Tag: lokayukt police

  • ಲೋಕಾಯುಕ್ತ ದಾಳಿ- ಎಂಜನಿಯರ್ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ

    ಲೋಕಾಯುಕ್ತ ದಾಳಿ- ಎಂಜನಿಯರ್ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ

    ಭೋಪಾಲ್: ಮಧ್ಯಪ್ರದೇಶದ ಇಂದೋರ್ ಅಭಿವೃದ್ಧಿ ಪ್ರಾಧಿಕಾರದ ಉಪ ಎಂಜನಿಯರ್ ಮನೆಯ ಮೇಲೆ ಇಂದು ಲೋಕಾಯುಕ್ತ ತಂಡ ದಾಳಿ ಮಾಡಿದ್ದು, ಕಂತೆ ಕಂತೆ ಹಣ ಪತ್ತೆಯಾಗಿದೆ.

    ಲೋಕಾಯುಕ್ತ ತಂಡವು ಇಂದು ಬೆಳಗ್ಗೆ ಎಂಜನಿಯರ್ ಗಜಾನನ ಪಾಟೀದಾರ್ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರ ಸಹೋದರ ಬಿಲ್ಡರ್, ರಮೇಶ್ ಚಂದ್ರ ಪಾಟೀದಾರ್ ಮನೆ ಸೇರಿದಂತೆ 9 ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ 25 ಲಕ್ಷ ರೂ. ನಗದು, 2 ಕೆಜಿ ಬೆಳ್ಳಿ ಮತ್ತು 3 ಕೆ.ಜಿ ಚಿನ್ನ ಪತ್ತೆಯಾಗಿದೆ.

    ಗಜಾನನ್ ಪಾಟೀದಾರ ಮಾಸಿಕ ಆದಾಯ 55,000 ರೂ. ಆಗಿದೆ. ಆದರೆ ಅವರ ಬಳಿ ಈಗ ಪತ್ತೆಯಾದ ಹಣಕ್ಕೆ ಯಾವುದೇ ಸೂಕ್ತ ದಾಖಲೆಗಳಿಲ್ಲ. ಗಜಾನನ್ ಪಾಟೀದಾರ ಐದು ವರ್ಷಗಳ ಹಿಂದೆ ಇಂದೋರ್ ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಆಗಿ ನೇಮಕವಾಗಿದ್ದರು.

    ಲೋಕಾಯುಕ್ತ ಅಧಿಕಾರಿಗಳು ಗಜಾನನ ಪಾಟೀದಾರ್ ಮನೆಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಗಜಾನನ ಅವರು ಸಹೋದರ, ಬಿಲ್ಡರ್ ರಮೇಶ್ ಚಂದ್ರಗೆ ಎಷ್ಟು ಸರ್ಕಾರಿ ಯೋಜನೆಗಳನ್ನು ಒದಗಿಸಿದ್ದರು ಎನ್ನುವ ಕುರಿತು ತನಿಖೆ ಆರಂಭವಾಗಿದೆ. ಅಕ್ರಮವಾಗಿ ಪತ್ತೆಯಾದ ಹಣ, ಬೆಳ್ಳಿ, ಬಂಗಾರ ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.