾಲರ್ (5.55 ಕೋಟಿ ರೂ.) ಪ್ರೋತ್ಸಾಹ ಧನ ಸಿಗಲಿದೆ. ಈ ಸಂಶೋಧನೆ ಸಹಾಯದಿಂದ ಚಂದ್ರ ಮತ್ತು ಮಂಗಳ ಗ್ರಹ ಪ್ರವಾಸಕ್ಕೆ ಜನರನ್ನು ಕಳುಹಿಸಲು ಸಹಾಯಕಾರಿಯಾಗಲಿದೆ.

  • ನಾನು ಮಂಗಳ ಗ್ರಹದಲ್ಲಿ ಸಿಲುಕಿದ್ದೇನೆ ಎಂದ ವ್ಯಕ್ತಿಗೆ ಸುಷ್ಮಾ ಸ್ವರಾಜ್ ಕೊಟ್ಟ ಉತ್ತರ ಈಗ ವೈರಲ್

    ನಾನು ಮಂಗಳ ಗ್ರಹದಲ್ಲಿ ಸಿಲುಕಿದ್ದೇನೆ ಎಂದ ವ್ಯಕ್ತಿಗೆ ಸುಷ್ಮಾ ಸ್ವರಾಜ್ ಕೊಟ್ಟ ಉತ್ತರ ಈಗ ವೈರಲ್

    ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ಟರ್ ಮೂಲಕ ಅನೇಕ ಜನರಿಗೆ ಸ್ಪಂದಿಸಿ ನೆರವು ನೀಡುವುದರಿಂದ, ಹಾಗೇ ಇನ್ನೂ ಕೆಲವರಿಗೆ ಟಾಂಗ್ ಕೊಡುವ ಮೂಲಕ ಆಗಾಗ ಸುದ್ದಿಯಾಗ್ತಾನೇ ಇರ್ತಾರೆ. ಇದೀಗ ವ್ಯಕ್ತಿಯೊಬ್ಬ ನಾನು ಮಂಗಳಗ್ರಹದಲ್ಲಿ ಸಿಲುಕಿದ್ದೇನೆ ಅಂತ ಟ್ವೀಟ್ ಮಾಡಿದ್ದು ಅದಕ್ಕೆ ಸುಷ್ಮಾ ಸ್ವರಾಜ್ ನೀಡಿದ ಉತ್ತರ ಇದೀಗ ವೈರಲ್ ಆಗಿದೆ.

    ಟ್ವಿಟ್ಟರ್‍ನಲ್ಲಿ 80 ಲಕ್ಷಕ್ಕೂ ಹೆಚ್ಚು ಫಾಲೋವರ್‍ಗಳನ್ನು ಹೊಂದಿರುವ ಸುಷ್ಮಾ ಸ್ವರಾಜ್ ಬಹುತೇಕ ಮಂದಿಯ ಟ್ವೀಟ್‍ಗಳಿಗೆ ಉತ್ತರ ನೀಡುವುದಲ್ಲದೆ ಅವರಿಗೆ ಬೇಕಾದ ನೆರವು ಕೂಡ ನೀಡಿದ್ದಾರೆ. ಆದ್ರೆ ಕೆಲವೊಮ್ಮೆ ಟ್ವಿಟ್ಟರಿಗರು ವಿಚಿತ್ರವಾಗಿ ಟ್ವೀಟ್ ಮಾಡಿ ಸಚಿವೆಯನ್ನ ಟ್ಯಾಗ್ ಮಾಡಿದ್ದೂ ಇದೆ.

    ಹೀಗೆ ಕರಣ್ ಎಂಬ ವ್ಯಕ್ತಿ, ನಾನು ಮಂಗಳಗ್ರಹದಲ್ಲಿ ಸಿಲುಕಿಕೊಂಡಿದ್ದೇನೆ. ಮಂಗಳಯಾನದ ಮೂಲಕ 987 ದಿನಗಳ ಹಿಂದೆ ಕಳಿಸಿದ್ದ ಊಟ ಇನ್ನೇನು ಖಾಲಿಯಾಗುತ್ತಾ ಬಂದಿದೆ. ಮಂಗಳಯಾನ-2 ಯಾವಾಗ ಕಳಿಸ್ತೀರಾ? ಎಂದು ಪ್ರಶ್ನಿಸಿ ಸುಷ್ಮಾ ಸ್ವರಾಜ್ ಅವರ ಖಾತೆಗೆ ಹಾಗೂ ಇಸ್ರೋ ಖಾತೆಗೆ ಟ್ಯಾಗ್ ಮಾಡಿದ್ದಾರೆ.

    ಇದಕ್ಕೆ ಹಾಸ್ಯಾಸ್ಪದವಾಗಿಯೇ ಉತ್ತರ ನೀಡಿರುವ ಸುಷ್ಮಾ ಸ್ವರಾಜ್, ನೀವು ಮಂಗಳಗ್ರಹದಲ್ಲಿ ಸಿಲುಕಿದ್ರೂ ಸರಿ, ಭಾರತೀಯ ರಾಯಭಾರಿಗಳು ನಿಮಗೆ ಸಹಾಯ ಮಾಡಲು ಅಲ್ಲಿರ್ತಾರೆ ಎಂದಿದ್ದಾರೆ.

    https://twitter.com/ksainiamd/status/872614454923546625

    ಇಂದು ಬೆಳಿಗ್ಗೆ ಸುಷ್ಮಾ ಸ್ವರಾಜ್ ಮಾಡಿರುವ ಈ ಟ್ವೀಟ್ ಈಗಾಗಲೇ ವೈರಲ್ ಆಗಿದ್ದು, ಅನೇಕ ಟ್ವಿಟ್ಟರಿಗರು ಈ ಉತ್ತರವನ್ನ ಶ್ಲಾಘಿಸಿದ್ದಾರೆ.

    2013ರ ನವೆಂಬರ್‍ನಲ್ಲಿ ಭಾರತ ಮಂಗಳಯಾನ ಉಪಗ್ರಹವನ್ನು ಉಡಾವಣೆ ಮಾಡಿತ್ತು.

    https://twitter.com/akelabhartiya/status/872664173104177152