Tag: lucknow

  • ಪ್ರತ್ಯೇಕ ಎರಡು ಕಡೆ ಐಟಿ ದಾಳಿ – 10 ಕೋಟಿ ನಗದು, 50ಕೆಜಿ ಚಿನ್ನ ವಶ

    ಪ್ರತ್ಯೇಕ ಎರಡು ಕಡೆ ಐಟಿ ದಾಳಿ – 10 ಕೋಟಿ ನಗದು, 50ಕೆಜಿ ಚಿನ್ನ ವಶ

    ಲಕ್ನೋ: ಆದಾಯ ತೆರಿಗೆ ಇಲಾಖೆ ನಗರದಲ್ಲಿ ಎರಡು ಕಡೆ ದಾಳಿ ಮಾಡಿದ್ದು, ಬರೋಬ್ಬರಿ 50 ಕೆಜಿ ಚಿನ್ನ ಮತ್ತು 10 ಕೋಟಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

    ಉತ್ತರಪ್ರದೇಶದ ಲಕ್ನೋದಲ್ಲಿ ಐಟಿ ದಾಳಿ ನಡೆದಿದೆ. ಕನ್ಹೈಯ್ ಲಾಲ್ ರಸ್ತೋಗಿ ಮತ್ತು ಸಂಜಯ್ ರಸ್ತೋಗಿ ಅವರ ಆಸ್ತಿ ಮತ್ತು ರಾಜ ಬಜಾರ್ ಮೇಲೆ ಐಟಿ ಅಧಿಕಾರಿಗಳು ಸತತ 36 ಗಂಟೆಗಳ ಕಾಲ ತನಿಖೆ ಮಾಡಿದ್ದಾರೆ. ಐಟಿ ದಾಳಿಗೆ ಒಳಗಾದ ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಚಿನ್ನದ ವ್ಯಾಪಾರಿಯಾಗಿದ್ದು, ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನದ ಬೆಲೆ ಸುಮಾರು 16 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲದೇ ರಸ್ತೋಗಿ ಕುಟುಂಬದವರು ಹೆಸರಿನಲ್ಲಿರುವ 98 ಕೋಟಿ ಆಸ್ತಿಯ ದಾಖಲೆಗಳನ್ನು ವಶಪಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

    ಐಟಿ ಇಲಾಖೆಗೆ ರಸ್ತೋಗಿ ಕುಟುಂಬ ಬಡ್ಡಿ ವ್ಯವಹಾರ ಮಾಡುತ್ತಿದ್ದಾರೆ ಎಂದು ಮಾಹಿತಿ ಲಭಿಸಿತ್ತು. ಮಾಹಿತಿ ಆಧಾರದ ಮೇರೆಗೆ ಲಕ್ನೋ ಮತ್ತು ಅಲಹಬಾದ್ ನ ಐಟಿ ಇಲಾಖೆ ಆಡಿಟ್ ರವಿ ಮಲ್ಹೋತ್ರ ಅವರ ನೇತೃತ್ವದಲ್ಲಿ ದಾಳಿ ಮಾಡಿದೆ.

    ಕನ್ಹೈಯಾ ಲಾಲ್ ರಸ್ತೋಗಿ ಮತ್ತು ಆತನ ಪುತ್ರನ ಮನೆಯಲ್ಲಿ 8.08 ಕೋಟಿ ನಗದು ಹಾಗೂ 50 ಕೆಜಿ ಚಿನ್ನದ ಬಿಸ್ಕೆಟ್ ಮತ್ತು 2 ಕೆಜಿ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಸಂಜಯ್ ರಸ್ತೋಗಿ ಮನೆಯಲ್ಲಿ 1.13 ಕೋಟಿ ಹಣ ಮತ್ತು 11.64 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

    ಕನ್ಹೈಯಾ ಲಾಲ್ ರಸ್ತೋಗಿ ಪತ್ನಿ ಅನಿತಾ ರಸ್ತೋಗಿ, ಮಕ್ಕಳಾದ ಉಮಾಂಗ್ ಮತ್ತು ತಾರಾಂಗ್ ರಸ್ತೋಗಿ ಹಾಗೂ ಇತರೆ ಸಂಬಂಧಿಕರನ್ನು ಒಳಗೊಂಡಂತೆ ಅನೇಕ ರಿಯಲ್ ಎಸ್ಟೆಟ್ ಕಂಪೆನಿಗಳು, ಫೈನಾನ್ಸ್ ಮತ್ತು ಚಿನ್ನದ ವ್ಯಾಪಾರ ಮಾಡುತ್ತಿದ್ದರು ಎಂದು ಐಟಿ ಇಲಾಖೆಯ ವಕ್ತಾರ ಜಯಂತ್ ವರ್ಮಾ ತಿಳಿಸಿದ್ದಾರೆ.

  • ತನ್ನ ವಿರುದ್ಧ ತಾನೇ ದೂರು ದಾಖಲಿಸಿಕೊಂಡ ಪೊಲೀಸ್ !

    ತನ್ನ ವಿರುದ್ಧ ತಾನೇ ದೂರು ದಾಖಲಿಸಿಕೊಂಡ ಪೊಲೀಸ್ !

    ಲಕ್ನೋ: ಉತ್ತರ ಪ್ರದೇಶದ ಮೀರತ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಮ್ಮ ಮತ್ತು ಕೆಲ ಠಾಣೆಯ ಪೊಲೀಸರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

    ಮೀರತ್ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಜೇಂದ್ರ ತ್ಯಾಗಿ ಈ ರೀತಿ ತಮ್ಮ ವಿರುದ್ಧ ತಾವೇ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇವರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಗೋ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಲು ವಿಫಲವಾಗಿದ್ದಕ್ಕೆ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಖಾರ್ಕೋಡ ಪೊಲೀಸ್ ಠಾಣೆ ಉಸ್ತುವಾರಿ ತೆಗೆದುಕೊಳ್ಳುವ ಮೊದಲು, ತಪ್ಪು ಕ್ರಮ ತೆಗೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಒಂದು ನಿಯಮವನ್ನು ರೂಪಿಸಿದ್ದರು. ಒಂದು ಅಪರಾಧದ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಅದನ್ನು ಕಾನ್ಸ್ ಸ್ಟೇಬಲ್ ಜವಾಬ್ದಾರಿ ಹೊಂದುತ್ತಾರೆ ಎಂಬ ಪರಿಕಲ್ಪನೆಯನ್ನು ಮಾಡಿದ್ದೆವು. ಅದೇ ರೀತಿ ಆ ಕಾನ್ಸ್ ಸ್ಟೇಬಲ್ ಸಂಬಂಧಪಟ್ಟ ಪ್ರದೇಶದಲ್ಲಿ ಯಾವುದೇ ಕಳ್ಳತನ ಅಥವಾ ಕೊಲೆ ಆದರೆ ಅದರ ಹೊಣೆಗಾರಿಕೆ ಆ ಕಾನ್ಸ್ ಸ್ಟೇಬಲ್ ಮೇಲಿರುತ್ತದೆ ಎಂದು ತ್ಯಾಗಿ ಹೇಳಿದ್ದಾರೆ.

    ಒಂದು ವೇಳೆ ಆ ಕಾನ್ಸ್ ಸ್ಟೇಬಲ್ ವಿರುದ್ಧ ಎರಡಕ್ಕಿಂತ ಅಧಿಕವಾಗಿ ನಿರ್ಲಕ್ಷ್ಯ ಕರ್ತವ್ಯ ದೂರು ದಾಖಲಾದರೆ ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈವರೆಗೆ ಒಟ್ಟು ಆರು ಪೋಲೀಸ್ ಕಾನ್ಸ್ ಸ್ಟೇಬಲ್ ವಿರುದ್ಧ ದೂರುಗಳನ್ನು ಸಲ್ಲಿಸಿದೆ. ಇನ್ನು 19 ಮಂದಿ ವಿರುದ್ಧ ಲಂಚ ತೆಗೆದುಕೊಳ್ಳುವ ಹಿಂಸಾಚಾರದಲ್ಲಿ ಮೊಕದ್ದಮೆ ಹೂಡಲಾಗಿದೆ ಅಂತ ವಿವರಿಸಿದ್ರು.

  • ಯುಪಿಯಲ್ಲಿ ಇಂದಿನಿಂದ ಪಾಲಿಥಿನ್, ಆಗಸ್ಟ್ 1ರಿಂದ ಪ್ಲಾಸ್ಟಿಕ್ ನಿಷೇಧ

    ಯುಪಿಯಲ್ಲಿ ಇಂದಿನಿಂದ ಪಾಲಿಥಿನ್, ಆಗಸ್ಟ್ 1ರಿಂದ ಪ್ಲಾಸ್ಟಿಕ್ ನಿಷೇಧ

    – ಕಾನೂನು ಉಲ್ಲಂಘಿಸಿದವ್ರಿಗೆ 1 ಲಕ್ಷದವರೆಗೆ ದಂಡ!

    ಲಕ್ನೋ: ನಗರಗಳ ದೈನಂದಿನ ಚಟುವಟಿಕೆಗಳಲ್ಲಿ ಹೊಸ ಬದಲಾವಣೆಯನ್ನು ಉತ್ತರ ಪ್ರದೇಶ ಸರ್ಕಾರ ತರಲಿದೆ. ಯೋಗಿ ಆದಿತ್ಯಾನಾಥ್ ಸರ್ಕಾರ ರಾಜ್ಯದಲ್ಲಿ ಪ್ಲಾಸ್ಟಿಕ್ ಹಾಗೂ ಪಾಲಿಥಿನ್ ಬ್ಯಾಗ್‍ಗಳ ಬಳಕೆ ಮೇಲೆ ನಿಷೇಧಾಜ್ಞೆಯನ್ನು ಇಂದಿನಿಂದ ಜಾರಿಗೆ ತರಲಿದೆ.

    ಮಹಾರಾಷ್ಟ್ರದ ಬಿಜೆಪಿ ಸರ್ಕಾರವೂ ಕೂಡ ಪ್ಲಾಸ್ಟಿಕ್ ನಿಷೇಧ ಕಾನೂನನ್ನು ಜಾರಿಗೆ ತರಲು ಯೋಜನೆ ನಡೆಸಿದೆ. ಈ ಕಾನೂನು ಇಂದಿನಿಂದ ಕಾರ್ಯರೂಪಕ್ಕೆ ಬರುವುದಾಗಿ ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಡಾ. ಅನೂಪ್ ಚಂದ್ರ ಪಾಂಡೆ ಸ್ಪಷ್ಟಪಡಿಸಿದ್ದಾರೆ.

    ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಪ್ಲಾಸ್ಟಿಕ್ ನಿಷೇಧ ಮಾಡುವ ಕುರಿತು ಮೊದಲೇ ರಾಜ್ಯದ ಜನರಿಗೆ ತಿಳಿಸಿ, ತಮ್ಮ ಸರ್ಕಾರಕ್ಕೆ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದರು. ಪರಿಸರವನ್ನು ಕಾಪಾಡಲು, ಪ್ಲಾಸ್ಟಿಕ್ ಮುಕ್ತ ರಾಜ್ಯವನ್ನಾಗಿಸಲು ಈ ದೊಡ್ಡ ನಿರ್ಧಾರವನ್ನು ಕೈಗೊಳ್ಳುತ್ತಿದ್ದೇವೆ ಎಂದು ಜುಲೈ 6ರಂದು ನಿಷೇಧಾಜ್ಞೆ ಕುರಿತು ಘೋಷಿಸುವ ಸಂದರ್ಭದಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಜುಲೈ 15 ರಿಂದ ಉತ್ತರ ಪ್ರದೇಶದಲ್ಲಿ ಪ್ಲಾಸ್ಟಿಕ್ ಬ್ಯಾನ್ : ಯೋಗಿ ಆದಿತ್ಯನಾಥ್

    ರಾಜ್ಯ ಸರ್ಕಾರವು ಪ್ಲಾಸ್ಟಿಕ್ ನಿಷೇಧಾಜ್ಞೆ ಕಾನೂನು ಬಾಹಿರವಾಗಿಸಲು ಶಾಸನವನ್ನು ರೂಪಿಸಲಿದೆ. ಈ ಕಾನೂನನ್ನು ಉಲ್ಲಂಘಿಸಿದವರ ಮೇಲೆ 10,000 ರೂ.ಗಳಿಂದ ಸುಮಾರು 1 ಲಕ್ಷ ರೂ.ಗಳಷ್ಟು ದಂಡವನ್ನು ವಿಧಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

    ಸರ್ಕಾರವು ನಿಷೇಧಾಜ್ಞೆಯನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲು ಯೋಚಿಸಿದೆ. ಇಂದಿನಿಂದ ಪಾಲಿಥಿನ್ ಚೀಲಗಳ ಬಳಕೆ ನಿಷೇಧಿಸಲಿದೆ. ನಂತರ ಆಗಸ್ಟ್ 1 ರಿಂದ ಪ್ಲಾಸ್ಟಿಕ್ ಹಾಗೂ ಥರ್ಮಾಕೋಲ್ ಕಪ್ಪುಗಳು, ಲೋಟ, ಪ್ಲೇಟ್ ಇತ್ಯಾದಿಗಳನ್ನು ನಿಷೇಧಿಸಲು ಮುಂದಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

  • ಕೇಸ್ ಫೈಟ್ ಮಾಡಲು ಹಣ ಇಲ್ಲ, ಕಿಡ್ನಿ ಮಾರಲು ಅನುಮತಿ ನೀಡಿ – ಮೋದಿಗೆ ಕೈದಿ ಪತ್ರ

    ಕೇಸ್ ಫೈಟ್ ಮಾಡಲು ಹಣ ಇಲ್ಲ, ಕಿಡ್ನಿ ಮಾರಲು ಅನುಮತಿ ನೀಡಿ – ಮೋದಿಗೆ ಕೈದಿ ಪತ್ರ

    ಲಖ್ನೌ: ಕೈದಿಯೋರ್ವ ತನ್ನ ಮೇಲಿರುವ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲು ಹಣದ ಅವಶ್ಯಕತೆ ಇದ್ದು, ತನ್ನ ಕಿಡ್ನಿ ಮಾರಲು ಅನುಮತಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾನೆ.

    ಲಸ್ಕರ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ರಾಜು (30) ಅಲಿಯಾಸ್ ಮದನ್ ಈ ಪತ್ರವನ್ನು ಬರೆದಿದ್ದಾನೆ. ಮಹಿಳೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಯತ್ನ ಕೇಸಿಗೆ ಸಂಬಂಧಪಟ್ಟಂತೆ 2014 ರಲ್ಲಿ ಜೈಲು ಸೇರಿದ್ದ ಈತ ಈಗಲೂ ನ್ಯಾಯಾಂಗ ಬಂಧನದಲ್ಲೇ ಇದ್ದಾನೆ.

    ಈ ಕೊಲೆಗೂ ತನಗೂ ಯಾವುದೇ ಸಂಬಂಧವಿಲ್ಲ, ಆದರೂ ನನ್ನನ್ನು ಕೇಸ್ ನಲ್ಲಿ ಜೈಲಿಗೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮೋದಿ ಅವರಿಗೆ ಪತ್ರದಲ್ಲಿ ದೂರು ನೀಡಿದ್ದಾನೆ.

    ಸದ್ಯ ನಾನು ಬಡವ ಹಾಗೂ ಅಸಹಾಯಕನಾಗಿದ್ದೇನೆ. ಈ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸಲು ನನ್ನ ಹತ್ತಿರ ಹಣ ಇಲ್ಲ. ಅದ್ದರಿಂದ ನನ್ನ ಕಿಡ್ನಿ ಮಾರಿ ಬಂದ ಹಣದಲ್ಲಿ ನ್ಯಾಯಕ್ಕಾಗಿ ಕಾನೂನು ರೀತಿಯಲ್ಲಿ ಹೋರಾಡಬೇಕು. ಅಲ್ಲದೇ ಯಾರಿಂದಲೂ ನನಗೆ ನೈತಿಕ ಸಹಾಯ ಇಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುಕ್ಕಿಂತ ನನ್ನ ಕಿಡ್ನಿ ಮಾರಿ ಬಂದ ಹಣದಲ್ಲಿ ಕಾನೂನು ಹೋರಾಟ ನಡೆಸುವುದೇ ಉಳಿದಿರುವ ದಾರಿ ಎಂಬುದಾಗಿ ಪತ್ರ ಬರೆದಿದ್ದಾನೆ.

    ರಾಜು ತನ್ನ ಕಿಡ್ನಿ ಮಾರಲು ಸಹಾಯ ಮಾಡುವಂತೆ ಜೈಲು ಅಧಿಕಾರಿಗಳನ್ನು ಕೇಳಿಕೊಂಡಿದ್ದಾನೆ. ಆದರೆ ಪತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ಜೈಲಿನ ಮುಖ್ಯ ಅಧಿಕಾರಿ, ನನಗೆ ರಾಜು ಪ್ರಧಾನಿಯವರಿಗೆ ಪತ್ರ ಬರೆದಿರುವ ವಿಷಯ ತಿಳಿದಿಲ್ಲ, ಅದಾಗಿಯೂ ಈ ಕುರಿತಂತೆ ಪರಿಶೀಲಿಸುವುದಾಗಿ ಹೇಳಿದ್ದಾರೆ. ಅಂದಹಾಗೆ ಕೈದಿ ರಾಜು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾನೆ.

    ಈ ಕುರಿತಂತೆ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ವಕೀಲರಾದ ಸುರಜ್ಪೂರ್ ಮಾತನಾಡಿ, ರಾಜು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆತನ ಪರವಾಗಿ ಉಚಿತವಾಗಿ ವಾದ ಮಂಡಿಸುವುದಾಗಿ ತಿಳಿಸಿದ್ದಾಗಿ ವರದಿಯಾಗಿದೆ.

  • ತಾಜ್ ಮಹಲ್ ಶಿವನ ಮಂದಿರವೇ ಆಗಿದ್ದರೆ 20 ಸಾವಿರ ಮುಸ್ಲಿಮರಿಂದ ಅದನ್ನು ಕೆಡವೋಣ – ಅಜಂ ಖಾನ್ ವ್ಯಂಗ್ಯ

    ತಾಜ್ ಮಹಲ್ ಶಿವನ ಮಂದಿರವೇ ಆಗಿದ್ದರೆ 20 ಸಾವಿರ ಮುಸ್ಲಿಮರಿಂದ ಅದನ್ನು ಕೆಡವೋಣ – ಅಜಂ ಖಾನ್ ವ್ಯಂಗ್ಯ

    ಲಕ್ನೋ: ವಿವಾದತ್ಮಾಕ ಹೇಳಿಕೆಗಳಿಂದ ಸುದ್ದಿಯಾಗುವ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಮತ್ತೊಮ್ಮೆ ವಿವಾದತ್ಮಾಕ ಹೇಳಿಕೆ ನೀಡಿದ್ದು, ತಾಜ್ ಮಹಲ್ ಶಿವನ ಮಂದಿರವಾಗಿದ್ದರೆ ಅದನ್ನು 20 ಸಾವಿರ ಮುಸ್ಲಿಮರಿಂದ ಕೆಡವೋಣ, ಗುಲಾಮಗಿರಿಯ ಗುರುತು ಇರಬಾರದು ಎಂದು ವ್ಯಂಗ್ಯವಾಡಿದ್ದಾರೆ.

    ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಾಜ್‍ಮಹಲ್ ಕಟ್ಟಡ ಕೆಡವಲು ಮುಂದಾಗಬೇಕು. ಬಳಿಕ ನಾನು ಹಾಗೂ ನನ್ನೊಂದಿಗೆ ಹಲವರು ಕೈ ಜೋಡಿಸಲಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ತಾಜ್ ಮಹಲ್ ಶಿವನ ಮಂದಿರವಾಗಿತ್ತು ಎಂಬ ಯೋಗಿ ಆದಿತ್ಯಾನಾಥ್ ವಾದಕ್ಕೆ ತಿರುಗೇಟು ನೀಡಿದ್ದಾರೆ.

    ಇದೇ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಅವರ ವಾದವನ್ನು ಒಪ್ಪುತ್ತೇನೆ ಎಂದು ಹೇಳಿರುವ ಅವರು, ಅದ್ದರಿಂದಲೇ ಅವರೇ ಮೊದಲು ಈ ಕಾರ್ಯ ಆರಂಭಿಸಬೇಕು. ಬಳಿಕ ನಮ್ಮ ಮುಸ್ಲಿಂ ಸಮುದಾಯದ 20 ಸಾವಿರ ಮಂದಿ ಈ ಕಾರ್ಯದಲ್ಲಿ ತೊಡಗುತ್ತಾರೆ ಎಂದಿದ್ದಾರೆ.

    ಸದ್ಯ ಅಜಂ ಖಾನ್ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಹೇಳಿಕೆ ಪರ ಹಾಗೂ ವಿರೋಧದ ಚರ್ಚೆಗಳು ಆರಂಭವಾಗಿದೆ. ಕೆಲ ದಿನಗಳ ಹಿಂದೆ ತಾಜ್‍ಮಹಲ್ ಗೆ ಭೇಟಿ ನೀಡಿದ್ದ ಕೆಲವರು ಶಿವ ಚಾಲಿಸಾ ಪಠಿಸಿದಕ್ಕೆ ಅರೆಸ್ಟ್ ಆಗಿದ್ದರು.

    ಅಜಂ ಖಾನ್ ಈ ರೀತಿಯ ಹೇಳಿಕೆ ನೀಡುವುದು ಇದೇ ಹೊಸದೆನಲ್ಲ. ಈ ಹಿಂದೆ ದೆಹಲಿ ಕೆಂಪುಕೋಟೆ, ರಾಷ್ಟ್ರಪತಿ ಭವನ, ಸಂಸತ್ ಭವನ ಗುಲಾಮಗಿರಿಯ ಸಂಕೇತವಾಗಿದ್ದು, ಇದನ್ನು ಕೆಡವಬೇಕು ಎಂದು ಹೇಳಿದ್ದರು.

  • ಕೇಳಿದ್ದು 30 ದಿನ, ಸಿಕ್ಕಿದ್ದು 45 ದಿನ- ಪೊಲೀಸ್ ಪೇದೆ ಬರೆದ ರಜೆ ಪತ್ರ ಫುಲ್ ವೈರಲ್

    ಕೇಳಿದ್ದು 30 ದಿನ, ಸಿಕ್ಕಿದ್ದು 45 ದಿನ- ಪೊಲೀಸ್ ಪೇದೆ ಬರೆದ ರಜೆ ಪತ್ರ ಫುಲ್ ವೈರಲ್

    ಲಕ್ನೋ: ಪೊಲೀಸರು ತಮ್ಮ ವೈಯಕ್ತಿಯ ಜೀವನದಿಂದ ದೂರವಿದ್ದು, ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಆದರೆ ಈಗ ಪೊಲೀಸ್ ಪೇದೆಯೊಬ್ಬರು ರಜೆ ಕೋರಿ ಅಧಿಕಾರಿಗಳಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಪೊಲೀಸ್ ಕಾನ್ಸ್ ಟೇಬಲ್ ಸೋಮ್‍ ಸಿಂಗ್ ಎಂಬವರು ರಜೆಗಾಗಿ ಬರೆದ ಪತ್ರ ವೈರಲ್ ಆಗಿದೆ. ಸೋಮ್‍ಸಿಂಗ್ ತಮ್ಮ ವೈಯಕ್ತಿಕ ಜೀವನದಿಂದ ದೂರು ಇದ್ದು ಮರಳಿ ಕುಟುಂಬಕ್ಕೆ ಹೋಗಬೇಕೆಂದು ನಿರ್ಧರಿಸಿದ್ದರು. ಆದ್ದರಿಂದ ಅವರು ಒಂದು ತಿಂಗಳ ರಜೆಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿದರು. ಆದರೆ ಅವರು ರಜೆಗಾಗಿ ಉಲ್ಲೇಖಿಸಿದ ಕಾರಣ ಅವರ ಅರ್ಜಿಯಲ್ಲಿ ಎಲ್ಲರ ಗಮನ ಸೆಳೆದಿದ್ದು, ಆ ಪತ್ರವೀಗ ವೈರಲ್ ಆಗಿದೆ.

    ಸೋಮ್ ಸಿಂಗ್ ಅವರು ಪತ್ರದಲ್ಲಿ `ಕುಟುಂಬ ವಿಸ್ತರಿಸಲು’ ಮತ್ತು ನನ್ನ ಕುಟುಂದವರ ಜೊತೆ ಕೆಲ ಕಾಲ ಸಮಯ ಕಳೆಯಬೇಕು ಆದ್ದರಿಂದ ನನಗೆ 30 ರಜೆ ಬೇಕು ಎಂದು ಉಲ್ಲೇಖಿಸಿದ್ದಾರೆ. ಸಿಂಗ್ ಅವರು ಜೂನ್ 23 ರಿಂದ ರಜೆ ತೆಗೆದುಕೊಳ್ಳಲು ಅನುಮತಿ ನೀಡಬೇಕೆಂದು ಕೋರಿದ್ದಾರೆ. ಇವರ ರಜೆ ಅರ್ಜಿಯನ್ನು ನೋಡಿದ ಅಧಿಕಾರಿಗಳು ಸಿಂಗ್ ಅವರಿಗೆ ಬೇರೆ ಕಾರಣ ಕೊಟ್ಟು ಮನವಿ ಮಾಡುವಂತೆ ಹೇಳಿದ್ದಾರೆ. ಆದರೆ ಸಿಂಗ್ ಇದನ್ನು ಒಪ್ಪದೇ ಅದೇ ಕಾರಣ ನೀಡಿದ್ದಾರೆ.

    ಅಧಿಕಾರಿಗಳು  ಸಿಂಗ್ ಅವರಿಗೆ ಜೂನ್ 23 ರಿಂದ 45 ದಿನಗಳ ರಜೆ ನೀಡಿದ್ದಾರೆ. ಅಂದರೆ ಸೋಮ್‍ ಸಿಂಗ್ 30 ದಿನ ರಜೆ ಕೇಳಿದರೆ ಅಧಿಕಾರಿಗಳು 10 ದಿನ ಅಧಿಕವಾಗಿ ಸೇರಿಸಿ ಒಟ್ಟು 45 ದಿನಗಳ ರಜೆಗೆ ಸಹಿ ಹಾಕಿದ್ದಾರೆ.

  • 15ರ ಹುಡುಗಿ ಮೇಲೆ ಎರಗಿದ 10 ಮಂದಿ ಕಾಮುಕರು

    15ರ ಹುಡುಗಿ ಮೇಲೆ ಎರಗಿದ 10 ಮಂದಿ ಕಾಮುಕರು

    ಲಕ್ನೋ: 15 ವರ್ಷದ ಹುಡುಗಿಯನ್ನ 10 ಮಂದಿ ಕಾಮುಕರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ನ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಚಚೇರಿ ಗ್ರಾಮದಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಐಪಿಸಿ ಸೆಕ್ಷನ್ 363 ಮತ್ತು 376 ರ ಅಡಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಇಬ್ಬರನ್ನು ನಿತೀಶ್(18) ಮತ್ತು ಆತನ ಸಹೋದರ ರೋಹಿತ್ ಎಂದು ಗುರುತಿಸಲಾಗಿದೆ. ಜೊತೆಗೆ ಈ ಕುರಿತು ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಜಹಾಂಗೀರಾಬಾದ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಸುಭಾಷ್ ಸಿಂಗ್ ಹೇಳಿದ್ದಾರೆ.

    ಏನಿದು ಪ್ರಕರಣ?
    ಸಂತ್ರಸ್ತೆ ತನ್ನ ಕುಟುಂಬದವರ ಜೊತೆ ಸೋದರಸಂಬಂಧಿ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಳ್ಳಲು ಚಚೇರಿ ಗ್ರಾಮಕ್ಕೆ ಹೋಗಿದ್ದಳು. ಅಲ್ಲಿ ಆರೋಪಿಗಳಾದ ನಿತೀಶ್ ಮತ್ತು ಸಹೋದರ ರೋಹಿತ್ ಕಾರ್ಯಕ್ರಮದಲ್ಲಿ ಕೆಲಸ ಮಾಡಲು ಬಂದಿದ್ದರು. ಬಳಿಕ ನಿತೀಶ್ ಸುಮಾರು 8 ಗಂಟೆಗೆ ನೆರೆಯ ಗ್ರಾಮದ ದೇವಾಲಯಕ್ಕೆ ತನ್ನೊಂದಿಗೆ ಬರಬೇಕೆಂದು ಸಂತ್ರಸ್ತೆಯ ಬಳಿ ಕೇಳಿಕೊಂಡಿದ್ದಾನೆ.

    ಸಂತ್ರಸ್ತೆ ಒಪ್ಪಿಕೊಂಡು ಅವರ ಜೊತೆ ಹೋಗಿದ್ದಾಳೆ. ಆದರೆ ಇವರು ಗ್ರಾಮಕ್ಕೆ ಹೋಗುವಷ್ಟರಲ್ಲಿ ಯುವಕರ ಗುಂಪೊಂದು ಕಾಯುತ್ತಿದ್ದು, ಬಳಿಕ 10 ಮಂದಿ ಕಾಮುಕರು ಆಕೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.

    ಇತ್ತ ಕುಟುಂಬದವರು ಮಗಳು ಕಾಣಿಸುತ್ತಿಲ್ಲ ಎಂದು ಹುಡುಕಾಡಿದ್ದಾರೆ. ಮರುದಿನ ಬೆಳಗ್ಗೆ 5 ಗಂಟೆಗೆ ಸಂತ್ರಸ್ತೆ ಪ್ರದೇಶವೊಂದರಲ್ಲಿ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಳಿಕ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಶುಕ್ರವಾರ ಸಂತ್ರಸ್ತೆಯ ಸಹೋದರ ಹತ್ತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ಸಂತ್ರಸ್ತೆ ಘಟನೆಯ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳು ಕೆಲಸ ಮಾಡುತ್ತಿವೆ ಎಂದು ಎಸ್‍ಪಿ ರಾಯ್ಸ್ ಅಖ್ತರ್ ತಿಳಿಸಿದ್ದಾರೆ.

  • ಮದ್ವೆಯಾಗಿ ಕೆಲವೇ ನಿಮಿಷಗಳಲ್ಲಿ ಪತಿಯ ಮುಂದೆಯೇ ಪ್ರಿಯಕರನ ಜೊತೆ ವಧು ಎಸ್ಕೇಪ್!

    ಮದ್ವೆಯಾಗಿ ಕೆಲವೇ ನಿಮಿಷಗಳಲ್ಲಿ ಪತಿಯ ಮುಂದೆಯೇ ಪ್ರಿಯಕರನ ಜೊತೆ ವಧು ಎಸ್ಕೇಪ್!

    ಲಕ್ನೋ: ಮದುವೆಯಾಗಿ ಕೆಲವೇ ನಿಮಿಷಗಳಲ್ಲಿ ನೋಡನೋಡುತ್ತಿದ್ದಂತೆ ವರನ ಮುಂದೆ ವಧು ಪ್ರಿಯಕರನ ಜೊತೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಸುಲ್ತಾನ್‍ಪುರ್ ನ ಕೋತ್ವಾಲಿಯಲ್ಲಿ ನಡೆದಿದೆ.

    ವಧು ಅದ್ಧೂರಿಯಾಗಿ ಮದುವೆಯಾದ ಮೇಲೆ ತನ್ನ ತವರು ಮನೆಯನ್ನು ಬಿಟ್ಟು ಪತಿಯ ಮನೆಗೆ ಕಾರಿನಲ್ಲಿ ಹೋಗುತ್ತಿದ್ದಳು. ಆ ಕಾರಿನ ಹಿಂದೆ ಕುಟುಂಬದವರು ಹಾಗೂ ಸಂಬಂಧಿಕರು ಕೂಡ ಹೋಗುತ್ತಿದ್ದರು.

    ಕಾರಿನಲ್ಲಿ ಹೋಗುತ್ತಿದ್ದಾಗ ಕೆಲವೇ ನಿಮಿಷದಲ್ಲಿ ವಧು ನನಗೆ ತಲೆನೋವು ಆಗುತ್ತಿದೆ ಹಾಗೂ ವಾಂತಿ ಬರುವ ಹಾಗೇ ಆಗುತ್ತಿದೆ ಎಂದು ಸುಳ್ಳು ಹೇಳಿ ಕಾರನ್ನು ನಿಲ್ಲಿಸಿದ್ದಾಳೆ. ನಂತರ ಕಾರಿನಿಂದ ಇಳಿದು ಫೋನಿನಲ್ಲಿ ಯಾರ ಜೊತೆ ಮಾತನಾಡಿದ್ದಾಳೆ.

    ತನ್ನ ಪತ್ನಿಯ ಆರೋಗ್ಯದ ಬಗ್ಗೆ ವಿಚಾರಿಸಲು ವರ ಕಾರಿನಿಂದ ಇಳಿದಿದ್ದಾನೆ. ಆಗ ವಧು ವರನಲ್ಲಿ ನಾನು ಬರುತ್ತೇನೆ ನೀವು ಈಗ ಕಾರಿನಲ್ಲಿ ಕುಳಿತುಕೊಳ್ಳಿ ಎಂದಿದ್ದಾಳೆ. ತನ್ನ ಪತ್ನಿಯ ಮಾತನ್ನು ಒಪ್ಪಿ ವರ ಕಾರಿನಲ್ಲಿ ಕುಳಿತುಕೊಂಡಿದ್ದಾನೆ.

    ವಧು ಈಗ ಬರುತ್ತಾಳೆ ಎಂದು ವರ ಕಾರಿನಲ್ಲಿ ಕುಳಿತ್ತಿದ್ದರೆ ಆ ಕ್ಷಣದಲ್ಲಿ ಆಕೆಯ ಪ್ರಿಯಕರ ಬೈಕಿನಲ್ಲಿ ಬಂದಿದ್ದಾನೆ. ಪ್ರಿಯಕರ ಬಂದಿದ್ದೆ ತಡ ಆತನ ಬೈಕಿನಲ್ಲಿ ಕುಳಿತು ಇಬ್ಬರು ಪರಾರಿಯಾಗಿದ್ದಾರೆ. ಕಣ್ಣ ಮುಂದೆಯೇ ಈ ಘಟನೆ ನೋಡಿದ ಸಂಬಂಧಿಕರು ಒಂದು ಕ್ಷಣ ದಂಗಾಗಿದ್ದಾರೆ.

    ನಂತರ ವರ, ಸಂಬಂಧಿಕರು ವಧುವಿನ ಪ್ರಿಯಕರನ ಮನೆಗೆ ಹೋಗಿದ್ದಾರೆ. ಅಲ್ಲದೇ ಪೊಲೀಸರಿಗೂ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ಈ ವೇಳೆ ವಧುವಿನ ಪೋಷಕರು ಪ್ರಿಯಕರನ ವಿರುದ್ಧ ಕಿಡ್ನಾಪ್ ದೂರನ್ನು ನೀಡಿದ್ದಾರೆ. ಆದರೆ ಪೊಲೀಸರು ಇದುವರೆಗೂ ಕೇಸನ್ನು ದಾಖಲಿಸಿಕೊಳ್ಳಲಿಲ್ಲ ಎಂದು ವರದಿಯಾಗಿದೆ.

  • 60ರ ಮಹಿಳೆ ಮೇಲೆ ಐವರಿಂದ ಅತ್ಯಾಚಾರಕ್ಕೆ ಯತ್ನ – ಗ್ರಾಮದ ಪಂಚಾಯ್ತಿಯಲ್ಲಿ ಕಾಮುಕರಿಗೆ ವಿಚಿತ್ರ ಶಿಕ್ಷೆ

    60ರ ಮಹಿಳೆ ಮೇಲೆ ಐವರಿಂದ ಅತ್ಯಾಚಾರಕ್ಕೆ ಯತ್ನ – ಗ್ರಾಮದ ಪಂಚಾಯ್ತಿಯಲ್ಲಿ ಕಾಮುಕರಿಗೆ ವಿಚಿತ್ರ ಶಿಕ್ಷೆ

    ಲಕ್ನೋ: ಹಿರಿಯ ವಯಸ್ಸಿನ ಮಹಿಳೆಯ ಮೇಲೆ ಐವರು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದು, ಈಗ ಅವರಿಗೆ ನೀಡಿರುವ ಶಿಕ್ಷೆಯ ವಿಡಿಯೋ ವೈರಲ್ ಆಗಿದೆ.

    ಈ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಗ್ರಾಮ ಪಂಚಾಯತ್ ಸದಸ್ಯರು ನ್ಯಾಯ ಪಂಚಾಯಿತಿ ಮಾಡಿದ್ದು, ಐವರು ಆರೋಪಿಗಳಿಗೆ ಸಂತ್ರಸ್ತೆಯ ಕೈಯಿಂದ ಐದು ಬಾರಿ ಚಪ್ಪಲಿ ಏಟು ಹೊಡೆಸಿದ್ದು, 5,100 ರೂ. ದಂಡವನ್ನು ವಿಧಿಸಿ ಶಿಕ್ಷೆಯನ್ನು ನೀಡಿದೆ.

    ಘಟನೆಯ ವಿವರ: ಸಂತ್ರಸ್ತೆ ರಾತ್ರಿ ಮನೆಯ ಮುಂದೆ ಮಲಗಿದ್ದರು. ಈ ವೇಳೆ ಬಂದ ಐವರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಮಹಿಳೆ ಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಐವರು ಕೊಲೆ ಬೆದರಿಕೆಯನ್ನು ಹಾಕಿದ್ದಾರೆ. ತಾಯಿಯ ಕಿರುಚಾಟ ಕೇಳುತ್ತಿದ್ದಂತೆ ಮಗ ಬಂದಿದ್ದಾನೆ. ಕೂಡಲೇ ಎಲ್ಲ ಕಾಮುಕರು ಓಡಿ ಹೋಗಿದ್ದಾರೆ. ಬೆಳಗ್ಗೆ ಮಹಿಳೆ ತನ್ನ ಮೇಲಾದ ದೌರ್ಜನ್ಯವನ್ನು ನೆರೆಹೊರೆಯ ಜನಕ್ಕೆ ತಿಳಿಸಿದ್ದಾರೆ.

    ವಿಷಯ ತಿಳಿದ ಗ್ರಾಮಸ್ಥರು ಸಂತ್ರಸ್ತೆಯ ಮನೆಗೆ ದೌಡಾಯಿಸಿ ಬಂದು ಐವರನ್ನು ಹಿಡಿದು ಪಂಚಾಯಿತಿ ಮಾಡಿದ್ದಾರೆ. ಗ್ರಾಮದ ಪಂಚಾಯತ್ ಮುಖ್ಯಸ್ಥ ಸೇರಿ ಐವರು ಆರೋಪಿಗಳಿಗೆ ಸಂತ್ರಸ್ತೆಯ ಕೈಯಿಂದ ಒಬ್ಬೊಬ್ಬರಿಗೆ ಐದು ಬಾರಿ ಚಪ್ಪಲಿ ಏಟು ಮತ್ತು 5100 ರೂ ದಂಡವನ್ನು ವಿಧಿಸಿದ್ದಾನೆ. ವೃದ್ಧೆ ಮತ್ತು ಕುಟುಂಬಸ್ಥರು ಆರೋಪಿಗಳ ವಿರುದ್ಧ ದೂರು ನೀಡಲು ಹಿಂದೇಟು ಹಾಕಿದ್ದರು.

    ವಿಡಿಯೋ ವೈರಲ್: ಐವರು ಆರೋಪಿಗಳಿಗೆ ಸಂತ್ರಸ್ತೆ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋ ಗಮನಿಸಿದ ನಂತರ ಪೊಲೀಸರು ಘಟನೆ ನಡೆದ ಸ್ಥಳದ ಬಗ್ಗೆ ಮಾಹಿತಿ ಪಡೆದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗ್ರಾಮಕ್ಕೆ ಆಗಮಿಸಿದ ಪೊಲೀಸರು ಸಂತ್ರಸ್ತೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ.

    ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳು 50 ವರ್ಷದವರಾಗಿದ್ದು, ಮಹಿಳೆಯ ನೆರೆಮನೆಯವರೇ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಈ ಕೃತ್ಯ ಎಸಗಲು ಪ್ರಯತ್ನಿಸಿದಾಗ ಅವರೆಲ್ಲರೂ ಮದ್ಯದ ನಶೆಯಲ್ಲಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಗ್ರಾಮಕ್ಕೆ ಬಂದು ಸಂತ್ರಸ್ತೆಯಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಂತೆ ಐವರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ವರನ ಮುಖ ನೋಡುತ್ತಿದ್ದಂತೆ ಜೋರಾಗಿ ಕಿರುಚಿ ಮದ್ವೆ ನಿಲ್ಲಿಸಿದ ವಧು!

    ವರನ ಮುಖ ನೋಡುತ್ತಿದ್ದಂತೆ ಜೋರಾಗಿ ಕಿರುಚಿ ಮದ್ವೆ ನಿಲ್ಲಿಸಿದ ವಧು!

    ಲಕ್ನೋ: ಮದುವೆಯಲ್ಲಿ ವಧು ತನ್ನ ವರನ ಮುಖವನ್ನು ನೋಡಿ ಜೋರಾಗಿ ಕಿರುಚಿ ಮದುವೆಯನ್ನು ನಿಲ್ಲಿಸಿದ ಘಟನೆ ಉತ್ತರ ಪ್ರದೇಶದ ಸರಹರಿಯ ಚಿಲ್ಲೂತಾಲ್‍ನಲ್ಲಿ ನಡೆದಿದೆ.

    ಪುಷ್ಪಾ ವರನನ್ನು ನೋಡಿ ಮದುವೆ ನಿಲ್ಲಿಸಿದ ವಧು. ಚಿಲ್ಲೂತಾಲ್ ತಾಲೂಕಿನ ಭಗವಾನ್‍ಪುರ್ ನ ನಿವಾಸಿಯಾದ ರವೀಂದ್ರ ಚೌಹ್ವಾನ್ ಅವರ ಪುತ್ರ ಚೇತಾಯಿ ಚೌಹ್ವಾನ್ ಅವರ ವಿವಾಹ ಅದೇ ಗ್ರಾಮದ ನಿವಾಸಿಯಾದ ಪುಷ್ಪಾ ಜೊತೆ ಭಾನುವಾರ ಚೌಹ್ವಾನ್ ಸಮುದಾಯದಂತೆ ನಡೆಯಬೇಕಿತ್ತು.

    ವರನ ಕುಟುಂಬದವರು ಹಾಗೂ ಸಂಬಂಧಿಕರು ವಧು ಪುಷ್ಪಾ ಮನೆಗೆ ಮೆರವಣಿಗೆ ಮೂಲಕ ಆಗಮಿಸಿದ್ದಾರೆ. ಆಗ ಪುಷ್ಪಾ ವರನ ಮುಖ ನೋಡುತ್ತಿದ್ದಂತೆ ಜೋರಾಗಿ ಕಿರುಚಿ ತನ್ನ ಮದುವೆ ನಿಲ್ಲಿಸಿದ್ದಾಳೆ. ಪುಷ್ಪಾ ಬಳಿ ಕಾರಣ ಕೇಳಿದ್ದಾಗ ಮದುವೆಗೆ ಬಂದಿದ್ದ ಮಂದಿ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ.

    ವರ ಸಾಧಾರಣ ಬಣ್ಣ ಹೊಂದಿದ್ದಕ್ಕೆ ನಾನು ಆತನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಳೆ. ಪುಷ್ಪಾ ನಿರಾಕರಿಸಿದ್ದಕ್ಕೆ ಆಕೆಯ ಕುಟುಂಬದವರು ಹಾಗೂ ಸಂಬಂಧಿಕರು ಆಕೆಯ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಪುಷ್ಪಾ ಮದುವೆಯಾಗಲು ಒಪ್ಪಲೇ ಇಲ್ಲ. ಪುಷ್ಪಾ ಮದುವೆಗೆ ಒಪ್ಪದಿದ್ದಾಗ ಆಕೆಯ ಚಿಕ್ಕಪ್ಪ ಕೂಡ ಮದುವೆ ಬೇಡ ಎಂದು ಹೇಳಿದ್ದಾರೆ.

    ವರನನ್ನು ಸ್ವಾಗತ ಮಾಡಿದ ಮೇಲೆ ಹೂಮಾಲೆಯ ಶಾಸ್ತ್ರ ಕೂಡ ಮುಗಿದಿತ್ತು. ಅದೇ ಸಮಯದಲ್ಲೇ ಪುಷ್ಪಾಳಿಗೆ ವರ ಇಷ್ಟವಾಗಲಿಲ್ಲ. ನಂತರ ಊಟ ಮಾಡಲು ಹೋಗುವಾಗ ವರನ ಕಡೆಯವರು ಹಾಗೂ ವಧುವಿನ ಕಡೆಯವರು ಹೊಡೆದಾಡಿಕೊಂಡಿದ್ದಾರೆ.

    ತಕ್ಷಣ ಅಲ್ಲಿದ್ದ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಮೇಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಗಳ ನಿಲ್ಲಿಸಿದ್ದಾರೆ. ನಂತರ ಪೊಲೀಸ್ ಠಾಣೆಯಲ್ಲೇ ಪಂಚಾಯ್ತಿ ನಡೆಸಿ, ವರನ ಕುಟುಂಬದವರು ಹಾಗೂ ಸಂಬಂಧಿಕರನ್ನು ವಾಪಸ್ ಕಳುಹಿಸಿದರು.