Tag: lucknow

  • 16 ವರ್ಷಗಳ ಮೂಢನಂಬಿಕೆಗೆ ತೆರೆಎಳೆದ ಯುಪಿ ಸಿಎಂ ಯೋಗಿ ಆದಿತ್ಯನಾಥ್

    16 ವರ್ಷಗಳ ಮೂಢನಂಬಿಕೆಗೆ ತೆರೆಎಳೆದ ಯುಪಿ ಸಿಎಂ ಯೋಗಿ ಆದಿತ್ಯನಾಥ್

    ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಆಗ್ರಾದ ಸರ್ಕಿಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡುವ ಮೂಲಕ 16 ವರ್ಷಗಳ ಮೂಢನಂಬಿಕೆಗೆ ತೆರೆಎಳೆದಿದ್ದಾರೆ.

    ಆಗ್ರಾದ ಸರ್ಕಿಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡಿದರೆ ಸಿಎಂ ಹುದ್ದೆ ಕಳೆದು ಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಬಲವಾಗಿ ಯುಪಿ ರಾಜಕೀಯ ವಲಯದಲ್ಲಿ ಇದೆ. ಈ ಕಾರಣದಿಂದ ಕಳೆದ 16 ವರ್ಷಗಳಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಹುದ್ದೆ ಏರಿದ ಯಾರೊಬ್ಬರು ಕೂಡ ಇಲ್ಲಿ ವಾಸ್ತವ್ಯ ಹೂಡಿರಲಿಲ್ಲ.

    ಆದರೆ ಇಂದು ಸಿಎಂ ಯೋಗಿ ಆದಿತ್ಯನಾಥ್ ಅವರು ಅದೇ ಸರ್ಕಿಟ್ ಹೌಸ್ ನಲ್ಲಿ ವಾಸ್ತವ್ಯ ಹೂಡುವ ಮೂಲಕ ಮೂಢ ನಂಬಿಕೆಯನ್ನು ದೂರ ಮಾಡಿದ್ದಾರೆ. ಈ ಮೂಲಕ ತಾವು ವೈಜ್ಞಾನಿಕ ಚಿಂತನೆ ಇರುವ ಸಿಎಂ ಎಂದು ಸಾಬೀತು ಪಡಿಸಿದ್ದಾರೆ. ಮಂಗಳವಾರ ಭಾರತದ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ನೆತುನ್ಯಾಹು ದಂಪತಿ ಆಗ್ರಾ ತಾಜ್ ಮಹಲ್ ಗೆ ಭೇಟಿ ನೀಡಿದ್ದರು. ಅವರಿಗೆ ಸ್ವಾಗತ ಕೋರಲು ಆಗ್ರಾಕ್ಕೆ ಬಂದಿದ್ದ ಯೋಗಿ ಸರ್ಕಿಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡಿದ್ದರು.

    16 ವರ್ಷಗಳ ಹಿಂದೆ ಉತ್ತರ ಪ್ರದೇಶ ಸಿಎಂ ಪ್ರಸ್ತುತ ಗೃಹ ಸಚಿವರಾಗಿರುವ ರಾಜನಾಥ್ ಸಿಂಗ್ ಅವರು ಇಲ್ಲಿ ವಾಸ್ತವ್ಯ ಹೂಡಿ ತಮ್ಮ ಸಿಎಂ ಹುದ್ದೆಯನ್ನು ಕಳೆದು ಕೊಂಡಿದ್ದರು. ನಂತರ ಯುಪಿ ಸಿಎಂಗಳಾದ ಮುಲಾಯಂ ಸಿಂಗ್ ಯಾದವ್, ಮಾಯಾವತಿ ಮತ್ತು ಅಖಿಲೇಶ್ ಯಾದವ್ ಇಲ್ಲಿ ವಾಸ್ತವ್ಯ ಮಾಡಿರಲಿಲ್ಲ. ಒಂದು ವೇಳೆ ಆಗ್ರಾಕ್ಕೆ ಬಂದಿದ್ದರೂ ನಗರದ ಸ್ಟಾರ್ ಹೋಟೆಲ್‍ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಿಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡುವ ಮುಖ್ಯಮಂತ್ರಿಗಳು ತಮ್ಮ ಪದವಿ ಕಳೆದುಕೊಳ್ಳಲಿದ್ದಾರೆ ಎಂಬ ಮೂಢನಂಬಿಕೆ ಚಾಲ್ತಿಗೆ ಬಂದಿತ್ತು.

    ಯೋಗಿ ಆದಿತ್ಯನಾಥ್ ಅವರ ಈ ನಿರ್ಧಾರವನ್ನು ಕಂಡು ಮಾಧ್ಯಮದವರು ಪ್ರಶ್ನಿಸಿದ ವೇಳೆ ಮುಗುಳುನಕ್ಕು ಸುಮ್ಮನಾಗಿದ್ದಾರೆ. ಕಳೆದ ವರ್ಷ ಕೂಡ ಯೋಗಿ 29 ವರ್ಷಗಳ ಮೂಢನಂಬಿಕೆಯನ್ನು ಧಿಕ್ಕರಿಸಿ ನೋಯ್ಡಾಗೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಅವರು ಸಹ ಆದಿತ್ಯನಾಥ್ ಅವರ ನಿರ್ಧಾರವನ್ನು ಕೇಳಿ ಶ್ಲಾಘಿಸಿದ್ದರು.

    ನೋಯ್ಡಾಗೆ ಭೇಟಿ ನೀಡುವ ಉತ್ತರ ಪ್ರದೇಶ ಮುಖ್ಯಮಂತ್ರಿಗಳು ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮೂಢ ನಂಬಿಕೆ ಉತ್ತರಪ್ರದೇಶಲ್ಲಿದೆ. ಡಿಸೆಂಬರ್ ನಲ್ಲಿ ದೆಹಲಿಯ ಜನಕಪುರಿಯಿಂದ ನೋಯ್ಡಾದವರೆಗೆ ಮೆಜೆಂತಾ ಮೆಟ್ರೋ ಲೈನ್ ನಿರ್ಮಿಸಲಾಗಿದ್ದು, ಮೆಟ್ರೋ ರೈಲು ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯೋಗಿ ಆದಿತ್ಯನಾಥ್ ನೋಯ್ಡಾಗೆ ಭೇಟಿ ನೀಡಿದ್ದರು.

  • 12 ವರ್ಷದ ಮಗಳ ಮೇಲೆ ತಂದೆಯಿಂದಲೇ 5 ವರ್ಷ ನಿರಂತರ ರೇಪ್, ಕೃತ್ಯಕ್ಕೆ ತಾಯಿ ಸಾಥ್!

    12 ವರ್ಷದ ಮಗಳ ಮೇಲೆ ತಂದೆಯಿಂದಲೇ 5 ವರ್ಷ ನಿರಂತರ ರೇಪ್, ಕೃತ್ಯಕ್ಕೆ ತಾಯಿ ಸಾಥ್!

    ಭೋಪಾಲ್: 12 ವರ್ಷದ ಬಾಲಕಿಯ ಮೇಲೆ ಸತತ 5 ವರ್ಷಗಳ ಕಾಲ ತಂದೆಯೇ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಛತ್ತರ್ಪುರ್ ನಗರದಲ್ಲಿ ನಡೆದಿದೆ.

    ಘಟನೆಯಲ್ಲಿ ತನ್ನ ಪತಿ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿರುವ ಕುರಿತು ತಾಯಿಗೆ ಗೊತ್ತಿದ್ದರೂ ಆಕೆ ಹೀನಕೃತ್ಯಕ್ಕೆ ಅಡ್ಡಿಪಡಿಸಿಲ್ಲ. ಅಲ್ಲದೇ ತಾಯಿಯೆ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಲು ಸಹಾಯ ಮಾಡಿದ್ದಾಳೆ.

    ಕೃತ್ಯದ ಬಗ್ಗೆ ತಿಳಿದ ಬಾಲಕಿಯ ಸಹೋದರ ಒಂದು ವರ್ಷದ ಹಿಂದೆಯೇ ವಿರೋಧ ವ್ಯಕ್ತಪಡಿಸಲು ಮುಂದಾಗ ಆತನಿಗೆ ಸುಮ್ಮನಿರುವಂತೆ ತಂದೆ ಧಮ್ಕಿ ಹಾಕಿ ಸುಮ್ಮನಿರುವಂತೆ ಹೇಳಿದ್ದ. ಆದರೆ ಬಾಲಕಿ ಮನೆಯಿಂದ ತಪ್ಪಿಸಿಕೊಂಡು ಬಂದ ಸಂದರ್ಭದಲ್ಲಿ ತಂದೆಯ ಕೃತ್ಯದ ಕುರಿತು ತನ್ನ ಸಂಬಂಧಿಯೊಬ್ಬರ ಬಳಿ ಹೇಳಿಕೊಂಡಿದ್ದಾಳೆ. ಈ ವಿಚಾರ ತಿಳಿದು ಸಂಬಂಧಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ಬೆಳಕಿಗೆ ಬಂದಿದೆ.

    ಬಾಲಕಿಯ ಹೇಳಿಕೆ ಪಡೆದ ಪೊಲೀಸರು ತಂದೆ ಹಾಗೂ ತಾಯಿ ಇಬ್ಬರನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂತ್ರಸ್ತೆ ತನ್ನ ತಂದೆ ಹಾಗೂ ತಾಯಿ ಇಬ್ಬರಿಗೂ ಮರಣ ದಂಡನೆ ವಿಧಿಸುವಂತೆ ಕೇಳಿಕೊಂಡಿದ್ದಾಳೆ.

     

  • ಅತ್ಯಾಚಾರಗೈದು ವಿಡಿಯೋ ಮಾಡ್ದ- ನಂತ್ರ ಬ್ಲಾಕ್‍ಮೇಲ್ ಮಾಡಿ 1 ವರ್ಷ ನಿರಂತರ ರೇಪ್!

    ಅತ್ಯಾಚಾರಗೈದು ವಿಡಿಯೋ ಮಾಡ್ದ- ನಂತ್ರ ಬ್ಲಾಕ್‍ಮೇಲ್ ಮಾಡಿ 1 ವರ್ಷ ನಿರಂತರ ರೇಪ್!

    ಲಕ್ನೋ: ಯುವತಿಯ ಮೇಲೆ ಅತ್ಯಾಚಾರ ಮಾಡಿದ ನಂತರ ಬ್ಲಾಕ್‍ಮೇಲ್ ಮಾಡಿ ಒಂದು ವರ್ಷ ಅತ್ಯಾಚಾರಗೈದ ಅಮಾನವೀಯ ಘಟನೆ ಉತ್ತರ ಪ್ರದೇಶದ ರಾಂಪುರ್ ಜಿಲ್ಲೆಯಲ್ಲಿ ನಡೆದಿದೆ.

    ಸಂತ್ರಸ್ತೆ ಆರೋಪಿ ವಿರುದ್ಧ ದೂರು ನೀಡಿದ್ದು, ಆರೋಪಿ ಅತ್ಯಾಚಾರವೆಸಗಿದ್ದನ್ನು ವಿಡಿಯೋ ಮಾಡಿಕೊಂಡಿದ್ದನು. ಬಳಿಕ ಅದೇ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ನಿರಂತರವಾಗಿ ಒಂದು ವರ್ಷದ ಕಾಲ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.

    ಈ ಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುವುದಾಗಿ ಆತ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೇ ಆ ವಿಡಿಯೋ ಇಟ್ಟುಕೊಂಡು ಹೆದರಿಸಿ ಒಂದು ವರ್ಷದವರೆಗೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

    ಈಗ ಸಂತ್ರಸ್ತೆ ಗರ್ಭಿಣಿಯಾಗಿದ್ದು, ಆರೋಪಿ ಆಕೆಯನ್ನು ಮದುವೆಯಾಗಲು ಕೇಳಿದಾಗ ಆತ ನಿರಾಕರಿಸಿದ್ದಾನೆ. ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರ ವಿರುದ್ಧ 367 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಸದ್ಯಕ್ಕೆ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಕರಣದ ಬೆಳಕಿಗೆ ಬಂದ ತಕ್ಷಣ ಆರೋಪಿ ಹಾಗೂ ಅವರ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ ಎಂದು ರಾಂಪುರ್ ಎಎಸ್‍ಪಿ ಸುಧಾ ಸಿಂಗ್ ತಿಳಿಸಿದ್ದಾರೆ.

  • 2018ರ ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಸಾಕ್ಷಿ ಮಲಿಕ್ ಆಯ್ಕೆ

    2018ರ ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಸಾಕ್ಷಿ ಮಲಿಕ್ ಆಯ್ಕೆ

    ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದ ಕುಸ್ತಿಪಟು ಸಾಕ್ಷಿ ಮಲಿಕ್ ಸೇರಿದಂತೆ ಐವರು ಮಹಿಳಾ ಕುಸ್ತಿಪಟುಗಳು 2018ರ ಕಾಮನ್‍ವೆಲ್ತ್ ಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

    ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ 2018ರಲ್ಲಿ ನಡೆಯಲಿರೋ ಕಾಮನ್‍ವೆಲ್ತ್ ಕೂಟದಲ್ಲಿ ಭಾಗವಹಿಸುವ ಅರ್ಹತೆ ಪಡೆಯಲು ಶನಿವಾರ ಲಕ್ನೋ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

    62 ಕೆ.ಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್ ಆರ್ಹತೆ ಪಡೆಯುವುದರೊಂದಿಗೆ, ವಿನಿಶ್ ಫೊಗತ್ (50ಕೆ.ಜಿ), ಬಬಿತಾ ಕುಮಾರಿ (54ಕೆ.ಜಿ), ಪೂಜಾ ಧಂಡಾ(57ಕೆ.ಜಿ), ದಿವ್ಯ ಕರಣ್ (68 ಕೆ.ಜಿ) ಮತ್ತು ಕಿರಣ್ (76ಕೆ.ಜಿ) ವಿಭಾಗಗಳಲ್ಲಿ ಸ್ಪರ್ಧಿಸುವ ಅವಕಾಶ ಪಡೆದರು.

    ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತಿ ಕೇಂದ್ರದಲ್ಲಿ ಒಟ್ಟು 6 ವಿಭಾಗಗಳಲ್ಲಿ ಆಯ್ಕೆ ಪ್ರಕ್ರಿಯೇ ನಡೆಯಿತು. ಇದೇ ಸಂದರ್ಭದಲ್ಲಿ ಮುಂದಿನ ವರ್ಷ ಕಿರ್ಗಿಸ್ತಾನದಲ್ಲಿ ನಡೆಯುವ ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‍ಷಿಪ್‍ನಲ್ಲಿ ಸ್ಪರ್ಧಿಸಲಿರುವ ಭಾರತ 6 ಫ್ರೀಸ್ಟೈಲ್ ಕುಸ್ತಿಪಟುಗಳು ಆಯ್ಕೆಯಾಗಿದ್ದಾರೆ.

  • ಮದ್ರಸಾದಲ್ಲಿ 51 ಹುಡುಗಿಯರನ್ನು ಒತ್ತೆಯಿರಿಸಿಕೊಂಡು ಲೈಂಗಿಕ ಕಿರುಕುಳ- ಪೊಲೀಸರಿಂದ ರಕ್ಷಣೆ

    ಮದ್ರಸಾದಲ್ಲಿ 51 ಹುಡುಗಿಯರನ್ನು ಒತ್ತೆಯಿರಿಸಿಕೊಂಡು ಲೈಂಗಿಕ ಕಿರುಕುಳ- ಪೊಲೀಸರಿಂದ ರಕ್ಷಣೆ

    ಲಕ್ನೋ: ಮದ್ರಸಾದ ಮ್ಯಾನೇಜರ್‍ವೊಬ್ಬ 51 ಹುಡುಗಿಯರನ್ನು ಒತ್ತೆಯಾಗಿರಿಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಆಘಾತಕಾರಿ ಘಟನೆ ಲಕ್ನೋದ ಶಹದತ್‍ಗಂಜ್‍ನಲ್ಲಿ ನಡೆದಿದೆ. ಶುಕ್ರವಾರದಂದು ಪೊಲೀಸರು ಹುಡುಗಿಯರನ್ನು ರಕ್ಷಣೆ ಮಾಡಿದ್ದು, ಮ್ಯಾನೇಜರ್ ನನ್ನು ಬಂಧಿಸಿದ್ದಾರೆ.

    ಮದ್ರಸಾದಲ್ಲಿ ಸುಮಾರು 125 ಹುಡುಗಿಯರು ವ್ಯಾಸಂಗ ಮಾಡುತ್ತಿದ್ದರು. ಕೆಲವು ಹುಡುಗಿಯರು ಮ್ಯಾನೇಜರ್ ತಮಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ನೋ ಪೊಲೀಸರ ಜಂಟಿ ತಂಡ ದಾಳಿ ಮಾಡಿದ ವೇಳೆ ಮದ್ರಸಾದೊಳಗೆ 51 ಹುಡುಗಿಯರನ್ನು ಒತ್ತೆಯಾಗಿರಿಸಿಕೊಳ್ಳಲಾಗಿತ್ತು. ಎಲ್ಲಾ ಹುಡುಗಿಯರನ್ನ ರಕ್ಷಣೆ ಮಾಡಲಾಗಿದೆ.

    ಸಂತ್ರಸ್ತ ಹುಡುಗಿಯರು ತಮ್ಮ ಪರಿಸ್ಥಿಯ ಬಗ್ಗೆ ಕಾಗದದಲ್ಲಿ ಬರೆದು ನೆರೆಹೊರೆಯ ಮನೆಗೆ ಪೇಪರ್ ಪೀಸ್‍ಗಳನ್ನ ಬಿಸಾಕಿದ್ದಾರೆ. ನಂತರ ನೆರೆಹೊರೆಯವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಿಕೊಂಡ ಬಳಿಕ ಪ್ರಕರಣವನ್ನ ಮಕ್ಕಳ ಕಲ್ಯಾಣ ಸಮಿತಿಗೆ ವರದಿ ಮಾಡಿದ್ದಾರೆ.

    ದೂರು ಬಂದ ಕೂಡಲೇ ನಾವು ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ದಾಳಿ ಮಾಡಲು ನಮ್ಮ ತಂಡ ಮದ್ರಸಾಗೆ ಹೋದಾಗ 51 ಹುಡುಗಿಯರನ್ನ ಒತ್ತೆಯಾಗಿರಿಸಿಕೊಳ್ಳಲಾಗಿತ್ತು. ಆರೋಪಿಯನ್ನ ಬಂಧಿಸಿದ್ದು, ತನಿಖೆ ಮಾಡುತ್ತಿದ್ದೇವೆ. ಆತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಜೊತೆಗೆ ಅವರನ್ನ ಹೊಡೆಯುತ್ತಿದ್ದ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.

    ಮದ್ರಸಾದ ಮ್ಯಾನೇಜರ್ ಹುಡುಗಿಯರನ್ನು ಹೊಡೆದು ಬಲವಂತವಾಗಿ ಡ್ಯಾನ್ಸ್ ಮಾಡುವಂತೆ ಹೇಳುತ್ತಿದ್ದ ಎಂದು ಸಂತ್ರಸ್ತರ ಕುಟುಂಬದವರು ಹೇಳಿದ್ದಾರೆ.

    ಕೆಲವು ಹುಡುಗಿಯರನ್ನ ಒತ್ತೆಯಾಗಿರಿಸಿಕೊಂಡಿರುವ ಬಗ್ಗೆ ನಮಗೆ ದೂರು ಬಂದಿತ್ತು. ವಿದ್ಯಾರ್ಥಿಗಳಿಂದ ಕೂಡ ವಿವಿಧ ದೂರುಗಳು ಬಂದಿದ್ದವು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಜಂಟಿ ತಂಡದೊಂದಿಗೆ ಇಲ್ಲಿಗೆ ದಾಳಿ ಮಾಡಲು ಬಂದೆವು. ತನಿಖೆ ನಂತರ ದೂರುಗಳು ಸರಿ ಎಂಬುದು ಗೊತ್ತಾಯಿತು. ಹೀಗಾಗಿ ಎಫ್‍ಐಆರ್ ದಾಖಲಿಸಿದ್ದೇವೆ. ಆರೋಪಿಯನ್ನ ಬಂಧಿಸಲಾಗಿದೆ ಎಂದು ಪಶ್ಚಿಮ ಉತ್ತರ ಪ್ರದೇಶದ ಎಸ್‍ಪಿ ವಿಕಾಶ್ ತಿರುಪತಿ ಹೇಳಿದರು.

  • ಕಾಳಿ ಅವತಾರವನ್ನ ಅನುಕರಿಸಲು ಹೋಗಿ ಉಸಿರುಗಟ್ಟಿ ಬಾಲಕ ಸಾವು

    ಕಾಳಿ ಅವತಾರವನ್ನ ಅನುಕರಿಸಲು ಹೋಗಿ ಉಸಿರುಗಟ್ಟಿ ಬಾಲಕ ಸಾವು

    ಲಕ್ನೋ: 14 ವರ್ಷದ ಬಾಲಕನೊಬ್ಬ ಕಾಳಿ ಮಾತೆಯ ಅವತಾರವನ್ನು ಅನುಕರಿಸಲು ಹೋಗಿ ನೇಣು ಬಿಗಿದುಕೊಂಡು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶ ರಾಜಧಾನಿಯಾದ ಲಕ್ನೋದಲ್ಲಿ ನಡೆದಿದೆ.

    ಚಿತ್ರರಂಜನ್ ಮೃತ ದುರ್ದೈವಿ. ಈತ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಮಂಗಳವಾರ ರಾತ್ರಿ ತನ್ನ 9 ವರ್ಷದ ತಂಗಿ ಗುಂಜಾನ್ ಮತ್ತು ನೆರೆಹೊರೆಯವರ ಜೊತೆ ಆಟವಾಡುತ್ತಿದ್ದ. ಈ ಸಂದರ್ಭದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುವ `ಮಹಾ ಕಾಳಿ’ ಧಾರಾವಾಹಿಯನ್ನ ನೋಡಿ ನಾನು ಕಾಳಿ ಅವತಾರ ತೋರಿಸುತ್ತೇನೆ ಎಂದು ಹೇಳಿದ್ದಾನೆ.

    ಅದೇ ರೀತಿ ಚಿತ್ರರಂಜನ್ ಒಂದು ದುಪ್ಪಟ್ಟ ತೆಗೆದುಕೊಂಡು ಬಾಗಿಲ ಬಳಿ ಹಾಕಿ ಕುತ್ತಿಗೆ ಸುತ್ತಾ ಬಿಗಿಯಾಗಿ ಸುತ್ತಿಕೊಂಡಿದ್ದಾನೆ. ಆದರೆ ದುರದೃಷ್ಟವಶಾತ್ ಆತ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ತಕ್ಷಣ ಮಕ್ಕಳು ಭಯದಿಂದ ಕೂಗಲು ಆರಂಭಿಸಿದ್ದಾರೆ. ಅಲ್ಲೇ ಸಮೀಪದಲ್ಲಿದ್ದ ಪೋಷಕರು ಓಡಿ ಬಂದು ಮಗನನ್ನು ಕೂಡಲೇ ಕೆಳಗಿಳಿಸಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದ.

    ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವಿಚಾರಣೆ ಮಾಡಿದ್ದಾರೆ. ಆಗ ಮಕ್ಕಳು ಮಹಾಕಾಳಿ ಧಾರಾವಾಹಿಯಲ್ಲಿ ಬರುವ ಕಾಳಿ ಮಾತೆಯನ್ನು ನೋಡಿ ಕಾಳಿಯ ರೀತಿ ನಾನು ನಾಲಿಗೆಯನ್ನು ಹೊರ ಬರಿಸಿ ತೋರಿಸುತ್ತೇನೆ ಅಂತಾ ಹೇಳಿದ್ದ ಎಂದು ತಿಳಿಸಿದ್ದಾರೆ.

    ಈ ಹಿಂದೆಯೂ ಧಾರಾವಾಹಿಯನ್ನು ನೋಡಿ ಬಾಲಕ ಕೆಲವು ಬಾರಿ ಇದೇ ರೀತಿ ಮಾಡಲು ಹೋಗಿದ್ದ. ಆದರೆ ಈತನ ತಾಯಿ ಆಗ ಬೈದು ಈ ರೀತಿ ಮಾಡಬಾರದು. ದೇವಿಗೆ ಕೋಪ ಬರುತ್ತದೆ ಎಂದು ಹೇಳಿದ್ದರು. ಆದರೆ ತಾಯಿ ಮನೆ ಕೆಲಸ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಈ ಸಂದರ್ಭದಲ್ಲಿ ಎರಡನೇ ಬಾರಿ ಕಾಳಿಯ ಅವತಾರವನ್ನು ಅನುಕರಿಸಲು ಪ್ರಯತ್ನಿಸಿದ್ದಾನೆ. ಆದರೆ ದುರದೃಷ್ಟವಶಾತ್ ಪ್ರಾಣವನ್ನೇ ಕಳೆದುಕೊಂಡಿದ್ದಾನೆ ಎಂದು ಕುಟುಂಬದವರು ಹೇಳಿದ್ದಾರೆ.

    ಸದ್ಯಕ್ಕೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನು ಓದಿ:  ಶಾಕಿಂಗ್.. ಸೀರಿಯಲ್ ಸೀನ್ ನೋಡಿ ಬೆಂಕಿ ಹಚ್ಚಿಕೊಂಡು ಬಾಲಕಿ ಸಾವು!

  • ನನ್ನ ಮಗನನ್ನ ನೋಡಿದ್ರಾ..?- ನಾಪತ್ತೆಯಾಗಿರೋ ಮಗನಿಗಾಗಿ ಹುಡುಕುತ್ತಾ 5 ತಿಂಗಳಿಂದ 1500 ಕಿ.ಮೀ ಸೈಕಲ್ ಓಡಿಸಿರೋ ತಂದೆ

    ನನ್ನ ಮಗನನ್ನ ನೋಡಿದ್ರಾ..?- ನಾಪತ್ತೆಯಾಗಿರೋ ಮಗನಿಗಾಗಿ ಹುಡುಕುತ್ತಾ 5 ತಿಂಗಳಿಂದ 1500 ಕಿ.ಮೀ ಸೈಕಲ್ ಓಡಿಸಿರೋ ತಂದೆ

    ಲಕ್ನೋ: ನಾಪತ್ತೆಯಾಗಿರುವ ಮಗನನ್ನು ಹುಡುಕುತ್ತಾ ತಂದೆಯೊಬ್ಬರು 5 ತಿಂಗಳಿಂದ ಸುಮಾರು 1500 ಕಿಮೀ ದೂರು ಸೈಕಲ್ ತುಳಿದಿರೋ ಮನಕಲಕುವ ಘಟನೆಯಯೊಂದು ವರದಿಯಾಗಿದೆ.

    ಮೂಲತಃ ಉತ್ತರ ಪ್ರದೇಶದ ಹಾತ್ರಾಸ್ ಜಿಲ್ಲೆಯ ನಿವಾಸಿಯಾಗಿರುವ 48 ವರ್ಷದ ಸತೀಶ್ ಚಂದಾ ಒಬ್ಬ ರೈತರಾಗಿದ್ದು, ಮಗನ ಹುಡುಕಾಟದಲ್ಲಿದ್ದಾರೆ. 6 ತಿಂಗಳ ಹಿಂದೆ ಇವರ 11 ವರ್ಷದ ಮಾನಸಿಕ ಅಸ್ವಸ್ಥ ಮಗ ನಾಪತ್ತೆಯಾಗಿದ್ದಾನೆ. ಅಂದಿನಿಂದಲು ಪೊಲೀಸರ ಸಹಾಯವನ್ನು ತೆಗೆದುಕೊಳ್ಳದೆ ಸೈಕಲ್ ತುಳಿಯುತ್ತ ಊರೂರು ಅಲೆಯುತ್ತಾ ಮಗನಿಗಾಗಿ ಹುಡುಕುತ್ತಿದ್ದಾರೆ.

    ಶಾಲೆಗೆ ಹೋದವನು ವಾಪಸ್ ಬರಲಿಲ್ಲ: ಚಂದಾ ಅವರು ಈಗಾಗಲೇ ದೆಹಲಿ ಮತ್ತು ಹರಿಯಾಣ ದಲ್ಲಿ ಹುಡುಕಾಡಿ ಈಗ ಆಗ್ರಾ ಸಮೀಪದ ಎಟ್ಮಾದ್ಪುರ ತಲುಪಿದ್ದಾರೆ. ನಾನು ಹತ್ರಾಸ್ ಜಿಲ್ಲೆಯ ದ್ವಾರಿಕಾಪುರ್ ಗ್ರಾಮದವನು, ಜೂನ್ 24 ರಂದು ನನ್ನ ಮಗ ಗೋದ್ನಾ ಶಾಲೆಗೆಂದು ಮನೆಯಿಂದ ಹೋಗಿ ಮತ್ತೆ ಸಂಜೆ ಮನೆಗೆ ವಾಪಸ್ ಬರಲಿಲ್ಲ. ಶಾಲೆಯಲ್ಲಿ ಸ್ನೇಹಿತರ ಬಳಿ ವಿಚಾರಿಸಿದಾಗ ಕೆಲವರು ಸಸ್ನಿ ರೈಲ್ವೇ ನಿಲ್ದಾಣದ ಬಳಿ ನೋಡಿದೆವು ಎಂದು ಹೇಳಿದರು. ಅಲ್ಲಿಗೂ ಹೋಗಿ ಹುಡುಕಾಡಿದೆವು. ಆದರೆ ಅಲ್ಲೂ ಸಿಗಲಿಲ್ಲ ಎಂದರು.

    ಕೊನೆಗೆ ನಾಲ್ಕು ದಿನ ಕಾದು ಜೂನ್ 28 ರಂದು ಪೊಲೀಸರಿಗೆ ದೂರು ನೀಡಿದೆ. ಆದರೆ ಅವರು ದೂರು ದಾಖಲಿಸಲು ನಿರಾಕರಿಸಿದರು. ನಾನು ಮತ್ತೆ ಮತ್ತೆ ಮನವಿ ಮಾಡಿದಾಗ ದೂರಿನ ಪ್ರತಿ ಮೇಲೆ ಸ್ಟ್ಯಾಂಪ್ ಒತ್ತಿ, ಸರಿ ಹೋಗು ಎಂದರು. ಬಳಿಕ ನಾನೇ ಸೈಕಲ್ ತೆಗೆದುಕೊಂಡು ಮಗನಿಗಾಗಿ ಹುಡುಕಾಟ ಆರಂಭಿಸಿದೆ. ನನ್ನಲ್ಲಿ ಹಣವಿಲ್ಲ, ಅಧಿಕಾರ ಇಲ್ಲ, ನನಗೆ ಯಾರು ಸಹಾಯ ಮಾಡುತ್ತಾರೆ? ಎಂದು ಸತೀಶ್ ಚಂದ್ ಅಲವತ್ತುಕೊಂಡಿದ್ದಾರೆ.

    ನನ್ನ ಮಗನನ್ನು ನೋಡಿದ್ರಾ?: ಇಲ್ಲಿವರೆಗೂ ದೆಹಲಿ, ಕಾನ್ಪುರ, ರೆವತಿ, ಹರಿಯಾಣ ಸೇರಿದಂತೆ ಸುಮಾರು 1,500 ಕಿ.ಮೀ ದೂರವನ್ನು ಸೈಕಲ್ ಮೂಲಕ ಕ್ರಮಿಸಿದ್ದಾರೆ. 100 ಗ್ರಾಮಗಳಿಗೆ ತಲುಪಿ ಸಾವಿರಾರು ಜನರಿಗೆ ಮಗನ ಫೋಟೋ ತೋರಿಸಿ, ನಮ್ಮ ಹುಡುಗನನ್ನ ನೋಡಿದ್ರಾ? ಎಂದು ಕೇಳುತ್ತಾ ಹುಡುಕುತ್ತಿದ್ದಾರೆ. ಪ್ರಸ್ತುತ ಎತ್‍ಮದ್‍ಪುರದ ಬ್ರಹ್ಮನ್ ಗ್ರಾಮದಲ್ಲಿ ಇದ್ದಾರೆ. ಇವರ ಬಗ್ಗೆ ತಿಳಿದ ಆಗ್ರಾದ ಮಕ್ಕಳ ಹಕ್ಕುಗಳ ಕಾರ್ಯಕರ್ತ ನರೇಶ್ ಪರಸ್, ಉತ್ತರಪ್ರದೇಶ ಪೊಲೀಸರಿಗೆ ಟ್ವೀಟ್ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪೊಲೀಸರಷ್ಟೇ ಅಲ್ಲದೆ ಸಾರ್ವಜನಿಕರ ಕುಂದು ಕೊರತೆ ಆಲಿಸುವ ಮುಖ್ಯಮಂತ್ರಿಗಳ ಜನ್‍ಸುನ್ವಾಯಿ ಪೋರ್ಟಲ್‍ಗೂ ನರೇಶ್ ಪರಸ್ ಪೋಸ್ಟ್ ಮಾಡಿದ್ದಾರೆ.

    ಇಬ್ಬರು ಮಕ್ಕಳನ್ನ ಕಳೆದುಕೊಂಡಿದ್ದ ಪೋಷಕರು: ಸತೀಶ್ ಚಂದ್ ಪತ್ನಿ ಅರ್ಚನಾ ಕೂಡ ಮಗ ವಾಪಸ್ ಬರುತ್ತಾನೆಂಬ ಭರವಸೆಯಲ್ಲಿದ್ದಾರೆ. ಇವರ ಹಿರಿಯ ಮಗಳು ಸರಿತಾ 2005ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದು, ನಂತರ 2011ರಲ್ಲಿ 9 ವರ್ಷದ ಮಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಈಗ ಮತ್ತೋರ್ವ ಮಗನೂ ಕಾಣೆಯಾಗಿದ್ದು, ಪೋಷಕರಿಗೆ ದಿಕ್ಕು ತೋಚದಂತಾಗಿದೆ.

    ಇವರು ಸುತ್ತಾಡಿದ ಜಿಲ್ಲೆಗಳಲ್ಲಿ ವ್ಯಾಪಾರಿಗಳು, ಅಂಗಡಿ ಮಾಲೀಕರು, ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣದ ಹಲವರ ಫೋನ್ ನಂಬರ್ ತೆಗೆದುಕೊಂಡಿದ್ದಾರೆ. ನನ್ನ ಮಗ ಒಂದಲ್ಲಾ ಒಂದು ದಿನ ಸಿಕ್ಕರೆ ಅವರು ನಮಗೆ ವಿಷಯ ತಿಳಿಸುತ್ತಾರೆ ಅಂತ ನಂಬಿದ್ದಾರೆ.

  • ರಾಹುಲ್ ಜಯಗಳಿಸಿರೋ ಅಮೇಥಿ ಕಾಂಗ್ರೆಸ್ಸಿನ ಭದ್ರಕೋಟೆ ಯಾಕೆ?

    ರಾಹುಲ್ ಜಯಗಳಿಸಿರೋ ಅಮೇಥಿ ಕಾಂಗ್ರೆಸ್ಸಿನ ಭದ್ರಕೋಟೆ ಯಾಕೆ?

    ಲಕ್ನೋ: ಗುಜರಾತ್ ವಿಧಾನಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಪರಿಗಣಿತವಾದ ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿದೆ. ಆಡಳಿತರೂಢ ಬಿಜೆಪಿ ಎದುರು ಕಾಂಗ್ರೆಸ್ ಧೂಳೀಪಟವಾಗಿದೆ.

    ಕಾಂಗ್ರೆಸ್ ಮುಕ್ತ ಭಾರತಕ್ಕೆ ಹೊರಟಿರುವ ಬಿಜೆಪಿ, ಇದೀಗ ಕಾಂಗ್ರೆಸ್ಸಿನ ಭದ್ರಕೋಟೆ ಅಮೇಥಿಗೆ ಲಗ್ಗೆ ಇಟ್ಟಿದೆ. ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿ ನಗರ ಪಂಚಾಯ್ತಿಯ 16 ಕ್ಷೇತ್ರಗಳ ಪೈಕಿ, 14ರಲ್ಲಿ ಬಿಜೆಪಿ ಜಯ ಸಾಧಿಸಿ, ವಿಜಯೋತ್ಸವ ಆಚರಿಸಿದೆ.

    ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಮೇಥಿ ಯಾಗ ವಿಫಲವಾಗಿದ್ದು, ಬಿಜೆಪಿ ವಶವಾಗಿರೋದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಘಾತ ಮೂಡಿಸಿದೆ. ಅಮೇಥಿಯಲ್ಲದೆ, ಕಾಂಗ್ರೆಸ್ ಅಧ್ಯಕ್ಷೆ ಪ್ರತಿನಿಧಿಸುವ ರಾಯ್ ಬರೇಲಿ ಕ್ಷೇತ್ರದಲ್ಲೂ ಕಮಲ ಅರಳಿದೆ.

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಪ್ರತಿನಿಧಿಸುವ ಗೋರಖ್‍ಪುರದಲ್ಲಿಯೂ ಕೇಸರಿ ಪತಾಕೆ ಹಾರಿದೆ. ಮುಖ್ಯಮಂತ್ರಿಯಾದ ಮೊದಲ ವರ್ಷದಲ್ಲೇ ಯೋಗಿ ಆದಿತ್ಯಾನಾಥ್ ಗೆದ್ದಿದ್ದಾರೆ. ಬಿಜೆಪಿ ಮೊದಲ ಸ್ಥಾನದಲ್ಲಿದ್ರೆ ಬಿಎಸ್‍ಪಿ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಎಸ್ಪಿ ಇದೆ.

    ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸಿಎಂ ಯೋಗಿ ಆದಿತ್ಯನಾಥ್, ಇದು ಪ್ರಧಾನಿ ಮೋದಿ ಅಭಿವೃದ್ಧಿ ಕೆಲಸಗಳಿಗೆ ಸಿಕ್ಕ ಜಯ ಎಂದಿದ್ದಾರೆ. ಈ ಫಲಿತಾಂಶ ನೋಡಿದ್ರೆ ಗುಜರಾತ್ ಫಲಿತಾಂಶ ಊಹಿಸಬಹುದು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಕ್ಷೇತ್ರಗಳನ್ನ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

    ಅಮೇಥಿ ಭದ್ರಕೋಟೆ ಯಾಕೆ?ಅಮೇಥಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆಯೆಂದೇ ಪರಿಗಣಿಸಲಾಗಿದೆ. ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿಯಿಂದ ಹಿಡಿದು ಈಗಿನ ತಲೆಮಾರಿನ ರಾಹುಲ್ ಗಾಂಧಿವರೆಗೆ ರಾಜಕೀಯ ಪುರ್ನಜನ್ಮ ನೀಡಿದ ಕ್ಷೇತ್ರವೇ ಅಮೇಥಿ. ಜನತಾ ಪಾರ್ಟಿ ಹಾಗೂ ಬಿಜೆಪಿ ಒಂದೊಂದು ಬಾರಿ ಗೆದ್ದಿದ್ದು ಬಿಟ್ಟರೆ, ಕಾಂಗ್ರೆಸ್ ಹಿಡಿತದಲ್ಲೇ ಇರೋ ಲೋಕಸಭಾ ಕ್ಷೇತ್ರವೇ ಅಮೇಥಿ. (ಇದನ್ನೂ ಓದಿ:ಕಾಂಗ್ರೆಸ್‍ಗೆ ಮತ್ತೆ ಮತ್ತೆ ಸೋಲು: ಅಮೇಥಿಯಲ್ಲಿ ರಾಹುಲ್‍ಗೆ ಭಾರೀ ಮುಖಭಂಗ)

     

     

  • ಲವ್ವರ್ ಜೊತೆ ಓಡಿ ಹೋಗಿದ್ದಕ್ಕೆ ಅಪ್ರಾಪ್ತೆಯ ಮೇಲೆ ತಂದೆ, ಅಣ್ಣ, ಕುಟುಂಬಸ್ಥರಿಂದ ಗ್ಯಾಂಗ್‍ರೇಪ್!

    ಲವ್ವರ್ ಜೊತೆ ಓಡಿ ಹೋಗಿದ್ದಕ್ಕೆ ಅಪ್ರಾಪ್ತೆಯ ಮೇಲೆ ತಂದೆ, ಅಣ್ಣ, ಕುಟುಂಬಸ್ಥರಿಂದ ಗ್ಯಾಂಗ್‍ರೇಪ್!

    ಲಕ್ನೋ: ಪ್ರೀತಿಸಿದ ಹುಡುಗನ ಜೊತೆ ಮನೆ ಬಿಟ್ಟು ಓಡಿಹೋಗಿದ್ದಕ್ಕೆ 17 ವರ್ಷದ ಹುಡುಗಿಯ ಮೇಲೆ ಕುಟುಂಬಸ್ಥರೇ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಮುಜಫರ್ ನಗರದ ದಂಧೇಡಾ ಗ್ರಾಮದಲ್ಲಿ ನಡೆದಿದೆ.

    ನಾನು ಪ್ರಿಯಕರನ ಜೊತೆ ಓಡಿ ಹೋಗಿದ್ದಕ್ಕೆ ಕುಟುಂಬದವರೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ. ಈ ದೂರಿನ ಅನ್ವಯ ಆಕೆಯ ಅಪ್ಪ, ಅಣ್ಣ ಮತ್ತು ಇಬ್ಬರು ಚಿಕ್ಕಪ್ಪಂದಿರನ್ನು ಪೊಲೀಸರು ಬಂಧಿಸಿದ್ದಾರೆ.

     ಏನಿದು ಪ್ರಕರಣ?
    ಅದೇ ಗ್ರಾಮದ ಮೂರು ಮಕ್ಕಳ ತಂದೆಯಾಗಿರುವ, 32 ವರ್ಷದ ವ್ಯಕ್ತಿಯ ಜೊತೆ ಇದೇ ವರ್ಷದ ಜುಲೈ ಮತ್ತು ಅಕ್ಟೋಬರ್ ನಲ್ಲಿ ಎರಡು ಬಾರಿ ಯುವತಿ ಓಡಿ ಹೋಗಿದ್ದಳು. ಈ ವೇಳೆ ಪೋಷಕರು ತನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

    ಈ ದೂರಿನ ಆಧಾರದಲ್ಲಿ ಸಂತ್ರಸ್ತೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದರು. ಈ ಸಂದರ್ಭದಲ್ಲಿ ಸಂತ್ರಸ್ತೆ ನಾನೇ ಇಷ್ಟ ಪಟ್ಟು ಆತನ ಹಿಂದೆ ಓಡಿ ಹೋಗಿದ್ದೆ ಎಂದು ಹೇಳಿದ ಮೇಲೆ ಆತನನ್ನು ಬಿಟ್ಟು ಕಳುಹಿಸಿದ್ದರು.

    ಮನೆಯವರು ಎರಡನೇ ಬಾರಿ ಆರೋಪಿ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದಾಗ, ಆಕೆ ಅಲಹಾಬಾದ್ ಹೈಕೋರ್ಟ್‍ಗೆ ನವೆಂಬರ್ 2 ರಂದು ಅರ್ಜಿ ಸಲ್ಲಿಸಿ ನರ್ಸಿಂಗ್ ಹೋಮ್ ಒಂದರಲ್ಲಿ ತನ್ನ ಮನೆಯವರೇ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಬಲವಂತದಿಂದ ಗರ್ಭಪಾತ ಮಾಡಿಸಲು ಮುಂದಾಗಿದ್ದರು ಎಂದು ತಿಳಿಸಿದ್ದಳು.

    ಈಗ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376ಡಿ ಮತ್ತು 313 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಸಂತ್ರಸ್ತೆಯ ತಾಯಿ ಮತ್ತು ಅತ್ತಿಗೆ ಪ್ರತಿಕ್ರಿಯಿಸಿ, ತಮ್ಮ ಮನೆಯವರ ವಿರುದ್ಧ ಮಾಡಲಾಗಿರುವ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.

     

  • ಮುಂಬೈ ಸ್ಫೋಟದ ರೂವಾರಿ ಹಫೀಜ್ ಸಯೀದ್ ಬಿಡುಗಡೆ-ಉತ್ತರ ಪ್ರದೇಶದಲ್ಲಿ ಸಂಭ್ರಮಾಚರಣೆ

    ಮುಂಬೈ ಸ್ಫೋಟದ ರೂವಾರಿ ಹಫೀಜ್ ಸಯೀದ್ ಬಿಡುಗಡೆ-ಉತ್ತರ ಪ್ರದೇಶದಲ್ಲಿ ಸಂಭ್ರಮಾಚರಣೆ

    ಲಕ್ನೋ: ಮುಂಬೈ ಸ್ಫೋಟದ ರೂವಾರಿ ಹಾಗೂ ಲಷ್ಕರ್ ಎ ತೊಯಿಬಾ ಸಂಘಟನೆಯ ಸಂಸ್ಥಾಪಕ ಮುಖಂಡನಾದ ಹಫೀಜ್ ಸಯೀದ್ ಬಿಡುಗಡೆ ಭಾಗ್ಯ ಸಿಕ್ಕಿದ ಬೆನ್ನಲ್ಲೇ ಉತ್ತರ ಪ್ರದೇಶದ ಯುವಕರ ಗುಂಪೊಂದು ಸಯೀದ್ ಬಿಡುಗಡೆಯಾಗಿದ್ದಕ್ಕೆ ಸಂಭ್ರಮಾಚರಣೆ ನಡೆಸಿರುವ ಕುರಿತು ಮಾಧ್ಯಮವೊಂದು ವರದಿ ಮಾಡಿದೆ.

    ಉತ್ತರ ಪ್ರದೇಶದ ಲಖೀಂಪುರ್ ಬೇಗಂ ಬಗ್ ಕಾಲೋನಿ ಪ್ರದೇಶದಲ್ಲಿ ನೆಲೆಸಿರುವ ಸಮುದಾಯವೊಂದರ ಯುವಕರ ಗುಂಪು ಸಂಭ್ರಮಾಚರಣೆ ಮಾಡಿದೆ. ಈಗಾಗಲೇ ಈ ಸಮುದಾಯದ ಯುವಕರು ತಮ್ಮ ಮನೆಯನ್ನು ಹಸಿರು ಧ್ವಜಗಳ ಮೂಲಕ ಅಲಂಕಾರ ಮಾಡಿದ್ದು, ಸಂಭ್ರಮಾಚರಣೆ ವೇಳೆ “ಪಾಕಿಸ್ತಾನ್ ಜಿಂದಾಬಾದ್, ಹಫೀಜ್ ಜಿಂದಾಬಾದ್” ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಘಟನೆ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ವಿಷಯ ತಿಳಿದ ತಕ್ಷಣ ಪೊಲೀಸರು ಘಟನಾ ಪ್ರದೇಶ ದೌಡಾಯಿಸಿದ್ದಾರೆ.

    ಹಫೀಜ್ ಬಿಡುಗಡೆಯ ಸಂಭ್ರಮಾಚರಣೆ ಸುದ್ದಿ ತಿಳಿದ ನಂತರ ಮತ್ತೊಂದು ಸಮುದಾಯದ ಜನ ಸ್ಥಳದಲ್ಲಿ ಜಮಾವಣೆಯಾಗಲು ಪ್ರಾರಂಭಿಸಿದ್ದಾರೆ. ಆದರೆ ಘಟನಾ ಸ್ಥಳದಲ್ಲಿ ಶಾಂತಿ ಕಾಯ್ದಕೊಳ್ಳುವ ಉದ್ದೇಶದಿಂದ ಜಿಲ್ಲಾಧಿಕಾರಿ ಆಕಾಶ್ ದೀಪ್ ಪೊಲೀಸರಿಗೆ ಘಟನೆ ಕುರಿತು ತನಿಖೆ ನಡೆಸಲು ಆದೇಶ ನೀಡಿರುವುದಾಗಿ ತಿಳಿಸಿದ್ದಾರೆ.

    ಶುಕ್ರವಾರ ಬೆಳಗ್ಗೆ 20 ರಿಂದ 25 ಜನರ ಯುವರ ಗುಂಪು ಹಫೀಜ್ ಬಿಡುಗಡೆಯ ಕುರಿತು ಸಂಭ್ರಮಾಚರಣೆ ಮಾಡುತ್ತಿರುವ ಕುರಿತು ಕೋಟ್ವಾಲಿ ಪ್ರದೇಶದ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆದರೆ ಪೊಲೀಸರು ಈ ಕುರಿತು ನಿರ್ಲಕ್ಷ್ಯ ವಹಿಸಿದ್ದಾರೆ. ನಂತರ ಘಟನೆ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ಪಡೆದು ತನಿಖೆ ನಡೆಸಲು ಆದೇಶ ನೀಡಿದ ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕೊತ್ವಾಲಿ ಪೊಲೀಸ್ ಅಧಿಕಾರಿ ಪ್ರದೀಪ್ ಶುಕ್ಲಾ ಘಟನಾ ಸ್ಥಳದಲ್ಲಿನ ಹಸಿರು ಬಣ್ಣದ ಧ್ವಜಗಳನ್ನು ತೆರವುಗೊಳಿಸಿರುದಾಗಿ ಹಾಗೂ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

    ಸಂಭ್ರಮಾಚರಣೆ ನಡೆಸಿರುವ ಕುರಿತು ವಿಡಿಯೋ ದಲ್ಲಿ ಹಸಿರು ಧ್ವಜ ಹಾರಾಟ ನಡೆಸಿ, ಪಾಕ್ ಹಾಗೂ ಉಗ್ರ ಹಫೀಜ್ ಪರ ಘೋಷಣೆ ಮಾಡಿರುವ ದೃಶ್ಯಗಳು ಲಭಿಸಿದೆ ಎಂದು ಲಖೀಂಪುರ್ ಪ್ರದೇಶದ ಬಲಪಂಥೀಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

    ಘಟನೆ ಕುರಿತು ಹೇಳಿಕೆ ನೀಡಿರುವ ಲಖೀಂಪುರ್ ನಿವಾಸಿ ಅಶ್ಫಾಕ್ ಖಾದ್ರಿ, ನನಗೆ ದೇಶ ವಿರೋಧಿ ಘೋಷಣೆಗಳು ಕೂಗಿರುವ ಕುರಿತು ಮಾಹಿತಿ ಇಲ್ಲ. ಇಲ್ಲಿ ಡಿಸೆಂಬರ್ 02 ರಂದು ನಡೆಯುವ ಜುಲೋಸ್ ಎ ಮೊಹಮ್ಮದಿ ಮೆರವಣಿಗೆ ಕುರಿತ ಸಂಭ್ರಮಾಚರಣೆ ನಡೆಯುತ್ತಿತ್ತು. ಪಾಕಿಸ್ತಾನ್ ಹಾಗೂ ಹಫೀಜ್ ಸಯೀದ್ ಬಗ್ಗೆ ಇಲ್ಲಿ ಯಾರು ಘೋಷಣೆ ಕೂಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಜನವರಿಯಿಂದ ಗೃಹಬಂಧನದಲ್ಲಿದ್ದ ಸಯೀದ್ ಬಂಧನದ ಅವಧಿಯನ್ನು ಮತ್ತೆ 3 ತಿಂಗಳು ವಿಸ್ತರಿಸುವಂತೆ ಪಾಕಿಸ್ತಾನದ ಪಂಜಾಬ್ ಪ್ರಾಂತ ಸರ್ಕಾರದ ಅರ್ಜಿಯನ್ನು ಲಾಹೋರ್ ಹೈಕೋರ್ಟ್ ನ್ಯಾಯಾಧೀಶರುಗಳನ್ನೊಳಗೊಂಡ ನ್ಯಾಯಾಂಗ ವಿಮರ್ಶಾ ಮಂಡಳಿ ಬುಧವಾರ ತಳ್ಳಿಹಾಕಿತ್ತು. ಯಾವುದೇ ಪ್ರಕರಣದಲ್ಲಿ ಸಯೀದ್ ವಿಚಾರಣೆ ಬಾಕಿ ಇಲ್ಲದೇ ಹೋದಲ್ಲಿ ಆತನನ್ನು ಬಿಡುಗಡೆಗೊಳಿಸುವಂತೆ ಸರಕಾರ ಆದೇಶ ನೀಡಿದೆ ಎಂದು ಮಂಡಳಿ ಹೇಳಿತ್ತು.

    2008ರ ನವೆಂಬರ್ 26ರಂದು ದಕ್ಷಿಣ ಮುಂಬೈ 8 ಸ್ಥಳಗಳ ಮೇಲೆ 9 ಮಂದಿ ಉಗ್ರರು ದಾಳಿ ನಡೆಸಿ 166 ಮಂದಿಯನ್ನು ಹತ್ಯೆ ಮಾಡಿದ್ದರು. ಈ ಘಟನೆಗೆ 9 ವರ್ಷ ತುಂಬುತ್ತಿರುವಾಗ ಹಫೀಸ್ ಬಿಡುಗಡೆಯಾಗಿದ್ದಕ್ಕೆ ಹಲವು ಪ್ರಶ್ನೆ ಎದ್ದಿದ್ದು, ಮುಂಬೈ ದಾಳಿಯ ಸಂಭ್ರಮ ಆಚರಿಸಲು ಆತನಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.