Tag: Malenadu

  • ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ ಕಾರ್ಯ – 7 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ

    ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ ಕಾರ್ಯ – 7 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ

    – ಕಾಡಂಚಿನ ಕುಗ್ರಾಮಗಳಿಗೆ ಮೂಲಭೂತ ಸೌಕರ್ಯ ಭಾಗ್ಯ

    ಚಿಕ್ಕಮಗಳೂರು: ಇತ್ತೀಚಿಗೆ ಏಳೆಂಟು ಜನ ನಕ್ಸಲರು (Naxalites) ಸೆರೆಂಡರ್ ಆಗುವಾಗ ಸರ್ಕಾರಕ್ಕೆ ಮಲೆನಾಡು (Malenadu) ಅಭಿವೃದ್ಧಿ ಆಗಬೇಕು, ಶರಣಾದ ನಕ್ಸಲರಿಗೆ ಕೊಡುವ ಪ್ಯಾಕೇಜ್ ಕೊಡಬೇಕು ಎಂಬ ಬೇಡಿಕೆಯನ್ನ ಮುಂದಿಟ್ಟಿತ್ತು. ಅದಕ್ಕೆ ಸರ್ಕಾರ ಕೂಡ ಗ್ರೀನ್ ಸಿಗ್ನಿಲ್ ಕೊಟ್ಟಿತ್ತು. ಹಾಗಾಗಿಯೇ ಇತಿಹಾಸದಲ್ಲಿ ಮೊಟ್ಟ-ಮೊದಲು ನಕ್ಸಲರು ಸಿಎಂ ಎದುರು ಶರಣಾಗಿದ್ದರು. ಆದರೆ ಸರ್ಕಾರ ಇಂದು ಮಲೆನಾಡಿಗೆ 7 ಕೋಟಿ ಹಣ ಕೊಟ್ಟಿರೋದು ನೋಡಿದರೆ ಶರಣಾದ ನಕ್ಸಲರಿಗೆ ಕೊಟ್ಟ ಮಾತು ಉಳಿಸಿಕೊಂಡಿತಾ ಎಂಬ ಅನುಮಾನ ದಟ್ಟವಾಗಿದೆ.

    ಸರ್ಕಾರ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆಂದು ಕಾಫಿನಾಡಿಗೆ 7 ಕೋಟಿ 12 ಲಕ್ಷ ಹಣ ಬಿಡುಗಡೆ ಮಾಡಿದೆ. ನಕ್ಸಲರು ಮಲೆನಾಡು ಅಭಿವೃದ್ಧಿಗಾಗಿ ಹೋರಾಡುತ್ತಿದ್ದಾಗ ಅಲ್ಲಿನ ಪರಿಸ್ಥಿತಿ ಹೇಗಿತ್ತೋ ಹಲವೆಡೆ ಇಂದಿಗೂ ಹಾಗೇ ಇದೆ. ಕಾಡಂಚಿನ ಕುಗ್ರಾಮಗಳ ರಸ್ತೆ-ನೀರು-ಕರೆಂಟ್-ಕಾಲುಸಂಕ ಸೇರಿದಂತೆ ವಿವಿಧ ಸೌಲಭ್ಯ ನೀಡಲು ಸರ್ಕಾರ 7 ಕೋಟಿ ಹಣ ಬಿಡುಗಡೆ ಮಾಡಿದೆ. ಮಲೆನಾಡಿನ ಎಷ್ಟೋ ಗ್ರಾಮಗಳು ಈಗ ರಸ್ತೆ ನೋಡೋ ಅಂತಹಾ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಆಗಮನ ಹಿನ್ನೆಲೆ ಕೇಸರಿ ಧ್ವಜ ತೆರವಿಗೆ ಪೊಲೀಸರು ಸೂಚನೆ; ದಿಢೀರ್​ ಪ್ರತಿಭಟನೆ

    ಇನ್ನು ಸರ್ಕಾರ ನಕ್ಸಲರು ಸರ್ಕಾರ-ವ್ಯವಸ್ಥೆ ವಿರುದ್ಧ ಹೋರಾಡುತ್ತಿದ್ದಾಗಲೇ ಸರ್ಕಾರ ಕಾಡಂಚಿನ ಕುಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರೆ ನಕ್ಸಲರು-ಪೊಲೀಸರು-ಮಾಹಿತಿದಾರರ ಹೆಸರಲ್ಲಿ ಜನಸಾಮಾನ್ಯರು ಸಾಯುತ್ತಿರಲಿಲ್ಲ. ಆಗ ಸರ್ಕಾರ ನಕ್ಸಲರನ್ನು ಹುಡುಕೋದಕ್ಕೆ, ಸಿಕ್ಕಿದ್ರೆ ಸಾಯ್ಸೋದಕ್ಕೆ ಕೋಟ್ಯಂತರ ರೂ. ಖರ್ಚು ಮಾಡಿತ್ತು. ಅವರು ಆಚೆ ಬರುತ್ತೇವೆ ಅಂದಾಗ ಮತ್ತದೇ ಲಕ್ಷ-ಲಕ್ಷ ಹಣ ಕೊಟ್ಟು, ಸ್ಟೇಫಂಡ್, ಜಮೀನು ಅಂತ ಮತ್ತದೇ ಸರ್ಕಾರದ ಹಣವನ್ನ ಅವರಿಗೆ ಕೊಟ್ಟಿತು. ಸರ್ಕಾರಗಳು ಇದೇ ಕೆಲಸ ಅಂದೇ ಮಾಡಿದ್ದರೆ ಹಳ್ಳಿಗಳು ಅಭಿವೃದ್ಧಿಯಾಗುತ್ತಿತ್ತು. ಯಾರೂ ಸಾಯುತ್ತಿರಲಿಲ್ಲ. ಎಎನ್‌ಎಫ್ ಸಿಬ್ಬಂದಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಡು-ಮೇಡು ಅಲೆಯೋದು ತಪ್ಪುತ್ತಿತ್ತು. ಸರ್ಕಾರ ಈಗ್ಲಾದ್ರು ಎಚ್ಚೆತ್ತುಕೊಂಡಿರೋದು ಸಂತೋಷದ ಸಂಗತಿ. ಈಗಾಗಲೇ 7.12 ಕೋಟಿ ಬಿಡುಗಡೆಯಾಗಿದ್ದು, ಸರ್ಕಾರ ಎಲ್ಲೆಲ್ಲಿಗೆ ಏನೇನು ಬೇಕೆಂದು ಡಿ.ಪಿ.ಆರ್. ತಯಾರಿಸಿ ಸರ್ಕಾರದ ಅನುಮೋದನೆಯೊಂದಿಗೆ ಹಳ್ಳಿಗಳ ಅಭಿವೃದ್ಧಿಗೆ ಮುಂದಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮೊದಲಿನಂತಿಲ್ಲ, ಹೇಳಲಾಗದ ಒತ್ತಡ ಇದೆ: ರಾಜಣ್ಣ ಬಾಂಬ್

    ಒಟ್ಟಾರೆ, ಅಂತು-ಇಂತು ಮಲೆನಾಡ ಕುಗ್ರಾಮ ಹಾಗೂ ಕಾಡಂಚಿನ ಗ್ರಾಮಗಳಿಗೆ ಅಭಿವೃದ್ಧಿ ನೋಡುವ ಭಾಗ್ಯ ಬಂದಿದೆ. 75 ವರ್ಷಗಳ ಬಳಿಕ ಎಷ್ಟೋ ಗ್ರಾಮಗಳು ರಸ್ತೆ-ಕಾಲುಸಂಕ-ಶುದ್ಧ ನೀರು-ಚರಂಡಿ-ಕರೆಂಟ್ ನೋಡೋ ಭಾಗ್ಯ ಸಿಗಲಿದೆ. ಇದನ್ನೂ ಓದಿ:ಚುನಾವಣೆಗೂ ಮುನ್ನವೇ ಬಿಹಾರ ಯುವಜನಕ್ಕೆ ಮೋದಿ ಭರ್ಜರಿ ಗಿಫ್ಟ್‌

  • ಮಲ್ನಾಡ್ ಬ್ಯೂಟಿಯ ಬೆನ್ನತ್ತಿ – ಒಂದು ಟ್ರಿಪ್ ಅಲ್ಲದ ಟ್ರಿಪ್!

    ಮಲ್ನಾಡ್ ಬ್ಯೂಟಿಯ ಬೆನ್ನತ್ತಿ – ಒಂದು ಟ್ರಿಪ್ ಅಲ್ಲದ ಟ್ರಿಪ್!

    ಲೆನಾಡು (Malenadu) ಅಂದ್ರೆ ಅದೊಂದು ಸುಂದರವಾದ ಪ್ರಪಂಚ.. ಅದಕ್ಕೆ ಭೂಮಿ ಮೇಲಿನ ಯಾವ ಸ್ಥಳ ಕೂಡ ಹೋಲಿಕೆ ಮಾಡೋಕೆ ಸಾಧ್ಯವಿಲ್ಲ..! ಇದು ನಾನಲ್ಲಿಯವನು ಎಂಬ ಕಾರಣಕ್ಕೆ ಹೇಳ್ತಿರೋ ಮಾತಲ್ಲ. ಇಲ್ಲಿನ ಸುಂದರವಾದ ಪ್ರಕೃತಿ, ಬೆಟ್ಟ ಗುಡ್ಡ, ಜನ ಜೀವನ, ವಿಶೇಷ ಸಂಸ್ಕೃತಿ, ಅಡುಗೆ ಹೀಗೆ ನಾನಾ ರೀತಿಯ ವೈವಿದ್ಯತೆ ಹೊಸ ಜಗತ್ತನ್ನೇ ತನ್ನೊಳಗೆ ಸೃಷ್ಟಿಸಿಕೊಂಡಿದೆ.

     

    ಈ ನೆಲದಲ್ಲಿ ಒಂದು ಸುವಾಸನೆಯ ಕಂಪಿದೆ.. ಇಲ್ಲಿನ ಗಾಳಿಯಲ್ಲಿ ಹಾಗೇ ತೇಲಿ ಬರುವ ಸಪ್ತಸ್ವರಗಳಿವೆ… ಇದನ್ನೆಲ್ಲ ಇಂದಿಗೂ ಇಲ್ಲಿನ ಪ್ರಕೃತಿ ಕಾಪಾಡಿಕೊಂಡು ಬಂದಿದೆ. ಇದನ್ನೆಲ್ಲ ನೀವು ಅನುಭವಿಸೋಕೆ ಮಲೆನಾಡಿನ ಕಾಡುಗಳನ್ನು ಸುತ್ತಬೇಕು. ಇಲ್ಲಿ ಟ್ರಿಪ್‌ ಮಾಡ್ಬೇಕು.. ಅಂದ್ರೆ ಸದಾ ಗಿಜಿಗುಡುವ ಜಾಗ ಬಿಟ್ಟು ಬರಬೇಕು! ಇಲ್ಲೂ ಅಷ್ಟೇ ತುಂಬಿ ತುಳುಕುವ ತಾಣಗಳನ್ನು ಬಿಟ್ಟು, ರಸ್ತೆಯೇ ಇಲ್ಲದ ರಸ್ತೆಯಲ್ಲಿ ಸಾಗಬೇಕು! ಒಂದು ಟ್ರಿಪ್ ಅಲ್ಲದ ಟ್ರಿಪ್ ಮಾಡ್ಬೇಕು!

    ಹೌದು, ನಾನು ಕಳೆದ ವಾರನೇ ಹೇಳಿದ್ದೆ ಇಲ್ಲಿನ ಮಳೆಗಾಲದಲ್ಲಿ ನಾನಾ ಜಲಪಾತಗಳು ಹುಟ್ಟಿಕೊಳ್ತವೆ.. ಮಳೆ ಮುಗಿದ ತಕ್ಷಣ ಅವೆಲ್ಲ ಹಾಗೇ ಮತ್ತೆ ಮೌನವಾಗಿ… ಇಲ್ಲದಂತೆ ಸಾಗರದಲ್ಲಿ ಕರಗಿ ಕಳೆದು ಹೋಗುತ್ತವೆ. ಅಂತಹ ಸಾವಿರ ಸಾವಿರ ಜಾಗಗಳು ನಮ್ಮ ಪಶ್ಚಿಮಘಟ್ಟಗಳಲ್ಲಿ ಇವೆ. ಸುಮ್ಮನೆ ಹಾಗೇ ಶರಾವತಿಯ ಹಿನ್ನೀರಿನ ಜಗತ್ತು ಹೊನ್ನೆಮರಡಿನ ಆ ಕಾಡುಗಳನ್ನು ಸುಮ್ಮನೆ ಮೌನವಾಗಿ ಸುತ್ತುವಾಗ ನನಗೆ ಇಂತಹ ಪ್ರಪಂಚದ ಅನುಭವವಾಗಿದ್ದು. ಇವತ್ತು ಅಲ್ಲಿ ಜೋರು ಮಳೆಯಾಗ್ತಿದೆ… ಸುಮ್ಮನೆ ಒಂದು ಗಟ್ಟಿಮುಟ್ಟಾದ ರೈನ್‌ಕೋಟನ್ನು ಹಾಕಿ ಹೊರಟರೆ ಅಲ್ಲಿನ ಕಾಡುಗಳ ಗೂಗಲ್‌ ಮ್ಯಾಪ್‌ನಲ್ಲಿ ಸಿಕ್ಕದ ದಾರಿಗಳಲ್ಲಿ ಓಡಾಡಿದರೆ ಆ ಅನುಭವ ಖಂಡಿತ ಸಿಗುತ್ತೆ! ಇದನ್ನೂ ಓದಿ: ಮಲೆನಾಡಿನ ಮಳೆಗಾಲದ ಗೆಳೆಯರು!

    ನನಗಿನ್ನೂ ನೆನಪಿದೆ.. ಅಂತಹ ಬಿಸಿಲಲ್ಲೂ ಸದಾ ನೆರಳು.. ರಾತ್ರಿಯ ಅನುಭವ ಕೊಡುವ ಕಾಡು.. ಇಂತಹ ಕಾಡು, ಮಳೆಯನ್ನೆ ಅಲ್ವಾ ಕುವೆಂಪು ವರ್ಣಿಸಿದ್ದು, ಇಂತಹ ಸ್ವರ್ಗದಲ್ಲೇ ಅಲ್ವಾ ತೇಜಸ್ವಿ ಸುತ್ತಾಡಿದ್ದು. ಹೌದು ಇಂತಹದೇ ಕಾಡು! ತೇಜಸ್ವಿ ʻಕಿವಿʼಯನ್ನು ಕರೆದುಕೊಂಡು ಹೋಗುತ್ತಿದ್ದಿದ್ದು ಇದೇ ಬಗೆಯ ಕಾಡುಗಳಲ್ಲೇ. ಮಳೆಗಾಲದಲ್ಲಿ ಹುಟ್ಟಿ ಆಗಿಹೋಗುವ ಜಲಪಾತಗಳು ಮಾತ್ರ ಅಲ್ಲಿಲ್ಲ.. ಎಂದೂ ಬತ್ತದ ಹೆಸರಿಲ್ಲದ ಶರಾವತಿಗೆ ಉಸಿರು ಕೊಡುವ ಝರಿಗಳು ಅಲ್ಲಿವೆ. ಅವ್ಯಾವುದಕ್ಕೂ ಹೆಸರಿಲ್ಲ. ಮ್ಯಾಪ್‌ನಲ್ಲಿ ಗುರುತಿಸಿಕೊಳ್ಳುವ ಹಂಬಲವೂ ಅವುಗಳಿಗಿಲ್ಲ. ಅವುಗಳನ್ನು ನಾವಾಗಿಯೇ ಹುಡುಕಿ ಹೊರಟಾಗ ಕಣ್ಣಿಗೆ ಬೀಳುತ್ತವೆ ಅಷ್ಟೇ!

    ಹೊನ್ನೆಮರಡು (Honnemaradu), ಹಂಸಗಾರು (Hamsagaru) ಘಟ್ಟದ ಕಾಡುಗಳಲ್ಲಿ ಇಂತಹ ಲೆಕ್ಕವಿಲ್ಲದಷ್ಟು ಝರಿಗಳಿವೆ. ಅದೆಷ್ಟೋ ಶತಮಾನಗಳ ದೈತ್ಯ ಮರಗಳಿವೆ.. ಅದೆಷ್ಟೋ ನಮಗೆ ನಿಮಗೆ ಪರಿಚಯವಿಲ್ಲದ ಹಕ್ಕಿ, ಬಳ್ಳಿ ಮರಗಳಿವೆ..! ಅವುಗಳನ್ನು ನೋಡುವ ಒಂದು ಟ್ರಿಪ್‌ ಮಾಡೋದಾದ್ರೆ ಸಾಗರದ ಹೊನ್ನೆಮರಡು ಅಥವಾ ಹಂಸಗಾರಿನ ಘಟ್ಟಕ್ಕೆ ಹೋಗಬೇಕು. ಸಾಗರದಿಂದ ಎರಡೂ ಪ್ರದೇಶಗಳು ಜೋಗ ಮಾರ್ಗದಲ್ಲಿ ಸಿಗುತ್ತವೆ. ಈ ಘಟ್ಟ ಪ್ರದೇಶಕ್ಕೆ ಹೋಗುವುದಾದರೆ ಅರಣ್ಯ ಇಲಾಖೆಯ ಅನುಮತಿ ಬೇಕಾಗುತ್ತದೆ. ಅಲ್ಲದೇ ಸ್ಥಳೀಯರ ಸಹಾಯ ಬೇಕಾಗುತ್ತದೆ. ಇಲ್ಲವಾದರೆ, ಹೋಗಲು ಸಿಕ್ಕ ದಾರಿ ವಾಪಸ್‌ ಸಿಗೋದು ಕಷ್ಟ!

    ಇದೇ ಟೈಮ್‌ನಲ್ಲೇ ಅಲ್ಲಿ ಇನ್ನೊಂಥರ ಅತಿಥಿಗಳ ಕಾಟ! ನೀವೆಲ್ಲ ನೋಡಿರ್ತಿರಿ.. ಜಿಗಳೆಗಳು.. ಅದೇ ಜಾತಿಯ ಉಂಬಳ ಎಂದು ಕರೆಯುವ ರಕ್ತ ಹೀರುವ ಜೀವಿಗಳ ಕಾಟ! ಅವು ಕಚ್ಚಿದ್ದೇ ಗೊತ್ತಾಗಲ್ಲ.. ಹೊಟ್ಟೆ ತುಂಬಾ ರಕ್ತ ಹೀರಿ ಬಾಯಿಬಿಟ್ಟ ಮೇಲೆ ವಿಪರೀತ ತುರಿಕೆ..! ಅವುಗಳನ್ನು ಅವಾಯ್ಡ್‌ ಮಾಡೋದು ಸ್ವಲ್ಪ ಕಷ್ಟ.. ಆದ್ರೆ ಡೆಟಾಲ್‌… ಸ್ಥಳೀಯರು ಬಳಸುವ ಹೊಗೆಸೊಪ್ಪು, ಸುಣ್ಣದಿಂದ ಕಚ್ಚದಂತೆ ಅಥವಾ ಕಚ್ಚಿ ಹಿಡಿದಿದ್ದನ್ನು ತೆಗೆದು ಹಾಕಲು ಬಳಸ್ಕೋಬಹುದು!

    ಈ ಭಾಗಗಳಲ್ಲಿ ನಿಮಗೆ ನಾನು ಕಳೆದ ವಾರ ಹೇಳಿದ ಎಲ್ಲಾ ಅತಿಥಿಗಳು ಸಿಗ್ತಾರೆ… ಕಳಲೆ, ನೂರಾರು ಬಗೆಯ ಅಣಬೆಗಳು (ಅದರಲ್ಲಿ ಕೆಲವಷ್ಟೇ ತಿನ್ನಲು ಯೋಗ್ಯವಾದದ್ದು), ಏಡಿ, ಸೀತಾಳೆಯಂತಹ ನೂರಾರು ಬಗೆಯ ಹೂಗಳು, ವಿವಿಧ ಜಾತಿಯ ಜೇನುನೊಣಗಳ ಗೂಡುಗಳು ಕಾಣಸಿಗುತ್ತವೆ.

    ಬಿದಿರಿನದ್ದೆ ಒಂದಷ್ಟು ರಾಶಿ ಗಿಡಗಳು ಬೆಳೆದಿರುವ ಜಾಗಗಳಲ್ಲಿ ಕಳಲೆಗಳು, ಕೆಲವೆಡೆ ಕಾಡುಪ್ರಾಣಿಗಳು ಅವುಗಳನ್ನು ಅಲ್ಲಲ್ಲಿ ತಿಂದು ಹಾಕಿರುತ್ತವೆ. ಇನ್ನೂ ಕೆಲವೆಡೆ ಸ್ಥಳೀಯರು ತೆಗೆದಿರುತ್ತಾರೆ. ಆದರೆ ಬಿದಿರಿನ ಸಂತತಿ ಮುಂದುವರೆಯಲಿ ಅಂತ ಒಂದೆರಡನ್ನ ಹಾಗೇ ಉಳಿಸಿರುತ್ತಾರೆ. ಅವು ಎರಡು ಮೂರು ದಿನಕ್ಕೆ ಬೆಳೆದು ದೊಟ್ಟ ಬಿದಿರಿನ ಮೇಳೆಯಂತೆ ಕಾಣುತ್ತವೆ! ಇನ್ನೂ ಅದೇ ಜಾಗದ ತೋಟಗಳಿಗೆ, ಕೆರೆಗಳ ಜಾಗಗಳಿಗಿಳಿದರೆ ಏಡಿ, ಮೀನುಗಳು ಕಣ್ಣಿಗೆ ಬೀಳುತ್ತವೆ. ಈಗೆಲ್ಲ ಅವುಗಳನ್ನು ಹಿಡಿಯುವ ಕ್ರೇಜ್‌ ಜನರಿಗೆ ಕಡಿಮೆ ಆಗಿದೆ. ಆದ್ರೆ ನೋಡೋಕಂತು ಸಿಕ್ಕೇ ಸಿಗ್ತವೇ!

    ಇನ್ನೂ ಅಣಬೆಗಳು ತಿನ್ನಲು ಯೋಗ್ಯವಾದಂತಹವು, ಹೆಗ್ಗಾಲಣಬೆ, ನುಚ್ಚಣಬೆ, ಎಣ್ಣೆ ಅಣಬೆ ಹೀಗೆ ಅವೆಲ್ಲ ಕೆಲವು ಫಲವತ್ತಾದ ಜಾಗಗಳಲ್ಲಿ ತಲೆ ಎತ್ತಿರುತ್ತವೆ. ಇನ್ನೂ ಕೆಲವರು ಸಿಡಿಲು ಬಡಿದ ಜಾಗಗಳಲ್ಲಿ, ಮಳೆ ಬಂದು.. ಒಂದೆರಡು ಬಿಸಿಲು ಬಿಟ್ಟರೆ ಹುಟ್ಟಿಕೊಳ್ಳುತ್ತವೆ ಎಂದು ಹೇಳುತ್ತಾರೆ. ಇನ್ನೂ ಕಾಡಿನ ಜಾತಿಯ ಅಣಬೆಗಳು ಊರಲ್ಲೂ ನೋಡಲು ಸಿಕ್ತವೇ! ಕೆಲವು ಜಾತಿಯವೂ ನೆಲದಲ್ಲಿ, ಇನ್ನೂ ಕೆಲವು ಮರಗಳ ಮೇಲೆ ಹಾಗೆ ಹುಟ್ಟಿಕೊಂಡಿರುತ್ತವೆ. ನೂರಾರು ಬಣ್ಣದ ಬಗೆ ಬಗೆಯ ಅಣಬೆಗಳು ಅಲ್ಲೆಲ್ಲ ಸಿಗ್ತವೆ… ಅವಕ್ಕೆಲ್ಲ ವಿಜ್ಞಾನಿಗಳು ಹೆಸರಿಟ್ಟಿದ್ದಾರೆ… ನಮ್ಮ ಹಳ್ಳಿ ಜನ ಎಲ್ಲಾ ಅಣಬೆಗೂ ಸೇರಿಸಿ.. ಕಾಡಣಬೆ ಅಂತ ಒಂದೇ ಪದದಲ್ಲಿ ಕರೆದು ಬಿಡ್ತಾರೆ..!

    ಹೊನ್ನೆಮರಡಿಗೆ ಹೋಗೋದು ಹೇಗೆ?
    ಹೊನ್ನೆಮರಡು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿಯ ಹಿನ್ನೀರು ಸುತ್ತುವರೆದಿರುವ ಒಂದು ಪುಟ್ಟ ಗ್ರಾಮ. ಈ ಸಾಹಸಮಯ ತಾಣ ಸಾಗರದಿಂದ 28 ಕಿ.ಮೀ ದೂರವಿದೆ. ಜೋಗ ಹೋಗುವ ಮಾರ್ಗದಲ್ಲಿ ಸಿಗುವ ಚೂರಿಕಟ್ಟೆಯಂದ ಎಡಕ್ಕೆ ತಿರುಗಿ ಒಂದು ಕಿ.ಮೀ ಪ್ರಯಾಣದ ಬಳಿಕ ಮುಖ್ಯರಸ್ತೆಯಿಂದ ಎಡಕ್ಕೆ ಸಿಗುವ ದಾರಿಗೆ ಇಳಿದರೆ, ಸುಮಾರು 10 ಕಿ.ಮೀ ಪ್ರಯಾಣದ ಬಳಿಕ ಈ ಊರು ಸಿಗುತ್ತದೆ.

    – ಗೋಪಾಲಕೃಷ್ಣ

  • ಮಲೆನಾಡಿನ ಮಳೆಗಾಲದ ಗೆಳೆಯರು!

    ಮಲೆನಾಡಿನ ಮಳೆಗಾಲದ ಗೆಳೆಯರು!

    ತ್ತೀಚೆಗೆ ಎಷ್ಟೋ ಜನ ಮಲೆನಾಡಿನ (Malenadu) ಭಾಗಗಳಿಗೆ ಟ್ರಿಪ್‌ (Tour) ಬಂದವರು ಅಲ್ಲಿನ ಮಳೆ (Rain), ಕಾಡು ವಿಡಿಯೋ ಮಾಡಿ ಯಾವಾಗಲೂ ಬಚ್ಚಲು ಮನೆ ಥರ ಇರುತ್ತೆ ಅನ್ನೋ ಸಿನಿಮಾ ಡೈಲಾಗ್‌ ಸೇರಿಸಿ ಹಂಚಿಕೊಳ್ತಿದಾರೆ. ಅವರಿಗೆಲ್ಲ ಮಲೆನಾಡು ಭೂಮಿ ಮೇಲಿನ ಸ್ವರ್ಗ ಅಂತ ಗೊತ್ತಿಲ್ಲ.. ಇಡೀ ವಿಶ್ವದಲ್ಲಿ ನನ್ನ ಪಾಲಿಗೆ ಕರ್ನಾಟಕದ (Karnataka) ಮಲೆನಾಡಿನ ಭಾಗಗಳು ಒಂದು ವಿಶೇಷವಾದ ಪ್ರಪಂಚವೇ ಸೈ.. ಹಾಗಂತ ಎಲ್ಲಾ ಪ್ರದೇಶಗಳಿಗೂ ತನ್ನದೇ ಆದ ಸೌಂದರ್ಯ, ವಿಶೇಷ ಇದ್ದೇ ಇರುತ್ತೆ.. ಅದು ಒಂದೊಂದು ಕಾಲದಲ್ಲಿ ಒಂದೊಂದು ಚೆಲುವು.. ಹಾಗೇ ಮಲೆನಾಡದಲ್ಲಿ ಮಳೆಗೆ ಇಲ್ಲಿನ ಪ್ರಕೃತಿ, ಜನಜೀವನ, ಸಣ್ಣ ಪುಟ್ಟ ಝರಿ ಜಲಪಾತಗಳು ಮತ್ತಷ್ಟು ಸೌಂದರ್ಯ ಹೆಚ್ಚಿಸುತ್ತವೆ.

    ಮಲೆನಾಡಿಗೆ ಮತ್ತಷ್ಟು ಜೀವ ತುಂಬುವ ವಿಶೇಷ ಅತಿಥಿಗಳು ಸಹ ಇದ್ದಾರೆ. ಅವರೆಲ್ಲ ಮಳೆಗಾಲಕ್ಕೆ ಬಂದು ಹೋಗುವವರು. ಈಗ ಬಂದ್ರೆ ಮತ್ತೆ ಬರೋದು ಮುಂದಿನ ಮಳೆಗಾಲಕ್ಕೆ..! ಅಂತಹ ಕೆಲವು ಅತಿಥಿಗಳ ಪರಿಚಯನಾ ಇವತ್ತು ಮಾಡ್ಕೊಡ್ತಿನಿ.

    ಅಪ್ಸರೆ ಜಡೆಯಂತ ಜಲಪಾತಗಳು!
    ಮಲೆನಾಡಿನಲ್ಲಿ ಬರುವ ಈ ದೊಡ್ಡ ದೊಡ್ಡ ಜಲಪಾತಗಳನ್ನು ನಾವು ನೀವೆಲ್ಲ ನೋಡೇ ಇರುತ್ತೇವೆ. ಆದ್ರೆ ಈ ಮಳೆಗಾಲದಲ್ಲಿ ಮಾತ್ರ ಬಂದು ಹೋಗುವ, ಎಷ್ಟೋ ಹೆಸರಿಲ್ಲದ ಜಲಪಾತಗಳು ಲೆಕ್ಕಕ್ಕೆ ಸಿಗುವುದಿಲ್ಲ. ಅವೆಲ್ಲ ಹೀಗೆ ಹೈವೇ ಪಕ್ಕದಲ್ಲಿ ಕಾರು ನಿಲ್ಲಿಸಿದ ತಕ್ಷಣ ಕಣ್ಣಿಗೂ ಬೀಳೋದಿಲ್ಲ. ಅಂತಹ ಅಪ್ಸರೆಯರ ಜಡೆ ಚೆಲುವು ಕಾಣಬೇಕಾದರೆ, ಪಶ್ಚಿಮ ಘಟ್ಟಗಳ ಕಾಡುಗಳನ್ನು ಸೇರಬೇಕು. ಯಾವ ನದಿಯೋ ಗೊತ್ತಿಲ್ಲ… ಎಲ್ಲೋ ಒಂದೊಂದು ಮೂಲೆಯಲ್ಲಿ ಸಣ್ಣದಾಗಿ ಹುಟ್ಟಿ ಅಲ್ಲಲ್ಲಿ ಅದೆಷ್ಟೋ ಕಡೆಗಳಲ್ಲಿ ಧುಮುಕಿ ಹರಿಯುವ ಈ ಜಲಪಾತಗಳಿಗೆ ಹೆಸರಿಟ್ಟವರಿಲ್ಲ. ನೋಡಿದವರ ಸಂಖ್ಯೆಯೂ ಕಡಿಮೆ..! ಪೇಟೆಯ ಜನಕ್ಕೆ ಆ ಜಾಗಗಳು ಗೊತ್ತಿಲ್ಲ.. ಅಲ್ಲಿಯ ಹಳ್ಳಿಯ ಜನಗಳಿಗೆ ಅದು ವಿಶೇಷ ಎಂದು ಅನಿಸದೇ ಅವು ಅಪರಿಚಿತರಾಗೇ ಉಳಿದು ಬಿಡುತ್ತವೆ.

    ಪ್ರೆಟ್ಟಿ ಫ್ಲವರ್ಸ್‌!
    ಮಳೆಗಾಲದಲ್ಲಿ ಮಲೆನಾಡಿನ ಬಹುತೇಕ ಭಾಗಗಳಲ್ಲಿ ಈ ಸಮಯದಲ್ಲಿ ಮಾತ್ರ ಕಾಣಸಿಗುವ ಹೂಗಳು ಸಿಗುತ್ತವೆ. ಅದರಲ್ಲಿ ನಾನಾ ಬಗೆಯ ಆರ್ಕಿಡ್‌ಗಳು ಹಾಗೂ ನೆಲದ ಮೇಲೆಯೇ ಅರಳಿ ಮಣ್ಣಾಗುವ ಅದೆಷ್ಟೋ ಅಪರಿಚಿತ ಹೂಗಳು ಸೇರಿವೆ. ಈ ಸಮಯದಲ್ಲಿ ಹೆಚ್ಚಿನದ್ದಾಗಿ ಕಾಣಸಿಗುವುದು ಸೀತಾಳೆ ಹೂ, ಮತ್ತು ಕಾಡು ಅರಶಿನದ ಹೂ, ಇವು ಮಳೆಯಗಾಲದಲ್ಲಿ ಮಲೆನಾಡಿನ ಅಂಗಳವನ್ನು ಶೃಂಗರಿಸಲು ಬರುವ ವಿಶೇಷ ಆಭರಣಗಳು ಎಂದರೂ ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ಅಷ್ಟೊಂದು ಚೆಂದವಾಗಿ ಅಲ್ಲಲ್ಲಿ ಅಲಂಕಾರಕ್ಕೆ ಜೋಡಿಸಿಟ್ಟಂತೆ ಅರಳಿ ನಿಂತಿರುತ್ತವೆ ಈ ವಿಶೇಷ ಹೂಗಳು. ಇವು ಒಮ್ಮೆ ಆಗಿ ಹೋದರೆ ಮತ್ತೆ ಬರುವುದು ಮುಂದಿನ ಮಳೆಗಾಲಕ್ಕೆ. ಅಲ್ಲಿಯ ತನಕವೂ ಈ ಚೆಲುವು ಮಲೆನಾಡಿನ ಚೆಲುವೆಯ ಕೊರಳಿನಲ್ಲಿ ಹಾರವಾಗಿ ಉಳಿದಿರುತ್ತವೆ!

    ಕಲರ್‌ ಫುಲ್‌ ಅಣಬೆಗಳು!
    ಮಳೆ ಆರಂಭವಾಗಿ, ಒಂದು ಸಣ್ಣ ಬಿಸಿಲು ಬಿಟ್ರೆ ಸಾಕು.. ಕೆಲವು ಭಾಗಗಳಲ್ಲಿ ಅಣಬೆಗಳು ಬೆಳೆಯುತ್ತವೆ. ಅದರಲ್ಲಿ ಕೆಲವನ್ನು ಮನುಷ್ಯರು ತಿನ್ನಬಹುದು. ಇನ್ನೂ ಕೆಲವು ವಿಷಕಾರಿ ಅಂಶಗಳಿರುವಂತಹ ಅಣಬೆಗಳು ಇರುತ್ತವೆ. ಒಟ್ಟಾರೆ ಈ ಅಣಬೆಗಳಿಗೆ ಪ್ರಕೃತಿ ದತ್ತವಾಗಿ ಬಂದಂತಹ ವಿಶೇಷ ಬಣ್ಣ, ಸೌಂದರ್ಯ ಇರುತ್ತದೆ. ಇಂತಹ ವಿಶೇಷತೆಯನ್ನ ನೀವು ಎಂಜಾಯ್‌ ಮಾಡೋದಾದ್ರೆ, ಸಿಟಿ ಬಿಟ್ಟು ಮಳೆಕಾಡಿನ ಕಡೆ ಸ್ವಲ್ಪ ಓಡಾಡಬೇಕು! ಇಲ್ಲಿ ಬೆಳೆಯುವ ತಿನ್ನಬಹುದಾದ ಅಣಬೆಗಳಲ್ಲಿ ಅಪಾರವಾದ ಪ್ರೊಟೀನ್‌ ಇರುತ್ತದೆ. ಅಲ್ಲದೇ ಅನೇಕ ಸಣ್ಣಪುಟ್ಟ ಕಾಯಿಲೆಗಳಿಗೆ ರೋಗನಿರೋದಕ ಶಕ್ತಿಯನ್ನು ಒದಗಿಸುತ್ತದೆ.

    ಕಳಲೆ
    ಇದು ಮಲೆನಾಡಿಗರ ಅಚ್ಚುಮೆಚ್ಚಿನ ಆಹಾರ ಪದಾರ್ಥಗಳಲ್ಲಿ ಒಂದು. ಕಳಲೆ ಎಂದರೆ ಬಿದಿರಿನ ಮೊಳಕೆ.. ಇದು ದೊಡ್ಡ ಬಿದರಿನ ಗಿಡಗಳ ಕೆಳಗೆ ಮಳೆಗಾಲದ ಸಮಯದಲ್ಲಿ ಮಾತ್ರ ಮೊಳಕೆಯೊಡೆಯುತ್ತವೆ. ಹೀಗೆ ಮೊಳಕೆಯಾದ ಕಳಲೆಯನ್ನು ತಂದು ಜನ ಸಾರು, ಪಲ್ಯವನ್ನು ಮಾಡುತ್ತಾರೆ. ಇದು ಮಲೆನಾಡಿಗರಿಗೆ ಉಚಿತವಾಗಿ ಸಿಗುವಂತಹದ್ದು. ಆದರೆ ಬೇರೆ ಭಾಗಗಳಲ್ಲಿ ಹಣಕ್ಕೆ ಮಾರಾಟ ಮಾಡಲಾಗುತ್ತದೆ. ಇದರ ಮಾರಾಟ ನಿಷಿದ್ಧ ಆದರೂ ಜನ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾರಾಟ ಮಾಡ್ತಾರೆ.

    ಪ್ರೊಟೀನ್‌ ಕಾರ್ಬೊಹೈಡ್ರೋಜನ್‌, ಖನಿಜಾಂಶ, ನಾರಿನಾಂಶ ಅಧಿಕವಾಗಿದ್ದು, ಕ್ಯಾಲ್ಸಿಯಂ, ಕಡಿಮೆ ಪ್ರಮಾಣದಲ್ಲಿರುವುದರಿಂದ ಇದು ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ. ಕರುಳುಗೆ ಸಂಬಂಧಿಸಿದ ಸಮಸ್ಯೆಗೆ ಇದು ಉತ್ತಮ ಆಹಾರ. ಆಯುರ್ವೇದ ಮತ್ತು ನಾಟಿ ವೈದ್ಯರು ಸಹ ಇದನ್ನೊಂದು ಉತ್ತಮ ಔಷಧೀಯ ಗುಣಗಳಿರುವ ಆಹಾರ ಎಂದು ಸೇವಿಸಲು ಸಲಹೆ ನೀಡುತ್ತಾರೆ. ಇನ್ನೂ ಕ್ಯಾನ್ಸರ್‌ನಂತಹ ಮಾರಕ ರೋಗಗಳ ವಿರುದ್ಧವೂ ಹೋರಾಡುವ ಅಂಶಗಳನ್ನು ಕಳಲೆ ಹೊಂದಿದೆ ಎಂಬುದು ತಜ್ಞರ ಅಭಿಪ್ರಾಯ.

    ಏಡಿ& ಮೀನು!
    ಮಲೆನಾಡಿನ ಕೃಷಿಕರಿಗೆ ಇದೊಂದು ಹಬ್ಬ..! ಮಳೆಗಾಲಕ್ಕೆ ಹೊರ ಬಂದು ಅಡ್ಡಾಡುವ ಏಡಿಗಳು, ನೀರು ಹರಿಯುವ ವಿರುದ್ಧವಾಗಿ ಸಂಚರಿಸಿ ಹುಲ್ಲಿನ ಮೇಲೆ ಹರಿದಾಡುವ ಮೀನುಗಳ ಶಿಕಾರಿ, ಅದರ ಮಜವೇ ಬೇರೆ. ತಲೆಗೆ ಟಾರ್ಚ್‌ ಕಟ್ಟಿ ʻಬಾವ ಕೆರೆ ತುಂಬಿ, ಮೀನು ಹತ್ತಿದಾವಂತೋʼ ಅಂತ ಹೇಳಿ ಹತ್ತಾರು ಜನ ಹೋಗಿ ಮೀನು ಏಡಿ ಹಿಡಿಯುವ ಗುಂಪು, ಅವುಗಳನ್ನು ಅಡುಗೆ ಮಾಡಿ ತಿನ್ನೋದಕ್ಕಿಂತ, ಅಲ್ಲಿ ಹುಡುಕಾಡೋದು ಒಂಥರಾ ಕ್ರೇಜ್‌. ಮೀನು ಸಿಕ್ಕಾಗ ಒಂಥರಾ ಖುಷಿ, ಸಿಗದಿದ್ದಾಗ ಅದನ್ನೇ ಹೇಳಿಕೊಂಡು ನಕ್ಕು ಕಾಲಕಳೆಯೋದು, ಅದೆಲ್ಲದರ ನಡುವೆ ಜೋ ಎಂದು ಸುರಿಯುವ ಮಳೆ, ಹರಿಯುವ ಹಳ್ಳಕೊಳ್ಳಗಳು!

     

    ಈ ಚಟುವಟಿಕೆ ಎಲ್ಲಾ ನಡೆಯೋದು ಆದಷ್ಟು ಗದ್ದೆ ತೋಟಗಳ ಪಕ್ಕದಲ್ಲಿ. ಮೊದಲೆಲ್ಲ ಗದ್ದೆ ತೋಟಗಳಿಗೆ ರಸಾಯನಿಕ ಗೊಬ್ಬರ ಔಷಧಗಳ ಬಳಕೆ ಕಡಿಮೆ ಇತ್ತು. ಹಾಗಾಗಿ ಕೆರೆ, ಗದ್ದೆಗಳಲ್ಲಿ ಎಷ್ಟೊತ್ತಿಗೂ, ಮೀನುಗಳು, ಏಡಿಗಳು ಕಾಣ್ತಿದ್ವು, ಈಗೆಲ್ಲ ಲಾಭ ಬೇಕು ಅಂತ ಇರೋಬರೋ ಔಷಧಿ, ರಾಸಾಯನಿಕ ಗೊಬ್ಬರ ಹಾಕಿ ಏಡಿ, ಮೀನುಗಳ ಸಂತತಿ ಬಹಳಷ್ಟು ಕಡಿಮೆ ಆಗಿವೆ. ಇನ್ನೂ 10-20 ವರ್ಷಗಳಲ್ಲಿ ಇದೇ ರೀತಿ ಮುಂದುವರೆದ್ರೆ ನಿರ್ನಾಮವೇ ಆಗಬಹುದೇನೋ?

    ಹೀಗೆ ಮಲೆನಾಡಲ್ಲಿ ಕಣ್ಣಿಗೆ ಕಾಣುವ, ಕಾಣದ ಅದೆಷ್ಟೋ ಅತಿಥಿಗಳು ಮಳೆಗಾಲಕ್ಕೆ ಬಂದು ಹೋಗ್ತಾರೆ.. ಅದು ಅದೆಷ್ಟು ಶತಶತಮಾನಗಳಿಂದ ನಡೆದುಕೊಂಡು ಬಂದಿದಿಯೋ, ಅದೆಷ್ಟು ಶತಮಾನಗಳು ಮುಂದುವರಿಯತ್ತೋ ಗೊತ್ತಿಲ್ಲ. ಈ ಚೆಲವು ಅದೆಷ್ಟೋ ಮಂದಿಯ ಅನುಭವಕ್ಕೆ ಬಂದಿರತ್ತೆ.. ಈ ಬರಹ ಓದಿ… ಹೌದಲ್ವಾ? ಅಂತ ಒಂದು ಸಾಲು ಹೇಳಿದ್ರೂ ಸಾಕು… ನನಗೆ ತೃಪ್ತಿ!

    ಇಂತಹ ಪ್ರಕೃತಿಯ ಸೊಬಗನ್ನು ನೋಡಿ ಸಂಭ್ರಮಿಸಲು ನೀವು ಹೋಗಬೇಕಾದ ಒಂದಷ್ಟು ವಿಶಿಷ್ಟ ತಾಣಗಳ ಬಗ್ಗೆ ಮುಂದಿನ ಬುಧವಾರ (ಜೂ.25) ಮತ್ತೊಂದು ಬರಹದಲ್ಲಿ ತಿಳಿಸ್ತೇನೆ.

    – ಗೋಪಾಲಕೃಷ್ಣ

  • ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ- ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆ

    ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ- ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆ

    ಚಿಕ್ಕಮಗಳೂರು: ಮಲೆನಾಡು (Malenadu) ಭಾಗದಲ್ಲಿ ಅಬ್ಬರದ ಮಳೆ (Rain) ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಕಳಸ (Kalasa) ತಾಲೂಕಿನ ಹೆಬ್ಬಾಳೆ ಸೇತುವೆ (Hebbale Bridge) ಮುಳುಗಡೆಯಾಗಿದೆ.

    ಕಾಫಿನಾಡಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ 2 ಅಡಿಯಷ್ಟು ನೀರು ಹರಿಯುತ್ತಿದೆ. ಇದರ ಪರಿಣಾಮ ಕಳಸ – ಹೊರನಾಡು ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದಾಗಿ ಸುತ್ತ ಹತ್ತಾರು ಹಳ್ಳಿಯ ಜನರು ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಅನ್ಯ ಮಾರ್ಗವಿದ್ದರೂ 8ರಿಂದ 10 ಕಿಲೋ ಮೀಟರ್ ಸುತ್ತಿಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಬೆಂಗಳೂರು-ತುಮಕೂರು ಫ್ಲೈಓವರ್ ಭಾರೀ ವಾಹನಗಳಿಗೆ ಮುಕ್ತನಾ..?

    ಕುದುರೆಮುಖ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಭದ್ರಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಅದೇ ರೀತಿ ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳ ಒಳಹರಿವು ಹೆಚ್ಚಳವಾಗಿದೆ. ಭಾರೀ ಮಳೆಗೆ ಮಲೆನಾಡಿನ ಜನರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ರಕ್ಷಣೆ- ಟ್ರಾಫಿಕ್ ಕಾನ್ಸ್‌ಸ್ಟೇಬಲ್ ಕಾರ್ಯಕ್ಕೆ ಮೆಚ್ಚುಗೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರೀ ಮಳೆಗೆ ತುಂಗಾ ಜಲಾಶಯ ಭರ್ತಿ

    ಭಾರೀ ಮಳೆಗೆ ತುಂಗಾ ಜಲಾಶಯ ಭರ್ತಿ

    ಶಿವಮೊಗ್ಗ: ಮಲೆನಾಡಿನ (Malenadu) ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ (Rain) ಹಿನ್ನೆಲೆ ಶಿವಮೊಗ್ಗದ (Shivamogga) ಗಾಜನೂರಿನ (Gajanur) ತುಂಗಾ ಜಲಾಶಯ (Tunga Reservoir) ಭರ್ತಿಯಾಗಿದೆ.

    ಭರ್ತಿಯಾದ ಹಿನ್ನೆಲೆ ಜಲಾಶಯದ 10 ಗೇಟ್‌ಗಳಿಂದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ನೀರು ಭರ್ತಿಯಾಗಿದ್ದರಿಂದ ಜಲಾಶಯದ ಅಧಿಕಾರಿಗಳು ಗುರುವಾರ ಮುಂಜಾನೆ 2 ಗೇಟ್‌ಗಳನ್ನು ಓಪನ್ ಮಾಡಿದ್ದರು. ಆದರೆ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ನೀರು ಹೆಚ್ಚಳವಾದ್ದರಿಂದ 10 ಗೇಟ್‌ಗಳಿಂದ ನದಿ ಪಾತ್ರಗಳಿಗೆ ನೀರನ್ನು ಬಿಡಲಾಗುತ್ತಿದೆ. ಇದನ್ನೂ ಓದಿ: ಹಾಸನ ಜಿಲ್ಲೆಗೆ ಮುಂಗಾರು ಆಗಮನ- ಜಿಲ್ಲೆಯ ಹಲವೆಡೆ ಹಾನಿ

    ರಾಜ್ಯಕ್ಕೆ ಮುಂಗಾರು ಲಗ್ಗೆ ಇಟ್ಟಿದ್ದು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಅಂತೆಯೇ ಶಿವಮೊಗ್ಗದಲ್ಲಿ ಧಾರಕಾರ ಮಳೆ ಸುರಿದ ಪರಿಣಾಮ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು, ಇಂದು ಮುಂಜಾನೆ 2 ಗೇಟ್‌ಗಳ ಮೂಲಕ 2 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರನ್ನು ಜಲಾಶಯದಿಂದ ಬಿಡುಗಡೆ ಮಾಡಲಾಗಿತ್ತು. ಜಲಾಶಯದ ಗರಿಷ್ಠ ಮಟ್ಟ 584.24 ಮೀಟರ್ ಇದ್ದು, ಇಂದು ಜಲಾಶಯ ಗರಿಷ್ಠ ಮಟ್ಟವನ್ನು ತಲುಪಿದೆ. ಇದನ್ನೂ ಓದಿ: ದೆಹಲಿಗೆ ಮಾನ್ಸೂನ್ ಎಂಟ್ರಿ- ರಾಷ್ಟ್ರ ರಾಜಧಾನಿ ಕೂಲ್ ಕೂಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಲೆನಾಡಿನ ಕುವರಿ

    ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಲೆನಾಡಿನ ಕುವರಿ

    ನ್ನಡ ಚಿತ್ರಕ್ಕೆ ಮಲೆನಾಡಿನ ಮತ್ತೊಬ್ಬಳು ಕುವರಿ ಪ್ರವೇಶ ವಾಗಿದೆ. ಕನ್ನಡದ ‘ರೆಡ್ರಮ್’ ಚಿತ್ರದಲ್ಲಿ ಕುಶಾಲನಗರದ ಮಧುರಾ ಗೌಡ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲದೇ, ಈ ಚಿತ್ರ ಚಿತ್ರೀಕರಣದಲ್ಲಿರುವಾಗಲೇ ಇನ್ನೊಂದು ಹೆಸರಿಡದ ಬಹು ತಾರಾಗಣದ ಭಾರಿ ಬಜೆಟ್  ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ಹಾಗೆ ಹಲವು ಚಿತ್ರಗಳಿಗೆ ಮಾತುಕತೆ ನಡೆಯುತ್ತಿದೆ ಎಂದು ಮಧುರಾ ತಿಳಿಸಿದ್ದಾರೆ.

    ಹಲವು ಹೊಸ ನಟಿಯರು ಚಿತ್ರ ರಂಗಕ್ಕೆ ಬರುತಿರುವ ಈ ಸಮಯದಲ್ಲಿ ಮಧುರಾ ತಮ್ಮ ನಟನಾ ಕೌಶಲ್ಯದಿಂದ ಕನ್ನಡ ಸಿನಿ ರಸಿಕರ ಮನೆ ಮನದಲ್ಲಿ ನೆಲೆಸುವಂತಾಗಲಿ. ಮಾಡೆಲಿಂಗ್ ಹಾಗೂ ಅಭಿನಯ ಕ್ಷೇತ್ರದಲ್ಲಿ ತರಬೇತಿ ಪಡೆದಿರುವ ಮಧುರಾ ಕೌಟಿಲ್ಯ ಸಿನಿಮಾಸ್ ಹಾಗೂ ಹನಿ ಚೌಧರಿ ಫಿಲಂಸ್ ಲಾಂಛನದ ದಡಿಯಲ್ಲಿ ಪ್ರಾರಂಭವಾದ ‘ರೆಡ್ರಮ್’ ಕನ್ನಡ ಚಿತ್ರದಲ್ಲಿ ಯು.ಪಿ.ಯಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಇದನ್ನೂ ಓದಿ: ಬಹುಕಾಲದ ಗೆಳತಿ ಜೊತೆ ತೆಲುಗು ನಟ ಶರ್ವಾನಂದ್ ಎಂಗೇಜ್‌ಮೆಂಟ್

    ಪಕ್ಕಾ ತಯಾರಿಯೊಂದಿಗೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಮಾಡೆಲಿಂಗ್ ನಲ್ಲಿ ಹೆಚ್ಚು ಆಸಕ್ತಿಯಿದ್ದರೂ, ಅಭಿನಯದಲ್ಲೂ ಪಳಗಬೇಕು ಎನ್ನುವ ಕಾರಣಕ್ಕಾಗಿ ಸೂಕ್ತ ತರಬೇತಿಯನ್ನೂ ಮಧುರಾ ಪಡೆದಿದ್ದಾರಂತೆ. ಪಾತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡು ನಟಿಸಲು ಇದೆಲ್ಲವೂ ನನಗೆ ಸಹಾಯ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಲೆನಾಡಲ್ಲಿ ಶುರುವಾಯ್ತು ಹೋರಿ ಬೆದರಿಸುವ ಹಬ್ಬ – ಹೋರಿ ದಾಳಿಗೆ ಇಬ್ಬರು ಬಲಿ

    ಮಲೆನಾಡಲ್ಲಿ ಶುರುವಾಯ್ತು ಹೋರಿ ಬೆದರಿಸುವ ಹಬ್ಬ – ಹೋರಿ ದಾಳಿಗೆ ಇಬ್ಬರು ಬಲಿ

    ಶಿವಮೊಗ್ಗ: ರೈತರ ಹಬ್ಬವಾಗಿರುವ ಜನಪದ ಕ್ರೀಡೆ, ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ಮಲೆನಾಡಿನಲ್ಲಿ (Malenadu) ಆರಂಭವಾಗಿದೆ. ಹೋರಿ (Bull) ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ಮಾಡಿದ ಅವಂತಾರದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಇದೀಗ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬ ಬಹಳ ಮಹತ್ವ ಪಡೆದಿದ್ದು, ಅಖಾಡದಲ್ಲಿ ಹೋರಿಗಳು ಓಡಿ ಹೋಗುತ್ತದೆ. ಇಂತಹ ಸಮಯದಲ್ಲಿ ಹೋರಿಗಳನ್ನು ಹಿಡಿದು ನಿಲ್ಲಿಸುವುದಕ್ಕೆ ಪೈಲ್ವಾನರು (Pailwan) ತಮ್ಮ ಜೀವದ ಹಂಗು ತೊರೆದು ಕಸರತ್ತು ನಡೆಸುತ್ತಾರೆ. ಅಲ್ಲದೇ ಅಖಾಡದಲ್ಲಿ ಹೋರಿ ಓಡುವುದನ್ನು ನೋಡಲು ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಸಾವಿರಾರು ಜನ ಸೇರುತ್ತಾರೆ. ಪೈಲ್ವಾನನ ಕೈಗೆ ಸಿಗದೇ ಓಡುವ ಹೋರಿಯ ದೃಶ್ಯ ನೋಡುಗರ ಮೈನವಿರೇಳಿಸುತ್ತದೆ.

    ಸದ್ಯ ಮಲೆನಾಡನಲ್ಲಿ ಶುರುವಾಗಿರುವ ಹೋರಿ ಬೆದರಿಸುವ ಹಬ್ಬದ ಸಮಯದಲ್ಲಿ ಇಬ್ಬರು ವ್ಯಕ್ತಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ (Shikaripura) ತಾಲೂಕಿನ ಗಾಮ ಗ್ರಾಮದಲ್ಲಿ ನಡೆದ ಹೋರಿ ಹಬ್ಬದಲ್ಲಿ ಪ್ರಶಾಂತ್ (36) ಮತ್ತು ಸೊರಬ (Soraba) ತಾಲೂಕಿನ ಜಡೆ ಗ್ರಾಮದ ಚಗಟೂರು ನಿವಾಸಿ ಆದಿ (20) ಮೃತ ದುರ್ದೈವಿಗಳಾಗಿದ್ದಾರೆ. ಇದನ್ನೂ ಓದಿ: ದೇಗುಲ ಸ್ಫೋಟಿಸಲು ಬಂದಿದ್ದ ಬಾಂಬರ್ – ಸಾಹಿತ್ಯ ಓದಿಕೊಂಡೇ ISIS ಮೂಲಭೂತವಾದಿಯಾಗಿದ್ದ

    ಹೋರಿ ಬೆದರಿಸುವ ಸಂದರ್ಭದಲ್ಲಿ ಬೆದರಿದ ಹೋರಿ ಗೋಡೆ ಕಡೆಗೆ ತಿರುಗಿ ಹಿಂದಕ್ಕೆ ವಾಪಸ್ ನುಗ್ಗಿದೆ. ಈ ವೇಳೆ ಪ್ರಶಾಂತ್ ಮೈಮೇಲೆ ಹಾರಿ, ಎದೆ ಮೇಲೆ ಕಾಲಿಟ್ಟು ಹೋರಿ ಮುಂದಕ್ಕೆ ಹೋಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಪ್ರಶಾಂತ್‍ರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ರಾತ್ರಿ ಪ್ರಶಾಂತ್ ಮೃತಪಟ್ಟಿದ್ದಾರೆ. ಸೊರಬ ತಾಲೂಕಿನ ಜಡೆ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಆದಿ ಎಂಬ ಯುವಕ ಹೋರಿ ತಿವಿತಕ್ಕೊಳಗಾಗಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಸಿಗರೇಟು ಸೇದೋಕೆ ಕಾರು ನಿಲ್ಲಿಸಿದ ಮಾಲೀಕ – 75 ಲಕ್ಷ ಹಣದೊಂದಿಗೆ ಚಾಲಕ ಎಸ್ಕೇಪ್

    Live Tv
    [brid partner=56869869 player=32851 video=960834 autoplay=true]

  • ಕಾಡಾನೆಗಳನ್ನು ಸ್ಥಳಾಂತರಿಸಿ, ಇಲ್ಲವೇ ನಮ್ಮನ್ನೇ ಸ್ಥಳಾಂತರಿಸಿ- ಸರ್ಕಾರಕ್ಕೆ ಮಲೆನಾಡಿಗರ ಆಗ್ರಹ

    ಕಾಡಾನೆಗಳನ್ನು ಸ್ಥಳಾಂತರಿಸಿ, ಇಲ್ಲವೇ ನಮ್ಮನ್ನೇ ಸ್ಥಳಾಂತರಿಸಿ- ಸರ್ಕಾರಕ್ಕೆ ಮಲೆನಾಡಿಗರ ಆಗ್ರಹ

    ಚಿಕ್ಕಮಗಳೂರು: ಕಾಡಾನೆಗಳನ್ನು ಸ್ಥಳಾಂತರಿಸಿ, ಇಲ್ಲವೇ ಬೇರೆ ಭೂಮಿ ಕೊಡಿ, ನಾವು ಬೇರೆ ಕಡೆ ಹೋಗಿ ಬದುಕು ಕಟ್ಟಿಕೊಳ್ಳುತ್ತೇವೆ ಎಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮೂಲರಹಳ್ಳಿ, ಗುತ್ತಿ, ಭೈರಾಪುರ, ಊರಬಗೆ ಗ್ರಾಮದ ಜನ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ಕಳೆದೊಂದು ವಾರದಿಂದ ಮೂರು ಕಾಡಾನೆಗಳು ಹೊಲ-ಗದ್ದೆ, ತೋಟದಲ್ಲಿ ದಾಂಧಲೆ ನಡೆಸುತ್ತಿವೆ. ಬೆಳೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಅಡಿಕೆ, ಕಾಫಿ, ಮೆಣಸು, ಬಾಳೆ ಸಂಪೂರ್ಣ ನೆಲಕಚ್ಚುತ್ತಿದೆ. ಹೀಗೇ ಆದರೆ ಬದುಕುವುದಾದರೂ ಹೇಗೆ ಎಂದು ಅರಣ್ಯ ಇಲಾಖೆಗೆ ಪ್ರಶ್ನಿಸಿರುವ ಸ್ಥಳಿಯರು, ಕಾಡಾನೆಗಳನ್ನು ಸ್ಥಳಾಂತರಿಸಿ, ಇಲ್ಲವೇ ನಮ್ಮನ್ನೇ ಸ್ಥಳಾಂತರಿಸಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸೋನು ಸೂದ್ ಕಚೇರಿ ಮೇಲೆ ಐಟಿ ದಾಳಿ

    ಮೂರು ದಿನಗಳಿಂದ ಕಾಡಾನೆಗಳು ನಿರಂತರ ದಾಳಿ ಮಾಡುತ್ತಿರುವುದರಿಂದ ಲಕ್ಷಾಂತರ ಮೌಲ್ಯದ ಬೆಳೆಗಳು ನಾಶವಾಗಿವೆ. ಕಳೆದ ಒಂದೆರಡು ದಶಕಗಳಿಂದ ಕಾಡಂಚಿನ ಗ್ರಾಮದ ಜನ ಆನೆ ಹಾವಳಿಯಿಂದ ಬಸವಳಿದಿದ್ದಾರೆ. ನಾಲ್ಕೈದು ವರ್ಷಗಳಿಂದ ನಿರಂತರ ಆನೆ ಹಾವಳಿಯಿಂದ ಮಲೆನಾಡಿಗರು ಕಂಗಾಲಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಆನೆ ಹಾವಳಿಯಿಂದ ಈಗಾಗಲೇ ನಾಲ್ಕೈದು ಜನ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಇಷ್ಟು ದಿನ ಹೊಲಗದ್ದೆ, ತೋಟಗಳಲ್ಲಿದ್ದ ಆನೆಗಳು ಈಗೀಗ ನಾಡಿಗೂ ಬರುತ್ತಿರುವುದರಿಂದ ಹಳ್ಳಿಗರು ಭಯಗೊಂಡಿದ್ದಾರೆ. ಆನೆಗಳು ಕಂಡಾಕ್ಷಣ ಅರಣ್ಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರೂ ಅವರು ಬರೋದು ಒಂದೆರಡು ಗಂಟೆಯ ಬಳಿಕವೇ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಸರ್ಕಾರ ನಮ್ಮ ನೋವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಕಾಡಾನೆ ಹಾಗೂ ಕಾಡು ಪ್ರಾಣಗಳಿಂದ ರೈತರು ಬೆಳೆ ಕಳೆದುಕೊಂಡಾಗ ಸೂಕ್ತ ರೀತಿಯಲ್ಲಿ ಪರಿಹಾರವನ್ನೂ ನೀಡಲ್ಲ. ಸೂಕ್ತ ಪರಿಹಾರಕ್ಕಾಗಿ ಮೂಡಿಗೆರೆ ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಡಾನೆ ಹಾವಳಿ ನಿಂತಿಲ್ಲ, ಸರ್ಕಾರದಿಂದ ಸಮಪರ್ಕಕ ಪರಿಹಾರವೂ ಬರುತ್ತಿಲ್ಲ. ಹೀಗೆ ಮುಂದುವರಿದರೆ ನಾವು ಬದುಕುವುದಾದರೂ ಹೇಗೆಂದು ಹಳ್ಳಿಗರು ಪ್ರಶ್ನಿಸಿದ್ದಾರೆ.

    ತಾಲೂಕಿನ ಸಾರಗೋಡು, ಕುಂದೂರು, ಗೌಡಹಳ್ಳಿಯಲ್ಲೂ ಆನೆ ಹಾವಳಿ ಮಿತಿಮೀರಿದೆ. ಅರಣ್ಯ ಅಧಿಕಾರಿಗಳು ಕಾಡಾನೆ ಹಾವಳಿ ತಪ್ಪಿಸಬೇಕು, ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  • ಮಲೆನಾಡಲ್ಲಿ ಮೈದುಂಬಿ ಹರಿಯುತ್ತಿವೆ ಜಲಪಾತಗಳು- ಪ್ರವಾಸಿ ತಾಣಗಳಿಗೆ ಕಾಡ್ತಿದೆ ಅನಾಥ ಪ್ರಜ್ಞೆ

    ಮಲೆನಾಡಲ್ಲಿ ಮೈದುಂಬಿ ಹರಿಯುತ್ತಿವೆ ಜಲಪಾತಗಳು- ಪ್ರವಾಸಿ ತಾಣಗಳಿಗೆ ಕಾಡ್ತಿದೆ ಅನಾಥ ಪ್ರಜ್ಞೆ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಸಮೃದ್ಧ ಮಳೆಯಿಂದಾಗಿ ಮಲೆನಾಡ ಜಲಪಾತಗಳಿಗೆ ಜೀವಕಳೆ ಬಂದಿದೆ. ಆದರೆ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ.

    ಜಿಲ್ಲೆಯ ಚಾರ್ಮಾಡಿ ಫಾಲ್ಸ್, ತೀರ್ಥಕೆರೆ ಫಾಲ್ಸ್, ಸಗೀರ್, ಫಾಲ್ಸ್, ಸಿರಿಮನೆ ಫಾಲ್ಸ್, ಕಲ್ಲತ್ತಿಗರಿ ಫಾಲ್ಸ್, ಶಂಕರ್ ಫಾಲ್ಸ್ ಸೇರಿದಂತೆ ಜಿಲ್ಲೆಯ ದಶದಿಕ್ಕುಗಳ ಜಲಪಾತಗಳು ಮೈದುಂಬಿ ಹರಿಯುತ್ತಿದೆ. ಮಳೆಯಿಂದಾಗಿ ಚಾರ್ಮಾಡಿ ಘಾಟಿಯ ಫಾಲ್ಸ್‍ಗಳು ಕಣ್ಣು ಕೊರೈಸುವಂತೆ ಧುಮ್ಮಿಕ್ಕುತ್ತಿವೆ. ಚಾರ್ಮಾಡಿಯ ಹಾವು-ಬಳುಕಿನ ರಸ್ತೆಯಲ್ಲಿ ಹತ್ತಾರು ಜಲಪಾತಗಳಿವೆ.

    ಕಳೆದ ಮೂರು ದಿನಗಳಿಂದ ಸುರಿಯುತ್ತಿರೋ ಮಳೆಯಿಂದಾಗಿ ಜಲಪಾತಗಳಲ್ಲಿ ಪ್ರಕೃತಿ ಸೌಂದರ್ಯ ಮೇಳೈಸಿದೆ. ನೀರಿನ ವೇಗದ ಶಬ್ಧವೇ ಮನಸ್ಸಿಗೆ ಮುದ ನೀಡುತ್ತಿದೆ. ಮೋಡದ ಜೊತೆ ಮಂಜಿನ ಕಣ್ಣಾಮುಚ್ಚಾಲೆ ಆಟ. ಕ್ಷಣಕ್ಕೊಮ್ಮೆ ಬದಲಾಗೋ ವಾತಾವರಣ. ತಣ್ಣನೆಯ ಗಾಳಿ ಪ್ರವಾಸಿಗರನ್ನ ಕೈಬಿಸಿ ಕರೆಯುತ್ತಿದೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಮೇಗುಂದಾ ಹೋಬಳಿಯ ತೀರ್ಥಕೆರೆ ಫಾಲ್ಸ್ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ರಸ್ತೆ ಬದಿಯಲ್ಲೇ ಸಿಗುವ, ಸುಮಾರು 120 ಅಡಿ ಎತ್ತರದಿಂದ ಇಳಿಜಾರಿನಲ್ಲಿ ಜಾರಿ ಬರುವ ಈ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ. ಶೃಂಗೇರಿಗೆ ಭೇಟಿ ನೀಡುವ ಪ್ರವಾಸಿಗರು ಜಯಪುರ ಮಾರ್ಗವಾಗಿ ಹೊರನಾಡಿಗೆ ಹೋಗುವವರಿಗೆ ಈ ಜಲಪಾತದ ದರ್ಶನವಾಗಲಿದೆ. ಇದೊಂದೆ ಅಲ್ಲದೆ ಕಾಫಿನಾಡಿನ ದಶದಿಕ್ಕುಗಳಲ್ಲೂ ಇಂತಹ ನೂರಾರು ಜಲಪಾತದ ವೈಭವ ಮೇಳೈಸಿದೆ. ಜಿಲ್ಲೆಯ ಮಲೆನಾಡು ಭಾಗದ ಬಹುತೇಕ ಜಲಪಾತಗಳು ಮೂರು ದಿನದ ಮಹಾಮಳೆಗೆ ಮೈದುಂಬಿ ಹರಿಯುತ್ತಿವೆ. ಆದರೆ ಕೊರೊನಾ ಲಾಕ್‍ಡೌನ್‍ನಿಂದ ಕಾಫಿನಾಡಿಗೆ ಪ್ರವಾಸಿಗರು ಬರುತ್ತಿಲ್ಲ. ಹೀಗಾಗಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಅನಾಥಪ್ರಜ್ಞೆ ಕಾಡುತ್ತಿದೆ.

  • ಏಷ್ಯಾದ ಹೆಗ್ಗಳಿಕೆ, ಕಾಫಿನಾಡ ಕಾರ್ಮಿಕರ ಸಾರಿಗೆ ಸಂಸ್ಥೆಯ ಯುಗಾಂತ್ಯ

    ಏಷ್ಯಾದ ಹೆಗ್ಗಳಿಕೆ, ಕಾಫಿನಾಡ ಕಾರ್ಮಿಕರ ಸಾರಿಗೆ ಸಂಸ್ಥೆಯ ಯುಗಾಂತ್ಯ

    ಚಿಕ್ಕಮಗಳೂರು: ಕಾಫಿನಾಡಿನ ಹೆಗ್ಗಳಿಕೆ, ಹಳ್ಳಿಗರ ಜೀವನಾಡಿಯಾಗಿದ್ದ ಜಿಲ್ಲೆಯ ಕೊಪ್ಪ ತಾಲೂಕಿನ ಸಹಕಾರಿ ಸಾರಿಗೆ ಸಂಸ್ಥೆಗೆ ಬೀಗ ಬಿದ್ದಿದೆ. ಆಡಳಿತ ಮಂಡಳಿ ಸಾಲ ಮರುಪಾವತಿ ಮಾಡದ ಹಿನ್ನೆಲೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಕಂಪನಿಯೂ ಸಾರಿಗೆ ಸಂಸ್ಥೆಗೆ ಸೇರಿದ 1 ಎಕೆರೆ 10 ಗುಂಟೆ ಜಾಗವನ್ನ ಮುಟ್ಟುಗೋಲು ಹಾಕಿಕೊಂಡಿದೆ.

    ಸಂಸ್ಥೆಯ ಅಧ್ಯಕ್ಷ ಧರ್ಮಪ್ಪ ಹಾಗೂ ಆಡಳಿತ ನಿರ್ದೆಶಕರಾಗಿದ್ದ ಜಯಪ್ರಕಾಶ್ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಕಂಪನಿಗೆ ಸೇರಿದ ಆಸ್ತಿಯನ್ನು ಆಧಾರವಾಗಿ ನೀಡಿ 1.20 ಕೋಟಿ ರೂ. ಸಾಲ ಪಡೆದಿದ್ದರು. 2019ರ ಬಳಿಕ ಸಾಲವನ್ನು ಮರುಪಾವತಿ ಮಾಡಿರಲಿಲ್ಲ. ಶ್ರೀರಾಮ್ ಟ್ರಾನ್ಸ್ ಪೋರ್ಟ್ ಕಂಪನಿ ಅವರಿಗೆ ನೋಟಿಸ್ ಕೂಡ ನೀಡಿದ್ದರು. ಬಡ್ಡಿ ಸಹಿತ 1,31,41,210 ರೂ. ಮೊತ್ತವನ್ನು ನೀಡಲು ನಿರಾಕರಿಸಿದ ಕಾರಣ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಕಂಪನಿ ವಿರುದ್ಧ ಜಿಲ್ಲಾಧಿಕಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶದ ಅನ್ವಯ ಸೋಮವಾರ ತಾಲೂಕು ದಂಡಧಿಕಾರಿ ಪರಮೇಶ್ ನೇತೃತ್ವದಲ್ಲಿ ಸರ್ವೇ ನಂ 97ರಲ್ಲಿರುವ ಸಹಕಾರಿ ಸಾರಿಗೆ ಸಂಸ್ಥೆಗೆ ಸೇರಿದ 1 ಎಕರೆ 10 ಗುಂಟೆ ಆಸ್ತಿಯನ್ನ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಕಚೇರಿಗೆ ಬಾರದಂತೆ ಬೀಗ ಹಾಕಿದೆ.

    ಈ ಸಹಕಾರ ಸಾರಿಗೆ ಬಸ್ಸಿನ ಚಕ್ರಗಳು ಚಿಕ್ಕಮಗಳೂರು ಸೇರಿ ಮಂಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಯ ಬೆಟ್ಟ-ಗುಡ್ಡಗಳ ಬಹುತೇಕ ಗ್ರಾಮವನ್ನ ಕಂಡಿವೆ. ಮಲೆನಾಡ ಕುಗ್ರಾಮಗಳ ಮನೆ-ಮನ ಬೆಸೆದ ಪರಿಗೆ ಏಷ್ಯಾದಲ್ಲೇ ಅತ್ಯುತ್ತಮ ಸಹಕಾರ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಾರ್ಮಿಕರೇ ಕಟ್ಟಿ, ಕಾರ್ಮಿಕರೇ ಮಾಲೀಕರಾಗಿ 6 ಬಸ್‍ನಿಂದ 76 ಬಸ್‍ಗೆ ಸಂಸ್ಥೆಯನ್ನ ತಂದಿದ್ದರು. ರಾಜ್ಯಕ್ಕೆ ಕೆಎಸ್‍ಆರ್‍ಟಿಸಿ ಮಲೆನಾಡಿಗೆ ಸಹಕಾರ ಸಾರಿಗೆ ಎಂಬ ನಾಣ್ಣುಡಿಯನ್ನ ಸ್ಥಳಿಯರೇ ಹುಟ್ಟುಹಾಕಿದ್ದರು. ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರು, ವಿಧ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಶೇ.50 ರಿಯಾಯಿತಿ ಕೊಟ್ಟು, ದಟ್ಟಕಾನನದ ಕಲ್ಲು-ಮಣ್ಣಿನ ದುರ್ಗಮ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಸಂಸ್ಥೆಗಿದೆ. ಅಂತಹ ಸಂಸ್ಥೆ ಸರ್ಕಾರದ ರೀತಿ-ನೀತಿ-ನಿರ್ಧಾರಗಳಿಂದ ತೀವ್ರ ಸಂಕಷ್ಟಕ್ಕೀಡಾಗಿ ಬಾಗಿಲು ಹಾಕುವ ಹೊಸ್ತಿಲಿಗೆ ಬಂದು ನಿಂತಿತ್ತು. ಇಂದು ಅಧಿಕೃತವಾಗಿ ಬೀಗ ಬಿದ್ದಂತಾಗಿದೆ.

    1990ರಲ್ಲಿದ್ದ ಶಂಕರ್ ಟ್ರಾನ್ಸ್‍ಪೋರ್ಟ್ ಮುಚ್ಚಿದ ಬಳಿಕ ಅಲ್ಲಿದ್ದ ಕಾರ್ಮಿಕರು ತಮಗೆ ಬಂದ ಪರಿಹಾರದ ಹಣದಿಂದಲೇ ಕಟ್ಟಿಕೊಂಡ ಸಂಸ್ಥೆ ಇದು. ಅಂದಿನಿಂದ ಈ ಬಸ್ ಮಲೆನಾಡ ಮನೆ-ಮನಗಳ ಮಧ್ಯೆ ಭಾಂದವ್ಯ ಬೆಸೆದಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಸಂಸ್ಥೆ ತನ್ನ ಸೇವೆಯನ್ನು ಸಂಪೂರ್ಣ ನಿಲ್ಲಿಸಿತ್ತು. ಪರಿಹಾರ ಹಾಗೂ ಸಹಕಾರಕ್ಕಾಗಿ ಸರ್ಕಾರದ ಕದ ಬಡಿದರೂ ಯಾವುದೇ ಉಪಯೋಗವಿಲ್ಲದಂತಾಗಿತ್ತು. ವರ್ಷಕ್ಕೆ ಒಂದೂವರೆ ಕೋಟಿ ಟ್ಯಾಕ್ಸ್, ಜೊತೆಗೆ, ರಿಯಾಯಿತಿ ಪಾಸ್ ಹೊರೆ. ಆದ್ದರಿಂದ ಡೀಸೆಲ್ ಸಬ್ಸಿಡಿ, ಟ್ಯಾಕ್ಸ್ ಕಡಿತ ಹಾಗೂ ಪಾಸ್‍ಗಳ ಉಳಿಕೆ ಹಣವನ್ನು ನೀಡುವಂತೆ ಸರ್ಕಾರದ ಸಹಕಾರದ ದಾರಿ ನೋಡುತ್ತಿತ್ತು. ಆದರೆ ಈ ಕಾರ್ಮಿಕರ ಸಹಕಾರ ಸಂಸ್ಥೆಗೆ ಸರ್ಕಾರದಿಂದ ಯಾವುದೇ ನೆರವು ಸಿಗಲಿಲ್ಲ. ಆದ್ದರಿಂದ ಸಂಸ್ಥೆ ಮಾಡಿದ ಸಾಲ ತೀರಿಸದ ಕಾರಣ ಇಂದು ಸಂಸ್ಥೆಗೆ ಬೀಗ ಬಿದ್ದಿದ್ದು, ಏಷ್ಯಾ ಖಂಡದಲ್ಲೇ ಮೊದಲ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ಸಂಸ್ಥೆ ತನ್ನ ಸಂಚಾರವನ್ನ ನಿಲ್ಲಿಸಿದೆ. ಸಂಸ್ಥೆಯಲ್ಲಿ ಕಾರ್ಮಿಕರಾಗಿದ್ದ ಸುಮಾರು 200ಕ್ಕೂ ಹೆಚ್ಚು ಜನ ಬೀದಿಗೆ ಬಿದ್ದಂತಾಗಿದೆ.