Tag: Manju

  • ಸುದೀಪ್ ಮನೆ ಮುಂದೆ ಹೈ ಡ್ರಾಮಾ: ಬಿಗ್ ಬಾಸ್ ಮನೆಗೆ ನನ್ನನ್ನೂ ಕಳಿಸಿ

    ಸುದೀಪ್ ಮನೆ ಮುಂದೆ ಹೈ ಡ್ರಾಮಾ: ಬಿಗ್ ಬಾಸ್ ಮನೆಗೆ ನನ್ನನ್ನೂ ಕಳಿಸಿ

    ಕಿಚ್ಚನ (Sudeep) ಮನೆ ಮುಂದೆ ವ್ಯಕ್ತಿಯೊಬ್ಬನು ಅತಿರೇಕದ ವರ್ತನೆ ಮಾಡಿದ್ದಾನೆ. ಈ ವರ್ತನೆ ಕಂಡು ಮನೆಯ ಸೆಕ್ಯೂರಿಟಿ ದಂಗಾಗಿದ್ದಾರೆ. ಬಿಗ್ ಬಾಸ್ (Big Boss Kannada) ಮನೆಗೆ ಚಾನ್ಸ್ ಕೇಳೋಕೆ ಅಂತ ಎತ್ತಿನ ಗಾಡಿಯಲ್ಲಿ ಸುದೀಪ್ ಮನೆಗೆ ಬಂದಿದ್ದ ವ್ಯಕ್ತಿ. ಬಿಗ್ ಬಾಸ್ ಮನೆಗೆ ಹೋಗೋಕೆ ಅವಕಾಶ ಮಾಡಿ ಕೊಡಿ ಅಂತ ಹೈ ಡ್ರಾಮಾ ಶುರುಮಾಡಿದ್ದಾನೆ.

    ಮಂಜು (Manju) ಹೆಸರಿನ ವ್ಯಕ್ತಿಯು ನಿನ್ನೆ ಸಂಜೆ ಸುಮಾರು 6 ಗಂಟೆಯಿಂದ 10ಗಂಟೆವರೆಗೂ ಸುದೀಪ್ ಮನೆ ಮುಂದೆ ಕಾದು ನಿಂತಿದ್ದ. ತಾನು ಟಿ ನರಸಿಪುರದಿಂದ ಬಂದಿರುವುದಾಗಿ ತಿಳಿಸಿದ್ದಾನೆ. ನಾವು ಅನಕ್ಷರಸ್ಥರು. ರೈತರು ಬಿಗ್ ಬಾಸ್ ಹೋಗಲು ಅವಕಾಶ ಕೊಡಿ ಅಂತ ಎತ್ತಿನ ಗಾಡಿ ತಂದು ಸುದೀಪ್ ಮನೆ ಮುಂದೆ ನಿಲ್ಲಿಸಿದ್ದ. ನಂತರ ಸುದೀಪ್ ಮನೇಲಿಲ್ಲ. ಚೆನ್ನೈ ಹೋಗಿದ್ದಾರೆ ಅಂತ ಹೇಳಿ ಸೆಕ್ಯುರಿಟಿ ಮನವಿ ಮಾಡಿ ಕಳಿಸಿದ್ದಾರೆ.

     

    ಎತ್ತಿನ ಗಾಡಿಗೆ ಬ್ಯಾನರ್ ಕಟ್ಕೊಂಡ್ ಬಂದು, ಜೆಪಿ ನಗರದ ಸುದೀಪ್ ಮನೆ ಮುಂದೆ ಗಾಡಿ ನಿಲ್ಲಿಸಿದ್ದ. ನಂತರ ಬುದ್ದಿ ಹೇಳಿ ಆತನನ್ನ ಕಳಿಸಲಾಗಿದೆ. ಮಂಜು ಅಂತ ಹೆಸರನ್ನು ಬ್ಯಾನರ್ ನಲ್ಲಿ ಬರೆಯಲಾಗಿತ್ತು. ಕೆಲ ಸಮಯದ ನಂತರ ಅವರನ್ನು ಸಮಾಧಾನಿಸಿ ಕಳುಹಿಸಲಾಗಿದೆ ಎಂದಿದ್ದಾರೆ ಸುದೀಪ್ ಆಪ್ತರು.

  • ಅವನು ಅಂಬರೀಶ್ ಅಭಿಮಾನಿ, ಈಕೆಗೆ ಐಪಿಎಸ್ ಕನಸು : ಇದು ‘ಆನಂದರಾಗ’ದ ಕಥೆ

    ಅವನು ಅಂಬರೀಶ್ ಅಭಿಮಾನಿ, ಈಕೆಗೆ ಐಪಿಎಸ್ ಕನಸು : ಇದು ‘ಆನಂದರಾಗ’ದ ಕಥೆ

    ಕಿರುತೆರೆ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕಪ್ಪು ಹುಡುಗನ ಮನಸ್ಥಿತಿ, ಅವನಿಗಾಗುವ ಅವಮಾನ, ಖಿನ್ನತೆಯಿಂದ ಹೊರಬರುವ ಕಥೆ ತರಲಿದೆ ಉದಯ ಟಿವಿ. ದಪ್ಪ ದೇಹ ಮತ್ತು ಕಪ್ಪು ಮೈಬಣ್ಣ ಹೊಂದಿರುವ ಕಥಾನಾಯಕ ತನ್ನ ಮುಗ್ದತೆಯಿಂದ ಜನರ ಮನಸ್ಸನ್ನು ಗೆದ್ದು ವೀಕ್ಷಕರ ಮನೆ ಮಗನಾಗಲು ಬರುತ್ತಿದ್ದಾನೆ. ಇನ್ನೊಂದೆಡೆ ಕಥಾನಾಯಕಿ ಅಪ್ಪನ ಗುರಿಯನ್ನು ತನ್ನ ಗುರಿಯನ್ನಾಗಿಸಿಕೊಂಡು ಐ.ಪಿ.ಎಸ್‌ ಆಗುವ ಕನಸ್ಸನ್ನು ಹೊತ್ತವಳು. ತನ್ನ ಮುಗುಳು ನಗೆಯಿಂದಲೇ ಎಲ್ಲಾ ಸಮಸ್ಯೆ ಬಗೆಹರಿಸುವ ಚತುರೆ ಇವಳು. ಈ ಚಲುವೆಗೂ ಆ ಕಪ್ಪು ಚಲುವನಿಗೂ ಇರುವ ಋಣಾನುಬಂಧದ ಕಥೆಯನ್ನು ಹೇಳಲು ಉದಯ ಟಿವಿ ಸಜ್ಜಾಗಿದೆ.

    ಕಪ್ಪು ಮೈಬಣ್ಣ ಹಾಗು ದಪ್ಪ ದೇಹ ಹೊಂದಿರುವ ಕಥಾ ನಾಯಕ ಹೆಸರಿಗೆ ಮಾತ್ರ ಚೆಲುವರಾಜ್. ಇವನು ರೆಬಲ್‌ ಸ್ಟಾರ್‌ ಅಂಬರೀಷ್‌ ಅವರ ಅಪ್ಪಟ ಅಭಿಮಾನಿ. ಮುಗ್ಧತೆ 100%, ವಿದ್ಯೆ 0%. ಆದರೆ ಇವನು ನೀಡುವ ನಗುವಿನ ಕಚಗುಳಿ 200%. ಹೀಗಿರುವ ಚೆಲುವರಾಜ ಅನುಭವಿಸಿರುವ ಅವಮಾನಕ್ಕೆ ಲೆಕ್ಕವಿಲ್ಲ. ಒಂದಲ್ಲ ಒಂದು ದಿನ ಅಂಬರೀಷ್‌ ಅವರ ರೀತಿ ತಾನೂ ಹೀರೊ ಆಗಬಲ್ಲೆ ಎಂದು ಕನಸು ಕಂಡಿರುವಾತ. ಚೆಲುವನ ತಾಯಿ ವಸುಂಧರ. ಇವಳಿಗೆ ತನ್ನ ಮಗನ ಮೇಲೆ ತುಂಬಾ ಪ್ರೀತಿ. ಮಗನಿಗೆ ವಿದ್ಯೆ ಕಲಿಸಲು ಹರಸಾಹಸ ವಿಫಲವಾಗಿದ್ದರೂ ಸಮಾಜದಲ್ಲಿ ಮಗನಿಗೆ ಉತ್ತಮ ಸ್ಥಾನ ಕೊಡಿಸಲು ಪಣತೊಟ್ಟಿರುವ ಹೆಂಗರುಳು.


    ಇನ್ನು ಕಥಾ ನಾಯಕಿ ದುರ್ಗಾ, ಪರಮೇಶ್ವರಿಯಷ್ಟೇ ಸುಂದರಿ ಮತ್ತು ಧೈರ್ಯವಂತೆ. ಅಪ್ಪ-ಅಮ್ಮನ ಮುದ್ದಿನ ಮಗಳು. ತಂದೆ-ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ನಂಬಿಕೆ ದುರ್ಗಾಳದ್ದು. ತನ್ನ ತಂಗಿ ಭಾವನಾಳ ಭಾವನೆಗಳಿಗೆ ಮಾತು ಇವಳದ್ದೆ. ಅಪ್ಪನ ಕನಸಿನಂತೆ ಐ.ಪಿ.ಎಸ್‌ ಆಗೋದೆ ಇವಳ ಗುರಿ. ದುರ್ಗಾ ಮತ್ತು ಚೆಲುವನ ನಡುವೆ ಅರಳುವ ವಿಭಿನ್ನವಾದ ಪ್ರೇಮರಾಗವೇ ಆನಂದರಾಗ. ಇದನ್ನೂ ಓದಿ:ನನಗೆ ಮಕ್ಕಳು ಇಲ್ಲದಿರಬಹುದು, ಶ್ವಾನಗಳೇ ನನಗೆ ಮಕ್ಕಳ ಸಮಾನ: ರಮ್ಯಾ

    ವಿನೂತನ ಪ್ರೇಮರಾಗದಲ್ಲಿ ದುರ್ಗಾಳಾಗಿ ದೀಪಾ ಹಿರೇಮಠ್‌ (Deepa Hiremath) ಹಾಗು ಚೆಲುವರಾಜ ಆಗಿ ರಂಗಭೂಮಿ ಮಂಜು (Manju)  ಆನಂದರಾಗದ (Anandaraga) ಘಮ ಬೀರಲಿದ್ದಾರೆ. ಕಥಾ ನಾಯಕಿಯ ತಂದೆಯಾಗಿ ಖ್ಯಾತ ಖಳನಾಯಕ ಕೀರ್ತಿರಾಜ್‌ (Keerthiraj) ಪಾತ್ರ ವಹಿಸಿದರೆ, ತಾಯಿಯಾಗಿ ಪ್ರತಿಭಾನ್ವಿತ ನಟಿ ಉಷಾ ಭಂಡಾರಿ (Usha Bhandari) ಕಾಣಿಸಿಕೊಳ್ಳಲಿದ್ದಾರೆ. ಕಥಾನಾಯಕನ ತಾಯಿಯಾಗಿ‌ ಹೆಸರಾಂತ ನಟಿ ವೀಣಾ ಸುಂದರ್ (Veena Sundar) ನಟಿಸುತ್ತಿದ್ದಾರೆ ಹಾಗೂ ಮತ್ತಷ್ಟು ನುರಿತ ಕಲಾವಿದರ ಬಳಗ ಈ ತಂಡದಲ್ಲಿದೆ.

    ಆನಂದರಾಗದ ನಿರ್ಮಾಣದ ಹೊಣೆಯನ್ನು ವಿಷನ್‌ ಟೈಮ್ಸ್‌ ನಿಭಾಯಿಸುತ್ತಿದೆ. ಎಸ್.ಗೋವಿಂದ್‌ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಈಗಾಗಲೇ ಹಲವಾರು ವಿಭಿನ್ನ ರೀತಿಯ ಧಾರಾವಾಹಿಗಳನ್ನು ನೀಡಿರುವ ಉದಯ ಟಿವಿ ಆನಂದರಾಗ ಧಾರಾವಾಹಿಯ ಮೂಲಕ ಆ ಪಯಣವನ್ನು ಮುಂದುವರೆಸಿದೆ. ಆನಂದರಾಗ ಧಾರಾವಾಹಿಯು ಮಾರ್ಚ್ 13 ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿದೆ.

  • ಚಂಪೂ, ಗುಡ್ಡು ಜೊತೆ ಪಾರ್ಟಿ ಮಾಡಿದ ಗುಂಡಮ್ಮ

    ಚಂಪೂ, ಗುಡ್ಡು ಜೊತೆ ಪಾರ್ಟಿ ಮಾಡಿದ ಗುಂಡಮ್ಮ

    ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಮನೆಮಾತಾಗಿದ್ದ ಸ್ಪರ್ಧಿಗಳು ಎಂದರೆ ಅದು ಶುಭಾ ಪೂಂಜಾ ಹಾಗೂ ಮಂಜು. ದೊಡ್ಮನೆಯಲ್ಲಿ ಸದಾ ಪ್ರೇಕ್ಷಕರಿಗೆ ನಗುವಿನ ಕಚಗುಳಿ ನೀಡುತ್ತಿದ್ದ ಶುಭಾ ಪೂಂಜಾ ಮಂಜು ಹಾಗೂ ರಾಜೀವ್ ಜೊತೆಗೆ ಪಾರ್ಟಿ ಮಾಡಿದ್ದಾರೆ.

    shubha

    ತಮ್ಮ ಚೇಷ್ಟೆ ಮತ್ತು ತಮಾಷೆ ಮೂಲಕ ಸದಾ ಮನೆಮಂದಿಯನ್ನೆಲ್ಲಾ ಸಿಕ್ಕಾಪಟ್ಟೆ ಗೋಳು ಹೊಯ್ದುಕೊಳ್ಳುತ್ತಿದ್ದ ಶುಭಾ ಪೂಂಜಾ ತಮ್ಮ ಪ್ರೀತಿ ಪಾತ್ರರಿಗೆ ಒಂದೊಂದು ಕ್ಯೂಟ್ ಕ್ಯೂಟ್ ಹೆಸರಿಟ್ಟಿದ್ದರು. ಅದರಲ್ಲಿ ಶುಭಾ ಪೂಂಜಾಗೆ ಬಹಳ ಹತ್ತಿರವಾಗಿದ್ದ ರಾಜೀವ್‍ರನ್ನು ಗುಡ್ಡು ಅಂತ ಮತ್ತು ಮಂಜುರನ್ನು ಚಂಪೂ ಎಂದು ಕರೆಯುತ್ತಿದ್ದರು. ಅದೇ ರೀತಿ ಶುಭಾ ಪೂಂಜಾಗೆ ಮಂಜು ಕೂಡ ಪ್ರೀತಿಯಿಂದ ಗುಂಡಮ್ಮ ಎಂದು ಕರೆಯುತ್ತಿದ್ದರು. ಇದನ್ನೂ ಓದಿ: ನಾನು ಶಾಲೆಗೆ ಹೋಗ್ಬೇಕು – ಅಫ್ಘಾನ್ ಬಾಲಕಿಯ ಖಡಕ್ ಭಾಷಣ

    shubha

    ಇದೀಗ ಬಿಗ್‍ಬಾಸ್ ಕಾರ್ಯಕ್ರಮ ಮುಕ್ತಾಯದ ನಂತರ ಹಲವು ದಿನಗಳ ಬಳಿಕ ಶುಭಾ ಪೂಂಜಾ, ಮಂಜು ಹಾಗೂ ರಾಜೀವ್ ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ದಾರೆ. ವಿಶೇಷವೆಂದರೆ ಈ ಪಾರ್ಟಿಯಲ್ಲಿ ಶುಭಾ ಪೂಂಜಾ ಭಾವಿ ಪತಿ ಸುಮಂತ್, ರಾಜೀವ್ ಪತ್ನಿ ಮತ್ತು ಮಜಾ ಭಾರತ ಕಾರ್ಯಕ್ರಮದ ಕಲಾವಿದರೂ ಕೂಡ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಮೂರು ತಿಂಗಳ ಹಿಂದೆ ಹೂತಿದ್ದ ಶವವನ್ನೇ ಹೊತ್ತೊಯ್ದ ಕಿಡಿಗೇಡಿಗಳು- ವಾಮಾಚಾರದ ಶಂಕೆ

    ಸದ್ಯ ಪಾರ್ಟಿಯ ಕೆಲವೊಂದು ಫೋಟೋವನ್ನು ಶುಭಾ ಪೂಂಜಾ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಮಂಜು ಕೂಡ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಫೋಟೋಗಳಿಗೆ ಶುಭಾ ಫ್ರೆಂಡ್ ಶಿಪ್ ಹಾಡುಗಳನ್ನು ಸೆಟ್ ಮಾಡಿಕೊಂಡು ಹಂಚಿಕೊಂಡಿದ್ದಾರೆ. ಒಟ್ಟಾರೆ ಮೂವರು ಒಟ್ಟಾಗಿ ಸೇರಿ ಪಾರ್ಟಿ ಮಾಡಿ ಸಖತ್ ಎಂಜಾಯ್ ಮಾಡಿದ್ದಾರೆ ಎಂದೇ ಹೇಳಬಹುದು.

  • ದಿವ್ಯಾ ಉರುಡುಗ ಹೇರ್ ಕಟ್ ಮಾಡಿದ ಅರವಿಂದ್

    ದಿವ್ಯಾ ಉರುಡುಗ ಹೇರ್ ಕಟ್ ಮಾಡಿದ ಅರವಿಂದ್

    ಳೆದ ವಾರ ಕಿಚ್ಚ ಸುದೀಪ್ ಅರವಿಂದ್‍ಗೆ ದಿವ್ಯಾ ಉರುಡುಗ ಹೇರ್ ಕಟ್ ಮಾಡುವಂತೆ ಟಾಸ್ಕ್ ನೀಡಿದ್ದರು. ಅದರಂತೆ ಅರವಿಂದ್ ದಿವ್ಯಾ ಉರುಡುಗಗೆ ಹೇರ್ ಕಟ್ ಮಾಡಿದ್ದಾರೆ.

    ದಿವ್ಯಾ ಉರುಡುಗಗೆ ಹೇರ್ ಕಟ್ ಮಾಡಲು ಬೇಕಾದ ಸಾಮಾಗ್ರಿಗಳನ್ನು ಬಿಗ್‍ಬಾಸ್ ಅರವಿಂದ್‍ಗೆ ಕಳುಹಿಸಿಕೊಟ್ಟಿದ್ದಾರೆ. ಈ ವೇಳೆ ದಿವ್ಯಾ ಉರುಡುಗ ಬಿಗ್‍ಬಾಸ್ ಎಂದು ಗೋಳಾಡುತ್ತಾ ಬಾತ್ ರೂಂ ಏರಿಯಾಗೆ ಹೋಗುತ್ತಾರೆ. ನಂತರ ಅರವಿಂದ್ ಡಿಯುಗೆ ಕ್ರಾಫ್ ತೆಗೆದು ತಲೆ ಬಾಚಲು ಶುರು ಮಾಡುತ್ತಾರೆ. ಈ ಮಧ್ಯೆ ದಿವ್ಯಾ ಉರುಡುಗ ನನಗೆ ಯಾವ ಭಯ ಕೂಡ ಇಲ್ಲ. ನೀವು ಚೆನ್ನಾಗಿ ಹೇರ್ ಕಟ್ ಮಾಡುತ್ತೀರಾ ಎಂಬ ನಂಬಿಕೆ ಇದೆ ಎಂದು ಧೈರ್ಯ ತುಂಬುತ್ತಾರೆ.

    ಈ ನಡುವೆ ಹೇರ್ ಕಟ್ ಮಾಡುವ ವೇಳೆ ಜೊತೆಗಿದ್ದು, ರೇಗಿಸುತ್ತಿದ್ದರೆ ಮಜಾವಾಗಿರುತ್ತಿತ್ತು ಎಂದು ಮಂಜು ಪ್ರಶಾಂತ್ ಬಳಿ ಮಾತನಾಡುತ್ತಿರುವಾಗವಾಗ, ನಾನು ಸಹಜವಾಗಿ ನಾವೆಲ್ಲರೂ ಜೊತೆಯಾಗಿದ್ದರೆ, ಡಿಸ್ಟರ್ಬ್ ಆಗಿ ಬಿಡುತ್ತೀರಾ ಎಂದು ಹೇಳಿದೆ. ಅದನ್ನೇ ಅವರು ಗಂಭೀರವಾಗಿ ತೆಗೆದುಕೊಂಡು ನಾವಿಬ್ಬರೇ ಹೇರ್ ಕಟ್ ಮಾಡಿಕೊಂಡು ಬರುತ್ತೇವೆ ಯಾರು ಇರಬೇಡಿ ಅಂತ ಹೇಳಿದ್ರು ಎಂದು ಹೇಳಿದ್ದಾರೆ.

    ಬಳಿಕ ಅರವಿಂದ್‍ಗೆ ಕೂದಲನ್ನು ಹೇಗೆ ಕ್ರಾಫ್ ತೆಗೆದು, ಹೇಗೆ ಕಟ್ ಮಾಡಬೇಕು ಎಂದು ದಿವ್ಯಾ ಉರುಡುಗ ಗೈಡ್ ಮಾಡುತ್ತಾ ಹೋಗುತ್ತಾರೆ, ಅದರಂತೆ ಅರವಿಂದ್ ಮಿರರ್ ಮುಂದೆ ಹೇರ್ ಕಟ್ ಮಾಡಲು ಆರಂಭಿಸುತ್ತಾರೆ. ಈ ವೇಳೆ ಕೂದಲು ಕಟ್ ಮಾಡುವ ಎಕ್ಸ್ ಪಿರಿಯನ್ಸ್ ಹೇಗಿದೆ ಎಂಬ ದಿವ್ಯಾ ಪ್ರಶ್ನೆಗೆ ಅರವಿಂದ್ ಒಂದು ರೀತಿ ಭಯ ಆಗುತ್ತಿದೆ. ನಮ್ಮದಾದರೆ ಹೆಚ್ಚು ಕಡಿಮೆಯಾದರೆ ಒಂದೇ ಬಾರಿ ಎಲ್ಲಾ ಹೇರ್‍ನನ್ನು ಸುಲಭವಾಗಿ ಕಟ್ ಮಾಡಿಬಿಡಬಹುದು. ಆದರೆ ನಿಮ್ಮದು ಆ ರೀತಿಯಲ್ಲ ಎಂದು ಫ್ರಂಟ್ ಕಟ್ ಹಾಗೂ ವೀ ಶೆಪ್ ಹೇರ್ ಕಟ್ ಮಾಡಿದ್ದಾರೆ.

    ಕೊನೆಗೆ ಅರವಿಂದ್ ಮಾಡಿದ ಹೇರ್ ಕಟ್‍ನನ್ನು ಡಿಯು ಮನೆಯ ಇತರ ಸ್ಪರ್ಧಿಗಳಿಗೆ ತೋರಿಸಿದ್ದಾರೆ. ಈ ವೇಳೆ ಎಲ್ಲರೂ ಹೇರ್ ಕಟ್ ಬಹಳ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ಅರವಿಂದ್‍ಗೆ ಹೇರ್ ಕಟ್ ಚಾಲೆಂಜ್ ಕೊಟ್ಟ ಸುದೀಪ್ – ಡಿಯು ಕೂದಲ ಗತಿಯೇನು?

  • ಪ್ರಶಾಂತ್ ಬಿಗ್‍ಬಾಸ್‍ನಲ್ಲಿ ಇಲ್ಲದಿದ್ರೆ ಒಗ್ಗರಣೆಯಲ್ಲಿ ಮೆಣಸಿನಕಾಯಿ ಇಲ್ಲದಂತೆ: ಅರವಿಂದ್

    ಪ್ರಶಾಂತ್ ಬಿಗ್‍ಬಾಸ್‍ನಲ್ಲಿ ಇಲ್ಲದಿದ್ರೆ ಒಗ್ಗರಣೆಯಲ್ಲಿ ಮೆಣಸಿನಕಾಯಿ ಇಲ್ಲದಂತೆ: ಅರವಿಂದ್

    ಬಿಗ್‍ಬಾಸ್ ಫಿನಾಲೆಗೆ ಇನ್ನೇನು 2-3 ದಿನವಷ್ಟೇ ಬಾಕಿ ಇದೆ. ಈ ವಾರ ಫಿನಾಲೆ ವೀಕ್ ಆಗಿರುವುದರಿಂದ ಬಿಗ್‍ಬಾಸ್ ಸೀಸನ್-8ರ ಟಾಪ್ 5 ಸ್ಪರ್ಧಿಗಳ ಜರ್ನಿಯನ್ನು ಫೋಟೋ ಫ್ರೇಮ್ ನಿರ್ಮಿಸುವ ಮೂಲಕ ಸವಿ ನೆನಪುಗಳನ್ನು ಮೆಲುಕು ಹಾಕಲಾಗುತ್ತಿದೆ. ಅರವಿಂದ್, ವೈಷ್ಣವಿ, ಮಂಜು ನಂತರ ಇದೀಗ ಪ್ರಶಾಂತ್ ಸಂಬರ್ಗಿ ಫೋಟೋವನ್ನು ಗಾರ್ಡನ್ ಏರಿಯಾದಲ್ಲಿ ವಾಲ್ ಆಫ್ ದಿ ಫ್ರೇಮ್ ಕ್ರಿಯೆಟ್ ಮಾಡಲಾಗಿತ್ತು. ಇದನ್ನು ಕಂಡು ಪ್ರಶಾಂತ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

    ಈ ಬಗ್ಗೆ ಮಾತನಾಡಿದ ಪ್ರಶಾಂತ್, 115 ದಿನದ ಜರ್ನಿ ಇನ್ನೂ 4 ದಿನದಲ್ಲಿ ಮುಗಿಯುತ್ತದೆ. ಈ ಮನೆಯಲ್ಲಿ ಫ್ರೆಂಡ್ಸ್, ಶತ್ರು ಆದ್ರು ಮತ್ತೆ ಫ್ರೆಂಡ್ಸ್ ಆದ್ರು, ಪ್ರೀತಿ, ಅಣ್ಣ, ತಂಗಿ, ಫ್ರೆಂಡ್ ಎಲ್ಲರೂ ಮನೆಯವರ ರೂಪದಲ್ಲಿ ಸಿಕ್ಕಿದ್ರು. ಮಂಜು ಕಾಮಿಡಿ ಸೆನ್ಸ್ ನನಗೆ ಅರ್ಥ ಆಗಲು ಸಮಯ ಬೇಕಾಯಿತು. ಅವನು ವೈಯಕ್ತಿವಾಗಿ ಯಾವುದೇ ಕೆಟ್ಟವನಲ್ಲ. ಆಟದಲ್ಲಿ ಜಗಳವಾಗುತ್ತಿತ್ತು. ಅದು ಬಿಟ್ಟರೆ ಬೇರೆ ಏನೂ ನಮ್ಮ ಮಧ್ಯೆ ಇಲ್ಲ. ಸದ್ಯ ಈಗ ಮಂಜು ನನಗೆ ಸಹೋದರನಾಗಿದ್ದಾರೆ. ಬಿಗ್‍ಬಾಸ್ ನನ್ನ ಲೈಫ್‍ನಲ್ಲಿ ಒಂದು ಮೈಲಿಗಲ್ಲು. ಬಿಗ್‍ಬಾಸ್ ಜರ್ನಿ ಬಹಳ ಸೂಪರ್, ಧನ್ಯವಾದಗಳು ಬಿಗ್‍ಬಾಸ್ ಎಂದಿದ್ದಾರೆ.

    ಬಳಿಕ ದಿವ್ಯಾ ಉರುಡುಗ, ನನಗೆ ಈ ಮನೆಗೆ ಬಂದ ತಕ್ಷಣ ಪ್ರಶಾಂತ್ ಜೊತೆ ಅಣ್ಣ – ತಂಗಿ ಬಾಂಧವ್ಯ ಬೆಳೆಯಿತು. ಪ್ರಶಾಂತ್ ಅವರಲ್ಲಿ ಒಂದು ರೀತಿಯ ಮಗುವನ್ನು ಕಾಣುತ್ತೇನೆ. ಅವರಲ್ಲಿ ಎರಡು ರೀತಿಯ ವ್ಯಕ್ತಿತ್ವ ಇದೆ. ಒಂದು ತುಂಬಾ ಮಗ್ಧತನ ಮತ್ತೊಂದು ಕ್ರೂರ ಹುಲಿ. ಅವರು ಖುಷಿಯಾಗಿದ್ದಾಗ ಅವರಂತ ಮನುಷ್ಯ ಇನ್ನೊಬ್ಬರಿಲ್ಲ. ಪ್ರಶಾಂತ್ ನನ್ನ ಜೀವನದ ಅಣ್ಣ. ನಿಮ್ಮ ಲೈಫ್‍ನಲ್ಲಿ ಎಲ್ಲಾ ಒಳ್ಳೆಯದಾಗಲಿ, ಯಾವತ್ತಿಗೂ ನಗುತ್ತೀರಿ ಎಂದಿದ್ದಾರೆ.

    ಪ್ರಶಾಂತ್ ರವರ ಬಗ್ಗೆ ತಿಳಿದುಕೊಳ್ಳಲು ನನಗೆ ಖುಷಿಯಾಗಿದೆ. ಟಿವಿಯಲ್ಲಿ ನೋಡುವುದಕ್ಕೂ, ನಿಜವಾಗಿಯೂ ನೋಡಲು ಪ್ರಶಾಂತ್‍ರವರು ತುಂಬಾ ಡಿಫರೆಂಟ್ ಆಗಿದ್ದಾರೆ. ನೀವು ಫಿನಾಲೆ ತನಕ ಬರಲು ನಿಮ್ಮಲ್ಲಿರುವ ಸಾಮಥ್ರ್ಯ ಕಾರಣ. ಒಂದು ಟಾಸ್ಕ್ ವೇಳೆ ನಾನು ಕೈ ಎತ್ತಿದ್ದು, ನನಗೆ ಈಗಲೂ ಬೇಸರವಾಗುತ್ತದೆ. ಇಂದಿಗೂ ನಾನು ಆ ಬಗ್ಗೆ ಪಶ್ಚಾತಾಪ ಪಡುತ್ತೇನೆ, ಕ್ಷಮಿಸಿ. ನೀವು ಅಂದರೆ ನನಗೆ ತುಂಬಾ ಇಷ್ಟ. ನಿಮಗೆ ಒಳ್ಳೆಯದಾಗಲಿ ಎಂದು ವೈಷ್ಣವಿ ಹೇಳಿದ್ದಾರೆ.

    ಬಳಿಕ ಮಂಜು, ಬಿಗ್‍ಬಾಸ್ ಮನೆಯಲ್ಲಿ ನನ್ನ ಹಾಗೂ ಪ್ರಶಾಂತ್‍ರವರದ್ದು ಹಾವು, ಮುಂಗುಸಿ ಸಂಬಂಧ. ಆದರೆ ಬಿಗ್‍ಬಾಸ್ ಮನೆಯಲ್ಲಿ ಪ್ರಶಾಂತ್ ಇಲ್ಲದಿದ್ದರೆ ಈ ಜರ್ನಿ ಬಹಳ ಬೋರಿಂಗ್ ಆಗಿರುತ್ತಿತ್ತು. ಸರಸ, ವಿರಸ ಎಲ್ಲಾ ಇದ್ದರೆನೇ ಮನೆ ಅನಿಸಿಕೊಳ್ಳುವುದು. ಜಗಳ ಆಡಿದರೂ ಅದನ್ನು ತಿದ್ದುಕೊಂಡು ಹೋಗುತ್ತಿದ್ದೇವೆ. ಒಳ್ಳೆಯದಾಗಲಿ ಎಂದಿದ್ದಾರೆ.

    ಇನ್ನೂ ಅರವಿಂದ್, ಪ್ರಶಾಂತ್ ಈ ಜರ್ನಿಯಲ್ಲಿ ಇರಲಿಲ್ಲ ಅಂದರೆ ಒಗ್ಗರಣೆಯಲ್ಲಿ ಮೆಣಸಿನ ಕಾಯಿ ಕಡಿಮೆಯಾದಂತೆ, ಯಾವಗಲೂ ಚಟ-ಪಟ ಅಂತ ಅಂದರೆನೇ ಅದು ಒಗ್ಗರಣೆಯಾಗುತ್ತದೆ. ನಿಮ್ಮಿಂದ ಏನು ಮಾಡಬೇಕು ಏನು ಮಾಡಬಾರದು ಎರಡನ್ನು ಕೂಡ ತಿಳಿದುಕೊಂಡಿದ್ದೇನೆ. ನನಗೆ ಒಳ್ಳೆಯ ಸ್ನೇಹಿತರಾಗಿದ್ದಕ್ಕೆ ಧನ್ಯವಾದ. ಮುಂದೆ ಕೂಡ ನಾವು ಹೀಗೆ ಫ್ರೆಂಡ್ಸ್ ಆಗಿ ಮುಂದುವರಿಯುತ್ತೇವೆ ಅಂದುಕೊಂಡಿದ್ದೇನೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ:ಕಿಚ್ಚನಿಂದಾಗಿ ವೈಷ್ಣವಿ ಹೆಸರು ಬದಲಾಯಿಸಲು ಪೋಷಕರು ತೀರ್ಮಾನ

  • ತಂಬಿಟ್ಟು, ಬೆಂಡು, ಬತ್ತಾಸಿನ ಮೇಲೆ ಶುಭಾ ಮನಸ್ಸು – ಮಂಜುಗೆ ಉಂಡೆ ಕೋಳಿ ಆಸೆ

    ತಂಬಿಟ್ಟು, ಬೆಂಡು, ಬತ್ತಾಸಿನ ಮೇಲೆ ಶುಭಾ ಮನಸ್ಸು – ಮಂಜುಗೆ ಉಂಡೆ ಕೋಳಿ ಆಸೆ

    ಬಿಗ್‍ಬಾಸ್ ದಿವ್ಯಾ ಉರುಡುಗ ಹಾಗೂ ಮಂಜುಗೆ ನ್ಯಾಕ್(ಕೌಶಲ್ಯವನ್ನು ಬಳಸಿಕೊಂಡು ಸಮತೋಲನವನ್ನು ಕಾಪಾಡಿಕೊಂಡು ಆಡುವಂತ ಆಟ)ವನ್ನು ನೀಡಿದ್ದರು. ಇದರಲ್ಲಿ ಗೆದ್ದವರಿಗೆ ವೈಯಕ್ತಿಕ ಲಕ್ಷುರಿ ನೀಡುವುದಾಗಿ ತಿಳಿಸಿದ್ದರು.

    ಅದರಂತೆ ಈ ಟಾಸ್ಕ್‌ನಲ್ಲಿ ಮಂಜು ಗೆಲ್ಲುತ್ತಾರೆ. ಬಳಿಕ ಶುಭಾ ಮಂಜುಗೆ ಲಕ್ಷುರಿಯಾಗಿ ಏನು ಕೇಳುವುದು ಎಂದು ತಲೆ ಕೆಡಿಸಿಕೊಂಡು ಮನೆಯೆಲ್ಲಾ ಸುತ್ತಾಡುತ್ತಾ ಕಡಲೆ ಪಪ್ಪು ಕೇಳೋಣ್ವಾ ಅಥವಾ ಹಾಲ್ಕೋವಾ ಕೇಳೋಣ್ವಾ? ಅಂತ ಚರ್ಚೆ ನಡೆಸಿದ್ದಾರೆ. ಆಗ ಮಂಜು ನೀವೆಲ್ಲಾ ಏನೇ ಹೆಳಿದರೂ ನಾನು ಮಾತ್ರ ಚಿಕನ್‍ನನ್ನೇ ಕೇಳುವುದು ಎಂದು ಪಟ್ಟು ಹಿಡಿಯುತ್ತಾರೆ.

    ಆಗ ಶುಭಾ ಬೇಡ ಮಂಜು, ನನಗೆ ನೀನು ಏನು ತಿನ್ನಬೇಕು ಅಂತ ಇಷ್ಟ ಆಗುತ್ತಿದ್ಯೋ ಅದನ್ನ ಕೇಳೋಣ ಎನ್ನುತ್ತಾ ಕೊನೆಗೆ ಮಂಜುಗೆ ಲಕ್ಷುರಿ ಕುಪನ್‍ನಲ್ಲಿ ಬೆಂಡು ಬತ್ತಾಸು, ತಂಬಿಟ್ಟು ಬೇಕಂತೆ ಕಳುಹಿಸಿಕೊಡಿ ಬಿಗ್‍ಬಾಸ್, ಅವರಿಗೆ ಕ್ಯಾಮೆರಾ ಮುಂದೆ ಬಂದು ಹೇಳಲು ಬೇಜಾರಾಗುತ್ತಿದ್ಯಂತೆ ಹಾಗಾಗಿ ನನ್ನ ಕೈನಲ್ಲಿ ಹೇಳಿಸುತ್ತಿದ್ದಾರೆ ಎಂದಿದ್ದಾರೆ.

    ಇದರ ಮಧ್ಯೆ ಮಂಜು ನಾನು ತಿನ್ನುವುದು ನೀನಲ್ಲ. ಬಾ ಇಲ್ಲಿ, ನೀನು ಆ ಕಡೆ ಹೋಗು ಕ್ಯಾಮೆರಾಯಿಂದ ಪಕ್ಕಕ್ಕೆ ಶುಭಾರನ್ನು ತಳ್ಳುತ್ತಾರೆ. ಆದರೂ ಶುಭಾ ಮಂಜುಗೆ ಕ್ಯಾಮೆರಾ ಮುಂದೆ ಚಿಕನ್ ಕೇಳಲು ಬಿಡದೇ ಆಟ ಆಡಿಸಿದ್ದಾರೆ. ಕೊನೆಗೆ ಶುಭಾ ಬಾಯಿ ಮುಚ್ಚಿ ಮಂಜು ಬಿಗ್‍ಬಾಸ್ ನನಗೆ ಗ್ರೀಲ್ ಆಗಿರುವ ಫುಲ್ ಉಂಡೆ ಕೋಳಿ ಅಂದರೆ ತಂದೂರಿ ಚಿಕನ್ ಬೇಕು ಎಂದು ಕೇಳಿದ್ದಾರೆ.

    ಅದರಂತೆ ಬಿಗ್‍ಬಾಸ್ ಒಂದು ಪ್ಲೇಟ್‍ನಲ್ಲಿ ತಂದೂರಿ ಚಿಕನ್ ಕಳುಹಿಸಿಕೊಟ್ಟಿದ್ದಾರೆ. ಅದನ್ನು ಮಂಜು ಪ್ಲೇಟ್‍ನಲ್ಲಿ ಹಿಡಿದು ಮನೆಯ ಎಲ್ಲ ಸ್ಪರ್ಧಿಗಳಿಗೂ ತೋರಿಸುತ್ತಾ ಹೊಟ್ಟೆ ಉರಿಸಿ, ಕೊನೆಗೆ ಒಂದು ಫುಲ್ ಉಂಡೇ ಕೋಳಿ ಸವಿದಿದ್ದಾರೆ. ಇದನ್ನು ಕಂಡು ದಿವ್ಯಾ ಉರುಡುಗ ಕೂಡ ಆಸೆ ಪಟ್ಟು ಬಿಗ್‍ಬಾಸ್ ನನಗೂ ಒಂದು ತಂದೂರಿ ಚಿಕನ್‍ನನ್ನು ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿನ್ ಬ್ಯಾಗ್ ಮೇಲೆ ಮಂಜು, ಶುಭಾ ಕಣ್ಣು – ಡಿಎಸ್ ಒದ್ದಾಟ

  • ಬಿನ್ ಬ್ಯಾಗ್ ಮೇಲೆ ಮಂಜು, ಶುಭಾ ಕಣ್ಣು – ಡಿಎಸ್ ಒದ್ದಾಟ

    ಬಿನ್ ಬ್ಯಾಗ್ ಮೇಲೆ ಮಂಜು, ಶುಭಾ ಕಣ್ಣು – ಡಿಎಸ್ ಒದ್ದಾಟ

    ಬಿಗ್‍ಬಾಸ್ ಈ ವಾರ ಮನೆಯ ಸ್ಪರ್ಧಿಗಳಿಗೆ ಒಂದೊಂದು ಸೀಕ್ರೆಟ್ ಟಾಸ್ಕ್ ನೀಡುತ್ತಾ ಬಂದಿದ್ದಾರೆ. ಅದರಂತೆ ಬಿಗ್‍ಬಾಸ್ ಈ ಬಾರಿ ದಿವ್ಯಾ ಸುರೇಶ್‍ಗೆ ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್‍ನನ್ನು ಪೂರ್ಣಗೊಳಿಸಲು ದಿವ್ಯಾ ಸುರೇಶ್ ಪಟ್ಟ ಕಷ್ಟ ಮಾತ್ರ ಅಷ್ಟಿಷ್ಟಲ್ಲ, ಆದರೂ ಎಷ್ಟೇ ಪ್ರಯತ್ನಿಸಿದರೂ ಈ ಟಾಸ್ಕ್ ಕಂಪ್ಲೀಟ್ ಮಾಡುವಲ್ಲಿ ಕೊನೆಗೆ ದಿವ್ಯಾ ಸುರೇಶ್ ವಿಫಲರಾಗಿದ್ದಾರೆ.

    ಬಿಗ್‍ಬಾಸ್ ಮನೆಯ ಸ್ಪರ್ಧಿಗಳ ಬಲು ಅಚ್ಚು-ಮೆಚ್ಚಿನ ಸೀಟ್ ಎಂದರೆ ಅದು ಬಿನ್‍ಬ್ಯಾಗ್. ಅದರಲ್ಲೂ ಮನೆಯಲ್ಲಿ ಎಷ್ಟೇ ಜಾಗ ಇದ್ದರೂ ಮಂಜು ಹಾಗೂ ಶುಭಾ ಮಾತ್ರ ಗಾರ್ಡನ್ ಎರಿಯಾಗೆ ಹೋಗಿ ಬಿನ್ ಬ್ಯಾಗ್‍ನನ್ನು ಹುಡುಕಿ ಅದರ ಮೇಲೆಯೇ ಕುಳಿತುಕೊಂಡು ಹರಟೆ ಹೊಡೆಯುತ್ತಾರೆ.

    ಸದ್ಯ ಬಿಗ್‍ಬಾಸ್ ಕರೆ ಮಾಡಿದಾಗ ಮಾತನಾಡಿದ ದಿವ್ಯಾ ಸುರೇಶ್‍ಗೆ ಈ ಮನೆಯಲ್ಲಿರುವ ಎರಡು ಬಿನ್‍ಬ್ಯಾಗ್ ಇದೆ. ಅದರ ಮೇಲೆ ಹೆಚ್ಚಾಗಿ ಯಾರು ಕುಳಿತುಕೊಳ್ಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಂಜು ಹಾಗೂ ಶುಭಾ ಪೂಂಜಾ ಎಂದು ದಿವ್ಯಾ ಸುರೇಶ್ ಉತ್ತರಿಸಿದ್ದಾರೆ. ಆಗ, ಬಿಗ್‍ಬಾಸ್ ನಾನು ನಿಮಗೆ ಒಂದು ಕೆಲಸ ಕೊಡುತ್ತೇನೆ. ನಾಳೆ ಸಂಜೆಯವರೆಗೂ ಮಂಜು ಹಾಗೂ ಶುಭಾ ಬಿನ್ ಬ್ಯಾಗ್ ಮೇಲೆ ಕುಳಿತುಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ.

    ನಂತರ ಮಧ್ಯಾಹ್ನ ಮಂಜು ಹಾಗೂ ಶುಭಾ ಬಿನ್‍ಬ್ಯಾಗ್ ಮೇಲೆ ಕುಳಿತುಕೊಳ್ಳಲು ಗಾರ್ಡನ್ ಏರಿಯಾದತ್ತ ಹೋಗುತ್ತಿರುತ್ತಾರೆ. ಈ ವೇಳೆ ದಿವ್ಯಾ ಸುರೇಶ್ ನಾನು ಶುಭಾ ಜೊತೆ ಮಾತನಾಡಬೇಕು, ನಾನು ಅವಳೊಂದಿಗೆ ಟೈಮ್ ಸ್ಪೆಂಡ್ ಮಾಡಿಲ್ಲ ಎಂದು ಅಡ್ಡಹಾಕಿದ್ದಾರೆ. ಆದರೂ ಕೇಳದ ಮಂಜು ಶುಭಾರನ್ನು ದರದರ ಎಂದು ಎಳೆದುಕೊಂಡು ಹೋಗುತ್ತಿರುತ್ತಾರೆ. ಈ ಮಧ್ಯೆ ನೀನು ಕೂಡ ನಮ್ಮ ಜೊತೆ ಕುಳಿತುಕೊಂಡು ಮಾತನಾಡು ಬಾ ಎಂದು ದಿವ್ಯಾ ಸುರೇಶ್‍ರನ್ನು ಕೂಡ ಎಳೆದುಕೊಂಡು ಹೋಗುತ್ತಾರೆ.

    ಈ ವೇಳೆ ಬೇಡ ಬೇಡ ಎಂದು ಎಷ್ಟೇ ತಡೆದರು, ದಿವ್ಯಾ ಸುರೇಶ್‍ರನ್ನು ದೂರ ತಳ್ಳಿ ಶುಭಾ ಹಾಗೂ ಮಂಜು ಬಿನ್ ಬ್ಯಾಗ್ ಮೇಲೆ ಕುಳಿತೆ ಬಿಡುತ್ತಾರೆ. ಒಟ್ಟಾರೆ ಟಾಸ್ಕ್ ಕಂಪ್ಲೀಟ್ ಮಾಡಲು ಎಷ್ಟೇ ಒದ್ದಾಡಿ, ಪರದಾಡಿದರೂ ದಿವ್ಯಾ ಸುರೇಶ್ ಸೋತುಹೋಗಿದ್ದಾರೆ. ಒಟ್ಟಾರೆ ಈ ದೃಶ್ಯ ನೋಡಿದ ವೀಕ್ಷರಿಗೆ ಸಖತ್ ಮಜಾ ನೀಡಿದೆ ಎಂದರೆ ತಪ್ಪಾಗಲಾರದು. ಇದನ್ನೂ ಓದಿ:ಮಂಜು ನಿದ್ದೆ ಹೋಗಿಸಿದ ಬಿಗ್‍ಬಾಸ್

  • ಮಂಜು ನಿದ್ದೆ ಹೋಗಿಸಿದ ಬಿಗ್‍ಬಾಸ್

    ಮಂಜು ನಿದ್ದೆ ಹೋಗಿಸಿದ ಬಿಗ್‍ಬಾಸ್

    ಬಿಗ್‍ಬಾಸ್ ಮನೆಯಲ್ಲಿ ರಾತ್ರಿ ಹೊತ್ತು ಬಿಟ್ಟರೆ ಹಗಲಿನಲ್ಲಿ ಸ್ಪರ್ಧಿಗಳು ನಿದ್ರೆ ಮಾಡುವಂತಿಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಆದರೂ ಮನಸ್ಸಿನಲ್ಲಿ ನಿದ್ದೆ ಮಾಡಬಾರದು ಅಂತ ಅಂದುಕೊಂಡರೂ ಕಣ್ಣುಗಳು ಮಾತು ಕೇಳಬೇಕಲ್ವಾ? ಆಗಾಗ ಕಣ್ಣುಗಳು ನಿದ್ರೆಗೆ ಜಾರಿಯೇ ಬಿಡುತ್ತದೆ. ಇನ್ನೂ ದೊಡ್ಮನೆಯಲ್ಲಿ ಸ್ಪರ್ಧಿಗಳು 5 ನಿಮಿಷ ನಿದ್ರೆಗೆ ಜಾರುವಂತಿಲ್ಲ, ಅಷ್ಟರಲ್ಲಿ ಎದ್ದೇಳು ಮಂಜುನಾಥ ಸಾಂಗ್ ಪ್ಲೇ ಮಾಡಿ ಬಿಗ್‍ಬಾಸ್ ಎದ್ದೇಳುವಂತೆ ಎಚ್ಚರಿಸುತ್ತಾರೆ. ಆದ್ರೆ ಈ ಬಾರಿ ನಿದ್ದೆ ಗುಂಗಲ್ಲಿ ಇದ್ದ ಮಂಜು ಹಾಗೂ ವೈಷ್ಣವಿಗೆ ಬಿಗ್‍ಬಾಸ್ ವಿಭಿನ್ನವಾಗಿ ಟ್ವಿಸ್ಟ್ ನೀಡುವ ಮೂಲಕ ನಿದ್ದೆ ಹೋಗಿಸಿದ್ದಾರೆ.

    ಹೌದು, ನಿದ್ರೆ ಕಣ್ಣಿನಲ್ಲಿದ್ದ ಮಂಜುಗೆ ಬಿಗ್‍ಬಾಸ್ ಕರೆ ಮಾಡಿ, ನಿಮಗೆ ನಿದ್ದೆ ಬರುತ್ತಿದ್ಯಾ? ನಿಮಗೆ ಅಷ್ಟೇನಾ ಅಥವಾ ಇನ್ನೂ ಯಾರಿಗಾದರೂ ನಿದ್ರೆ ಬರುತ್ತಿದ್ಯಾ ಎಂದು ಪ್ರಶ್ನಿಸಿದ್ದಾರೆ. ಆಗ ಮಂಜು ನನಗೆ ಹಾಗೂ ವೈಷ್ಣವಿ, ಶುಭಾಗೆ ನಿದ್ರೆ ಬರುತ್ತಿದೆ ಎಂದಿದ್ದಾರೆ. ಇದಕ್ಕೆ ಬಿಗ್‍ಬಾಸ್ ನಿಮಗೆ ಹಾಗೂ ವೈಷ್ಣವಿಗೆ ನಿದ್ದೆ ಹೋಗಿಸಲು ಚಟುವಟಿಕೆ ನೀಡಲಾ ಎಂದು ಕೇಳಿದ್ದಾರೆ. ಅದಕ್ಕೆ ಮಂಜು ಒಪ್ಪಿಕೊಂಡಿದ್ದಾರೆ. ಹೀಗಾಗಿ ಸ್ಟೋರ್ ರೂಮ್‍ನಲ್ಲಿ ಕೆಲವು ಚಟುವಟಿಕೆ ಸಾಮಾಗ್ರಿ ಹಾಗೂ ವಿವರಗಳನ್ನು ಕಳುಹಿಸಿಕೊಡುವುದಾಗಿ ಬಿಗ್‍ಬಾಸ್ ತಿಳಿಸಿದ್ದಾರೆ.

    ಅದರಂತೆ ಸ್ಟೋರ್ ರೂಮ್‍ಗೆ ಹೋಗಿ ನೋಡಿದ ಮಂಜುಗೆ ಅಕ್ಕಿ ಹಾಗೂ ಜೀರಿಗೆ ಕಂಡಿದೆ. ಅದನ್ನು ಎತ್ತಿಕೊಂಡು ಬಂದ ಮಂಜು ಅಕ್ಕಿ ಹಾಗೂ ಜೀರಿಗೆ ಕೊಟ್ಟು ಬೇರೆ ಮಾಡಿ ಅಂತ ಹೇಳಿದ್ದಿರಲ್ಲ ಬಿಗ್‍ಬಾಸ್ ಎಂದು ಗೋಳಾಡಿದ್ದಾರೆ. ಇದನ್ನು ಕಂಡು ಮನೆ ಮಂದಿಯೆಲ್ಲಾ ಎದ್ದು ಬಿದ್ದು ನಗುತ್ತಾ, ಅಕ್ಕಿ ಮತ್ತು ಜೀರಿಗೆಯನ್ನು ಬೇರೆ, ಬೇರೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

    ನಂತರ ಅಕ್ಕಿ ಹಾಗೂ ಜಿರಿಗೆ ಸೋಸುವುದಕ್ಕೆ ಕುಳಿತ ಮಂಜು ಸುಸ್ತಾಗಿ, ಒಳ್ಳೆ ಶಿಕ್ಷೆ ಕೊಟ್ರಿ ಬಿಗ್‍ಬಾಸ್, ಕತ್ತು ನೋವು ಬರುತ್ತಿದೆ, ಬಿಗ್‍ಬಾಸ್ ಸ್ವಲ್ಪ ಶಿಕ್ಷೆ ಕಡಿಮೆ ಮಾಡಿ ಎಂದು ಮಂಜು ಮನವಿ ಮಾಡಿಕೊಂಡಿದ್ದಾರೆ. ಕೊನೆಗೆ ಬಿಗ್‍ಬಾಸ್ ಅಕ್ಕಿ- ಜಿರಿಗೆಯನ್ನು ಬೇರ್ಪಡಿಸಿರುವುದು ಆಗಿದ್ದರೆ, ಮಂಜು, ವೈಷ್ಣವಿ ನಿದ್ದೆ ಹೋಗಿದ್ದರೆ ಎರಡನ್ನು ಹಿಂದಿರುಗಿಸುವಂತೆ ಸೂಚಿಸಿದ್ದಾರೆ.  ಇದನ್ನೂ ಓದಿ:ಹಾಲು ಕರೆದು, ಒಲೆ ಹಚ್ಚಿ ಖಡಕ್ ರೊಟ್ಟಿ ಮಾಡಿದ ಅದಿತಿ ಪ್ರಭುದೇವ

  • ಇಲಿ ಬಾಲ ಸುಟ್ಟಂತೆ ಶುಭಾ ವಿಲವಿಲನೆ ಒದ್ದಾಡುತ್ತಾಳೆ: ಮಂಜು

    ಇಲಿ ಬಾಲ ಸುಟ್ಟಂತೆ ಶುಭಾ ವಿಲವಿಲನೆ ಒದ್ದಾಡುತ್ತಾಳೆ: ಮಂಜು

    ಗಾರ್ಡನ್ ಏರಿಯಾದ ಸೋಫಾ ಮೇಲೆ ಶುಭಾ ಪುಂಜಾ ಹಾಗೂ ವೈಷ್ಣವಿ ಕುಳಿತುಕೊಂಡಿರುತ್ತಾರೆ. ಇದೇ ವೇಳೆ ಬಿನ್ ಬ್ಯಾಗ್ ಮೇಲೆ ಮಂಜು ಒಬ್ಬೊಂಟಿಯಾಗಿ ಕುಳಿತುಕೊಂಡಿರುತ್ತಾರೆ.

    ಆಗ ಮಂಜು ವೈಷ್ಣವಿಗೆ 10 ನಿಮಿಷ ಬಾ ಇಲ್ಲಿ ಎಂದು ಕರೆಯುತ್ತಾರೆ. ಈ ವೇಳೆ ಶುಭಾ, ಹೋಗಬೇಡ ಅವನು ಬೇಕು, ಬೇಕು ಅಂತ ಕರೆಯುತ್ತಿದ್ದಾನೆ. ನೀನು ಅಲ್ಲಿಗೆ ಹೋದರೆ ನಾನು ಅಲ್ಲಿಗೆ ಹೋಗ್ತೀನಿ ಅಂತ ಕರೆಯುತ್ತಿದ್ದಾನೆ. ನೀನು ಅಲ್ಲಿಗೆ ಹೋಗಬೇಡ ವೈಷ್ ಎಂದು ಹೇಳುತ್ತಾರೆ. ಆಗ ಮಂಜು, ಅದಕ್ಕಲ್ಲ ಏನೋ ಒಂದು ಚೂರು ಮಾತನಾಡಬೇಕು ಅದಕ್ಕೆ ಬಾ ಎಂದು ಕರೆದೆ. ತೊಂದರೆ ಇಲ್ಲ ನಿಮಗೆ ಇಷ್ಟ ಇಲ್ಲ ಅಂದರೆ ಬರಬೇಡಿ ಎಂದಾಗ ವೈಷ್ಣವಿ ಮಂಜು ಬಳಿ ಹೋಗುತ್ತಾರೆ.

    ನಂತರ ಮಂಜು ವೈಷ್ಣವಿಗೆ ಇನ್ನೂ 10 ನಿಮಿಷದಲ್ಲಿ ಶುಭಾ ಇಲ್ಲಿಗೆ ಬರುತ್ತಾಳೆ ನೋಡುತ್ತಿರು ಎನ್ನುತ್ತಾ, ದಿವ್ಯಾ ಉರುಡುಗರನ್ನು ಕರೆದು ಇಲ್ಲಿ ಕುಳಿತುಕೊಂಡು ನೋಡುತ್ತಿರು ಅವಳು ಇಲ್ಲಿಗೆ ಬರುತ್ತಾಳೆ. ಇಲಿ ಬಾಲ ಸುಟ್ಟಾಗ ಒದ್ದಾಡುತ್ತದೆ ಅಲ್ವಾ ಹಾಗೆ ಒದ್ದಾಡುತ್ತಾಳೆ ಎಂದು ಹೇಳುತ್ತಾರೆ. ಆಗ ಶುಭಾ ಮನಸ್ಸಿನಲ್ಲಿಯೇ ಬೈದುಕೊಂಡು ಮೇಲೆ ಎದ್ದೇಳುತ್ತಾರೆ.

    ಆಗ ಮಂಜು ವೈಷ್ಣವಿ ಜೊತೆ, ನೋಡುತ್ತಿರು ವಾಕಿಂಗ್ ಮಾಡುತ್ತೇನೆ ಎಂದು ಶುಭಾ ಬಿಲ್ಡಪ್ ನೀಡುತ್ತಾಳೆ ಎನ್ನುತ್ತಾರೆ. ಅದರಂತೆ ಶುಭಾ ವಾಕಿಂಗ್ ಮಾಡುವ ನೆಪದಲ್ಲಿ ಕೊನೆಗೆ ಮಂಜು ಬಳಿ ಬಂದು, ಸಾಧ್ಯವಿಲ್ಲ. ನನ್ನ ಕೈಯಲ್ಲಿ ಆಗುವುದಿಲ್ಲ. 10 ನಿಮಿಷ ಅಷ್ಟೇ ಎನ್ನುತ್ತಾರೆ. ಶುಭ ಹೊಡೆದ ಈ ಡೈಲಾಗ್ ಕೇಳಿ ವೈಷ್ಣವಿ ಹಾಗೂ ಮಂಜು ಎದ್ದುಬಿದ್ದು ನಗುತ್ತಾರೆ.

    ಸ್ವಾಭಿಮಾನಕ್ಕೆ ತಡೆದುಕೊಂಡು ಶುಭಾ ಕುಳಿತುಕೊಂಡಿರುತ್ತಾಳೆ ಅಷ್ಟೇ. ಆಮೇಲೆ ಜೀವ ತಡೆಯುವುದಿಲ್ಲ ಎಂದು ಮಂಜು ಮತ್ತೆ ರೇಗಿಸುತ್ತಾರೆ.

  • ಎಷ್ಟು ದಿನ ಅಂತ ನಾನು ಮುಖವಾಡ ಹಾಕಿಕೊಳ್ಳಲಿ: ಅರವಿಂದ್

    ಎಷ್ಟು ದಿನ ಅಂತ ನಾನು ಮುಖವಾಡ ಹಾಕಿಕೊಳ್ಳಲಿ: ಅರವಿಂದ್

    ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳಲ್ಲಿ ಕೆಲವರು ಮುಖವಾಡ ಹಾಕಿಕೊಂಡು ನಟಿಸಿದರೆ, ಇನ್ನೂ ಕೆಲವರು ತಾವು ಇದ್ದಂತೆಯೇ ಸಹಜ ರೀತಿಯಲ್ಲಿ ವರ್ತಿಸುತ್ತಾರೆ. ಸದ್ಯ ಬಿಗ್‍ಬಾಸ್ ಮನೆಯಲ್ಲಿ ಅರವಿಂದ್ ತಾವು ಮುಖವಾಡ ಧರಿಸಿರುವುದರ ಬಗ್ಗೆ ಬಹಿರಂಗವಾಗಿ ಕ್ಯಾಮೆರಾ ಮುಂದೆ ಹೇಳಿದ್ದಾರೆ.

    ಗಾರ್ಡನ್ ಏರಿಯಾದಲ್ಲಿ ಶುಭಾ ಪೂಂಜಾ, ಮಂಜು, ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಕುಳಿತುಕೊಂಡು ಮಾತನಾಡುತ್ತಿರುತ್ತಾರೆ. ಈ ವೇಳೆ ಶುಭಾ ಮಂಜುಗೆ ನೀನು ಗೋಂಗ್ರು ಕಪ್ಪೆ ತರ ಇದ್ಯಾ ಎನ್ನುತ್ತಾರೆ. ಆಗ ದಿವ್ಯಾ ಉರುಡುಗ ನಮ್ಮ ಊರಿನಲ್ಲಿ ಅದನ್ನು ಡೋಂಕ್ರು ಕಪ್ಪೆ ಎಂದು ಕರೆಯುತ್ತಾರೆ ಎಂದು ಹೇಳಿತ್ತಾರೆ.

    ಈ ವೇಳೆ ಸ್ವಿಮಿಂಗ್ ಪೂಲ್‍ನಲ್ಲಿ ಈಜುತ್ತಿದ್ದ ಅರವಿಂದ್‍ಗೆ ಶುಭಾ, ಇಲ್ಲಿ ನೋಡು ಅರವಿಂದ್ ನಾನು ಏನಾದರೂ ಹೇಳಿದರೆ ನಮ್ಮ ಊರಿನಲ್ಲಿ ಹೀಗೆ, ಹಾಗೆ ಅಂತಾಳೆ ಎಂದು ಕಂಪ್ಲೇಂಟ್ ಮಾಡುತ್ತಾರೆ. ನಿಜವಾಗಿಯೂ ನಮ್ಮ ಕಡೆ ದಪ್ಪಗಿರುವ ಕಪ್ಪೆಗೆ ಡೋಂಕ್ರು ಕಪ್ಪೆ ಎಂದು ಕರೆಯುತ್ತಾರೆ. ಸರಿ ಕಪ್ಪೆ ಇನ್ನೂ ಚಿಕ್ಕದಾಗಿರುವಾಗ ಅದಕ್ಕೆ ಏನೆಂದು ಕರೆಯುತ್ತಾರೆ ಎಂದು ದಿವ್ಯಾ ಉರುಡುಗ ಮಂಜುಗೆ ಕೇಳುತ್ತಾರೆ.

    ಇದಕ್ಕೆ ಮಂಜು ನಮ್ಮ ಕಡೆ ಆ ಕಪ್ಪೆಗೆ ದಿವ್ಯಾ ಉರುಡುಗ ಎಂದು ಕರೆಯುತ್ತೇವೆ ಎನ್ನುತ್ತಾರೆ. ಈ ವೇಳೆ ಅರವಿಂದ್ ಚಪ್ಪಾಳೆ ತಟ್ಟುತ್ತಾ ನಗುತ್ತಾರೆ. ಆಗ ದಿವ್ಯಾ ಉರುಡುಗ ನನ್ನನ್ನು ಕಪ್ಪೆ ಅಂದಿದ್ದಕ್ಕೆ ಸೆಲೆಬ್ರೆಟ್ ಮಾಡುತ್ತಿದ್ದಾರಾ ಎಂದಾಗ ಮಂಜು, ಸತ್ಯ ಹೇಳಿದರೆ ನಮ್ಮ ಹುಡುಗ ತುಂಬಾ ಎಕ್ಸೈಟ್ ಆಗಿಬಿಡುತ್ತಾನೆ. ಸತ್ಯ ಅವನ ಮನಸ್ಸಿನಲ್ಲಿಯೂ ಇಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ. ಅವನು ಎಷ್ಟು ದಿನ ಅಂತ ಕಂಟ್ರೋಲ್ ಮಾಡುತ್ತಾನೆ. 107 ದಿನಗಳಲ್ಲಿ ಇಷ್ಟು ಯಾವತ್ತು ಅರವಿಂದ್ ನಕ್ಕಿರಲಿಲ್ಲ ಎಂದು ಮಂಜು ಹೇಳುತ್ತಾರೆ.

    ಈ ವೇಳೆ ಅರವಿಂದ್ ಎಷ್ಟು ದಿನ ಅಂತ ನಾನು ಮುಖವಾಡ ಹಾಕಿಕೊಳ್ಳಲಿ ಎಂದು ಹೇಳುತ್ತಾರೆ. ಈ ವೇಳೆ ಎಲ್ಲರೂ ಜೋರಾಗಿ ನಕ್ಕರೆ, ದಿವ್ಯಾ ಉರುಡುಗ, ಓ ಮೈ ಗಾಡ್ ಎಂದು ಹೇಳಿ ನಗುತ್ತಾರೆ. ನಂತರ ಮಂಜು ನೀನು ‘ಕೆ’ ಎಂದು ಕರೆಯುವುದು ಕಪ್ಪೆ ಅಂತ ನಾ, ಅಯ್ಯೋ ನನಗೆ ಇಷ್ಟು ದಿನ ಗೊತ್ತೆ ಆಗಲಿಲ್ವಾಲ್ಲ, ಒ.. ಕೆ… ಕಪ್ಪೆ ಎಂದು ದಿವ್ಯಾ ಅವರನ್ನು ಅಣುಕಿಸುತ್ತಾರೆ.