Tag: lungi

  • ಪಂಚೆ ಧರಿಸಿ ಪೊಂಗಲ್‌ ಆಚರಿಸಿದ ಪ್ರಧಾನಿ ಮೋದಿ- ವೀಡಿಯೋ ವೈರಲ್‌

    ಪಂಚೆ ಧರಿಸಿ ಪೊಂಗಲ್‌ ಆಚರಿಸಿದ ಪ್ರಧಾನಿ ಮೋದಿ- ವೀಡಿಯೋ ವೈರಲ್‌

    ನವದೆಹಲಿ: ಇಷ್ಟು ದಿನ ಕುರ್ತಾ, ಪೈಜಾಮಾದಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇದೀಗ ದಕ್ಷಿಣ ಭಾರತದ ಉಡುಗೆ ಪಂಚೆಯಲ್ಲಿ (Lungi) ಮಿಂಚಿದ್ದಾರೆ.

    ಹೌದು. ಮೋದಿಯವರು ಸದ್ಯ ಪಂಚೆ ಧರಿಸುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ದೆಹಲಿಯ ರಾಜ್ಯ ಸಚಿವ ಎಲ್ ಮುರುಗನ್ (L Murugan) ಅವರ ನಿವಾಸದಲ್ಲಿನಡೆದ ಪೊಂಗಲ್ ಆಚರಣೆಯಲ್ಲಿ ಭಾಗವಹಿಸಲು ಪ್ರಧಾನಿಯವರು ದಕ್ಷಿಣ ಭಾರತದ ಪಂಚೆಯನ್ನು ಧರಿಸಿದ್ದರು. ಸದ್ಯ ನರೇಂದ್ರ ಮೋದಿಯವರು ಪೊಂಗಲ್‌ (Pongal) ಆಚರಣೆಯ ವಿಧಿ-ವಿಧಾನಗಳನ್ನು ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ವೀಡಿಯೋದಲ್ಲಿ ಏನಿದೆ..?: ಪ್ರಧಾನಿ ಎಡ ಭುಜದ ಮೇಲೆ ಶಾಲು ಹೊದ್ದು, ಕಪ್ಪು ಕೋಟ್ ಜೊತೆಗೆ ಬಿಳಿ ಪಂಚೆ ಧರಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಅಲ್ಲದೆ ಒಲೆಯ ಮೇಲಿದ್ದ ಪಾತ್ರೆಗೆ ಏನೋ ಹಾಕುತ್ತಿರುವುದನ್ನು ಕೂಡ ಗಮನಿಸಬಹುದು. ಇದಾದ ಬಳಿಕ ಮಂಟಪದೊಳಗೆ ನಿಂತಿರುವ ಹಸುವಿನ ಕಡೆಗೆ ಹೋಗುತ್ತಾರೆ. ಹಸುವಿನ ಮೇಲೆ ಹೂವು ಹಾಕಿ ಅದಕ್ಕೆ ತಿನ್ನಿಸುವುದನ್ನು ಕೂಡ ವೀಡಿಯೋದಲ್ಲಿ ಕಾಣಬಹುದಾಗಿದೆ. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿಯವರು ಸಮಸ್ತ ಜನತೆಗೆ ಪೊಂಗಲ್ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

    ಇದೇ ವೇಳೆ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಮತ್ತು ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರು ಸಹ MoS ಮುರುಗನ್ ಅವರ ನಿವಾಸದಲ್ಲಿ ಉಪಸ್ಥಿತರಿದ್ದರು.

    ಒಟ್ಟಿನಲ್ಲಿ ಪ್ರಧಾನಿ ಪಂಚೆ ಧರಿಸಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದ್ದು, ಬಳಿಕ ಅದನ್ನು ಸೋಶಿಯಲ್‌ ಮೀಡಿಯಾಕ್ಕೆ ಹರಿಯಲು ಬಿಟ್ಟಿದ್ದಾರೆ.

  • ಲುಂಗಿ ವಿಚಾರಕ್ಕೆ ಕಿರಿಕ್ – ಕಾರ್ಮಿಕರ ಮೇಲೆ ಸ್ಥಳೀಯರಿಂದ ಹಲ್ಲೆ

    ಲುಂಗಿ ವಿಚಾರಕ್ಕೆ ಕಿರಿಕ್ – ಕಾರ್ಮಿಕರ ಮೇಲೆ ಸ್ಥಳೀಯರಿಂದ ಹಲ್ಲೆ

    ವಡೋದರಾ: ಲುಂಗಿ ಧರಿಸಿದ್ದ ಎಂಜಿನಿಯರ್ ಮತ್ತು 6 ಕಾರ್ಮಿಕರ ಮೇಲೆ ಗುಜರಾತಿನ ಸಾಮಾದ ಸ್ಥಳೀಯರು ಸೋಮವಾರ ರಾತ್ರಿ ಹಲ್ಲೆ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಸೋಮವಾರ ರಾತ್ರಿ ಸಾಮಾದ ಶಾಲೆಯೊಂದರ ಕಟ್ಟಡ ನಿರ್ಮಾಣಕ್ಕಾಗಿ ಬಿಹಾರದ ಮಧುಬಾನಿ ಜಿಲ್ಲೆಯಿಂದ ವಲಸೆ ಬಂದಿದ್ದ ಸಿವಿಲ್ ಇಂಜಿನಿಯರ್ ಯಾದವ್ ಮತ್ತು 6 ಮಂದಿ ಇನ್ನಿತರ ಕಾರ್ಮಿಕರು ನಿರ್ಮಾಣ ಹಂತದಲ್ಲಿರುವ ಕಟ್ಟಡದ ಹೊರಗೆ ಕುಳಿತ್ತಿದ್ದರು.

    ಈ ಸಮಯಕ್ಕೆ ಸಾಮಾದ 3 ಮಂದಿ ಸ್ಥಳೀಯರು ಲುಂಗಿ ಧರಿಸಿದ್ದ ಎಂಜಿನಿಯರ್ ಮತ್ತು ಕಾರ್ಮಿಕರನ್ನ ಪ್ರಶ್ನಿಸಿದ್ದಾರೆ. ಬಳಿಕ ಯಾದವ್ ಮತ್ತು ಸ್ಥಳೀಯರ ಮಧ್ಯೆ ಮಾತಿನ ಚಕಮಕಿ ಬೆಳೆದು ಅಲ್ಲಿದ್ದ 7 ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಯಾದವ್ ಸಹಾಯಕ್ಕಾಗಿ ತಕ್ಷಣ ಸ್ಥಳೀಯ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರ ವಾಹನ ಬರುತ್ತಿದ್ದಂತೆ, ಆ ಹಲ್ಲೆಕೋರರು ಅಲ್ಲಿದ್ದ ಬೈಕ್ ಮತ್ತು ಎರಡು ಪ್ಲಾಸ್ಟಿಕ್ ಚೇರ್ ಗಳನ್ನ ಸುಟ್ಟು ಹಾಕಿ ಪರಾರಿಯಾಗಿದ್ದಾರೆ.

    ವಿಷಯ ತಿಳಿದ ಕಾಂಟ್ರಾಕ್ಟರ್ ಮಯೂರ್ ಪಟೇಲ್, ಸೂರತ್‍ನಿಂದ ಸಾಮಾಗೆ ಧಾವಿಸಿದ್ದಾರೆ. ಈ ಘಟನೆಯ ಕಾರಣವನ್ನ ಹೇಳಲು ಅಸಾಧ್ಯವಾಗಿದೆ. ಕಾರ್ಮಿಕರು ಧರಿಸಿದ್ದ ಲುಂಗಿಯಿಂದ ಇಷ್ಟೆಲ್ಲಾ ಅನುಹುತಕ್ಕೆ ಕಾರಣವಾಗಿದೆ. ಇದು ತೀರ ವಿಚಿತ್ರವಾದದ್ದು. ಮೊದಲನೇ ಮಹಡಿಯಲ್ಲಿ ಮಲಗಿದ್ದ 30-40 ಕಾರ್ಮಿಕರನ್ನ ಬಾಯಿ ಮುಚ್ಚಿಕೊಂಡು ಈ ಜಾಗವನ್ನ ಬಿಟ್ಟುಹೋಗದೇ ಇದ್ದರೆ ನಿಮ್ಮನ್ನು ಕೂಡ ಬೈಕ್ ಮತ್ತು ಕುರ್ಚಿಗೆ ಬೆಂಕಿ ಹಚ್ಚಿದಂತೆ ನಿಮಗೂ ಬೆಂಕಿ ಹಚ್ಚಲಾಗುವುದು ಎಂದು ಬೆದರಿಕೆ ಹಾಕಿದ್ದರು ಎಂದು ಪಟೇಲ್ ಹೇಳಿದ್ದಾರೆ.

    ಸಾಮಾದ ಇನ್ಸ್ ಪೆಕ್ಟರ್  ಪಿಡಿ ಪಾರ್‍ಮರ್ ಮಾತನಾಡಿ, ಹಲ್ಲೆ ನಡೆಸಿದ ಮೂವರಲ್ಲಿ ಕೇಯೂರ್ ಪಾರ್‍ಮರ್ ಎಂಬಾತನನ್ನು ಬಂಧಿಸಿದ್ದು, ಉಳಿದವರನ್ನ ಹುಡುಕಲು ಜಾಲ ಬೀಸಿದ್ದು, ಶೀಘ್ರವೇ ಅವರನ್ನ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

    ಹಲವು ದಿನಗಳಿಂದ ಸ್ಥಳಿಯರು ಕಾರ್ಮಿಕರ ಜೊತೆಗೆ ಸರಿಯಾಗಿ ಲುಂಗಿ ಧರಿಸಿಕೊಂಡು ಕುಳಿತುಕೊಳ್ಳಿ ಎಂದು ಜಗಳವಾಡುತ್ತಿದ್ದರು. ಇದು ಯಾವುದೇ ವಲಸಿಗರ ಮೇಲೆ ನಡೆದ ದ್ವೇಷದ ಕೃತ್ಯವಲ್ಲ ಎಂದು ಪೊಲೀಸ್ ಆಯುಕ್ತ ಅನೂಪ್ ಸಿಂಗ್ ಗಾಲೌಟ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾರುಕಟ್ಟೆಗೆ ಬಂದಿದೆ 6 ಸಾವಿರ ರೂಪಾಯಿಯ ಝರಾ ಲುಂಗಿ!

    ಮಾರುಕಟ್ಟೆಗೆ ಬಂದಿದೆ 6 ಸಾವಿರ ರೂಪಾಯಿಯ ಝರಾ ಲುಂಗಿ!

    ನವದೆಹಲಿ: ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಫ್ಯಾಶನ್ ಟ್ರೆಂಡ್ ಬದಲಾಗುತ್ತಿದೆ. ಇತ್ತೀಚಿನ ಫ್ಯಾಶನ್‍ಗಳನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ದೇಸಿ ಲುಕ್‍ಗಳಲ್ಲಿ ವಿದೇಶಿ ಟಚ್ ನೀಡಲಾಗುತ್ತಿದೆ. ಲುಂಗಿ ಭಾರತದಲ್ಲಿ ಎಲ್ಲ ವರ್ಗದ ಜನರು ಧರಿಸ್ತಾರೆ. ಆದ್ರೆ ಇದೇ ಲುಂಗಿಯನ್ನು ‘ಝರಾ’ ಎಂಬ ಕಂಪನಿ ಸ್ಕರ್ಟ್ ಮಾದರಿಯಲ್ಲಿ ವಿನ್ಯಾಸಗೊಳಿಸಿ ಮಾರುಕಟ್ಟೆಗೆ ಪರಿಚಯಿಸಿದೆ.

    ಲುಂಗಿ ಕೇವಲ ಭಾರತದಲ್ಲಿ ಮಾತ್ರವಲ್ಲದೇ ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ಏಷ್ಯಾದ ನೈಋತ್ಯ ರಾಷ್ಟ್ರಗಳಲ್ಲಿ ಬಳಕೆಯಲ್ಲಿದೆ. ಒಂದು ಲುಂಗಿಗೆ ಮಾರುಕಟ್ಟೆಯಲ್ಲಿ 300 ರೂ. ಬೆಲೆಯಿದೆ. ವಿನೂತನವಾಗಿ ಸ್ಕರ್ಟ್ ಮಾದರಿಗೆ ಝರಾ ಕಂಪೆನಿ ಅಂದಾಜು 5,700 ರೂ. (89.90 ಡಾಲರ್) ನಿಗದಿ ಮಾಡಿದೆ.

    ಆನ್‍ಲೈನ್ ಮಾರುಕಟ್ಟೆಯಲ್ಲಿ ಝರಾ ಲುಂಗಿ ವಿನ್ಯಾಸ ಸ್ಕರ್ಟ್ ಗಳನ್ನು ಪರಿಚಯಿಸಿದ ಬಳಿಕ ಟ್ವಿಟ್ಟರ್ ನಲ್ಲಿ ಫನ್ನಿ ಕಮೆಂಟ್ ಗಳನ್ನು ಮಾಡಿದ್ದಾರೆ. ಟ್ವಿಟರ್‍ನಲ್ಲಿ ನಮ್ಮ ತಂದೆಯ ಮೂರು ಲುಂಗಿಗಳ ಬೆಲೆ 3 ಡಾಲರ್‍ಗಿಂತ ಕಡಿಮೆ ಎಂದು ಝರಾ ಸ್ಕರ್ಟ್ ಮತ್ತು ಲುಂಗಿಗಳ ಫೋಟೋಗಳನ್ನು ಹಾಕಿ ಟ್ರೋಲ್ ಮಾಡುತ್ತಿದ್ದಾರೆ.

    ಈ ಝಾರಾ ಸ್ಕರ್ಟ್ ಕೇವಲ ಕಂದು (ಬ್ರೌನ್) ಬಣ್ಣದಲ್ಲಿ ದೊರೆಯುತ್ತದೆ. ಆದರೆ ಭಾರತದ ಲುಂಗಿಗಳು ಯಾವುದೇ ಡಿಸೈನ್ ಹಾಗೂ ಕಲರ್‍ಗಳಲ್ಲಿ ದೊರೆಯುತ್ತದೆ.

  • ದೇಗುಲ ಉದ್ಘಾಟನೆಗೆ ಬಂದ ಸಿಎಂ ಸಿದ್ದರಾಮಯ್ಯ ಪಂಚೆ ಹರಿದೋಯ್ತು..!

    ದೇಗುಲ ಉದ್ಘಾಟನೆಗೆ ಬಂದ ಸಿಎಂ ಸಿದ್ದರಾಮಯ್ಯ ಪಂಚೆ ಹರಿದೋಯ್ತು..!

    ಚಿಕ್ಕಬಳ್ಳಾಪುರ: ಹೊಸ ಪಂಚೆ, ಹೊಸ ಶಲ್ಯ ಧರಿಸಿ ಹೆಲಿಕಾಪ್ಟರ್ ನಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದಿಳಿದ ಸಿಎಂ ಸಿದ್ದರಾಮಯ್ಯನವರು ಅರೆಕ್ಷಣ ಕಸಿವಿಸಿಗೊಂಡ ಘಟನೆ ನಡೆದಿದೆ.

    ಅದಕ್ಕೆ ಕಾರಣವಾಗಿದ್ದು ಅವರ ಪಂಚೆ. ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದ ನೂತನ ಬಿರೇಶ್ವರ ಸ್ವಾಮಿ ದೇಗುಲದ ಉದ್ಘಾಟನೆಗೆಂದು ಜಿಲ್ಲೆಗೆ ಆಗಮಿಸಿದ್ದರು.

    ಇದನ್ನೂ ಓದಿ: ಪ್ಯಾಂಟ್ ಬದ್ಲು ಪಂಚೆ ಉಡೋದ್ಯಾಕೆ: ಸಿಎಂ ಮಾತಲ್ಲೇ ಕೇಳಿ

    ಹೆಲಿಕಾಪ್ಟರ್ ನಿಂದ ಇಳಿದು ನಡೆದುಕೊಂಡು ಬರುವಾಗ ಮುಖ್ಯಮಂತ್ರಿಯವರಿಗೆ ತನ್ನ ಪಂಚೆಯ ಕೊನೆ ಹರಿದಿರುವ ವಿಚಾರ ಗಮನಕ್ಕೆ ಬಂತು. ಅಂತೆಯೇ ಸಿಎಂ ಅವರು ಅಲ್ಲಿಯೇ ಹರಿಯಲು ಯತ್ನಿಸಿದರಾದ್ರೂ ಅದು ಸಾಧ್ಯವಾಗಲಿಲ್ಲ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಲು ನಿಂತಿದ್ದ ವೇಳೆ ಪಂಚೆಯ ಕೊನೆಯನ್ನು ತನ್ನ ಕೈಯಲ್ಲಿ ಕಿತ್ತಾಕಿದ್ರು.

    ನಂತರ ಎಸ್ ಜೆ ಸಿ ಐಟಿ ಕಾಲೇಜಿನ ಪ್ರಾಂಶುಪಾಲರ ಕಚೇರಿಗೆ ಬಂದ ಸಿಎಂ ಸಿದ್ದರಾಮಯ್ಯ, ಹರಿದ ಪಂಚೆಯನ್ನ ಬದಲಿಸಿ, ಹೊಸ ಪಂಚೆ ಉಟ್ಟುಕೊಂಡು ದೇವರ ದರ್ಶನಕ್ಕೆ ತೆರಳಿದ್ರು.

    https://www.youtube.com/watch?v=w3IRCe2EFgk