Tag: mallikarjuna kharge

  • ರೆಸಾರ್ಟ್, ಟೆಂಪಲ್ ರನ್ ಬಿಟ್ಟರೆ ಸಿಎಂಗೆ ಏನೂ ಕೆಲಸವಿಲ್ಲ: ವಿ. ಸೋಮಣ್ಣ ಟಾಂಗ್

    ರೆಸಾರ್ಟ್, ಟೆಂಪಲ್ ರನ್ ಬಿಟ್ಟರೆ ಸಿಎಂಗೆ ಏನೂ ಕೆಲಸವಿಲ್ಲ: ವಿ. ಸೋಮಣ್ಣ ಟಾಂಗ್

    ಲಬುರಗಿ: ಒಂದೆಡೆ ರೆಸಾರ್ಟ್ ಇನ್ನೊಂದೆಡೆ ಟೆಂಪಲ್ ರನ್, ಇವೆರಡು ಬಿಟ್ಟರೆ ಸಿಎಂ ಕುಮಾರಸ್ವಾಮಿ ಅವರಿಗೆ ಏನೂ ಕೆಲಸವಿಲ್ಲ ಅನಿಸುತ್ತೆ ಎಂದು ಚಿಂಚೋಳಿಯಲ್ಲಿ ಬಿಜೆಪಿ ಶಾಸಕ ವಿ. ಸೋಮಣ್ಣ ವ್ಯಂಗ್ಯವಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ವಿ.ಸೋಮಣ್ಣ, ಕಾಂಗ್ರೆಸ್ ನವರಿಗೆ ಅಸ್ತಿತ್ವವೇ ಇಲ್ಲ. ಅವರು ತೋಡಿಕೊಂಡಿರುವ ಗುಂಡಿಯಲ್ಲಿ ಅವರೇ ಬಿದ್ದು ಹೋಗುತ್ತಾರೆ. ಯಾವತ್ತೂ ಕೂಡಾ ಕಲಿಯುಗ ಅಷ್ಟು ಸುಲಭ ಇಲ್ಲ. ಅವರ ಅವನತಿಯನ್ನು ಅವರೇ ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ. ಒಂದೆಡೆ ರೆಸಾರ್ಟ್ ಇನ್ನೊಂದೆಡೆ ಟೆಂಪಲ್ ರನ್, ಇವೆರಡು ಬಿಟ್ಟರೆ ಸಿಎಂ ಕುಮಾರಸ್ವಾಮಿ ಅವರಿಗೆ ಏನೂ ಕೆಲಸವಿಲ್ಲ ಅನಿಸುತ್ತೆ ಎಂದು ಟೀಕಿಸಿದರು.

    ಬಸವಣ್ಣನವರ ವಿಷಯವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಮುಂದಾದರೆ ಅವರಂತಹ ಶತ ದಡ್ಡರು ಯಾರೂ ಇಲ್ಲ. ಜನರ ಕಷ್ಟ ಕೇಳಲು ಒಬ್ಬ ಅಧಿಕಾರಿ, ಸಿಎಂ ಇಲ್ಲ ಅನ್ನೋದು ವಿಪರ್ಯಾಸನಾ ಅಥವಾ ಹುಡುಗಾಟನಾ ಅಂತಾ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದರು.

    ಮಲ್ಲಿಕಾರ್ಜುನ ಖರ್ಗೆ ಸಾಹೇಬರು ದೊಡ್ಡ ನಾಯಕರು. ತುಂಬಾ ದಿನ ಕಣ್ಣು ಮುಚ್ಕೊಂಡು ಹಾಲು ಕುಡಿಯಲು ಆಗಲ್ಲ. ಬೆಕ್ಕು ಕಣ್ಣು ಮುಚ್ಕೊಂಡು ಹಾಲು ಕುಡಿದ ಹಾಗೆ ನಾವು ಕೆಲಸ ಮಾಡಬಹುದು ಎಂಬ ಕಾಲ ಹೊರಟುಹೋಗಿದೆ. ಅವರು ಮಠಕ್ಕಾದರೂ ಹೋಗಲಿ, ದೇವಸ್ಥಾನಕ್ಕಾದರೂ ಹೋಗಲಿ. ಇನ್ನು ಮುಂದಾದರೂ ಅವರು ಆತ್ಮವನ್ನು ಶುದ್ಧವಾಗಿ ಇಟ್ಟುಕೊಂಡು ಎಲ್ಲರನ್ನೂ ಸಮಾನತೆಯಿಂದ ಕಾಣಲಿ ಎಂದು ಕಿಡಿಕಾರಿದರು.

  • ಬಿಜೆಪಿಗೆ ಓಪನ್ ಚಾಲೆಂಜ್ ಹಾಕಿದ ಪ್ರಿಯಾಂಕ್ ಖರ್ಗೆ

    ಬಿಜೆಪಿಗೆ ಓಪನ್ ಚಾಲೆಂಜ್ ಹಾಕಿದ ಪ್ರಿಯಾಂಕ್ ಖರ್ಗೆ

    ಯಾದಗಿರಿ: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಕ್ರಮ ಆಸ್ತಿ ಹೊಂದಿದ್ದಾರೆಂಬ ಬಿಜೆಪಿ ನಾಯಕರ ಆರೋಪಕ್ಕೆ ಖರ್ಗೆ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಓಪನ್ ಚಾಲೆಂಜ್ ಹಾಕಿದ್ದಾರೆ.

    ಯಾದಗಿರಿಯ ಹತ್ತಿಕುಣಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಕುಟುಂಬದ ಆಸ್ತಿ 50 ಸಾವಿರ ಕೋಟಿ ಇದ್ದರೆ ಬಿಜೆಪಿಯವರು ಅವರು ಅದನ್ನು ಸಾಬೀತು ಪಡಿಸಲಿ. ಆಸ್ತಿ ಹೊಂದಿದ್ದು ನಿಜವಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇದು ಸುಳ್ಳಾದರೆ ಅವರು ರಾಜಕೀಯ ನಿವೃತ್ತಿ ಹೊಂದುತ್ತಾರಾ? ಅಂತ ಓಪನ್ ಚಾಲೆಂಜ್ ಹಾಕಿದ್ದಾರೆ.

    ಸಂಸದ ರವಿಕುಮಾರ್ ಗೆ ನನ್ನ ಬಗ್ಗೆ ಮಾತನಾಡಲು ಏನು ಅರ್ಹತೆ ಇದೆ, ಅವರು ನಾಮ ನಿರ್ದೇಶನದಿಂದ ಬಂದವರು. ನಾನು ಜನರಿಂದ ಆಯ್ಕೆಯಾದವನು. ಪುತ್ರ ವ್ಯಾಮೋಹದ ಬಗ್ಗೆ ಮಾತನಾಡುವ ಮಾಜಿ ಸಚಿವ ಮಾಲೀಕಯ್ಯ ಗುತ್ತೆದಾರ ತಮ್ಮ ಕುಟುಂಬದ ಸದಸ್ಯರ ಪದವಿಗಳ ಬಗ್ಗೆ ತುಟಿ ಬಿಚ್ಚಲಿ ಎಂದು ಖಡಕ್ ತಿರುಗೇಟು ನೀಡಿದರು.

  • ರಾಹುಲ್ ಗಾಂಧಿಯನ್ನು ತುಕಡಿ ತುಕಡಿ ಮಾಡಿ ಕೊಂದ್ರು: ಖರ್ಗೆ ಎಡವಟ್ಟು

    ರಾಹುಲ್ ಗಾಂಧಿಯನ್ನು ತುಕಡಿ ತುಕಡಿ ಮಾಡಿ ಕೊಂದ್ರು: ಖರ್ಗೆ ಎಡವಟ್ಟು

    ಕಲಬುರಗಿ: ‘ರಾಜೀವ್ ಗಾಂಧಿ’ ಅವರನ್ನು ತುಕಡಿ ತುಕಡಿ ಮಾಡಿ ಕೊಂದು ಎಂದು ಹೇಳುವುದಕ್ಕೆ ಹೋಗಿ ‘ರಾಹುಲ್ ಗಾಂಧಿ’ ಅವರನ್ನು ತುಕಡಿ ತುಕಡಿ ಮಾಡಿ ಕೊಂದ್ರು ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಚಾರದ ವೇಳೆ ಬಾಯಿತಪ್ಪಿ ಎಡವಟ್ಟು ಮಾಡಿಕೊಂಡಿದ್ದಾರೆ.

    ದೇಶಕ್ಕಾಗಿ ಕಾಂಗ್ರೆಸ್‍ನ ಹಲವು ಜನರು ಪ್ರಾಣ ಕೊಟ್ಟಿದ್ದಾರೆ. ಇಂದಿರಾ ಗಾಂಧಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು ಎಂದು ಹೇಳಿದ ಖರ್ಗೆ, ಅದಾದ ಬಳಿಕ ರಾಜೀವ್ ಗಾಂಧಿ ಹತ್ಯೆ ಎನ್ನುವ ಬದಲು ರಾಹುಲ್ ಗಾಂಧಿ ತುಂಡು ತುಂಡಾಗಿ ಹತ್ಯೆ ಮಾಡಲಾಯಿತು ಎಂದು ಹೇಳಿದ್ದಾರೆ.

    ಖರ್ಗೆ ಅವರ ಈ ಎಡವಟ್ಟಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.

  • 40 ವರ್ಷದ ರಾಜಕೀಯ ವೈಷಮ್ಯಕ್ಕೆ ಮಧ್ಯರಾತ್ರಿ ತಿಲಾಂಜಲಿ ಇಟ್ಟ ಖರ್ಗೆ

    40 ವರ್ಷದ ರಾಜಕೀಯ ವೈಷಮ್ಯಕ್ಕೆ ಮಧ್ಯರಾತ್ರಿ ತಿಲಾಂಜಲಿ ಇಟ್ಟ ಖರ್ಗೆ

    ಯಾದಗಿರಿ: ತಮ್ಮ 40 ವರ್ಷದ ರಾಜಕೀಯ ವೈಷಮ್ಯಕ್ಕೆ ಮಲ್ಲಿಕಾರ್ಜುನ ಖರ್ಗೆ ಇಂದು ತಡರಾತ್ರಿ ತಿಲಾಂಜಲಿ ಬಿಟ್ಟಿದ್ದಾರೆ. ಉಮೇಶ್ ಜಾದವ್ ಸೋಲಿಸುವ ಜಿದ್ದಿಗಾಗಿ, ತಮ್ಮ ರಾಜಕೀಯ ವೈರಿ ಶಾಸಕ ನಾಗನಗೌಡ ಕಂದಕೂರ ಮನೆ ಬಾಗಿಲನ್ನು ತಟ್ಟಿದ್ದಾರೆ.

    ರಾಜ್ಯದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಗೆ ಮೈತ್ರಿ ಧರ್ಮಪಾಲಿಸುವಂತೆ, ಕಾಂಗ್ರೆಸ್ ಜೆಡಿಎಸ್ ನಾಯಕರು ಹೇಳಿದ್ದಾರೆ. ಆದರೆ ತಮ್ಮ ನಾಯಕರ ಮಾತಿಗೆ ಸೊಪ್ಪು ಹಾಕದ, ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಇದುವರೆಗೂ ಖರ್ಗೆ ಪರ ಪ್ರಚಾರಕ್ಕೆ ಬಂದಿರಲಿಲ್ಲ.

    ಖರ್ಗೆ ಈ ಕ್ಷೇತ್ರದಲ್ಲಿ ಹೆಚ್ಚಿನ ಮತಗಳನ್ನು ಪಡೆಯಬೇಕಾದರೆ ನಾಗನಗೌಡ ಕಂದಕೂರು ಸಹಕಾರ ಅಗತ್ಯವಾಗಿದೆ. ಹೀಗಾಗಿ ತಮ್ಮ ರಾಜಕೀಯ ವೈಷಮ್ಯಕ್ಕೆ ಮುಕ್ತಿ ನೀಡಿದ ಮಲ್ಲಿಕಾರ್ಜುನ ಖರ್ಗೆ, ಶಹಪುರದ ಕಾಂಗ್ರೆಸ್ ಶಾಸಕ ಶರಣಬಸಪ್ಪ ದರ್ಶನಾಪುರ, ಕೆ.ಬಿ ಶಾಣಪ್ಪ, ಕೆಸಿ ಕೊಂಡಯ್ಯ ಜೊತೆ ಶಾಸಕ ನಾಗನಗೌಡ ಕಂದಕೂರ ಅವರನ್ನು ಭೇಟಿ ಮಾಡಿ ಅವರು ಸಹಕಾರ ಕೇಳಿದರು.

    ಭೇಟಿ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಸದ್ಯ ರಾಜ್ಯದಲ್ಲಿ ಮೈತ್ರಿ ಸರ್ಕಾರವಿದೆ. ಹೀಗಾಗಿ ನಾಗನಗೌಡರನ್ನು ಭೇಟಿ ಮಾಡಿ ಮೈತ್ರಿ ಧರ್ಮ ಪಾಲಿಸುವಂತೆ ಕೇಳಿಕೊಂಡಿದ್ದೇನೆ. ನಾಳೆಯಿಂದ ಕ್ಷೇತ್ರದಲ್ಲಿ ಅವರು ಪ್ರಚಾರ ಮಾಡಲಿದ್ದಾರೆ ಎಂದರು. ನಂತರ ಶಾಸಕ ನಾಗನಗೌಡ ಮಾತನಾಡಿ ನಮ್ಮ ನಾಯಕರು ಕಾಂಗ್ರೆಸ್ ಗೆ ಮೈತ್ರಿ ಧರ್ಮ ಪಾಲಿಸುತ್ತೆವೆಂದು ಮಾತು ನೀಡಿದ್ದಾರೆ. ಹೀಗಾಗಿ ನಾನು ನಾಳೆಯಿಂದ ಕ್ಷೇತ್ರದಲ್ಲಿ ಖರ್ಗೆ ಪರ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.

    ಮಲ್ಲಿಕಾರ್ಜುನ ಖರ್ಗೆ ತಮ್ಮ ಆಡಳಿತ ಅವಧಿಯಲ್ಲಿ ಶಾಸಕ ನಾಗನಗೌಡ ಕಂದಕೂರು ಮೇಲೆ ಹಲವಾರು ದೂರುಗಳನ್ನು ದಾಖಲಿಸಿದ್ದರು ಎಂಬ ಆರೋಪ ಸಹ ಇದೆ. ಇದರಿಂದ ಖರ್ಗೆ ಮತ್ತು ನಾಗನಗೌಡರ ಮಧ್ಯೆ ಶತ್ರುತ್ವ ಬೆಳೆದಿತ್ತು. ಈ ಕಾರಣದಿಂದ ನಾಗನಗೌಡ ಖರ್ಗೆ ಪರ ಪ್ರಚಾರಕ್ಕೆ ಬರುವುದಿಲ್ಲ ಎಂಬ ಸುದ್ದಿ ಜಿಲ್ಲೆಯಲ್ಲಿ ಎದ್ದಿತ್ತು. ಸದ್ಯ ನಾಗನಗೌಡ ಕಂದಕೂರು ಶಾಸಕರಾಗಿ ಗೆದ್ದಿರುವ ಗುರುಮಠಕಲ್ ವಿಧಾನಸಭಾ ಕ್ಷೇತ್ರ, ಕಲಬುರಗಿ ಲೋಕಸಭಾ ವ್ಯಾಪ್ತಿಗೆ ಬರುತ್ತದೆ.

  • ಗಡಿ ಭಾಗದ ಮತಕ್ಕಾಗಿ ತೆಲುಗು ನಟಿ ಮೊರೆ ಹೋದ ಖರ್ಗೆ

    ಗಡಿ ಭಾಗದ ಮತಕ್ಕಾಗಿ ತೆಲುಗು ನಟಿ ಮೊರೆ ಹೋದ ಖರ್ಗೆ

    ಕಲಬುರಗಿ: ಲೋಕಸಭಾ ಚುನಾವಣೆ ಹಿನ್ನೆಲೆ ಕಲಬುರಗಿ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಪರ ಪ್ರಚಾರ ಮಾಡಲು ತೆಲುಗು ಭಾಷೆಯ ಖ್ಯಾತ ನಟಿಯೊಬ್ಬರ ಮೊರೆ ಹೋಗಿದ್ದಾರೆ.

    ಲೋಕಸಮರಕ್ಕೆ ಕಲಬುರಗಿ ಕ್ಷೇತ್ರದ ಚುನಾವಣಾ ಕಣ ದಿನ ದಿನಕ್ಕೆ ರಂಗೇರುತ್ತಿದ್ದು, ಅಭ್ಯರ್ಥಿಗಳು ಗೆಲುವಿಗಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಈ ನಡುವೆ ಕರ್ನಾಟಕ-ಆಂದ್ರ ಗಡಿ ಭಾಗದ ಮತಗಳ ಮೇಲೆ ಕಣ್ಣಿಟ್ಟಿರುವ ಮಲ್ಲಿಕಾರ್ಜುನ ಖರ್ಗೆ ಅವರು ಹೊಸ ಪ್ಲಾನ್ ಮಾಡಿದ್ದಾರೆ. ಗಡಿ ಭಾಗದ ಜನರ ವಿಶ್ವಾಸ ಹಾಗೂ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳಲು ಟಾಲಿವುಡ್‍ನ ಖ್ಯಾತ ನಟಿ ವಿಜಯಶಾಂತಿ ಅವರನ್ನು ತಮ್ಮ ಪರ ಪ್ರಚಾರಕ್ಕೆ ಕರೆತರಲಿದ್ದಾರೆ. ಇದನ್ನೂ ಓದಿ:ಮೋದಿ ಭಯೋತ್ಪಾದಕನಂತೆ ಕಾಣ್ತಾರೆ – ಜನ ಪ್ರಧಾನಿಯನ್ನ ಕಂಡ್ರೆ ಭಯಪಡ್ತಿದ್ದಾರೆ: ಕಾಂಗ್ರೆಸ್ ಸ್ಟಾರ್ ನಾಯಕಿ

    ಹೌದು, ನಟಿ ವಿಜಯಶಾಂತಿ ಅವರು ಏಪ್ರಿಲ್ 19ರಂದು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನಾಲ್ಕು ಕಡೆಯಲ್ಲಿ ನಡೆಯುವ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಹಾಗೆಯೇ ಖರ್ಗೆ ಪರ ಭರ್ಜರಿ ಪ್ರಚಾರ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ನಾನು ಮಾಡಿದ್ದ ಕೆಲಸಕ್ಕೆ ಅಡ್ಡಗಾಲು ಹಾಕಿದ್ದೇ ಮೋದಿ ಕೊಡುಗೆ: ಖರ್ಗೆ ಕಿಡಿ

    ನಾನು ಮಾಡಿದ್ದ ಕೆಲಸಕ್ಕೆ ಅಡ್ಡಗಾಲು ಹಾಕಿದ್ದೇ ಮೋದಿ ಕೊಡುಗೆ: ಖರ್ಗೆ ಕಿಡಿ

    ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಕಲಬುರಗಿಗಾಗಿ ಏನು ಮಾಡಿಲ್ಲ, ಕೇವಲ ನಾನು ಮಾಡುವ ಅಭಿವೃದ್ಧಿ ಕೆಲಸಕ್ಕೆ ಅವರು ಅಡ್ಡಗಾಲು ಹಾಕಿದ್ದಾರೆ ಅಂತ ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ಆರೋಪ ಮಾಡಿದ್ದಾರೆ.

    ಯಾದಗಿರಿಯ ಸೈದಾಪುರದಲ್ಲಿ ಬೃಹತ್ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಮೋದಿ ವಿರುದ್ಧ ಕಿಡಕಾರಿದ್ದಾರೆ. ಮೋದಿ ಅವರು ಈಗಾಗಲೇ ಘೋಷಣೆ ಮಾಡಿರುವ ರೈಲ್ವೆ ಕೋಚ್ ಫ್ಯಾಕ್ಟರಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇದೇ ಕಲಬುರಗಿಗೆ ಮೋದಿ ಅವರ ಕೊಡುಗೆ. ಪ್ರಧಾನಿ ನರೇಂದ್ರ ಮೋದಿ ಕಲಬುರಗಿಗಾಗಿ ಏನು ಮಾಡಿಲ್ಲ, ಕೇವಲ ನಾನು ಮಾಡುವ ಅಭಿವೃದ್ಧಿ ಕೆಲಸಕ್ಕೆ ಅವರು ಅಡ್ಡಗಾಲು ಹಾಕಿದ್ದಾರೆ. ಅದೇ ಅವರ ಕೊಡುಗೆ ಎಂದು ವ್ಯಂಗ್ಯವಾಡಿದರು.

    ಉಮೇಶ್ ಜಾದವ್‍ಗೆ ಕಾಂಗ್ರೆಸ್ ಏನೂ ಅನ್ಯಾಯ ಮಾಡಿಲ್ಲ. ಆದ್ರೆ ಜಾದವ್ ನಮ್ಮನ್ನು ಯಾಕೆ ಬಿಟ್ಟು ಹೋದರು ಎನ್ನುವ ಕಾರಣ ಗೊತ್ತಿಲ್ಲ. ನಾನು ಜಾದವ್ ಕುಟುಂಬಕ್ಕೆ ಸಾಕಷ್ಟು ಸಹಾಯ ಮಾಡಿದ್ದೇನೆ. ಆದ್ರೆ ಜಾದವ್ ಕುಟುಂಬದವರು ಇವತ್ತು ಇಲ್ಲಸಲ್ಲದನ್ನು ಮಾತನಾಡುತ್ತಿದ್ದಾರೆ ಎಂದರು. ನನಗೆ ಯಾವ ಪುತ್ರ ವ್ಯಾಮೋಹವೂ ಇಲ್ಲ. ನಾನು ರಾಷ್ಟ್ರ ರಾಜಕೀಯಕ್ಕೆ ಹೋದ ಬಳಿಕ ನಮ್ಮ ಕುಟುಂಬದವರು ರಾಜ್ಯ ರಾಜಕೀಯಕ್ಕೆ ಬರುವಂತೆ ಆಗಲಿ ಎಂದು ನಮ್ಮ ಪಕ್ಷದ ನಾಯಕರು ಬಲವಂತ ಮಾಡಿದರು. ನನ್ನ ಮಗನಿಗೆ ಟಿಕೆಟ್ ನೀಡಿದ್ದು ನಮ್ಮ ಪಕ್ಷದ ನಾಯಕರು ಎಂದು ತಿಳಿಸಿ ಖರ್ಗೆ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

  • ಇಡೀ ಕರ್ನಾಟಕದಲ್ಲಿ ಮೋದಿ ಅಲೆ, ಕಲಬರಗಿಯಲ್ಲಿ ಅಚ್ಚರಿಯ ಫಲಿತಾಂಶ :ಚಕ್ರವರ್ತಿ ಸೂಲಿಬೆಲೆ

    ಇಡೀ ಕರ್ನಾಟಕದಲ್ಲಿ ಮೋದಿ ಅಲೆ, ಕಲಬರಗಿಯಲ್ಲಿ ಅಚ್ಚರಿಯ ಫಲಿತಾಂಶ :ಚಕ್ರವರ್ತಿ ಸೂಲಿಬೆಲೆ

    ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನಿ ಮಾಡಲು ಪಣತೊಟ್ಟಿದ್ದೇವೆ. ಸುನಾಮಿಯನ್ನು ಹೇಗೆ ತಡೆಯಲು ಸಾಧ್ಯವಿಲ್ಲವೋ, ಹಾಗೇ ಮೋದಿ ಅಭಿಮಾನಿಗಳನ್ನ ತಡೆಯಲು ಸಾಧ್ಯವಿಲ್ಲ ಎಂದು ಟೀಂ ಮೋದಿ ಸಂಸ್ಥಾಪಕ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಪಣತೊಟ್ಟಿದ್ದೇವೆ. ಸುನಾಮಿಯನ್ನು ತಡೆಯಲು ಸಾಧ್ಯವಿಲ್ಲವೋ, ಹಾಗೇ ಮೋದಿ ಅಭಿಮಾನಿಗಳನ್ನ ತಡೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ಉತ್ತರ ಹಾಗೂ ದಕ್ಷಿಣ ಕರ್ನಾಟಕ ಅಂತ ಎರಡು ವಿಭಾಗ ಮಾಡಲಾಗಿದೆ. ಮೊದಲನೇ ಹಾಗೂ ಎರಡನೇ ಫೇಸ್‍ನಲ್ಲಿ ಚುನಾವಣಾ ಕ್ಯಾಂಪೇನ್ ಮಾಡಲಾಗುತ್ತಿದೆ. ಹಳ್ಳಿ ಹಳ್ಳಿಗೂ ನರೇಂದ್ರ ಮೋದಿ ಪರ ಪ್ರಚಾರ ಮಾಡಲಾಗುತ್ತಿದೆ. ಇಡೀ ಕರ್ನಾಟಕವೇ ಮೋದಿಯವರ ಅಲೆಯಲ್ಲಿದೆ. ವಿದೇಶದಿಂದಲೂ ಸಹ ಟೀಂ ಮೋದಿಗೆ ಅದ್ಭುತ ಬೆಂಬಲ ಸಿಗುತ್ತಿದೆ. ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಈ ಸಲ ಅಚ್ಚರಿ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    `ಭಾರತ ಮಾತಾಕೀ ಜೈ’ ಅಂತ ನಾವು ಹೇಳುತ್ತೇವೆ. `ರಾಹುಲ್ ಗಾಂಧಿ ಕೀ ಜೈ’ ಅಂತ ಕಾಂಗ್ರೆಸ್‍ನವರು ಹೇಳುತ್ತಾರೆ. ಇದು ಕಾಂಗ್ರೆಸ್ ಪಕ್ಷದ ದೇಶ ಭಕ್ತಿ ಎತ್ತಿ ತೋರಿಸುತ್ತಿದೆ. ಮೋದಿ ಮೇಲಿನ ಅಭಿಮಾನದಿಂದಾಗಿ ಜನರು ಹೋದಲ್ಲಿ ಎಲ್ಲ ಕಡೆ ಮೋದಿ ಮೋದಿ ಅನ್ನುತ್ತಿದ್ದಾರೆ. ನೀವು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಬೇಡಿ, ಮೋದಿ ಅಭಿಮಾನಿಗಳಿಗೆ ಸೂಲಿಬೆಲೆ ಕಿವಿಮಾತು ಹೇಳಿದರು.

    ನಲ್ಲಿಯಲ್ಲಿ ಬರುವ ನೀರನ್ನು ತಡೆಯಬಹುದು. ಆದ್ರೆ ಸುನಾಮಿಯನ್ನು ಯಾರು ತಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಯಾರೋ 4 ಮಂದಿ ಮೋದಿ ಮೋದಿ ಎಂದು ಕೂಗಿದರೆ ತಡೆಯಬಹುದು. ಆದ್ರೆ ನೂರಾರು ಮಂದಿ ಮೋದಿ ಮೋದಿ ಎಂದರೆ ತಡೆಯಲು ಆಗಲ್ಲ. ಅಭಿಮಾನವನ್ನು ತಡೆಯಲು ಆಗಲ್ಲ ಎಂದು ಹೇಳಿದರು.

    ಖರ್ಗೆ ಮುಖದ ಮೇಲೆ ಆತಂಕದ ಗೇರೆಗಳು ಎದ್ದು ಕಾಣುತ್ತಿವೆ, ಈ ಬಾರಿ ಖರ್ಗೆ ಸೋಲು ಖಚಿತ. ಅದಕ್ಕಾಗಿ ಅವರ ಮಗ ರಾಮನವಮಿ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಮುಂಬೈ ದಾಳಿಗೆ ಕಾಂಗ್ರೆಸ್ ಕೊಟ್ಟ ಪ್ರತ್ಯುತ್ತರ ಹೇಗಿತ್ತು? ಪುಲ್ವಾಮ ದಾಳಿಗೆ ಮೋದಿ ಕೊಟ್ಟ ಪ್ರತ್ಯುತ್ತರ ಹೇಗಿತ್ತು? ಇದೆಲ್ಲ ದೇಶದ ಜನರು ಮೋದಿ ಆಡಳಿತದಲ್ಲಿ ಅರ್ಥ ಮಾಡಿಕೊಂಡಿದ್ದಾರೆ ಎಂದರು.

  • ಬೆಕ್ಕಿಗೆ ಘಂಟೆ ಕಟ್ಟಲು ನಾನು ತಯಾರಾಗಿದ್ದೇನೆ: ಉಮೇಶ್ ಜಾಧವ್

    ಬೆಕ್ಕಿಗೆ ಘಂಟೆ ಕಟ್ಟಲು ನಾನು ತಯಾರಾಗಿದ್ದೇನೆ: ಉಮೇಶ್ ಜಾಧವ್

    ಕಲಬುರಗಿ: ಇಷ್ಟು ದಿನ ಬೆಕ್ಕು ಕದ್ದು ಮುಚ್ಚಿ ಹಾಲು ಕುಡಿಯುತಿತ್ತು. ಆದರೆ ಇನ್ನು ಮುಂದೆ ಆ ರೀತಿ ಆಗಲು ಬಿಡಲ್ಲ. ಬೆಕ್ಕಿಗೆ ಘಂಟೆ ಕಟ್ಟಲು ನಾನು ತಯಾರಿದ್ದೇನೆ ಎಂದು ಪರೋಕ್ಷವಾಗಿ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಉಮೇಶ್ ಜಾಧವ್ ವಾಗ್ದಾಳಿ ನಡೆಸಿದ್ದಾರೆ.

    ನಗರದ ಗಂಜ್ ಪ್ರದೇಶ, ಕಿರಾಣ ಬಜಾರ್, ಲೋಹರ್ ಗಲ್ಲಿ ಸೂಪರ್ ಮಾರ್ಕೆಟ್ ಸೇರಿದಂತೆ ವಿವಿಧೆಡೆ ಬೆಳಗ್ಗೆಯಿಂದಲೇ ಜಾಧವ್ ಅವರು ಮತಯಾಚಿಸಿದರು. ಪ್ರಚಾರ ಸಭೆಯಲ್ಲಿ ಮಾತಾನಾಡಿದ ಜಾಧವ್, ಬೆಕ್ಕಿನ ಕೊರಳಿಗೆ ಘಂಟೆ ಕಟ್ಟಲು ನಾನು ಸಿದ್ಧನಾಗಿದ್ದೇನೆ. ನೀವು ನನ್ನನ್ನು ಬೆಂಬಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

    ಈ ಬಾರಿ ಲೋಕಸಭೆ ಚುನಾವಣೆ ನನ್ನ ರಾಜಕೀಯ ಜೀವನದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಅವರು ಎಷ್ಟೇ ಹಣ ಖರ್ಚು ಮಾಡಿದರೂ ಇತಿಹಾಸ ಬದಲಿಸುವ ಕೆಲಸ ನಿಮ್ಮ ಕೈಲಿದೆ. ಹೈದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಇಂದಿಗೂ ಅನೇಕ ಜ್ವಲಂತ ಸಮಸ್ಯೆಗಳು ಕಾಡುತ್ತಿದೆ. ಸಮಸ್ಯೆಗಳ ಕೊನೆ ಕಾಣುವಂತೆ ಮಾಡಲು ನನಗೆ ಮತ ನೀಡಿ ಎಂದು ಕಾರ್ಯಕರ್ತರಿಗೆ ತಿಳಿಸಿದರು. ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ ಜಾಧವ್, ರಾಮನವಮಿ ದಿನ ಕಾವಿ ಶಲ್ಯಾ, ಟೋಪಿ ಹಾಕಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಆದರೆ ಇವರು ಒಮ್ಮೆಯಾದರು ರಾಮನವಮಿ ಉತ್ಸವದಲ್ಲಿ ಭಾಗಿಯಾಗಿದ್ದರಾ ಎಂದು ಪ್ರಶ್ನಿಸಿದರು.

    ಇತ್ತ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು, ಮಲ್ಲಿಕಾರ್ಜುನ ಖರ್ಗೆ ಹಳೆ ಎತ್ತು ಅದನ್ನ ಕೊಟ್ಟಿಗೆಯಲ್ಲಿ ಕಟ್ಟಿಹಾಕುತ್ತೇವೆ ಎಂದು ಕಿಡಿಕಾರಿದರು. ಈ ಹೇಳಿಕಗೆ ಟಾಂಗ್ ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ ಅವರು, ಖರ್ಗೆ ಹಳೆ ಎತ್ತು ಎಂಬ ಹೇಳಿಕೆ ಸರಿ ಅಲ್ಲ. ಯಾರು ಹಳೆ ಎತ್ತು ಎಂದು ಜನ ತೀರ್ಮಾನ ಮಾಡುತ್ತಾರೆ. ಕಲಬುರಗಿ ಜನರು ಅಭಿವೃದ್ಧಿಗೆ ಮತಹಾಕುತ್ತಾರೆ ವಿನಾ: ಕೆಲಸ ಮಾಡದ ನಾಯಕರನ್ನು ತಿರಸ್ಕರಿಸುತ್ತಾರೆ. ಮುಂದಿನ ಬಾರಿಯಾದರೂ ಉತ್ತಮ ಕೆಲಸ ಮಾಡಿ, ಆ ಮೂಲಕ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಚಿಂತನೆ ನಡೆಸಿ. ಕೋಮು ಪಕ್ಷದ ಅಭ್ಯರ್ಥಿಗೆ ಚುನಾವಣೆಯಲ್ಲಿ ಗೆಲುವು ಕಷ್ಟಸಾಧ್ಯ ಎಂದರು.

  • ತಂದೆ ನಾಮಪತ್ರ ಸಲ್ಲಿಕೆ ಟೈಮ್ ಫಿಕ್ಸ್ ಮಾಡೋದು ನಮ್ಮ ತಾಯಿ: ಪ್ರಿಯಾಂಕ್ ಖರ್ಗೆ

    ತಂದೆ ನಾಮಪತ್ರ ಸಲ್ಲಿಕೆ ಟೈಮ್ ಫಿಕ್ಸ್ ಮಾಡೋದು ನಮ್ಮ ತಾಯಿ: ಪ್ರಿಯಾಂಕ್ ಖರ್ಗೆ

    ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ಅವರು ಯಾವ ಸಮಯದಲ್ಲಿ ನಾಮಪತ್ರ ಸಲ್ಲಿಕೆ ಮಾಡಬೇಕು ಎಂದು ಸಮಯ ನಿಗದಿ ಮಾಡುವುದು ನಮ್ಮ ತಾಯಿ. ಇನ್ನು ಅವರು ಈ ಬಗ್ಗೆ ಸಮಯ ನೀಡಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

    ಕಲಬುರಗಿಯ ಗ್ರ್ಯಾಂಡ್ ಹೋಟೆಲಿನಲ್ಲಿ ಮೈತ್ರಿ ಪಕ್ಷಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡುವ ಸಮಯವನ್ನು ತಾಯಿ ರಾಧಾಬಾಯಿ ಅವರು ಮಾಡುತ್ತಾರೆ. ನಾಳೆ ನಮ್ಮ ತಂದೆ ನಾಮಪತ್ರ ಸಲ್ಲಿಸಲಿದ್ದಾರೆ. ಆದರೆ ಯಾವ ಸಮಯಕ್ಕೆ ಎಂದು ಇನ್ನು ಸಮಯ ನಿಗದಿಯಾಗಿಲ್ಲ. ನಮ್ಮ ಕುಟುಂಬದಲ್ಲಿ ಇದೊಂದು ಜವಾಬ್ದಾರಿಯನ್ನ ಮಾತ್ರ ನಮ್ಮ ತಾಯಿ ಅವರಿಗೆ ನೀಡಿದ್ದೇವೆ. ಇಂದು ಸಂಜೆ ಖರ್ಗೆಯವರು ಶರಣಬಸವೇಶ್ವರ ದೇಗುಲ, ಖ್ಚಾಜಾ ಬಂದೇ ನವಾಜ್ ದರ್ಗಾ, ಬುದ್ಧವಿಹಾರಕ್ಕೆ ಭೇಟಿ ನೀಡಿ ಆರ್ಶೀವಾದ ಪಡೆಯಲಿದ್ದಾರೆ ಎಂದರು.

    ಇದೇ ವೇಳೆ ಮೈತ್ರಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಜೆಡಿಎಸ್ ಮುಖಂಡರಾದ ರೇವುನಾಯಕ್ ಬೆಳಮಗಿ ಸೇರಿದಂತೆ ಯಾರನ್ನು ಕಡೆಗಣಿಸಿಲ್ಲ. ಬಿಜೆಪಿ ನಾಯಕರು ಸುಳ್ಳಿನ ಸರಮಾಲೆಯನ್ನು ಹೆಣೆಯುತ್ತಿದ್ದಾರೆ. ‘ಸಬ್ ಕಾ ಸಾಥ್ ಸಬ್ ಬಾ ವಿಕಾಸ್’ ಎಲ್ಲಿ ಆಗಿದೆ ಹೇಳಿ? ಮೋದಿ ಕಲಬುರಗಿ ಬಂದಾಗ ಕೋಲಿ ಸಮಾಜವನ್ನ ಎಸ್‍ಟಿ ಸಮುದಾಯಕ್ಕೆ ಸೇರಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಕೋಲಿ ಸಮಾಜವನ್ನ ಎಸ್‍ಟಿಗೆ ಸೇರಿಸುವಂತೆ ಕೇಂದ್ರಕ್ಕೆ ನೀಯೋಗ ಕೂಡ ಕರೆದುಕೊಂಡು ಹೋಗಿದ್ದೆವು. ಆದರೆ ನಿಯೋಗಕ್ಕೆ ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ ಎಂದರು.

    ಹಿರಿಯ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರ ಬಿಜೆಪಿ ಸೇರ್ಪಡೆ ವಿಚಾರ ಪ್ರತಿಕ್ರಿಯೆ ನೀಡಿ, ರತ್ನಪ್ರಭಾ ಅವರು ನಮ್ಮ ಸರ್ಕಾರದಲ್ಲಿ ಕೆಲಸ ಮಾಡಿದಕ್ಕೆ ಕಾಂಗ್ರೆಸ್ ಪಕ್ಷವನ್ನೇ ಸೇರಬೇಕೆಂಬ ನಿಯಮವಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಯಾವ ಪಕ್ಷಕ್ಕೂ ಸೇರ್ಪಡೆಯಾಗಬಹುದು. ಅಷ್ಟಕ್ಕೂ ರತ್ನಪ್ರಭಾ ಅವರು ಈ ಹಿಂದೆ ಬೀದರ್ ಡಿಸಿ ಹಾಗೂ ಕಲಬುರಗಿ ಪ್ರಾದೇಶಿಕ ಆಯುಕ್ತರಾಗಿದ್ದರು. ಅವರಿಗೆ ಖರ್ಗೆ ಅವರ ಕಾರ್ಯವೈಖರಿ ಚೆನ್ನಾಗಿ ಗೊತ್ತಿರುತ್ತೆ. ಹೀಗಾಗಿ ಏನು ಪ್ರಚಾರ ಮಾಡುತ್ತಾರೆ ಎಂಬುದು ನೋಡಬೇಕು. ಜಾಧವ್ ಪರ ಪ್ರಚಾರ ಮಾಡುವುದರಿಂದ ನಮಗೇ ಯಾವುದೇ ಹಿನ್ನೆಡೆಯಾಗಲ್ಲ ವಿಶ್ವಾಸ ವ್ಯಕ್ತಪಡಿಸಿದರು.

  • ಯುಪಿಎ ಅವಧಿಯಲ್ಲೂ ಹಲವು ಉಪಗ್ರಹಗಳನ್ನು ಹಾರಿಸಲಾಗಿದೆ: ಮೋದಿಗೆ ಖರ್ಗೆ ತಿರುಗೇಟು

    ಯುಪಿಎ ಅವಧಿಯಲ್ಲೂ ಹಲವು ಉಪಗ್ರಹಗಳನ್ನು ಹಾರಿಸಲಾಗಿದೆ: ಮೋದಿಗೆ ಖರ್ಗೆ ತಿರುಗೇಟು

    ಕಲಬುರಗಿ: ಜನರಿಗೆ ತೋರಿಸುವ ಉದ್ದೇಶದಿಂದ ಮಿಶನ್ ಶಕ್ತಿ ಪ್ರಯೋಗ ಮಾಡಲಾಗಿದೆ. ದೇಶದಲ್ಲಿ ಇಂತಹ ಪ್ರಯೋಗಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಆದರೆ ಯಾರೋ ಒಬ್ಬರು ಕ್ರೆಡಿಟ್ ತೆಗೆದುಕೊಳ್ಳುವುದು ತಪ್ಪು ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    2012ರಲ್ಲಿಯೇ ಪ್ರಯೋಗಿಸಲಾಗಿರುವ ಸ್ಯಾಟ್‍ಲೈಟ್ ತಯಾರಾಗಿತ್ತು. ಇದರಿಂದ ಬೇರೆ ದೇಶದ ಉಪಗ್ರಹಗಳಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಪ್ರಯೋಗಿಸಿರಲಿಲ್ಲ. ಇಂದು ಜನರಿಗೆ ತೋರಿಸುವ ಉದ್ದೇಶಕ್ಕಾಗಿ ಪ್ರಯೋಗ ಮಾಡಿ ಪ್ರಚಾರ ತೆಗೆದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ದೇಶದ ಹಿತದೃಷ್ಟಿಯಿಂದಲೇ ಡಿಆರ್‍ಡಿಓ ಸಂಸ್ಥೆಯನ್ನು ಕಟ್ಟಲಾಗಿದೆ. ಯುಪಿಎ ಅವಧಿಯಲ್ಲಿ ಹಲವಾರು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಬಿಡಲಾಗಿದೆ. ಎಲ್ಲವನ್ನು ದೇಶದ ಹಿತದೃಷ್ಟಿಯಿಂದಲೇ ಮಾಡಲಾಗಿದೆ. ಆದರೆ ಇಂದು ಬಂದು ನಾನೇ ಮಾಡಿದ್ದೇನೆ ಎಂದು ಹೇಳುತ್ತಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಗರಂ ಆದರು. ಇದನ್ನೂ ಓದಿ: ಏನಿದು ಉಪಗ್ರಹ ವಿರೋಧಿ ಅಸ್ತ್ರ? ಭಾರತದ ಸಾಧನೆ ಏನು?

    ಕ್ಷಿಪಣಿ ಮೂಲಕ ಉಪಗ್ರಹವನ್ನು ಹೊಡೆದು ಉರುಳಿಸುವ ಸಾಮಥ್ರ್ಯವನ್ನು ಹೊಂದುವ ಮೂಲಕ ವಿಶ್ವದ ಇತಿಹಾಸದಲ್ಲಿ ಭಾರತ ವಿಶೇಷ ಸಾಧನೆ ಮಾಡಿದೆ. ಅಮೆರಿಕ, ರಷ್ಯಾ, ಚೀನಾದ ಬಳಿಕ ಉಪಗ್ರಹ ವಿರೋಧಿ ಅಸ್ತ್ರಗಳನ್ನು (ಆಂಟಿ-ಸ್ಯಾಟೆಲೈಟ್ ವೆಪನ್) ಹೊಂದಿದ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಮೂಲಕ ವಿಶ್ವದ ಸ್ಪೇಸ್ ಸೂಪರ್ ಪವರ್ ದೇಶವಾಗಿ ಭಾರತ ಈಗ ಹೊರಹೊಮ್ಮಿದೆ.

    https://www.youtube.com/watch?v=F7KwqUg_uqA