Tag: Love Letter

  • Valentines Day; ಮೊದಲ ಪ್ರೇಮ ಪತ್ರ ಬರೆದವರು ಯಾರು ಗೊತ್ತಾ?

    Valentines Day; ಮೊದಲ ಪ್ರೇಮ ಪತ್ರ ಬರೆದವರು ಯಾರು ಗೊತ್ತಾ?

    ಫೆಬ್ರವರಿ ಅಂದ್ರೆ ಮೊದಲು ನೆನಪಾಗುವುದೇ ಪ್ರೇಮಿಗಳ ದಿನ. ಫೆ. 7ರಿಂದ 14ರವರೆಗೆ ಪ್ರೇಮಿಗಳ ದಿನಾಚರಣೆ ಆಚರಿಸಲಾಗುತ್ತದೆ. ರೋಸ್ ಡೇ ಇಂದ ಪ್ರಾರಂಭವಾಗುವ ಪ್ರೇಮಿಗಳ ದಿನಾಚರಣೆ ವ್ಯಾಲೆಂಟೈನ್ಸ್ ಡೇಯಲ್ಲಿ ಕೊನೆಗೊಳ್ಳುತ್ತದೆ. ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಗಳು ತಮ್ಮ ಪ್ರೇಯಸಿಗೆ ಅಥವಾ ಪ್ರಿಯಕರನಿಗೆ ವಿಭಿನ್ನವಾದ ರೀತಿಯಲ್ಲಿ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ.

    ಪ್ರೀತಿ ಒಂದು ಮಧುರವಾದ ಭಾವನೆ, ಪ್ರೀತಿ ಇಲ್ಲದೆ ಬಹುಶಃ ಜಗತ್ತಿನಲ್ಲಿ ಯಾರೂ ಬದುಕಲು ಸಾಧ್ಯವೇ ಇಲ್ಲ. ನಿಮ್ಮಲ್ಲಿ ಇರುವ ಪ್ರೀತಿಯ ಭಾವನೆ ನಿಮ್ಮ ಸಂಗಾತಿಯಲ್ಲಿ ಕೂಡ ಇರಬೇಕು, ಆಗಲೇ ಅದು ಪರಿಶುದ್ಧ ಪ್ರೀತಿ ಎನಿಸಿಕೊಳ್ಳುತ್ತದೆ. ಈಗಿನ ಪೀಳಿಗೆಯ ಯುವಕರು ಅಥವಾ ಯುವತಿಯರು ಸೋಶಿಯಲ್ ಮೀಡಿಯಾದಲ್ಲೇ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ. ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಾಪ್ ನಲ್ಲಿ ಮೆಸೇಜ್ ಮೂಲಕ ಪ್ರಪೋಸ್ ಮಾಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

    ಹಿಂದಿನ ಕಾಲದಲ್ಲಿ ಈಗಿನ ತರ ಆಂಡ್ರಾಯ್ಡ್ ಮೊಬೈಲ್ ಅಥವಾ ಸಾಮಾಜಿಕ ಜಾಲತಾಣಗಳು ಇರ್ಲಿಲ್ಲ. ಆಗಿನ ಕಾಲದಲ್ಲಿ ಪ್ರೇಮ ಪತ್ರ ಬರೆಯುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಹಾಗಿದ್ದರೆ ಮೊದಲ ಪ್ರೇಮ ಪತ್ರ ಬರೆದವರು ಯಾರು ಎಂಬುದು ನಿಮಗೆ ಗೊತ್ತಾ? ಇಲ್ಲಾಂದ್ರೆ ಇಂದು ನಾವು ತಿಳಿಸಿಕೊಡುತ್ತೇವೆ.

    ಮೊದಲ ಪ್ರೇಮ ಪತ್ರಗಳ ಬಗ್ಗೆ ಮಾತನಾಡಿದಾಗ, ಅವುಗಳು ಭಾರತೀಯ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಎನ್ನುವುದು ತಿಳಿದುಬರುತ್ತದೆ. ಹೌದು, ಮೊದಲ ಪ್ರೇಮ ಪತ್ರವನ್ನು ಸುಮಾರು 2,000 ವರ್ಷಗಳ ಹಿಂದೆ ಬರೆಯಲಾಗಿದೆ ಎಂದು ಉಲ್ಲೇಖಗಳು ತಿಳಿಸಿವೆ.

    ವಿದರ್ಭ ರಾಜಕುಮಾರಿ ರುಕ್ಮಿಣಿಯು ಶ್ರೀಕೃಷ್ಣನಿಗೆ ಮೊದಲ ಪ್ರೇಮ ಪತ್ರ ಬರೆದಳು ಎನ್ನಲಾಗಿದೆ. ಮಹರ್ಷಿ ವೇದವ್ಯಾಸರು 7 ಸುಂದರ ಶ್ಲೋಕಗಳೊಂದಿಗೆ ಬರೆದ ಶ್ರೀಮದ್ ಭಗವದ್ಗೀತೆಯ ಸರ್ಗದ 10 ನೇ ಅಧ್ಯಾಯದ, 52ರ ಭಾಗದಲ್ಲಿ ಇದು ಉಲ್ಲೇಖವಾಗಿದೆ. ಅದರಂತೆ ರುಕ್ಮಿಣಿಯು ತನ್ನ ಸ್ನೇಹಿತೆ ಸುನಂದಾ ಮೂಲಕ ಈ ಪ್ರೇಮ ಪತ್ರವನ್ನು ಶ್ರೀಕೃಷ್ಣನಿಗೆ ಕಳುಹಿಸಿದಳು.

    ಪುರಾಣದ ಕಥೆಯ ಪ್ರಕಾರ, ರುಕ್ಮಿಣಿ ಶ್ರೀ ಕೃಷ್ಣನ ಗುಣಗಳು ಮತ್ತು ಧೈರ್ಯದ ಬಗ್ಗೆ ತಿಳಿದುಕೊಂಡು ಅವನನ್ನು ಪ್ರೀತಿಸಲು ಪ್ರಾರಂಭಿಸಿದಳು. ಕೃಷ್ಣನನ್ನೇ ಮದುವೆಯಾಗಬೇಕೆಂದು ಕೂಡ ಬಯಸಿದ್ದಳು. ಆದರೆ, ರುಕ್ಮಿಣಿಯ ಸಹೋದರ ಅವಳನ್ನು ತನ್ನ ಸ್ನೇಹಿತ ಶಿಶುಪಾಲನಿಗೆ ಕೊಟ್ಟು ಮದುವೆ ಮಾಡಲು ಬಯಸಿದನು. ಇದು ರುಕ್ಮಿಣಿಗೆ ಇಷ್ಟವಿರಲಿಲ್ಲ. ಅದಕ್ಕಾಗಿಯೇ ರುಕ್ಮಿಣಿ ಶ್ರೀಕೃಷ್ಣನಿಗೆ ಪ್ರೇಮ ಪತ್ರವನ್ನು ಕಳುಹಿಸಿದ್ದಳು. ರುಕ್ಮಿಣಿಯ ಪ್ರೇಮ ಪತ್ರವನ್ನು ಓದಿದ ಕೃಷ್ಣ ವಿದರ್ಭಕ್ಕೆ ತೆರಳಿ ರುಕ್ಮಿಣಿಯನ್ನು ಅಲ್ಲಿಂದ ಅಪಹರಿಸಿ ಕರೆದುಕೊಂಡು ಹೋದನು.

    ಹಿಂದೆಲ್ಲಾ ಪ್ರೇಮ ನಿವೇದನೆಗೆ ಇದಿದ್ದು ಒಂದೇ ಮಾರ್ಗ, ಅದು ಲವ್‌ ಲೆಟರ್‌. ಕಾಲ, ತಂತ್ರಜ್ಞಾನ ಬದಲಾದಂತೆ ಪ್ರೇಮದ ಪರಿಭಾಷೆಯು ಬದಲಾಗಿದೆ. ಲವ್‌ಲೆಟರ್‌ಗಳು ಬರೆಯುವುದಿರಲಿ ಮೆಸೇಜ್‌ ಕೂಡ ಟೈಪ್‌ ಮಾಡುವ ಕಾಲ ಈಗಿಲ್ಲ. ಈಗೆಲ್ಲಾ ಮೀಮ್ಸ್‌, ಇಮೋಜಿ, ಜಿಫ್‌ಗಳ ಕಾಲ. ಎಲ್ಲ ಭಾವನೆಗಳು ಅದರಲ್ಲಿಯೇ ವಿನಿಮಯವಾಗುತ್ತದೆ.

    ಪ್ರೇಮಪತ್ರ ಬರೆಯುವುದು ಒಂದು ಕಲೆ. ಇದನ್ನು ಎಲ್ಲರಿಂದಲೂ ಬರೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಮನದ ಮಾತನ್ನು ಅಕ್ಷರ ರೂಪಕ್ಕೆ ಇಳಿಸಲು ಯಾವ ಕಲೆಯೂ ಬೇಡ ಅಲ್ಲವೇ?

  • 6ನೇ ಕ್ಲಾಸ್ ನಲ್ಲಿ ಲವ್: ನಟಿ ಹನಿ ರೋಸ್ ಬಿಚ್ಚಿಟ್ಟ ಪ್ರೇಮ್ ಕಹಾನಿ

    6ನೇ ಕ್ಲಾಸ್ ನಲ್ಲಿ ಲವ್: ನಟಿ ಹನಿ ರೋಸ್ ಬಿಚ್ಚಿಟ್ಟ ಪ್ರೇಮ್ ಕಹಾನಿ

    ಪ್ರೇಮಿಗಳ ದಿನಾಚರಣೆ (Valentine’s Day) ಸಂದರ್ಭದಲ್ಲಿ ತಮ್ಮ ಜೀವನದ ಫಸ್ಟ್ ಲವ್ ಬಗ್ಗೆ ಹಂಚಿಕೊಂಡಿದ್ದಾರೆ ದಕ್ಷಿಣದ ಖ್ಯಾತ ನಟಿ ಹನಿ ರೋಸ್. ತಾವು 6ನೇ ಕ್ಲಾಸ್ ನಲ್ಲಿ ಇರುವಾಗಲೇ 10ನೇ ತರಗತಿಯಲ್ಲಿ ಓದುತ್ತಿದ್ದ ಹುಡುಗನೊಬ್ಬ ತಮಗೆ ಲವ್ ಲೆಟರ್ (Love Letter) ಕೊಟ್ಟಿದ್ದ ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.

    ಹನಿ ರೋಸ್ ಈ ಹೇಳಿಕೆ ನೀಡುತ್ತಿದ್ದಂತೆಯೇ ನಾನಾ ರೀತಿಯ ಕಾಮೆಂಟ್ ಹರಿದು ಬಂದಿವೆ. ಇದು ಹೇಗೆ ಸಾಧ್ಯ? ಅದು 6ನೇ ತರಗತಿಯಲ್ಲಿ ಎಂದು ಹಲವರು ಕೇಳಿದ್ದಾರೆ. ಹನ್ನೆರಡನೇ ವಯಸ್ಸಲ್ಲಿ ಲವ್ ಲೆಟರ್ ಸಿಕ್ಕಿದ್ದರೂ ಇನ್ನೂ ಯಾಕೆ ಮದುವೆ ಆಗಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

    ಹನಿ ರೋಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ ಗಳನ್ನು ಹಾಕುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಅವರು ನೆಗೆಟಿವ್ ಕಾಮೆಂಟ್  ಮತ್ತು ಅಶ್ಲೀಲ ಕಾಮೆಂಟ್ ಹಾಕುವವರ ವಿರುದ್ಧ ಧ್ವನಿ ಎತ್ತಿದ್ದರು. ಈ ರೀತಿಯ ಕಾಮೆಂಟ್ ಮಾಡುವವರು ಅದನ್ನು ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಇವರ ಸಲುವಾಗಿ ಸಮಾಜವನ್ನು ದೂಷಿಸುವ ಅಗತ್ಯವಿಲ್ಲ ಎಂದಿದ್ದರು. ತಮ್ಮ ಫೋಟೋ ಮತ್ತು ಫೋಟೋಗೆ ಕೆಟ್ಟದ್ದಾಗಿ ಕಾಮೆಂಟ್ ಹಾಕುವವರ ಬಗ್ಗೆ ಬೇಸರವನ್ನೂ ವ್ಯಕ್ತ ಪಡಿಸಿದ್ದರು.

    ಸೌಂದರ್ಯಕ್ಕೆ ಮತ್ತೊಂದು ಹೆಸರೇ ಹನಿ ರೋಸ್ (Honey Rose). ಇವರು ಮಾಡಿದ ಸಿನಿಮಾಗಳಿಗಿಂತ ಇವರ ಹಾಟ್ ಹಾಟ್ ಫೋಟೋಗಳು ಸಖತ್ ಸದ್ದು ಮಾಡುತ್ತವೆ. ನಡು ವಯಸ್ಸಿಗೆ ಹತ್ತಿರವಾಗಿರುವ ಹನಿ ಸೌಂದರ್ಯದ (Beauty) ಬಗ್ಗೆ ಹಲವರು ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಸ್ಪಷ್ಟನೆ ಕೊಟ್ಟರೂ ಈ ಪ್ರಶ್ನೆಗಳು ಮಾತ್ರ ನಿಲ್ಲದೇ ಇರುವುದಕ್ಕೆ ಹನಿಗೆ ಬೇಸರವಿದೆಯಂತೆ.

    ಮಾನಸ್ಟರ್, ಬಿಗ್ ಬ್ರದರ್, ವೀರ ಸಿಂಹ ರೆಡ್ಡಿ (Veera Simha Reddy) ಸಿನಿಮಾಗಳಲ್ಲಿ ನಾಯಕಿಯಾಗಿ ಹನಿ ರೋಸ್ ನಟಿಸಿದ್ದಾರೆ. ಮೋಹನ್ ಲಾಲ್, ಬಾಲಯ್ಯ (Balayya) ಅವರಂತಹ ದಿಗ್ಗಜ ನಟರಿಗೆ ನಾಯಕಿಯಾಗಿ ಮೋಡಿ ಮಾಡಿದ್ದಾರೆ. ನೋಡಲು ಫಿಟ್ ಮತ್ತು ಮುದ್ದಾಗಿರೋ ಹನಿ ರೋಸ್ ಅವರು ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಅದಕ್ಕೆ ಅವರು ಇಷ್ಟು ಮುದ್ದಾಗಿ ಕಾಣ್ತಿದ್ದಾರೆ ಅಂತೆಲ್ಲಾ ಸುದ್ದಿ ಹರಿದಾಡುತ್ತಲೇ ಇರುತ್ತದೆ.

    ಸೋಷಿಯಲ್ ಮೀಡಿಯಾದಲ್ಲಿ ಅವರ ಬೋಲ್ಡ್ ಫೋಟೋಗಾಗಿಯೇ ಕಾಯುವ ಫ್ಯಾನ್ಸ್ ಇದ್ದಾರೆ. ಹನಿ ರೋಸ್ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದು, ಇದೇ ಅವರ ಸೀಕ್ರೆಟ್ ಎಂದು ಅನೇಕರು ಆರೋಪಿಸಿದ್ರು. ನಟಿ ತಾನು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ ಎಂದು ಸ್ಪಷ್ಟನೆ ಕೂಡ ನೀಡಿದ್ದರು. ನನಗೆ ದೇವರು ಈ ಅಂದ ಕೊಟ್ಟಿದ್ದು ಬಿಟ್ರೆ ಬೇರೇನೂ ಇಲ್ಲ ಎಂದಿದ್ದರು. ನಾನು ಯಾವುದೇ ಸರ್ಜರಿ ಮಾಡಿಸಿಕೊಂಡು ಸೌಂದರ್ಯ ಹೆಚ್ಚಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.

     

    ಸದ್ಯ ‘ರಾಚೆಲ್’ (Rachel) ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭಿನ್ನವಾಗಿರುವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ನಟಿ ಫಸ್ಟ್ ಲುಕ್ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ಕನ್ನಡ, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ರಾಚೆಲ್ ಸಿನಿಮಾ ಮೂಡಿ ಬರಲಿದೆ.

  • ಅವನಿಗೆ ನಾನು ‘ಏಪ್ರಿಲ್ ಏಂಜಲ್’…

    ಅವನಿಗೆ ನಾನು ‘ಏಪ್ರಿಲ್ ಏಂಜಲ್’…

    ವನಿಗೆ ನಾನಂದ್ರೆ ಅದೇನು ಹುಚ್ಚು ಪ್ರೀತಿಯೋ ಗೊತ್ತಿಲ್ಲ. ಕಾಲೇಜಲ್ಲಿ ನೂರಾರು ಹುಡುಗಿಯರಿದ್ರೂ ನನ್ನನ್ನೇ ನೋಡ್ತಿದ್ದ. ಜಾಸ್ತಿ ನನ್ನನ್ನೇ ಮಾತಾಡಿಸ್ತಿದ್ದ. ಮೊದ ಮೊದಲು ಅವನು ನನ್ನ ಪ್ರೀತಿಸ್ತಿದ್ದಾನೆ ಅಂತ ಗೊತ್ತಿರ್ಲಿಲ್ಲ. ಕಾಲೇಜು ಅಂದ್ಮೇಲೆ ಹುಡುಗ-ಹುಡುಗಿ ಕ್ಲೋಸ್ ಆಗಿ ಮಾತಾಡೋದು ಕಾಮನ್. ಬೇರೆ ಹುಡುಗರ ಜೊತೆ ಕ್ಲೋಸ್ ಫ್ರೆಂಡ್ ಆಗಿ ಇದ್ದಂತೆ ಇವನ ಜೊತೆಯೂ ಇದ್ದೆ. ನಾನು ಕಾಲೇಜಿಗೆ ಬಂದ್ರೆ ಸಾಕು, ದಿನವೂ ಸಿಕ್ತಿದ್ದ. ಹಾಯ್.. ಹಲೋ ಅಂತ ಹಲ್ಲು ಕಿಸಿದು ಮಾತಾಡ್ತಿದ್ದ. ನಾನು ಅಷ್ಟೇ ಮಾಮೂಲಿಯಂತೆ ಮಾತಾಡಿಸ್ತಿದ್ದೆ.

    ಕಾಲೇಜಿನ ಕ್ಯಾಂಟೀನ್‌ನಲ್ಲಿ ನಾನು ಗೆಳತಿಯರ ಜೊತೆ ಇದ್ರೆ ಅಲ್ಲಿಗೂ ಬರ್ತಿದ್ದ. ನಾವು ಜ್ಯೂಸ್ ಕುಡಿಯುತ್ತಿದ್ರೆ, ‘ನನಗೆ ಕೊಡಿಸಲ್ವ?’ ಅಂತ ಕೇಳ್ತಿದ್ದ. ‘ಅದಕ್ಕೇನಂತೆ ತಗೋ’ ಅಂತ ನಾನು ಕಾಮನ್ ಆಗಿ ಕೊಡ್ಸಿದ್ದೆ. ಪ್ರತಿ ದಿನ ನನ್ನನ್ನು ಮೀಟ್ ಆಗ್ತಿದ್ದ. ಸಿಕ್ಕಾಗಲೆಲ್ಲ ಹಾಯ್.. ಅಂತ ಸ್ಮೈಲ್ ಕೊಡ್ತಿದ್ದ. ನಾನೂ ಸ್ಮೈಲ್ ಕೊಡ್ತಿದ್ದೆ. ‘ತಿಂಡಿ ಆಯ್ತಾ’ ಎಂದು ಕೇಳ್ತಿದ್ದ. ನಾನೂನು ಉತ್ತರ ಕೊಡ್ತಿದ್ದೆ. ಹೀಗೆಯೇ ದಿನ ಕಳೆಯುತ್ತಿತ್ತು. ನಾನು ಅವನ ಬಗ್ಗೆ ಅಷ್ಟಾಗಿ ಗಮನ ಕೊಟ್ಟಿರಲಿಲ್ಲ. ಇದನ್ನೂ ಓದಿ: ಹೃದಯದ ಮೌನ.. ಹೃದಯಕೆ ಸೀದಾ.. ತಲುಪುವ ಹಾಗೆ ಮಾತಾಡು ನೀ…….

    ಕಾಲೇಜು ಅಂದ್ಲೇಲೆ ಸ್ನೇಹ, ಹರಟೆ, ಲವ್, ಕ್ರಶ್ ಎಲ್ಲವೂ ಇರುತ್ತೆ. ಆದರೆ ಕಾಲೇಜಿನಲ್ಲಿ ನನ್ನ ಮೊದಲ ವರ್ಷ ಅದಾಗಿದ್ದರಿಂದ ಈ ಲವ್ ಬಗ್ಗೆ ಅಷ್ಟೇನು ತಿಳುವಳಿಕೆ ಮತ್ತೆ ಆಸಕ್ತಿ ಇರಲಿಲ್ಲ. ದಿನಕ್ಕೊಬ್ಬರ ಮೇಲೆ ಕ್ರಶ್ ಅಂತೂ ಆಗುತ್ತಿತ್ತು. ನಾವು ಹುಡುಗಿಯರ ಗುಂಪು ನಿಂತಿದ್ದಾಗ, ಎದುರುಗಡೆಯಿಂದ ಯಾರಾದ್ರೂ ಹುಡುಗರು ಸುಳಿದಾಡಿದರೆ, ‘ಹೇ. ಅಲ್ನೋಡೆ.. ಅವ್ನು ತುಂಬಾ ಚೆನ್ನಾಗಿದ್ದಾನೆ ಅಲ್ವ?’ ಅಂತ ಮಾತಾಡಿಕೊಳ್ತಿದ್ವಿ. ಇನ್ಯಾರಾದರು ಹಾಗೆಯೇ ಓಡಾಡುತ್ತಿದ್ರೆ ‘ಇವ್ನು.. ಪರ್ವಾಗಿಲ್ಲ’, ‘ಅವ್ನು ಅಷ್ಟಕ್ಕಷ್ಟೆ’ ಅಂತೆಲ್ಲಾ ಹುಡುಗರ ಸೌಂದರ್ಯವನ್ನ ಜಡ್ಜ್‌ಗಳಂತೆ ತೀರ್ಮಾನಿಸುತ್ತಿದ್ದೆವು.

    ನನ್ನ ಹುಟ್ಟುಹಬ್ಬದ ದಿನವದು. ಆ ದಿನ ಹೊಸ ಡ್ರೆಸ್ ಹಾಕ್ಕೊಂಡು ಕಾಲೇಜಿಗೆ ಬಂದಿದ್ದೆ. ಕ್ಲಾಸ್‌ಮೇಟ್ಸ್ಗೆ ಸಿಹಿ ಹಂಚಿದೆ. ಎಲ್ಲರೂ ವಿಶ್ ಮಾಡಿದರು. ಎಂದಿನಂತೆ ಕ್ಲಾಸ್ ಮುಗಿದ ಮೇಲೆ ನನ್ನ ಗ್ರೂಪ್ ಗೆಳತಿಯರೊಂದಿಗೆ ಹೊರ ಬಂದೆ. ಈ ವೇಳೆ ಧುತ್ ಅಂತ ಅವನು ನನಗೆ ಎದುರಾದ. ನಾನು ಎಂದಿನಂತೆ ಅವನಿಗೆ ಸ್ಮೈಲ್ ಕೊಟ್ಟೆ. ಅವನು, ‘ಕೈ ಮುಂದೆ ನೀಡು’ ಎಂದು ಹೇಳಿ ಒಂದು ಚಾಕ್ಲೆಟ್ ಕೊಟ್ಟ. ಅದನ್ನು ಅಕ್ಕಪಕ್ಕದಲ್ಲಿದ್ದ ನನ್ನ ಸ್ನೇಹಿತೆಯರು ಕಿತ್ತುಕೊಂಡು ಕವರ್ ಓಪನ್ ಮಾಡಿ ಹಂಚಿಕೊಂಡು ಅಲ್ಲಿಯೇ ತಿಂದುಬಿಟ್ಟರು. ಅವನು ಮತ್ತೆ ನನ್ನ ಕೈಗೆ ಒಂದು ಲೆಟರ್ ಕೊಟ್ಟ. ‘ಇದನ್ನ ಇಲ್ಲೇ ಓಪನ್ ಮಾಡ್ಬೇಡ. ಮನೇಲಿ ತೆಗೆದು ಓದು’ ಎಂದು ಹೇಳಿ ಹೊರಟು ಬಿಟ್ಟ.

    ಅವನು ಹೇಳಿದಂತೆ ಲೆಟರ್ ಅನ್ನು ಮನೆಯಲ್ಲಿ ಓಪನ್ ಮಾಡಿ ನೋಡಿದ ನನಗೆ ಶಾಕ್ ಕಾದಿತ್ತು. ಅಲ್ಲೇ ನನಗೆ ತಿಳಿದಿದ್ದು, ಅವನು ನನ್ನ ಲವ್ ಮಾಡ್ತಿದ್ದಾನೆ ಅಂತ. ಲೆಟರ್‌ನ ರಕ್ತದಲ್ಲಿ ಬರೆದಿದ್ದ. ‘ನೀನು ನನ್ನ ಏಂಜಲ್.. ಡ್ರೀಮ್.. ಐ ಲವ್ ಯು’ ಅಂತೆಲ್ಲಾ ಬರೆದಿದ್ದ. ಎಲ್ಲವನ್ನೂ ಓದಿ, ಲೆಟರ್‌ನ್ನು ಹಾಗೆಯೇ ಮಡಚಿಟ್ಟೆ.

    ಮಾರನೇ ದಿನ ಕಾಲೇಜಿಗೆ ಹೋದೆ. ನಿರೀಕ್ಷಿಸಿದ್ದಂತೆ ಅವನು ನನಗೆ ಎದುರಾದ. ‘ನಿನ್ನ ಅಭಿಪ್ರಾಯ ತಿಳಿಸು.. ನಾನು ಒಕೆನಾ’ ಎಂದು ಕೇಳಿದ’. ನಾನು ಕುತೂಹಲಕ್ಕೆ, ‘ನಾನು ಅಂದ್ರೆ ನಿಂಗೆ ಯಾಕಿಷ್ಟ? ಅಂಥದ್ದೇನು ನೋಡಿ ನನ್ನನ್ನು ಲವ್ ಮಾಡ್ದೆ?’ ಅಂತ ಕೇಳ್ದೆ. ಅದಕ್ಕವನು, ‘ನೀನು ಒಳ್ಳೆ ಹುಡುಗಿ.. ನಿನ್ನ ಆಟಿಟ್ಯೂಡ್ ನಂಗೆ ತುಂಬಾ ಇಷ್ಟ.. ನಿನ್ನ ಬರ್ತಡೆ ದಿನವೇ ಪ್ರಪೋಸ್ ಮಾಡಿದ್ದೀನಿ. ನನಗೆ ನೀನು ಏಪ್ರಿಲ್ ಏಂಜಲ್’ ಹಾಗೇ ಹೀಗೆ ಅಂತ ಹೊಗಳಿ ಮಾತಾಡಿದ. ಆ ಕ್ಷಣ ನನಗೆ ಒಳಗೊಳಗೆ ಖುಷಿ ಆಗಿದ್ದುಂಟು. ಒಬ್ಬ ಹುಡುಗ ನನ್ನ ಬಗ್ಗೆ ಪಾಸಿಟಿವ್ ಆಗಿ ಮಾತಾಡಿದ್ನಲ್ಲಾ ಅಂತ ಮನಸ್ಸಲ್ಲೇ ಹಿರಿಹಿರಿ ಹಿಗ್ಗಿದ್ದೆ. ಆದರೂ ಅದನ್ನು ಅವನೆದರು ತೋರಿಸಿಕೊಳ್ಳದಂತೆ ಸುಮ್ಮನೆ ಕೇಳುತ್ತಾ ನಿಂತಿದ್ದೆ. ಕೊನೆಗೆ ಅವನು, ‘ನಿನ್ನ ಅಭಿಪ್ರಾಯ ಹೇಳು’ ಎಂದು ಕೇಳಿದ. ‘ನನಗೆ ಲವ್ ಅಂದ್ರೆ ಆಗಲ್ಲ’ ಎಂದು ಅವನ ಪ್ರೀತಿಯನ್ನು ನಿರಾಕರಿಸಿ ಬಿಟ್ಟೆ. ಅವನು ‘ಯಾಕೆ’ ಎಂದು ಕೇಳಿದ. ನಾನು ಏನನ್ನೂ ಮಾತಾಡದೇ ಅಲ್ಲಿಂದ ಹೊರಟುಬಿಟ್ಟೆ.

    ಈ ವಿಚಾರವನ್ನು ನನ್ನ ಸ್ನೇಹಿತೆಯರ ಬಳಿ ಹೇಳಿಕೊಂಡೆ. ಅವರು ತಕ್ಷಣ ಪ್ರಾಂಶುಪಾಲರ ಬಳಿ ಹೋಗಿ ನಡೆದಿದ್ದೆಲ್ಲವನ್ನೂ ಹೇಳಿಬಿಟ್ಟರು. ಆಗ ಪ್ರಾಂಶುಪಾಲರು ಅವನನ್ನು ಕರೆದು ಬುದ್ದಿಮಾತು ಹೇಳಿದರು. ‘ನೋಡಪ್ಪ.. ನೀವು ಕಾಲೇಜಿಗೆ ಬರೋದು ಚೆನ್ನಾಗಿ ಓದಿ ಬುದ್ಧಿವಂತರಾಗೋಕೆ. ತಿಳುವಳಿಕೆ ಇಲ್ಲದ ವಯಸ್ಸಿನಲ್ಲಿ ಲವ್ ಅಂತ ನಿಮ್ಮ ಜೀವ ಹಾಳು ಮಾಡ್ಕೋಬೇಡಿ’ ಅಂತೆಲ್ಲ ಹೇಳಿ ಅವನ ತಂದೆ ಎದುರೇ ಕಪಾಳಕ್ಕೆ ಹೊಡೆದುಬಿಟ್ಟರು. ತಂದೆ ಎದುರೇ ಹೊಡೆದರಲ್ಲ ಅಂತ ಅವನು ಬೇಜಾರು ಮಾಡ್ಕೊಂಡ. ಅಲ್ಲಿಂದಾಚೆಗೆ ಅವನು ನನ್ನ ಕಡೆ ತಿರುಗಿಯೂ ನೋಡಲಿಲ್ಲ.

    ನಾನು ಯಾವತ್ತೂ ಜೀವನವನ್ನ ಸೀರಿಯಸ್ ಆಗಿ ತಗೊಂಡವಳಲ್ಲ. ಕ್ರೇಜಿ ಹುಡುಗಿ ನಾನು. ಎಲ್ಲರ ಜೊತೆಯೂ ಕ್ಲೋಸ್ ಆಗಿ ಇರ್ತಿದ್ದೆ. ಯಾರ ಮನಸ್ಸನ್ನೂ ನೋಯಿಸಬಾರದು ಎಂಬ ಭಾವನೆಯವಳು. ಕ್ರೇಜಿಯಷ್ಟೇ ಲೇಜಿ಼ ಹುಡುಗಿಯೂ ಹೌದು. ಯಾವ ವಿಚಾರಕ್ಕೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಲವ್ ಪ್ರಪೋಸ್ ಮಾಡಿದ್ದಕ್ಕೆ ಅವನು ಕಪಾಳಕ್ಕೆ ಹೊಡೆಸಿಕೊಂಡು ಅವಮಾನಿತನಾಗಿದ್ದು ನನಗೆ ಬೇಜಾರಾಯಿತು. ಇದನ್ನ ಸ್ನೇಹಿತೆಯರ ಬಳಿ ಹೇಳಿಕೊಂಡಾಗ, ‘ಅವನಿಗೆ ಅವಮಾನವಾಗಿದ್ದಕ್ಕೆ ನೀನು ಫೀಲ್ ಆಗಿರೋದನ್ನ ನೋಡಿದ್ರೆ. ಅವನ ಮೇಲೆ ನಿನಗೆ ಲವ್ ಇದೆ ಅನ್ನಿಸ್ತಿದೆ’ ಎಂದಿದ್ದರು.

    ನನ್ನ ಚೈಲ್ಡಿಸ್ಟ್ ಬುದ್ದಿಗೆ ಅವನ ಪ್ರೀತಿ ಅರ್ಥವಾಗಲಿಲ್ಲ. ಆದರೆ ಅವನಿಗೆ ನಾನು ‘ಏಪ್ರಿಲ್ ಏಂಜಲ್’. ಹೀಗೆ ಹೇಳುತ್ತಾ ಎಲ್ಲಾ ಫ್ರೆಂಡ್ಸ್ ಕೂಡ ನನ್ನನ್ನು ಈಗಲೂ ರೇಗಿಸುತ್ತಾರೆ. ಆದೇನೊ ಗೊತ್ತಿಲ್ಲ, ಆ (ಏಪ್ರಿಲ್ ಏಂಜಲ್) ಪದ ಕೇಳಿದಾಗ ನಾಚಿ ನೀರಂತೆ ಆಗ್ತೀನಿ. ಒಳಗೊಳಗೆ ಅದೇನೊ ಖುಷಿ. ಇಂತಹ ಸುಂದರ ನೆನಪನ್ನು ನನ್ನಲ್ಲಿ ಬಿಟ್ಟು ಹೋದ ಅವನನ್ನು ಪ್ರೀತಿಯಿಂದ ಗೌರವಿಸುತ್ತೇನೆ.

    – ನದಿ, ಕನ್ನಡತಿ

  • ನೀವೆಂದೂ ನನ್ನವರು: ಜಾಕ್ವೆಲಿನ್ ಗೆ ಜೈಲಿನಿಂದ ಮತ್ತೊಂದು ಪತ್ರ ಬರೆದ ಸುಕೇಶ್

    ನೀವೆಂದೂ ನನ್ನವರು: ಜಾಕ್ವೆಲಿನ್ ಗೆ ಜೈಲಿನಿಂದ ಮತ್ತೊಂದು ಪತ್ರ ಬರೆದ ಸುಕೇಶ್

    ಹುಕೋಟಿ ವಂಚನೆ ಆರೋಪಿ, ಬೆಂಗಳೂರಿನ ಸುಕೇಶ್ ಚಂದ್ರಶೇಖರ್ (Sukesh Chandrasekhar) ಜೈಲಿನಿಂದ ಮತ್ತೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಗೆ ಪತ್ರ ಬರೆದಿದ್ದಾನೆ. ಈಸ್ಟರ್ ಹಬ್ಬದ ನೆಪದಲ್ಲಿ ಭಾವನಾತ್ಮಕವಾಗಿ ಪತ್ರ ಬರೆದಿರುವ ಸುಕೇಶ್, ಜೈಲಿನಲ್ಲಿ ಇದ್ದುಕೊಂಡೆ ನಟಿಗೆ ಬರೆದು ಐದನೇ ಪತ್ರ ಇದಾಗಿದೆ. ಜಾಕ್ವೆಲಿನ್ ಗೆ ಈಸ್ಟರ್ ಹಬ್ಬವೆಂದರೆ ಎಲ್ಲಿಲ್ಲದ ಸಂಭ್ರಮ ಎನ್ನುವುದನ್ನು ಈ ಪತ್ರದಲ್ಲಿ ಸುಕೇಶ್ ಬಹಿರಂಗ ಪಡಿಸಿದ್ದಾನೆ.

    ದೆಹಲಿಯ ತಿಹಾರ್ ಜೈಲಿನಿಂದ (Tihar Jail) ನಟಿಗೆ ಬರೆದ ಪತ್ರದಲ್ಲಿ ‘ಮೈ ಬೇಬಿ ಮೈ ಬೊಮ್ಮಾ, ಜಾಕ್ವೆಲಿನ್.. ಬೇಬಿ ಐ ವಿಶ್ ಯು ವೆರಿ ಹ್ಯಾಪಿ ಈಸ್ಟರ್ (Easter). ನಿನ್ನ ನೆಚ್ಚಿನ ಹಬ್ಬಗಳಲ್ಲಿ ಇದು ಒಂದು ಅನ್ನುವುದನ್ನು ನಾನು ಬಲ್ಲೆ. ಈ ಹಬ್ಬದಲ್ಲಿ ನಿಮ್ಮೊಂದಿಗೆ ಇಲ್ಲ ಎನ್ನುವುದು ಬೇಸರ ತರಿಸುತ್ತಿದೆ. ಮುಂದಿನ ವರ್ಷ ಇಬ್ಬರೂ ಒಟ್ಟಿಗೆ ಈ ಹಬ್ಬವನ್ನು ಆಚರಿಸುವಂತೆ ನೋಡಿಕೊಳ್ಳುವೆ. ನೀವೆಂದು ನನ್ನವರು’ ಎಂದು ಸುಕೇಶ್ ಪತ್ರದಲ್ಲಿ ಬರೆದಿದ್ದಾನೆ.

    ಪ್ರತಿ ಕ್ಷಣವೂ ಜಾಕ್ವೆಲಿನ್ ಅವರನ್ನು ನೆನಪಿಸಿಕೊಳ್ಳುವುದಾಗಿಯೂ ತಿಳಿಸಿರುವ ಸುಕೇಶ್, ನನ್ನನ್ನು ನೀನೂ ಅಷ್ಟೇ ನೆನಪಿಸಿಕೊಳ್ಳುತ್ತಿಯಾ ಎಂದು ಗೊತ್ತು. ನೀನು ಮತ್ತು ನಾನು ಎಂದೆಂದಿಗೂ ಶಾಶ್ವತ ಎಂದು ಭಾವನಾತ್ಮಕವಾಗಿ ಪದಗಳನ್ನು ಹೆಣೆದಿದ್ದಾನೆ. ಈ ಪತ್ರವನ್ನು ಜಾಕ್ವೆಲಿನ್ ಓದಿದ್ದಾರೋ ಎಲ್ಲವೋ ಗೊತ್ತಿಲ್ಲ. ಆದರೆ, ನಿರಂತರವಾಗಿ ಪತ್ರಗಳನ್ನು ಸುಕೇಶ್ ಬರೆಯುತ್ತಲೇ ಇದ್ದಾನೆ. ಇದನ್ನೂ ಓದಿ: ನಿಮ್ಮ ಉಪಸ್ಥಿತಿಗೆ ಬೆಲೆ ಕೊಡುವವರನ್ನು ಬಿಟ್ಟೋಗ್ಬೇಡಿ-ರಾಧಿಕಾ ಪಂಡಿತ್ ಹಿಂಗ್ಯಾಕಂದ್ರು?

    ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಕೇಶ್ ಚಂದ್ರಶೇಖರ್ ಡೇಟಿಂಗ್ ವಿಚಾರ ಗುಟ್ಟಾಗಿ ಉಳಿದಿರಲಿಲ್ಲ. ಇಬ್ಬರೂ ಜೊತೆಯಾಗಿ ಕಳೆದ ಖಾಸಗಿ ಫೋಟೋಗಳು ಕೂಡ ವೈರಲ್ ಆಗಿದ್ದವು. ಇವರ ಪ್ರೇಮಕ್ಕೆ ಸಾಕ್ಷಿ ಎನ್ನುವಂತೆ ಕೋಟಿ ಬೆಲೆಬಾಳುವ ಗಿಫ್ಟ್ ಪಡೆದಿದ್ದಳು ಜಾಕ್ವೆಲಿನ್. ಈ ಉಡುಗೊರೆಗಳೇ ಕೊನೆಗೆ ನಟಿಗೆ ಮುಳುವಾದವು. ಕೋರ್ಟ್ ಮೆಟ್ಟಿಲು ಕೂಡ ಹತ್ತಿಸಿದವು.

    ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇಶ್ ಬಂಧನವಾಗುತ್ತಿದ್ದಂತೆಯೇ ಜಾಕ್ವೆಲಿನ್ ಗೂ ಕೂಡ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿತ್ತು. ವಂಚನೆಯ ಹಣದಲ್ಲೇ ನಟಿಗೆ ಉಡುಗೊರೆ ನೀಡಿದ್ದಾನೆ ಎಂದು ಆರೋಪಿಸಲಾಗಿತ್ತು. ಜಾಕ್ವೆಲಿನ್ ಕೂಡ ಬಂಧನವಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ನಟಿ ಮಧ್ಯಂತರ ಜಾಮೀನು  ಪಡೆದುಕೊಂಡರು. ಆದರೂ, ವಿಚಾರಣೆಗೆ ಹೋಗುವುದು ತಪ್ಪಲಿಲ್ಲ.

    ನಂತರದ ದಿನಗಳಲ್ಲಿ ಸುಕೇಶ್ ಗೂ ತಮಗೂ ಸಂಬಂಧವಿಲ್ಲ. ಅವನಿಂದಾಗಿ ನನ್ನ ಜೀವನ ಹಾಳಾಯಿತು ಎಂದು ಜಾಕ್ವೆಲಿನ್ ಆರೋಪಿಸಿದರು. ಈಕೆ ಏನೇ ಆರೋಪ ಮಾಡಿದರೂ, ಸುಕೇಶ್ ಮಾತ್ರ ಇನ್ನೂ ಜಾಕ್ವೆಲಿನ್ ಜಪ ಮಾಡುವುದನ್ನು ನಿಲ್ಲಿಸಿಲ್ಲ. ಮೊನ್ನೆಯಷ್ಟೇ ಪ್ರೇಮಿಗಳ ದಿನದಂದು ವಿಶ್ ಮಾಡಿದ್ದ ಆತ, ನಂತರ ಹೋಳಿ ಹಬ್ಬಕ್ಕೂ ಸುಕೇಶ್ ಶುಭಾಶಯಗಳನ್ನು ಹೇಳಿದ್ದ. ಈಗ ಈಸ್ಟರ್ ಹಬ್ಬಕ್ಕೂ ಪತ್ರ ಬರೆದಿದ್ದಾನೆ.

  • ಜೈಲಿನಿಂದ ಜಾಕ್ವೆಲಿನ್ ಗೆ ಲವ್ ಲೆಟರ್ ಬರೆದ ಸುಕೇಶ್ ಚಂದ್ರಶೇಖರ್

    ಹುಕೋಟಿ ವಂಚನೆಯ ಆರೋಪಿ, ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ (Sukesh Chandrasekhar) ಜೈಲಿನಲ್ಲಿದ್ದುಕೊಂಡೇ (Jail) ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಗೆ ಪ್ರೇಮ ಪತ್ರ (Love Letter) ಬರೆದಿದ್ದಾನೆ. ನಿನಗಾಗಿ ನಾನು ಎಂತಹ ರಿಸ್ಕ್ ತಗೆದುಕೊಳ್ಳಲೂ ರೆಡಿ ಇರುವುದಾಗಿ ತಿಳಿಸಿದ್ದಾನೆ. ಈ ಪತ್ರವನ್ನು ಜಾಕ್ವೆಲಿನ್ ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಆದರೆ, ಪತ್ರವನ್ನಂತೂ ಬರೆದು, ಜಾಕ್ವೆಲಿನ್ ಗೆ ಪೋಸ್ಟ್ ಮಾಡಿದ್ದಾರೆ.

    ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಕೇಶ್ ಚಂದ್ರಶೇಖರ್ ಡೇಟಿಂಗ್ ವಿಚಾರ ಗುಟ್ಟಾಗಿ ಉಳಿದಿರಲಿಲ್ಲ. ಇಬ್ಬರೂ ಜೊತೆಯಾಗಿ ಕಳೆದ ಖಾಸಗಿ ಫೋಟೋಗಳು ಕೂಡ ವೈರಲ್ ಆಗಿದ್ದವು. ಇವರ ಪ್ರೇಮಕ್ಕೆ ಸಾಕ್ಷಿ ಎನ್ನುವಂತೆ ಕೋಟಿ ಬೆಲೆಬಾಳುವ ಗಿಫ್ಟ್ ಪಡೆದಿದ್ದಳು ಜಾಕ್ವೆಲಿನ್. ಈ ಉಡುಗೊರೆಗಳೇ ಕೊನೆಗೆ ನಟಿಗೆ ಮುಳುವಾದವು. ಕೋರ್ಟ್ ಮೆಟ್ಟಿಲು ಕೂಡ ಹತ್ತಿಸಿದವು. ಇದನ್ನೂ ಓದಿ: ಬ್ಯಾಕ್‌ಲೆಸ್ ಫೋಟೋ ಶೇರ್‌, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ

    ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇಶ್ ಬಂಧನವಾಗುತ್ತಿದ್ದಂತೆಯೇ ಜಾಕ್ವೆಲಿನ್ ಗೂ ಕೂಡ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿತ್ತು. ವಂಚನೆಯ ಹಣದಲ್ಲೇ ನಟಿಗೆ ಉಡುಗೊರೆ ನೀಡಿದ್ದಾನೆ ಎಂದು ಆರೋಪಿಸಲಾಗಿತ್ತು. ಜಾಕ್ವೆಲಿನ್ ಕೂಡ ಬಂಧನವಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ನಟಿ ಮಧ್ಯಂತರ ಜಾಮೀನು  ಪಡೆದುಕೊಂಡರು. ಆದರೂ, ವಿಚಾರಣೆಗೆ ಹೋಗುವುದು ತಪ್ಪಲಿಲ್ಲ.

    ನಂತರದ ದಿನಗಳಲ್ಲಿ ಸುಕೇಶ್ ಗೂ ತಮಗೂ ಸಂಬಂಧವಿಲ್ಲ. ಅವನಿಂದಾಗಿ ನನ್ನ ಜೀವನ ಹಾಳಾಯಿತು ಎಂದು ಜಾಕ್ವೆಲಿನ್ ಆರೋಪಿಸಿದರು. ಈಕೆ ಏನೇ ಆರೋಪ ಮಾಡಿದರೂ, ಸುಕೇಶ್ ಮಾತ್ರ ಇನ್ನೂ ಜಾಕ್ವೆಲಿನ್ ಜಪ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಪ್ರೇಮಿಗಳ ದಿನದಂದು ವಿಶ್ ಮಾಡಿದ್ದ. ಹೋಳಿ ಹಬ್ಬಕ್ಕೂ ಸುಕೇಶ್ ಶುಭಾಶಯಗಳನ್ನು ಹೇಳಿದ್ದಾನೆ. ಜೊತೆಗೆ ಪ್ರೇಮ ಸಂದೇಶ ಕಳುಹಿಸಿದ್ದಾನೆ.

  • ಕಾಪಿ ಚೀಟಿಯನ್ನು ಲವ್ ಲೆಟರ್ ಎಂದು ತಪ್ಪಾಗಿ ಭಾವಿಸಿದ ವಿದ್ಯಾರ್ಥಿನಿ- ವಿದ್ಯಾರ್ಥಿಯ ಬರ್ಬರ ಕೊಲೆ

    ಕಾಪಿ ಚೀಟಿಯನ್ನು ಲವ್ ಲೆಟರ್ ಎಂದು ತಪ್ಪಾಗಿ ಭಾವಿಸಿದ ವಿದ್ಯಾರ್ಥಿನಿ- ವಿದ್ಯಾರ್ಥಿಯ ಬರ್ಬರ ಕೊಲೆ

    ಪಾಟ್ನಾ: ಕಾಪಿ ಚೀಟಿಯನ್ನು ನೋಡಿ ಲವ್ ಲೆಟರ್ ಎಂದು ಭಾವಿಸಿದ ವಿದ್ಯಾರ್ಥಿನಿಯೊಬ್ಬಳ (Student) ಸಹೋದರರು ಸೇರಿ ಬಾಲಕನನ್ನು ಹತ್ಯೆ ಮಾಡಿದ ಘಟನೆ ಬಿಹಾರದ ಭೋಜ್‍ಪುರ (Bhojpur) ಜಿಲ್ಲೆಯಲ್ಲಿ ನಡೆದಿದೆ.

    ದಯಾ ಕುಮಾರ್ (12) ಮೃತ ಬಾಲಕ. ದಯಾಕುಮಾರ್ 5ನೇ ತರಗತಿಯನ್ನು ಓದುತ್ತಿದ್ದ. ಆಕೆಯ ಸಹೋದರಿ 6ನೇ ತರಗತಿಯಲ್ಲಿ ಓದುತ್ತಿದ್ದಳು. ಪರೀಕ್ಷೆ ಪ್ರಾರಂಭವಾಗುತ್ತಿದ್ದಂತೆ ದಯಾಕುಮಾರ್ ತನ್ನ ಸಹೋದರಿಗೆ ಸಹಾಯ ಮಾಡುವ ಹಿನ್ನೆಲೆಯಲ್ಲಿ ಕಾಪಿ ಚೀಟಿಯನ್ನು ಆಕೆಯತ್ತ ಎಸೆದಿದ್ದಾನೆ. ದುರಾದೃಷ್ಟವಶಾತ್ ಆ ಕಾಪಿ ಚೀಟಿಯು ಬೇರೆ ವಿದ್ಯಾರ್ಥಿನಿಯ ಡೆಸ್ಕ್‌ನ ಹತ್ತಿರ ಬಿದ್ದಿದೆ. ಇದನ್ನು ನೋಡಿದ ಆ ವಿದ್ಯಾರ್ಥಿನಿ ಚೀಟಿಯನ್ನು ನೋಡಿ ಪ್ರೇಮ ಪತ್ರ (Love Letter) ಎಂದು ಭಾವಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆ ತನ್ನ ಸಹೋದರರಿಗೆ ತಿಳಿಸಿದ್ದಾಳೆ.

    EXAM

    ಘಟನೆಗೆ ಸಂಬಂಧಿಸಿ ವಿದ್ಯಾರ್ಥಿನಿಯ ಸಹೋದರರು ಸ್ಥಳಕ್ಕಾಗಮಿಸಿ ದಯಾಕುಮಾರ್‌ನ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿ ಆತನನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಅದಾದ ನಾಲ್ಕು ದಿನಗಳ ನಂತರ ದಯಾಕುಮಾರ್ ದೇಹದ ಭಾಗಗಳು ರೈಲ್ವೆ ಹಳಿ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇದನ್ನೂ ಓದಿ:23ನೇ ಮಹಡಿಯಿಂದ ಬಿದ್ದು ಮುಂಬೈನ ಖ್ಯಾತ ಬಿಲ್ಡರ್ ಸಾವು

    ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿ ನಾಲ್ವರು ಬಾಲಾಪರಾಧಿಗಳು ಸೇರಿದಂತೆ ವಿದ್ಯಾರ್ಥಿನಿಯ ಕುಟುಂಬದ ಸದಸ್ಯರನ್ನು ಬಂಧಿಸಿದ್ದಾರೆ (Arrest). ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾದ ಸರ್ಕಾರ

    Live Tv
    [brid partner=56869869 player=32851 video=960834 autoplay=true]

  • ಕಾಲೇಜು ದಿನಗಳಲ್ಲಿ ಅಮೀರ್‌ ಮೇಲೆ ಕ್ರಷ್‌ ಆಗಿತ್ತು.. ಲವ್‌ ಲೆಟರ್‌ ಕೂಡ ಬರೆದಿದ್ದೆ: ಬಾಲಿವುಡ್‌ ನಟಿ

    ಕಾಲೇಜು ದಿನಗಳಲ್ಲಿ ಅಮೀರ್‌ ಮೇಲೆ ಕ್ರಷ್‌ ಆಗಿತ್ತು.. ಲವ್‌ ಲೆಟರ್‌ ಕೂಡ ಬರೆದಿದ್ದೆ: ಬಾಲಿವುಡ್‌ ನಟಿ

    ಬಾಲಿವುಡ್‌ ನಟಿ ಶೆಫಾಲಿ ಶಾ ಅವರು ತಮ್ಮ ಕಾಲೇಜು ದಿನಗಳು, ಪ್ರೀತಿ, ಸಿನಿಮಾಗಳಲ್ಲಿನ ಅಭಿನಯದ ಕೆಲವು ಇಂಟರೆಸ್ಟಿಂಗ್‌ ವಿಷಯಗಳನ್ನು ಬಾಲಿವುಡ್‌ ಹಂಗಾಮದಲ್ಲಿ ಹಂಚಿಕೊಂಡಿದ್ದಾರೆ.

    ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಅವರಿಗೆ ಅಮಿರ್‌ ಖಾನ್‌ ಮೇಲೆ ಕ್ರಷ್‌ ಆಗಿತ್ತು. ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ ಸುದೀರ್ಘ ಬರಹವಿದ್ದ ಪ್ರೇಮ ಪತ್ರವೊಂದನ್ನು ಅಮೀರ್‌ ಖಾನ್‌ಗೆ ಕಳುಹಿಸಿದ್ದರು. ಲವ್‌ ಲೆಟರ್‌ನೊಂದಿಗೆ ತನ್ನ ಫೋಟೊವೊಂದನ್ನು ಸಹ ಕಳುಹಿಸಿದ್ದರು. ಇದನ್ನೂ ಓದಿ: ಮಾಧುರಿ ದೀಕ್ಷಿತ್ ಇರೋದು ಮನೇಲಿ ಅಲ್ಲ, ಅರಮನೆಯಲ್ಲಿ: ಹೊಸ ಮನೆಗೆ ದೇವದಾಸ್ ಬೆಡಗಿ

    1995ರಲ್ಲಿ ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದಲ್ಲಿ ತೆರೆ ಕಂಡಿದ್ದ ಅಮೀರ್‌ ಖಾನ್‌ ಅಭಿನಯದ ʼರಂಗೀಲಾʼ ಚಿತ್ರದಲ್ಲಿ ಶೆಫಾಲಿ ಶಾ ಅವರು ಮಾಲಾ ಮಲ್ಹೋತ್ರಾ ಪಾತ್ರದಲ್ಲಿ ಅಭಿನಯಿಸಿದ್ದರು. ಆ ಸಿನಿಮಾದ ಕೆಲವೇ ದೃಶ್ಯಗಳಲ್ಲಿ ಮಾತ್ರ ಇವರ ಪಾತ್ರವಿದೆ. ಆದರೆ ಅಮೀರ್‌ ಅವರೊಂದಿಗೆ ಕಾಣಿಸಿಕೊಳ್ಳುವ ಯಾವುದೇ ದೃಶ್ಯ ಸಿನಿಮಾದಲ್ಲಿರಲಿಲ್ಲ.

    ಬಾಲಿವುಡ್‌ ಹಂಗಾಮದಲ್ಲಿ ಮಾತನಾಡಿದ ಶೆಫಾಲಿ, ಅಮೀರ್‌ ಖಾನ್‌ ಅವರಿಗೆ ನಾನು ಪತ್ರ ಬರೆದಿದ್ದೆ. ಪ್ರೇಮ ಪತ್ರದೊಂದಿಗೆ ನನ್ನ ಫೋಟೋವನ್ನು ಕಳುಹಿಸಿದ್ದೆ. ಅದರಲ್ಲಿ ಭಾವನೆಗಳನ್ನು ವ್ಯಕ್ತಪಡಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಈ ವಾರ ಕರ್ನಾಟಕದಲ್ಲೇ 250ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ‘ಆರ್.ಆರ್.ಆರ್’: ಪುನೀತ್ ‘ಜೇಮ್ಸ್’ ಏನಾಗತ್ತೆ?

    ಚಿತ್ರರಂಗಕ್ಕೆ ಬಂದಾಗಿನಿಂದ ಅಮೀರ್‌ ಖಾನ್‌ ಅವರೊಂದಿಗೆ ನೀವು ಸಿನಿಮಾ ಕೆಲಸ ಮಾಡಿದ್ದೀರಾ ಎಂಬ ಪ್ರಶ್ನೆಗೆ ಶೆಫಾಲಿ, ಇಲ್ಲ ಎಂದಿದ್ದಾರೆ. ಅಮೀರ್‌ ಅಭಿನಯದ ʼರಂಗೀಲಾʼ ಸಿನಿಮಾದಲ್ಲಿ ನಟಿಸಿದ್ದೇನೆ. ಆದರೆ ಅವರೊಟ್ಟಿಗೆ ತೆರೆಯಲ್ಲಿ ಕಾಣಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

    ನಿಮ್ಮ ಪ್ರೀತಿಯ ಬಗ್ಗೆ ಅಮೀರ್‌ ಖಾನ್‌ ಅವರಿಗೆ ಈಗೇನಾದರೂ ನೆನಪಿದೆಯಾ ಎಂಬ ಪ್ರಶ್ನೆಗೆ ಶೆಫಾಲಿ, ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ತನಿಖಾ ಥ್ರಿಲ್ಲರ್‌ ಸಿನಿಮಾ ʼಜಲ್ಸʼದಲ್ಲಿ ಶೆಫಾಲಿ ಶಾ ಮತ್ತು ವಿದ್ಯಾ ಬಾಲನ್‌ ಅಭಿನಯಿಸಿದ್ದಾರೆ. ಸುರೇಶ್‌ ತ್ರಿವೇಣಿ ನಿರ್ದೇಶನದ ಈ ಸಿನಿಮಾ ಮಾ.18ರಂದು ಅಮೇಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ.

  • ಬಾಲಕಿಗೆ ಲವ್ ಲೆಟರ್ ಕೊಟ್ಟ 6ನೇ ತರಗತಿ ವಿದ್ಯಾರ್ಥಿ- ಬಾಸುಂಡೆ ಬರುವಂತೆ ಬಾರಿಸಿದ ಶಿಕ್ಷಕಿ!

    ಬಾಲಕಿಗೆ ಲವ್ ಲೆಟರ್ ಕೊಟ್ಟ 6ನೇ ತರಗತಿ ವಿದ್ಯಾರ್ಥಿ- ಬಾಸುಂಡೆ ಬರುವಂತೆ ಬಾರಿಸಿದ ಶಿಕ್ಷಕಿ!

    ಕಾರವಾರ: ಸಿನಿಮಾಗಳನ್ನು ನೋಡಿ ಪ್ರೌಢ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರೀತಿ ಪ್ರೇಮ ಎಂದು ವಿದ್ಯಾರ್ಥಿನಿಯರ ಹಿಂದೆ ಬಿದ್ದು, ಭವಿಷ್ಯವನ್ನು ಹಾಳುಮಾಡಿಕೊಳ್ಳುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಪ್ರಪಂಚ ಏನು ಎಂಬುದನ್ನ ತಿಳಿದುಕೊಳ್ಳುವ ಶಕ್ತಿಯು ಸಹ ಇಲ್ಲದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಗೆ ಲವ್ ಲೆಟರ್ ಕೊಟ್ಟು ಶಾಲೆಯ ಶಿಕ್ಷಕಿಯಿಂದ ಬಾಸುಂಡೆ ಬರುವಂತೆ ಹೊಡೆತ ತಿಂದಿದ್ದಾನೆ.

    ಹೊನ್ನಾವರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.  ಆರನೇ ತರಗತಿ ವಿದ್ಯಾರ್ಥಿ ತನ್ನ ಸಹಪಾಠಿ ವಿದ್ಯಾರ್ಥಿನಿಗೆ ಸಿನಿಮಾ ಸ್ಟೈಲ್‌ನಲ್ಲಿ ಲವ್ ಲೆಟರ್ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿನಿ ಈ ಲೆಟರ್‌ನ್ನು ಶಾಲೆಯ ಶಿಕ್ಷಕಿ ಕಲ್ಪನ ಹೆಗಡೆಯವರಿಗೆ ನೀಡಿದ್ದಾಳೆ. ಇದನ್ನೂ ಓದಿ: ಪುರುಷರ ಟಾಯ್ಲೆಟ್‍ಗೆ ನುಗ್ಗಿದ್ದ ದೀಪಿಕಾ ಪಡುಕೋಣೆ, ಆಲಿಯಾ ಭಟ್!

    ಲವ್ ಲೆಟರ್ ನೋಡಿ ಸಿಟ್ಟಾದ ಶಿಕ್ಷಕಿ ವಿದ್ಯಾರ್ಥಿಯನ್ನು ಕರೆಯಿಸಿ ಕೋಪದಿಂದ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಅವರ ಹೊಡೆತಕ್ಕೆ ಬಾಲಕನ ಬೆನ್ನುಗಳಲ್ಲಿ ಬಾಸುಂಡೆ ಎದ್ದು ನಲುಗಿ ಹೋಗಿದ್ದಾನೆ. ಈ ವಿಷಯ ತಡವಾಗಿ ಪೋಷಕರಿಗೆ ತಿಳಿದಿದ್ದು ,ಬಾಲಕನ ಬಟ್ಟೆ ಬಿಚ್ಚಿ ನೋಡಿದಾಗ ಬೆನ್ನು ಕೆಂಪಾಗಿತ್ತು. ಇದನ್ನೂ ಓದಿ: Wait and see, ಸಮಯ ಬಂದಾಗ ಎಲ್ಲಾ ಹೇಳುತ್ತೇನೆ: ಎಸ್.ಆರ್.ಪಾಟೀಲ್

    ತಕ್ಷಣ ಪೋಷಕರು ಶಿಕ್ಷಕಿಯನ್ನು ತರಾಟೆ ತೆಗೆದುಕೊಂಡಿದ್ದು ಗಲಾಟೆ ನಡೆದಿದೆ. ಕೊನೆಗೆ ಶಿಕ್ಷಕಿ ಪೋಷಕರಲ್ಲಿ ಕ್ಷಮೆ ಕೇಳುವ ಮೂಲಕ ಪ್ರಕರಣ ಇತ್ಯರ್ಥವಾಗಿದೆ. ಇಂದಿನ ದಿನದಲ್ಲಿ ಮಕ್ಕಳು ಮೊಬೈಲ್ ಸಿನಿಮಾ ಎಂದು ಚಿಕ್ಕ ವಯಸ್ಸಿನಲ್ಲಿ ದಾರಿತಪ್ಪುತ್ತಿರುವುದು ಇಂದಿನ ಪೀಳಿಗೆಗಳು ಯಾವ ಕಡೆ ವಾಲುತ್ತಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.ಇದರ ಜೊತೆಗೆ ತಪ್ಪನ್ನು ತಿದ್ದಬೇಕಾದ ಶಿಕ್ಷಕರು ಕ್ರೌರ್ಯ ಮೆರೆದಿದ್ದು ಸಹ  ಖಂಡನೀಯವಾಗಿದೆ. ಇದನ್ನೂ ಓದಿ: ಲೂಟಿ ಮಾಡಿರುವ ದುಡ್ಡಿದ್ದರೆ ಹೊಸ ಪಕ್ಷ ಮಾಡುತ್ತಿದ್ದೆವು: ಯತ್ನಾಳ್

  • ಚಿನ್ನಿಬಾಂಬ್‍ಗೆ ಲವ್ ಲೆಟರ್ ಕಳುಹಿಸುವುದಕ್ಕೆ ಹೇಳಿ ಬಿಗ್‍ಬಾಸ್

    ಚಿನ್ನಿಬಾಂಬ್‍ಗೆ ಲವ್ ಲೆಟರ್ ಕಳುಹಿಸುವುದಕ್ಕೆ ಹೇಳಿ ಬಿಗ್‍ಬಾಸ್

    ಬಿಗ್‍ಬಾಸ್ ಮನೆಯಲ್ಲಿ ತನ್ನದೇ ಆದ ತುಂಟತನ ಹಾಗೂ ಚೇಷ್ಟೆ ಮೂಲಕ ನಟಿ ಶುಭಾ ಪೂಂಜಾ ಎಲ್ಲರ ಮನಗೆಲ್ಲುತ್ತಿದ್ದಾರೆ. ಪ್ರತಿಯೊಂದು ವಿಚಾರದಲ್ಲಿಯೂ ತರ್ಲೆ ಮಾಡುವ ಮಾಡುವ ಶುಭಾ ಪೂಂಜಾ ಬಾಯ್ ಫ್ರೆಂಡ್ ವಿಚಾರ ಬಂದಾಗ ಮಾತ್ರ ಫುಲ್ ಸೀರಿಯಸ್ ಹಾಗೂ ಪೊಸೆಸಿವ್ ಆಗಿ ಬಿಡುತ್ತಾರೆ.

    ಬಿಗ್‍ಬಾಸ್ ಮನೆಯಿಂದ ಹೋದ ಬಳಿಕ ಮದುವೆಯಾಗುವುದಾಗಿ ಹೇಳಿರುವ ಶುಭಾ ಪೂಂಜಾ, ಬಿಗ್‍ಬಾಸ್ ಮನೆಯಲ್ಲಿ ತಮ್ಮ ಬಾಯ್ ಫ್ರೆಂಡ್ ಸುಮಂತ್‍ರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಪ್ರೀತಿಯಿಂದ ಸುಮಂತ್‍ರನ್ನು ಚಿನ್ನಿಬಾಂಬ್ ಎಂದು ಕರೆಯುವ ಶುಭಾ, ಅವರಿಗೆ ನನಗೊಂದು ಲವ್ ಲೆಟರ್ ಆದರೂ ಕಳುಹಿಸಿಕೊಡಲು ಹೇಳಿ ಬಿಗ್‍ಬಾಸ್ ಎಂದು ಕ್ಯಾಮೆರಾ ಮುಂದೆ ನಿಂತು ಮನವಿ ಮಾಡಿಕೊಂಡಿದ್ದಾರೆ.

    ನಿನ್ನೆ ಶುಭಾ, ಟಿಶ್ಯು ಪೇಪರ್ ಮೇಲೆ ತಮ್ಮ ಪ್ರಿಯಕರನಿಗೆ ಸಂದೇಶವೊಂದನ್ನು ಬರೆದಿದ್ದು, ಅದನ್ನು ಕ್ಯಾಮೆರಾ ಮುಂದೆ ನಿಂತು ಓದಿದ್ದಾರೆ. ನನ್ನ ಪ್ರೀತಿಯ ಚಿನ್ನಿ ಬಾಂಬ್ ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಬೇಗ ಬಾ, ಶುಭಾ ಎಂದು ಹೇಳಿದ್ದಾರೆ. ಬಳಿಕ, ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಚಿನ್ನಿಬಾಂಬ್, ಅವನನ್ನು ಬೇಗ ಇಲ್ಲಿ ಬಂದು ನನ್ನನ್ನು ನೋಡಲು ಹೇಳಿ, ಇಲ್ಲ ಅಂದ್ರೆ ನನಗೊಂದು ಲವ್ ಲೆಟರ್ ಆದರೂ ಕಳುಹಿಸುವುದಕ್ಕೆ ಹೇಳಿ, ಏನೋ ಒಂದು ಮಾಡುವುದಕ್ಕೆ ಹೇಳಿ ಬಿಗ್‍ಬಾಸ್ ಎಂದು ಕೇಳಿಕೊಂಡಿದ್ದಾರೆ.

    ಇತ್ತೀಚೆಗಷ್ಟೇ ದೊಡ್ಮನೆ ಸದಸ್ಯರ ಮುಂದೆ, ಶುಭಾ ಪೂಂಜಾ ತಮ್ಮ ಪ್ರೀತಿ ಬಗ್ಗೆ ಮಾತನಾಡಿದ್ದರು. ಈ ವೇಳೆ ಪ್ರಪೋಸ್ ಮಾಡಿದ್ದು, ನಾನು ಅಲ್ಲ, ಅವನು ಅಲ್ಲ. ಬದಲಿಗೆ ನನ್ನ ತಾಯಿ ಎಂದು ಹೇಳುವ ಮೂಲಕ ಲವ್ ಸ್ಟೋರಿಯನ್ನು ರಿವೀಲ್ ಮಾಡಿದ್ದರು.

  • ‘ನಾನು ಇಷ್ಟಪಟ್ಟಿದ್ದೇನೆ, ನಿಂಗೆ ಓಕೆ ನಾ’- ಅಪ್ರಾಪ್ತೆಗೆ 66ರ ತಾತನಿಂದ ಲವ್ ಲೆಟರ್

    ‘ನಾನು ಇಷ್ಟಪಟ್ಟಿದ್ದೇನೆ, ನಿಂಗೆ ಓಕೆ ನಾ’- ಅಪ್ರಾಪ್ತೆಗೆ 66ರ ತಾತನಿಂದ ಲವ್ ಲೆಟರ್

    – ಪೋಷಕರು ವಾರ್ನಿಂಗ್ ಮಾಡಿದ್ರೂ ಬುದ್ಧಿ ಕಲಿಯದ ವೃದ್ಧ

    ಚೆನ್ನೈ: 16 ವರ್ಷದ ಅಪ್ರಾಪ್ತೆಗೆ 66 ವರ್ಷದ ವೃದ್ಧ ಲವ್ ಲೆಟರ್ ಕೊಟ್ಟಿದ್ದು, ಇದೀಗ ಆತನನ್ನು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಆರೋಪಿಯನ್ನು 66 ವರ್ಷದ ಮೊಹಮ್ಮದ್ ಬಹೀರ್ ಬಾಷಾ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ನೆರೆಹೊರೆಯ 16 ವರ್ಷದ ಹುಡುಗಿಗೆ ಪ್ರೇಮ ಪತ್ರ ನೀಡಿದ್ದನು. ಆರೋಪಿ ವೃದ್ಧ ನೀಡಿದ ಪತ್ರದಲ್ಲಿ, “ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ. ನಿನಗೆ ಓಕೆ ನಾ” ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಆರೋಪಿ ವೃದ್ಧ ನೀಡಿದ ಪತ್ರವನ್ನು ನೋಡಿ ಹುಡುಗಿ ಗಾಬರಿಯಾಗಿ ತನ್ನ ತಾಯಿಗೆ ನೀಡಿದ್ದಾಳೆ. ನಂತರ ತಾಯಿ ತನ್ನ ಪತಿಯನ್ನು ಕರೆದುಕೊಂಡು ಆರೋಪಿ ಬಾಷಾ ಮನೆಗೆ ಹೋಗಿದ್ದಾರೆ. ಅಲ್ಲಿ ಆರೋಪಿಗೆ ಬೈದು ಮತ್ತೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಆರೋಪಿ ಕುಟುಂಬದದವರು ಹುಡುಗಿಯ ಪೋಷಕರ ಬಳಿ ವೃದ್ಧನ ವರ್ತನೆಗೆ ಕ್ಷಮೆ ಕೇಳಿದ್ದಾರೆ.

    ಆದರೆ ಆರೋಪಿ ಬಾಷಾ ಮಾತ್ರ ಮತ್ತೆ ಹುಡುಗಿಯನ್ನು ಪ್ರೀತಿಸುವಂತೆ ಒತ್ತಾಯ ಮಾಡಿದ್ದಾನೆ. ಅಲ್ಲದೇ ಆಕೆಗೆ ಬೆದರಿಕೆ ಕೂಡ ಹಾಕಿದ್ದಾನೆ. ಇದರಿಂದ ಭಯಗೊಂಡ ಹುಡುಗಿ ಮನೆಯಿಂದ ಹೊರಬರಲು ಹೆದರುತ್ತಿದ್ದಳು. ಆಗ ಆಕೆಯ ಪೋಷಕರು ರಾಮನಾಥಪುರಂ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

    ಬಾಷಾ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.