Tag: Love Ratri

  • `ಪದ್ಮಾವತ್’ ಆಯ್ತು, ಈಗ `ಲವ್ ರಾತ್ರಿ’ ವಿರುದ್ಧ ವಿಎಚ್‍ಪಿಯಿಂದ ಪ್ರತಿಭಟನೆ!

    `ಪದ್ಮಾವತ್’ ಆಯ್ತು, ಈಗ `ಲವ್ ರಾತ್ರಿ’ ವಿರುದ್ಧ ವಿಎಚ್‍ಪಿಯಿಂದ ಪ್ರತಿಭಟನೆ!

    ಹೈದರಾಬಾದ್: ಈಗಾಗಲೇ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ `ಪದ್ಮಾವತ್’ ವಿರುದ್ಧ ವಿಶ್ವ ಹಿಂದೂ ಪರಿಷತ್ (ವಿಎಚ್‍ಪಿ) ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು. ಈಗ ಸಲ್ಮಾನ್ ಖಾನ್ ಅವರ ಸೋದರ ಅಳಿಯ ಆಯುಶ್ ಶರ್ಮಾ ಅವರ ಚೊಚ್ಚಲ ಚಿತ್ರವಾದ `ಲವ್ ರಾತ್ರಿ’ಯ ವಿರುದ್ಧ ಪ್ರತಿಭಟಿಸಲು ಮುಂದಾಗಿದೆ.

    ಈ ಹಿಂದೆ ವಿಎಚ್‍ಪಿ `ಪದ್ಮಾವತ್’ ಸಿನಿಮಾದಲ್ಲಿ ರಜಪೂತರ ಭಾವನೆಗಳಿಗೆ ಧಕ್ಕೆ ತರುವಂತೆ ಮಾಡಲಾಗಿದೆ ಎಂದು ವಿರೋಧ ವ್ಯಕ್ತಪಡಿಸಿತ್ತು. ಆದರೆ ಆ ಸಿನಿಮಾ ಟೈಟಲ್ ಬದಲಾಯಿಸಿ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. ಈಗ `ಲವ್ ರಾತ್ರಿ’ ಸಿನಿಮಾದಲ್ಲಿ ಹಿಂದೂ ಹಬ್ಬದ ಅರ್ಥವನ್ನು ವಿರೂಪಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಸಿನಿಮಾ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದೆ.

    ಈ ಪ್ರೀತಿ-ಪ್ರಯಣದ ನಾಟಕ ಹಿಂದೂಗಳ ಭಾವನೆಗಳಿಗೆ ದಕ್ಕೆಯುಂಟುಮಾಡುತ್ತದೆ. ಆದ್ದರಿಂದ ಈ ಸಿನಿಮಾ ಪ್ರದರ್ಶನ ಕಾಣಲು ನಾವು ಅನುಮತಿ ನೀಡುವುದಿಲ್ಲ ಎಂದು ವಿಎಚ್‍ಪಿ ವಿರೋಧ ವ್ಯಕ್ತಪಡಿಸುತ್ತಿವೆ.

    ನಾವು ದೇಶದಾದ್ಯಂತ ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲು ಬಿಡುವುದಿಲ್ಲ. ಇದು ಹಿಂದೂಗಳ ಭಾವನೆಗಳನ್ನು ನೋಯಿಸುವಂತಹ ಕೆಲಸ. ಆದ್ದರಿಂದ ನಾವು ನೋಯಿಸುವಂತಹ ಕೆಲಸವನ್ನು ಬಯಸುವುದಿಲ್ಲ ಎಂದು ವಿಎಚ್‍ಪಿಯ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.

    ಅಷ್ಟೇ ಅಲ್ಲದೇ ಈ ಸಿನಿಮಾ ಹಿಂದೂ ಹಬ್ಬವಾದ ನವರಾತ್ರಿ ಹಿನ್ನೆಲೆಯ ವಿರುದ್ಧವಾಗಿ ಮಾಡಲಾಗಿದೆ. ಜೊತೆಗೆ ಅದರ ಅರ್ಥವು ನವರಾತ್ರಿ ಅರ್ಥವನ್ನು ವಿರೂಪಗೊಳಿಸುತ್ತದೆ ಎಂದು ಅಲೋಕ್ ಕುಮಾರ್ ಆರೋಪಿಸಿದ್ದಾರೆ.

    `ಲವ್ ರಾತ್ರಿ’ ಸಿನಿಮಾ ಗುಜರಾತಿ ಹಿನ್ನೆಲೆಯ ವಿರುದ್ಧ ಮಾಡಲಾಗಿದ್ದು, ಇದು ಒಂಬತ್ತು ರಾತ್ರಿಯ ಅವಧಿಯಲ್ಲಿ ದಂಪತಿಗಳ ಪ್ರೇಮ ಕಥೆಯನ್ನು ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಆಯುಶ್ ಶರ್ಮಾ ಮತ್ತು ವಾರಿನಾ ಹುಸೇನ್ ಅವರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. `ಸುಲ್ತಾನ್’ ಮತ್ತು `ಶಾರುಖ್ ಖಾನ್ ಫ್ಯಾನ್’ ನಂತಹ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅಭಿರಾಜ್ ಮಿನವಾಲಾರವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

    `ಲವ್ ರಾತ್ರಿ’ ಸಿನಿಮಾ ಸಲ್ಮಾನ್ ಖಾನ್ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರವಾಗಿದೆ. ವಿಶ್ವ ಹಿಂದೂ ಪರಿಷತ್ ನಿಂದ ಈಗಾಗಲೇ ಕಂಗನಾ ರಣಾವತ್ ಅಭಿನಯದ `ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾಗೆ ವಿರೋಧ ವ್ಯಕ್ತವಾಗಿದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನ ಆಧಾರಿತ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಇತಿಹಾಸ ತಿರುಚಲಾಗುತ್ತಿದೆ ಎಂದು ರಾಜಸ್ಥಾನದ ಬ್ರಾಹ್ಮಣ ಮಹಾಸಭಾ ಆರೋಪಿಸಿದೆ.

  • ಬಾಮೈದನ ‘ಲವ್ ರಾತ್ರಿ’ ಲಾಂಚ್ ಮಾಡಲಿದ್ದಾರೆ ಸಲ್ಮಾನ್ ಖಾನ್

    ಬಾಮೈದನ ‘ಲವ್ ರಾತ್ರಿ’ ಲಾಂಚ್ ಮಾಡಲಿದ್ದಾರೆ ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಈಗಾಗಲೇ ಸೋನಾಕ್ಷಿ ಸಿನ್ಹಾ, ಆಹಿತ್ಯಾ ಶೆಟ್ಟಿ, ಸೂರಜ್ ಪಾಂಚೋಲಿ ಅವರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ್ದಾರೆ. ಸದ್ಯ ಸಲ್ಮಾನ್ ತನ್ನ ಬಾಮೈದ ಆಯುಶ್ ಶರ್ಮಾರನ್ನು ಬಾಲಿವುಡ್ ಇಂಡಸ್ಟ್ರಿಗೆ ಇಂಟ್ರಡ್ಯೂಸ್ ಮಾಡಲಿದ್ದಾರೆ.

    ಈ ಬಗ್ಗೆ ಸಲ್ಮನ್ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದು, ಬಾಮೈದ ಆಯುಶ್ ಶರ್ಮಾಗೆ ಶುಭಾಶಯವನ್ನು ತಿಳಿಸಿದ್ದಾರೆ. ಈಗಾಗಲೇ ‘ಲವ್ ರಾತ್ರಿ’ ಎಂದು ಸಿನಿಮಾಗೆ ಹೆಸರನ್ನು ಅಂತಿಮಗೊಳಿಸಲಾಗಿದೆ. ಟೈಟಲ್ ಕೇಳಲು ತುಂಬಾ ಕ್ಯಾಚಿಯಾಗಿದ್ದು, ಸಿನಿಮಾ ಹೇಗಿರಲಿದೆ ಎಂಬ ಕುತೂಹಲವನ್ನು ಹುಟ್ಟು ಹಾಕಿದೆ.

    ನನ್ನ ನಿರ್ಮಾಣದಲ್ಲಿ ಆಯುಶ್ ಶರ್ಮಾ ಘೋಷಣೆ ಮಾಡಲು ತುಂಬಾ ಖುಷಿಯಾಗುತ್ತಿದೆ. ನಮ್ಮ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಐದನೇ ಸಿನಿಮಾ ಇದಾಗಿದ್ದು, ಅಭಿರಾಜ್ ಮಿನಾವಾಲ ಆ್ಯಕ್ಷನ್ ಕಟ್ ಹೇಳಿದ್ದಾರೆ ಎಂದು ಸಲ್ಮಾನ್ ಟ್ವೀಟ್ ಮಾಡಿದ್ದಾರೆ.

    ಸಲ್ಮಾನ್ ಬಾಮೈದ ಆಯುಶ್ ಗೆ ಸಲಹೆಯನ್ನು ನೀಡಿದ್ದಾರೆ. ಕಂಗ್ರಾಟ್ಸ್ ಆಯುಶ್ ಶರ್ಮಾ, ಶ್ರಮ ಮತ್ತು ಶ್ರದ್ಧೆವಹಿಸಿ ಕೆಲಸ ಮಾಡುವ ಸಮಯ ಇದಾಗಿದೆ. ದೇವರು ನಿನಗೆ ಎಲ್ಲ ಯಶಸ್ಸು ನೀಡಲಿ ಎಂದು ಕಿವಿ ಮಾತು ಹೇಳಿದ್ದಾರೆ.

    ಇತ್ತ ಸಲ್ಮಾನ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಆಯುಶ್, ಈ ಘಟನೆ ನನ್ನ ಜೀವನದಲ್ಲಿ ನಡೆದಿರುವುದು ನನಗೆ ನಂಬಲು ಆಗ್ತಿಲ್ಲ. ಲವ್ ರಾತ್ರಿ ಚಿತ್ರೀಕರಣದಲ್ಲಿ ಭಾಗಿಯಾಗಲು ಕಾಯುತ್ತಿದ್ದೇನೆ. ಈ ಸದಾವಕಾಶ ಒದಗಿಸಿಕೊಟ್ಟಿದ್ದಕ್ಕೆ ಧನ್ಯವಾದ ಅಂತಾ ಉತ್ತರಿಸಿದ್ದಾರೆ.

    ಆಯುಶ್ ಮೊದಲ ಸಿನಿಮಾ ಬಾಲಿವುಡ್ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದೆ. ಆದರೆ ಆಯುಶ್ ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇದೂವರೆಗೂ ಅಂತಿಮವಾಗಿಲ್ಲ. ಶೀಘ್ರದಲ್ಲಿಯೇ ಆಯುಶ್ ಗೆ ಜೋಡಿಯಾಗುವ ಲಕ್ಕಿ ಗರ್ಲ್ ಯಾರೆಂಬುದನ್ನ ತಿಳಿಸಲಾಗುತ್ತದೆ ಎಂದು ಚಿತ್ರ ತಂಡ ಹೇಳಿದೆ.