Tag: Marriage Proposals

  • ದೊಡ್ಮನೆಯಿಂದ ಹೊರ ಹೋದ ಅರವಿಂದ್‍ಗೆ ಬಂದ ಪ್ರಪೋಸಲ್ಸ್ ಎಷ್ಟು ಗೊತ್ತಾ?

    ದೊಡ್ಮನೆಯಿಂದ ಹೊರ ಹೋದ ಅರವಿಂದ್‍ಗೆ ಬಂದ ಪ್ರಪೋಸಲ್ಸ್ ಎಷ್ಟು ಗೊತ್ತಾ?

    ಬೆಂಗಳೂರು: ಲಾಕ್‍ಡೌನ್ ಬಳಿಕ ಮತ್ತೆ ಬಿಗ್‍ಬಾಸ್ ಸೀಸನ್-8 ಕಾರ್ಯಕ್ರಮ ಆರಂಭವಾಗಿದೆ. ಸದ್ಯ ಕಾರ್ಯಕ್ರಮವನ್ನು ಕಂಟಿನ್ಯೂ ಮಾಡಿರುವ ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ಮತ್ತೆ ದೊಡ್ಮನೆಗೆ ಬರಮಾಡಿಕೊಳ್ಳುತ್ತಾ, ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ.

    ಈ ಮಧ್ಯೆ ದೊಡ್ಮನೆಯಿಂದ ಹೊರ ಹೋದ ಕೆ.ಪಿ ಅರವಿಂದ್‍ರವರಿಗೆ ಎಷ್ಟು ಮದುವೆ ಪ್ರಪೋಸಲ್ಸ್ ಗಳು ಬಂದಿದೆ ಎಂಬ ವಿಚಾರ ವೇದಿಕೆ ಮೇಲೆ ಬಹಿರಂಗವಾಗಿದೆ.

    ಹೌದು, ಬಿಗ್‍ಬಾಸ್ ಮನೆಯಿಂದ ಹೊರಗಡೆ ಹೋದ ಮೇಲೆ ಸಿನಿಮಾ ಆಫರ್‌ಗಳು ಜಾಸ್ತಿ ಬಂತಾ, ಮದುವೆ ಆಫರ್‌ಗಳು ಜಾಸ್ತಿ ಬಂತಾ, ರೇಸ್ ಸರ್ಕಲ್‍ಗಳಿಂದ ಆಫರ್ ಜಾಸ್ತಿ ಬಂತಾ ಏನೇನು ಬಂತು ಎಂದು ಕಿಚ್ಚ ಸುದೀಪ್ ಅರವಿಂದ್‍ರವರಿಗೆ ಪ್ರಶ್ನೆ ಕೇಳಿದ್ದಾರೆ.

    ಆಗ ಅರವಿಂದ್ ಕೋವಿಡ್ ಇರುವ ಕಾರಣ ರೇಸ್ ಸರ್ಕಲ್‍ನಿಂದ ಜಾಸ್ತಿ ಆಫರ್‌ಗಳು ಬಂದಿಲ್ಲ. ಸದ್ಯಕ್ಕೆ ಸಿನಿಮಾ ಆಫರ್‌ಗಳು ಬಂದಿಲ್ಲ. ಆದರೆ ಮದುವೆ ಆಫರ್‌ಗಳು ಒಂದೆರಡು-ಮೂರು ಬಂದಿದೆ ಎಂದಿದ್ದಾರೆ. ಇದಕ್ಕೆ ಕಿಚ್ಚ, ಸತ್ಯ ಮಾತಾಡುತ್ತೇನೆ ಸತ್ಯ ಬಿಟ್ಟು ಬೇರೆನೂ ಮಾತನಾಡುವುದಿಲ್ಲ ಎಂದು ಈ ನೆಲ ಮುಟ್ಟಿ ಹೇಳಿ ಎಂದು ಕೇಳಿದಾಗ ಇದಕ್ಕೆ ನಗುತ್ತಾ ಅರವಿಂದ್, ನೆಲ ಮುಟ್ಟಿ ಸತ್ಯ ಮಾತನಾಡುತ್ತಿದ್ದೇನೆ ಸರ್, ಒಂದೆರಡು ಮೂರು ಪ್ರಪೋಸಲ್ಸ್ ಓದಿದ್ದೇನೆ. ಆದರೆ 1000ಕ್ಕೂ ಅಧಿಕ ಮೆಸೇಜ್‍ಗಳು ಬಂದಿದೆ ಎಂದು ಬಾಯ್ಬಿಟ್ಟಿದ್ದಾರೆ.

    ಅದರಲ್ಲಿ ಬಹಳಷ್ಟು ಇಂಟ್ರೆಸ್ಟಿಂಗ್ ಯಾವುದು ಎಂದು ಕೇಳಿದಾಗ, ಸ್ಟ್ರೆಟ್ ಆಗಿ ಮ್ಯಾರಿ ಮೀ ಎಂದು ಕಳುಹಿಸಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಯಲ್ಲಿ ನಾಮಿನೇಷನ್ ಬೆಂಕಿ ಶುರು

  • ಮೋದಿ ಆಟೋಗ್ರಾಫ್ ನಿಂದ ಹುಡುಗಿಯ ಹಿಂದೆ ಕ್ಯೂ ನಿಂತ ಯುವಕರು!

    ಮೋದಿ ಆಟೋಗ್ರಾಫ್ ನಿಂದ ಹುಡುಗಿಯ ಹಿಂದೆ ಕ್ಯೂ ನಿಂತ ಯುವಕರು!

    ಕೋಲ್ಕತ್ತಾ: ಆಸ್ಪತ್ರೆಯಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಆಟೋಗ್ರಾಫ್ ಪಡೆದ ವಿದ್ಯಾರ್ಥಿನಿಯೊಬ್ಬಳು ಇದೀಗ ಪಶ್ಚಿಮ ಬಂಗಾಳದ ಹಳ್ಳಿಯಲ್ಲೇ ಪ್ರಸಿದ್ಧಿ ಪಡೆದಿದ್ದಾಳೆ. ಅಲ್ಲದೇ ಆಕೆಗೆ ಮದುವೆ ಸಂಬಂಧಗಳು ಕೂಡ ಒಂದರ ಮೇಲೊಂದರಂತೆ ಬರುತ್ತಿವೆ.

    ರೀಟಾ ಮುಡಿ, ಪ್ರಧಾನಿ ಬಳಿಯಿಂದ ಆಟೋಗ್ರಾಫ್ ಪಡೆದ ವಿದ್ಯಾರ್ಥಿನಿ. ಈಕೆ ಬಂಕುರಾದ ಕ್ರಿಶ್ಚಿಯನ್ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾಳೆ. ಕೋಲ್ಕತ್ತಾದಿಂದ 230 ಕಿ.ಮೀ ದೂರದಲ್ಲಿರೋ ಹಳ್ಳಿ ನಿವಾಸಿಯಾಗಿರೋ ರೀಟಾ ಯಾವತ್ತು ತಾನು ಪ್ರಧಾನಿ ಕೈಯಿಂದ ಆಟೋಗ್ರಾಫ್ ಪಡೆದುಕೊಂಡು ಇಷ್ಟು ದೊಡ್ಡ ವ್ಯಕ್ತಿಯಾಗುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಆದ್ರೆ ಇದೀಗ ಈಕೆ ಹಳ್ಳಿಯಲ್ಲಿ ದೊಡ್ಡ ಸೆಲೆಬ್ರಿಟಿಯಾಗಿದ್ದು, ಪ್ರತೀ ನಿತ್ಯ ಅನೇಕರು ಬಂದು ಭೇಟಿಯಾಗುತ್ತಿದ್ದಾರೆ. ಅಲ್ಲದೇ ಘಟನೆಯ ಬಳಿಕ ಎರಡು ಮದುವೆ ಪ್ರಪೋಸಲ್ಸ್ ಗಳು ಕೂಡ ಬಂದಿದೆ.

    ರಿಟಾ ಸೆಲೆಬ್ರಿಟಿಯಾಗಿದ್ದು ಹೇಗೆ?:
    ಜುಲೈ 16ರಂದು ಮಿಡ್ನಾಪುರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವಿತ್ತು. ಮೋದಿಯವರ ಭಾಷಣ ಕೇಳಲು ತಮ್ಮ ತಾಯಿಯೊಂದಿಗೆ ರಿಟಾ ತೆರಳಿದ್ದಳು. ದುರಾದೃಷ್ಟವೆಂಬಂತೆ ಕಾರ್ಯಕ್ರಮದ ವೇಳೆ ಟೆಂಟ್ ಕುಸಿದು ಬಿದ್ದಿತ್ತು. ಘಟನೆಯಲ್ಲಿ ಗಾಯಗೊಂಡವರಲ್ಲಿ ರಿಟಾ ಕೂಡ ಒಬ್ಬಳಾಗಿದ್ದು. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೀಗಾಗಿ ತಮ್ಮ ಭಾಷಣದ ಬಳಿಕ ಮೋದಿಯವರು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು.

    ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಿಟಾ ಆಟೋಗ್ರಾಫ್ ಕೇಳೋದಿಕ್ಕೆ ಹಿಂಜರಿದಿದ್ದಾಳೆ. ಆದ್ರೂ ಗಟ್ಟಿ ಮನಸ್ಸು ಮಾಡಿ ರಿಟಾ ಮೋದಿ ಬಳಿ ಆಟೋಗ್ರಾಫ್ ನೀಡುವಂತೆ ಕೇಳಿದ್ದಾಳೆ. ಹೀಗಾಗಿ ಪ್ರಧಾನಿಯವರು `ರಿಟಾ ಮುಡಿ ತುಮ್ ಸುಖಿ ರಹೋ'(ರಿಟಾ ಮುಡಿಯವರೇ ಸುಖವಾಗಿರು) ಅಂತ ಒಂದು ಚೀಟಿಯಲ್ಲಿ ಬರೆದು ಮಲಗಿದ್ದ ರಿಟಾ ಬಳಿ ಇಟ್ಟಿದ್ದರು. ಈ ಘಟನೆಯ ಮರುದಿನದಿಂದಲೇ ನಮ್ಮ ಮನೆಗೆ ಅತಿಥಿಗಳು ಬರಲು ಆರಂಭಿಸಿದ್ದಾರೆ. ಅಲ್ಲದೇ ಬಂದವರೆಲ್ಲರೂ ಆಟೋಗ್ರಾಫ್ ತೋರಿಸುವಂತೆ ಹೇಳುತ್ತಿದ್ದಾರೆ ಅಂತ ರಿಟಾ ತಿಳಿಸಿದ್ದಾಳೆ.

    ಅತಿಥಿಗಳು ಮಾತ್ರವಲ್ಲದೇ ಮಗಳಿಗೆ ಎರಡು ಮದುವೆ ಸಂಬಂಧಗಳು ಕೂಡ ಬಂದಿವೆ. ಅದರಲ್ಲಿ ಒಂದು ಜಾರ್ಖಂಡ್ ಮೂಲದಾಗಿದ್ದು, ಆತ ಉದ್ಯಮಿಯಾಗಿದ್ದನು. ಈತ ವರದಕ್ಷಿಣೆಯಂತಹ ಯಾವುದೇ ಬೇಡಿಕೆಯನ್ನು ಇಟ್ಟಿರಲಿಲ್ಲ. ಇನ್ನೊಂದು ಬಂಕುರಾದವರೇ ಆಗಿದ್ದು, ಆ ಯುವಕ ಸ್ವಂತ ಜಮೀನು ಹೊಂದಿದ್ದನು. ಆದ್ರೆ ನಮ್ಮ ಮಗಳು ಓದಬೇಕೆಂಬ ಆಸೆಯಿಂದ ಅಷ್ಟೊಂದು ಅದರತ್ತ ಗಮನ ಹರಿಸಿಲ್ಲ ಅಂತ ರಿಟಾ ತಾಯಿ ಸಂಧ್ಯಾ ಹೇಳಿದ್ದಾರೆ.

    ಘಟನೆಗೂ ಮೊದಲು ರಿಟಾರಿಗೆ ಮದುವೆ ಸಂಬಂಧ ಬಂದಿತ್ತು. ಆದ್ರೆ ಅಂದು ಆ ಯುವಕ 1 ಲಕ್ಷ ವರದಕ್ಷಿಣೆ ಕೇಳಿದ್ದನು. ಆದ್ರೆ ರಿಟಾ ತಂದೆ ಆ ಸಂಬಂಧವನ್ನು ನಿರಾಕರಿಸಿದ್ದಳು. ಒಟ್ಟಿನಲ್ಲಿ ಸದ್ಯ ರಿಟಾರಿಗೆ ಯಾವುದೇ ಬೇಡಿಕೆಯಿಲ್ಲದೇ ಒಳ್ಳೊಳ್ಳೆಯ ಮದುವೆ ಸಂಬಂಧಗಳು ಬರುತ್ತಿದ್ದು, ನನ್ನ ಮದುವೆ ವಿಚಾರ ತಂದೆ-ತಾಯಿಗೆ ಬಿಟ್ಟಿದ್ದೇನೆ. ನಾನಿನ್ನೂ ಓದಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ.