Tag: lucknow

  • ಲೈಂಗಿಕ ಕಿರುಕುಳದ ದೂರು ನೀಡಲು ಹೊರಟಿದ್ದ ಹುಡುಗಿಯನ್ನ ಅರೆಬೆತ್ತಲಾಗಿಸಿ, ಥಳಿಸಿದ್ರು

    ಲೈಂಗಿಕ ಕಿರುಕುಳದ ದೂರು ನೀಡಲು ಹೊರಟಿದ್ದ ಹುಡುಗಿಯನ್ನ ಅರೆಬೆತ್ತಲಾಗಿಸಿ, ಥಳಿಸಿದ್ರು

    ಲಕ್ನೋ: ಲೈಂಗಿಕ ಕಿರುಕುಳದ ವಿರುದ್ಧ ದೂರು ನೀಡಲು ಹೊರಟ್ಟಿದ್ದ 17 ವರ್ಷದ ಹುಡುಗಿಯನ್ನು ಆರೋಪಿಗಳು ಅರೆಬೆತ್ತಲಾಗಿಸಿ, ಹಲ್ಲೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಚೌರಿ ಚೌರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನುಷ ಘಟನೆ ನಡೆದಿದೆ. ಭಾನುವಾರ ಹುಡುಗಿಗೆ ಇಬ್ಬರು ಕಾಮುಕರು ಲೈಂಗಿಕ ಕಿರುಕುಳ ನೀಡಿದ್ದರು. ಇದರಿಂದ ನೊಂದ ಸಂತ್ರಸ್ತೆ ಕಾಮುಕರ ವಿರುದ್ಧ ದೂರು ದಾಖಲಿಸಲು ಚೌರಿ ಚೌರಾ ಪೊಲೀಸ್ ಠಾಣೆಗೆ ಹೋಗುತ್ತಿದ್ದಳು. ಈ ವೇಳೆ ಆಕೆಯನ್ನು ಅಡ್ಡಗಟ್ಟಿದ್ದ ಆರೋಪಿಗಳು ತಮ್ಮ ವಿರುದ್ಧ ದೂರು ನೀಡಬಾರದು ಎಂದು ಬೆದರಿಕೆಯೊಡ್ಡಿದ್ದರು. ಇದ್ಯಾವುದಕ್ಕೂ ಜಗ್ಗದೆ ಹುಡುಗಿ ದೂರು ನೀಡಲು ಹೊರಟಾಗ ಆಕೆಯನ್ನು ಅಲೆಬೆತ್ತಲೆಗೊಳಿಸಿ, ಮನಬಂದಂತೆ ಥಳಿಸಿ ವಿಕೃತಿ ಮೆರೆದಿದ್ದಾರೆ.

    ಈ ವೇಳೆ ಆಕೆಯ ರಕ್ಷಣೆಗೆ ಬಂದ ತಂದೆ ಹಾಗೂ ಸಂಬಂಧಿಕರನ್ನೂ ಕೂಡ ಆರೋಪಿಗಳು ಥಳಿಸಿದ್ದಾರೆ. ಸೋಮವಾರ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ರಚನಾ ಮಿಶ್ರಾ ತಿಳಿಸಿದ್ದಾರೆ.

    ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆ ಅಡಿಯಲ್ಲಿ, ಐಪಿಸಿ ಸೆಕ್ಷನ್ 323, 354, 341ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಪತಿ ಆತ್ಮಹತ್ಯೆ ವಿಷಯ ಕೇಳಿ 5 ವರ್ಷದ ಮಗ್ಳನ್ನು ಕೊಂದು ನೇಣಿಗೆ ಶರಣು

    ಪತಿ ಆತ್ಮಹತ್ಯೆ ವಿಷಯ ಕೇಳಿ 5 ವರ್ಷದ ಮಗ್ಳನ್ನು ಕೊಂದು ನೇಣಿಗೆ ಶರಣು

    ಲಕ್ನೋ: ಪತಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಪತ್ನಿ ತನ್ನ 5 ವರ್ಷದ ಮಗಳನ್ನು ಕೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ಭರತ್ ಸುಬ್ರಮಣ್ಯಂ(33), ಶಿವರಂಜಿನಿ(31) ಹಾಗೂ ಜೈಶ್ರೀತಾ(5) ಮೃತಪಟ್ಟವರು. ಮೂಲತಃ ಚೆನ್ನೈನವರಾಗಿರುವ ಭರತ್ ಕಠ್ಮಂಡುಯಿಂದ ನೋಯ್ಡಾಗೆ ಶಿಫ್ಟ್ ಆಗಿದ್ದರು. ಭರತ್ ತಮ್ಮ ಪತ್ನಿ ಶಿವರಂಜಿನಿ, ಮಗಳು ಜೈಶ್ರೀತಾ ಹಾಗೂ ಸಹೋದರ ಕಾರ್ತಿಕ್ ಜೊತೆ ಜೆಪಿ ಪೆವಿಲಿಯನ್ ಕೋರ್ಟ್ ಬಳಿ ವಾಸಿಸುತ್ತಿದ್ದರು. ಭರತ್ ಟೀ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕಾರ್ತಿಕ್ ಕೋಚಿಂಗ್ ನೀಡುವ ಕೆಲಸ ಮಾಡುತ್ತಿದ್ದರು.

    ಶುಕ್ರವಾರ ಬೆಳಗ್ಗೆ ಸುಮಾರು 11.30ಕ್ಕೆ ಭರತ್ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ವಿಷಯವನ್ನು ಪೊಲೀಸರು ಶಿವರಂಜಿನಿಗೆ ತಿಳಿಸಿದರು. ಶಿವರಂಜಿನಿ ತನ್ನ ಮೈದುನ ಜೊತೆ ರಾಮ್‍ಮನೋಹರ್ ಲೋಹಿಯಾ ಆಸ್ಪತ್ರೆಗೆ ತಲುಪಿದ್ದಳು. ಅಲ್ಲಿಂದ ಹಿಂದಿರುಗಿದ ನಂತರ ತನ್ನ 5 ವರ್ಷದ ಮಗಳನ್ನು ಕೊಲೆ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಬ್ಬರು ಶವ ಫ್ಲ್ಯಾಟ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಉಸ್ತುವಾರಿ ಭುವನೇಶ್ ಕುಮಾರ್ ಅವರು, ಭರತ್ ಹಾಗೂ ಶಿವರಂಜಿನಿ ಕಳೆದ 10 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು. ಭರತ್ ಗೋಲ್ಡನ್ ಟಿಪ್ಸ್ ಟೀ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಈ ಮೊದಲು ಭರತ್ ನೇಪಾಳದಲ್ಲಿ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆ ಮಾಡಿಕೊಂಡ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

  • ಝೊಮಾಟೊದಲ್ಲಿ ರುಮಾಲಿ ರೊಟ್ಟಿ ಆರ್ಡರ್ ಮಾಡಿ 91 ಸಾವಿರ ಕಳೆದುಕೊಂಡ ವಿದ್ಯಾರ್ಥಿ

    ಝೊಮಾಟೊದಲ್ಲಿ ರುಮಾಲಿ ರೊಟ್ಟಿ ಆರ್ಡರ್ ಮಾಡಿ 91 ಸಾವಿರ ಕಳೆದುಕೊಂಡ ವಿದ್ಯಾರ್ಥಿ

    – 7 ಟ್ರಾನ್ಸಾಕ್ಷನ್‍ನಲ್ಲಿ ಹಣ ಕಡಿತ
    – ಝೊಮಾಟೊ ವಿರುದ್ಧ ದೂರು ದಾಖಲು

    ಲಕ್ನೋ: ಇತ್ತೀಚೆಗೆ ಝೊಮಾಟೊ ಕಂಪನಿಯ ವಿರುದ್ಧ ಅನೇಕ ಪ್ರಕರಣಗಳು ಭಾರೀ ಸುದ್ದಿಯಾಗುತ್ತಿದೆ. ಅದರ ಸಾಲಿಗೆ ಈಗ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ರುಮಾಲಿ ರೋಟಿ ಆರ್ಡರ್ ಮಾಡಿ ಬರೋಬ್ಬರಿ 91 ಸಾವಿರ ರೂ. ಕಳೆದುಕೊಂಡ ಪ್ರಕರಣ ಕೂಡ ಸೇರಿಕೊಂಡಿದೆ

    ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಸಿದ್ಧಾರ್ಥ್ ಝೊಮಾಟೊದಲ್ಲಿ ರುಮಾಲಿ ರೊಟ್ಟಿ ಆರ್ಡರ್ ಮಾಡಿ ವಂಚನೆಗೆ ಒಳಗಾಗಿದ್ದಾನೆ. ಸಿದ್ಧಾರ್ಥ್ ಇಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದು, ಆತನ ತಂದೆ ಸುಪ್ರೀಂ ಕೋರ್ಟಿನಲ್ಲಿ ವಕೀಲರಾಗಿದ್ದಾರೆ, ತಾಯಿ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಝೊಮಾಟೊದಲ್ಲಿ ಸಿದ್ಧಾರ್ಥ್ ರುಮಾಲಿ ರೊಟ್ಟಿ ಆರ್ಡರ್ ಮಾಡಿದ್ದನು ಅದಕ್ಕೆ ಆನ್‍ಲೈನ್‍ನಲ್ಲಿ ಹಣ ಕೂಡ ಪೇ ಮಾಡಿದ್ದನು. ಇದನ್ನೂ ಓದಿ: ಪನೀರ್ ಆರ್ಡರ್ ಮಾಡಿದ್ರೆ ಚಿಕನ್ ಡೆಲಿವರಿ: ಝೊಮ್ಯಾಟೊಗೆ 55 ಸಾವಿರ ರೂ. ದಂಡ

    ಆದರೆ ಆರ್ಡರ್ ಪ್ಲೇಸ್ ಮಾಡಿದ ಕೆಲವೇ ನಿಮಿಷದಲ್ಲಿ ಸಿದ್ಧಾರ್ಥ್ ಫೋನ್‍ಗೆ ಹಣವನ್ನು ಹಿಂದಿರುಗಿಸುತ್ತೇವೆ ನಿಮ್ಮ ಬ್ಯಾಂಕ್ ಮಾಹಿತಿ ತಿಳಿಸಿ ಎಂದು ಝೊಮಾಟೊ ಹೆಸರಿನಲ್ಲಿ ಮೆಸೇಜ್ ಬಂದಿದೆ. ಅದನ್ನು ನಂಬಿ ಸಿದ್ಧಾರ್ಥ್ ಮಾಹಿತಿ ಕಳುಹಿಸಿದ ಬಳಿಕ ಒಟ್ಟು 7 ಟ್ರಾನ್ಸಾಕ್ಷನ್‍ನಲ್ಲಿ ಬರೋಬ್ಬರಿ 91 ಸಾವಿರದ 196 ರೂಪಾಯಿ ಬ್ಯಾಂಕ್ ಅಕೌಂಟ್‍ನಿಂದ ಕಡಿತಗೊಂಡಿದೆ.

    ಈ ಟ್ರಾನ್ಸಾಕ್ಷನ್ ಬಗ್ಗೆ ಫೋನಲ್ಲಿ ಒಂದೊಂದೆ ಮೆಸೇಜ್ ಬಂದಿದ್ದನ್ನು ನೋಡಿ ಸಿದ್ಧಾರ್ಥ್ ಹೌಹಾರಿದ್ದಾನೆ. ತಕ್ಷಣ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾನೆ. ಸದ್ಯ ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಡೆಲಿವರಿ ಬಾಯ್ ತಂದ ಆಹಾರ ತಿರಸ್ಕರಿಸಿದವನ ಮೇಲೆ ಬಿತ್ತು ಕೇಸ್

    ಈ ಹಿಂದೆ ಸಸ್ಯಹಾರಿ ಆರ್ಡರ್ ಮಾಡಿದ ಗ್ರಾಹಕರಿಗೆ ಝೊಮಾಟೊ ಮಾಂಸಹಾರಿ ಆಹಾರ ಡೆಲಿವರಿ ಮಾಡಿದ ಪ್ರಕರಣಗಳು ಕೂಡ ನಡೆದಿದೆ. ಈ ತಪ್ಪಿಗಾಗಿ ಝೊಮಾಟೊ ಸಾವಿರಾರು ರೂಪಾಯಿ ದಂಡವನ್ನು ಕೂಡ ಕಟ್ಟಿದೆ.

    ಪುಣೆಯ ವಕೀಲರೊಬ್ಬರು ಝೊಮಾಟೊದಲ್ಲಿ ಪನ್ನೀರ್ ಬಟರ್ ಮಸಾಲಾ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಪನ್ನೀರ್ ಬದಲು ಚಿಕನ್ ಬಟರ್ ಮಸಾಲಾ ಡೆಲಿವರಿ ಮಾಡಲಾಗಿತ್ತು. ಈ ಬಗ್ಗೆ ತಿಳಿಯದ ವಕೀಲರು ಅದನ್ನೇ ತಿಂದಿದ್ದರು. ಬಳಿಕ ಇದು ಪನ್ನೀರ್ ಅಲ್ಲ ಚಿಕನ್ ಎಂದು ತಿಳಿದ ಮೇಲೆ ಗ್ರಾಹಕರ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ಆಗ ನ್ಯಾಯಾಲಯ ಝೊಮಾಟೊಗೆ 55 ಸಾವಿರ ರೂಪಾಯಿ ದಂಡ ಹಾಕಿತ್ತು. ಅಲ್ಲದೆ 45 ದಿನಗಳಲ್ಲಿ ಈ ಹಣವನ್ನು ಗ್ರಾಹಕನಿಗೆ ತಲುಪಿಸುವಂತೆ ಆದೇಶಿಸಿತ್ತು. ಇದನ್ನೂ ಓದಿ: ಝೊಮ್ಯಾಟೊದಿಂದ ಮಧ್ಯರಾತ್ರಿ ಮನೆ ತಲುಪಿದ-ಯುವಕನ ಪ್ಲಾನ್‍ಗೆ ಜನರು ಫಿದಾ

    ಈ ಆರೋಪವನ್ನು ಝೊಮಾಟೊ ತಳ್ಳಿಹಾಕಿ, ಇದು ನಮ್ಮ ತಪ್ಪಲ್ಲ. ಆರ್ಡರ್ ಕಳುಹಿಸಿದ ಹೋಟೆಲ್ ತಪ್ಪು. ಅವರು ಆರ್ಡರ್ ತಯಾರಿಸಿ ಕೊಡುವಾಗ ಎಡವಟ್ಟು ಮಾಡಿದ್ದಾರೆ ಎಂದು ವಾದಿಸಿತ್ತು. ಆದರೂ ನೀವು ಮಾಡಿದ್ದು ತಪ್ಪು ಎಂದು ನ್ಯಾಯಾಲಯ ಝೊಮಾಟೊ ಹಾಗೂ ಆಹಾರ ತಯಾರಿಸಿದ ಹೋಟೆಲ್‍ಗೆ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಿತ್ತು.

  • ಹಣದಾಸೆಗೆ ಸುಳ್ಳು ಗ್ಯಾಂಗ್ ರೇಪ್ ಕಥೆ ಕಟ್ಟಿದ ಇಬ್ಬರು ಮಹಿಳೆಯರು ಅರೆಸ್ಟ್

    ಹಣದಾಸೆಗೆ ಸುಳ್ಳು ಗ್ಯಾಂಗ್ ರೇಪ್ ಕಥೆ ಕಟ್ಟಿದ ಇಬ್ಬರು ಮಹಿಳೆಯರು ಅರೆಸ್ಟ್

    – ಸರ್ಕಾರದಿಂದ ಧನಸಹಾಯ ಪಡೆಯಲು ಖತರ್ನಾಕ್ ಪ್ಲಾನ್

    ಲಕ್ನೋ: ಒಂದೆಡೆ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಅತ್ಯಾಚಾರದ ಪ್ರಕರಣಗಳು ಹೆಚ್ಚು ನಡೆಯುತ್ತಿದೆ. ಇನ್ನೊಂದೆಡೆ ಗಾಜಿಯಾಬಾದ್‍ನಲ್ಲಿ ನಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹಣ ದೋಚಲು ಮಹಿಳೆಯರಿಬ್ಬರು ಸುಳ್ಳು ಆರೋಪ ಮಾಡಿ ಕಂಬಿ ಎಣೆಸುತ್ತಿದ್ದಾರೆ.

    ಗಾಜಿಯಾಬಾದ್‍ನ ಮುಸ್ಸೂರಿ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಈ ಘಟನೆ ನಡೆದಿದೆ. ರೇಪ್ ಸಂತ್ರಸ್ತೆಯರು ಎಂದು ಸುಳ್ಳು ಹೇಳಿ ಇಬ್ಬರು ಮಹಿಳೆಯರು ಸರ್ಕಾರದಿಂದ ಹಣ ಪಡೆಯಲು ಮಾಡಿದ್ದ ಪ್ಲಾನ್ ಈಗ ಮಕಾಡೆ ಮಲಗಿದೆ. ತಡರಾತ್ರಿ 11 ಗಂಟೆ ವೇಳೆಗೆ ಮಹಿಳೆ ಪೊಲೀಸ್ ಠಾಣೆಗೆ ಕರೆ ಮಾಡಿ, ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹೇಳಿದ್ದಾಳೆ.

    ಈ ಬಗ್ಗೆ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದಾಗ ಮಹಿಳೆ ರಸ್ತೆ ಮೇಲೆ ಪ್ರಜ್ಞೆ ತಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ತಕ್ಷಣ ಆಕೆಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು. ವಿಚಾರಣೆ ವೇಳೆ, ರಾತ್ರಿ ಲಿಫ್ಟ್ ನೀಡುವ ನೆಪದಲ್ಲಿ ಗುಂಪೊಂದು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ ಎಂದು ಮಹಿಳೆ ಹೇಳಿದ್ದಳು. ಅಲ್ಲದೆ ವೈದ್ಯಕೀಯ ಪರೀಕ್ಷೆಯನ್ನು ನಿರಾಕರಿಸಿದ್ದಳು. ಆಗ ಪೊಲೀಸರಿಗೆ ಅನುಮಾನ ಮೂಡಿ ಈ ಬಗ್ಗೆ ತನಿಖೆ ಕೈಗೊಂಡಾಗ ಮಹಿಳೆಯ ನಿಜಬಣ್ಣ ಬಯಲಾಗಿದೆ.

    ಮಹಿಳೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸುಳ್ಳು ದೂರು ಕೊಟ್ಟು ನಾಟಕವಾಡಿರುವುದು ಬಯಲಾಗಿದೆ. ಸರ್ಕಾರದಿಂದ ಅತ್ಯಾಚಾರ ಸಂತ್ರಸ್ತೆಗೆ ಸಿಗುವ ಧನ ಸಹಾಯವನ್ನು ಪಡೆಯೋದಕ್ಕೆ ಮಹಿಳೆ ಈ ಖತರ್ನಾಕ್ ಪ್ಲಾನ್ ಮಾಡಿರುವುದು ಬಯಲಾಗಿದೆ.

    ಮಹಿಳೆಯ ಅಸಲಿಯತ್ತು ತಿಳಿಯುತ್ತಿದ್ದಂತೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಹಾಗೆಯೇ ಆರೋಪಿ ಜೊತೆಗೆ ಕೈಜೋಡಿಸಿದ್ದ ಇನ್ನೋರ್ವ ಮಹಿಳೆಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳನ್ನು ತಡೆಯಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಮುಂದಾಗಿದೆ. ಆದರೆ ಹೀಗೆ ಮಹಿಳೆಯರೇ ಸುಳ್ಳು ಆರೋಪ ಮಾಡಿ ಹಣ ದೋಚಲು ಮುಂದಾಗಿದ್ದು ವಿಪರ್ಯಾಸವಾಗಿದೆ.

  • ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ – 33 ಸೆಕೆಂಡ್‍ನಲ್ಲಿ ವ್ಯಕ್ತಿಗೆ ಚಪ್ಪಲಿಯಿಂದ 22 ಏಟು

    ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ – 33 ಸೆಕೆಂಡ್‍ನಲ್ಲಿ ವ್ಯಕ್ತಿಗೆ ಚಪ್ಪಲಿಯಿಂದ 22 ಏಟು

    – ಮಹಿಳಾ ಪೇದೆಗೆ ಭಾರೀ ಮೆಚ್ಚುಗೆ

    ಲಕ್ನೋ: ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಮಹಿಳಾ ಪೇದೆಯೊಬ್ಬರು ವ್ಯಕ್ತಿಗೆ 33 ಸೆಕೆಂಡ್‍ನಲ್ಲಿ ಚಪ್ಪಲಿಯಿಂದ 22 ಬಾರಿ ಹೊಡೆದ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.

    ಹುಡುಗಿಯರಿಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ರಸ್ತೆಯಲ್ಲಿಯೇ ಮಹಿಳಾ ಪೇದೆ ತನ್ನ ಚಪ್ಪಲಿ ತೆಗೆದು ಹೊಡೆದಿದ್ದಾರೆ. ಬಳಿಕ ವಶಕ್ಕೆ ಪಡೆದು ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೇದೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಈ ಕ್ಷೇತ್ರದಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರನ್ನು ನಿರಂತರವಾಗಿ ಪೊಲೀಸರು ಸ್ವೀಕರಿಸುತ್ತಿದ್ದರು. ಹಾಗಾಗಿ ಮಹಿಳಾ ಪೇದೆ ಇಂದು ಬೆಳಗ್ಗೆಯಿಂದ ಶಾಲೆಯ ಹೊರಗೆ ಓಡಾಡುತ್ತಿದ್ದರು. ಈ ವೇಳೆ ಪೇದೆ ಕಿರುಕುಳ ನೀಡುತ್ತಿದ್ದ ಯುವಕನನ್ನು ರೆಡ್‍ಹ್ಯಾಂಡಾಗಿ ಹಿಡಿದಿದ್ದಾರೆ. ಬಳಿಕ ಪೇದೆ ಯುವಕನಿಗೆ ಬುದ್ಧಿ ಕಲಿಸಿದ್ದಾರೆ.

    ರಸ್ತೆಯಲ್ಲಿಯೇ ಪೇದೆ ತನ್ನ ಕಾಲಲ್ಲಿದ್ದ ಚಪ್ಪಲಿಯನ್ನು ತೆಗೆದು ಅದರಿಂದ ಯುವಕನಿಗೆ ಥಳಿಸಿದ್ದಾರೆ. ಬಳಿಕ ಬಿಥೂರ್ ಠಾಣಾ ಪೊಲೀಸರು ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಐಪಿಸಿ ಸೆಕ್ಷನ್ 294 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ. ಅನಿಲ್ ಕುಮಾರ್, ಮಹಿಳೆಗೆ ಸಂಬಂಧಿಸಿದ ಪ್ರಕರಣಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಯುವತಿಯರು ಕೂಡ ದೂರು ನೀಡಲು ಮುಂದಾಗಬೇಕು. ಪೊಲೀಸರು ದೂರುಗಳನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

  • ದೂರು ಕೊಡಲು ಹೋದ ಮಹಿಳೆ – ರೇಪ್ ಆದ್ಮೇಲೆ ಬಾ ಎಂದ ಪೊಲೀಸ್

    ದೂರು ಕೊಡಲು ಹೋದ ಮಹಿಳೆ – ರೇಪ್ ಆದ್ಮೇಲೆ ಬಾ ಎಂದ ಪೊಲೀಸ್

    -3 ತಿಂಗಳಿಂದ ಪೊಲೀಸ್ ಠಾಣೆಗೆ ಅಲೆದಾಟ

    ಲಕ್ನೋ: ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಬಗ್ಗೆ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಆದರೆ ಈ ಸಂದರ್ಭದಲ್ಲೇ ಮಹಿಳೆಯೊಬ್ಬರು ದೂರು ಕೊಡಲು ಹೋದಾಗ ಪೊಲೀಸರು, ಅತ್ಯಾಚಾರ ನಡೆದ ಮೇಲೆ ಬಾ ಎಂಬ ಬೇಜವಾಬ್ದಾರಿತನದ ಉತ್ತರವನ್ನು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಉನ್ನಾವೋ ಜಿಲ್ಲೆಯ ಹಿಂದೂಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವರ ವಿರುದ್ಧ ದೂರು ಕೊಡಲು ಪೊಲೀಸ್ ಠಾಣೆಗೆ ಹೋಗಿದ್ದೆ. ಆಗ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದರು. ಅಲ್ಲದೇ ಅತ್ಯಾಚಾರ ನಡೆದ ನಂತರ ಬಾ ನೋಡಿಕೊಳ್ಳೋಣ ಎಂದು ಹೇಳಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.

    ಏನಿದು ಘಟನೆ?
    ಕೆಲವು ತಿಂಗಳ ಹಿಂದೆ ನಾನು ಔಷಧಿ ಖರೀದಿಸಲು ಹೋಗುತ್ತಿದ್ದೆ. ಆಗ ಅದೇ ಗ್ರಾಮದ ಮೂವರು ಪುರುಷರು ನನ್ನನ್ನು ಅಡ್ಡಗಟ್ಟಿ ನನ್ನ ಬಟ್ಟೆ ಎಳೆದು ಅತ್ಯಾಚಾರಕ್ಕೆ ಯತ್ನಿಸಿದ್ದರು. ಬಳಿಕ ಪೊಲೀಸ್ ಠಾಣೆಗೆ ಹೋಗಿ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ದೂರು ನೀಡಿದೆ. ಆದರೆ ಠಾಣೆಯಲ್ಲಿದ್ದ ಪೊಲೀಸರು ದೂರು ದಾಖಲಿಸದೆ, “ಇನ್ನೂ ಅತ್ಯಾಚಾರ ನಡೆದಿಲ್ಲವಲ್ಲ, ರೇಪ್ ಆದ ಮೇಲೆ ಬಾ ನೋಡೋಣ” ಎಂದು ನನ್ನನ್ನು ಹೊರಗೆ ತಳ್ಳಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

    ತಾನು ಮೂರು ತಿಂಗಳಿನಿಂದ ಪೊಲೀಸ್ ಠಾಣೆಗೆ ಅಲೆಯುತ್ತಿದ್ದೇನೆ. ಆದರೆ ಈ ಕುರಿತು ಯಾರು ಪ್ರಕರಣವನ್ನು ದಾಖಲಿಸಿಕೊಳ್ಳಲಿಲ್ಲ. ಘಟನೆಯ ನಡೆದ ನಂತರ ನಾನು 1090 (ಮಹಿಳಾ ಸಹಾಯವಾಣಿ) ಗೆ ಕರೆ ಮಾಡಿದೆ. ಅವರು 100ಕ್ಕೆ ಕರೆ ಮಾಡು ಎಂದರು. ತಕ್ಷಣ ನಾನು ಉನ್ನಾವೋ ಪೊಲೀಸರಿಗೆ ಫೋನ್ ಮಾಡಿ ವರದಿ ಮಾಡಿದೆ. ಆದರೆ ಅವರು ಘಟನೆ ನಡೆದ ಪ್ರದೇಶದಲ್ಲಿನ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವಂತೆ ಹೇಳಿದ್ದರು. ಆದರೆ ಈಗ ಮೂವರು ಆರೋಪಿಗಳು ನನ್ನ ಮನೆಗೆ ಬಂದು, ದೂರು ನೀಡಿದರೆ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.

    ಇತ್ತೀಚೆಗೆ ಮಹಿಳೆ ಉನ್ನಾವೋದಲ್ಲಿ ಅಧಿಕಾರಿಯೊಬ್ಬರನ್ನ ಭೇಟಿಯಾಗಿದ್ದು, ಅವರು ಬಿಹಾರ್ ಪೊಲೀಸ್ ಠಾಣೆಗೆ ದೂರು ನೀಡಲು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಉನ್ನಾವೋದ ಐಜಿ ಎಸ್.ಕೆ ಭಗತ್ ಸಿಂಗ್ ಅವರನ್ನ ಕೇಳಿದಾಗ, ನಾನು ಬೆಳಗ್ಗಿನಿಂದ ಕಚೇರಿಯಲ್ಲಿಯೇ ಕುಳಿತಿದ್ದೇನೆ. ಆದರೆ ಯಾರೂ ನನ್ನ ಬಳಿ ಬಂದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.

  • ದೂರು ಹಿಂಪಡೆಯಲು ನಿರಾಕರಿಸಿದ ರೇಪ್ ಸಂತ್ರಸ್ತೆ ಮೇಲೆ ಆ್ಯಸಿಡ್ ದಾಳಿ

    ದೂರು ಹಿಂಪಡೆಯಲು ನಿರಾಕರಿಸಿದ ರೇಪ್ ಸಂತ್ರಸ್ತೆ ಮೇಲೆ ಆ್ಯಸಿಡ್ ದಾಳಿ

    ಲಕ್ನೋ: ಅತ್ಯಾಚಾರಿಗಳ ವಿರುದ್ಧ ನೀಡಿದ್ದ ದೂರನ್ನು ಹಿಂಪಡೆಯಲು ನಿರಾಕರಿಸಿದ್ದಕ್ಕೆ ಸಂತ್ರಸ್ತೆಯ ಮೇಲೆ ನಾಲ್ವರು ಆರೋಪಿಗಳು ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದಾರೆ.

    ಉತ್ತರ ಪ್ರದೇಶದಲ್ಲಿ ದಿನೇ ದಿನೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಮುಜಾಫರ್‌ನಗರದಲ್ಲಿ ತನ್ನನ್ನು ಅತ್ಯಾಚಾರಗೈದ ನಾಲ್ವರು ಕಾಮುಕರ ಮೇಲೆ ಕೊಟ್ಟಿದ್ದ ದೂರನ್ನು ವಾಪಾಸ್ ಪಡೆಯಲು ಸಂತ್ರಸ್ತೆ ಒಪ್ಪದಿದ್ದಕ್ಕೆ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಲಾಗಿದೆ. 30 ವರ್ಷದ ಮಹಿಳೆ ಮೇಲೆ ನಾಲ್ವರು ದುರುಳರು ಆ್ಯಸಿಡ್ ದಾಳಿ ನಡೆಸಿದ್ದಾರೆ. ಪರಿಣಾಮ ಶೇ. 30ರಷ್ಟು ಸಂತ್ರಸ್ತೆ ದೇಹದ ಭಾಗ ಸುಟ್ಟಿದ್ದು, ಮೀರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕಾಮುಕರ ಅಟ್ಟಹಾಸ- ಶಿಕ್ಷಕಿ ಮೇಲೆ ಗ್ಯಾಂಗ್ ರೇಪ್, ಲೈಂಗಿಕ ಕಿರುಕುಳಕ್ಕೆ ಯುವತಿ ಬಲಿ

    ಬುಧವಾರ ಸಂತ್ರಸ್ತೆ ಮೇಲೆ ಅತ್ಯಾಚಾರಗೈದು ನಾಲ್ವರು ಕಾಮುಕರು ಅಟ್ಟಹಾಸ ಮೆರೆದಿದ್ದರು. ಈ ಸಂಬಂಧ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ತಮ್ಮ ವಿರುದ್ಧ ನೀಡಿರುವ ದೂರನ್ನು ವಾಪಾಸ್ ತೆಗೆದುಕೊಂಡು ನಿನ್ನ ಪಾಡಿಗೆ ಸುಮ್ಮನಾಗು ಎಂದು ಆರೋಪಿಗಳು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದರು. ಆದರೆ ಇದ್ಯಾವುದಕ್ಕೂ ಸಂತ್ರಸ್ತೆ ಬಗ್ಗದೆ ದೂರನ್ನು ಹಿಂಪಡೆಯಲು ನಿರಾಕರಿಸಿದಾಗ, ಆರೋಪಿಗಳು ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದುರುಳರ ಕ್ರೌರ್ಯಕ್ಕೆ ಮತ್ತೊಂದು ಬಲಿ – ಬದುಕಲಿಲ್ಲ ಬೆಂಕಿಯಲ್ಲಿ ಬೆಂದ ಉನ್ನಾವ್ ಸಂತ್ರಸ್ತೆ

    ಈ ಬಗ್ಗೆ ಸಂತ್ರಸ್ತೆ ಪೊಲೀಸರಿಗೆ ಸಾಕಷ್ಟು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅತ್ಯಾಚಾರವೆಸೆಗಿರುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಪೊಲೀಸರು ಪ್ರಕರಣ ಮುಚ್ಚಿ ಹಾಕಿದ್ದರು. ಆದ್ದರಿಂದ ಸಂತ್ರಸ್ತೆ ನೇರವಾಗಿ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ. ಇದನ್ನೂ ಓದಿ: ಮತ್ತಷ್ಟು ಎನ್‌ಕೌಂಟರ್‌ಗಳನ್ನು ಮಾಡಿ- ತೆಲಂಗಾಣ ಪೊಲೀಸ್ರಿಗೆ ಹೆಚ್ಚಾಯ್ತು ಡಿಮ್ಯಾಂಡ್

    ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಸಂತ್ರಸ್ತೆ ಮನೆಗೆ ನುಗ್ಗಿ ನಾಲ್ವರು ಆರೋಪಿಗಳು ಆ್ಯಸಿಡ್ ದಾಳಿ ನಡೆಸಿದ್ದಾರೆ. ಸದ್ಯ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಘಟನೆ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆಮಾಡಿ ಕೈಗೆ ಕೋಳ ಹಾಕುತ್ತೇವೆ ಎಂದು ತಿಳಿಸಿದ್ದಾರೆ.

  • ಪುರುಷರಿಂದ ಅಧಿಕಾರವನ್ನು ಕಸಿದುಕೊಳ್ಳಿ: ಪ್ರಿಯಾಂಕಾ ಗಾಂಧಿ

    ಪುರುಷರಿಂದ ಅಧಿಕಾರವನ್ನು ಕಸಿದುಕೊಳ್ಳಿ: ಪ್ರಿಯಾಂಕಾ ಗಾಂಧಿ

    ಲಕ್ನೋ: ಅಪರಾಧಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಜನಸಂಖ್ಯೆಗೆ ಅನುಗುಣವಾಗಿ ಪುರುಷರಿಂದ ಅಧಿಕಾರವನ್ನು ಕಸಿದುಕೊಳ್ಳಿ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

    ಲಕ್ನೋಗೆ ಎರಡು ದಿನಗಳ ಭೇಟಿಗೆ ಆಗಮಿಸಿದ್ದ ಪ್ರಿಯಾಂಕಾ ಗಾಂಧಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಮಹಿಳೆಯ ಮೇಲೆ ನಡೆಯುತ್ತಿರುವ ಅಪರಾಧಗಳ ಕುರಿತು ಪ್ರತಿಕ್ರಿಯೆ ನೀಡಿದ ಪ್ರಿಯಾಂಕಾ ಗಾಂಧಿ ಅವರು, ಸಮಾಜದಲ್ಲಿ ಮಹಿಳೆಯರು ಅಧಿಕಾರ ಪಡೆಯಬೇಕು ಎಂದು ನಾನು ಬಯಸುತ್ತೇನೆ. ನನ್ನ ಸಹೋದರಿಯರಿಗೆ ನಾನು ಹೇಳುವುದು ಇಷ್ಟೇ, ರಾಜಕೀಯ ಪ್ರವೇಶ ಮಾಡಿ ಪಂಚಾಯಿತಿ, ವಿಧಾನಸಭಾ ಚುನಾವಣೆಯಲ್ಲಿ ಭಾಗಿಯಾಗಿ ಅಧಿಕಾರ ಪಡೆಯಿರಿ. ನಿಮ್ಮ ಮೇಲೆ ನಡೆಯುತ್ತಿರುವ ಅಪರಾಧಗಳಿಂದ ರಕ್ಷಿಸಿಕೊಳ್ಳಲು ಪುರುಷರಿಂದ ಅಧಿಕಾರವನ್ನು ಕಸಿದುಕೊಳ್ಳಿ ಎಂದರು.

    ಇದೇ ವೇಳೆ ಉತ್ತರ ಪ್ರದೇಶ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಪಕ್ಷ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸಲಿದೆ. ಕಳೆದ 11 ತಿಂಗಳ ಅವಧಿಯಲ್ಲಿ ಉನ್ನಾವೋ ಪ್ರದೇಶವೊಂದರಲ್ಲೇ 90ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ. ಇಲ್ಲಿನ ಸರ್ಕಾರ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ. ಮಹಿಳೆಯರು ನ್ಯಾಯಕ್ಕಾಗಿ ಯುದ್ಧದಲ್ಲಿ ಹೋರಾಟ ನಡೆಸುವುದು ಎಷ್ಟು ಕಷ್ಟ ಎಂಬುವುದನ್ನು ನೀವೇ ಯೋಚಿಸಿ ಎಂದು ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕರೊಬ್ಬರು ಆರೋಪಿಯಾಗಿರುವುದನ್ನು ಉಲ್ಲೇಖಿಸಿದರು.

  • ಗ್ಯಾಂಗ್‍ರೇಪ್ ಮಾಡಿ ಕಾರಿನಿಂದ ತಳ್ಳಿದ್ರು – ದೂರು ನೀಡಿದ್ದ ಯುವತಿಯೇ ಅರೆಸ್ಟ್

    ಗ್ಯಾಂಗ್‍ರೇಪ್ ಮಾಡಿ ಕಾರಿನಿಂದ ತಳ್ಳಿದ್ರು – ದೂರು ನೀಡಿದ್ದ ಯುವತಿಯೇ ಅರೆಸ್ಟ್

    ಲಕ್ನೋ: ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಬಳಿಕ ಹೊರಗಡೆ ಎಸೆದ ಮೂವರ ವಿರುದ್ಧ ಸುಳ್ಳು ದೂರು ನೀಡಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಉತ್ತರ ಪ್ರದೇಶದ ಫಿರೋಜಾಬಾದ್‍ನಲ್ಲಿ ಈ ಪ್ರಕರಣ ನಡೆದಿದ್ದು, ಆಗ್ರಾ ನಿವಾಸಿಯಾಗಿರುವ 20 ವರ್ಷದ ಯುವತಿ, ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಿಯಕರನ ಒತ್ತಾಯಕ್ಕೆ ಮಣಿದು ಯುವತಿ ಮೂವರು ಯುವಕರಾದ ಗೀತಂ, ಜ್ಞಾನೇಂದ್ರ ಹಾಗೂ ರಾಜನ ವಿರುದ್ಧ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ನಕಲಿ ದೂರು ದಾಖಲಿಸಿದ್ದಳು.

    ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಎಸ್‍ಪಿ ಸಚೀಂದ್ರ ಪಾಟೇಲ್ ಅವರು, ಯುವತಿ ನೀಡಿದ ದೂರನ್ನು ದಾಖಲಿಸಿಕೊಂಡು ನಾವು ಮೂವರು ಯುವಕರನ್ನು ಬಂಧಿಸಿದ್ದೆವು. ಬಳಿಕ ಯುವತಿಯನ್ನು ಕರೆದು ವಿಚಾರಣೆ ನಡೆಸಿದಾಗ, ಪ್ರಿಯಕರನ ಒತ್ತಾಯಕ್ಕಾಗಿ ಸಾಮೂಹಿಕ ಅತ್ಯಾಚಾರ ದೂರು ನೀಡಿರುವ ವಿಚಾರ ಬೆಳಕಿಗೆ ಬಂತು ಎಂದು ತಿಳಿಸಿದರು.

    ಯುವತಿಯ ಪ್ರಿಯಕರನಾಗಿರುವ ಅನಿಲ್ ಕೊಲೆ ಎಸಗಿದ್ದ. ಈ ಪ್ರಕರಣಕ್ಕೆ ಮೂವರು ಯುವಕರು ಪ್ರಮುಖ ಸಾಕ್ಷಿಯಾಗಿದ್ದರು. ನಾವು ಯುವತಿಯನ್ನು ನಿರಂತವಾಗಿ ಪ್ರಶ್ನಿಸಿದಾಗ ಆಕೆ ಬೇರೆ ಬೇರೆ ಕತೆ ಹೇಳುತ್ತಿದ್ದಳು. ಈ ವೇಳೆ ಆಕೆ ಸುಳ್ಳು ಹೇಳುತ್ತಿರುವುದು ದೃಢವಾಯಿತು ಎಂದು ಸಚೀಂದ್ರ ತಿಳಿಸಿದ್ದಾರೆ.

    ಯುವತಿ ದೂರಿನಲ್ಲಿ ಹೇಳಿದ್ದೇನು?
    ನಾನು ಆಗ್ರಾದ ಹರಿಪರ್ವತ್ ಏರಿಯಾದಲ್ಲಿರುವ ಕೋಚಿಂಗ್ ಸೆಂಟರ್ ಗೆ ಹೋಗುತ್ತಿದ್ದೆ. ಈ ವೇಳೆ ಮೂವರು ಯುವಕರು ಬಂದು ನಿನ್ನ ಸಹೋದರನಿಗೆ ಅಪಘಾತ ಆಗಿದೆ ಎಂದು ಹೇಳಿ ನನ್ನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಬಳಿಕ ಪಚೋಖರಾ ಪೊಲೀಸ್ ಠಾಣಾ ವ್ಯಪ್ತಿಯ ಗಲಿಬ್ ಗ್ರಾಮದಲ್ಲಿ ಯಾರು ಇಲ್ಲದ ಜಾಗದಲ್ಲಿ ನನ್ನನ್ನು ಕಾರಿನಿಂದ ಹೊರಗೆ ಎಸೆದು ಹೋದರು ಎಂದು ದೂರು ನೀಡಿದ್ದಳು.

  • ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿದ ಮಹಿಳೆ ಮೇಲೆ ಗುಂಡು ಹಾರಿಸಿದ ವ್ಯಕ್ತಿ

    ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿದ ಮಹಿಳೆ ಮೇಲೆ ಗುಂಡು ಹಾರಿಸಿದ ವ್ಯಕ್ತಿ

    ಲಕ್ನೋ: ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿದ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ಡಿಸೆಂಬರ್ 1ರಂದು ಉತ್ತರ ಪ್ರದೇಶದ ಚಿತ್ರಕೂಟ್‍ನಲ್ಲಿ ನಡದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆಯ ವಿಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಒಂದು ನಿಮಿಷದ ವಿಡಿಯೋದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಮಹಿಳೆ ಡ್ಯಾನ್ಸ್ ಮಾಡಿ ನಿಲ್ಲಿಸಿದ ತಕ್ಷಣ ಗುಂಡು ಹಾರಿಸುತ್ತೇನೆ ಎಂದು ಹೇಳಿದ್ದಾನೆ.

    ಈ ಸಂದರ್ಭದಲ್ಲಿ ಆರೋಪಿ ಜೊತೆ ಮತ್ತೊಬ್ಬ ವ್ಯಕ್ತಿ, ಅಣ್ಣ ನೀನು ಈಗ ಗುಂಡು ಹಾರಿಸಲೇ ಬೇಕು ಎಂದು ಹೇಳಿದ್ದಾನೆ. ಈ ವೇಳೆ ಗುಂಡು ಹಾರಿ ಮಹಿಳೆಯ ಮುಖಕ್ಕೆ ತಾಗಿದೆ. ತಕ್ಷಣ ಎಲ್ಲರೂ ಆಘಾತಕ್ಕೆ ಒಳಗಾದರು. ಮಹಿಳೆಯ ಮುಖಕ್ಕೆ ಗುಂಡು ಬಿದ್ದಿದೆ.

    ಡಿಸೆಂಬರ್ 1ರಂದು ಈ ವಿಡಿಯೋ ಸೆರೆ ಹಿಡಿಯಲಾಗಿದ್ದು, ಮಹಿಳೆ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಳು. ಗ್ರಾಮದ ಮುಖ್ಯಸ್ಥರ ಕುಟುಂಬದ ಸದಸ್ಯರೊಬ್ಬರು ಮಹಿಳೆಗೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಅಪರಿಚಿತ ವ್ಯಕ್ತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ ಅಂಕಿತ್ ಮಿಥಲ್, ನಾವು ಆರೋಪಿಯನ್ನು ಬಂಧಿಸಲು ಪ್ರಯತ್ನ ಮಾಡುತ್ತಿದ್ದೇವೆ. ಆರೋಪಿಯನ್ನು ನ್ಯಾಯಾಲಯಕ್ಕೆ ತರಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಕಾನ್ಪುರ ಆಸ್ಪತ್ರೆಯಲ್ಲಿ ಮಹಿಳೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈಗ ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ತಿಳಿಸಿದರು.