Tag: Malikaiah Guttedar

  • ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆಗೆ ಮಾಲೀಕಯ್ಯ ಗುತ್ತೇದಾರ ತರಾಟೆ-ಯೂ ಟರ್ನ್ ಹೊಡೆದ ಸರ್ಕಾರ

    ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆಗೆ ಮಾಲೀಕಯ್ಯ ಗುತ್ತೇದಾರ ತರಾಟೆ-ಯೂ ಟರ್ನ್ ಹೊಡೆದ ಸರ್ಕಾರ

    ಕಲಬುರಗಿ: ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಅವರನ್ನು ವರ್ಗಾವಣೆ ಮಾಡಿದಕ್ಕೆ ಬಿಜೆಪಿ ಮುಖಂಡ ಹಾಗು ಮಾಲೀಕಯ್ಯ ಗುತ್ತೇದಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗು ಸಿಎಂ ಬಿ.ಎಸ್.ಯಡಿಯೂರಪ್ಪ ಗೇ ಮಾಲೀಕಯ್ಯ ಕರೆ ಮಾಡಿ ವರ್ಗಾವಣೆ ಆದೇಶ ಹಿಂಪಡೆಯಲು ಆಗ್ರಹಿಸಿದ್ದರು, ಮಾಲೀಕಯ್ಯ ಗುತ್ತೇದಾರ ಅವರ ಮಾತಿಗೆ ಬೆಲೆಕೊಟ್ಟ ಸಿಎಂ ಯಡಿಯೂರಪ್ಪ ಕೂಡಲೇ ಜಿಲ್ಲಾಧಿಕಾರಿಗಳ ಆದೇಶವನ್ನು ಆದೇಶ ಹೊರಡಿಸಿದ ಒಂದು ಗಂಟೆಯಲ್ಲಿಯೇ ಆದೇಶ ರದ್ದು ಮಾಡಿ ಕಲಬುರಗಿ ಜಿಲ್ಲಾಧಿಕಾರಿಯಾಗಿ ಬಿ.ಶರತ್ ಅವರನ್ನು ಮುಂದುವರಿಸಿದ್ದಾರೆ.

    ಡಿಸಿ ಅವರ ವರ್ಗಾವಣೆ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಮಾತನಾಡಿದ ಮಾಲೀಕಯ್ಯ ಗುತ್ತೇದಾರ, ಈಗಾಗಲೇ ಜಿಲ್ಲಾಧಿಕಾರಿ ಬಿ.ಶರತ್ ಕೋವಿಡ್ ತಡೆಹಿಡಿಯಲು ಕಠಿಣ ಪರಿಶ್ರಮದಿಂದ ಲಾಕ್‍ಡೌನ್ ಸೇರಿದಂತೆ ಹಲವು ಕ್ರಮಗಳನ್ನು ಜರುಗಿಸಿದ ಪರಿಣಾಮವೇ ಸೋಂಕು ತಡೆಹಿಡಿಯಲು ಯಶಸ್ವಿಯಾಗಿದೆ. ಆದ್ರೆ ಇತ್ತೀಚೆಗೆ ಬಂದ ತಬ್ಲಿಘಿಗಳಿಂದ ಜಿಲ್ಲೆಯಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಒಂದಿಷ್ಟು ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಸಹ ಬಿ.ಶರತ್ ಅಧಿಕಾರಿಗಳ ತಂಡ ಕಟ್ಟಿಕೊಂಡು ಉತ್ತಮ ಕೆಲಸ ಮಾಡುತ್ತಿದ್ದಾರೆ.

    ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಸೇರಿದಂತೆ ಇಡೀ ಜಿಲ್ಲೆಯ ಇಂಚಿಂಚು ಮಾಹಿತಿ ಸಹ ಶರತ್ ಅವರು ಕಲೆ ಹಾಕಿ ಕೆಲಸ ಮಾಡುವಾಗ ಕೆಲ ಪಟ್ಟಭದ್ದ ಹಿತಾಸಕ್ತಿಗಳ ಮಾತಿಗೆ ಬೆಲೆ ಕೊಡಬಾರದು ಅಂತಾ ಸಿಎಂ ಯಡಿಯೂರಪ್ಪ ಗೇ ಮಾಲೀಕಯ್ಯ ಗುತ್ತೇದಾರ ಕಿವಿ ಮಾತು ಹೇಳಿದ್ದಾರೆ.

    ಇನ್ನು ಮಾಲೀಕಯ್ಯ ಅವರ ಮಾತಿಗೆ ಬೆಲೆಕೊಟ್ಟ ಸಿಎಂ ಯಡಿಯೂರಪ್ಪ ಅವರೇ ಕೂಡಲೇ ಖುದ್ದು ಡಿಸಿ ಶರತ್ ಗೆ ಕರೆ ಮಾಡಿ ವರ್ಗಾವಣೆ ಆದೇಶ ಹಿಂಪಡೆಯಲಾಗುವದು. ಯಾವುದೇ ಕಾರಣಕ್ಕೂ ತಲೆ ಕೆಡಿಸಿಕೊಳ್ಳದೆ ನಿಮ್ಮ ಕೆಲಸ ಮುಂದುವರೆಸಿ ಅಂತಾ ಬಿ.ಎಸ್.ವೈ ಸಹ ಅಭಯ ನೀಡಿದ್ದಾರೆ.

  • ಗೋಯಲ್ ಬಗ್ಗೆ ಟ್ವೀಟ್ ಮಾಡೋ ನೈತಿಕತೆ ಪ್ರಿಯಾಂಕ್ ಖರ್ಗೆಗಿಲ್ಲ: ಮಾಲೀಕಯ್ಯ ಗುತ್ತೇದಾರ

    ಗೋಯಲ್ ಬಗ್ಗೆ ಟ್ವೀಟ್ ಮಾಡೋ ನೈತಿಕತೆ ಪ್ರಿಯಾಂಕ್ ಖರ್ಗೆಗಿಲ್ಲ: ಮಾಲೀಕಯ್ಯ ಗುತ್ತೇದಾರ

    ಕಲಬುರಗಿ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಬಗ್ಗೆ ಟ್ವೀಟ್ ಮಾಡುವ ನೈತಿಕತೆ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗಿಲ್ಲ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಕಿಡಿಕಾರಿದ್ದಾರೆ.

    ಕಲಬುರಗಿ ನಗರದಲ್ಲಿ ನಡೆದ ಸಿಎಎ ಜಾಗೃತಿ ರ‍್ಯಾಲಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ದೇಶದ ಏಕತೆಗಾಗಿ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದರು. ಪ್ರಿಯಾಂಕ್ ಖರ್ಗೆ ತಮ್ಮ ತಟ್ಟೆಯಲ್ಲಿನ ಬಿದ್ದಿರುವ ಹೆಗ್ಗಣ ನೋಡಿಕೊಳ್ಳಲಿ. ಮೊದಲು ಅವರ ಕ್ಷೇತ್ರ ಚಿತ್ತಾಪುರದಲ್ಲಿ ಕೋಟಿಗಟ್ಟಲೆ ಅವ್ಯವಹಾರದ ನಡೆದಿದೆ. ಕೆಆರ್‍ಐಡಿಎಲ್, ಲ್ಯಾಂಡ್ ಆರ್ಮಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಇವೆಲ್ಲದರ ಬಗ್ಗೆ ದಾಖಲೆಗಳ ಸಮೇತ ದೂರು ನೀಡಲು ನಿರ್ಧರಿಸಿದ್ದೇನೆ. ಹೀಗೆ ಕೋಟಿಗಟ್ಟಲೆ ಅವ್ಯವಹಾರ ಮಾಡಿದವರು ಪಿಯೂಷ್ ಗೋಯಲ್ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ ಅಂತಾ ಮಾಲೀಕಯ್ಯ ಗುತ್ತೇದಾರ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಗೋಯಲ್ ಟ್ವೀಟಿಗೆ ಪ್ರಿಯಾಂಕ್ ಖರ್ಗೆ ಟಾಂಗ್

    ಮುಂಬರುವ ದಿನಗಳಲ್ಲಿ ಪ್ರಿಯಾಂಕ್ ಅವರ ಕ್ಷೇತ್ರದ ಅವ್ಯವಹಾರದ ಬಗ್ಗೆ ದೂರು ಕೊಡುತ್ತೆನೆ, ನಮ್ಮ ಅವಧಿಯಲ್ಲಿ ಅಫಜಲ್‍ಪುರ ಕ್ಷೇತ್ರದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದಾಖಲೆಗಳು ಇದ್ದರೆ ಅವರು ದೂರು ನೀಡಲಿ ನಾನು ಅದನ್ನು ಸ್ವಾಗತಿಸುತ್ತೆನೆ ಅಂತಾ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಲೀಕಯ್ಯ ಗುತ್ತೇದಾರ ಸವಾಲ್ ಹಾಕಿದ್ದಾರೆ.

  • ಮೂವರು ಉದ್ಭವ ಮೂರ್ತಿಗಳು ಚುನಾವಣೆ ಮುಗಿದ್ಮೇಲೆ ಮನೆಗೆ ಹೋಗ್ತಾರೆ: ಪ್ರಿಯಾಂಕ್ ಖರ್ಗೆ

    ಮೂವರು ಉದ್ಭವ ಮೂರ್ತಿಗಳು ಚುನಾವಣೆ ಮುಗಿದ್ಮೇಲೆ ಮನೆಗೆ ಹೋಗ್ತಾರೆ: ಪ್ರಿಯಾಂಕ್ ಖರ್ಗೆ

    – ರಾಜ್ಯ ಸರ್ಕಾರದ ಬಗ್ಗೆ ಪ್ರಧಾನಿ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು

    ಕಲಬುರಗಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಉಮೇಶ್ ಜಾಧವ್, ಮಾಲೀಕಯ್ಯ ಗುತ್ತೇದಾರ್ ಹಾಗೂ ಬಾಬುರಾವ್ ಚಿಂಚನಸೂರು ಉದ್ಭವ ಮೂರ್ತಿಗಳಾಗಿದ್ದು, ಚುನಾವಣೆ ಬಳಿಕ ಮನೆಗೆ ವಾಪಸ್ ಹೋಗ್ತಾರೆ ಎಂದು ಸಮಾಜಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕ ಉಮೇಶ್ ಜಾಧವ್, ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಈ ಮೂರು ಶಾಸಕರು ತ್ರಿಮೂರ್ತಿಗಳು ಒಂದು ರೀತಿ ಉದ್ಭವಮೂರ್ತಿಗಳ ಹಾಗೆ. ಈ ಚುನಾವಣೆ ಮುಗಿದ ನಂತರ ಉದ್ಭವ ಮೂರ್ತಿಗಳು ಪತನವಾಗ್ತಾರೆ ಎಂದಿದ್ದಾರೆ. ಹಾಗೆಯೇ ಚಿಂಚೋಳಿಯಲ್ಲಿ ಯಾವ ಪ್ರೈವೇಟ್ ಲಿಮಿಟೆಡ್ ಕಂಪನಿಯಿದೆ ಗೊತ್ತಿಲ್ವಾ ಎಂದು ಉಮೇಶ್ ಜಾಧವ್ ಅವರಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

    ಜಾಧವ್ ಅವರಿಗೆ ಬಿಜೆಪಿಯಲ್ಲಿ ದೊಡ್ಡ ಅವಮಾನ ಆಗಿದೆ. ಮೋದಿ ಕಲಬುರಗಿಯಲ್ಲಿ ಭಾಷಣ ಮಾಡಿದಾಗ ಜಾಧವ್ ಹೆಸರನ್ನಾದರು ಹೇಳಿದ್ದಾರಾ? ಹಾಗಾದರೇ ಅವರಿಗೆ ಏನು ಮರ್ಯಾದೆ ಉಳಿಯಿತು? ಬಿಜೆಪಿಯವರು ಲೋಕಸಭೆಗೆ ಜಾಧವ್ ಹೆಸರು ಘೋಷಿಸಿಲ್ಲ. ಜಾಧವ್ ಅವರೇ ಸ್ವಯಂ ಘೋಷಿತ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಮಾತಾಡಿದ್ದಾರೆ. ಜಾಧವ್ ಸೇರಿದಂತೆ ಯಾರೇ ಸ್ಪರ್ಧೆ ಮಾಡಿದರೂ ನಮಗೆ ಚುನಾವಣೆ ಮಾಡೋದು ಗೊತ್ತು. ಹಿಂದೆ ಎಂ.ವೈ.ಪಾಟೀಲ್‍ಗೆ ಕೈಕೊಟ್ಟಂತೆ ಬಿಜೆಪಿ ಜಾಧವಗೂ ಕೈಕೊಡಬಹುದು. ಕೈಕೊಡೋ ಗುಣ ಬಿಜೆಪಿ ಸ್ವಭಾವದಲ್ಲಿಯೇ ಇದೆ ಎಂದು ಕಿಡಿಕಾರಿದ್ದಾರೆ.

    ಕೇಂದ್ರದ ಯೋಜನೆಗಳು ರೈತರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ಅಡ್ಡಗೋಡೆ ಎಂಬ ಮೋದಿ ಹೇಳಿಕೆಗೆ ಆಕ್ರೋಶ ವ್ಯಕ್ತಿಪಡಿಸಿದ್ದಾರೆ. ಈ ರೀತಿ ಹೇಳಿಕೆ ನೀಡಲು ಪ್ರಧಾನಿ ನರೇಂದ್ರ ಮೋದಿಯವರಿಗೆ ನಾಚಿಕೆಯಾಗಬೇಕು. ನಿಜವಾಗಿ ರೈತರ ಪರವಾಗಿ ಮೋದಿ ಏನು ಕೆಲಸ ಮಾಡಿದ್ದಾರೆ? ಸಾಲ ಮನ್ನಾ ಬಗ್ಗೆ ಎಷ್ಟೇ ಒತ್ತಡ ಇದ್ದರೂ ಕ್ರಮ ತೆಗೆದುಕೊಂಡಿಲ್ಲ. ಸ್ವತಃ ನರೇಂದ್ರ ಮೋದಿ ಆರ್.ಎಸ್‍.ಎಸ್ ಕೈಗೊಂಬೆಯಾಗಿದ್ದಾರೆ  ಎಂದು ಕರ್ನಾಟಕದ ಸಿಎಂ ರಿಮೋಟ್ ಕಂಟ್ರೋಲ್ ಸಿಎಂ ಎಂಬ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಪಣ ತೊಟ್ಟರಾ ಮೋದಿ?

    ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಪಣ ತೊಟ್ಟರಾ ಮೋದಿ?

    -ಖರ್ಗೆ ಕೋಟೆಯಲ್ಲಿ ಮೋದಿ ರಣ ಕಹಳೆ
    -ಖರ್ಗೆ ಸೋಲಿಗೆ ಕಾದು ಕುಳಿತು ತ್ರಿಮೂರ್ತಿಗಳು!

    ಕಲಬುರಗಿ: ಪಾಕಿಸ್ತಾನಕ್ಕೆ ಮಧ್ಯರಾತ್ರಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮುಖಾಂತರ ಅದರ ಬೆನ್ನು ಮುಳೆ ಮುರಿದ ಮೋದಿ, ಇದೀಗ ಸಂಸತ್ತಿನಲ್ಲಿ ಅವರಿಗೆ ಪ್ರಬಲವಾಗಿ ದಿಟ್ಟ ಉತ್ತರ ನೀಡುವ ಮಲ್ಲಿಕಾರ್ಜುನ ಖರ್ಗೆ ಮಣಿಸಲು ಬುಧವಾರ ಮಧ್ಯಾಹ್ನವೇ ಖುದ್ದು ಮೋದಿ ಕಲಬುರಗಿಗೇ ಆಗಮಿಸುತ್ತಿದ್ದಾರೆ.

    ಸದ್ಯ ಸಂಸತ್ತಿನಲ್ಲಿ ಪ್ರಧಾನಿ ಮೋದಿಯ ಪ್ರತಿ ಮಾತಿಗೂ ಹರಿತವಾಗಿ ದಿಟ್ಟ ಉತ್ತರ ನೀಡುತ್ತಿದ್ದ ಮಲ್ಲಿಕಾರ್ಜುನ ಖರ್ಗೆಗೇ, ಈ ಬಾರಿ ಶತಾಯಗತಾಯ ಸೋಲಿಸಲು ಪ್ರಧಾನಿ ಮೋದಿ ಟೀಂ ಇದೀಗ ಸಿದ್ಧವಾಗಿದೆ. ಈ ಬಾರಿ ಕಲಬುರಗಿ ಕ್ಷೇತ್ರದಲ್ಲಿ ಖರ್ಗೆರನ್ನು ಸೋಲಿಸಿ ಕಮಲ ಅರಳಿಸಲು ಖುದ್ದು ಮೋದಿ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದು, ಖರ್ಗೆ ಸೋಲಿಸಲು ಕೈ ಶಾಸಕ ಡಾ.ಉಮೇಶ್ ಜಾಧವ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಮೂಲಕ ಖರ್ಗೆ ಅವರ ಕಲಬುರಗಿ ಕೋಟೆ ಭೇಧಿಸಲು ಮೋದಿ ಆ್ಯಂಡ್ ಟೀಂ ಸಜ್ಜಾಗಿದ್ದಾರೆ. ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಲಬುರಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ಬಿಜೆಪಿಯ ಬೃಹತ ಸಮಾವೇಶ ನಡೆಯಲ್ಲಿದ್ದು, ಕಾರ್ಯಕರ್ತರನ್ನು ಪ್ರಧಾನಿ ಮೋದಿ ತಮ್ಮ ಮಾತುಗಳಿಂದ ಹುರಿದುಂಬಿಸಲಿದ್ದಾರೆ.

    ಮಲ್ಲಿಕಾರ್ಜುನ ಖರ್ಗೆ ಅವರ ಕಲಬುರಗಿ ಕೋಟೆಯ ಮೇಲೆ ಕಮಲ ಅರಳಿಸಲು ತ್ರಿಮೂತ್ರಿಗಳಾದ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಬಾಬುರಾವ್ ಚಿಂಚನಸೂರ್ ಮತ್ತು ಉಮೇಶ್ ಜಾಧವ್ ರಣತಂತ್ರ ರಚಿಸುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಾಳಯ ಸೇರುತ್ತಿರುವ ಡಾ.ಉಮೇಶ್ ಜಾಧವ್ ಅವರನ್ನು ಖರ್ಗೆ ಎದುರಿಗೆ ನಿಲ್ಲಿಸಲು ಎಲ್ಲ ರೀತಿಯ ತಯಾರಿಗಳು ನಡೆದಿವೆ. ಈ ಚುನಾವಣೆಯನ್ನು ಬಿಜೆಪಿಯ ಮೂರು ಜನ ಶಾಸಕರು ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಮೋದಿ ಕರೆ ಕೊಟ್ಟಿದ್ದು, ಈ ಬಾರಿ ಶತಾಯ ಗತಾಯ ಖರ್ಗೆ ಸೋಲಿಸಲು ಕೇಸರಿ ಪಕ್ಷ ಪಣ ತೊಟ್ಟಿದೆ ಎನ್ನಲಾಗುತ್ತಿದೆ.

    ಒಂದೆಡೆ ಜಿಲ್ಲೆಯ ಕೋಲಿ ಸಮಾಜದ ಮುಖಂಡ ಬಾಬುರಾವ್ ಚಿಂಚನಸೂರ್, ಇನ್ನೊಂದಡೆ ಮಾಲೀಕಯ್ಯ ಗುತ್ತೇದಾರ ಖರ್ಗೆ ಸಹ ಸೋಲಿಸಲು ಮುಂದಾಗಿದ್ದಾರೆ. ಇತ್ತ ಖಮರುಲ್ ಅವರನ್ನ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ವಂಚಿತರಾಗಿ ಮಾಡಿರುವ ಹಿನ್ನೆಲೆ ಮುಸ್ಲಿಂ ಮತದಾರರು ಸಹ ಖರ್ಗೆ ಪರ ಮತ ಚಲಾಯಿಸದೇ ತಟಸ್ಥರಾಗಿರಲು ಯೋಚಿಸುತ್ತಿದ್ದಾರೆ. ಸೋಲಿನ ಹತಾಶೆಯಲ್ಲಿರುವ ಖರ್ಗೆ ಇದು ನನ್ನ ಕೊನೆಯ ಚುನಾವಣೆ ಅಂತಾ ಜನರಿಗೆ ಎಮೋಷನಲ್ ಮಾಡಿ ಮತಗಳಿಸಲು ಮುಂದಾಗಿದ್ದಾರೆ ಎಂದು ಬಿಜೆಪಿ ವ್ಯಂಗ್ಯ ಮಾಡುತ್ತಿದೆ.

    ಸದ್ಯ ಮೇಲನೋಟಕ್ಕೆ ಖರ್ಗೆ ಪ್ರಬಲವಾಗಿದ್ರು ಬದಲಾದ ರಾಜಕೀಯದಲ್ಲಿ ಅವರು ಇದೀಗ ಒಂಟಿಯಾದಂತಾಗಿದೆ. ಇನ್ನು ಧರಂಸಿಂಗ್ ಮತ್ತು ಖಮರುಲ್ ಇಸ್ಲಾಂ ಇಲ್ಲದ ಈ ಚುನಾವಣೆಯಲ್ಲಿ ಖರ್ಗೆ ಏಕಾಂಗಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯಾಂಕ್ ಖರ್ಗೆಯನ್ನು ಲುಚ್ಚಾ ಅಂತ ಕರೆದ ಮಾಲೀಕಯ್ಯ ಗುತ್ತೇದಾರ್

    ಪ್ರಿಯಾಂಕ್ ಖರ್ಗೆಯನ್ನು ಲುಚ್ಚಾ ಅಂತ ಕರೆದ ಮಾಲೀಕಯ್ಯ ಗುತ್ತೇದಾರ್

    ಕಲಬುರಗಿ: ಚಿತ್ತಾಪುರದ ಶಾಸಕ ಪ್ರಿಯಾಂಕ್ ಖರ್ಗೆ ಮೊನ್ನೆ ಕಣ್ಣು ಬಿಟ್ಟಿದ್ದಾನೆ. ಆತನನ್ನು ಬಚ್ಚಾ ಅಂತಾ ಕರೆಯಬಾರದು ಅಂತೆ. ಅವನೊಬ್ಬ ಲುಚ್ಚಾ ಅಂತ ಮಾಲೀಕಯ್ಯ ಗುತ್ತೇದಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಚಿತ್ತಾಪುರದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಅವರು, ಚಿತ್ತಾಪುರಕ್ಕೆ ಚುನಾವಣೆಯ ಸಂದರ್ಭದಲ್ಲಿ ನಾನು ಮತ್ತೆ ಬರ್ತೀನಿ. ಸಭೆಯಲ್ಲಿದ್ದ ಎಲ್ಲರು ನನ್ನ ನಂಬರ್ ಬರೆದುಕೊಳ್ಳಿ ಅಂತಾ ಹೇಳಿ ಮಾಲೀಕಯ್ಯ ತನ್ನ ಫೋನ್ ನಂಬರ್ ನೀಡಿದ್ದಾರೆ.

    ಬಳಿಕ ನಿಮಗೆ ಯಾರಾದ್ರು ತೊಂದ್ರೆ ಕೊಟ್ಟರೆ ತಕ್ಷಣ ನನಗೆ ಕರೆ ಮಾಡಿ. ಚಿತ್ತಾಪುರದಲ್ಲಿ ಯಾರಿಗೂ ಕೂಡ ಭಯ ಪಡುವಂತಿಲ್ಲ. ಕಾಂಗ್ರೆಸ್ ನಲ್ಲಿ ಏನೇ ಆಗಬೇಕಾದ್ರೂ ಖರ್ಗೆ ಚೇಲಾಗಳಿಗೆ ಆಗಬೇಕು. ಹಾಗಾಗಿಯೇ ಇಂದು ಕಾಂಗ್ರೆಸ್ ಮುಕ್ತ ಮಾಡೋದಕ್ಕೆ ನಾನು ಪಣ ತೊಟ್ಟಿದ್ದೆನೆ. ಚಿತ್ತಾಪುರದ ಶಾಸಕ ಪ್ರಿಯಾಂಕ್ ಖರ್ಗೆ ಮೊನ್ನೆ ಕಣ್ಣು ಬಿಟ್ಟಿದ್ದಾನೆ. ಅವನೊಬ್ಬ ಲುಚ್ಚಾ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕದಲ್ಲಿ ಕೌರವ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ಮಾಡ್ತಿದೆ. ಬಿಜೆಪಿಯಲ್ಲಿ ನ್ಯಾಯದ ಬತ್ತಳಿಕೆ ಇದೆ. ಕಾಂಗ್ರೆಸ್ ನಲ್ಲಿ ಭ್ರಷ್ಟಾಚಾರದ ಬತ್ತಳಿಕೆ ಇದೆ. ಕಲಬುರಗಿ ಭಾಗದಲ್ಲಿ ಧರ್ಮಸಿಂಗ್ ಖರ್ಗೆ ಸಂಗ್ಯಾ ಬಾಳ್ಯಾ ಇದ್ದ ಹಾಗೆ. ಒಬ್ಬರಿಗೆ ಮಂತ್ರಿ ಮಾಡಿದ್ರೆ ಮತ್ತೊಬ್ಬರಿಗೆ ಹಾರ್ಟ್ ಅಟ್ಯಾಕ್ ಆಗುತ್ತೆ. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಖರ್ಗೆ ನಮ್ಮ ಮನೆ ಬಾಗಿಲಿಗೆ ಬಂದಿದ್ದ. ಆಗ ನಮ್ಮ ತಂದೆ ವೆಂಕಯ್ಯ ಕೂಸಯ್ಯ ಗುತ್ತೆದಾರ್ ಬಂಗಾರಪ್ಪನಿಗೆ ಹೇಳಿ ಮಂತ್ರಿ ಸ್ಥಾನ ಕೊಡಿಸಿದ್ದರು. ಈ ಮಾತು ಹೇಳೊ ಪರಿಸ್ಥಿತಿ ಬರ್ತಿರಲಿಲ್ಲ. ಆದ್ರೆ ಖರ್ಗೆ ಮಗ ಬಹಳ ಮುಂದು ಹೋಗಿದ್ದಾನೆ ಅದಕ್ಕೆ ಹೇಳುತ್ತಿದ್ದೇನೆ. ಈ ಮಾತು ಸುಳ್ಳು ಆದ್ರೆ ಬುದ್ಧವಿಹಾರಕ್ಕೆ ಬರಲಿ ಖರ್ಗೆ ಅಲ್ಲೇ ಆಣೆ ಪ್ರಮಾಣ ಮಾಡೋಣ ಅಂತ ಗುತ್ತೇದಾರ್ ಹೇಳಿದ್ದಾರೆ.

    ಕಲಬುರಗಿಯ ಅಫ್ಜಲ್ಪುರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಗುತ್ತೇದಾರ್ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.