Tag: manvitha harish

  • ಕೃಷ್ಣ ಅಜೇಯ್ ರಾವ್ ನಟನೆಯ ‘ರೈನ್‍ಬೋ’ ಗೆ ಮುಹೂರ್ತ

    ಕೃಷ್ಣ ಅಜೇಯ್ ರಾವ್ ನಟನೆಯ ‘ರೈನ್‍ಬೋ’ ಗೆ ಮುಹೂರ್ತ

    ಲವರ್ ಬಾಯ್, ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದ ಕೃಷ್ಣ ಅಜೇಯ್ ರಾವ್ ಮೊದಲ ಬಾರಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ‘ರೈನ್‍ಬೋ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆಯ ಕೆಳಗೆ ಕಲರ್ಸ್ ಆಫ್ ಕ್ರೈಂ ಎನ್ನುವ ಅಡಿಬರಹವನ್ನು ನೀಡಲಾಗಿದೆ. ಸೈಬರ್‌ಗೆಸಂಬಂಧಿಸಿದಂತೆ ಸಾಕಷ್ಟು ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಆದರೆ ರೈನ್‍ಬೋ ಸಿನಿಮಾದಲ್ಲಿ ಈವರೆಗೆ ಯಾರೂ ಗಮನಿಸದ, ಅನಾಹುತಕಾರಿ ಅಪರಾಧದ ಸುತ್ತ ಕಥೆ ರಚಿಸಲಾಗಿದೆ.


    ಯಾವುದೇ ಒಂದು ಮೆಸೇಜ್ ಕಳುಹಿಸಿದರೆ, ಅದು ಮೊದಲು ಸ್ಯಾಟಲೈಟ್ ಸ್ಟೋರ್‌ಗೆ ತಲುಪುತ್ತದೆ. ನಂತರ ಸಂಬಂಧಪಟ್ಟವರಿಗೆ ಅದು ರವಾನೆಯಾಗುತ್ತದೆ. ಸ್ವೀಕೃತಿ ಮಾಡುವವನು ಹ್ಯಾಕ್ ಮಾಡಿ ಅದನ್ನು ದುರುಪಯೋಗ ಮಾಡಿಕೊಂಡರೆ ಅದರ ಪರಿಣಾಮವನ್ನು ಗ್ರಾಹಕ ಎದುರಿಸಬೇಕಾಗುತ್ತದೆ. ಇಂತಹುದನ್ನು ನಾಯಕ ನಟ ಹೇಗೆ ತನಿಖೆ ಮಾಡುತ್ತಾನೆ ಎಂಬುದು ಈ ಸಿನಿಮಾದ ಒಂದು ಎಳೆಯ ಸಾರಾಂಶವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.


    ಇಲಾಖೆಯಲ್ಲಿ ನೇಮಕಗೊಂಡು, ಪರೀಕ್ಷಾ ಅವಧಿಯಲ್ಲಿ ಉನ್ನತ ಅಧಿಕಾರಿಗಳ ಅನುಮತಿಯನ್ನು ಹೇಗೆ ಪಡೆಯುತ್ತಾನೆ, ಯಾವ ರೀತಿಯಲ್ಲಿ ಅಪರಾಧಿಗಳನ್ನು ಹಿಡಿಯುತ್ತಾನೆ ಎನ್ನುವ ಪಾತ್ರದಲ್ಲಿ ಕೃಷ್ಣ ಅಜೇಯ್ ರಾವ್ ನಟಿಸಲಿದ್ದಾರೆ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಾ, ಅನಾಥಳಾಗಿ ಪಿಜಿಯಲ್ಲಿ ಇದ್ದುಕೊಂಡು ತನಿಖೆಯಲ್ಲಿ ಸಹಕಾರ ನೀಡುವ ಮಾನ್ವಿತಾ ಹರೀಶ್ ನಾಯಕಿ. ಮುಖ್ಯ ಖಳನಾಯಕ ಮತ್ತು ತಾರಾಗಣ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೇ ಮುಗಿಯಲಿದೆ. ಹೊಸತನ ಎನ್ನುವಂತೆ ಪ್ರತಿ ಪಾತ್ರ ಬಂದಾಗ ಅದಕ್ಕೊಂದು ಅರ್ಥಪೂರ್ಣ ಹಿನ್ನೆಲೆ ಸಂಗೀತವನ್ನು ಒದಗಿಸುತ್ತಿರುವುದು ಸಂಗೀತ ನಿರ್ದೇಶಕ ಎಮಿಲ್. ಚಿತ್ರಕತೆ ಜಡೇಶ್ ಕುಮಾರ್-ಜಾಯ್ ಜಾರ್ಸ್-ಎಸ್.ರಾಜವರ್ಧನ್, ಛಾಯಾಗ್ರಹಣ ಆರೂರು ಸುಧಾಕರಶೆಟ್ಟಿ, ಕಾರ್ಯಕಾರಿ ನಿರ್ಮಾಪಕ ವೈಭವ್ ನಾಗರಾಜ್.


    ಸೋಷಿಯಲ್ ಮೀಡಿಯಾವನ್ನು ಸನ್ಮಾರ್ಗದಲ್ಲಿ ಉಪಯೋಗಿಸಿದರೆ ಯಾವ ಕೆಡುಕೂ ಆಗುವುದಿಲ್ಲ. ಅದನ್ನು ಅನ್ಯ ಮಾರ್ಗಗಳಿಗಾಗಿ ಬಳಸಿದರೆ ಯಡವಟ್ಟು ಕಟ್ಟಿಟ್ಟ ಬುತ್ತಿ ಅನ್ನೋದನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ. ಕ್ರಿಯೇಟಿವ್ ಹೆಡ್ ಮತ್ತು ನಿರ್ಮಾಣ ಮಾಡುತ್ತಿರುವ ಗುರುದೇಶಪಾಂಡೆ ಅವರು ಶಿಷ್ಯ ಎಸ್.ರಾಜವರ್ಧನ್ ಅವರಿಗೆ ನಿರ್ದೇಶನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ವರಮಹಾಲಕ್ಷೀ ಹಬ್ಬದಂದು ನಡೆದ ಮಹೂರ್ತ ಸಮಾರಂಭಕ್ಕೆ ನಿರ್ಮಾಪಕರಾದ ರಮೇಶ್‍ರೆಡ್ಡಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಸಮೃದ್ಧಿ ಮಂಜುನಾಥ್ ಕ್ಯಾಮೆರಾ ಆನ್ ಮಾಡಿ ತಂಡಕ್ಕೆ ಶುಭಹಾರೈಸಿದರು. ರೈನ್‍ಬೋ ಚಿತ್ರತಂಡ ಮುಂದಿನ ತಿಂಗಳಿನಿಂದ ಚಿತ್ರೀಕರಣ ನಡೆಸಲಿದೆ.

  • ಲಂಡನ್ ನಲ್ಲಿ ನಟಿ ಮಾನ್ವಿತಾ ಹರೀಶ್, ವಸಿಷ್ಠ ಸಿಂಹ ಅರೆಸ್ಟ್

    ಲಂಡನ್ ನಲ್ಲಿ ನಟಿ ಮಾನ್ವಿತಾ ಹರೀಶ್, ವಸಿಷ್ಠ ಸಿಂಹ ಅರೆಸ್ಟ್

    ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಹರೀಶ್ ಮತ್ತು ನಟ ವಸಿಷ್ಠ ಸಿಂಹ ಅವರನ್ನು ಲಂಡನ್ ಪೊಲೀಸರು ಬಂಧಿಸಿದ್ದು, ಬಳಿಕ ಬಿಡುಗಡೆ ಮಾಡಿದ್ದಾರೆ.

    ಲಂಡನ್ ನಲ್ಲಿ ಬಂಕಿಂಗ್ ಹ್ಯಾಮ್ ಪ್ಯಾಲೇಸ್ ಮುಂದೆ ಹಾಡಿ ಕುಣಿದಿದ್ದಕ್ಕೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಸಿನಿಮಾ ಶೂಟಿಂಗ್ ಎಂದು ಹೇಳಿದ್ದಕ್ಕೆ ಇಬ್ಬರನ್ನು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿಕೊಂಡಿದ್ದಾರೆ. ಜೊತೆಗೆ ಮಾನ್ವಿತಾ ಹರೀಶ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

    ಲಂಡನ್ ಪೊಲೀಸರು ಮಾನ್ವಿತಾ ಮತ್ತು ವಸಿಷ್ಠ ಸಿಂಹ ಅವರನ್ನು ಬಂಧಿಸಿದ್ದಾರೆ. ಅವರು ಬಂಕಿಂಗ್ ಹ್ಯಾಮ್ ಪ್ಯಾಲೇಸ್ ಮುಂದೆ ಹಾಡು, ನೃತ್ಯ ಜೊತೆಗೆ ಪ್ರೀತಿ ಮಾಡುತ್ತಿದ್ದರು. ಅದಕ್ಕಾಗಿ ಪೊಲೀಸರು ಬಂಧಿಸಿದ್ದರು. ಬಳಿಕ ಮಾನ್ವಿತಾ ಅವರ ಸುಂದರ ಸ್ಮೈಲ್ ಜೊತೆಗೆ ಇದು ಸಿನಿಮಾ ಶೂಟಿಂಗ್ ಎಂದು ಹೇಳಿದ್ದಾರೆ. ಬಳಿಕ ಅವರನ್ನು ಬಿಡುಗಡೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ನಾಗತಿಹಳ್ಳಿ ನಿರ್ದೇಶನದ ಹೊಸ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾ ಚಿತ್ರೀಕರಣಕ್ಕಾಗಿ ಚಿತ್ರತಂಡ ವಿದೇಶಕ್ಕೆ ತೆರಳಿದೆ. ಚಿತ್ರದ ಬಹುತೇಕ ಶೂಟಿಂಗ್ ಲಂಡನ್ ನಲ್ಲಿ ಮಾಡಲಾಗಿದ್ದು, 40 ದಿನಗಳ ಕಾಲ ಲಂಡನ್ ನಲ್ಲಿ ಚಿತ್ರತಂಡ ಉಳಿದುಕೊಂಡಿದೆ. ಲಂಡನ್ ನ ಪ್ರಮುಖ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಇತ್ತೀಚೆಗೆ ಲಂಡನ್ ಬ್ರಿಡ್ಜ್ ಮೇಲೆ ಮಾನ್ವಿತಾ ಮಾಡಿದ ಡ್ಯಾನ್ಸ್ ವಿಡಿಯೋವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು “ಮುಂಜಾನೆ ಮಾನ್ವಿತಾ ಮಂಗಾಟ” ಎಂದು ಬರೆದು ಟ್ವೀಟ್ ಮಾಡಿದ್ದರು.

    ಚಂದ್ರಶೇಖರ್ ಅವರು ಬರೆದಿರುವ ಮಗಳು ಕನಸು ಕತೆಯನ್ನೇ ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಚಿತ್ರದ ಟೈಟಲ್ ಇನ್ನು ಖಚಿತವಾಗಿಲ್ಲ. ಈ ಸಿನಿಮಾದಲ್ಲಿ ಮಾನ್ವಿತಾ ಬೋಲ್ದ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ವಸಿಷ್ಠ ಸಿಂಹ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಕನಸಿನ ಹುಡುಗನ ಬಗ್ಗೆ ಕೆಂಡಸಂಪಿಗೆ ಬೆಡಗಿಯ ಮನದಾಳದ ಮಾತು

    ಕನಸಿನ ಹುಡುಗನ ಬಗ್ಗೆ ಕೆಂಡಸಂಪಿಗೆ ಬೆಡಗಿಯ ಮನದಾಳದ ಮಾತು

    ಬೆಂಗಳೂರು: ಪ್ರತಿಯೊಬ್ಬ ನಟಿ-ನಟರಿಗೆ ತಮ್ಮ ಹುಡುಗ ಮತ್ತು ಹುಡಗಿಯ ಬಗ್ಗೆ ಕನಸಿರುತ್ತದೆ. ಅದೇ ರೀತಿ ಕೆಂಡಸಂಪಿಗೆಯ ಬೆಡಗಿ ತಮ್ಮ ಹುಡುಗ ಹೇಗಿರಬೇಕು ಎಂಬುದುರ ಬಗ್ಗೆ ಮಾತನಾಡಿದ್ದಾರೆ.

    ನಟಿ ಮಾನ್ವಿತಾ ಹರೀಶ್ `ಕೆಂಡಸಂಪಿಗೆ’ ಸಿನಿಮಾ ಮೂಲಕವೇ ಸ್ಯಾಂಡಲ್‍ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಆ ಸಿನಿಮಾದ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದು, ಈಗ ಅನೇಕ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಮಾನ್ವಿತಾ ಇಲ್ಲಿಯವರೆಗೂ ತಮ್ಮ ಮದುವೆ ಅಥವಾ ಮದುವೆಯಾಗುವ ಹುಡುಗನ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ.

    `ಟಗರು’ ಯಶಸ್ಸಿನ ಸಂತಸದಲ್ಲಿರುವ ಮಾನ್ವಿತಾ ತನ್ನ ಕನಸಿನ ಹುಡುಗನ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಹುಡುಗಿಯರು ಬಯಸುವಾಗೆ ಮಾನ್ವಿತಾ ಅವರಿಗೂ ಒಳ್ಳೆಯ ಗುಣ ಮತ್ತು ಮನಸ್ಸು ಇರುವ ಹುಡುಗ ಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೇ ಘನತೆ, ಗೌರವವುಳ್ಳ ಹುಡುಗ ಆದರೆ ಇನ್ನು ಒಳ್ಳೆದು ಎಂದು ಟಗರು ಬೆಡಗಿ ಹೇಳಿದ್ದಾರೆ.

    ಮಾನ್ವಿತಾ ಹೆಚ್ಚು ಪುಸ್ತಕಗಳನ್ನು ಓದುತ್ತಾರೆ. ಆದ್ದರಿಂದ ಅವರು ಹೆಚ್ಚು ಪುಸ್ತಕಗಳನ್ನು ಓದುವ ಹುಡುಗರನ್ನು ಇಷ್ಟ ಪಡುತ್ತಾರೆ. ಜೊತೆಗೆ ಹೆಚ್ಚು ಹೆಚ್ಚು ವಿಚಾರಗಳ ಬಗ್ಗೆ ತಿಳಿದುಕೊಂಡಿರುಬೇಕು ಎಂದಿದ್ದಾರೆ. ಇನ್ನು ಹಾಡು ಬರೆಯುವುದಕ್ಕೂ ಬಂದರೂ ಉತ್ತಮ ಹಾಗು ಸಿನಿರಂಗದ ಬಗ್ಗೆ ತಿಳಿದುಕೊಂಡಿದ್ದರೆ ಅವರ ಜೊತೆಗೆ ನಾನು ನಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬುಹುದು ಎಂದಿದ್ದಾರೆ.

  • ದರ್ಶನ್ ಎದುರಲ್ಲೇ ಸಿಕ್ಕಿದ್ದರೂ ಮಾತನಾಡಿಸದೆ ಹೊರಟ ಈ ಸ್ಯಾಂಡಲ್‍ವುಡ್ ನಟಿ!

    ದರ್ಶನ್ ಎದುರಲ್ಲೇ ಸಿಕ್ಕಿದ್ದರೂ ಮಾತನಾಡಿಸದೆ ಹೊರಟ ಈ ಸ್ಯಾಂಡಲ್‍ವುಡ್ ನಟಿ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಎದುರಲ್ಲೇ ಸಿಕ್ಕಿದ್ದರೂ ನಟಿಯೊಬ್ಬರು ಮಾತನಾಡಿಸದೆ ಹೊರಟುಹೋಗಿದ್ದಾರೆ. ಆಕೆ ಬೇರೆ ಯಾರೂ ಅಲ್ಲ ಸ್ಯಾಂಡಲ್‍ವುಡ್ ಕೆಂಡಸಂಪಿಗೆ ಮಾನ್ವಿತಾ ಹರೀಶ್.

    ಮಾನ್ವಿತಾ ಈಗ ನಟಿಯಾಗಿದ್ದು, ಚೌಕ ಚಿತ್ರದಲ್ಲಿ ಅಭಿನಯಿಸಿದ್ದರು ದರ್ಶನ್ ಜೊತೆ ತೆರೆಹಂಚಿಕೊಂಡಿರಲಿಲ್ಲ. ಆದರೆ ಮೈಸೂರಿನಲ್ಲೊಮ್ಮೆ ದರ್ಶನ್‍ರನ್ನು ಮಾನ್ವಿತಾ ನೋಡಿಯೂ ನೋಡದೆ, ಮಾತನಾಡಿಸದೆ ಹೋಗಿದ್ದಾರೆ.

    ಮಾನ್ವಿತಾಗೆ ಅಚಾನಕ್ ಆಗಿ ದರ್ಶನ್‍ರನ್ನು ಖಾಸಗಿಯಾಗಿ ಮೀಟ್ ಮಾಡುವ ಅವಕಾಶ ಸಿಕ್ಕಿತ್ತು. ಆದರೂ ಮಾನ್ವಿತಾ ದರ್ಶನ್‍ರನ್ನ ಗುರುತಿಸೋದರಲ್ಲಿ ವಿಫಲರಾಗಿದ್ದಾರೆ.

    ಕಳೆದ ಬಾರಿಯ ದಸರಾ ಹಬ್ಬದ ಯುವ ದಸರಾಕ್ಕಾಗಿ ತಾರೆಗಳೆಲ್ಲಾ ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಿದ್ದರು. ದರ್ಶನ್ ಅದೇ ಹೊಟೇಲ್‍ನಲ್ಲಿ ತಂಗಿರೋದು ಮಾನ್ವಿತಾಗೆ ಗೊತ್ತಿರಲಿಲ್ಲ. ಕಾರ್ಯಕ್ರಮಕ್ಕೆ ಹೋಗುವಾಗ ಹೊಟೇಲ್ ಹೊರಗಡೆಯ ಮೆಟ್ಟಿಲಿನಲ್ಲಿ ದರ್ಶನ್ ತಮ್ಮ ಒಂದಿಷ್ಟು ಸ್ನೇಹಿತರ ಜೊತೆ ಕುಳಿತಿದ್ದರು. ಆಗ ಮಾನ್ವಿತಾ ಯಾರೋ ಕುಳಿತಿರಬಹುದು ಎಂದು ಅಲ್ಲಿ ಗಮನಿಸದೆ ಕಾರ್ ಹತ್ತಿದ್ದಾರೆ.

    ನಂತರ ಅಲ್ಲಿಯೇ ಒಬ್ಬರು ಮಾನ್ವಿತಾಗೆ ದರ್ಶನ್ ಇರುವ ವಿಚಾರ ಹೇಳಿದ್ದರು. ಆ ಕೂಡಲೇ ಮಾನ್ವಿತಾ ತಬ್ಬಿಬ್ಬಾಗಿ ಸುತ್ತಲೂ ನೋಡಿದ್ದು, ಕೊನೆಗೆ ಮಾನ್ವಿತಾ, ದರ್ಶನ್‍ರನ್ನು ಹುಡುಕೋದರಲ್ಲಿ ವಿಫಲರಾದಾಗ ಮತ್ತೊಬ್ಬರು ಬಂದು ದರ್ಶನ್ ಮೆಟ್ಟಿಲ ಮೇಲೆ ಕುಳಿತಿದ್ದಾರೆ ಎಂದು ಹೇಳಿದ್ದರು.

    ಒಬ್ಬ ಬಿಗ್ ಸ್ಟಾರ್ ನೆಲದ ಮೇಲೆ ಸರಳತೆಯಿಂದ ಕುಳಿತಿದ್ದನ್ನು ನೋಡಿ ಮಾನ್ವಿತಾಗೆ ಆಶ್ಚರ್ಯವಾಗಿತ್ತು. ದರ್ಶನ್ ಬಳಿ ಬಂದು ಒಬ್ಬ ಬಿಗ್ ಸ್ಟಾರ್ ಮೆಟ್ಟಿಲ ಮೇಲೆ ಹೀಗೆ ಕುಳಿತುಕೊಂಡರೆ, ಯಾರ್ ಗುರುತು ಹಿಡೀತಾರೆ. ಯಾಕೆ ಹೀಗೆ ಕುಳಿತ್ತಿದೀರಿ ಎಂದು ಕೇಳಿದ್ದಾರೆ. ಅದಕ್ಕೆ ದರ್ಶನ್, ನಾನು ಹೀಗೇ ಇರೋದು ಎಂದು ಹೇಳಿದ್ದಾರೆ. ನಂತರ ಮಾನ್ವಿತಾ ಮಾತನಾಡಿಸದೇ ಹೋಗಿದ್ದಕ್ಕೆ ಕ್ಷಮೆ ಕೇಳಿ ಅಲ್ಲಿಂದ ಹೊರಟರು. ಈ ವಿಚಾರವನ್ನ ಮಾನ್ವಿತಾ ಇತ್ತೀಚೆಗಷ್ಟೇ ಫೇಸ್‍ಬುಕ್ ಲೈವ್‍ನಲ್ಲಿ ಹಂಚಿಕೊಂಡಿದ್ದಾರೆ.

    https://www.youtube.com/watch?v=1au1H9SA_2I

  • ಒಂದೇ ಗಂಟೆಯಲ್ಲಿ ಹರಾಜಾದ ಸ್ಯಾಂಡಲ್‍ವುಡ್ ನಟಿಯರ ಬಟ್ಟೆ

    ಒಂದೇ ಗಂಟೆಯಲ್ಲಿ ಹರಾಜಾದ ಸ್ಯಾಂಡಲ್‍ವುಡ್ ನಟಿಯರ ಬಟ್ಟೆ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಫಸ್ಟ್ ಟೈಂ ನಾಯಕಿಯರೆಲ್ಲ ಒಟ್ಟಿಗೆ ಸೇರಿ ತಮ್ಮ ಬಟ್ಟೆಗಳನ್ನ ಹರಾಜು ಮಾಡುವ ಕಾರ್ಯಕ್ರಮ ಆಯೋಜಿಸಿ ಅದರಿಂದ ಬಂದ ಹಣವನ್ನು ಉತ್ತಮ ಕಾರ್ಯಕ್ಕಾಗಿ ವಿನಿಯೋಗಿಸುವ ಕಾರ್ಯಕ್ರಮಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.

    `ದಿ ವ್ಯಾನಿಟಿ ಟ್ರಂಕ್ ಸೇಲ್’ ಹೆಸರಿನಲ್ಲಿ ಸ್ಯಾಂಡಲ್‍ವುಡ್ ನಾಯಕಿಯರ ಬೆಲೆ ಬಾಳುವ ಉಡುಗೆಗಳು ಹರಾಜು ಮಾಡಲಾಯಿತು. ಇಂದು ಬೆಳಗ್ಗೆ 12 ಗಂಟೆಯಿಂದ ಸಂಜೆ 5 ಗಂಟೆ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಬಿ ಹೈವ್ ನಲ್ಲಿ ಹರಾಜು ಪ್ರಕ್ರಿಯೆ ನಡೆಸುವ ಯೋಜನೆ ರೂಪಿಸಲಾಗಿತ್ತು. ಆದರೆ ಹರಾಜು ಪ್ರಕ್ರಿಯೆ ಆರಂಭವಾಗುತ್ತಿದಂತೆ ಕೇವಲ ಒಂದು ಗಂಟೆಯಲ್ಲಿ ಎಲ್ಲ ಬಟ್ಟೆಗಳು ಮಾರಾಟವಾಗಿದೆ. ಕೇವಲ ಒಂದು ಗಂಟೆಯಲ್ಲಿ ಸುಮಾರು 80 ಸಾವಿರ ಹಣ ಕಲೆಕ್ಷನ್ ಆಗಿದೆ.

    ಶೃತಿ ಹರಿಹರನ್ ಐಡಿಯಾ: ನಟಿ ಶೃತಿ ಹರಿಹರನ್ ಅವರು ಒಮ್ಮೆ ವಾರ್ಡ್ ರೋಬ್ ತೆರೆದು ಬಟ್ಟೆಗಳ ರಾಶಿ ನೋಡಿದಾಗ ಈ ಡ್ರೆಸ್ ಗಳನ್ನು ಏನು ಮಾಡುವುದು ಎಂದು ಆಲೋಚಿಸಿದಾಗ ಇವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬಹುದಲ್ಲ ಎನ್ನುವ ಯೋಚನೆ ಹೊಳೆಯಿತಂತೆ. ಈ ಯೋಚನೆಯನ್ನು ಇತರೆ ನಟಿಯರ ಜೊತೆ ಹಂಚಿಕೊಂಡಾಗ ಅವರು ಸಾಥ್ ನೀಡಿದ್ದು, ಈಗ ಯೋಚನೆ ಕಾರ್ಯರೂಪಕ್ಕೆ ಬಂದಿದೆ.

    ಎನ್‍ಜಿಒಗೆ ಹಣ: ಶೃತಿ ಹರಿಹರನ್ ಯೋಚನೆಯಿಂದಾಗಿ “ದಿ ವ್ಯಾನಿಟಿ ಟ್ರಂಕ್ ಸೇಲ್’ನ ರೂಪ ಪಡೆದಿದ್ದು, ನಟಿಯರು ತಮ್ಮಲ್ಲಿರುವ ಬಟ್ಟೆ ಹಾಗೂ ಕೆಲವು ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಎಲ್ಲ ವಸ್ತುಗಳಿಗೂ ಕಡಿಮೆ ಬೆಲೆಯನ್ನೇ ನಿಗದಿಸಿದ್ದು, ಮಾರಾಟದಿಂದ ಬರುವ ಹಣ ಸರ್ಕಾರೇತರ ಸಂಸ್ಥೆಯಾದ ಜೆ.ಪಿ. ಫೌಂಡೇಶನ್ ಮತ್ತು ಆದ್ಯಾ ಫೌಂಡೇಶನ್ ಹೋಗುತ್ತದೆ.

    ಯಾರೆಲ್ಲ ಕೈಜೋಡಿಸಿದ್ದರು?: ಶ್ರದ್ಧಾ ಶ್ರೀನಾಥ್, ಮಾನ್ವಿತಾ ಹರೀಶ್, ಸಂಯುಕ್ತಾ ಹೆಗ್ಡೆ, ಸಂಯುಕ್ತಾ ಹೊರ್ನಾಡ, ಸೋನು ಗೌಡ, ಕಾವ್ಯಾ ಶೆಟ್ಟಿ, ರಾಜಶ್ರೀ ಪೊನ್ನಪ್ಪ, ಹಿತಾ ಚಂದ್ರಶೇಖರ್, ಮೇಘನಾ ರಾಜ್, ಮೇಘನಾ ಗಾಂವ್ಕರ್, ನೀತು ಶೆಟ್ಟಿ, ಸಚಿನಾ ಹೆಗ್ಗಾರ್, ಶಾನ್ವಿ ಶ್ರೀವಾತ್ಸ, ಸಂಗೀತಾ ಭಟ್, ಪ್ರಜ್ಞಾ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ.

  • ಹರಾಜಿಗಿದೆ ಸ್ಯಾಂಡಲ್‍ವುಡ್ ನಟಿಯರ ಬಟ್ಟೆ: ಖರೀದಿ ಹೇಗೆ?

    ಹರಾಜಿಗಿದೆ ಸ್ಯಾಂಡಲ್‍ವುಡ್ ನಟಿಯರ ಬಟ್ಟೆ: ಖರೀದಿ ಹೇಗೆ?

    ಬೆಂಗಳೂರು: ಸ್ಯಾಂಡ್‍ಲ್‍ವುಡ್ ಮಹಿಳಾ ಅಭಿಮಾನಿಗಳಿಗೆ ಗುಡ್ ನ್ಯೂಸ್. ಬಹಳಷ್ಟು ಮಂದಿ ನಟಿಯರಿಗೆ ಅವರದ್ದೇ ಆದ ಮಹಿಳಾ ಅಭಿಮಾನಿಗಳಿದ್ದಾರೆ. ಈಗ ಈ ಮಹಿಳಾ ಅಭಿಮಾನಿಗಳಿಗಾಗಿ ನಟಿಯರು ತಮ್ಮ ಡ್ರೆಸ್ ಮಾರಾಟ ಮಾಡಲು ಮುಂದಾಗಿದ್ದಾರೆ.

    ಹೌದು, ನಟಿಯರು ಅಂದ್ರೆ ಡ್ರೆಸ್ ಗಳಿಗೆ ಕೊರತೆ ಇರುವುದಿಲ್ಲ. ಮನೆಯ ವಾರ್ಡ್ ರೋಬ್ ಫುಲ್ ಡ್ರೆಸ್ ಗಳಿಂದ ತುಂಬಿರುತ್ತದೆ. ತೊಡುವ ಉಡುಗೆಗಳು ಮತ್ತೆ ರಿಪೀಟ್ ಆಗಬಾರದು ಎನ್ನುವ ಕಾರಣಕ್ಕೆ ಹೊಸ ಉಡುಪುಗಳನ್ನು ಖರೀದಿಸುತ್ತಿರುತ್ತಾರೆ. ಇದರಿಂದಾಗಿ ವಾರ್ಡ್ ರೋಬ್ ಗಳು ಡ್ರೆಸ್ ಗಳಿಂದ ತುಂಬಿ ತುಳುಕುತ್ತಿರುತ್ತದೆ. ಈ ಉಡುಪುಗಳು ಬಳಸದೇ ಇದ್ದರೆ ಹಾಳಾಗುತ್ತದೆ. ಹೀಗಾಗಿ ನಟಿ ಮಣಿಯರು ಎಲ್ಲ ಸೇರಿಕೊಂಡು ಈಗ ತಾವು ಧರಿಸಿದ ಉಡುಪುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

    ಶೃತಿಹರಿಹರನ್ ಐಡಿಯಾ:
    ನಟಿ ಶೃತಿ ಹರಿಹರನ್ ಅವರು ಒಮ್ಮೆ ವಾರ್ಡ್ ರೋಬ್ ತೆರೆದು ಬಟ್ಟೆಗಳ ರಾಶಿ ನೋಡಿದಾಗ ಈ ಡ್ರೆಸ್ ಗಳನ್ನು ಏನು ಮಾಡುವುದು ಎಂದು ಆಲೋಚಿಸಿದಾಗ ಇವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬಹುದಲ್ಲ ಎನ್ನುವ ಯೋಚನೆ ಹೊಳೆಯಿತಂತೆ. ಈ ಯೋಚನೆಯನ್ನು ಇತರೇ ನಟಿಯರ ಜೊತೆ ಹಂಚಿಕೊಂಡಾಗ ಅವರು ಸಾಥ್ ನೀಡಿದ್ದು, ಈಗ ಯೋಚನೆ ಕಾರ್ಯರೂಪಕ್ಕೆ ಬಂದಿದೆ.

    ಎನ್‍ಜಿಒಗೆ ಹಣ:
    ಶೃತಿಹರಿಹರನ್ ಯೋಚನೆಯಿಂದಾಗಿ ‘ದಿ ವ್ಯಾನಿಟಿ ಟ್ರಂಕ್ ಸೇಲ್’ ನ ರೂಪ ಪಡೆದಿದ್ದು, ನಟಿಯರು ತಮ್ಮಲ್ಲಿರುವ ಬಟ್ಟೆ ಹಾಗೂ ಕೆಲವು ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಎಲ್ಲ ವಸ್ತುಗಳಿಗೂ ಕಡಿಮೆ ಬೆಲೆಯನ್ನೇ ನಿಗದಿಪಡಿಸಿದ್ದು, ಮಾರಾಟದಿಂದ ಬರುವ ಹಣ ಸರ್ಕಾರೇತರ ಸಂಸ್ಥೆಯಾದ ಜೆ.ಪಿ. ಫೌಂಡೇಶನ್ ಮತ್ತು ಆದ್ಯಾ ಫೌಂಡೇಶನ್ ಹೋಗುತ್ತದೆ. ಸಂಗ್ರಹವಾದ ಹಣ ಅನಾಥ ಮಕ್ಕಳ ಕಲ್ಯಾಣ ನಿಧಿಗೆ ಬಳಕೆಯಾಗಲಿದೆ.

    ಯಾರೆಲ್ಲ ಕೈಜೋಡಿಸಿದ್ದಾರೆ?
    ಶ್ರದ್ಧಾ ಶ್ರೀನಾಥ್, ಮಾನ್ವಿತಾ ಹರೀಶ್, ಸಂಯುಕ್ತಾ ಹೆಗ್ಡೆ, ಸಂಯುಕ್ತಾ ಹೊರ್ನಾಡು, ಸೋನು ಗೌಡ, ಕಾವ್ಯಾ ಶೆಟ್ಟಿ, ರಾಜಶ್ರೀ ಪೊನ್ನಪ್ಪ, ಹಿತಾ ಚಂದ್ರಶೇಖರ್, ಮೇಘನಾ ರಾಜ್, ಮೇಘನಾ ಗಾಂವ್ಕರ್, ನೀತು ಶೆಟ್ಟಿ, ಸಚಿನಾ ಹೆಗ್ಗಾರ್, ಶಾನ್ವಿ ಶ್ರೀವತ್ಸ,ಸಂಗೀತಾ ಭಟ್, ಪ್ರಜ್ಞಾ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ.

    ನೀವು ಏನು ಮಾಡಬೇಕು?
    ಈ ಸೇಲ್ ನಲ್ಲಿ ನಿಮಗೆ ಬಟ್ಟೆ/ ವಸ್ತುಗಳು ಬೇಕು ಎಂದಿದ್ದರೆ ಮೊದಲು ನೀವು https://insider.in/the-vanity-trunk-sale-nov12-2017/event ಹೆಸರು ನೊಂದಾಯಿಸಿಕೊಳ್ಳಬೇಕು. ನವೆಂಬರ್ 12ರ ಭಾನುವಾರ ಬೆಳಗ್ಗೆ 11ರಿಂದ ಸಂಜೆ 5ರವರೆಗೆ, ರೆಸಿಡೆನ್ಸಿ ರೋಡ್‍ನಲ್ಲಿರುವ ಬಿ ಹೈವ್ ವರ್ಕ್‍ಶಾಪ್‍ನಲ್ಲಿ ಈ ಸೇಲ್ ನಡೆಯುತ್ತದೆ.

     

  • ಪಾರ್ವತಮ್ಮ ರಾಜ್ ಕುಮಾರ್ ನಿಧನಕ್ಕೆ ಚಿತ್ರರಂಗದ ಕಂಬನಿ

    ಪಾರ್ವತಮ್ಮ ರಾಜ್ ಕುಮಾರ್ ನಿಧನಕ್ಕೆ ಚಿತ್ರರಂಗದ ಕಂಬನಿ

    ಬೆಂಗಳೂರು: ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನಕ್ಕೆ ಚಿತ್ರರಂಗದವರು ಕಂಬನಿ ಮಿಡಿದಿದ್ದಾರೆ. ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ಬಹು ಅಂಗಾಂಗ ವೈಫಲ್ಯದಿಂದ ಪಾರ್ವತಮ್ಮ ಅವರು ನಿಧನರಾದರು.

    ಚಿತ್ರರಂಗಕ್ಕೆ ಅಮ್ಮನವರ ಕೊಡುಗೆ ಅಪಾರ. ಜೀವನವೆಂಬ ಸಂಸಾರವನ್ನು ಅಷ್ಟೇ ಚೆನ್ನಾಗಿ ಸಾಗಿಸಿದ್ದಾರೆ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಎಲ್ಲರನ್ನು ಕೂಡ ಅವರು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ರು.. ವಿಷೇಷವಾಗಿ ನನ್ನ ಬಗ್ಗೆ ಪ್ರೀತಿಯಿತ್ತು. ಅಶ್ವಮೇಧ ಹಾಡನ್ನ ಹಾಡಲು ಕೇಳಿದಾಗ ಏನೂ ಮಾತನಾಡದೆ ಒಪ್ಪಿದ್ರು. ನನ್ನ ಮಗ ಶಿವರಾಜ್ ಕುಮಾರ್ ಬೇರೆಯಲ್ಲ ನೀನು ಬೇರೆಯಲ್ಲವೆಂದೂ ಹೇಳಿದ್ರು.

    ನಟಿ, ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು, ಕನ್ನಡ ಚಿತ್ರರಂಗದ ಕಲಾವಿದರಿಗೆ ಬಹುದೊಡ್ಡ ಆಸರೆಯಾಗಿದ್ದ ಮಹಾನ್ ಶಕ್ತಿ ಇನ್ನಿಲ್ಲ. ಪಾರ್ವತಮ್ಮ ರಾಜ್ ಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.

    ನಟ, ನಿರ್ದೇಶಕ ರಮೇಶ್ ಅರವಿಂದ್ ಟ್ವೀಟ್ ಮಾಡಿ ತಮ್ಮ ಕಂಬನಿ ಮಿಡಿದಿದ್ದಾರೆ. ನಿರ್ಮಾಪಕಿಯಾಗಿ, ಡಾ.ರಾಜ್ ಹೆಂಡತಿಯಾಗಿ, ನನ್ನ ಗೆಳೆಯರ ತಾಯಿಯಾಗಿ ಪಾರ್ವತಮ್ಮನವರನ್ನು ಮೆಚ್ಚುತಾ… ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

    ಪಾರ್ವತಮ್ಮ ರಾಜ್ ಕುಮಾರ್ ಅವರು ವಿಧಿವಶರಾಗಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ, ನಾಡಿಗೆ ಭಗವಂತ ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

    ಕನ್ನಡ ಚಿತ್ರರಂಗದ ಕಲಾವಿದರಿಗೆ ಸ್ಪೂರ್ತಿಯಾಗಿ, ಅನ್ನದಾತೆಯಾಗಿ, ಆಸರೆಯಾಗಿದ್ದ ಆಲದಮರ ಇನ್ನಿಲ್ಲ. ಅಮ್ಮ ನಿಮ್ಮ ತರಹ ಇನ್ಯಾರು ಇಲ್ಲಾ.. ನಿಮಗೆ ನೀವೇ ಸಾಟಿ.. ಅಮ್ಮ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟಿ ಮಾನ್ವಿತಾ ಹರೀಶ್ ಟ್ವೀಟ್ ಮಾಡಿದ್ದಾರೆ.

    https://twitter.com/ManvithaHarish/status/869760090513035264