Tag: makara sankaramana

  • ಇಂದು ಸಂಜೆ ಗವಿಗಂಗಾಧರೇಶ್ವರನನ್ನ ಸ್ಪರ್ಶಿಸಲಿದ್ದಾನೆ ಭಾಸ್ಕರ

    ಇಂದು ಸಂಜೆ ಗವಿಗಂಗಾಧರೇಶ್ವರನನ್ನ ಸ್ಪರ್ಶಿಸಲಿದ್ದಾನೆ ಭಾಸ್ಕರ

    ಬೆಂಗಳೂರು : ಇಂದು ಮಕರ ಸಂಕ್ರಾಂತಿಯ ಪುಣ್ಯ ದಿನ. ಇವತ್ತು ಸೂರ್ಯ ತನ್ನ ಪಥ ಬದಲಿಸುವ ಹಿನ್ನೆಲೆ ಗುಟ್ಟಳ್ಳಿಯ ಗವಿಗಂಗಾಧರನನ್ನು ಸೂರ್ಯ ರಶ್ಮಿ ಸ್ಪರ್ಶಿಸಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮಕರ ಸಂಕ್ರಾಂತಿ ಹಬ್ಬದ ದಿನ ಸೂರ್ಯನ ರಶ್ಮಿ ಸಂಜೆ 5:23 ರಿಂದ 5:35 ರ ಸಮಯದಲ್ಲಿ ದೇವರನ್ನು ಸ್ಪರ್ಶಿಸಲಿದೆ.

    ಈ ಹಿನ್ನೆಲೆ ಗವಿಗಂಗಾಧರ ದೇವಾಲಯದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ಆರಂಭಗೊಂಡಿದೆ. ಶಿವನಿಗೆ ರುದ್ರಾಭಿಷೇಕ ಸೇರಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ.

    ಸಂಜೆ ಸೂರ್ಯ ರಶ್ಮಿ ಬೀಳುವ ಸಮಯದಲ್ಲಿ ದೇವರಿಗೆ ಸತತವಾಗಿ ಕ್ಷೀರಾಭಿಷೇಕ ನಡೆಯಲಿದೆ. ನಂತರ ಸೂರ್ಯರಶ್ಮಿಯಿಂದ ಪುಳಕಿನಾದ ಶಿವನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತದೆ. ಅದೇ ರೀತಿ ದೇವರ ಮೇಲೆ ಹೆಚ್ಚು ಕಾಲ ಸೂರ್ಯ ರಶ್ಮಿ ಉಳಿಯಬಾರದು. ಕಳೆದ ವರ್ಷ ಸೂರ್ಯ ರಶ್ಮಿ 1 ನಿಮಿಷ 3 ಸೆಕೆಂಡುಗಳ ಕಾಲ ದೇವರ ಮೇಲೆ ಇತ್ತು. ಅದರ ಪರಿಣಾಮವಾಗಿ ರಾಜ್ಯದಲ್ಲಿ ಅನೇಕ ದುಷ್ಪರಿಣಾಮಗಳು ಸಂಭವಿಸಿದ್ದವು. ಕಳೆದ ಬಾರಿ ಆದ ಅನಾಹುತಗಳು ಈ ಬಾರಿ ಆಗಬಾರದೆಂದು ಪ್ರಾರ್ಥಿಸುತ್ತೇವೆ ಎಂದು ಪ್ರಧಾನ ಅರ್ಚಕರು ಹೇಳುತ್ತಾರೆ.

    ಅದೇ ರೀತಿ ಭಾಸ್ಕರನಿಂದ ಪುಳಕಿತನಾದ ಶಿವನನ್ನ ಕಣ್ತುಂಬಿಕೊಳ್ಳೋಕೆ ಭಕ್ತ ಸಾಗರವೇ ಕಾತುರದಿಂದ ಕಾಯುತ್ತಿದೆ. ಒಟ್ಟಿನಲ್ಲಿ ಸೂರ್ಯರಶ್ಮಿಯಿಂದ ಪುಳಕಿತನಾದ ಪರಮೇಶ್ವರನನ್ನ ಕಣ್ಣು ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಲಿದ್ದಾರೆ.

  • ಉಡುಪಿಯ ಕೊರಗಜ್ಜನ ಮಹಿಮೆ ಮತ್ತೊಮ್ಮೆ ಸಾಬೀತು- ಕದ್ದ ಬೆಳ್ಳಿ ಆಭರಣಗಳನ್ನು ಹಿಂದುರಿಗಿಸಿದ ಖದೀಮರು

    ಉಡುಪಿಯ ಕೊರಗಜ್ಜನ ಮಹಿಮೆ ಮತ್ತೊಮ್ಮೆ ಸಾಬೀತು- ಕದ್ದ ಬೆಳ್ಳಿ ಆಭರಣಗಳನ್ನು ಹಿಂದುರಿಗಿಸಿದ ಖದೀಮರು

    ಉಡುಪಿ: ಕರಾವಳಿಯಲ್ಲಿ ದೈವ ಮತ್ತೆ ಕಾರಣಿಕ ತೋರಿದೆ. ದೈವಸ್ಥಾನದಿಂದ ಕದ್ದ ಆಭರಣಗಳನ್ನು ಕಳ್ಳರು ವಾಪಾಸ್ ತಂದಿಟ್ಟಿದ್ದಾರೆ. ಉಡುಪಿ ಜಿಲ್ಲೆ ಕಟಪಾಡಿಯಲ್ಲಿ ಈ ಕೌತುಕ ನಡೆದಿದೆ.

    ತುಳುನಾಡ ದೈವಸ್ಥಾನಗಳು ಕಾರಣಿಕ ಶಕ್ತಿಯನ್ನು ಹೊಂದಿದೆ ಎನ್ನುವುದು ಎಲ್ಲರಿಗೂ ತಿಳಿದಿರೋ ವಿಚಾರ. ಇಂತಹ ದೈವಸ್ಥಾನದ ಮುಂದೆ ಎಂತವನೂ ಕೇಡು ಬಗೆಯಲು ಮುಂದಾಗೋದಿಲ್ಲ. ಆದ್ರೆ ಏನಾದ್ರೂ ಕೇಡು ಬಗೆದಲ್ಲಿ ದೈವ ಶಕ್ತಿಗಳು ಆತನನ್ನು ಮಟ್ಟ ಹಾಕುತ್ತೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಇದನ್ನೂ ಓದಿ:   ದೈವಕ್ಕೆ ಬೈಯ್ದಿದ್ದಕ್ಕೆ ಇಡೀ ಕುಟುಂಬಕ್ಕೆ ಅನಾರೋಗ್ಯ – ಕೊರಗಜ್ಜನಲ್ಲಿ ಯುವಕನಿಂದ ಕ್ಷಮೆಯಾಚನೆ

    ಉಡುಪಿಯ ಕಟಪಾಡಿಯ ಏಣಗುಡ್ಡೆ ಎಂಬಲ್ಲಿರೋ ನೀಚ ದೈವ ಅಥವಾ ಕರಾವಳಿಯಾದ್ಯಂತ ಅಜ್ಜ ಎಂದೇ ಗುರುತಿಸಿಕೊಂಡಿರುವ ಸ್ವಾಮಿ ಕೊರಗಜ್ಜನ ಆಭರಣಗಳನ್ನು ಕದ್ದೊಯ್ದಿದ್ದ ಕಳ್ಳನೊಬ್ಬ ತಾನಾಗಿಯೇ ಮಕರ ಸಂಕ್ರಮಣ ದಿನದಂದು ಕೆಲವೊಂದು ಬೆಳ್ಳಿ ಆಭರಣಗಳನ್ನು ತಂದು ದೈವಸ್ಥಾನದ ಬಾಗಿಲ ಬಳಿ ಇಟ್ಟು ಹೋಗಿದ್ದಾನೆ. ಪವಾಡ ಅಂದ್ರೆ, ಕಳೆದ ವರುಷ ಅಕ್ಟೋಬರ್ 2 ರ ರಾತ್ರಿ ಇಲ್ಲಿ ಕಳವು ನಡೆದಿತ್ತು. ಆಗ ಅಷ್ಟಮಂಗಲ ಪ್ರಶ್ನೆ ಇಟ್ಟಾಗ ಮುಂದಿನ ಮಕರ ಸಂಕ್ರಮಣದೊಳಗಾಗಿ ಕದ್ದ ಆಭರಣ ದೈವಸ್ಥಾನ ಸೇರಲಿದೆ ಎನ್ನು ವಿಶ್ವಾಸ ವ್ಯಕ್ತವಾಗಿತ್ತು. ಇದೀಗ ಆ ಮಾತು ನಿಜವಾಗಿದೆ.

    ಸೋಮವಾರ ಮಕರ ಸಂಕ್ರಮಣದ ದಿನ ಕದ್ದ ಕೆಲವು ಬೆಳ್ಳಿ ಆಭರಣಗಳು ದೈವಸ್ಥಾನ ಸೇರಿವೆ. ನಿನ್ನೆ ಖದೀಮರು ದೈವಸ್ಥಾನದ ಬಾಗಿಲ ಬಳಿ ತಂದಿಟ್ಟು ಹೋಗಿದ್ದು, ಕೊರಗಜ್ಜನ ಮಹಿಮೆಗೆ ಕೈ ಗನ್ನಡಿ ಹಿಡಿದಂತಾಗಿದೆ. ಸದ್ಯ ತಂದಿಟ್ಟ ಬೆಳ್ಳಿಯ ಪರಿಕರಗಳು ಕಾಪು ಠಾಣಾ ಪೊಲೀಸರ ವಶದಲ್ಲಿದೆ. ಇನ್ನೂ ಒಂದಿಷ್ಟು ಆಭರಣಗಳು ಬಾಕಿ ಇದ್ದು ಅದನ್ನೂ ಕದ್ದೊಯ್ದ ಕಳ್ಳರು ತಂದಿಡುವ ವಿಶ್ವಾಸವನ್ನು ಗ್ರಾಮಸ್ಥರು ಹೊಂದಿದ್ದಾರೆ.

    ನಾರಾಯಣ ಕಟಪಾಡಿ ಆನಂದ ಮಾಬೆನ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ನಮ್ಮ ದೈವ ಬಹಳ ಕಾರಣಿಕದ್ದು. ದರ್ಶನದಲ್ಲೂ ಕದ್ದ ನಗನಾಣ್ಯ ಸಿಗುತ್ತದೆ ಎಂದು ಬಂದಿತ್ತು. ಹಾಗೆಯೇ ಆಗಿದೆ. ನಂಬಿದ ದೈವ ಕೈ ಬಿಡಲಿಲ್ಲ ಎಂದು ಹೇಳಿದ್ದಾರೆ.