Tag: MAHARASHTRA CRIME

  • ಬಾಯ್‌ಫ್ರೆಂಡ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳೋಕೆ ಮನೆಯ ಒಡವೆ ಕದ್ದ ಯುವತಿ ಅಂದರ್

    ಬಾಯ್‌ಫ್ರೆಂಡ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳೋಕೆ ಮನೆಯ ಒಡವೆ ಕದ್ದ ಯುವತಿ ಅಂದರ್

    ಮುಂಬೈ: ತನ್ನ ಬಾಯ್‌ಫ್ರೆಂಡ್ (Boyfriend) ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮನೆಯಲ್ಲಿ ಚಿನ್ನಾಭರಣ (Jewelry) ಕದ್ದಿದ್ದ ಚಾಲಕಿ ಯುವತಿಯನ್ನ ಪೊಲೀಸರು (Police) ಬಂಧಿಸಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

    ಮಹಾರಾಷ್ಟ್ರದ (Maharashtra) ಥಾಣೆಯಲ್ಲಿ ಯುವತಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕಳ್ಳತನ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮದುವೆ ಆದ್ಮೇಲೆ ಸಿನಿಮಾಗೆ ಬ್ರೇಕ್- ಹರಿಪ್ರಿಯಾ ಹೇಳೋದೇನು?

    ಕಳ್ಳತನ ಮಾಡಿದ್ದ ಯುವತಿ ತಾನು ತಪ್ಪಿಸಿಕೊಳ್ಳೋದಕ್ಕಾಗಿ ಸ್ನೇಹಿತ ತನ್ನ ಅಶ್ಲೀಲ ಚಿತ್ರ ಕ್ಲಿಕ್ ಮಾಡಿದ್ದಾನೆ. ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾನೆ. ಆದ್ದರಿಂದ ಬಲವಂತವಾಗಿ ತನ್ನ ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಆತನಿಗೆ ಒಪ್ಪಿಸಿದ್ದೇನೆ ಎಂದು ಹುಡುಗಿ ನಗರದ ಕಪೂರಬಾವಡಿ ಪೊಲೀಸರಿಗೆ ದೂರು ನೀಡಿದ್ದಳು. ಬಳಿಕ ಪೊಲೀಸರು ಅಪ್ರಾಪ್ತ ಬಾಲಕನನ್ನ ವಿಚಾರಣೆಗೆ ಒಳಪಡಿಸಿದ್ದರು. ಸಿಸಿಟಿವಿ (CCTV) ದೃಶ್ಯಾವಳಿ ಪರಿಶೀಲಿಸಿದಾಗ ಆಕೆ ಅಸಲಿ ಆಟ ಬಯಲಾಗಿದೆ.

    ಹುಡುಗಿ ತನ್ನ 18 ವರ್ಷದ ಪ್ರಿಯಕರನೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಅದಕ್ಕಾಗಿ ಕದ್ದ ಆಭರಣಗಳನ್ನ ಮಾನ್ಪಾಡಾ ಪ್ರದೇಶದಲ್ಲಿ 53 ಸಾವಿರ ರೂ.ಗಳಿಗೆ ಮಾರಾಟ ಮಾಡಿಡಿದ್ದಳು. ತನ್ನನ್ನು ಮತ್ತು ಪ್ರಿಯಕರನನ್ನು ಉಳಿಸಿಕೊಳ್ಳಲು ಆಕೆ ಕಥೆ ಕಟ್ಟಿದ್ದಾಳೆ ಎಂಬುದು ಸ್ಪಷ್ಟವಾಗಿದೆ.  ಇದನ್ನೂ ಓದಿ: ಬಿಹಾರ ಶಿಕ್ಷಣ ಸಚಿವರ ನಾಲಿಗೆ ತಂದವರಿಗೆ 10 ಕೋಟಿ ಬಹುಮಾನ – ಅಯೋಧ್ಯೆ ಸ್ವಾಮೀಜಿ

    ಕದ್ದ ಆಭರಣ ಖರೀದಿಸಿದವನನ್ನೂ ಬಂಧಿಸಲಾಗಿದೆ ಎಂದು ಕಪೂರಬಾವಡಿ ಪೊಲೀಸ್ ಠಾಣೆಯ ಹಿರಿಯ ನಿರೀಕ್ಷಕ ಉತ್ತಮ್ ಸೋನವಾನೆ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟೀಕಿಸಿದ್ದಕ್ಕೆ ಕೋಪಗೊಂಡು ನೆರೆ ಮನೆಯವರಿಗೆ ಚಾಕು ಇರಿತ- ಇಬ್ಬರು ಸಾವು, 3 ಮಕ್ಕಳಿಗೆ ಗಾಯ

    ಟೀಕಿಸಿದ್ದಕ್ಕೆ ಕೋಪಗೊಂಡು ನೆರೆ ಮನೆಯವರಿಗೆ ಚಾಕು ಇರಿತ- ಇಬ್ಬರು ಸಾವು, 3 ಮಕ್ಕಳಿಗೆ ಗಾಯ

    ಮುಂಬೈ: ನೆರೆಮನೆಯ ವ್ಯಕ್ತಿ ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ ಕುಟುಂಬವೊಂದರ ಇಬ್ಬರು ಮೃತಪಟ್ಟಿದ್ದು, ಮೂವರು ಮಕ್ಕಳು ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಭಿವಾಂಡಿ ಬಳಿ ನಡೆದಿದೆ.

    MAN ARREST

    ಕಮ್ರುಜ್ಮಾ ಅನ್ಸಾರಿ (42), ಇಮ್ತಿಯಾಜ್ ಮಹಮ್ಮದ್ ಜಬರ್ ಖಾನ್ (35) ಹತ್ಯೆಯಾದವರು. ಕುಟುಂಬದ ಉಳಿದ ನಾಲ್ವರು ಸದಸ್ಯರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ತಾನು ಯಾರನ್ನು ಕೊಲ್ಲುತ್ತಿದ್ದೇನೆ ಎಂದು ಸಾವು ಯಾಕೆ ಕೇರ್ ಮಾಡುವುದಿಲ್ಲ: ರಾಮ್ ಗೋಪಾಲ್ ವರ್ಮಾ

    ಕ್ಷುಲ್ಲಕ ವಿಚಾರಕ್ಕೆ ಪರಸ್ಪರರಲ್ಲಿ ಜಗಳವಾಗಿ ಈ ಘಟನೆ ನಡೆದಿದೆ. ಆರೋಪಿ ಮಹಮ್ಮದ್ ಅನ್ಸಾರಿ ಹಾಖ್ ಲುಕ್ಮನ್ ಅನ್ಸಾರಿ (45)ಯನ್ನು ಬಂಧಿಸಲಾಗಿದೆ ಎಂದು ಶಾಂತಿನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

    POLICE

    ಘಟನೆಗೂ ಮುನ್ನ ಕೆಲ ದಿನಗಳಿಂದ ಹಿಂದೆ ಹಲ್ಲೆಗೊಳಗಾದ ಕುಟುಂಬದ ಸದಸ್ಯರೊಬ್ಬರು, ಆರೋಪಿಯ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಇದರಿಂದ ಕುಪಿತಗೊಂಡು ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚೆನ್ನೈನಲ್ಲಿ ಹುಟ್ಟಿ ಕನ್ನಡನಾಡಲ್ಲಿ ಬೆಳೆದ ಪವರ್ ಸ್ಟಾರ್ ಲೈಫ್ ಜರ್ನಿ ಇಲ್ಲಿದೆ

    ಅವರ ಮೇಲೆ ಹಲ್ಲೆ ನಡೆಸಲು ಚಾಕು ಹಿಡಿದು ಬಂದ ಆರೋಪಿಯು ಮನೆ ಹೊರಗಡೆ ನಿಂತಿದ್ದ ಕಮ್ರುಜಮ ಅನ್ಸಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಡೆಯಲು ಬಂದ ಇಮ್ತಿಯಾಜ್ ಖಾನ್ ಮೇಲೂ ಚಾಕುವಿನಿಂದ ದಾಳಿ ನಡೆಸಿದ್ದಾನೆ. ತೀವ್ರ ಗಾಯಗೊಂಡಿದ್ದರಿಂದ ಇಬ್ಬರೂ ಸ್ಥಳದಲ್ಳೇ ಮೃತಪಟ್ಟಿದ್ದಾರೆ. ಇದೇ ವೇಳೆ ಕುಟುಂಬದ ಉಳಿದ ನಾಲ್ವರ ಮೇಲೂ ಹಲ್ಲೆ ನಡೆಸಿದ್ದಾನೆ.