Tag: love

  • ಅಂತರ್ಜಾತಿ ಮದುವೆಯಾಗಿದ್ದಕ್ಕೆ ಸ್ವಂತ ಮಗಳನ್ನೇ ಕೊಡಲಿಯಿಂದ ಕೊಂದ ತಂದೆ

    ಅಂತರ್ಜಾತಿ ಮದುವೆಯಾಗಿದ್ದಕ್ಕೆ ಸ್ವಂತ ಮಗಳನ್ನೇ ಕೊಡಲಿಯಿಂದ ಕೊಂದ ತಂದೆ

    ಬೆಳಗಾವಿ: ಅಂತರ್ಜಾತಿ ವಿವಾಹವಾಗಿದ್ದಕ್ಕಾಗಿ ತಂದೆಯೋರ್ವ ತನ್ನ 21ರ ಹರೆಯದ ಪುತ್ರಿಯನ್ನು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಬುಲ್ಡಾನಾ ಜಿಲ್ಲೆಯ ನಿಮ್ಖೆಡಾ ಗ್ರಾಮದಲ್ಲಿ ನಡೆದಿದೆ.

    ಮನೀಷಾ ಹಿಂಗನೆ ಕೊಲೆಯಾದ ದುರ್ದೈವಿ. ಬಾಬು ಶಿವಾರೆ ತನ್ನ ಪುತ್ರಿಯನ್ನು ಬುಧವಾರ ಕೊಡಲಿಯಿಂದ ಕೊಚ್ಚಿ ಹತ್ಯಗೈದಿದ್ದಾನೆ. ಮನೀಷಾ ಬೇರೆ ಜಾತಿಗೆ ಸೇರಿದ ಗಣೇಶ್ ಎಂಬವರನ್ನು ಪ್ರೀತಿಸುತ್ತಿದ್ದರು. ಆದರೆ ಬಾಬು ಮಗಳ ಮದುವೆಯನ್ನು ಏಪ್ರಿಲ್ 20 ರಂದು ಬೇರೊಬ್ಬ ಯುವಕನೊಂದಿಗೆ ನಿಶ್ಚಯ ಮಾಡಿದ್ದರು.

    ಮನೀಷಾ ಮತ್ತು ಗಣೇಶ್ ಮನೆಯಿಂದ ಪರಾರಿಯಾಗಿ ಮಾರ್ಚ್ 23ರಂದು ಮದುವೆಯಾಗಿದ್ದರು. ಕೆಲವು ದಿನಗಳ ಬಳಿಕ ಗ್ರಾಮದಲ್ಲಿ ಎಲ್ಲಾ ಸರಿಯಾಗಿರಬಹುದು ಎಂದು ಭಾವಿಸಿದ ದಂಪತಿ ಗ್ರಾಮಕ್ಕೆ ವಾಪಸಾಗಿದ್ದಾರೆ. ಔಷಧಿಗಳ ಮಾರಾಟ ಪ್ರತಿನಿಧಿಯಾಗಿರುವ ಗಣೇಶ್ ಬುಧವಾರ ಕರ್ತವ್ಯಕ್ಕೆ ತೆರಳಿದ್ದು, ಆತನ ಪೋಷಕರು ಮನೆಯಲ್ಲಿರಲಿಲ್ಲ.

    ಈ ವೇಳೆ ಮಗಳ ಮನೆಗೆ ಬಂದ ಬಾಬು ಮಗಳನ್ನು ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಈ ಸಂಬಂಧ ಸತಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಸಾವಿಗೂ ಮುನ್ನ ಯಾರು ನಿನನ್ನನ್ನ ಯಾರು ಕೊಂದಿದ್ದ, ನಿಮ್ಮ ತಂದೇನಾ ಅಂತಾ ಕೇಳಿದ್ದಕ್ಕೆ ಹೌದು ಅಂತಾ ಯುವತಿ ತಲೆ ಅಲ್ಲಾಡಿಸುವ ದೃಶ್ಯ ಎಲ್ಲರ ಮನಕಲಕುವಂತಿತ್ತು.

     

    https://www.youtube.com/watch?v=gbw1Nt1lMhg

     

  • ಹಿಂದೂ ಯುವತಿಯನ್ನ ಪ್ರೀತ್ಸಿದ್ದಕ್ಕೆ ಕಂಬಕ್ಕೆ ಕಟ್ಟಿ ಥಳಿಸಿ ಮುಸ್ಲಿಂ ಯುವಕನ ಹತ್ಯೆ

    ಹಿಂದೂ ಯುವತಿಯನ್ನ ಪ್ರೀತ್ಸಿದ್ದಕ್ಕೆ ಕಂಬಕ್ಕೆ ಕಟ್ಟಿ ಥಳಿಸಿ ಮುಸ್ಲಿಂ ಯುವಕನ ಹತ್ಯೆ

    ರಾಂಚಿ: 19 ವರ್ಷದ ಯುವಕನೊಬ್ಬನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪರಿಣಾಮ ಆತ ಸಾವನ್ನಪ್ಪಿರೋ ಘಟನೆ ಜಾರ್ಖಂಡ್‍ನ ಗುಮ್ಲಾ ಜಿಲ್ಲೆಯಲ್ಲಿ ನಡೆದಿದೆ. 15 ವರ್ಷದ ಹಿಂದೂ ಹುಡುಗಿಯನ್ನು ಪ್ರೀತಿಸಿದ್ದೇ ಯುವಕನ ಮೇಲಿನ ಹಲ್ಲೆಗೆ ಕಾರಣ ಎಂದು ಪೊಲೀಸರು ಹೇಳಿದ್ದು, ಘಟನೆ ಸಂಬಂಧ ಮೂವರನ್ನು ಬಂಧಿಸಿರುವುದಾಗಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಮೊಹಮ್ಮದ್ ಶಾಲಿಕ್ ಹಲ್ಲೆಗೊಳಗಾಗಿ ಮೃತಪಟ್ಟ ದುದೈರ್ವಿ. ಶಾಲಿಕ್ ಹಿಂದೂ ಧರ್ಮದ ತನ್ನ ಪ್ರೇಯಸಿಯೊಂದಿಗೆ ಕಾಣಿಸಿಕೊಂಡ ಕಾರಣ ಆತನನ್ನು ಸ್ಥಳೀಯರು ಥಳಿಸಿದ್ದರು. ಆದ್ರೆ ಇದು ಪ್ರೀತಿಯನ್ನ ವಿರೋಧಿಸಿ ನಡೆದ ಹಲ್ಲೆ. ಕೋಮು ದ್ವೇಷದಿಂದ ನಡೆದುದಲ್ಲ ಎಂದು ಎಸ್‍ಪಿ ಚಂದನ್ ಕುಮಾರ್ ಜಾ ಹೇಳಿಕೆ ನೀಡಿದ್ದಾರೆ.

    ಹುಡುಗಿಯನ್ನು ವಿಚಾರಣೆಗೆ ಒಳಪಡಿಸಿದಾಗ ನೀಡಿದ ಹೇಳಿಕೆಯ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಹುಡುಗಿಯ ಕುಟುಂಬಸ್ಥರು ಆಕೆಯ ಪ್ರೀತಿಯನ್ನ ವಿರೋಧಿಸಿದ್ರು. ಆಕೆಯಿಂದ ದೂರವಿರುವಂತೆ ಯುವಕನಿಗೆ ಎಚ್ಚರಿಕೆ ನೀಡಿದ್ರು. ಆದ್ರೆ ಶಾಲಿಕ್ ಅವರ ಮಾತುಗಳನ್ನ ಕೇಳದೆ ಕಳೆದ ಬುಧವಾರ ರಾತ್ರಿ ಹುಡುಗಿಯನ್ನ ಮನೆಯ ಬಳಿ ಡ್ರಾಪ್ ಮಾಡಲು ಬಂದಿದ್ದ. ಶಾಲಿಕ್ ಹಾಗೂ ಹುಡುಗಿಯನ್ನು ಒಟ್ಟಿಗೆ ನೋಡಿದ ಸ್ಥಳೀಯರು ಆತನನ್ನು ಹುಡುಗಿಯ ಎದುರೇ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಅಂತ ಹೇಳಿದ್ದಾರೆ.

    ತಡರಾತ್ರಿಯಾದ್ರೂ ಶಾಲಿಕ್ ಮನೆಗೆ ಬರದ ಕಾರಣ ಆತನ ಕುಟುಂಬಸ್ಥರು ಸ್ನೇಹಿರನ್ನು ವಿಚಾರಿಸಿದ್ದಾರೆ. ನಂತರ ಗಂಭಿರ ಸ್ಥಿತಿಯಲ್ಲಿದ್ದ ಶಾಲಿಕ್‍ನನ್ನು ಗುಮ್ಲಾದ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದ್ರೆ ತೀವ್ರವಾಗಿ ಗಾಯಗೊಂಡ ಪರಿಣಾಮ ಶಾಲಿಕ್ ಗುರುವಾರದಂದು ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿ ಚಂದನ್ ಕುಮಾರ್ ತಿಳಿಸಿದ್ದಾರೆ.

  • ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ- ಪ್ರೇಯಸಿಯ ಕಣ್ಮುಂದೆಯೇ ಪ್ರೇಮಿಯ ಕೊಲೆ!

    ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ- ಪ್ರೇಯಸಿಯ ಕಣ್ಮುಂದೆಯೇ ಪ್ರೇಮಿಯ ಕೊಲೆ!

    ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಯುವಕನ ದೇಹ ಪತ್ತೆ ಬಳಿಕ ಘಟನೆ ಬೆಳಕಿಗೆ ಬಂದ್ರೂ ಪ್ರೇಮಿ ನಾಗರಾಜ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ನಂತರ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ.

    ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದ ಅನ್ಯ ಕೋಮಿನ 20 ವರ್ಷದ ಯುವತಿ ಹಾಗೂ ಚಿತ್ರದುರ್ಗ ಮೂಲದ 25 ವರ್ಷದ ಯುವಕ ನಾಗರಾಜ ಕೊಲೆಯಾದ ಪ್ರೇಮಿಗಳಾಗಿದ್ದಾರೆ. ಕಳೆದ ಮಾರ್ಚ್ 24 ರಂದು ಪ್ರೇಮಿಗಳು ಮನೆ ಬಿಟ್ಟು ಓಡಿಹೋಗುವ ವೇಳೆ ಸಿಕ್ಕಿಬಿದ್ದಿದ್ದರು. ಆಗ ಪ್ರಿಯತಮೆ ಮುಂದೆಯೇ ಪ್ರೇಮಿ ನಾಗರಾಜ ಮೇಲೆ ಆಕೆ ತಂದೆ ಹಾಗೂ ಸಹೋದರ ಹಲ್ಲೆ ನಡೆಸಿದ್ದಾರೆ. ನಾಗರಾಜನನ್ನು ಹೊಡೆದು ಆತ ಸಾವನ್ನಪ್ಪಿದ್ದಾನೆ ಎಂದುಕೊಂಡು ಗೋಣಿಚೀಲದಲ್ಲಿ ಬಿಸಾಕಿ ಹೋಗಿದ್ದಾರೆ. ಆದರೆ ಇನ್ನೂ ಜೀವಂತವಿದ್ದ ನಾಗರಾಜನ ದೇಹವನ್ನ ಜಿ.ಕೋಡಿಹಳ್ಳಿ ಕ್ರಾಸ್ ಬಳಿ ಸ್ಥಳೀಯರು ನೋಡಿದ್ದಾರೆ. ಪ್ರಜ್ಞೆ ತಪ್ಪಿದ್ದ ನಾಗರಾಜನನ್ನು ದಾವಣಗೆರೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕ್ಸಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಿ ನಾಗರಾಜ ಸಾವನ್ನಪ್ಪಿದ್ದಾರೆ.

    ಕೊಲೆಯಾದ ನಾಗರಾಜ ಹಾಗೂ ಯುವತಿ ಕಳೆದ ಹಲವಾರು ದಿನಗಳಿಂದ ಪ್ರೀತಿಸುತ್ತಿದ್ದರು. ಈ ವಿಷಯ ಯುವತಿಯ ಮನೆಯವರಿಗೂ ಸಹ ತಿಳಿದಿತ್ತು. ನಾಗರಾಜನ ಕೊಲೆಯನ್ನು ನೋಡಿದ ಮಗಳು ಎಲ್ಲಿ ಬಾಯಿ ಬಿಡುತ್ತಾಳೋ ಅಂತಾ ಹೆದರಿ ಯುವತಿಯನ್ನು ಸಹ ಹೊಡೆದು ಕೊಲೆ ಮಾಡಿದ್ದರು. ನಂತರ ಹೃದಯಾಘಾತದ ಕಥೆ ಕಟ್ಟಿ ಅಂತ್ಯಸಂಸ್ಕಾರ ಮಾಡಿದ್ದರು.

    ಪ್ರೇಮಿ ನಾಗರಾಜ ಕೊಲೆಯಾದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ನಡೆಸುತ್ತಿದ್ದರು. ಯುವತಿಯ ಸಂಬಂಧಿಕರನ್ನು ಕರೆದು ವಿಚಾರಣೆ ಮಾಡುತ್ತಿದ್ದಂತೆ ಯುವತಿಯ ತಂದೆ ಪೊಲೀಸರಿಗೆ ಶರಣಾಗಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಸ್‍ಪಿ ಆರ್.ಚೇತನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಪ್ರೀತ್ಸೋ ಎಂದು ಬೆನ್ನು ಬಿದ್ದ ಯುವತಿಯ ಕಾಟಕ್ಕೆ ಸುಸ್ತಾದ ಟೆಕ್ಕಿ!- ಪೊಲೀಸ್ ಠಾಣೆಯಲ್ಲಿ ದೂರು

    ಪ್ರೀತ್ಸೋ ಎಂದು ಬೆನ್ನು ಬಿದ್ದ ಯುವತಿಯ ಕಾಟಕ್ಕೆ ಸುಸ್ತಾದ ಟೆಕ್ಕಿ!- ಪೊಲೀಸ್ ಠಾಣೆಯಲ್ಲಿ ದೂರು

    ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ಪ್ರೀತ್ಸೋ.. ಪ್ರೀತ್ಸೋ ಎಂದು ಬೆನ್ನು ಬಿದ್ದಿರುವ ಯುವತಿಯೊಬ್ಬಳ ಕಾಟಕ್ಕೆ ಬಿಐಎಸ್‍ಎಲ್ (ವಿಶ್ವವೇಶ್ವರಯ್ಯ ಐರನ್ ಆಂಡ್ ಸ್ಟೀಲ್ ಲಿಮಿಡೆಟ್)ನ ಮೆಕ್ಯಾನಿಕಲ್ ಎಂಜಿನಿಯರ್ ಯುವಕರೊಬ್ಬರು ದಿಗಿಲುಗೊಂಡಿದ್ದಾರೆ.

    ಹೇಮಂತ್ ಎಂಬವರೇ ಯುವತಿಯಿಂದ ತೊಂದರೆ ಅನುಭವಿಸುತ್ತಿರುವ ಎಂಜಿನಿಯರ್. ಇಂದು ಬೆಳ್ಳಂಬೆಳಗ್ಗೆ ಜಿಮ್ ಗೆ ಹೋಗಿದ್ದ ಹೇಮಂತ್ ಮೇಲೆ ಯುವತಿ ಹಾಗೂ ಆಕೆಯ ತಾಯಿ ಪಟ್ಟಣದ ಹೊಸಮನೆ ಮುಖ್ಯ ರಸ್ತೆಯಲ್ಲಿ ದಾಳಿ ಮಾಡಿದ್ದಾರೆ. ಹೇಮಂತ್‍ರನ್ನು ಹಿಡಿದು ಪರಚಿದ್ದಾರೆ. ಇವರ ದಾಳಿಗೆ ಕಂಗಾಲಾದ ಹೇಮಂತ್ ಪರಾರಿಯಾಗಿ ಪೊಲೀಸ್ ಠಾಣೆಗೆ ಓಡಿ ಹೋಗಿದ್ದಾರೆ. ಇತ್ತ ತಾಯಿ ಮಗಳು ಹೇಮಂತ್ ಬೈಕ್ ಬೀಳಿಸಿ, ಅದರ ಮೇಲೆ ಕಲ್ಲು ಎತ್ತಿಹಾಕಿದ್ದಾರೆ.

    ತನ್ನನ್ನು ಮದುವೆಯಾಗುವಂತೆ ಯುವತಿ ಪೀಡಿಸುತ್ತಿದ್ದು, ಮದುವೆಗೆ ಒಪ್ಪದ ಕಾರಣಕ್ಕೆ ಈ ತಾಯಿ-ಮಗಳು ನಿರಂತರವಾಗಿ ಟಾರ್ಚರ್ ಕೊಡುತ್ತಿದ್ದಾರೆ. ಈ ಮುಂಚೆ ನನ್ನ ಮೇಲೆ ಅತ್ಯಾಚಾರದ ದೂರು ದಾಖಲಿಸಿದ್ದರು. ಈಗ ಹಲ್ಲೆ ಮಾಡಿದ್ದಾರೆ. ಜೀವನವೇ ಸಾಕು ಎಂಬಂತಾಗಿದೆ ಎಂದು ಹೇಮಂತ್ ಹೇಳಿದ್ದಾರೆ.

    ಹೇಮಂತ್ ಹೇಳಿದ್ದೇನು?: ನನಗೆ ಮೂರು ವರ್ಷದಿಂದ ಒಬ್ಬ ಯುವತಿ ಮದುವೆ ಆಗುವಂತೆ ಬೆನ್ನು ಬಿದ್ದಿದ್ದಾಳೆ. ಕಳೆದ ವರ್ಷ ಸೆಪ್ಟಂಬರ್‍ನಲ್ಲಿ ನನ್ನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ರು. ಕೊನೆಗೆ ಡಿಎನ್‍ಎ ರಿಪೋರ್ಟ್ ನೆಗಟಿವ್ ಬಂದ್ಮಲೇ ನನ್ನನ್ನ ಪ್ರಕರಣದಿಂದ ಕೈ ಬಿಡಲಾಗಿದೆ. ನಾನು ಮಾಡದಿರುವ ತಪ್ಪಿಗೆ ನಾಲ್ಕು ತಿಂಗಳು ಜೈಲಿನಲ್ಲಿದೆ. ಇವತ್ತು ನಾನು ಎಂದಿನಂತೆ ಜಿಮ್ ಗೆ ಹೋದಾಗ ತಾಯಿ-ಮಗಳು ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಇವರಿಂದ ನಾನು ತಪ್ಪಿಸಿಕೊಂಡು ಬಂದೆ. ಆದ್ರೆ ಅಲ್ಲೇ ಇದ್ದ ನನ್ನ ಬೈಕ್ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ಈಗ ತಾವೇ ಆಸ್ಪತ್ರೆಗೆ ಹೋಗಿ ದಾಖಲಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನನ್ನ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ. ಇವರಿಂದ ನನಗೆ ನ್ಯಾಯ ಕೊಡಿಸಿ. ಇಲ್ಲವಾದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಹೇಮಂತ್ ಹೇಳಿದ್ದಾರೆ.

    ಈ ಸಂಬಂಧ ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮದುವೆಯಾಗಲು ನಿರಾಕರಿಸಿ ಪ್ರೇಯಸಿಯ ಕೊಲೆ ಮಾಡಿ ಶವ ಹೂತಿಟ್ಟ ಪ್ರಿಯಕರ

    ಮದುವೆಯಾಗಲು ನಿರಾಕರಿಸಿ ಪ್ರೇಯಸಿಯ ಕೊಲೆ ಮಾಡಿ ಶವ ಹೂತಿಟ್ಟ ಪ್ರಿಯಕರ

    – 4 ವರ್ಷದ ನಂತರ ಬಯಲಾಯ್ತು ಪ್ರಿಯತಮನ ನೀಚ ಕೃತ್ಯ

    ಯಾದಗಿರಿ: ಮೂರು ವರ್ಷದಿಂದ ಪ್ರೀತಿ ಮಾಡಿ, ಮದುವೆ ಮಾಡಿಕೊಳ್ಳುತ್ತೆನೆಂದು ಪ್ರೇಯಸಿಯನ್ನು ನಂಬಿಸಿ ಗರ್ಭಿಣಿ ಮಾಡಿ ನಂತರ ಪ್ರಿಯತಮ ಮೋಸ ಮಾಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಮದುವೆ ಮಾಡಿಕೋ ಅಂದ್ರೆ ಪ್ರೇಯಸಿಯನ್ನೇ ಕೊಲೆ ಮಾಡಿ ಶವವನ್ನು ಹೂತಿಟ್ಟಿದ್ದ ಪ್ರಿಯತಮನ ನೀಚ ಕೃತ್ಯ ನಾಲ್ಕು ವರ್ಷದ ನಂತರ ಬೆಳಕಿಗೆ ಬಂದಿದ್ದು, ಅವನ ಎದರೇ ಪ್ರೇಯಸಿಯ ಮೃತದೇಹದ ಅವಶೇಷಗಳನ್ನು ಹೊರತೆಗೆಯಲಾಗಿದೆ.

    ಜಿಲ್ಲೆಯ ಸುರಪುರ ತಾಲೂಕಿನ ಹಾಲಗೇರಾ ಗ್ರಾಮದ ನಿವಾಸಿ ಭೀಮನಗೌಡ ಎಂಬಾತನೇ ಪ್ರೇಯಸಿಯನ್ನು ಕೊಲೆಗೈದ ವ್ಯಕ್ತಿ. ಭೀಮನಗೌಡ ಅದೇ ಗ್ರಾಮದ ಕುಸುಮಾ ಎಂಬ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಕುಸಮಾರ ತಾಯಿ ಅರೇಮ್ಮಾ ಭೀಮನಗೌಡನ ಮನೆಯಲ್ಲಿ ಕೆಲಸ ಮಾಡುಕೊಂಡಿದ್ದರು. ಅರೇಮ್ಮಾ ದೇವದಾಸಿಯಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಭೀಮನಗೌಡ ಅರೇಮ್ಮಾರ ಮಗಳನ್ನು ಪ್ರೀತಿ ಮಾಡುವ ನಾಟಕ ಮಾಡಿದ್ದ.

    ನೀನು ದೇವದಾಸಿಯ ಮಗಳು, ನಾನು ನಿನ್ನನ್ನು ಮದುವೆ ಆಗ್ತೀನಿ ಎಂದು ನಂಬಿಸಿ ಭೀಮನಗೌಡ ಕುಸುಮಾ ಜೊತೆ ದೈಹಿಕ ಸಂಪರ್ಕ ಬೆಳಸಿದ್ದ. ನಂತರ ಕುಸುಮಾ ಗರ್ಭಿಣಿಯಾದಾಗ ಭೀಮನಗೌಡನಿಗೆ ಮದುವೆ ಮಾಡಿಕೋ ಎಂದು ಕೇಳಿಕೊಂಡಿದ್ದರು. ಆದ್ರೆ ಭೀಮನಗೌಡ ಮದುವೆಯಾಗಲು ನಿರಾಕರಿಸಿದ್ದು, ನಿಮ್ಮ ತಾಯಿ ದೇವದಾಸಿ. ನೀನು ಕೂಡ ದೇವದಾಸಿಯಾಗಿ ನೆಮ್ಮದಿಯಾಗಿ ಜೀವನ ಸಾಗಿಸು ಎಂದು ಹೇಳಿದ್ದಾನೆ.

    ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದಾಗ, 2013 ರಲ್ಲಿ ಭೀಮನಗೌಡ ಇತರೆ 5 ಜನರ ಸಹಾಯದಿಂದ ಕುಸಮಾರನ್ನು ಅಪಹರಿಸಿ ಗ್ರಾಮದ ಹಳ್ಳದಲ್ಲಿ ಕೊಲೆ ಮಾಡಿ ಶವವನ್ನು ಹೂತಿಟ್ಟಿದ್ದ.

    2013ರಲ್ಲಿ ಕುಸುಮಾ ಅಪಹರಣದ ಬಗ್ಗೆ ಅರೇಮ್ಮಾ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾದಾಗ ಪೊಲೀಸರು ಕೇಸ್ ದಾಖಲಿಸಿಕೊಂಡಿರಲಿಲ್ಲ. ಕೊನೆಗೆ 2016ರ ಅಕ್ಟೋಬರ್‍ನಲ್ಲಿ ಅರೇಮ್ಮಾ ಎಸ್‍ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದಾಗ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

    ಪ್ರಕರಣದ ವಿಚಾರಣೆ ಆರಂಭಿಸಿದ ಪೊಲೀಸರು, ಆರೋಪಿ ಭೀಮನಗೌಡ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ. ನಿನ್ನೆ (ಸೋಮವಾರ) ಸಹಾಯಕ ಆಯುಕ್ತ ಡಾ.ಜಗದೀಶ್ ಹಾಗೂ ಸುರಪುರ ಠಾಣಾ ಪೊಲೀಸರ ನೇತೃತ್ವದಲ್ಲಿ ಕುಸುಮಾರ ಶವದ ಅವಶೇಷಗಳನ್ನು ಹೊರ ತೆಗಯಲಾಗಿದೆ. ತನ್ನ ಮಗಳು ಸುರಕ್ಷಿತವಾಗಿ ಪತ್ತೆಯಾಗಿ ನನ್ನ ಮಡಿಲಿಗೆ ಸೇರುತ್ತಾಳೆಂದು ಕಳೆದ ನಾಲ್ಕು ವರ್ಷದಿಂದ ಹಂಬಲಿಸುತ್ತಿದ್ದ ತಾಯಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

     

  • ಹುಡುಗ, ಹುಡುಗಿಯ ಲವ್ ಕೇಸ್‍ನಲ್ಲಿ ಉಪ್ಪಿಯ ಡಾ. ಮೋದಿ ಸ್ಕ್ರಿಪ್ಟ್ ಹೋಯ್ತು!

    ಹುಡುಗ, ಹುಡುಗಿಯ ಲವ್ ಕೇಸ್‍ನಲ್ಲಿ ಉಪ್ಪಿಯ ಡಾ. ಮೋದಿ ಸ್ಕ್ರಿಪ್ಟ್ ಹೋಯ್ತು!

    ಬೆಂಗಳೂರು: ಹುಡುಗ, ಹುಡುಗಿಯ ಲವ್, ಥಳಿತ ಕೇಸ್‍ನಲ್ಲಿ ನಟ ಉಪೇಂದ್ರ ಅವರ ಮುಂದಿನ ‘ಡಾಕ್ಟರ್ ಮೋದಿ’ ಸ್ಕ್ರಿಪ್ಟ್ ಕಾಪಿಯನ್ನು ಯುವತಿಯ ಪೋಷಕರು ಕದ್ದುಕೊಂಡು ಹೋಗಿದ್ದಾರೆಂಬ ಆರೋಪ ಕೇಳಿ ಬಂದಿದೆ.

    ಈ ಪ್ರಕರಣದ ಸಂಬಂಧ ಪ್ರಿಯಕರ ರಮೇಶ್ ತಾನು ಪ್ರೀತಿಸುತ್ತಿದ್ದ ಯುವತಿಯ ತಾಯಿ ವೇದಾವತಿ ಮತ್ತು ಮಾವ ರಮೇಶ್ ಮೇಲೆ ಎಚ್‍ಎಸ್‍ಆರ್ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಏನಿದು ಲವ್ ಸ್ಟೋರಿ?
    ತೀರ್ಥಹಳ್ಳಿ ಮೂಲದ ಎಂಕಾಂ ಓದಿರುವ ಶ್ರೀಕರ ಹಾಗೂ ಕೋಲಾರದ ಬಿಇ ಪದವೀಧರೆ ಶ್ವೇತಾಗೆ ಶಾದಿ ಡಾಟ್ ಕಾಂನಲ್ಲಿ ಪರಿಚಯವಾಗಿದೆ. ಈ ಪರಿಚಯ ಕೆಲ ದಿನಗಳ ಬಳಿಕ ಪ್ರೀತಿಗೆ ತಿರುಗಿದೆ. ನಗರದ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಮಾಡಿಕೊಂಡಿದ್ದ ಇವರು ಕಳೆದ ಒಂದು ವರ್ಷ 8 ತಿಂಗಳಿನಿಂದ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.

    ಈ ಮಧ್ಯೆ ಶ್ವೇತಾ ಎರಡು ಭಾರಿ ಗರ್ಭವತಿಯಾಗಿದ್ದು, ತಾಯಿ ಅಬಾರ್ಷನ್ ಮಾಡಿಸಿದ್ದರಂತೆ. ಇದಾದ ಬಳಿಕ ಶ್ವೇತಾ ತಾಯಿ ವೇದಾವತಿ ಮತ್ತು ಮಾವ ರಮೇಶ್, ಕದ್ದು ಮುಚ್ಚಿ ಮದುವೆಯಾಗಿರುವುದು ಸರಿಯಲ್ಲ, ಅದ್ಧೂರಿಯಾಗಿ ಸಾರ್ವಜನಿಕವಾಗಿ ನಿಮ್ಮಿಬ್ಬರಿಗೂ ಮದುವೆ ಮಾಡಿಸುವುದಾಗಿ ಭರವಸೆ ನೀಡಿ ಮಗಳನ್ನು ಕೋಲಾರಕ್ಕೆ ಕರೆದೊಯ್ದಿದ್ದಾರೆ.

    ರಮೇಶ್ ಆರೋಪ ಏನು?
    ಊರಿಗೆ ಕರೆದೊಯ್ದ ನಂತರ ಶ್ವೇತಾ ಪೋಷಕರು ಮದುವೆ ವಿಚಾರ ಮಾತನಾಡಬೇಕು ಕೋಲಾರಕ್ಕೆ ಬಾ ಎಂದು ನನಗೆ ಫೋನ್ ಮಾಡಿ ತಿಳಿಸಿದ್ದರು. ಫೋನ್ ಕರೆಯ ಹಿನ್ನೆಲೆಯಲ್ಲಿ ಭಾನುವಾರ ಕೋಲಾರಕ್ಕೆ ಬಂದಾಗ ನನ್ನ ಮೇಲೆ ಮೇಲೆ ಶ್ವೇತಾ ತಾಯಿ ವೇದಾವತಿ ತಮ್ಮ ರಮೇಶ್ ಕೆಲ ಗೂಂಡಾಗಳನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮದೇ ಕಾರಿನಲ್ಲಿ ನನ್ನನ್ನು ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್‍ನ ಮನೆಗೆ ಕರೆ ತಂದು ನನ್ನ ಮತ್ತು ಶ್ವೇತಾ ಮದುವೆಗೆ ಸಂಬಂಧಿಸಿದ ಫೋಟೋಗಳು, ಲವ್ ಲೆಟರ್ ಗಳು ಮತ್ತು ನನ್ನ ಆಫೀಸ್‍ಗೆ ಸಂಬಂಧಿಸಿದ ಕೆಲ ಡಾಟಾ ಮತ್ತು ಮಾರ್ಕ್ಸ್ ಕಾರ್ಡ್‍ಗಳನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಮೋದಿ ಸ್ಕ್ರಿಪ್ಟ್ ಹೋಯ್ತು:
    ನಿರ್ದೇಶಕ ಉದಯ್ ಪ್ರಕಾಶ್ ಅವರಿಗೆ ಸಹಾಯಕನಾಗಿ ನಾನು ಕೆಲಸ ಮಾಡುತ್ತಿದ್ದು, ನಟ ಉಪೇಂದ್ರ ಅವರ ಮುಂದಿನ ಚಿತ್ರ ಡಾಕ್ಟರ್ ಮೋದಿಗೆ ಸ್ಕ್ರಿಪ್ಟ್ ಮಾಡಿದ್ದೆ. ಆ ಸ್ಕ್ರಿಪ್ಟ್ ಹಾರ್ಡ್ ಕಾಪಿಯನ್ನೂ ಶ್ವೇತಾ ಪೋಷಕರು ಕದ್ದುಕೊಂಡು ಹೋಗಿದ್ದಾರೆ. ಹೀಗಾಗಿ ನನಗೆ ಈ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕೆಂದು ಎಚ್‍ಎಸ್‍ಆರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ಮದುವೆಯಾಗಲು ನಿರಾಕರಿಸಿದ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭಗ್ನಪ್ರೇಮಿ

    ಮದುವೆಯಾಗಲು ನಿರಾಕರಿಸಿದ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭಗ್ನಪ್ರೇಮಿ

    ಕೊಪ್ಪಳ: ಮದುವೆಯಾಗಲು ನಿರಾಕರಿಸಿದ ಯುವತಿ ಮೇಲೆ ಭಗ್ನ ಪ್ರೇಮಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದಲ್ಲಿ ನಡೆದಿದೆ.

    ಮುದೇನೂರು ಗ್ರಾಮದ ಯುವತಿ ಶಹನಾಜ್ ತಾವರಗೇರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಗಂಗಾವತಿ ತಾಲೂಕು ಮರ್ಲಾನಹಳ್ಳಿ ಗ್ರಾಮದ ಅಮರೇಗೌಡ ಈ ಕೃತ್ಯವೆಸಗಿದ್ದಾನೆ.

    ಯಲಬುರ್ಗಾ ತಾಲೂಕು ಚೌಡಾಪುರ ಗ್ರಾಮದ ನಿವಾಸಿಯಾದ 23 ವರ್ಷದ ಶಹನಾಜ್, ಕಿರಿಯ ಆರೋಗ್ಯ ಸಹಾಯಕಿಯಾಗಿ ಮುದೇನೂರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಕುಷ್ಟಗಿಯಲ್ಲಿ ನಡೆಯುತ್ತಿರುವ ತರಬೇತಿಗೆ ಹಾಜರಾಗಲು ಶಹನಾಜ್ ತಾಯಿಯೊಂದಿಗೆ ಮುದೇನೂರು ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಆಗ ಡ್ರಾಪ್ ಮಾಡುವುದಾಗಿ ಬೈಕ್‍ನಲ್ಲಿ ಕರೆತಂದ ಅಮರೇಶ, ಕುಷ್ಟಗಿ ಸಮೀಪ ಬೈಕ್ ನಿಲ್ಲಿಸಿ ಶಹನಾಜ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮಗಳ ಸಹಾಯಕ್ಕೆ ಮುಂದಾದ ಶಹನಾಜ್ ತಾಯಿಗೂ ಎದೆ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಇಬ್ಬರೂ ಸದ್ಯ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶಹನಾಜ್‍ಗೆ ಇತ್ತೀಚೆಗೆ ಬೇರೊಬ್ಬರೊಂದಿಗೆ ವಿವಾಹ ನಿಶ್ಚಯವಾಗಿತ್ತು ಎಂದು ತಿಳಿದು ಬಂದಿದೆ. ಕೊಲೆಗೆ ಯತ್ನಿಸಿದ ಅಮರೇಗೌಡ ಸ್ಥಳದಿಂದ ಪರಾರಿಯಾಗಿದ್ದಾನೆ.

     

     

  • ಮಂಡ್ಯ ಶಾಕಿಂಗ್: ಪ್ರೀತಿ ನಿರಾಕರಿಸಿದ್ದಕ್ಕೆ ಶಾಲೆಯ ಮೂರನೇ ಮಹಡಿಯಿಂದ ತಳ್ಳಿದ!

    ಮಂಡ್ಯ ಶಾಕಿಂಗ್: ಪ್ರೀತಿ ನಿರಾಕರಿಸಿದ್ದಕ್ಕೆ ಶಾಲೆಯ ಮೂರನೇ ಮಹಡಿಯಿಂದ ತಳ್ಳಿದ!

    ಮಂಡ್ಯ: ಪ್ರೀತಿ ನಿರಾಕರಿಸಿದಕ್ಕೆ ಅಪ್ರಾಪ್ತೆಯನ್ನ ಅಪ್ರಾಪ್ತ ಬಾಲಕನೊಬ್ಬ ಶಾಲೆಯ 3ನೇ ಮಹಡಿಯಿಂದ ಕೆಳಗೆ ತಳ್ಳಿರುವ ಅಘಾತಕಾರಿ ಘಟನೆ ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಕೊಮ್ಮೇರಹಳ್ಳಿಯ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ತನ್ನದೇ ಶಾಲೆಯ 7 ನೇ ವಿದ್ಯಾರ್ಥಿನಿಗೆ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಮಾರ್ಚ್ 16 ರಂದು ಫೀಸ್ ಕಟ್ಟಲು ಬಾಲಕಿ ಶಾಲೆಗ ಹೋದಾಗ ಹಿಂದಿನಿಂದ ಸ್ನೇಹಿತೆಯಂತೆ ಬಂದ ಅಪ್ರಾಪ್ತ, ಬಾಲಕಿಯ ಕಣ್ಣು ಮುಚ್ಚಿ ಶಾಲೆಯ 3ನೇ ಮಹಡಿಗೆ ಕರೆದುಕೊಂಡು ಹೋಗಿದ್ದಾನೆ. ಅನುಮಾನಗೊಂಡ ಬಾಲಕಿ, ಅವನ ಕೈ ಬಿಡಿಸಿಕೊಂಡು ನೋಡಿದಾಗ ಗಾಬರಿಯಾಗಿದ್ದಾಳೆ.

    ಮಹಡಿಯ ಮೇಲೂ ಸಹ ಬಾಲಕ ತನ್ನನ್ನು ಪ್ರೀತಿಸುವಂತೆ ಕೇಳಿದ್ದಾನೆ. ಇದಕ್ಕೆ ನಿರಾಕರಿಸಿ ಶಿಕ್ಷಕಿಯೊಬ್ಬರನ್ನು ಬಾಲಕಿ ಕೂಗಿದ್ದಾಳೆ. ಇದರಿಂದ ಹೆದರಿದ ಬಾಲಕ ವಿದ್ಯಾರ್ಥಿಯನ್ನು ಶಾಲೆಯ ಮೂರನೇ ಮಹಡಿಯಿಂದ ತಳ್ಳಿದ್ದಾನೆ. ಗಾಯಗೊಂಡ ಬಾಲಕಿ ಸದ್ಯ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಳೆ. ಇನ್ನು ಬಾಲಕ ನಾಪತ್ತೆಯಾಗಿದ್ದು, ಅತನ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

    ವಿದ್ಯಾರ್ಥಿನಿ ಶಾಲೆಯ ಶಿಕ್ಷಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬದಲಾಗಿ ಶಿಕ್ಷಕರು ವಿದ್ಯಾರ್ಥಿನಿಗೆ ಮನೆಯಲ್ಲಿ ಪೋಷಕರಿಗೆ ತಿಳಿಸದಂತೆ ಹೇಳಿದ್ದರು. ಬಾಲಕ ಕಿರುಕುಳ ನೀಡುತ್ತಿರುವ ವಿಷಯ ತಿಳಿದಿದ್ದರೂ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿನಿ ಹಾಗು ಆಕೆಯ ತಾಯಿ ಹೇಳಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಪ್ರೇಮಿಗಳಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ- ಪ್ರಿಯತಮೆ ಸಾವು

    ಪ್ರೇಮಿಗಳಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ- ಪ್ರಿಯತಮೆ ಸಾವು

    ಬೆಳಗಾವಿ: ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿರುವ ಘಟನೆ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ. ಪ್ರೇಮಿಗಳಿಬ್ಬರು ಬುಧವಾರ ತಡರಾತ್ರಿ ವಿಷ ಸೇವಿಸಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಯುವತಿ ಸಾವನ್ನಪ್ಪಿದ್ದಾರೆ.

    ಲಕ್ಷ್ಮೀ (19) ಮೃತ ಯುವತಿ. ಇನ್ನೂ ತೀವ್ರ ಅಸ್ವಸ್ಥಗೊಂಡ ಪ್ರಿಯತಮ ಮಹಾಂತೇಶ್ ಘೋರ್ಪಡೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಮಹಾಂತೇಶರನ್ನು ಘಟಪ್ರಭಾದ ಕರ್ನಾಟಕ ಹೆಲ್ತ್ ಇನ್‍ಸ್ಟಿಟ್ಯೂಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತ ಯುವತಿ ಸಾವನ್ನಪ್ಪಿದ ವಿಷಯ ತಿಳಿದ ಮಾಹಾಂತೇಶ ಸದ್ಯ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ.

    ಹುಕ್ಕೇರಿ ತಾಲೂಕಿನ ಕಡಕಲಾಟ ಗ್ರಾಮದ ನಿವಾಸಿಗಳಾದ ಮಹಾಂತೇಶ್ ಮತ್ತು ಲಕ್ಷ್ಮೀ ಹುಕ್ಕೇರಿ ಪಟ್ಟಣದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಬ್ಬರೂ ಪರಸ್ಪರ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇನ್ನೂ ಲಕ್ಷ್ಮೀರಿಗೆ ಮನೆಯಲ್ಲಿ ಬೇರೆ ಯುವಕನೊಂದಿಗೆ ವಿವಾಹ ದಿನಾಂಕವನ್ನು ನಿಗಧಿ ಮಾಡಿದ್ದರು. ಇದರಿಂದ ಮನನೊಂದು ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

  • ಕಪಿಲ್ ಶರ್ಮಾ ಇನ್ ಲವ್ – ಫೋಟೋ ಶೇರ್ ಮಾಡಿ ಪ್ರೇಯಸಿ ಯಾರೆಂದು ಬಹಿರಂಗಪಡಿಸಿದ್ರು ಕಪಿಲ್

    ಕಪಿಲ್ ಶರ್ಮಾ ಇನ್ ಲವ್ – ಫೋಟೋ ಶೇರ್ ಮಾಡಿ ಪ್ರೇಯಸಿ ಯಾರೆಂದು ಬಹಿರಂಗಪಡಿಸಿದ್ರು ಕಪಿಲ್

    ಮುಂಬೈ: ಕಾಮಿಡಿ ಶೋ ನಿರೂಪಕ ಮತ್ತು ನಟ ಕಪಿಲ್ ಶರ್ಮಾ ಲವ್ವಲ್ಲಿ ಬಿದ್ದಿದ್ದಾರೆ. ಖಾಸಗಿ ಚಾನಲೆ ಒಂದರಲ್ಲಿ ಕಾಮಿಡಿ ಶೋ ಮೂಲಕ ಮನೆ ಮಾತಾಗಿರುವ ಕಪಿಲ್ ತಾವು ಪ್ರೀತಿಸುತ್ತಿರುವ ಹುಡುಗಿ ಫೋಟೋ ಟ್ವೀಟರ್‍ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

    ಪ್ರತಿ ಶನಿವಾರ ಮತ್ತು ಭಾನುವಾರ ತಮ್ಮ ಶೋ ಮೂಲಕ ಎಲ್ಲರನ್ನೂ ನಗಿಸುವ ಕಪಿಲ್ ಶರ್ಮಾ ಇದೀಗ ತಮ್ಮ ಪ್ರೇಯಸಿಯ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ ಶೋಗೆ ಬರುವ ನಟಿಯರನ್ನ ರೇಗಿಸುತ್ತಾ ತಮಾಷೆ ಮಾಡೋ ಕಪಿಲ್ ಕೊನೆಗೂ ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ಹಾಯ್, ನಾನೊಂದು ಸುಂದರವಾದ ವಿಷಯವನ್ನ ನಿಮ್ಮೊಂದಿಗೆ ಹಂಚಿಕೊಳ್ಬೇಕು. 30 ನಿಮಿಷ ಕಾಯಿರಿ ಎಂದು ಕಪಿಲ್ ಟ್ವೀಟ್ ಮಾಡಿದ್ರು. ಅನಂತರ ಎರಡು ಫೋಟೋಗಳ ಸಮೇತ ಟ್ವೀಟ್ ಮಾಡಿ ತಮ್ಮ ಪ್ರೇಯಸಿ ಯಾರೆಂಬುದನ್ನ ಬಹಿರಂಗಪಡಿಸಿದ್ರು.

    ಈ ಫೋಟೋದಲ್ಲಿರುವ ಮಹಿಳೆ ನನ್ನ ಅರ್ಧಾಂಗಿ ಎಂದು ಹೇಳಲ್ಲ. ಇವಳು ನನ್ನನ್ನು ಪರಿಪೂರ್ಣಳಾಗಿಸುತ್ತಾಳೆ. ಲವ್ ಯೂ ಗಿನ್ನಿ. ದಯವಿಟ್ಟು ಈಕೆಯನ್ನು ಸ್ವಾಗತಿಸಿ. ನಾನಿವಳನ್ನು ತುಂಬಾ ಪ್ರೀತಿಸ್ತೀನಿ ಎಂದು ಟ್ವೀಟ್ ಮಾಡಿದ್ದಾರೆ.

    ಶೋದಲ್ಲಿ ಪ್ರತಿಬಾರಿಯೂ ನಾನು ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಯನ್ನು ಪ್ರೀತಿಸುತ್ತೇನೆ. ಆಯ್ ಲವ್ ದೀಪಿಕಾ ಎಂದು ಹೇಳುತ್ತಿದ್ದ ಕಪಿಲ್ ಕೊನೆಗೆ ಒಂದು ಟ್ವೀಟ್ ಮಾಡಿ, ದೀಪು ಇನ್ಮುಂದೆ ನಾನು ನಿನ್ನನ್ನು ಮಿಸ್ ಮಾಡುವುದಿಲ್ಲ ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ

    .

    ಕಪಿಲ್ ಹಾಗೂ ಗಿನ್ನಿ ಚತ್ರಾತ್ ಕಾಲೇಜು ದಿನಗಳಿಂದಲೂ ಒಬ್ಬರಿಗೊಬ್ಬರು ಪರಿಚಯವಿದ್ದರು. ಆದರೂ ಇವರಿಬ್ಬರೂ ಹತ್ತಿರವಾಗಿದ್ದು ಪ್ರಖ್ಯಾತ ಶೋ ಹಸ್ ಬಲ್ಲಿಯೇ ಚಿತ್ರೀಕರಣದ ವೇಳೆ. ಕಪಿಲ್ ನಿರ್ದೇಶನದ ಇತರೆ ಕೆಲವು ಶೋಗಳಲ್ಲೂ ಗಿನ್ನಿ ಕಾಣಿಸಿಕೊಂಡಿದ್ದರು.