Tag: Mantri mall

  • 2 ಕೋಟಿ ಸಾಲ – ಮಂತ್ರಿ ಮಾಲ್‌ ಒಳಗೆ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

    2 ಕೋಟಿ ಸಾಲ – ಮಂತ್ರಿ ಮಾಲ್‌ ಒಳಗೆ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

    – ಈ ಜನ್ಮದಲ್ಲಿ ಸಾಲ ತೀರಿಸಲು ಆಗಲ್ಲ ಅಂತ ಡೆತ್‌ನೋಟ್‌ನಲ್ಲಿ ಉಲ್ಲೇಖ

    ಬೆಂಗಳೂರು: 2 ಕೋಟಿ ಸಾಲ ತೀರಿಸಲಾಗದೇ ವ್ಯಕ್ತಿಯೊಬ್ಬ ನಗರದ ಮಂತ್ರಿ ಮಾಲ್‌ ಒಳಗೆ 2ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಉಲ್ಲಾಳ ಉಪನಗರದ ನಿವಾಸಿ ಮಂಜುನಾಥ್ (55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಲ್ಲೇಶ್ವರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವ್ಯಕ್ತಿ 2 ಕೋಟಿ ಸಾಲ ಮಾಡಿಕೊಂಡಿದ್ದರು. ಇಂದು ರಾತ್ರಿ 9 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮಂಜುನಾಥ್‌ ಎಲೆಕ್ಟ್ರಿಕಲ್ ಅಂಗಡಿ ಇಟ್ಟುಕೊಂಡಿದ್ದರು. ಸಾಲ ತೀರಿಸಲಾಗದೆ ಡೆತ್‌ನೋಟ್ ಬರೆದಿತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ‘2 ಕೋಟಿ ಸಾಲ‌ ಮಾಡಿಕೊಂಡಿದ್ದೇನೆ. ಅದನ್ನ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

    ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ. ನನ್ನ ಜೀವನದಲ್ಲಿ ನೊಂದಿದ್ದೀನಿ. ಸಾಲ ತೀರಿಸಲು ತುಂಬಾ ಪ್ರಯತ್ನ ಮಾಡಿದೆ. ಸದ್ಯದ ಪರಿಸ್ಥಿಯಲ್ಲಿ ಸಾಲ ತೀರಿಸುವುದಕ್ಕೆ ಆಗ್ತಾ ಇಲ್ಲ. ಸಾಲ ಕೊಟ್ಟವರು ಎಲ್ಲ ಕ್ಷಮಿಸಿ ಎಂದು ಬರೆದಿಟ್ಟಿದ್ದಾರೆ. ಡೆತ್‌ನೋಟ್‌ನಲ್ಲಿ ಮನೆಯವರ ನಂಬರ್‌ಗಳನ್ನೆಲ್ಲ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • ಬೆಂಗಳೂರಿನ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಹಾಕಿದ ಬಿಬಿಎಂಪಿ

    ಬೆಂಗಳೂರಿನ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಹಾಕಿದ ಬಿಬಿಎಂಪಿ

    ಬೆಂಗಳೂರು: ಸರಿ ಸುಮಾರು 50 ಕೋಟಿಗಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗೆ ಬಿಬಿಎಂಪಿ (BBMP) ಬೆಳ್ಳಂಬೆಳಗ್ಗೆಯೇ ಶಾಕ್ ನೀಡಿದೆ.

    ಬಿಗಿ ಪೊಲೀಸ್ ಭದ್ರತೆಯೊಂದಿಗೆ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳ ತಂಡ ಮಂತ್ರಿ ಮಾಲ್‌ಗೆ (Mantri Mall) ಬೀಗ ಹಾಕಿದೆ. ಇವತ್ತಿನಿಂದ ಸಾಲು ಸಾಲು ರಜೆ ಇರುವುದರಿಂದ ವೀಕೆಂಡ್‌ನಲ್ಲಿ ಮಾಲ್‌ಗೆ ಹೆಚ್ಚಿನ ಜನ ಬರುತ್ತಿದ್ದರು.‌ ಇದನ್ನೂ ಓದಿ: ಹೆಸರಾಂತ ನಿರ್ದೇಶಕಿ ರೂಪಾ ಅಯ್ಯರ್ ಗೆ ದೋಖಾ: ಡಿಜಿಟಲ್ ಅರೆಸ್ಟ್

    ಈ ಹಿಂದೆಯೂ 8 ಬಾರಿ ಮಾಲ್‌ಗೆ ಬಿಬಿಎಂಪಿ ಬೀಗ ಹಾಕಿತ್ತು. ಮಾಲ್‌ನವರು ಕೋರ್ಟ್ ಮೂಲಕ ಬೀಗ ಓಪನ್ ಮಾಡಿಸಿಕೊಂಡು ವ್ಯವಹಾರ ಮಾಡುತ್ತಿದ್ದರು. ‌ಇಂದಿನಿಂದ ಭಾನುವಾರದ ವರೆಗೆ ಸರ್ಕಾರಿ ರಜೆ ಇರುವುದರಿಂದ ಹೆಚ್ಚಿನ ಗ್ರಾಹಕರು ಬರುವ ನಿರೀಕ್ಷೆ ಇತ್ತು. ಮಾಲ್ ಇವತ್ತು ಓಪನ್ ಆಗಬೇಕಾದರೆ ಬಾಕಿ ಉಳಿಸಿಕೊಂಡಿರುವ ತೆರಿಗೆ ಕಟ್ಟಲೇಬೇಕಾದ ಪರಿಸ್ಥಿತಿ ಇದೆ.

    ಮಾಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಬಂದು ಕಾಯ್ತಿದ್ದಾರೆ. ಬೀಗ ಹಾಕಿರುವುದನ್ನು ನೋಡಿ ಹೊರಗಡೆಯೇ ನಿಂತಿದ್ದಾರೆ. ಇದನ್ನೂ ಓದಿ: ಜಿಂದಾಲ್ ಕಾರ್ಖಾನೆಯಲ್ಲಿ ಅವಘಡ – ನೀರಿನ ಹೊಂಡದಲ್ಲಿ ಬಿದ್ದು ಮೂವರ ದುರ್ಮರಣ!

  • 32 ಕೋಟಿ ರೂಪಾಯಿ ತೆರಿಗೆ ಪಾವತಿಸದ ಮಂತ್ರಿ ಮಾಲ್‍ಗೆ ಬೀಗ ಜಡಿದ ಬಿಬಿಎಂಪಿ

    32 ಕೋಟಿ ರೂಪಾಯಿ ತೆರಿಗೆ ಪಾವತಿಸದ ಮಂತ್ರಿ ಮಾಲ್‍ಗೆ ಬೀಗ ಜಡಿದ ಬಿಬಿಎಂಪಿ

    ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಬರೋಬ್ಬರಿ 32 ಕೋಟಿ ರೂಪಾಯಿ ತೆರಿಗೆ ಪಾವತಿದೇ ಬಾಕಿ ಉಳಿಸಿಕೊಂಡಿದ್ದ ಮಂತ್ರಿ ಮಾಲ್‍ಗೆ ಬಿಬಿಎಂಪಿ ಬೀಗ ಜಡಿದಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಕಂದಾಯಾಧಿಕಾರಿ ಪ್ರಸನ್ನ ಕುಮಾರ್, ಕಳೆದ ಮೂರು ವರ್ಷಗಳಿಂದ ತೆರಿಗೆ ಕಟ್ಟದೆ 32 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಈ ಹಿಂದೆ ತೆರಿಗೆ ಪಾವತಿಸುವಂತೆ ಬಿಬಿಎಂಪಿ ನೋಟಿಸ್ ಜಾರಿಗೊಳಿಸಿತ್ತು. ಆದರೂ ಎಚ್ಚೆತ್ತುಕೊಳ್ಳದ ಮಾಲ್ ಮಾಲೀಕರ ವಿರುದ್ಧ ಕಾನೂನು ಕ್ರಮವಾಗಿ ನಿನ್ನೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಮಾಲ್‍ಗೆ ಬೀಗ ಹಾಕಿದ್ದೇವೆ ಎಂದರು.

    ಈ ಹಿಂದೆ ಮಾಲ್ ಮಾಲೀಕರು 10 ಕೋಟಿ ಚೆಕ್ ನೀಡಿದ್ದರು. ಆದರೆ ಅದು ಬೌನ್ಸ್ ಆಗಿರುವುದರಿಂದಾಗಿ ಪಾಲಿಕೆ ಕಾನೂನು ಕೋಶದ ಶಿಫಾರಸ್ಸಿನ ಮೇರೆಗೆ ಬೀಗ ಹಾಕಿ ಮಾ. 1ವರೆಗೆ ತೆರಿಗೆ ಪಾವತಿ ಮಾಡಲು ಕಾಲವಕಾಶ ನೀಡಿದೆ.

    ಮಂತ್ರಿ ಮಾಲ್ ಮಾಲೀಕರು ಆಸ್ತಿ ತೆರಿಗೆ ಪಾವತಿಗಾಗಿ 15 ದಿನ ಕಾಲವಕಾಶ ಕೇಳಿದ್ದರು. ಅದರಂತೆ ನೋಟಿಸ್ ನೀಡಿ 15 ದಿನಗಳು ಕಳೆದ ಕಾರಣ ಪಶ್ಚಿಮ ವಿಭಾಗದ ತೆರಿಗೆ ಅಧಿಕಾರಿಗಳು ಮಾಲ್ ಸಿಬ್ಬಂದಿಯನ್ನ ಹೊರಗೆ ಕರೆದು ಬೀಗ ಹಾಕಿದ್ದು, ಮಾರ್ಚ್ 1 ವರೆಗೆ ಅವಕಾಶವಿದ್ದು ಕಟ್ಟದೇ ಹೋದರೆ ಬಿಬಿಎಂಪಿ ಮಾಲ್‍ನ್ನು ವಶಪಡಿಸಿಕೊಳ್ಳುವುದಾಗಿ ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

  • ಮಂತ್ರಿ ಮಾಲ್‍ನಲ್ಲಿ ಬ್ರಹ್ಮಚಾರಿಯ ಲೈವ್ ಗಾನಾ!

    ಮಂತ್ರಿ ಮಾಲ್‍ನಲ್ಲಿ ಬ್ರಹ್ಮಚಾರಿಯ ಲೈವ್ ಗಾನಾ!

    – ಇದು ಚಿತ್ರತಂಡದ ವಿನೂತನ ಪ್ರಯೋಗ!

    ಬೆಂಗಳೂರು:  ನೀನಾಸಂ ಸತೀಶ್ ಅಭಿನಯದ ಬ್ರಹ್ಮಚಾರಿ ಚಿತ್ರ ಹಾಡು ಮತ್ತು ಟ್ರೇಲರ್ ಗಳೊಂದಿಗೆ ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ. ನೀನಾಸಂ ಸತೀಶ್ ಚಂಬಲ್‍ನಂಥಾ ರಿಯಲಿಸ್ಟಿಕ್ ಚಿತ್ರದಲ್ಲಿ ಖಡಕ್ ಅಧಿಕಾರಿಯಾಗಿ ಮಿಂಚಿ ಮತ್ತೆ ತಮ್ಮ ಅಭಿಮಾನಿಗಳಿಗೆ ಭರಪೂರ ಮನೋರಂಜನೆ ನೀಡಲು ಮುಂದಾಗಿದ್ದಾರೆ. ಮೊದಲಿನಿಂದಲೂ ಮಂಡ್ಯ ಶೈಲಿಯ ಮನೋರಂಜನಾತ್ಮಕ ಪಾತ್ರಗಳಲ್ಲಿ ಮಿಂಚುತ್ತಾ ಬಂದಿದ್ದ ಸತೀಶ್ ಈಗ ನಾಯಕನಾಗಿಯೂ ವೆರೈಟಿ ಪಾತ್ರಗಳಲ್ಲಿ ನಟಿಸಿ ಬಹ್ಮಚಾರಿ ಮೂಲಕ ಮತ್ತೊಂದು ಮಜಲಿನತ್ತ ಹೊರಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕ ಮಜಾ ಕೊಟ್ಟಿದ್ದ ಬ್ರಹ್ಮಚಾರಿ ಚಿತ್ರ ತಂಡವೀಗ ಕನ್ನಡ ಚಿತ್ರರಂಗಕ್ಕೆ ಹೊಸತಾದ ಪ್ರಯೋಗವೊಂದರ ಮೂಲಕ ಹಾಡೊಂದನ್ನು ಬಿಡುಗಡೆ ಮಾಡಲು ತಯಾರಾಗಿದೆ.

    ಯಾವುದೇ ಸಿನಿಮಾ ಹಾಡುಗಳನ್ನು ಯೂಟ್ಯೂಬ್ ಮೂಲಕ ನೇರವಾಗಿ ಬಿಡುಗಡೆ ಮಾಡೋ ಟ್ರೆಂಡ್ ಚಾಲ್ತಿಯಲ್ಲಿದೆ. ಆದರೆ ನಿರ್ದೇಶಕ ಚಂದ್ರಮೋಹನ್ ಮಾತ್ರ ಬ್ರಹ್ಮಚಾರಿಯ ಹಾಡೊಂದನ್ನು ಅತ್ಯಂತ ವಿಶಿಷ್ಟವಾದ ರೀತಿಯಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದ್ದಾರೆ. ಶನಿವಾರ ಮಂತ್ರಿ ಮಾಲ್‍ನಲ್ಲಿ ಈ ಲೈವ್ ಹಾಡಿನ ಕಾರ್ಯಕ್ರಮ ನಡೆಯಲಿದೆ. ಸಂಜೆ ಆರು ಘಂಟೆಗೆ ಸರಿಯಾಗಿ ಸಂಜಿತ್ ಹೆಗ್ಡೆ ಮತ್ತು ಸುಪ್ರಿಯಾ ಲೈವ್ ಆಗಿಯೇ ಈ ಹಾಡನ್ನು ಹಾಡಲಿದ್ದಾರೆ. ಸಾವಿರಾರು ಜನರ ಸಮ್ಮುಖದಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗುತ್ತದೆ.

    ಈ ಕಾರ್ಯಕ್ರಮ ಸುಮಾರು ಒಂದು ಘಂಟೆಗಳ ಕಾಲ ನಡೆಯಲಿದೆ. ಇದರ ವೀಡಿಯೋ ಕವರೇಜ್ ಮಾಡಿಕೊಳ್ಳುವ ಅವಕಾಶವನ್ನೂ ಸಹ ಚಿತ್ರತಂಡ ಕಲ್ಪಿಸಿದೆ. ಈ ಕಾರ್ಯಕ್ರಮದಲ್ಲಿ ನೀವುಗಳೂ ಭಾಗಿಯಾಗಿ ಬ್ರಹ್ಮಚಾರಿಯ ಹಾಡನ್ನು ಲೈವ್ ಆಗಿಯೇ ಆಸ್ವಾದಿಸಬಹುದು. ಚಿತ್ರತಂಡದೊಂದಿಗೆ ಬೆರೆತು ಈ ಅಪರೂಪದ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಅಂದಹಾಗೆ ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಪ್ರಯೋಗ. ಇದು ಸಾಧ್ಯವಾಗುತ್ತಿರೋದು ನಿರ್ಮಾಪಕ ಉದಯ್ ಮೆಹ್ತಾರ ಮಹತ್ವಾಕಾಂಕ್ಷೆಯಿಂದ. ಅವರು ಇಡೀ ಚಿತ್ರ ವಿಶೇಷತೆಗಳಿಂದಲೇ ಮಿಂಚಬೇಕೆಂಬ ಹಂಬಲ ಹೊಂದಿರುವ ಅಪರೂಪದ ನಿರ್ಮಾಪಕ. ಈ ಕಾರಣದಿಂದಲೇ ಚಿತ್ರತಂಡದ ಈ ಹೊಸಬಗೆಯ ಆಲೋಚನೆಗೆ ಅವರು ಸಾಥ್ ಕೊಟ್ಟಿದ್ದಾರೆ.

    ಬ್ರಹ್ಮಚಾರಿಯ ನವೀನ್ ಸಜ್ಜು ಹಾಡಿರೋ ಹಾಡೊಂದು ಟ್ರೆಂಡ್ ಸೆಟ್ ಮಾಡಿದೆ. ಇದೀಗ ಈ ಹಾಡನ್ನು ಬಿಡುಗಡೆ ಮಾಡಲು ರೆಡಿಯಾಗಲಾಗಿದೆ. ಧರ್ಮವಿಶ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡನ್ನು ಕವಿರತ್ನ ಡಾ ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಸಂಜಿತ್ ಹೆಗ್ಡೆ ಮತ್ತು ಸುಪ್ರಿಯಾ ಅದಕ್ಕೆ ಧ್ವನಿಯಾಗಿದ್ದಾರೆ. ಆದರೆ ಈ ಹಾಡಿನ ಗುಣ ಲಕ್ಷಣಗಳೇನೆಂಬುದನ್ನು ಮಾತ್ರ ಚಿತ್ರತಂಡ ಸರ್‍ಪ್ರೈಸ್ ಆಗಿಟ್ಟಿದೆ. ಅಂತೂ ಈ ಹಾಡೂ ಕೂಡಾ ಬ್ರಹ್ಮಚಾರಿಯನ್ನು ಮತ್ತೆ ಪ್ರೇಕ್ಷಕ ವಲಯದಲ್ಲಿ ಮಿರ ಮಿರ ಮಿಂಚುವಂತೆ ಮೂಡಿ ಬರೋದಂತೂ ಖಚಿತ!

  • ಮಂತ್ರಿಮಾಲ್‍ನಲ್ಲಿ ಮಹಿಳೆ ತಲೆ ಮೇಲೆ ಬಿತ್ತು ಬೃಹತ್ ಬೋರ್ಡ್ – ರಕ್ತ ಸೋರುತ್ತಿದ್ರೂ ಆಸ್ಪತ್ರೆಗೆ ಸೇರಿಸದ ಸಿಬ್ಬಂದಿ

    ಮಂತ್ರಿಮಾಲ್‍ನಲ್ಲಿ ಮಹಿಳೆ ತಲೆ ಮೇಲೆ ಬಿತ್ತು ಬೃಹತ್ ಬೋರ್ಡ್ – ರಕ್ತ ಸೋರುತ್ತಿದ್ರೂ ಆಸ್ಪತ್ರೆಗೆ ಸೇರಿಸದ ಸಿಬ್ಬಂದಿ

    ಬೆಂಗಳೂರು: ಮಂತ್ರಿಮಾಲ್‍ನಲ್ಲಿ ಮತ್ತೆ ಎಡವಟ್ಟಾಗಿದೆ. ಶಾಪಿಂಗ್‍ಗೆ ಹೋಗಿದ್ದ ಮಹಿಳೆ ಮೇಲೆ ಬೃಹತ್ ಬೋರ್ಡ್ ಬಿದ್ದ ಘಟನೆ ಗುರುವಾರ ರಾತ್ರಿ ನಡೆದಿದೆ.

    ಯಲಹಂಕದ ಗುಣಶೀಲ ಎಂಬವರು ಮಾಲ್‍ಗೆ ಹೋಗಿದ್ದಾಗ ಬಟ್ಟೆಗಳ ಆಫರ್ ಪ್ರದರ್ಶನದ ಬೃಹತ್ ಬೋರ್ಡ್ ಅವರ ತಲೆಯ ಮೇಲೆ ಬಿದ್ದಿದೆ. ಇದರ ಪರಿಣಾಮ ಗುಣಶೀಲ ಅವರ ತಲೆಗೆ ಗಾಯವಾಗಿದ್ದು, ಏಳು ಸ್ಟಿಚ್ ಹಾಕಲಾಗಿದೆ.

     

    ಘಟನೆ ನಡೆದು ರಕ್ತ ಸೋರುತ್ತಿದ್ದರೂ ಮಂತ್ರಿ ಮಾಲ್‍ನವರು ಪ್ರಥಮ ಚಿಕಿತ್ಸೆ ಮಾಡಿ ಬಿಟ್ಟಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಅಮಾನವೀಯತೆ ಮೆರೆದಿದ್ದಾರೆ. ತಮ್ಮ ಕಡೆಯಿಂದ ತಪ್ಪಾಗಿದ್ರೂ ಮುಚ್ಚಿಕೊಳ್ಳುವ ಯತ್ನ ನಡೆಸಿದ್ದಾರೆ.

     

    ನಂತರ ಗುಣಶೀಲ ಅವರ ಪತಿ ಸ್ಥಳಕ್ಕೆ ಬಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗುಣಶೀಲ ಅವರ ತಲೆಯ ಮುಂಭಾಗಕ್ಕೆ ಏಟು ಬಿದ್ದಿದ್ದು ಎರಡು ದಿನ ಬಿಟ್ಟು ಎಂಆರ್‍ಐ ಮಾಡಿಸೋದಕ್ಕೆ ವೈದ್ಯರು ಸೂಚಿಸಿದ್ದಾರೆ ಅಂತ ತಿಳಿದುಬಂದಿದೆ.

  • ಯಶೋಧೆಯ ಬದುಕು ಕಸಿದುಕೊಂಡ `ಮಂತ್ರಿ ಮಾಲ್’

    ಯಶೋಧೆಯ ಬದುಕು ಕಸಿದುಕೊಂಡ `ಮಂತ್ರಿ ಮಾಲ್’

    ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಮಂತ್ರಿಮಾಲ್ ಗೋಡೆ ಕುಸಿದು ಕೆಲ ಸಮಯ ಬಾಗಿಲು ಮುಚ್ಚಿದ್ದು ನಿಮ್ಗೆಲ್ಲ ಗೊತ್ತೇ ಇದೆ. ಬಿಬಿಎಂಪಿಯಿಂದ ಕೆಲವೇ ದಿನಗಳಲ್ಲಿ ಕ್ಲೀನ್ ಚಿಟ್ ಪಡೆದ ಮಂತ್ರಿ ಮಾಲ್ ರೀ ಓಪನ್ ಆಯ್ತು. ಆದರೆ ಗೋಡೆ ಕುಸಿದ ಪರಿಣಾಮ ತನ್ನ ಕಾಲು ಕಳೆದುಕೊಂಡ ಆ ಬಡಪಾಯಿ ಮಾತ್ರ ಮಕ್ಕಳ ಸಮೇತ ಬೀದಿಗೆ ಬಿದ್ದಿದ್ದಾರೆ.

    ಯಶೋಧ ಇಂದು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ಯಶೋಧ ಅವರ ಇವತ್ತಿನ ಸ್ಥಿತಿಗೆ ಕಾರಣ ಪ್ರತಿಷ್ಠಿತ ಮಂತ್ರಿ ಮಾಲ್. ಮಂತ್ರಿ ಮಾಲ್‍ನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಜನವರಿ 15ರಂದು ಗೋಡೆ ಕುಸಿದು ಕಾಲು ಕಳೆದುಕೊಂಡಿದ್ದರು. ಈ ಬಗ್ಗೆ ದೂರು ಕೊಡಬೇಡಿ. ಎಲ್ಲಾ ಖರ್ಚು ವೆಚ್ಚಗಳನ್ನು ನಾವೇ ನೋಡಿಕೊಳ್ತೀವಿ ಅಂದಿದ್ದ ಮಂತ್ರಿ ಮಾಲ್‍ನ ದುಡ್ಡಿರೋ ದೊಡ್ಡ ಜನ ಇವತ್ತು ಯಶೋಧರ ಕೈ ಬಿಟ್ಟಿದ್ದಾರೆ.

    ಯಶೋಧ ಅವರ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಬಲಗಾಲಿನ ಮಂಡಿ ಚಿಪ್ಪಿಗೆ ಸರ್ಜರಿ ಮಾಡಿಸೋಕೂ ದುಡ್ಡಿಲ್ಲದೇ ಪರದಾಡುತ್ತಿದ್ದಾರೆ. ಮೂರು ತಿಂಗಳಿಂದ ಸಂಬಳ ಇಲ್ಲದೇ ತುತ್ತು ಅನ್ನಕ್ಕೂ ಪರದಾಡೋ ಪರಿಸ್ಥಿತಿ ಯಶೋಧರ ಮನೆಯಲ್ಲಿದೆ. ಜೀವನಕ್ಕೆ ಆಸರೆಯಾಗಿದ್ದ ಟೈಲರಿಂಗ್ ಸಹ ಮಾಡಲಾಗದ ಪರಿಸ್ಥಿತಿಯಲ್ಲಿ ಇಡೀ ಕುಂಟುಂಬ ಕಣ್ಣೀರಿಡುತ್ತಿದೆ.

    https://www.youtube.com/watch?v=szVZzTuwMbU

    https://www.youtube.com/watch?v=Oue_rKdpkDU

    https://www.youtube.com/watch?v=Gv40HgSywO0

     

  • ಮಂತ್ರಿ ಮಾಲ್ ಛಾವಣಿಯಲ್ಲಿ ಬಿರುಕು

    ಮಂತ್ರಿ ಮಾಲ್ ಛಾವಣಿಯಲ್ಲಿ ಬಿರುಕು

    ಬೆಂಗಳೂರು: ಒಂದು ವಾರದ ಹಿಂದೆಯಷ್ಟೇ ಮತ್ತೆ ಆರಂಭಗೊಂಡಿದ್ದ ನಗರದ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಛಾವಣಿಯಲ್ಲಿ ಬಿರುಕು ಮೂಡಿದೆ.

    ಮಂತ್ರಿಮಾಲ್ ಎರಡನೇ ಮಹಡಿಯ ಛಾವಣಿಯಲ್ಲಿ ಬಿರುಕು ಮೂಡಿದ್ದು, ಈ ಬಿರುಕಿನಲ್ಲಿ ನೀರು ಸೋರಿಕೆಯಾಗುತ್ತಿದೆ. ನಿನ್ನೆ ಸುರಿದ ಮಳೆಗೆ ಮಂತ್ರಿಮಾಲ್ ಛಾವಣಿಯಿಂದ ನೀರು ಸೋರಿಕೆಯಾಗಿದೆ.  ಎಸಿ ಪೈಪ್ ಮೂಲಕ ನೀರು ಬರುತ್ತಿರುವ ಗುಮಾನಿ ಇದ್ದು ಮತ್ತೆ ಮಂತ್ರಿಮಾಲ್ ನಲ್ಲಿ ಅಭದ್ರತೆ ಕಾಡಿದೆ.

    ಜನವರಿ 16ರಂದು ಮಂತ್ರಿ ಸ್ಕ್ವೇರ್ ಹಿಂಭಾಗದ ಗೋಡೆ (ಪ್ಯಾರಾಪೆಟ್ ವಾಲ್) ಕುಸಿದು ಬಿದ್ದು ಮೂವರು ಮಹಿಳೆಯರು ಗಾಯಗೊಂಡಿದ್ದರು. ಈ ಪ್ರಕರಣದ ಬಳಿಕ ಮಂತ್ರಿ ಸ್ಕ್ವೇರ್ ವಾಸಯೋಗ್ಯ ಪ್ರಮಾಣಪತ್ರವನ್ನು ಬಿಬಿಎಂಪಿ ಕೂಡಲೇ ವಾಪಸ್ ಪಡೆದಿತ್ತು. ಕಟ್ಟಡದ ಸುರಕ್ಷತೆ ಪರಿಶೀಲನೆಗಾಗಿ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅವರ ನೇತೃತ್ವದಲ್ಲಿ ಆರು ಜನ ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ಮೇಯರ್ ಜಿ.ಪದ್ಮಾವತಿ ಅವರಿಗೆ ಸಲ್ಲಿಸಿದ ವರದಿ ಆಧಾರದಲ್ಲಿ 12 ಷರತ್ತುಗಳನ್ನು ವಿಧಿಸಿ ಫೆ.26 ರಿಂದ ಮಂತ್ರಿ ಮಾಲ್ ಪುನಾರಂಭಕ್ಕೆ ಬಿಬಿಎಂಪಿ ಅನುಮತಿ ನೀಡಿತ್ತು.

  • ಇಂದಿನಿಂದ ಮಂತ್ರಿಮಾಲ್ ಓಪನ್

    ಇಂದಿನಿಂದ ಮಂತ್ರಿಮಾಲ್ ಓಪನ್

    ಬೆಂಗಳೂರು: ಮಂತ್ರಿಮಾಲ್ ಕಾರ್ಯಾರಂಭಕ್ಕೆ ಬಿಬಿಎಂಪಿ 12 ಷರತ್ತುಗಳನ್ನ ವಿಧಿಸಿ ಅನುಮತಿ ನೀಡಿದ್ದು, 40 ದಿನಗಳಿಂದ ಸ್ಥಗಿತಗೊಂಡಿದ್ದ ಮಂತ್ರಿಮಾಲ್ ಇಂದಿನಿಂದ ಓಪನ್ ಆಗಿದೆ.

    ಬಿದ್ದಿರುವ ಗೋಡೆಯನ್ನ ಮತ್ತೆ ಹೊಸದಾಗಿ ನಿರ್ಮಾಣ ಮಾಡಬೇಕು. ಗೋಡೆ ಕುಸಿತವಾಗಿರುವ ಕಡೆ ಇರುವ ಡೋರ್‍ಗಳನ್ನ ಯಾವುದೇ ಕಾರಣಕ್ಕೂ ತೆರೆಯುವಂತಿಲ್ಲ ಎಂದು ಬಿಬಿಎಂಪಿ ಷರತ್ತು ವಿಧಿಸಿದೆ. ಬಿಬಿಎಂಪಿಯ ಸೂಚನೆ ಮೇರೆಗೆ ಮಂತ್ರಿಮಾಲ್ ಶೇ. 80ರಷ್ಟು ಬದಲಾವಣೆ ಮಾಡಿಕೊಂಡಿದ್ದು, ಏನೇ ಆದ್ರೂ ನಾವೇ ಜವಬ್ದಾರಿ ಎಂದು ಬರೆದುಕೊಟ್ಟಿದೆ.

    ಮಂತ್ರಿಮಾಲ್‍ನಲ್ಲಿ ಕೊಳಚೆ ನೀರು ಹರಿದು ಗೋಡೆ ಕುಸಿದಿತ್ತು, ಈಗ ಪೈಪು ಬದಲಿಸಲಾಗಿದೆ. ಮುಂದೆ ಪೈಪು ತುಕ್ಕು ಹಿಡಿಯದಂತೆ `ಆ್ಯಂಟಿ ಕೊರೊಸೀವ್’ ಬಣ್ಣ ಹಚ್ಚಲಾಗಿದೆ. ಬೇರೆ ಕಡೆ ಸ್ಲಾಬ್, ಸಿಮೆಂಟ್, ಕಬ್ಬಿಣ, ಕಟ್ಟಡ ಸಲಕರಣೆ ಗುಣಮಟ್ಟ ಚೆನ್ನಾಗಿವೆ. ಮಂತ್ರಿಮಾಲ್ ಕಟ್ಟಡದ ಎಲ್ಲಾ ಭಾಗವೂ ವಾಣಿಜ್ಯ ಚಟುವಟಿಕೆಗೆ ಸಮರ್ಥವಾಗಿದೆ. 60 ಕಡೆ ಸ್ಯಾಂಪಲ್ ಪರೀಕ್ಷೆ ಮಾಡಿದ್ದು ಕಟ್ಟಡ ಸಂಪೂರ್ಣ ಗಟ್ಟಿಮುಟ್ಟಾಗಿದೆ ಎಂದು ಮಾಲ್ ವರದಿ ತಯಾರಿಸಿದೆ. ವರದಿ ಬಳಿಕ ಹಲವು ಷರತ್ತುಗಳನ್ನ ವಿಧಿಸಿ ಬಿಬಿಎಂಪಿ ಅನುಮತಿ ನೀಡಿದೆ.

    ಜನವರಿ 16 ರಂದು ಮಂತ್ರಿಮಾಲ್ ಹಿಂಬದಿ ಗೋಡೆ ಕುಸಿದಿತ್ತು. ಬಳಿಕ ತಜ್ಞರ ತಂಡ ರಚನೆ ಮಾಡಿದ್ದ ಬಿಬಿಎಂಪಿ, ವರದಿ ಬಳಿಕ ಕೆಲ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಿತ್ತು. ಇದೀಗ ಬಿಬಿಎಂಪಿ ಸೂಚನೆ ಮೇರೆಗೆ ಬದಲಾವಣೆ ಮಾಡಿಕೊಂಡಿರುವ ಮಂತ್ರಿಮಾಲ್ ಮತ್ತೆ ಕಾರ್ಯರಂಭ ಮಾಡುತ್ತಿದೆ.

    ಮಂತ್ರಿ ಮಾಲ್‍ಗೆ 12 ಷರತ್ತುಗಳು:

    1. ತಜ್ಞರ ಸಮಿತಿ ವರದಿ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವುದು.
    2. ಗೋಡೆ ಕುಸಿದಿರುವ ಭಾಗವನ್ನ ತಜ್ಞರ ಸೂಚನೆ ಪ್ರಕಾರ ಪುನರ್ ನಿರ್ಮಾಣ ಮಾಡಬೇಕು.
    3. ಪ್ರತಿ ವರ್ಷ ನಿರ್ವಹಣಾ ಮಾಹಿತಿಯನ್ನ ಬಿಬಿಎಂಪಿಗೆ ನೀಡಬೇಕು.
    4. ತುರ್ತು ಸೇವೆಗೆ ತೆರೆದುಕೊಳ್ಳುವಂತೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಎರಡು ವರ್ಷಕ್ಕೊಮ್ಮೆ ಅಗ್ನಿ ಸುರಕ್ಷತೆ ಬಗ್ಗೆ ಪ್ರಮಾಣೀಕರಿಸಬೇಕು.
    5. ಕಟ್ಟಡದ ಸುಭದ್ರತೆ ಬಗ್ಗೆ ತಜ್ಞರ ಸಮಿತಿಯಿಂದ ಪರಿಶೀಲಿಸಿ ಬಿಬಿಎಂಪಿಗೆ ವರದಿ ನೀಡಬೇಕು.
    6. ವಾಟರ್ ಸಪ್ಲೈ, ಒಳ ಚರಂಡಿ, ಎಸಿ ಉಪಕರಣಗಳು ಸೇರಿದಂತೆ ಇತರೆ ಸರ್ವಿಸ್‍ಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು.
    7. ಪಾರ್ಕಿಗ್ ಜಾಗವನ್ನು ಪಾರ್ಕಿಂಗ್ ಜಾಗಕ್ಕೆ ಮಾತ್ರ ಉಪಯೋಗಿಸಬೇಕು.
    8. ಕಟ್ಟಡವನ್ನು ಯಾವ ಉದ್ದೇಶಕ್ಕಾಗಿ ಅನುಮತಿ ಪಡೆಯಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸಿಕೊಳ್ಳಬೇಕು.
    9. ಕಟ್ಟಡದ ಟೆರೆಸ್ ಭಾಗದಲ್ಲಿ ಲೀಕ್ ಪ್ರೂಫ್ ಟೆಕ್ನಾಲಜಿ ಬಳಸಬೇಕು.
    10. ಕಟ್ಟಡದ 3ನೇ ಅಂತಸ್ತಿನ ಎಲ್ಲಾ ಹೊರ ದ್ವಾರಗಳನ್ನು ಗೋಡೆ ನಿರ್ಮಾಣ ಸಂಪೂರ್ಣವಾಗುವವರೆಗೂ ಮುಚ್ಚಬೇಕು.
    11. ಮಾಲ್‍ಗೆ ಬರುವ ಸಾರ್ವಜನಿಕರ ಸುರಕ್ಷತೆಯ ದೃಷ್ಠಿಯಿಂದ ಮಂತ್ರಿಮಾಲ್ ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಅಷ್ಟೇ ಅಲ್ಲದೆ ಮುಂದೆ ಏನಾದ್ರು ಅನಾಹುತ ಆದ್ರೆ ಅವರೇ ಜವಾಬ್ದಾರರಾಗಬೇಕು.
    12. 3ನೇ ಅಂತಸ್ತಿನಲ್ಲಿರೋ ಸ್ಕೇರಿ ಹೌಸನ್ನು ಗೋಡೆ ನಿರ್ಮಾಣವಾಗುವವರೆಗೂ ಮುಚ್ಚಬೇಕು.