Tag: marraige

  • ನಟಿ ಪ್ರಿಯಾಮಣಿ- ಮುಸ್ತಫಾ ಮದುವೆ ಡೇಟ್ ಫಿಕ್ಸ್

    ನಟಿ ಪ್ರಿಯಾಮಣಿ- ಮುಸ್ತಫಾ ಮದುವೆ ಡೇಟ್ ಫಿಕ್ಸ್

    ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ಮದುವೆ ಡೇಟ್ ಫಿಕ್ಸ್ ಆಗಿದೆ. ತಮ್ಮ ಬಹುಕಾಲದ ಗೆಳೆಯ ಮುಸ್ತಫಾ ರಾಜ್ ಜೊತೆ ಇದೇ ತಿಂಗಳು 23 ರಂದು ವಿವಾಹವಾಗಲಿದ್ದಾರೆ.

    ಕಳೆದ ವರ್ಷ ಮೇ 27ರಂದು ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಪ್ರಿಯಾಮಣಿ ತನ್ನ ಬಹುಕಾಲದ ಗೆಳೆಯ ಹಾಗೂ ಮುಂಬೈ ಮೂಲದ ಮುಸ್ತಫಾ ಜೊತೆ ಉಂಗುರ ಬದಲಿಸಿಕೊಂಡಿದ್ದರು. ಇದೀಗ ಅದ್ಧೂರಿಯಾಗಿ ಮದುವೆಯಾಗದೆ ರಿಜಿಸ್ಟ್ರರ್ ಮ್ಯಾರೇಜ್ ಆಗೋದಕ್ಕೆ ನಿರ್ಧರಿಸಿದ್ದಾರೆ.

    ಆಗಸ್ಟ್ 23 ಕ್ಕೆ ವಿವಾಹ ನೊಂದಣಿ ಮಾಡಿಸಿ 24 ರಂದು ಬೆಂಗಳೂರಿನ ಹೊಟೇಲ್ ಒಂದರಲ್ಲಿ ಚಿತ್ರರಂಗದ ಗಣ್ಯರಿಗೆ ಮತ್ತು ಎರಡೂ ಕುಟುಂಬದ ಬಂಧುಗಳಿಗೆ ಪಾರ್ಟಿ ಕೊಡುವ ಸಾಧ್ಯತೆ ಇದೆ ಎಂಬುವುದಾಗಿ ತಿಳಿದುಬಂದಿದೆ.

    ಮೂಲತಃ ಬೆಂಗಳೂರಿನವರಾದ ಪ್ರಿಯಾಮಣಿ, ಅರಬಿಂದೋ ಮೆಮೋರಿಯಲ್ ಸ್ಕೂಲ್, ಬಿಷಪ್ ಕಾಟನ್ ಮಹಿಳಾ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದರು. ಸಿಸಿಎಲ್ ಪಂದ್ಯಾವಳಿಯ ಸಂದರ್ಭದಲ್ಲಿ ಪ್ರಿಯಾಮಣಿ ಅವರಿಗೆ ಮುಸ್ತಫಾ ರಾಜಾ ಜೊತೆ ಪರಿಚಯವಾಗಿ ಬಳಿಕ ಪ್ರೀತಿಗೆ ತಿರುಗಿತ್ತು.

     

  • ಗಂಡನ ಬಿಟ್ಟು ಲವ್ವರ್ ಜೊತೆ ಮಗಳ ಚೆಲ್ಲಾಟ: ಸಹಕರಿಸದ ಅಪ್ಪನ ಕೊಂದೇ ಬಿಟ್ಟ ತಾಯಿ-ಮಗಳು!

    ಗಂಡನ ಬಿಟ್ಟು ಲವ್ವರ್ ಜೊತೆ ಮಗಳ ಚೆಲ್ಲಾಟ: ಸಹಕರಿಸದ ಅಪ್ಪನ ಕೊಂದೇ ಬಿಟ್ಟ ತಾಯಿ-ಮಗಳು!

    ಬೆಳಗಾವಿ: ಕೈಹಿಡಿದು ಬಾಳಪೂರ್ತಿ ಜೀವನ ಸಂಗಾತಿಯಾಗಿರುವೆ ಎಂದು ಸಪ್ತಪದಿ ತುಳಿದ ಹೆಂಡತಿಯೇ ಗಂಡನನ್ನು ಕೊಲ್ಲಿಸಲು ಸುಪಾರಿ ನೀಡಿದ ಭಯಾನಟಕ ಘಟನೆ ಬೆಳಗಾವಿಯ ಗೋಕಾಕ ಹೊರವಲಯದ ಕಡಬಗಟ್ಟಿ ಗ್ರಾಮದಲ್ಲಿ ನಡೆದಿದೆ.

    ಮೂಲತಃ ಗೋಕಾಕ ತಾಲೂಕಿನ ಕೈತನಾಳ ಹೊಸೂರು ಗ್ರಾಮದ ಕೆಂಚಪ್ಪಾ ನೊಗನಿಹಾಳ ತನ್ನ ಪತ್ನಿ ಗೌರವ್ವಾ ನೊಗನಿಹಾಳ ಹಾಕಿದ ಮರ್ಡರ್ ಸ್ಕೆಚ್‍ಗೆ ಬಲಿಯಾಗಿದ್ದಾನೆ. ಕೊಲೆಯಾದ ಕೆಂಚಪ್ಪಾ ಮಗಳು ಸಿದ್ದವ್ವಾ ಕಟ್ಟಿಕಾರ, ಪತ್ನಿ ಗೌರಮ್ಮ ನೋಗನಿಹಾಳ ಸೇರಿ 70 ಸಾವಿರ ಸುಪಾರಿ ನೀಡಿ ಕೊಲೆಮಾಡಿಸಿದ್ದಾರೆ.

    ಮನೆ ಯಜಮಾನ ಮಿಸ್ಸಿಂಗ್ ಆಗಿದ್ದಾನೆ ಎಂದು ಊರಲ್ಲಿ ಸುದ್ದಿ ಹರಡಿಸಿ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಪಾಪಿ ಪತ್ನಿ ಗೌರವ್ವ ಯತ್ನಿಸಿದ್ದಾಳೆ. ಆದ್ರೆ ಊರ ತುಂಬೆಲ್ಲಾ ಕೆಂಚಪ್ಪಾ ಕಾಣೆಯಾಗಿಲ್ಲ ಬದಲಾಗಿ ಕೊಲೆಯಾಗಿದ್ದಾನೆ ಎಂಬ ಗುಸು ಗುಸು ಸುದ್ದಿ ಹರಡಿತ್ತು. ಸಂಶಯದ ಮೆರೆಗೆ ಕೆಂಚಪ್ಪಾ ಸಹೋದರ ವಿಠ್ಠಲ ಪೊಲೀಸ್ ಠಾಣೆಗೆ ದೂರು ಕೊಟ್ಟರು. ತನಿಖೆ ಆರಂಭಿಸಿದ ಗೋಕಾಕ ಗ್ರಾಮೀಣ ಪೋಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ.

    ಪ್ರಕಣದಲ್ಲಿ ಸುಪಾರಿ ಪಡೆದ ಪ್ರಮೂಖ ಆರೋಪಿ ಶಿವಾಜಿ ಹೊಳೆವ್ವಗೋಳ, ಶಂಕರ ದೇಶಿಂಗೆ, ದುರ್ಗಪ್ಪಾ ನಂದಿ, ರಾಮಸಿದ್ದದ್ದಪ್ಪ ನಂದಿ, ಗೌರವ್ವಾ ನೊಗನಿಹಾಳ ಹಾಗೂ ಸಿದ್ದವ್ವ ಕಟ್ಟಿಕಾರಳನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಒಟ್ಟಾರೆ ಪತ್ನಿ ಗೌರವ್ವ, ಮಗಳ ನೀಚ ಕೆಲಸಕ್ಕೆ ಅಪ್ಪ ಸಹಕರಿಸಲಿಲ್ಲ ಅಂತ ಸುಪಾರಿ ಕೊಟ್ಟು ಮುಗಿಸಿರುವುದು ಬೆಳಕಿಗೆ ಬಂದಿದೆ.

  • ರೈಲಿಗೆ ತಲೆ ಕೊಟ್ಟು ಪಿಹೆಚ್‍ಡಿ ವಿದ್ಯಾರ್ಥಿನಿ ಆತ್ಮಹತ್ಯೆ

    ರೈಲಿಗೆ ತಲೆ ಕೊಟ್ಟು ಪಿಹೆಚ್‍ಡಿ ವಿದ್ಯಾರ್ಥಿನಿ ಆತ್ಮಹತ್ಯೆ

    ಕಲಬುರಗಿ: ಪಿಹೆಚ್‍ಡಿ ವಿದ್ಯಾರ್ಥಿನಿಯೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಕಲಬುರಗಿಯಲ್ಲಿ ನಡೆದಿದೆ.

    31 ವರ್ಷದ ಶ್ರೀದೇವಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ರೈಲ್ವೇ ಹಳಿ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೃತ ಶ್ರೀದೇವಿ ಗುಲ್ಬರ್ಗಾ ವಿವಿ ಅರ್ಥಶಾಸ್ತ್ರ ವಿಭಾಗದ ಪಿಹೆಚ್‍ಡಿ ವಿದ್ಯಾರ್ಥಿನಿಯಾಗಿದ್ದರು. ಈಕೆ ಸಾಯುವ ಮುನ್ನ ಮನೆಯಲ್ಲಿ ಡೆತ್‍ನೋಟ್ ಬರೆದಿಟ್ಟು ಕಾಣೆಯಾಗಿದ್ದು, ಇದೀಗ ಶವವಾಗಿ ಪತ್ತೆಯಾಗಿದ್ದಾರೆ.

    ಆತ್ಮಹತ್ಯೆಗೆ ಕಾರಣವೇನು?: ತಿಪ್ಪಣ್ಣ ಎಂಬ ವ್ಯಕ್ತಿ ತನಗೆ 5 ವರ್ಷಗಳಿಂದ ಪರಿಚಯವಿದ್ದು, ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾನೆ. ತುಂಬಾ ತೊಂದರೆ ಕೊಡುತ್ತಿದ್ದಾನೆ. ನನ್ನ ಗೈಡ್ ಕೂಡ ದುಡ್ಡಿಗಾಗಿ ತೊಂದರೆ ಕೊಡುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದಿದ್ದೇನೆ. ನನ್ನ ಸಾವಿಗೆ ತಿಪ್ಪಣ್ಣ ಕಾರಣ ಎಂದೆಲ್ಲಾ ಡೆತ್‍ನೋಟ್‍ನಲ್ಲಿ ಶ್ರೀದೇವಿ ಬರೆದಿದ್ದಾರೆ.

    ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=wIVy7EU-WkI

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ 12 ವೃದ್ಧ ದೇವದಾಸಿಯರು!

    ದಾಂಪತ್ಯ ಜೀವನಕ್ಕೆ ಕಾಲಿಟ್ಟ 12 ವೃದ್ಧ ದೇವದಾಸಿಯರು!

    – ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವೇಳೆ ನಡೆದ ಶುಭವಿವಾಹ

    ರಾಯಚೂರು: ಯವ್ವನದಲ್ಲಿ ಅನಿಷ್ಠ ಪದ್ದತಿಗೆ ಬಲಿಯಾಗಿ ದೇವದಾಸಿಯರಾಗಿ ಬದುಕಿದ 12 ಜನ ವೃದ್ಧೆಯರು ಈಗ ನವ ದಾಂಪತ್ಯಕ್ಕೆ ಕಾಲಿಟ್ಟು ಸಂಸಾರಸ್ಥರಾಗಿದ್ದಾರೆ. ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಇಳಿ ವಯಸ್ಸಿನ ದೇವದಾಸಿಯರಿಗೆ ಕಾನೂನುಬದ್ಧವಾಗಿ ಮದುವೆ ಮಾಡಲಾಯಿತು.

    ಈಗಾಗಲೇ ತಮಗೆ ನೆಚ್ಚಿದವರ ಜೊತೆ ಸಂಸಾರ ಮಾಡುತ್ತಿರುವ ಮಹಿಳೆಯರಿಗೆ ಅವರ ಮದುವೆಯನ್ನು ನೋಂದಣಿ ಮಾಡಿಸುವ ಮೂಲಕ ಪುನಃ ವಿವಾಹ ಮಾಡಲಾಯಿತು. ಕಾರ್ಯಕ್ರಮದಲ್ಲಿ 59 ವರ್ಷದ ಹುಲಿಗೆಮ್ಮ, 63 ವರ್ಷದ ದಸ್ತಗಿರಿ ಸಾಬ್, ಜಾತಿ-ಧರ್ಮ ಬದಿಗೊತ್ತಿ ಸ್ವಯಂ ಪ್ರೇರಣೆಯಿಂದ ಮದುವೆಯಾಗುವ ಮೂಲಕ ಇತರರಿಗೆ ಮಾದರಿಯಾದರು.

    ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ದೇವದಾಸಿ ಪದ್ಧತಿಯಿಂದ ಹೊರಬರುವವರಿಗೆ ಸರ್ಕಾರಿ ಸೌಲಭ್ಯಗಳನ್ನು ಕೂಡಲೇ ಕೊಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ದೇವದಾಸಿ ಪದ್ಧತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇಳಿವಯಸ್ಸಿನಲ್ಲಿ ಜಾತಿ-ಧರ್ಮ ಎಲ್ಲವನ್ನೂ ಮೀರಿ ದಾಂಪತ್ಯಕ್ಕೆ ಕಾಲಿಟ್ಟ ದಂಪತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.

    ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೇವದಾಸಿ ಪುನರ್ವಸತಿ ಯೋಜನೆ, ಜಿಲ್ಲಾ ದೇವದಾಸಿ ವಿಮೋಚನಾ ಸಂಘದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇವದಾಸಿ ಪದ್ಧತಿಯಿಂದ ವಿಮುಕ್ತಿಗೊಂಡು ಉನ್ನತ ಸಾಮಾಜಿಕ ಬದುಕನ್ನ ನಡೆಸುತ್ತಿರುವ ಜಿಲ್ಲೆಯ ನೂರಾರು ಜನ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಮಹಿಳೆಯರಿಗಾಗಿ ಓಟದ ಸ್ಪರ್ಧೆ, ಮ್ಯೂಸಿಕಲ್ ಚಯರ್, ನಿಂಬು ಚಮಚದ ಆಟಗಳನ್ನ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಗೆದ್ದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.

  • ಅಪ್ಪನ ಸಾವಿಗೆ ಭಾವಿ ಪತ್ನಿಯನ್ನ ದೂಷಿಸಿ ಮದುವೆ ಮುರಿದ ವರ- ನೊಂದ ಯುವತಿ ಆತ್ಮಹತ್ಯೆಗೆ ಶರಣು

    ಅಪ್ಪನ ಸಾವಿಗೆ ಭಾವಿ ಪತ್ನಿಯನ್ನ ದೂಷಿಸಿ ಮದುವೆ ಮುರಿದ ವರ- ನೊಂದ ಯುವತಿ ಆತ್ಮಹತ್ಯೆಗೆ ಶರಣು

    ಬೆಂಗಳೂರು: ತಂದೆಯ ಸಾವಿಗೆ ಭಾವಿ ಪತ್ನಿಯನ್ನು ದೂಷಿಸಿ ವರ ಮದುವೆ ಮುರಿದಿದ್ದಕ್ಕೆ ಮನನೊಂದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    32 ವರ್ಷದ ನಾಗಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡ ಯುವತಿ. ಇವರಿಗೆ ಕಾರ್ತಿಕ್ ಎಂಬ ಯುವಕನ ಜೊತೆ ಕಳೆದ ವರ್ಷ ನಿಶ್ಚಿತಾರ್ಥವಾಗಿತ್ತು. ಆದ್ರೆ ಆ ಬಳಿಕ ಯುವಕನ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮದುವೆ ಮುಂದೂಡಲಾಗಿತ್ತು. ನಂತರ ಮೇ 22ರಂದು ಮದುವೆ ನಿಶ್ಚಯವಾಗಿ ಆಹ್ವಾನ ಪತ್ರಿಕೆ ಹಂಚಲಾಗಿತ್ತು. ಆದ್ರೆ ಹುಡುಗಿ ದುರಾದೃಷ್ಟವೆಂದು ಹೇಳಿ ಕಾರ್ತಿಕ್ ಈ ಮದುವೆಯನ್ನು ಮುರಿದಿದ್ದು, ಇದರಿಂದ ಮನನೊಂದ ಯುವತಿ ನೇಣಿಗೆ ಶರಣಾಗಿದ್ದಾರೆ.

    ಆತ್ಮಹತ್ಯೆಗೂ ಮುನ್ನ ನಾಗಲಕ್ಷ್ಮೀ 5 ಪುಟಗಳ ಡೆತ್ ನೋಟ್ ಟೈಪ್ ಮಾಡಿ ತಂದೆಗೆ ಮೇಲ್ ಮಾಡಿದ್ದು, ಸದ್ಯ ಪೊಲೀಸರು ನಾಗಲಕ್ಷ್ಮಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಪರಿಶೀಲನೆ ನಡೆಸುತ್ತಿದ್ದಾರೆ.

    ಘಟನೆ ಸಂಬಂಧ ಯುವಕ ಕಾರ್ತಿಕ್ ನ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.