Tag: Mandya Ramesh

  • ಸಾರ್ವಜನಿಕರಲ್ಲಿ ವಿನಂತಿ: ಸೆನ್ಸಾರ್ ಮುಗಿಸಿಕೊಂಡು ಥೇಟರಿಗೆ ಬರಲು ರೆಡಿ!

    ಸಾರ್ವಜನಿಕರಲ್ಲಿ ವಿನಂತಿ: ಸೆನ್ಸಾರ್ ಮುಗಿಸಿಕೊಂಡು ಥೇಟರಿಗೆ ಬರಲು ರೆಡಿ!

    ಬೆಂಗಳೂರು: ಟೀಸರ್ ಮೂಲಕವೇ ವ್ಯಾಪಕ ಚರ್ಚೆ, ಕುತೂಹಲ ಹುಟ್ಟು ಹಾಕಿರೋ ಚಿತ್ರ `ಸಾರ್ವಜನಿಕರಲ್ಲಿ ವಿನಂತಿ’. ಯಾವ ಸದ್ದುಗದ್ದಲವೂ ಇಲ್ಲದೇ ಚಿತ್ರೀಕರಣ ಮುಗಿಸಿಕೊಂಡು ಆ ನಂತರ ಕೆಲಸ ಕಾರ್ಯಗಳ ಮೂಲಕವೇ ಸೆನ್ಸೇಷನ್ ಕ್ರಿಯೇಟ್ ಮಾಡುತ್ತವಲ್ಲಾ? ಅಂಥಾ ಚಿತ್ರಗಳನ್ನು ಪ್ರೇಕ್ಷಕರು ಗಂಭೀರವಾಗಿ ಪರಿಗಣಿಸುತ್ತಾರೆ. ಈ ವೆರೈಟಿಯ ಚಿತ್ರಗಳಿಗೆ ಗೆಲುವು ಗ್ಯಾರೆಂಟಿ ಎಂಬಂಥಾ ನಂಬಿಕೆಯೂ ಇದೆ. ಇಂಥಾ ನಂಬಿಕೆ ಹುಟ್ಟು ಹಾಕಿರೋ ಸಾರ್ವಜನಿಕರಲ್ಲಿ ವಿನಂತಿ ಸೆನ್ಸಾರ್ ಮುಗಿಸಿಕೊಂಡು ಥೇಟರಿನತ್ತ ಮುಖ ಮಾಡಿದೆ.

    ಕೃಪಾ ಸಾಗರ್ ನಿರ್ದೇಶನದ ಈ ಚಿತ್ರಕ್ಕೆ ಸೆನ್ಸಾರ್ ಕಡೆಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಬಿಡುಗಡೆಯ ದಿನಾಂಕವನ್ನೂ ಘೋಷಿಸಿದೆ. ಈ ನಿಟ್ಟಿನಲ್ಲಿ ಹೇಳೋದಾದರೆ ಇದೇ ತಿಂಗಳ 21ರಂದು ತೆರೆಗಾಣಲಿದೆ.

    ಈಗಾಗಲೇ ಒಂದಷ್ಟು ವರ್ಷಗಳಿಂದ ಯೋಗರಾಜ ಭಟ್ ಸೇರಿದಂತೆ ಅನೇಕ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವವರು ಕೃಪಾ ಸಾಗರ್. ಈ ಅವಧಿಯ ತುಂಬಾ ಪ್ರೇಕ್ಷಕರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡಿರೋ ಅವರು ಸಾಮಾಜಿಕ ಕಾಳಜಿ ಇರೋ ಕಥಾ ಹಂದರವನ್ನು ಈ ಮೂಲಕ ಪಕ್ಕಾ ಕಮರ್ಶಿಯಲ್ ವೇನಲ್ಲಿ ಹೇಳಿದ್ದಾರಂತೆ.

    ಈ ಚಿತ್ರದಲ್ಲಿ ಮದನ್ ರಾಜ್ ಮತ್ತು ಅಮೃತಾ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಮಂಡ್ಯ ರಮೇಶ್, ರಮೇಶ್ ಪಂಡಿತ್ ಮುಂತಾದವರ ಅದ್ಧೂರಿ ತಾರಾಗಣ ಈ ಚಿತ್ರಕ್ಕಿದೆ. ಈ ಸಮಾಜದಲ್ಲಿ ಮೇಲು ನೋಟಕ್ಕೆ ಗೊತ್ತಾಗುವಂಥಾ ಅದೆಷ್ಟೋ ಬಗೆಯ ಅಪರಾಧ ಪ್ರಕರಣಗಳಿವೆ. ಆದರೆ ನಮ್ಮೆಲ್ಲರ ಬೆನ್ನ ಹಿಂದೆ ನಡೆಯೋ ನಿಗೂಢ ಕ್ರೈಮುಗಳದ್ದೊಂದು ಜಗತ್ತಿದೆ. ಅಂಥಾ ವಿರಳ ಸನ್ನಿವೇಶಗಳನ್ನು ಸೇರಿಸಿಕೊಂಡು ಸಾರ್ವಜನಿಕರೆಲ್ಲ ಗಮನಹರಿಸಲೇ ಬೇಕಾದ ಕಥೆಯನ್ನು ಥ್ರಿಲ್ಲರ್ ಶೈಲಿಯಲ್ಲಿ ಹೇಳಲಾಗಿದೆಯಂತೆ.

  • ಸಾರ್ವಜನಿಕರಲ್ಲಿ ವಿನಂತಿ: ಟೀಸರ್ ಸೃಷ್ಟಿಸಿದ ಸೌಂಡು ಸೂಪರ್!

    ಸಾರ್ವಜನಿಕರಲ್ಲಿ ವಿನಂತಿ: ಟೀಸರ್ ಸೃಷ್ಟಿಸಿದ ಸೌಂಡು ಸೂಪರ್!

    ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಯುವ ಮನಸುಗಳ ಆಗಮನವಾಗಿ ಹೊಸ ಆಲೋಚನೆಗಳ ಹರಿವು ಶುರುವಾಗಿದೆ. ಈ ಕಾರಣದಿಂದಲೇ ಭಿನ್ನವಾದ ಒಂದಷ್ಟು ಚಿತ್ರಗಳು ಪ್ರೇಕ್ಷಕರ ಮುಂದೆ ಅನಾವರಣಗೊಳ್ಳುತ್ತಿವೆ. ಈ ಸಾಲಿನಲ್ಲಿ ದಾಖಲಾಗುತ್ತಲೇ ಗೆಲುವಿನ ಛಾಪು ಮೂಡಿಸಬಲ್ಲ ಚಿತ್ರವೊಂದರ ಟೀಸರ್ ಈಗ ಪ್ರೇಕ್ಷಕರ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇಂಥಾದ್ದೊಂದು ಟೀಸರ್ ಹವಾ ಸೃಷ್ಟಿಸಿರೋ ಸಿನಿಮಾ ‘ಸಾರ್ವಜನಿಕರಲ್ಲಿ ವಿನಂತಿ’!

    ಇದು ಹೊಸಬರೇ ಸೇರಿಕೊಂಡು ಮಾಡಿರೋ ಚಿತ್ರ. ಕೃಪಾ ಸಾಗರ್ ಕಮರ್ಶಿಯಲ್ ವೇನಲ್ಲಿಯೇ ಸಾಮಾಜಿಕ ಸಂದೇಶ ಇರುವ ಕಥೆಯೊಂದನ್ನು ಈ ಸಿನಿಮಾ ಮೂಲಕ ಹೇಳಲು ಮುಂದಾಗಿದ್ದಾರಂತೆ. ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರದ ಟೀಸರ್ ಮಾತ್ರ ತುಂಬು ಭರವಸೆ ಹುಟ್ಟಿಸುವಂತಿದೆ. ಸೂಕ್ಷ್ಮವಂತಿಕೆಯ ಮನಸುಗಳಿಗೆಲ್ಲ ಗತ ಕಾಲದ ಪರಿಮಳವನ್ನು ಪರಿಚಯಿಸುತ್ತಲೇ ಆರಂಭವಾಗೋ ಈ ಸಿನಿಮಾ ಕ್ರೈಂ ಥ್ರಿಲ್ಲರ್ ಜಾನರಿನದ್ದೆಂಬ ಹೊಳಹೂ ಸಿಕ್ಕಿದೆ. ಇದಲ್ಲದೆ ಇಡೀ ಚಿತ್ರ ಹೊಸತೇನನ್ನೋ ಒಡಲಲ್ಲಿಟ್ಟುಕೊಂಡಿದೆ ಎಂಬ ಸುಳಿವೂ ಪ್ರೇಕ್ಷಕರಿಗೆ ಸಿಕ್ಕಿ ಬಿಟ್ಟಿದೆ.

    ಸಾರ್ವಜನಿಕರಲ್ಲಿ ವಿನಂತಿ ಚಿತ್ರವನ್ನು ಕೃಪಾ ಸಾಗರ್ ನಮ್ಮ ನಡುವೆಯೇ ನಡೆಯೋ ಘಾತುಕ ಘಟನಾವಳಿಗಳ ಸ್ಫೂರ್ತಿಯಿಂದ ಕಥೆ ಹೊಸೆದು ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ ಈ ಚಿತ್ರವನ್ನು ಸದಾ ಸಾರ್ವಜನಿಕರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರೋ ಪೊಲೀಸರಿಗೆ ಅರ್ಪಿಸಲಾಗಿದೆ. ಕಥೆಯ ವಿಚಾರಕ್ಕೆ ಬಂದರೆ ಪೊಲೀಸರ ಪಾತ್ರ ಪ್ರಧಾನವಾಗಿದೆಯಂತೆ. ಪೊಲೀಸರಿಗೆಂದೇ ವಿಶೇಷ ಹಾಡೊಂದನ್ನು ಚಿತ್ರತಂಡ ರೆಡಿ ಮಾಡಿದೆ. ಅದನ್ನು ವಿಜಯ್ ಪ್ರಕಾಶ್ ಹಾಡಿದ್ದಾರಂತೆ.

    ಮದನ್ ರಾಜ್ ಮತ್ತು ಅಮೃತಾ ಈ ಮೂಲಕ ನಾಯಕ ನಾಯಕಿಯರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮಂಡ್ಯ ರಮೇಶ್, ರಮೇಶ್ ಪಂಡಿತ್ ಸೇರಿದಂತೆ ಅದ್ಧೂರಿ ತಾರಾಗಣ ಈ ಚಿತ್ರಕ್ಕಿದೆ. ಈಗಾಗಲೇ ಟೀಸರ್‍ಗೆ ಸಿಗುತ್ತಿರೋ ಭಾರೀ ಮೆಚ್ಚುಗೆ ಚಿತ್ರತಂಡಕ್ಕೆ ಹೊಸ ಹುರುಪು ತುಂಬಿದೆ. ಅದೇ ಜೋಶ್ ನಲ್ಲಿ ಆದಷ್ಟು ಬೇಗನೆ ತೆರೆಗೆ ಬರಲು ಸಿದ್ಧತೆ ನಡೆಯುತ್ತಿದೆ.

  • ಮರ್ಡರ್ ಮಿಸ್ಟರಿಯನ್ನು `ವೆನಿಲ್ಲಾ’ ಐಸ್‍ಕ್ರೀಂನೊಂದಿಗೆ ಸವಿಯಿರಿ!

    ಮರ್ಡರ್ ಮಿಸ್ಟರಿಯನ್ನು `ವೆನಿಲ್ಲಾ’ ಐಸ್‍ಕ್ರೀಂನೊಂದಿಗೆ ಸವಿಯಿರಿ!

    ಮರ್ಡರ್ ಮಿಸ್ಟರಿಯ ಕಥೆಗಳಿಗೆ ಕೊರತೆಯಿಲ್ಲ. ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ಬಂದಿದ್ದರೂ ಕಥೆಯನ್ನು ಸರಿಯಾಗಿ ನಿರೂಪಿಸದ ಕಾರಣ ಸಿನಿಮಾಗಳಿಗೆ ಸೋಲಾಗುತ್ತದೆ. ಆದರೆ ಸದಭಿರುಚಿಯ ಸಿನಿಮಾಗಳ ನಿರ್ದೇಶಕ ಎಂದೇ ಪ್ರಸಿದ್ಧರಾಗಿರುವ ಜಯತೀರ್ಥ ಅವರು ಸಿನಿ ಪ್ರಿಯರ ನಿರೀಕ್ಷೆಗಳನ್ನು ಹುಸಿಗೊಳಿಸದೇ ಸುಂದರವಾಗಿ ಸವಿಯಲು `ವೆನಿಲ್ಲಾ’ವನ್ನು ನಿಮ್ಮ ಮುಂದಿಟ್ಟಿದ್ದಾರೆ.

    ಒಂದು ಭಯಾನಕ ಕೊಲೆ, ಕ್ಷಣಕ್ಷಣಕ್ಕೂ ರೋಚಕ ಟ್ವಿಸ್ಟ್, ಕೊಲೆಗೂ ನಾಯಕ ನಟಿಗೂ ಇರೋ ಸಂಬಂಧ ಏನು? ಕೊಲೆ ಮಾಡಿದ್ದು ಯಾಕೆ? ಕೊಲೆ ಮಾಡಿದವರು ಯಾರು? ಈ ರೀತಿಯಾಗಿ ಪ್ರತಿಹಂತದಲ್ಲಿ ವೀಕ್ಷಕರಿಗೆ ರೋಚಕತೆಯನ್ನು ತೋರಿಸುವಲ್ಲಿ ಬ್ಯೂಟಿಫುಲ್ ಮನಸುಗಳು ಚಿತ್ರದ ಯಶಸ್ಸಿನಲ್ಲಿರುವ ನಿರ್ದೇಶಕ ಜಯತೀರ್ಥ ಯಶಸ್ವಿಯಾಗಿದ್ದಾರೆ.

    ಮರ್ಡರ್, ಒಂದು ಭಯಾನಕ ರೋಗ ಮತ್ತು ಎಂಥಾ ಕಾಯಿಲೆಗಳನ್ನೂ ವಾಸಿ ಮಾಡಬಲ್ಲ ಪ್ರಾಂಜಲ ಪ್ರೀತಿಯ ಸುತ್ತಾ ಸುತ್ತುವ ಈ ಕಥೆಯಲ್ಲಿ ನಾಯಕ ಮತ್ತು ನಾಯಕಿ ಬಾಲ್ಯ ಸ್ನೇಹಿತರು. ಈ ನಡುವೆ ನಾಯಕಿಯ ಕಡೆಯಿಂದ ಅಚಾನಕ್ಕಾಗುವ ಒಂದು ಆಕ್ಸಿಡೆಂಟ್, ಅದಕ್ಕೆ ತಲೆ ಕೊಟ್ಟು ಹೋರಾಡುವ ಹೀರೋ ಹೀಗೆ ಒಂದು ಚಿತ್ರಕ್ಕೆ ಏನೆಲ್ಲ ಫ್ಲೇವರ್ ಗಳು ಬೇಕೋ ಆ ಎಲ್ಲ ಫ್ಲೇವರ್ ಗಳ ಘಮ ವೆನಿಲ್ಲಾದಲ್ಲಿದೆ.

    ಮಂಡ್ಯ ರಮೇಶ್ ಗರಡಿಯಲ್ಲಿ ಪಳಗಿ ರಂಗಭೂಮಿಯಲ್ಲಿ ಸೈ ಎನಿಸಿ ಉತ್ತಮ ಕಥೆಯ ಮೂಲಕವೇ ಕನ್ನಡ ಚಿತ್ರದಲ್ಲಿ ಎಂಟ್ರಿಯಾಗಬೇಕು ಎಂದು ಕನಸು ಕಾಣುತ್ತಿದ್ದ ಅವಿನಾಶ್ ಅವರು ಅನುಭವಿ ನಟನಂತೆ ಅಭಿನಯಿಸಿದ್ದಾರೆ. ಅವಿನಾಶ್ ಮತ್ತು ಸ್ವಾತಿ ಕೊಂಡೆ ನಾಯಕ ನಾಯಕಿಯರಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಪಯಣ ರವಿಶಂಕರ್ ಪೊಲೀಸ್ ಆಫಿಸರ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರತೀ ಪಾತ್ರಗಳೂ ಕಾಡುವಂತೆ ಮೂಡಿ ಬಂದಿದ್ದು ಕಿರಣ್ ಹಂಪಾಪುರ ಅವರ ಛಾಯಾಗ್ರಹಣ ಮತ್ತು ಹಿನ್ನಲೆ ಸಂಗೀತವಿದೆ. ಪ್ರತೀ ಕ್ಷಣವೂ ಕುತೂಹಲವನ್ನು ಮೂಡಿಸುವ `ವೆನಿಲ್ಲಾ’ವನ್ನು ಥಿಯೇಟರ್ ನಲ್ಲಿ ಕುಳಿತು ಚೆನ್ನಾಗಿ ಸವಿಯಬಹುದು.

     

  • ಸ್ಟಾರ್ ಮಸಾಜ್ : ಮಂಡ್ಯ ರಮೇಶ್, ಸಾಧು ವಿರುದ್ಧ ಯುವತಿಯಿಂದ ದೂರು

    ಸ್ಟಾರ್ ಮಸಾಜ್ : ಮಂಡ್ಯ ರಮೇಶ್, ಸಾಧು ವಿರುದ್ಧ ಯುವತಿಯಿಂದ ದೂರು

    ಮೈಸೂರು: ಮಸಾಜ್ ಸೆಂಟರ್ ನಲ್ಲಿ  ಲೈಂಗಿಕ ದೌರ್ಜನ್ಯ ಕೇಸ್‍ಗೆ ಟ್ವಿಸ್ಟ್ ಸಿಕ್ಕಿದ್ದು ದೌರ್ಜನ್ಯಕ್ಕೆ ಒಳಗಾದ ಯುವತಿ ಕನ್ನಡದ ಹಾಸ್ಯ ನಟರಾದ ಸಾಧುಕೋಕಿಲ ಮತ್ತು ಮಂಡ್ಯ ರಮೇಶ್ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ.

    ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಸ್ಪಾ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ನಲ್ಲಿದ್ದ ಓರ್ವ ಯುವತಿಯನ್ನು ರಕ್ಷಿಸಿ, ಸ್ಪಾ ಮಾಲೀಕ ರಾಜೇಶ್ ನನ್ನು ಬಂಧಿಸಿದ್ದರು.  ಇದೇ ವೇಳೆ ಹಾಸ್ಯ ನಟರಾದ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ಸಹ ಈ ಕೇಂದ್ರಕ್ಕೆ ಆಗಮಿಸಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದರು ಎಂದು ಯುವತಿ ಆರೋಪಿಸಿ ಈಗ ದೂರು ನೀಡಿದ್ದಾಳೆ.

    ದೂರಿನಲ್ಲಿ ಏನಿದೆ?
    ಬಾಡಿ ಮಸಾಜ್ ಹೆಸರಲ್ಲಿ ಸಾಧು ಕೋಕಿಲ, ಮಂಡ್ಯ ರಮೇಶ್ ಬಂದು ಕಿರುಕುಳ ನೀಡಿದ್ದಾರೆ. ಮಸಾಜ್ ಪಾರ್ಲರ್ ಗೆ ಎರಡು ಬಾರಿ ಭೇಟಿ ನೀಡಿದ್ದಾರೆ. ಈ ವೇಳೆ ತಮ್ಮ ಖಾಸಗಿ ಅಂಗಗಳನ್ನು ಮುಟ್ಟುವಂತೆ ಒತ್ತಾಯಸಿದ್ದರು. ಅಷ್ಟೇ ಅಲ್ಲದೇ ನನ್ನ ಗುಪ್ತಾಂಗವನ್ನು ಮುಟ್ಟುತ್ತಿದ್ದರು. ಹಣದ ಆಮಿಷ ತೋರಿಸಿ ಇಬ್ಬರೂ ಲೈಂಗಿಕ ಸುಖಕ್ಕೆ ಒತ್ತಾಯಿಸಿದ್ದರು. ನಾನು ಒಪ್ಪದೇ ಇದ್ದಾಗ ಮಾಲೀಕನಿಗೆ ಹೇಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ನೊಂದ ಯುವತಿ ಲಿಖಿತ ದೂರು ನೀಡಿದ್ದಾಳೆ.

    ಬ್ಯೂಟಿ ಪಾರ್ಲರ್ ಅಂತಾ ಕೆಲಸಕ್ಕೆ ಕರೆತಂದಿದ್ದರು. ಮಸಾಜ್ ಮಾಡುವ ಕೆಲಸವೆಂದು ನನಗೆ ಗೊತ್ತಿರಲಿಲ್ಲ. ಪಾಂಡವಪುರದ ಬಳೆ ಅಂಗಡಿಯಲ್ಲಿ ಪರಿಚಯವಾಗಿದ್ದು, ನನ್ನನ್ನು ಇಲ್ಲಿ ಕೆಲಸಕ್ಕೆ ಸೇರಿಸಿದ್ದರು. ನನಗೆ ತೊಂದರೆ ಆಗುತ್ತಿದೆ ಅಂತಾ ಹೇಳಿದ್ದಕ್ಕೆ ಅವರು ಹೇಳಿದಂತೆ ಸಹಕರಿಸು ಎಂದು ಮಾಲೀಕ ರಾಜೇಶ್ ಹೇಳಿದ್ದ. ಅವನು ಕೂಡ ನನ್ನ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ ಮಾಡಿದ್ದ. ಪಾರ್ಲರ್ ಗೆ ಬೆಂಗಳೂರಿನಿಂದ ಮೂವರು ಪೊಲೀಸ್ ಅಧಿಕಾರಿಗಳು ಬಂದಿದ್ದರು. ಅವರೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅವರು ಯಾರೆಂದು ನನಗೆ ಗೊತ್ತಿಲ್ಲ. ಆದರೆ ರಾಜೇಶ್ ಇದನ್ನ ನನ್ನ ಬಳಿ ಹೇಳಿ ಸಹಕರಿಸುವಂತೆ ತಾಕೀತು ಮಾಡುತ್ತಿದ್ದ ಎಂದು ದೂರಿನಲ್ಲಿ ಹೇಳಿದ್ದಾಳೆ.

    ನೊಂದ ಯುವತಿ ಈ ಹಿಂದೆ ಮೈಸೂರಿನ ಒಡನಾಡಿ ಸಂಸ್ಥೆಗೆ ಪತ್ರದ ಮೂಲಕ ತನ್ನ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಸಿದ್ದಳು. ಪತ್ರದ ಮಾಹಿತಿ ಪಡೆದ ಒಡನಾಡಿ ಸಂಸ್ಥೆ ಸರಸ್ವತಿಪುರಂ ಠಾಣೆಯ ಪೊಲೀಸರು ಹಾಗೂ ಮಹಿಳಾ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಿ ಯುವತಿಯನ್ನ ರಕ್ಷಿಸಲಾಗಿದೆ.

    ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಳ್ಳಿಯೊಂದರ ನಿವಾಸಿಯಾಗಿರುವ ಯುವತಿ ಸಿನಿಮಾಗಳಲ್ಲಿ ಅವಕಾಶ ಕೊಡಿಸಲಾಗುತ್ತದೆ ಎಂದು ನಂಬಿಸಿ ಸ್ಪಾ ಮಾಲೀಕ ರಾಜೇಶ್ ಮೈಸೂರಿಗೆ ಕರೆದುಕೊಂಡು ಬಂದಿದ್ದನು. ಸಿನಿಮಾದಲ್ಲಿ ಅವಕಾಶ ಸಿಗುವರೆಗೂ ಸ್ಪಾ ನಲ್ಲಿ ಫ್ರೀಯಾಗಿ ಕೆಲಸ ಮಾಡಬೇಕೆಂದು ಷರತ್ತು ವಿಧಿಸಲಾಗಿತ್ತು. ರಾಜೇಶ್ ಈ ಹಿಂದೆ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದ ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಹೇಳಿದ್ದಾರೆ.

    ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯುವತಿ, ಮಸಾಜ್ ಸೆಂಟರ್ ಗೆ ಬಂದವರು ಸಾಧುಕೋಕಿಲಾ, ಮಂಡ್ಯ ರಮೇಶ್ ಎನ್ನುವುದು ನನಗೆ ಆರಂಭದಲ್ಲಿ ತಿಳಿದಿರಲಿಲ್ಲ. ಆದರೆ ನಂತರ ಚಲನ ಚಿತ್ರಗಳಲ್ಲಿ ಇವರು ಅಭಿನಯಿಸುರುವುದನ್ನು ನೋಡಿದ ಬಳಿಕ ಇಲ್ಲಿಗೆ ಬಂದವರು ಅವರೇ ಎನ್ನುವುದು ಗೊತ್ತಾಯಿತು ಎಂದು ಹೇಳಿದ್ದಾಳೆ.

    ಪೊಲೀಸರ ವಿರುದ್ಧ ದೂರು: ಸೆಕ್ಸ್ ಸ್ಕ್ಯಾಂಡಲ್ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಯತ್ನಿಸಿದ್ದಾರೆ ಎಂದು ಆರೋಪಿಸಿ ಒಡನಾಡಿ ಸಂಸ್ಥೆ ದೂರು ನೀಡಿದೆ. ಸರಸ್ವತಿಪುರಂ ಪೊಲೀಸ್ ಠಾಣೆ ಹೆಡ್ ಕಾನ್ಸ್ ಟೇಬಲ್ ಧನಪಾಲ್ ವಿರುದ್ಧ  ಒಡನಾಡಿ ಸಂಸ್ಥೆಯ ಗಾಯಿತ್ರಿದೇವಿ ದೂರು ದಾಖಲು ಮಾಡಿದ್ದಾರೆ.

    ಒಂದೇ ವಾಹನದಲ್ಲಿ ಆರೋಪಿ ಹಾಗೂ ಸಂತ್ರಸ್ತೆಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಆರೋಪಿ ರಾಜೇಶ್ ಸಂತ್ರಸ್ತ ಯುವತಿಯ ಕಾಲು ಹಿಡಿದು ಕ್ಷಮಾಪಣೆ ಕೇಳಲು ಪೊಲೀಸರು ಅವಕಾಶ ನೀಡಿದ್ದಾರೆ. ಯುವತಿಯ ಮನವೊಲಿಸಲು ಪೊಲೀಸರೇ ಪ್ರೇರಣೆ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

    https://www.youtube.com/watch?v=xm-cMvGLmvQ

    ರಾಜೇಶ್- ಸ್ಪಾ ಸೆಂಟರ್ ಮಾಲೀಕ