Tag: luck

  • ‘ಲಕ್’ ಚಿತ್ರದಲ್ಲಿ ನಟಿಸುತ್ತಿಲ್ಲ: ಡಾಲಿ ಧನಂಜಯ್

    ‘ಲಕ್’ ಚಿತ್ರದಲ್ಲಿ ನಟಿಸುತ್ತಿಲ್ಲ: ಡಾಲಿ ಧನಂಜಯ್

    ಕ್ಯಾರಾವಾನ್ ಸ್ಟಾರ್ ಮಂಜು (Caravan star Manju) ಅಭಿನಯದ ‘ಲಕ್’ (Luck) ಚಿತ್ರದಲ್ಲಿ ಡಾಲಿ ಧನಂಜಯ್ (Dhananjay) ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ತಮ್ಮ  ಚಿತ್ರದಲ್ಲಿ ಧನಂಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸ್ವತಃ ಚಿತ್ರ ತಂಡದವರೇ ಘೋಷಿಸಿದ್ದರು. ಆದರೆ, ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಧನಂಜಯ್ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಧನಂಜಯ್, ‘ಲಕ್’ ಚಿತ್ರದ ನಾಯಕ ಮತ್ತು ನಿರ್ಮಾಪಕ ಸ್ಮೈಲ್ ಮಂಜು ನನಗೆ ಬಹಳ ಒಳ್ಳೆಯ ಸ್ನೇಹಿತರು. ಅವರ ಪ್ರಯತ್ನಗಳಿಗೆ ನನ್ನ ಬೆಂಬಲ ಇರುತ್ತದೆ. ಅದರಂತೆ, ‘ಲಕ್’ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡು, ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟದ್ದೇನೆ. ಆದರೆ, ಕಾರಣಾಂತರಗಳಿಂದ ನನಗೆ ಅವರ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು ಚಿತ್ರತಂಡದವರಿಗೂ ಮನವರಿಕೆ ಮಾಡಿಕೊಟ್ಟಿದ್ದೇನೆ. ಹಾಗಾಗಿ, ಲಕ್ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ ಎಂದು ಈ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ’ ಎನ್ನುತ್ತಾರೆ ಧನಂಜಯ್. ಇದನ್ನೂ ಓದಿ:ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ‘ಸೀತಾರಾಮಂ’ ನಟಿ

    ‘ಲಕ್’ ಚಿತ್ರವನ್ನು ಹರೀಶ್ (Harish) ನಿರ್ದೇಶನ ಮಾಡುತ್ತಿದ್ದು, ವಿಜಯ್ ಹರಿತ್ಸ ಸಂಗೀತ ಸಂಯೋಜಿಸುತ್ತಿದ್ದಾರೆ. ಮೊನ್ನೆಯಷ್ಟೇ ಸಿನಿಮಾದ ಪೋಸ್ಟರ್ ರಿಲೀಸ್ ಆಗಿತ್ತು. ಅಂದು ಧನಂಜಯ್ ಚಿತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಇದೀಗ ಆ ಚಿತ್ರದಲ್ಲಿ ನಟಿಸುತ್ತಿಲ್ಲವೆಂದು ಹೇಳಿಕೆ ನೀಡಿದ್ದಾರೆ.

  • ಕ್ಯಾರಾವ್ಯಾನ್ ಡ್ರೈವರ್ ಇದೀಗ ಹೀರೋ : ‘ಲಕ್’ ಮೇಲೆ ಲಕ್

    ಕ್ಯಾರಾವ್ಯಾನ್ ಡ್ರೈವರ್ ಇದೀಗ ಹೀರೋ : ‘ಲಕ್’ ಮೇಲೆ ಲಕ್

    ಜೀವನದಲ್ಲಿ ಯಾರಿಗೆ ಯಾವಾಗ ‘ಲಕ್’ (Luck)  ಬರತ್ತೆ ಹೇಳಲಿಕ್ಕೆ ಆಗಲ್ಲ. ಕಳೆದ ಒಂಭತ್ತು ವರ್ಷಗಳಿಂದ ಕ್ಯಾರಾವ್ಯಾನ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಕ್ಯಾರಾವ್ಯಾನ್ ಸ್ಟಾರ್ ಸ್ಮೈಲ್ ಮಂಜು (Smile Manju) ‘ಲಕ್’ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ‘90 ಕುಡಿ ಮಗ ಪಲ್ಟಿ ಹೊಡಿ’ ಎಂಬ ಹಾಡಿನ ಲಿರಿಕಲ್ ವಿಡಿಯೋ (Lyrical Song) ಬಿಡುಗಡೆಯಾಯಿತು. ಅಪ್ಪಿ ಹಾಗೂ ಹರೀಶ್ ಬರೆದಿರುವ ಈ ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ. ವಿಜಯ್ ಹರಿತ್ಸ (Vijay Haritsa) ಸಂಗೀತ ನೀಡಿದ್ದಾರೆ. ಈ ಚಿತ್ರದ ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.

    ಚಿತ್ರಕ್ಕೆ ಮೊದಲೊಬ್ಬ ನಿರ್ದೇಶಕರಿದ್ದರು. ಹಾಗೆ ನಾಯಕರೂ ಬೇರೆಯೇ ಇದ್ದರು. ಅನಿವಾರ್ಯ ಕಾರಣದಿಂದ ಅವರು ಚಿತ್ರದಿಂದ ದೂರವಾದಾಗ ಈ ಚಿತ್ರಕ್ಕೆ ನಾನು ನಿರ್ದೇಶಕನಾದೆ. ಮಂಜು ನಾಯಕನಾದರು. ನನ್ನ ಜೀವದಲ್ಲೇ ನಡೆದಿರುವ  ಘಟನೆಯನ್ನು ಸಿನಿಮಾ ರೂಪದಲ್ಲಿ ಆಚೆ ತರುತ್ತಿದ್ದೇನೆ‌. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಡಾಲಿ ಧನಂಜಯ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ. ಇದು ಒಂದು ದಿನ, ಅದರಲ್ಲೂ ಕೆಲವೇ ಗಂಟೆಗಳಲ್ಲಿ ನಡೆಯುವ ಕಥೆಯಾಗಿದೆ. ಪದ್ಮಜಾರಾವ್, ಕಡ್ಡಿಪುಡಿ ಚಂದ್ರು ಮುಂತಾದವರು ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ:ಛತ್ರಪತಿ ಶಿವಾಜಿಯ ಸೊಸೆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಫೈನಲ್?‌

    ನಾನು ಒಂಭತ್ತು ವರ್ಷಗಳಿಂದ ಕ್ಯಾರಾವ್ಯಾನ್ ಓಡಿಸುತ್ತಿದ್ದೇನೆ. ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಅವರ ಕ್ಯಾರಾವ್ಯಾನ್ ಗೆ ನಾನೇ ಚಾಲಕ. ಸಿನಿಮಾ ಮಾಡುವ ಆಸೆಯಿತ್ತು. ದುಡಿದ ಹಣ ಹಾಗೂ ಜಮೀನು ಮಾರಿದ ಹಣ ಎರಡೂ ಸೇರಿಸಿ ಈ ಚಿತ್ರ ನಿರ್ಮಾಣ ಮಾಡಿದ್ದೇನೆ ಜೊತೆಗೆ ನಾಯಕನಾಗೂ ಅಭಿನಯಿಸಿದ್ದೇನೆ. ನನ್ನ ಮೇಲೆ ಪ್ರೀತಿಯಿಟ್ಟು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ಸೇರಿದಂತೆ ಚಿತ್ರರಂಗದ ಅನೇಕ ನಾಯಕರು ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ‌. ಚಿತ್ರತಂಡದ ಸಹಕಾರಕ್ಕೆ ಧನ್ಯವಾದ ಎಂದರು ನಾಯಕ ಹಾಗೂ ನಿರ್ಮಾಪಕ ಕ್ಯಾರಾವ್ಯಾನ್ ಸ್ಟಾರ್ ಸ್ಮೈಲ್ ಮಂಜು.

    ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿರುವ ರೇಣು ಹಾಡು ಬರೆದಿರುವ ಅಪ್ಪಿ ಹಾಗೂ ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಚಿತ್ರದ ಕುರಿತು ಮಾತನಾಡಿದರು.

  • ತುಂಬಾ ಜನ ನನ್ನ ಮೇಲೆ ದೃಷ್ಟಿ ಹಾಕಿದ್ದಾರೆ ಅಂದ ಶಮಂತ್

    ತುಂಬಾ ಜನ ನನ್ನ ಮೇಲೆ ದೃಷ್ಟಿ ಹಾಕಿದ್ದಾರೆ ಅಂದ ಶಮಂತ್

    ಬೆಂಗಳೂರು: ಇಷ್ಟು ದಿನ ಬಿಗ್‍ಬಾಸ್ ಮನೆಯಲ್ಲಿ ಹಾಡುಗಳನ್ನು ಹೇಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಬ್ರೋ ಗೌಡ ಶಮಂತ್ ನನ್ನ ಮೇಲೆ ತುಂಬಾ ಜನ ದೃಷ್ಟಿ ಹಾಕಿರುವುದಾಗಿ ಹೇಳಿಕೊಂಡಿದ್ದಾರೆ.

    ವೇದಿಕೆ ಮೇಲೆ ಯೆಲ್ಲೋ ಆ್ಯಂಡ್ ಯೆಲ್ಲೋ ಡ್ರೆಸ್‍ನಲ್ಲಿ ಎಂಟ್ರಿ ಕೊಟ್ಟ ಶಮಂತ್, ಬರುತ್ತಿದ್ದಂತೆ ತುಂಬಾ ಜನ ನನ್ನ ಮೆಲೆ ದೃಷ್ಟಿಂ ಹಾಕಿರುವುದು ಗೊತ್ತಾಗಿದೆ. ಹೀಗಾಗಿ ದೃಷ್ಟಿ ಹೋಗಬೇಕೆಂದು ಈ ಕಲರ್ ಡ್ರೆಸ್ ಚೂಸ್ ಮಾಡಿಕೊಂಡು ಹಾಕಿಕೊಂಡು ಬಂದೆ ಎಂದಿದ್ದಾರೆ. ಆಗ ಸುದೀಪ್ ನನಗೆ ಗೊತ್ತಿರುವಂತೆ ದೃಷ್ಟಿ ಹೋಗುವುದಕ್ಕೆ ಯೂಸ್ ಮಾಡುವುದು ಬ್ಲಾಕ್, ಇದು ಯಾವುದು ಹೊಸ ಕಲರ್, ಹಲೋ ಲಕ್ಕಿ ಸ್ಟಾರ್ ಸ್ವಲ್ಪ ವಿವರಣೆ ಕೊಡಿ ಅರ್ಥವಾಗುತ್ತಿಲ್ಲ ಎಂದು ಕೇಳಿದ್ದಾರೆ.

    ಇದಕ್ಕೆ ಇರೋ ಬರುವ ದೃಷ್ಟಿ ಎಲ್ಲಾ ಕಳೆಯಲಿ ಎಂದು ಬಟ್ಟೆ ಧರಿಸಿದೆ ಎಂದು ಶಮಂತ್ ಹೇಳಿದಾಗ, ನಿಧಿ ಸುಬ್ಬಯ್ಯ ಜಾತ್ರೆಯಂತಿದೆ ಎಂದು ಅಣುಕಿಸುತ್ತಾರೆ. ಹೌದು ಯಾವ ವಿಚಾರಕ್ಕೆ ನಿಮ್ಮ ಮೇಲೆ ದೃಷ್ಟಿ ಬಿದ್ದರುವುದು ಎಂದು ಸುದೀಪ್ ಕೇಳಿದಾಗ, ಶಮಂತ್ ಲಕ್ ವಿಚಾರಕ್ಕೆ ಎಂದು ಉತ್ತರಿಸುತ್ತಾರೆ. ಹಾ ಲಕ್ ವಿಚಾರದಲ್ಲಿ ಬಿದ್ದಿದೆ ಎಂಬುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಈಗಲೂ ನಿಮಗೆ ಆ ಲಕ್ ಇದ್ಯಾ ಅಂತ ಪ್ರಶ್ನಿಸುತ್ತಾರೆ.

    ಲಕ್ ನನ್ನ ಹಾರ್ಡ್ ವರ್ಕ್‍ಗೆ ಕನ್ವರ್ಟ್ ಆಗಿದೆ. ಇನ್ನೂ ಒಂದರಿಂದ ಹತ್ತ ಅಂಕಗಳಲ್ಲಿ ನನಗೆ ಇರುವ ಲಕ್‍ಗೆ 8 ಅಂಕ ನೀಡಬಹುದು. ಆದರೆ ಲಾಸ್ಟ್ ನಲ್ಲಿ ಲಕ್ ಹಾಗೂ ಹಾರ್ಡ್ ವರ್ಕ್ ಎರಡು ಬ್ಯಾಲೆನ್ಸ್ ಆಯಿತು. ಎರಡಕ್ಕೂ 5-5 ಅಂಕಗಳನ್ನು ನೀಡಬಹುದು ಎಂದು ಶಮಂತ್ ಹೇಳಿದ್ದಾರೆ. ಇದನ್ನೂ ಓದಿ:ಐ ವಾಂಟೂ ಮ್ಯಾರಿ ಯೂ ಅಂದವರ ಮೇಲೆ ನಿಧಿ ಕೆಂಡ

  • ಸುರಕ್ಷಿತ ಪ್ರಯಾಣಕ್ಕೆ ವಿಮಾನದ ಎಂಜಿನ್ ಒಳಗಡೆ ನಾಣ್ಯ ಎಸೆದ ವೃದ್ಧೆ.. ಮುಂದೆ ಏನಾಯ್ತು ಓದಿ

    ಸುರಕ್ಷಿತ ಪ್ರಯಾಣಕ್ಕೆ ವಿಮಾನದ ಎಂಜಿನ್ ಒಳಗಡೆ ನಾಣ್ಯ ಎಸೆದ ವೃದ್ಧೆ.. ಮುಂದೆ ಏನಾಯ್ತು ಓದಿ

    ಬೀಜಿಂಗ್: 80 ವರ್ಷದ ವೃದ್ಧೆಯೊಬ್ಬರು ಅದೃಷ್ಟ ಬರಲಿ, ಒಳ್ಳೆದಾಗಲಿ ಅಂತ ಮಾಡಿದ ಒಂದು ಚಿಕ್ಕ ಕೆಲಸ ವಿಮಾನದ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದ ಘಟನೆ ಚೀನಾದಲ್ಲಿ ನಡೆದಿದೆ. ಇಲ್ಲಿನ ಶಾಂಘೈ ಪುಡೊಂಗ್ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ವೃದ್ಧೆ ಎಂಜಿನ್‍ನೊಳಗೆ ನಾಣ್ಯಗಳನ್ನ ಹಾಕಿದ್ರಿಂದ ಚೀನಾ ಸದರ್ನ್ ಏರ್‍ಲೈನ್ಸ್ ಫ್ಲೈಟ್ ತಡವಾಗಿ ಹೊರಡಬೇಕಾಯ್ತು. ಅಷ್ಟೇ ಅಲ್ಲ ವಿಮಾನದ ಎಂಜಿನ್‍ನಿಂದ ನಾಣ್ಯಗಳನ್ನು ಹೊರತೆಗೆಯೋಕೆ ಹರಸಾಹಸಪಡಬೇಕಾಯ್ತು.

    ಪ್ರಯಾಣಿಕರು ವಿಮಾನವೇರುವಾಗ ವೃದ್ಧೆಯೊಬ್ಬರು ಮೆಟ್ಟಿಲುಗಳ ಮೇಲೆ ನಿಂತು ಎಂಜಿನ್‍ನೊಳಗೆ ನಾಣ್ಯ ಎಸೆಯೋದನ್ನ ನೋಡಿ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ರು. ವೃದ್ಧೆ ತನ್ನ ಗಂಡ, ಮಗಳು ಹಾಗೂ ಅಳಿಯನೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ವೃದ್ಧೆ ಎಸೆದ ನಾಣ್ಯಗಳಲ್ಲಿ 8 ನಾಣ್ಯ ಬೇರೆ ಕಡೆ ಬಿದ್ದಿದ್ದು ಒಂದು ಮಾತ್ರ ಎಂಜಿನ್‍ನೊಳಗೆ ಹೋಗಿತ್ತು.

    ವಿಷಯ ತಿಳಿದ ನಂತರ ವಿಮಾನದಲ್ಲಿದ್ದ ಸುಮಾರು 150 ಪ್ರಯಾಣಿಕರನ್ನ ಕೆಳಗಿಳಿಸಲಾಯ್ತು. ವಿಮಾನದ ಮೆಕ್ಯಾನಿಕ್‍ಗಳು ಎಂಜಿನ್‍ನಲ್ಲಿನ ಒಂದು ನಾಣ್ಯ ಸೇರಿದಂತೆ ಒಟ್ಟು 9 ನಾಣ್ಯಗಳನ್ನ ಹೊರತೆಗೆದಿದ್ದಾರೆ. ಒಂದು ವೇಳೆ ಲೋಹದ ನಾಣ್ಯವನ್ನ ಎಂಜಿನ್ ಒಳಗೆಳೆದುಕೊಂಡಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು ಎಂದು ಹೇಳಲಾಗಿದೆ.

    ಘಟನೆ ಹಿನ್ನೆಲೆಯಲ್ಲಿ ವೃದ್ಧೆಯನ್ನ ವಿಮಾನ ನಿಲ್ದಾಣದ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಯಾಣ ಸುರಕ್ಷಿತವಾಗಿರಲಿ ಎಂದು ನಾಣ್ಯ ಎಸೆದಿದ್ದಾಗಿ ವೃದ್ಧೆ ಹೇಳಿದ್ದಾರೆ. ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ 5 ಗಂಟೆ ತಡವಾಗಿ ಟೇಕ್‍ಆಫ್ ಆಗಿದೆ.

    ಈ ಸುದ್ದಿ ಚೀನಾದ ಸಾಮಾಜಿಕ ಜಾಲತಾಣವಾದ ವೀಬೋದಲ್ಲಿ ಟ್ರೆಂಡಿಂಗ್ ಆಗಿದ್ದು, ಅಜ್ಜಿ.. ನಾಣ್ಯ ಎಸೆಯೋಕೆ ಇದೇನು ಆಸೆ ಈಡೇರಿಸೋ ಆಮೆಯ ಕೊಳ ಎಂದುಕೊಂಡ್ರಾ ಎಂದು ಕಮೆಂಟ್ ಮಾಡಿದ್ದಾರೆ.

  • ಅಂದು ಬೇಡಿಕೆಯ ಆ್ಯಕ್ಟರ್ ಈಗ ಪೈಂಟರ್: ಇದು ಕಲಾವಿದನ ನೋವಿನ ಕಥೆ

    ಅಂದು ಬೇಡಿಕೆಯ ಆ್ಯಕ್ಟರ್ ಈಗ ಪೈಂಟರ್: ಇದು ಕಲಾವಿದನ ನೋವಿನ ಕಥೆ

    ಲಾಹೋರ್: ಪ್ರಸಿದ್ಧರಾಗಲು ಬಯಸುವ ಜನರಿಗೆ ಹಣ ಮಹತ್ತರ ಪ್ರೇರಣೆ ನೀಡುತ್ತದೆ ಎಂದರೆ ತಪ್ಪಾಗಲಾರದು. ಹಣ ಕಂಡರೆ ಹೆಣವೂ ಬಾಯಿಬಿಡುತ್ತದೆ ಎಂಬ ನಾಣ್ಣುಡಿಯೇ ಪ್ರಚಲಿತದಲ್ಲಿರುವುದು ಈ ಕಾರಣದಿಂದಲೇ. ಹಣ ಗಳಿಸಲು ಜನರು ಯಾವ ಹಾದಿಯಲ್ಲೂ ತುಳಿಯಲು ಹೇಸುವುದಿಲ್ಲ. ಕೆಲವರು ಇಂಥದ್ದೇ ಉದ್ಯೋಗ ಮಾಡಿಯೇ ಹಣ ಗಳಿಸುತ್ತೇನೆ ಎನ್ನುವ ಒಳ್ಳೆಯವರೂ ಇದ್ದಾರೆ. ಕೆಲವೊಮ್ಮೆ ದುರಾದೃಷ್ಟ ಕೈ ಹಿಡಿದಿದ್ದರೆ ಉನ್ನತ ಸ್ಥಾನದಲ್ಲಿದ್ದವರೂ ತಳಮಟ್ಟಕ್ಕೆ ತಲುಪುತ್ತಾರೆ ಎನ್ನುವುದಕ್ಕೆ ಈ ಪಾಕಿಸ್ತಾನಿ ನಟನ ಉದಾಹರಣೆ ಉತ್ತಮವಾಗಿದೆ.

    ಪ್ರಪಂಚದಾದ್ಯಂತ ಮನರಂಜನಾ ಉದ್ಯಮದಲ್ಲಿ ಮಿಂಚಿ ಸ್ಟಾರ್ ಗಿರಿಯನ್ನು ಪಡೆದುಕೊಂಡಿದ್ದ ಈ ನಟ ಅದನ್ನು ಪಡೆದುಕೊಂಡಿರುವಾಗಲೇ ಕಳೆದುಕೊಂಡ. ಈ ನಟನೇ ಶಾಹಿದ್ ನಸೀಬ್, ಕೆಲಸದ ಕೊರತೆಯಿಂದಾಗಿ ಪೈಂಟರ್ ವೃತ್ತಿಗೆ ಇಳಿದಿದ್ದಾರೆ.

    ಇತ್ತೀಚಿನ ಸಿನಿಮಾ ನಾಟಕ ವಿಸಿಲ್ ನಲ್ಲಿ ಖಳ ನಟನಾಗಿದ್ದ ಇವರು ಹಲವಾರು ದೂರದರ್ಶನ ಧಾರಾವಾಹಿಗಳಾದ ದುಲ್ಲಾರಿ, ಜಬ್ ಉಸೆ ಮೊಹಬ್ಬತ್ ಹುಯಿ ಮತ್ತು ಇಲ್ಟಾಜಾನಲ್ಲಿ ನಟಿಸಿದ್ದಾರೆ. ಆಗ ಅದೃಷ್ಟವಿತ್ತು ಈಗ ದುರಾದೃಷ್ಟ ಕೈ ಹಿಡಿದಿದ್ದರಿಂದ ಕಾರ್ಮಿಕನಾಗಿದ್ದಾರೆ.

    “ನಾನು ಎರಡು ನಾಟಕ ಧಾರವಾಹಿ ಮತ್ತು ಟೆಲಿಫಿಲ್ಮ್ ಗಳಲ್ಲಿ ಉತ್ತಮ ಪಾತ್ರವನ್ನು ಹೊಂದಿದ್ದೆನೆ. ಆದರೆ ಕಳೆದ ಹತ್ತು ವರ್ಷಗಳು ನನಗೆ ತುಂಬಾ ಕಠಿಣವಾದ ದಿನಗಳಾಗಿವೆ. ದಿ ವಿಸಿಲ್ ನನಗೆ ದೊಡ್ಡ ಅವಕಾಶವನ್ನು ಕೊಟ್ಟಿದೆ ಹಾಗೂ ಅವಕಾಶಗಳ ಬಾಗಿಲನ್ನು ತೆರೆಸಿದೆ. ಆದರೆ ಈಗ ದುರಾದೃಷ್ಟವಶಾತ್ ಯಾವ ಪಾತ್ರಗಳೂ ದೊರಕುತ್ತಿಲ್ಲ. ನಾನು ಹಣ ಗಳಿಸಲು ಪೈಂಟರ್ ಆಗಿದ್ದೇನೆ” ಎಂದು ಅವರು ಹೇಳಿದರು.

    ನಾನು ನಟನಾಗಲು ಆಶಿಸಿ ಹತ್ತು ವರ್ಷಗಳ ಹಿಂದೆ ನನ್ನ ಗ್ರಾಮವನ್ನು ಬಿಟ್ಟೆ. ಅಲ್ಲಿಂದೀಚೆಗೆ ನಾನು ಇಸ್ಲಾಮಾಬಾದ್, ಕರಾಚಿ, ಪೇಶಾವರ್‍ಗಳಲ್ಲಿ ಅಲೆದಾಡಿದ್ದೇನೆ ಈಗ ಲಾಹೋರ್‍ನಲ್ಲಿ ಕೆಲಸ ಹುಡುಕುತ್ತಿದ್ದೇನೆ. ಆದರೆ ಅದೃಷ್ಟ ನನ್ನ ಕಡೆಗಿಲ್ಲ” ಎಂದು ಶಾಹಿದ್ ಮುಂದುವರಿಸಿದರು. “ನಾನೀಗ ನನ್ನ ಗ್ರಾಮಕ್ಕೆ ಮರಳಲು ಸಾಧ್ಯವಿಲ್ಲ ಏಕೆಂದರೆ ಎಲ್ಲರೂ ನನ್ನ ವೈಫಲ್ಯವನ್ನು ನೋಡಿ ನಗುತ್ತಿದ್ದಾರೆ. ನನ್ನ ಜೊತೆ ಕೆಲಸ ಮಾಡುವವರೂ ಸಹ ‘ಶಾಹಿದ್ ರಂಗ್ವಾಲಾ’ ನಂತಹ ಹೆಸರುಗಳ ಮೂಲಕ ನನ್ನನ್ನು ಹಂಗಿಸುತ್ತಿದ್ದಾರೆ ಇದರಿಂದ ನನಗೆ ತುಂಬಾ ದುಖಃವಾಗಿದೆ” ಎಂದು ಬೇಸರ ಹಂಚಿದ್ದಾರೆ.

    ಅನೇಕ ನಿರ್ಮಾಪಕರು ಕೆಲಸಕ್ಕೆ ಬದಲಾಗಿ ತಮ್ಮ ಮನೆಗಳಲ್ಲಿ ಚಿತ್ರಿಸಲು ಬಳಸಿಕೊಂಡಿದ್ದಾರೆ. ಇಂದು ಮನರಂಜನಾ ಮಾಧ್ಯಮದಲ್ಲಿ ಯಾರೊಂದಿಗೂ ನಿಜವಾದ ಸಂಬಂಧ ಹೊಂದಲು ಸಾಧ್ಯವಿಲ್ಲ. ನಾನು ಕಳಪೆ ಕಲಾವಿದನಾಗಿದ್ದರಿಂದ ವಿಸಿಲ್ ನಿರ್ಮಾಪಕರು ಚಿತ್ರದ ಕ್ರೆಡಿಟ್‍ಗಳಲ್ಲಿ ನನ್ನ ಹೆಸರನ್ನು ಸೇರಿಸಿಲ್ಲ. ಆದರೆ ಇಡೀ ಸ್ಕ್ರಿಪ್ಟ್ ನ್ನು ನಾನು ಬರೆದಿದ್ದೇನೆ” ಎಂದು ಅವರು ನೋವು ಹಂಚಿಕೊಂಡರು.

    ಈಗ ದಿನವೂ ರಾತ್ರಿ ನಾನು ದುಖಿಃಸುತ್ತಿದ್ದೇನೆ. ನನ್ನ ಸಂಪಾದನೆ ಈಗ ಕೇವಲ 20 ಸಾವಿರ ರೂ.. ಇದರಲ್ಲಿಯೂ ಸ್ವಲ್ಪ ಹಣವನ್ನು ನಾನು ಉಳಿಸಲು ಪ್ರಯತ್ನಿಸುತಿದ್ದೇನೆ. ಈ ಹಣದಲ್ಲಿ ನನ್ನ ಹಾಡುಗಳನ್ನು ಬಿಡುಗಡೆ ಗೊಳಿಸುವದು ನನ್ನ ಉದ್ದೇಶ. ನಾನು ಕೆಲವು ಸಂಗೀತಗಾರರನ್ನು ಭೇಟಿಯಾಗಿದ್ದೇನೆ ಅವರು ಟ್ರಾಕ್ ಬಿಡುಗಡೆಗೊಳಿಸಲು 10 ಸಾವಿರ ರೂ. ಕೇಳುತ್ತಿದ್ದಾರೆ. ಇನ್ನು ಹೆಚ್ಚು ಹಣ ಗಳಿಸುವುದು ನನ್ನ ಉದ್ದೇಶ ಎಂದು ತಿಳಿಸಿದರು.

    ಪೈಟಿಂಗ್ ಜೊತೆಗೆ ಶಾಹಿದ್ ಕೆಲವು ಖಾಸಗಿ ಕಾರ್ಯಕ್ರಮಗಳನ್ನು ಕೂಡ ನಿರ್ವಹಿಸುತ್ತಿದ್ದಾರೆ. “ನಾನು ದಿನಕ್ಕೆ ಒಂದು ಬಾರಿ ಮಾತ್ರ ತಿನ್ನುತ್ತೇನೆ. ಹೆಚ್ಚು ಹಣ ನೀಡುವ ಯಾವುದೇ ಕೆಲಸವನ್ನು ನಾನೀಗ ಮಾಡುತ್ತಿಲ್ಲ. ನನ್ನ ರಾತ್ರಿಗಳನ್ನು ನಾನು ರಸ್ತೆಗಳಲ್ಲಿ ಕಳೆಯುತ್ತಿದ್ದೇನೆ. ಈ ದಿನಗಳು ನನಗೆ ತುಂಬಾ ಕಠಿಣವಾಗಿವೆ ಆದರೆ ಲಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಇಂತಹ ದಿನಗಳನ್ನು ಅನೇಕರು ಎದುರಿಸಿದ್ದಾರೆ ಎಂದು ನನಗೆ ಗೊತ್ತು” ಎಂದು ಹೇಳಿದರು.