Tag: Mansoon

  • ಮಳೆಗಾಲದಲ್ಲಿ ಮಹಿಳೆಯರು ಗಮನಿಸಬೇಕಾದ ಡ್ರೆಸ್ಸಿಂಗ್ ಟಿಪ್ಸ್!

    ಮಳೆಗಾಲದಲ್ಲಿ ಮಹಿಳೆಯರು ಗಮನಿಸಬೇಕಾದ ಡ್ರೆಸ್ಸಿಂಗ್ ಟಿಪ್ಸ್!

    ಅಂತೂ ಇಂತೂ ಮಳೆಗಾಲವೂ ಶುರುವಾಯಿತು. ಈ ಮಳೆಗಾಲದಲ್ಲಿ ಮನೆಯಲ್ಲಿ ಕೂತು ಬಿಸಿ ಬಿಸಿ ಕಾಫಿ, ಟೀ ಜೊತೆ ಬಜ್ಜಿ ಬೋಂಡಾ ತಿಂದು ಕಾಲ ಕಳೆಯೋದು ಒಂದು ಖುಷಿಯಾದ್ರೆ. ಮನೆಯಿಂದ ಹೊರಗೆ ಕಾಲಿಟ್ಟಾಗ ಈ ಚಿತ್ರಣವೇ ಬದಲಾಗುತ್ತದೆ. ಜಿಟಿ ಜಿಟಿ ಸುರಿಯುವ ಮಳೆ, ರಸ್ತೆಯಲ್ಲಿ ನಿಂತ ಕೆಸರು ನೀರಿನಿಂದ ಹೊರಗಡೆ ಹೋಗುವಾಗ ಯಾವ ಬಟ್ಟೆ ಹಾಕೋದು ಯಾವ ಶೂ ಹಾಕೋದು ಅನ್ನೋದೇ ದೊಡ್ಡ ತಲೆನೋವುವಾಗಿದೆ.

    ಈ ಮಳೆಗಾಲದಲ್ಲಿ (Rainy Season) ಬಟ್ಟೆ ಕೇವಲ ಅಂದ ಹೆಚ್ಚಿಸೋದು ಮಾತ್ರವಲ್ಲ. ಮಳೆಗೆ ಸರಿಹೊಂದುವಂತೆ ಹಾಗೂ ದೇಹಕ್ಕೆ ಬೆಚ್ಚಗಿನ ಫೀಲ್ ನೀಡುವುದು ಸಹ ತುಂಬಾ ಮುಖ್ಯ. ಹಾಗಾಗಿ ನಾವು ಬಟ್ಟೆಗಳ ಆಯ್ಕೆಯಲ್ಲಿ ಕೊಂಚ ಚ್ಯೂಸಿಯಾಗಿರಬೇಕು. ಮಳೆಗಾಲದಲ್ಲಿ ಬಟ್ಟೆ ಆಯ್ಕೆ ಹೇಗಿರಬೇಕೆಂದರೆ ಧರಿಸಲು ಕಂಫರ್ಟ್‌ ಇರಬೇಕು. ನೋಡಲು ಸುಂದರವಾಗಿ ಕಾಣುವಂತೆ ಇರಬೇಕು.

    ಗಾಢ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಿ
    ಮಳೆಗಾಲದಲ್ಲಿ ಹೊರಗಡೆ ಹೋಗುವಾಗ ಗಾಢ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಬೇಕು. ಕೆಂಪು, ಕಪ್ಪು, ಕಡು ನೀಲಿ, ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಯಾಕೆಂದರೆ ತಿಳಿ ಬಣ್ಣದ ಡ್ರೆಸ್‌ಗಳನ್ನು ಧರಿಸುವುದರಿಂದ ಕೆಸರು ನೀರಿನ ಕಲೆಗಳು, ವಾಹನದ ಗ್ರೀಸ್‌ ಕಲೆಗಳು ಎದ್ದು ಕಾಣುವಂತೆ ಮಾಡುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಡಾರ್ಕ್‌ ಕಲರ್‌ನ ಬಟ್ಟೆಗಳನ್ನು ಧರಿಸುವುದು ಅತ್ಯಂತ ಉತ್ತಮವಾಗಿದೆ.

    ಲೆಹಂಗಾ, ಅನಾರ್ಕಲಿ ಡ್ರೆಸ್‌ಗಳು ಬೇಡ
    ಇನ್ನು ಈ ಮಾನ್ಸೂನ್‌ ಸಮಯದಲ್ಲಿ ಉದ್ದನೆಯ ಬಟ್ಟೆಗಳನ್ನು ಧರಿಸುವುದನ್ನು ಅವಾಯ್ಡ್‌ ಮಾಡಬೇಕು. ಲೆಹಂಗಾ, ಅನಾರ್ಕಲಿ ಅಥವಾ ಜೀನ್ಸ್‌ ಪ್ಯಾಂಟ್‌ಗಳನ್ನು ಬಳಸದೇ ಇರುವುದು ಉತ್ತಮ. ಲೆಹಂಗಾ, ಸೀರೆ, ಅನಾರ್ಕಲಿ ಬಟ್ಟೆಗಳು ಮಳೆಯಲ್ಲಿ ಒದ್ದೆಯಾದರೆ ತುಂಬಾ ಭಾರವೆನಿಸುತ್ತದೆ. ಅಲ್ಲದೇ ಬಳಿಕ ಅನ್‌ಕಂಪರ್ಟ್‌ ಫೀಲ್‌ ಸಹ ನೀಡುತ್ತದೆ. ಜೀನ್ಸ್‌ ಪ್ಯಾಂಟ್‌ಗಳು ಮಳೆಗಾಲದಲ್ಲಿ ಒಣಗಿಸಲು ಹರಸಾಹಸ ಪಡಬೇಕಾಗುತ್ತದೆ. ಆದ್ದರಿಂದ ಇಂತಹ ಬಟ್ಟೆಗಳನ್ನು ಧರಿಸದೇ ಇರುವುದು ಒಳ್ಳೆಯದು.

    ಶಾರ್ಟ್‌ ಡ್ರೆಸ್‌ಗಳು ಉತ್ತಮ
    ಮಳೆಗಾಲದಲ್ಲಿ ಹೆಚ್ಚು ಉದ್ದವಾಗಿರುವ ಬಟ್ಟೆಗಳ ಬದಲಾಗಿ ಶಾರ್ಟ್‌ ಡ್ರೆಸ್‌ಗಳನ್ನು ಧರಿಸಬೇಕು. ಇದು ಮಳೆಯಿಂದ ನಿಮ್ಮ ಬಟ್ಟೆಗಳು ಒದ್ದೆಯಾಗಿ ಕಿರಿಕಿರಿ ಉಂಟು ಮಾಡುವುದನ್ನು ತಪ್ಪಿಸುತ್ತದೆ. ಆದ್ದರಿಂದ ಸಿಂಪಲ್‌ ಕುರ್ತಾ, ಶಾರ್ಟ್‌ ಡ್ರೆಸ್‌, ಲೆಗ್ಗಿನ್ಸ್‌ ಅಥವಾ ಕಾಟನ್‌ ಪ್ಯಾಂಟ್‌ ಧರಿಸುವುದರಿಂದ ಉತ್ತಮ ಅನುಭವ ನೀಡುತ್ತದೆ.

    ಮೇಕಪ್‌ ಬಗ್ಗೆಯೂ ಗಮನವಿರಲಿ
    ಇನ್ನೂ ಹುಡುಗಿಯರಿಗೆ ಈ ಮಳೆಗಾಲದಲ್ಲಿ ಮೇಕಪ್‌ದೇ ಚಿಂತೆಯಾಗಿರುತ್ತದೆ. ಮಳೆಗೆ ಒದ್ದೆಯಾಗಿ ಮೇಕಪ್‌ ಹಾಳಾಗಬಹುದೆಂಬ ಭಯವಿದ್ದರೆ, ಆದಷ್ಟು ಲೈಟ್‌ ಮೇಕಪ್‌ನ್ನು ಮಾಡಬೇಕು. ಇಲ್ಲದಿದ್ದರೆ ವಾಟರ್‌ ಪ್ರೂಫ್‌ ಮೇಕಪ್‌ಗಳನ್ನು ಧರಿಸುವುದರಿಂದ ಮಳೆಗಾಲದಲ್ಲಿ ಚಿಂತೆಯಿಲ್ಲದೆ ಸುತ್ತಾಟಬಹುದಾಗಿದೆ. ಇನ್ನು ಈ ವೇಳೆ ಡಾರ್ಕ್‌ ಲಿಪ್‌ಸ್ಟಿಕ್‌ ಧರಿಸುವುದರಿಂದ ಮಳೆಗಾಲದಲ್ಲಿ ಒದ್ದೆಯಾದರೂ ಆಡ್‌ ಆಗಿ ಕಾಣುವುದಿಲ್ಲ. ಲೈಟ್ ಫೌಂಡೇಶನ್, ವಾಟರ್ ಪ್ರೂಫ್ ಮಸ್ಕರಾ ಮತ್ತು ಟಿಂಟೆಡ್ ಲಿಪ್ ಬಾಮ್ ಉತ್ತಮ ಆಯ್ಕೆಗಳಾಗಿವೆ.

    ಸ್ಲೀಪ್, ಶೂಗಳನ್ನು ಅವಾಯ್ಡ್ ಮಾಡಿ
    ಮಳೆಗಾಲದಲ್ಲಿ ಕೇವಲ ಬಟ್ಟೆ ಮಾತ್ರವಲ್ಲ ಚಪ್ಪಲಿ ಆಯ್ಕೆ ಕೂಡ ಅಷ್ಟೇ ಇಂಪಾರ್ಟೆಂಟ್. ಮಳೆಗಾಲದಲ್ಲಿ ಸ್ಲಿಪ್ಪರ್ ಬಳಕೆಯಿಂದ ಬಟ್ಟೆಗಳು ಕೊಳೆಯಾಗುತ್ತದೆ. ಸ್ಲಿಪ್ಪರ್ ಗಳನ್ನು ಬಳಸಿದರೆ, ಅದರಿಂದ ಬಟ್ಟೆಗಳಿಗೆ ಕೆಸರು ನೀರು ಬಿದ್ದು ಹಾಳುಮಾಡುತ್ತದೆ. ಅದಕ್ಕಾಗಿ ರಬ್ಬರ್ ಶೂಗಳು, ಉಂಗುಷ್ಠವಿರುವ ಚಪ್ಪಲಿಗಳ ಅಥವಾ ಬೆಲ್ಟ್ ಚಪ್ಪಲಿಗಳ ಬಳಕೆ ಒಳ್ಳೆಯದು.

    ಮಳೆಗಾಲದಲ್ಲಿ ಯಾವಾಗಲೂ ತೆಳುವಾಗಿರುವ, ಕಾಟನ್ ಡ್ರೆಸ್ ಹಾಗೂ ಒಣಗಿಸಲು ಸುಲಭವಾಗುವ ಬಟ್ಟೆಗಳನ್ನು ಧರಿಸಬೇಕು. ಮಾನ್ಸೂನ್ ಸಮಯದಲ್ಲಿ ಮಹಿಳೆಯರು ಆರಾಮದಾಯಕ ಮತ್ತು ಸ್ಟೈಲಿಶ್ ಆಗಿ ಕಾಣಲು ಸರಿಯಾದ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

  • ಹಾಸನ ಜಿಲ್ಲೆಗೆ ಮುಂಗಾರು ಆಗಮನ- ಜಿಲ್ಲೆಯ ಹಲವೆಡೆ ಹಾನಿ

    ಹಾಸನ ಜಿಲ್ಲೆಗೆ ಮುಂಗಾರು ಆಗಮನ- ಜಿಲ್ಲೆಯ ಹಲವೆಡೆ ಹಾನಿ

    ಹಾಸನ: ರಾಜ್ಯದಲ್ಲಿ ಮುಂಗಾರು (Mansoon) ಆಗಮನವಾಗಿದ್ದು, ಕರಾವಳಿ (Karavali) ಜಿಲ್ಲೆಗಳಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಅದೇ ರೀತಿ ಹಾಸನ (Hassan) ಜಿಲ್ಲೆಗೂ ಮುಂಗಾರು ಆಗಮಿಸಿದ್ದು, ಭಾರೀ ಮಳೆಯ ಪರಿಣಾಮ ಜಿಲ್ಲೆಯ ಹಲವೆಡೆ ಹಾನಿಯುಂಟಾಗಿದೆ.

    ಹಾಸನ ಜಿಲ್ಲೆ, ಸಕಲೇಶಪುರ (Sakleshpura) ತಾಲೂಕಿನ ಹಲವೆಡೆ ಮಳೆಯಿಂದ ಹಾನಿಯುಂಟಾಗಿದ್ದು, ಹಾನಬಾಳು ಗ್ರಾಮದ ಪರಮೇಶ್-ಕಮಲ ಎಂಬ ವೃದ್ಧ ದಂಪತಿಯ ಮನೆಯ ಮೇಲೆ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ವಾಸದ ಮನೆ ಸಂಪೂರ್ಣ ಜಖಂಗೊಂಡಿದ್ದು, ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ದೆಹಲಿಗೆ ಮಾನ್ಸೂನ್ ಎಂಟ್ರಿ- ರಾಷ್ಟ್ರ ರಾಜಧಾನಿ ಕೂಲ್ ಕೂಲ್

    ಭಾರೀ ಮಳೆಯಿಂದಾಗಿ ಹೆತ್ತೂರು ಹೋಬಳಿ, ಬನ್ನಹಳ್ಳಿ ಗ್ರಾಮದ ಸೋಮಶೇಖರ್ ಎಂಬವರ ಮನೆಯ ತಡೆಗೋಡೆ ಕುಸಿದು ಬಿದ್ದಿದೆ. ಇನ್ನು ಇದೇ ತಾಲೂಕಿನ ಹುಲ್ಲಹಳ್ಳಿ ಸಮೀಪ ವಿದ್ಯುತ್ ತಂತಿ ಮೇಲೆ ಮರ ಬಿದ್ದಿದ್ದು, ಹುಲ್ಲಹಳ್ಳಿ ಸುತ್ತಮುತ್ತ ವಿದ್ಯುತ್ ಕಡಿತಗೊಂಡಿತ್ತು. ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡಿದ ಹಿನ್ನೆಲೆ ವಿದ್ಯುತ್ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ದುರಸ್ತಿ ಕಾರ್ಯ ಕೈಗೊಂಡು ವಿದ್ಯುತ್ ಪೂರೈಕೆ ಮಾಡಿದ್ದಾರೆ. ಇದನ್ನೂ ಓದಿ: ಇಂದಿನಿಂದ 4 ದಿನಗಳ ಕಾಲ ರಾಜ್ಯದ ಹಲವೆಡೆ ಭಾರೀ ಮಳೆ

    ಸದ್ಯ ಬುಧವಾರ ರಾತ್ರಿಯಿಂದ ವರುಣ ಸ್ವಲ್ಪ ಬಿಡುವನ್ನು ನೀಡಿದ್ದು, ಜಿಲ್ಲೆಯ ಬಹುತೇಕ ಕಡೆ ಮೋಡ ಕವಿದ ವಾತಾವರಣವಿದೆ. ಹಾಸನ ಜಿಲ್ಲೆಗೆ ವರುಣನ ಆಗಮನವಾದ್ದರಿಂದ ರೈತರು ಸಂತಸಗೊಂಡಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಇಬ್ಬರು ಬಲಿ- ತಗ್ಗು ಪ್ರದೇಶಗಳಲ್ಲಿ ಕೃತಕ ಪ್ರವಾಹ ಸೃಷ್ಟಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯದ ಹಲವೆಡೆ ಇಂದಿನಿಂದ 3 ದಿನ ಮಳೆ ಸಾಧ್ಯತೆ – ಹವಾಮಾನ ಇಲಾಖೆ

    ರಾಜ್ಯದ ಹಲವೆಡೆ ಇಂದಿನಿಂದ 3 ದಿನ ಮಳೆ ಸಾಧ್ಯತೆ – ಹವಾಮಾನ ಇಲಾಖೆ

    ಬೆಂಗಳೂರು: ಮುಂಗಾರು ರಾಜ್ಯಕ್ಕೆ ಎಂಟ್ರಿ ಕೊಟ್ಟು 10 ದಿನ ಕಳೆದಿದೆ. ಇಷ್ಟು ದಿನ ರಾಜ್ಯದಲ್ಲಿ ಚದುರಿದಂತೆ ಮಳೆ ಆಗುತ್ತಿತ್ತು. ಆದರೆ ಇಂದಿನಿಂದ ಮುಂಗಾರು ಮಳೆ ಅಬ್ಬರಿಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    ಯಾದಗಿರಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ಗದಗ, ಹಾವೇರಿ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಶಿವಮೊಗ್ಗದಲ್ಲಿ ಭಾರೀ ಮಳೆ ಆಗುವ ಮುನ್ಸೂಚನೆ ಇದ್ದು. ಕರಾವಳಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ 3 ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ನೂಪುರ್ ಶರ್ಮಾ ಪ್ರತಿಕೃತಿ ಮಾಡಿ ನೇಣು ಹಾಕಿದ ಕಿಡಿಗೇಡಿಗಳು

    RAIN

    ಉಳಿದಂತೆ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೃಷಿ ಚಟುವಟಿಕೆಗಳು ಇನ್ಮುಂದೆ ಬಿರುಸು ಪಡೆಯುವ ಸಂಭವ ಇದೆ. ಇದನ್ನೂ ಓದಿ: ರಾಜ್ಯಸಭೆಗೆ ಆಯ್ಕೆ ಹಿನ್ನೆಲೆ ಮಂತ್ರಾಲಯ ರಾಯರ ಮಠಕ್ಕೆ ನಟ ಜಗ್ಗೇಶ್ ಭೇಟಿ

  • ಈ ಬಾರಿ ಸಾಧಾರಣ ಮುಂಗಾರು ಮಳೆ: ಹವಾಮಾನ ಇಲಾಖೆ

    ಈ ಬಾರಿ ಸಾಧಾರಣ ಮುಂಗಾರು ಮಳೆ: ಹವಾಮಾನ ಇಲಾಖೆ

    ನವದೆಹಲಿ: ಈ ವರ್ಷ ಸಾಧಾರಣ ಮುಂಗಾರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಮುನ್ಸೂಚನೆ ನೀಡಿದೆ. ಜೂನ್ ನಿಂದ ಸೆಪ್ಟೆಂಬರ್ ವರೆಗೆ ಸಾಧಾರಣ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ ಎಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಕೆಜಿ ರಮೇಶ್ ಹೇಳಿದ್ದಾರೆ.

    ಈ ಬಾರಿ ದೀರ್ಘಾವಧಿಯಲ್ಲಿ ಶೇ. 97ರಷ್ಟು ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಮೇ ಕೊನೆಯ ಅಥವಾ ಜೂನ್ ಮೊದಲ ವಾರದಲ್ಲಿ ಮುಂಗಾರು ಕೇರಳ ಪ್ರವೇಶಿಸುವ ಸಾಧ್ಯತೆಗಳಿವೆ. ಮೇ ತಿಂಗಳ ಮಧ್ಯದಲ್ಲಿ ಮುಂಗಾರು ಪ್ರವೇಶಿಸುವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

    ನಾಲ್ಕು ತಿಂಗಳ ಅವಧಿಯಲ್ಲಿ ಕೆಲವೊಮ್ಮೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಕೂಡ ಸಾಧಾರಣ ಮುಂಗಾರು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿತ್ತು. ಅದರಂತೆ ಶೇಕಡ 95ರಷ್ಟು ಮಳೆಯಾಗಿತ್ತು ಎಂದು ಹೇಳಿದರು.

    ಹವಾಮಾನ ಇಲಾಖೆಯ ಲೆಕ್ಕಾಚಾರದ ಅನ್ವಯ ಸಾಮಾನ್ಯ ಸರಾಸರಿಗಿಂತ ಶೇ.90ರಷ್ಟು ಕಡಿಮೆ ಮಳೆ ಬಿದ್ದರೆ ಅದನ್ನು ಮಳೆ ಕೊರತೆ ಎಂದು, ಶೇ.90-96ರ ಸರಾಸರಿಯಲ್ಲಿದ್ದರೆ ಅದನ್ನು ಸಾಧಾರಣಕ್ಕಿಂತ ಕಡಿಮೆ ಎಂದು, ಶೇ.96-104ರ ಪ್ರಮಾಣದಲ್ಲಿದ್ದರೆ ಅದನ್ನು ಸಾಧಾರಣ ಮಳೆ ಎಂದು, ಶೇ.110ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಹೆಚ್ಚಿನ ಮಳೆ ಎಂದು ಕರೆಯಲಾಗುತ್ತದೆ.

    ಕಳೆದ ವರ್ಷ ಕೂಡ ಸಾಧಾರಣ ಮುಂಗಾರು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿತ್ತು. ಅದರಂತೆ ಶೇಕಡ 95ರಷ್ಟು ಮಳೆಯಾಗಿತ್ತು. 2015, 2014ರಲ್ಲಿ ಮುಂಗಾರು ಮಳೆ ಪ್ರಮಾಣ ಕಡಿಮೆಯಾಗಿತ್ತು. ಆ ಎರಡೂ ವರ್ಷಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು.