Tag: malavagoppa

  • ಮೆಕ್ಕೆಜೋಳಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು- 1.5 ಲಕ್ಷಕ್ಕೂ ಅಧಿಕ ನಷ್ಟ ಅನುಭವಿಸಿದ ರೈತ

    ಮೆಕ್ಕೆಜೋಳಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು- 1.5 ಲಕ್ಷಕ್ಕೂ ಅಧಿಕ ನಷ್ಟ ಅನುಭವಿಸಿದ ರೈತ

    – ರಾಶಿ ಹಾಕಿದ್ದ 150 ಕ್ವಿಂಟಾಲ್ ಬೆಳೆ ಹಾನಿ

    ಶಿವಮೊಗ್ಗ: ಒಂದೆಡೆ ಅತಿವೃಷ್ಠಿ, ಮತ್ತೊಂದೆಡೆ ಅನಾವೃಷ್ಠಿ ಇದರ ನಡುವೆ ಕಷ್ಟಪಟ್ಟು ಸಾಲಸೋಲಾ ಮಾಡಿ ರೈತರೊಬ್ಬರು ಮೆಕ್ಕೆಜೋಳದ ಬೆಳೆ ಬೆಳೆದಿದ್ದರು. ಆದರೆ ಕಿಡಿಗೇಡಿಗಳು ಮೆಕ್ಕೆಜೋಳದ ರಾಶಿಗೆ ಬೆಂಕಿ ಹಾಕಿರುವ ಘಟನೆ ಶಿವಮೊಗ್ಗದ ಮಲವಗೊಪ್ಪದಲ್ಲಿ ನಡೆದಿದೆ.

    ಮಲವಗೊಪ್ಪದ ನಿವಾಸಿ ತಿಮ್ಮನಾಯ್ಕ ಅವರು ತಮ್ಮ ಐದು ಎಕರೆ ಜಮೀನಿನಲ್ಲಿ ಸಾಲಸೋಲಾ ಮಾಡಿ ಕಷ್ಟಪಟ್ಟು ಮೆಕ್ಕೆ ಜೋಳ ಬೆಳೆದಿದ್ದರು. ಮೆಕ್ಕೆಜೋಳಕ್ಕೆ ಮಾರುಕಟ್ಟೆಯಲ್ಲಿ ಕಡಿಮೆ ದರ ಇದ್ದಿದ್ದರಿಂದ ದರ ಏರಿಕೆಯಾದ ಬಳಿಕ ಮಾರಾಟ ಮಾಡಿದರಾಯ್ತು ಅಂದುಕೊಂಡು ತನ್ನ ಜಮೀನಿನಲ್ಲಿಯೇ ಜೋಳದ ರಾಶಿ ಹಾಕಿದ್ದರು. ಆದರೆ ಮಂಗಳವಾರ ತಡ ರಾತ್ರಿ ಯಾರೋ ಕಿಡಿಗೇಡಿಗಳು ಮೆಕ್ಕೆಜೋಳದ ರಾಶಿಗೆ ಬೆಂಕಿ ಹಾಕಿದ್ದಾರೆ.

    150 ಕ್ವಿಂಟಾಲ್‍ಗೂ ಅಧಿಕ ಮೆಕ್ಕೆಜೋಳದ ಬೆಳೆ ಸಂಪೂರ್ಣ ಹಾನಿಯಾಗಿದ್ದು, ಸುಮಾರು ಒಂದೂವರೆ ಲಕ್ಷ ರೂ.ದಷ್ಟು ಹಾನಿ ಸಂಭವಿಸಿದೆ. ಸಾಲ ಮಾಡಿ ಬೆಳೆ ಬೆಳೆದಿದ್ದೆ. ಆದರೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಬೆಳೆ ಹಾನಿಗೆ ಕಾರಣರಾದ ಕಿಡಿಗೇಡಿಗಳ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು. ಜೊತೆಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ನಮ್ಮ ಕುಟುಂಬಕ್ಕೆ ಆತ್ಮಹತ್ಯೆ ಒಂದೇ ದಾರಿ ಎಂದು ರೈತ ತಿಮ್ಮನಾಯ್ಕ ಅವರ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

  • ಹೆಂಡ್ತಿಯನ್ನ ಕೊಂದು ರಸ್ತೆ ಬದಿ ಹಾಕಿ, 3 ವರ್ಷದ ಮಗುವನ್ನೂ ಅಲ್ಲೇ ಬಿಟ್ಟು ಪರಾರಿಯಾದ ಗಂಡ

    ಹೆಂಡ್ತಿಯನ್ನ ಕೊಂದು ರಸ್ತೆ ಬದಿ ಹಾಕಿ, 3 ವರ್ಷದ ಮಗುವನ್ನೂ ಅಲ್ಲೇ ಬಿಟ್ಟು ಪರಾರಿಯಾದ ಗಂಡ

    ಶಿವಮೊಗ್ಗ: ಹೆಂಡತಿಯನ್ನು ಕೊಂದ ಪಾಪಿ ತಂದೆಯೊಬ್ಬ ಸುಮಾರು 3 ವರ್ಷದ ಮಗುವನ್ನು ಶವದ ಬಳಿಯೇ ಬಿಟ್ಟು ಪರಾರಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಜಿಲ್ಲೆಯ ಮಲವಗೊಪ್ಪ ಬಳಿ ಬಿ.ಹೆಚ್.ರಸ್ತೆಯಲ್ಲಿ ತಾಯಿಯನ್ನು ಕೊಂದು ರಸ್ತೆ ಬದಿಯ ಹೊಲದಲ್ಲಿ ಹಾಕಲಾಗಿತ್ತು. ಕೊಲೆ ಆಗಿದೆ ಎಂಬುದನ್ನೂ ಅರಿಯದ ಪುಟ್ಟ ಮಗು ರಾತ್ರಿಯಿಡೀ ಶವದ ಬಳಿಯೇ ಇತ್ತು. ಮುಂಜಾನೆ ಶವದ ಪಕ್ಕ ಸೊಳ್ಳೆ- ನೋಣ ಓಡಿಸುತ್ತಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಲೆಯಾಗಿರುವ ಮಹಿಳೆಗೆ ಸುಮಾರು 25 ವರ್ಷವಾಗಿದೆ. ಇವರ ಬಗ್ಗೆ ಹಾಗೂ ಈ ಕೃತ್ಯವೆಸಗಿರುವ ವ್ಯಕ್ತಿ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ದೊರಕಿಲ್ಲ.

    ಮಗು ಮಾತ್ರ ತನ್ನ ಅಪ್ಪನೇ ಅಮ್ಮನಿಗೆ ಹೊಡೆದ ಎಂದು ಹೇಳುತ್ತಿದೆ. ಕೊಲೆಗೀಡಾದ ಮಹಿಳೆಯ ಕೈ ಮೇಲೆ ಯಲ್ಲಮ್ಮ- ನಾಗರಾಜ್ ಎಂಬ ಹಚ್ಚೆ ಬರಹ ಇದೆ. ಮಗುವಿನ ಹೇಳಿಕೆ ಹಾಗೂ ಈ ಹಚ್ಚೆಯ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗಗೆ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.