Tag: Manufacture

  • ಶೇ. 90ರಷ್ಟು ರಕ್ಷಣಾ ಉತ್ಪನ್ನಗಳನ್ನು ಭಾರತದಲ್ಲೇ ತಯಾರಿಸಲಿದೆ: ರಾಜನಾಥ್ ಸಿಂಗ್

    ಶೇ. 90ರಷ್ಟು ರಕ್ಷಣಾ ಉತ್ಪನ್ನಗಳನ್ನು ಭಾರತದಲ್ಲೇ ತಯಾರಿಸಲಿದೆ: ರಾಜನಾಥ್ ಸಿಂಗ್

    ನವದೆಹಲಿ: ರಕ್ಷಣಾ ಉತ್ಪನ್ನಗಳ ಶೇಕಡಾ 90ರಷ್ಟನ್ನು ದೇಶವೇ ಉತ್ಪಾದನೆ ಮಾಡಲಿದ್ದು, 2024-25ರ ಹೊತ್ತಿಗೆ 5 ಬಿಲಿಯನ್ ಅಮೆರಿಕ ಡಾಲರ್(37,15,54,250.00)ರೂ. ಮೊತ್ತದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವಷ್ಟು ಸಮರ್ಥವಾಗಿ ಬೆಳೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

    ಈ ಹಿಂದೆ ಶೇಕಡಾ 65ರಿಂದ ಶೇಕಡಾ 70ರಷ್ಟು ರಕ್ಷಣಾ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ನಾವು ಆತ್ಮನಿರ್ಭರತೆಯತ್ತ ಸಾಗುತ್ತಿರುವಾಗ, ಶೇಕಡಾ 65ರಷ್ಟು ರಕ್ಷಣಾ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಹಿಂದೆ ನಾವು ವಿದೇಶಗಳಿಂದ ಆಮದು ಮೇಲೆ ಹೆಚ್ಚು ಅವಲಂಬಿತವಾಗುತ್ತಿದ್ದೆವು. ಇಂದು ನಾವು 70 ದೇಶಗಳಿಗೆ ರಫ್ತು ಮಾಡುವಷ್ಟು ಬೆಳೆದಿದ್ದೇವೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ಕಾರವಾರ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೇಬರ ಪತ್ತೆ

    ರಾಷ್ಟ್ರ ರಕ್ಷಾ ಸಮರ್ಪಣ್ ಪರ್ವ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 2024-25ರ ಹೊತ್ತಿಗೆ 5 ಬಿಲಿಯನ್ ಡಾಲರ್ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವ ಗುರಿಯನ್ನು ನಾವು ತಲುಪಲಿದ್ದೇವೆ. ಪ್ರಧಾನಿ ಮೋದಿಯವರು ಇದೇ ಆಶಯವನ್ನು ಹೊಂದಿದ್ದಾರೆ. ಈ ಸಂದರ್ಭದಲ್ಲಿ ನಾನು ಪ್ರಧಾನಿಯವರಿಗೆ ಭರವಸೆ ನೀಡುತ್ತಿದ್ದೇನೆ, ಇನ್ನು ನಾಲ್ಕೈದು ವರ್ಷಗಳಲ್ಲಿ ಶೇಕಡಾ 90ರಷ್ಟು ರಕ್ಷಣಾ ಉತ್ಪನ್ನಗಳನ್ನು ನಮ್ಮ ಭಾರತದಲ್ಲಿಯೇ ಉತ್ಪಾದಿಸುವಷ್ಟು ನಾವು ಸಮರ್ಥರಾಗುತ್ತೇವೆ ಎಂದರು.

    ಇದಕ್ಕೂ ಮುನ್ನ ರಾಣಿ ಲಕ್ಷ್ಮೀಬಾಯಿ ಅವರಿಗೆ ಗೌರವ ನಮನ ಸಲ್ಲಿಸಿದ ರಾಜನಾಥ್ ಸಿಂಗ್, ಒಂದು ಕಾಲದಲ್ಲಿ ಅತಿ ಹೆಚ್ಚು ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ದೇಶಗಳಲ್ಲಿ ಭಾರತ ಕೂಡ ಒಂದಾಗಿತ್ತು. ಆದರೆ ಇಂದು ಪ್ರಧಾನಿ ಮೋದಿಯವರು ಪ್ರಯತ್ನದಿಂದಾಗಿ ಪರಿಸ್ಥಿತಿ ಬದಲಾಗಿದೆ.ಪ್ರಧಾನಿಯವರು ಮಹಿಳಾ ಸಶಕ್ತೀಕರಣಕ್ಕೆ ಒತ್ತು ನೀಡುತ್ತಿರುವುದರಿಂದ ಮಹಿಳೆಯರು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ನೇಮಕಗೊಳ್ಳುತ್ತಿದ್ದಾರೆ. ರಾಣಿ ಲಕ್ಷ್ಮೀಬಾಯಿಯವರ ಸ್ಪೂರ್ತಿಯಿಂದ ಸೇನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಇಂದು ಮುಂದೆ ಬರುತ್ತಿದ್ದಾರೆ ಎಂದು ಸಹ ರಕ್ಷಣಾ ಸಚಿವರು ಶ್ಲಾಘಿಸಿದರು.

  • ಉಡುಪಿಯಲ್ಲಿ 20 ಕೆಜಿ ಧಾನ್ಯಗಳಲ್ಲಿ ಪ್ರತ್ಯಕ್ಷನಾದ ಗಣಪ!

    ಉಡುಪಿಯಲ್ಲಿ 20 ಕೆಜಿ ಧಾನ್ಯಗಳಲ್ಲಿ ಪ್ರತ್ಯಕ್ಷನಾದ ಗಣಪ!

    ಉಡುಪಿ: ವಿಘ್ನ ನಿವಾರಕನ ಆರಾಧಾನ ದಿನವಾದ ಇಂದು, ಉಡುಪಿಯ ರಾಧಾ ಸಂಸ್ಥೆಯ ಟಿವಿಎಸ್ ಶೋ ರೂಂನಲ್ಲಿ ಧಾನ್ಯಗಳ ರೂಪ ಪಡೆದು ಗಣೇಶ ಪ್ರತ್ಯಕ್ಷನಾಗಿದ್ದಾನೆ. ಸುಮಾರು 12 ಅಡಿ ಎತ್ತರ ಹಾಗೂ 6 ಅಡಿ ಅಗಲದ ಧಾನ್ಯಗಳಿಂದ ಮಾಡಿದ ಗಣಪತಿ ಈಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.

    ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಎಂಬವರು ಈ ಧಾನ್ಯರೂಪದ ಗಣಪನಿಗೆ ರೂಪ ತಂದಿದ್ದಾರೆ. ಇದಕ್ಕಾಗಿ ಸುಮಾರು 20 ಕೆಜಿ ಧಾನ್ಯಗಳನ್ನು ಉಪಯೋಗಿಸಿಕೊಂಡು ನಯನಮನೋಹರವಾಗಿ ಗಣಪನನ್ನು ಸೃಷ್ಟಿಸಿದ್ದಾರೆ.

    ಈ ಧಾನ್ಯ ಗಣಪನ ಕಲಾಕೃತಿ ರಚನೆಯಲ್ಲಿ ಕಡ್ಲೆಬೇಳೆ, ಹುರಿಗಡಲೆ, ಅವರೆ, ಬಟಾಣಿ, ಸಾಸಿವೆ, ಬೀನ್ಸ್ ಹಾಗೂ ಸಾಬಕ್ಕಿಯಿಂದ ಸಿದ್ಧಗೊಂಡಿದೆ. ಕಳೆದ 10 ದಿನಗಳಿಂದ ಶ್ರಮವಹಿಸಿ, ಮೈದಾಹಿಟ್ಟಿನ ಅಂಟು ಬಳಕೆ ಮಾಡಿಕೊಂಡು, ಧಾನ್ಯಗಳನ್ನು ಅಂಟಿಸುತ್ತಾ, ಜೊತೆಗೆ ಪೇಪರ್, ಮರ ಹಾಗೂ ಥರ್ಮಾಕೋಲ್ ಒಳಗೊಂಡತೆ ಈ ಬೃಹತ್ ಕಲಾಕೃತಿಗೆ ಗಣಪನ ರೂಪವನ್ನು ಕೊಟ್ಟಿದ್ದಾರೆ.

    ಒಂದು ವಾರಗಳ ಕಾಲ ಪ್ರದರ್ಶನದ ನಂತರ ಈ ಗಣಪನ ಮೂರ್ತಿಯಲ್ಲಿ ಗಮ್ ಬಳಸದೇ ನೈಸರ್ಗಿಕ ಮೈದಾ ಹಿಟ್ಟನ್ನು ಬಳಸಿರುವುದರಿಂದ ಈ ಧಾನ್ಯಗಳನ್ನು ಪುನಃ ಆಹಾರವಾಗಿ ಉಪಯೋಗಿಸಲಾಗುತ್ತದೆ. ಕಳೆದ ಐದು ವರ್ಷಗಳಿಂದಲೂ ವಿಭಿನ್ನ ಹಾಗೂ ಪರಿಸರ ಸ್ನೇಹಿ ಗಣಪನನ್ನು ಮಾಡಿಕೊಂಡು ಬರುತ್ತಿರುವ ಟಿವಿಎಸ್ ಶೋರೂಮಿನವರು ಜನರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

    ಈ ಕುರಿತು ತಯಾರಕರಾದ ಶ್ರೀನಾಥ್ ಹಾಗೂ ರವಿ ಮಾತನಾಡಿ, ಕಲಾವಿದರಿಗೆ ಗಣೇಶ ಪ್ರಸಿದ್ಧ ದೇವರು. ಗಣಪನ ಮೂರ್ತಿಯನ್ನು ನಮ್ಮ ಆಲೋಚನೆ ಹಾಗೂ ಕನಸಿನಂತೆ ತಯಾರು ಮಾಡಬಹುದು. ನಾವು ಮಾಡುವ ಗಣಪ ಪರಿಸರಕ್ಕೆ ಮಾರಕವಾಗದೆ ಇದ್ದರೇ ಸಾಕು ಅನ್ನುವುದು ನಮ್ಮಯ ಆಶಯ. ಪ್ರತಿ ವರ್ಷ ರಾಧಾ ಸಂಸ್ಥೆಯವರು ಇಂತಹ ಗಣಪನ ಮೂರ್ತಿಗಳನ್ನು ತಯಾರಿಸಲು ಅವಕಾಶ ಕೊಡುತ್ತಿದ್ದು, ಮುಂದಿನ ವರ್ಷ ಮತ್ತೊಂದು ವಿಭಿನ್ನ ಗಣಪನನ್ನು ತಯಾರಿಸುತ್ತೇವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv