Tag: Lok Sabha Election 2019

  • ಆಪ್ತ ಮಹೇಶ್ ಕುಮಟಳ್ಳಿಯನ್ನ ಬೆಂಗ್ಳೂರಿಗೆ ಕರೆಸಿಕೊಂಡ ರಮೇಶ್ ಜಾರಕಿಹೊಳಿ

    ಆಪ್ತ ಮಹೇಶ್ ಕುಮಟಳ್ಳಿಯನ್ನ ಬೆಂಗ್ಳೂರಿಗೆ ಕರೆಸಿಕೊಂಡ ರಮೇಶ್ ಜಾರಕಿಹೊಳಿ

    ಬೆಳಗಾವಿ: ಕಳೆದ ಕೆಲವು ತಿಂಗಳಿನಿಂದ ಕಾಂಗ್ರೆಸ್‍ನಲ್ಲಿ ಬಂಡಾಯದ ಬಾವುಟ ಬೀಸುತ್ತಿರುವ ಶಾಸಕ ರಮೇಶ್ ಜಾರಕಿಹೊಳಿ ಇಂದು ಆಪ್ತ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.

    ತಂದೆ ಜಾರಿಕಿಹೊಳಿ ಸೂಚನೆಯ ಮೇರೆಗೆ ಅಮರನಾಥ್ ಜಾರಕಿಹೊಳಿ ಟಿಕೆಟ್ ಬುಕ್ ಮಾಡಿ ಮಹೇಶ್ ಕುಮಟಳ್ಳಿ ಜೊತೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬಂದಿದ್ದಾರೆ. ಸಂಜೆ ಮಹೇಶ್ ಕುಮಟಳ್ಳಿ ಮತ್ತು ರಮೇಶ್ ಜಾರಕಿಹೊಳಿ ಭೇಟಿಯಾಗಿ ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚಿಸುವ ಸಾಧ್ಯತೆಗಳಿವೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿಯೂ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡ ಶಾಸಕರು ಮುಗಳ್ನಗೆ ಬೀರಿ ನಮಸ್ಕರಿಸಿ ಒಳ ನಡೆದರು.

    ಲೋಕಸಮರದ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ ಅಂಗಳದಲ್ಲಿ ಕ್ಷಿಪ್ರ ಬೆಳವಣಿಗೆಗಳು ಆಗುತ್ತಿವೆ. ಇಂದು ಸಂಜೆ ಅಸಮಾಧಾನಿತರೆಲ್ಲರೂ ಒಂದೆಡೆ ಸೇರಿ ಫಲಿತಾಂಶ ಮೈತ್ರಿಗೆ ವ್ಯತಿರಿಕ್ತವಾಗಿ ಬಂದಲ್ಲಿ ಅಸಮಾಧಾನಿತ ಶಾಸಕರನ್ನು ಸೆಳೆಯಲು ರಮೇಶ್ ಜಾರಕಿಹೊಳಿ ಆ್ಯಂಡ್ ಟೀಂ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ.

    ಇತ್ತ ಅಥಣಿ ವಿಧಾನಸಭಾ ಕ್ಷೇತ್ರದ ಜನತೆ ಕುಡಿಯುವ ನೀರಿಗಾಗಿ ಪ್ರತಿಭಟನೆ ತಾಲೂಕು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಕುಡಿಯಲು ನೀರು ಕೊಡಿ ಎಂದು ಜನರು ಕೇಳುತ್ತಿರುವ ಸಂದರ್ಭದಲ್ಲಿ ಕ್ಷೇತ್ರದ ಜನತೆ ನೋವು ಕೇಳುವ ಬದಲಾಗಿ ಬೆಂಗಳೂರಿಗೆ ಪ್ರಯಾಣಿಸಿದ್ದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.

  • ರೋಷನ್ ಬೇಗ್ ಸ್ಫೋಟಕ ಹೇಳಿಕೆಯ ಹಿಂದಿದ್ಯಾ ಬಿಜೆಪಿ?

    ರೋಷನ್ ಬೇಗ್ ಸ್ಫೋಟಕ ಹೇಳಿಕೆಯ ಹಿಂದಿದ್ಯಾ ಬಿಜೆಪಿ?

    ಬೆಂಗಳೂರು: ಇಂದು ಮಾಜಿ ಸಚಿವ ರೋಷನ್ ಬೇಗ್ ಹೇಳಿಕೆ ಕೈ ಅಂಗಳದಲ್ಲಿ ಸಂಚಲನವನ್ನೇ ಹುಟ್ಟು ಹಾಕಿದೆ. ಬಿಜೆಪಿಯಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ರಾಜ್ಯ ಮತ್ತು ಕೇಂದ್ರ ನಾಯಕರ ಬಗ್ಗೆ ರೋಷನ್ ಬೇಗ್ ಮಾತನಾಡಿದ್ದಾರೆ ಎನ್ನಲಾಗಿದೆ.

    ಈ ಬಾರಿ ಸಚಿವ ಸ್ಥಾನ ಹಾಗೂ ಪುತ್ರನಿಗೆ ಎಂಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ರೋಷನ್ ಬೇಗ್ ಅಸಮಾಧಾನಗೊಂಡಿದ್ದರು. ಈ ಅಸಮಾಧಾನವನ್ನೇ ಬಂಡವಾಳವಾಗಿಸಿಕೊಂಡ ಬಿಜೆಪಿ ರೋಷನ್ ಬೇಗ್ ಅವರನ್ನ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿತ್ತು. ಬಿಜೆಪಿ ಜೊತೆಗಿನ ಮಾತುಕತೆ ಅಂತ್ಯವಾಗಿದ್ದು, ಕಮಲ ಹಿಡಿಯಲು ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ರೋಷನ್ ಬೇಗ್ ಕಾಂಗ್ರೆಸ್ ವಿರುದ್ಧ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಬಿಜೆಪಿಯ ಪ್ಲಾನ್ ಏನು?:
    ರಾಜ್ಯ ಬಿಜೆಪಿ ಅಲ್ಪಸಂಖ್ಯಾತರ ಓಲೈಕೆಗಾಗಿ ದೊಡ್ಡ ಪ್ರಭಾವಿ ನಾಯಕರನ್ನು ಹೊಂದಿಲ್ಲ. ಹೀಗಾಗಿ ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರದಲ್ಲಿ ಬಿಜೆಪಿಗೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿ ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರೋಷನ್ ಬೇಗ್‍ರತ್ತ ಬಿಜೆಪಿ ಮುಖ ಮಾಡಿತ್ತು. ಸಚಿವ ಸ್ಥಾನ ಮತ್ತು ಎಂಪಿ ಟಿಕೆಟ್ ಸಿಗದೇ ಅಸಮಾಧಾನಗೊಂಡಿದ್ದ ರೋಷನ್ ಬೇಗ್ ರನ್ನು ಬಿಜೆಪಿ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ.

    ಕಾಂಗ್ರೆಸ್-ಜೆಡಿಎಸ್ ಜೊತೆ ದೋಸ್ತಿ ಮಾಡಿಕೊಂಡು ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿಕೊಂಡಿದ್ದರೂ ರೋಷನ್ ಬೇಗ್ ಅವರನ್ನ ಸೈಡ್ ಲೈನ್ ಮಾಡಿ ಸಚಿವ ಸ್ಥಾನ ನೀಡಿರಲಿಲ್ಲ. ಬದಲಾಗಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‍ನಿಂದ ಕಾಂಗ್ರೆಸ್ ಸೇರಿದ್ದ ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹೀಗೆ ಮುಂದುವರಿದರೆ ಪಕ್ಷದಲ್ಲಿ ತಮ್ಮ ಅಸ್ತಿತ್ವ ಮತ್ತು ಪುತ್ರನ ರಾಜಕೀಯ ಭವಿಷ್ಯದ ಬಗ್ಗೆ ಬೇಗ್ ಚಿಂತೆಗೀಡಾಗಿದ್ದರು. ಈ ಸಮಯದಲ್ಲಿ ಬಿಜೆಪಿಯ ನೀಡಿದ ಆಹ್ವಾನವನ್ನು ರೋಷನ್ ಬೇಗ್ ಸ್ವೀಕರಿಸಿದ್ದಾರೆ ಎನ್ನಲಾಗುತ್ತಿದೆ.

    ರೋಷನ್ ಬೇಗ್ ಹೇಳಿಕೆ ಬೆನ್ನಲ್ಲೆ ಕಾಂಗ್ರೆಸ್ ಶೋಕಾಸ್ ನೋಟಿಸ್ ನೀಡಿದೆ. ಇತ್ತ ಕೈ ನಾಯಕರು ರೋಷನ್ ಬೇಗ್ ಬೇಕಾದರೆ ಬಿಜೆಪಿ ಸೇರಬಹುದು ಎಂದು ಸಲಹೆಯನ್ನು ನೀಡುವ ಮೂಲಕ ಕಿಡಿಕಾರಿದ್ದಾರೆ.

    ಬೆಂಗಳೂರು ಕೇಂದ್ರದ ಕೈ ಅಭ್ಯರ್ಥಿ ರಿಜ್ವಾನ್ ಅರ್ಷದ್, ರೋಷನ್ ಬೇಗ್ ಅವರೇ ಮೊಸಳೆ ಕಣ್ಣಿರು ಹಾಕುವುದನ್ನು ನಿಲ್ಲಿಸಿ. ಅಲ್ಪಸಂಖ್ಯಾತರ ಪರವಾಗಿ ಡೋಂಗಿ ಮಾತಾಡಬೇಡಿ. ನಿಮಗೆ ತಾಕತ್ತು ಇದ್ದರೆ ರಾಜೀನಾಮೆ ಕೊಟ್ಟು ಶಿವಾಜಿನಗರದಲ್ಲಿ ಚುನಾವಣೆ ಎದುರಿಸಿ. ನಿಮಗೆ ಕಾಂಗ್ರೆಸ್ ಸರಿಯಿಲ್ಲ ಅಂತ ಹೇಳುವುದಾದರೆ ಬಿಜೆಪಿಯಿಂದ ಸ್ಪರ್ಧೆ ಮಾಡಿ ಎಂದು ರಿಜ್ವಾನ್ ಸವಾಲು ಎಸೆದಿದ್ದು ನೋಡಿದರೆ ಬಿಜೆಪಿಯತ್ತ ರೋಷನ್ ಬೇಗ್ ಹೋಗಲಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ರೋಷನ್ ಬೇಗ್ ಹೇಳಿಕೆಗೆ ಬಿಜೆಪಿ ಮುಖಂಡ ಆರ್. ಅಶೋಕ್ ಪ್ರತಿಕ್ರಿಯಿಸಿ, ಮೇ 23ಕ್ಕೆ ಲಾವಾರಸ ಉಕ್ಕಿ ಯಾರ ಮೇಲೆ ಹರಿಯುತ್ತದೋ ಗೊತ್ತಿಲ್ಲ. ಭೂಕಂಪ ಆಗಿ ಕಾಂಗ್ರೆಸ್ ಮನೆ ಬಿದ್ದು ಹೋಗಲಿದೆ. ಕಾಂಗ್ರೆಸ್ಸಿನವರೇ ಈ ಫಿಲ್ಮ್ ಪ್ರೊಡ್ಯೂಸರ್ ಗಳಾಗಿದ್ದು, 23 ರಂದು ಈ ಸರ್ಕಾರ ಸತ್ತು ಹೋಗುತ್ತದೆ ಎಂದು ಡಾಕ್ಟರ್ ಘೋಷಣೆ ಮಾಡಲಿದ್ದಾರೆ. ಕೇವಲ ರೋಷನ್ ಬೇಗ್ ಒಬ್ಬರ ಪ್ರಶ್ನೆ ಅಲ್ಲ, ಅನೇಕ ಜನ ದಾರಿ ಹುಡುಕುತ್ತಿದ್ದಾರೆ. ದಾರಿ ಯಾವುದಯ್ಯಾ ಎಂದು ಹುಡುಕುತ್ತಿರುವವರಿಗೆ ಬಿಜೆಪಿ ದಾರಿ ತೋರಿಸಲಿದೆ ಎಂದು ಹೇಳಿಕೆ ನೀಡಿದ್ದು ಹಲವು ಅನುಮಾನಗಳನ್ನು ಹುಟ್ಟಿ ಹಾಕಿದೆ.

    https://www.youtube.com/watch?v=7ISeRQjsDZk

  • ಮತದಾನದ ದಿನ ಎಡವಿ ಬಿದ್ದ ಬಿಜೆಪಿ ಸಂಸದೆ ಕಿರಣ್ ಖೇರ್

    ಮತದಾನದ ದಿನ ಎಡವಿ ಬಿದ್ದ ಬಿಜೆಪಿ ಸಂಸದೆ ಕಿರಣ್ ಖೇರ್

    ಚಂಡೀಗಢ: ಬಿಜೆಪಿ ನಾಯಕಿ, ಸಂಸದೆ ಕಿರಣ್ ಖೇರ್ ಮತದಾನದ ದಿನ ಮತಗಟ್ಟೆಗೆ ಆಗಮಿಸುವ ವೇಳೆ ಎಡವಿ ಬಿದ್ದಿದ್ದಾರೆ.

    ಚಂಡೀಗಢ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕಿರಣ್ ಖೇರ್ ಭಾನುವಾರ ತಮ್ಮ ಮತ ಚಲಾಯಿಸಲು ಮತಗಟ್ಟೆ ಬಳಿ ಬಂದಿದ್ದರು. ಇದ್ದಕ್ಕಿದ್ದಂತೆ ಕಿರಣ್ ಖೇರ್ ಎಡವಿದರು. ಸಂಸದೆ ಬೀಳುತ್ತಿದ್ದಂತೆ ಬೆಂಬಲಿಗರು ಮೇಲೆತ್ತಿದರು. ಸ್ವಲ್ಪ ಸಮಯದ ಬಳಿಕ ಸುಧಾರಿಸಿಕೊಂಡ ಕಿರಣ್ ಖೇರ್, ಈ ದೃಶ್ಯಗಳನ್ನು ಸೆರೆ ಹಿಡಿಯಬೇಡಿ ಎಂದು ಹೇಳಿ ಮತಗಟ್ಟೆಯತ್ತ ಹೆಜ್ಜೆ ಹಾಕಿದರು.

    ಕಿರಣ್ ಖೇರ್ ಎಡವಿ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಫಲಿತಾಂಶಕ್ಕೂ ಮುನ್ನವೇ ಬಿದ್ದ ಸಂಸದೆ ಎಂದು ಹೇಳಿ ಕಾಲೆಳೆಯುತ್ತಿದ್ದಾರೆ.

    2014ರ ಚುನಾವಣೆಯಲ್ಲಿ ಚಂಡೀಗಢ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಕಿರಣ್ ಖೇರ್ ಗೆಲುವು ದಾಖಲಿಸಿದ್ದರು. ಈ ಬಾರಿ ಮತ್ತೊಮ್ಮೆ ಕಣದಲ್ಲಿದ್ದು, ಕಾಂಗ್ರೆಸ್‍ನಿಂದ ಪವನ್ ಬನ್ಸಾಲ್ ಎದುರಾಳಿಯಾಗಿದ್ದಾರೆ. ಲೋಕಸಮರದ ಚುನಾವಣೋತ್ತರ ಸಮೀಕ್ಷೆ ಹೊರ ಬಂದಿದ್ದು 10 ರಲ್ಲಿ 9 ಸರ್ವೇಗಳು ಕೇಂದ್ರದಲ್ಲಿ ಎನ್‍ಡಿಎ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿವೆ ಎಂದು ಹೇಳಿವೆ.

  • ಎಕ್ಸಿಟ್ ಪೋಲ್ ಎಂಬ ಗಾಸಿಪ್ ನಂಬಲ್ಲ: ಮಮತಾ ಬ್ಯಾನರ್ಜಿ

    ಎಕ್ಸಿಟ್ ಪೋಲ್ ಎಂಬ ಗಾಸಿಪ್ ನಂಬಲ್ಲ: ಮಮತಾ ಬ್ಯಾನರ್ಜಿ

    – ಆಯೋಗ ಮೋದಿಗೆ ಶರಣಾಗಿದೆ ಅಂದ್ರು ರಾಗಾ

    ನವದೆಹಲಿ: ಭಾನುವಾರ ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿದೆ. 10ರಲ್ಲಿ 9 ಸಮೀಕ್ಷೆಗಳು ಕೇಂದ್ರದಲ್ಲಿ ಮತ್ತೊಮ್ಮೆ ಎನ್‍ಡಿಎ ಸರ್ಕಾರ ರಚನೆ ಮಾಡಲಿದೆ ಎಂದು ಸ್ಪಷ್ಟವಾಗಿ ಹೇಳಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಎಕ್ಸಿಟ್ ಪೋಲ್ ಎಂಬ ಗಾಸಿಪ್ ನಂಬಲ್ಲ ಎಂದು ಹೇಳಿದ್ದಾರೆ.

    ದೆಹಲಿಯಲ್ಲಿರುವ ಮಾಧ್ಯಮಗಳು ವಿಶ್ವಾಸರ್ಹತೆಯನ್ನು ಕಳೆದುಕೊಳ್ಳುತ್ತಿವೆ. ಎಕ್ಸಿಟ್ ಪೋಲ್ ಹೆಸರಿನಲ್ಲಿ ಸುಳ್ಳನ್ನು ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಜನಮತಕ್ಕಾಗಿ ನಾವು ಕಾಯುತ್ತೇವೆ. ಪ್ರಧಾನಿ ಮೋದಿಜಿ ಏಳನೇ ಹಂತದ ಚುನಾವಣೆಗೂ ಮುನ್ನವೇ ಎನ್‍ಡಿಎ ಒಕ್ಕೂಟ 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಹೇಳುತ್ತಾರೆ. ಪೋಲ್ ಸರ್ವೆಗಳ ಅಂಕಿಅಂಶಗಳು ಮೋದಿ ಹೇಳಿಕೆಯೊಂದಿಗೆ ಹೋಲಿಕೆಯಾಗುತ್ತಿವೆ. ಇವಿಎಂನಲ್ಲಿ ಮತ್ತೆ ಗೊಂದಲ ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

    ಟ್ವೀಟ್ ಮೂಲಕ ಸಹ ಅಸಮಾಧಾನ ಹೊರ ಹಾಕಿರುವ ಮಮತಾ ಬ್ಯಾನರ್ಜಿ, ಎಕ್ಸಿಟ್ ಪೋಲ್ ಎಂಬ ಗಾಸಿಪ್ ನಂಬಲಾರೆ. ಸಾವಿರಾರು ಇವಿಎಂಗಳು ಬದಲಾವಣೆ ಮಾಡಿರುವ ಸಾಧ್ಯತೆಗಳಿವೆ. ಎಲ್ಲ ವಿರೋಧ ಪಕ್ಷಗಳು ಒಂದಾಗಿ ಈ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಭಾಗಿಯಾಗಲು ಮನವಿ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಚುನಾವಣೆ ಸಂದರ್ಭದಲ್ಲಿ ಎಲೆಕ್ಟೋಲ್ ಬಾಂಡ್ ಮತ್ತು ಇವಿಎಂಗಳನ್ನು ಬದಲಾವಣೆ ಮಾಡಲಾಗಿದೆ. ಚುನಾವಣಾ ಆಯೋಗ ನಮೋ ಟಿವಿ, ಮೋದಿ ಸೇನೆ ಮತ್ತು ಕೇದಾರನಾಥದಲ್ಲಿಯ ಡ್ರಾಮಾ, ಮೋದಿ ಹಾಗು ಗ್ಯಾಂಗ್ ಮುಂದೆ ಶರಣಾಗಿರೋದನ್ನು ಎಲ್ಲ ಭಾರತೀಯರು ನೋಡಿದ್ದಾರೆ. ಚುನಾವಣಾ ಆಯೋಗ ಮೋದಿ ಗ್ಯಾಂಗ್ ಮುಂದೆ ಗೌರವಾನ್ವಿತವಾಗಿ ಭಯಗೊಂಡಿದೆ ಎಂದು ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಉಮರ್ ಅಬ್ದುಲ್ಲಾ, ಯಾವುದೇ ಎಕ್ಸಿಟ್ ಪೋಲ್ ಗಳು ಸುಳ್ಳು ಹೇಳುವುದಿಲ್ಲ. ಟಿವಿ ಬಂದ್ ಮಾಡಿ, ಸೋಶಿಯಲ್ ಮೀಡಿಯಾದಿಂದ ದೂರ ಉಳಿಯುವ ಸಮಯ ಇದಾಗಿದೆ. ಮೇ 23ರ ಫಲಿತಾಂಶ ಇಡೀ ಜಗತ್ತೇ ನೋಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.

  • ಕರ್ನಾಟಕದಲ್ಲಿ ಬಿಜೆಪಿ ಜಯಭೇರಿ

    ಕರ್ನಾಟಕದಲ್ಲಿ ಬಿಜೆಪಿ ಜಯಭೇರಿ

    ಬೆಂಗಳೂರು: ಲೋಕಸಭಾ ಚುನಾವಣೆ ಎಲ್ಲ ಹಂತದ ಮತದಾನ ಅಂತ್ಯಗೊಂಡಿದ್ದು ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿವೆ. ಎಲ್ಲ ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಸುಮಾರು 21 ರಿಂದ 22 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಭವಿಷ್ಯ ನುಡಿದಿವೆ.

    ಕಾಂಗ್ರೆಸ್-ಜೆಡಿಎಸ್ ನಾಯಕರ ಕಿತ್ತಾಟ ನೇರವಾಗಿ ಬಿಜೆಪಿ ಲಾಭ ಪಡೆದುಕೊಂಡಿದೆ. 2014ರ ಚುನಾವಣೆಯಲ್ಲಿ ಬಿಜೆಪಿ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿಕೊಂಡಿತ್ತು. ಇದೀಗ 2019ರ ಚುನಾವಣೆಯಲ್ಲಿ ತನ್ನ ಸ್ಥಾನಗಳನ್ನು ಏರಿಸಿಕೊಂಡಂತೆ ಕಾಣುತ್ತಿದೆ. ಹಾಗಾದ್ರೆ ಸಮೀಕ್ಷೆಗಳ ಅಂಕಿ-ಅಂಶಗಳು ಹೀಗಿವೆ.

    1. ಟೈಮ್ಸ್ ನೌ: ಬಿಜೆಪಿ-21, ಕಾಂಗ್ರೆಸ್+ಜೆಡಿಎಸ್-9, ಇತರೆ-0
    2. ಸಿ ವೋಟರ್: ಬಿಜೆಪಿ-18, ಕಾಂಗ್ರೆಸ್+ಜೆಡಿಎಸ್-09 ಇತರೆ-01
    3. ಇಂಡಿಯಾ ಟುಡೇ: ಬಿಜೆಪಿ-21ರಿಂದ25, ಕಾಂಗ್ರೆಸ್+ಜೆಡಿಎಸ್-05 ಇತರೆ-1
    4. ಚಾಣಕ್ಯ: ಬಿಜೆಪಿ-23, ಕಾಂಗ್ರೆಸ್-05, ಇತರೆ-00
    5. ನ್ಯೂಸ್ 18: ಬಿಜೆಪಿ-22, ಕಾಂಗ್ರೆಸ್+ಜೆಡಿಎಸ್-6, ಇತರೆ-0
    6. ಎನ್‍ಡಿಟಿವಿ: ಬಿಜೆಪಿ-18ರಿಂದ20, ಕಾಂಗ್ರೆಸ್+ಜೆಡಿಎಸ್-08, ಇತರೆ-00
    7. ಸಿಎನ್‍ಎನ್: ಬಿಜೆಪಿ-22, ಕಾಂಗ್ರೆಸ್-06, ಇತೆರೆ-00
    8. ಎಬಿಪಿ: ಬಿಜೆಪಿ-15, ಕಾಂಗ್ರೆಸ್-13, ಇತರೆ-00

    2014ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು.

  • ತೇಜ್ ಪ್ರತಾಪ್ ಯಾದವ್ ಭದ್ರತಾ ಸಿಬ್ಬಂದಿಯಿಂದ ಕ್ಯಾಮೆರಾಮನ್ ಮೇಲೆ ಹಲ್ಲೆ

    ತೇಜ್ ಪ್ರತಾಪ್ ಯಾದವ್ ಭದ್ರತಾ ಸಿಬ್ಬಂದಿಯಿಂದ ಕ್ಯಾಮೆರಾಮನ್ ಮೇಲೆ ಹಲ್ಲೆ

    ಪಾಟ್ನಾ: ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಅವರ ಭದ್ರತಾ ಸಿಬ್ಬಂದಿ ಮಾಧ್ಯಮದ ಕ್ಯಾಮೆರಾಮನ್ ಹಲ್ಲೆ ನಡೆಸುವ ಮೂಲಕ ಗೂಂಡಾ ವರ್ತನೆಯನ್ನು ತೋರಿದ್ದಾರೆ.

    ಮಾಜಿ ಸಚಿವರಾಗಿರುವ ತೇಜ್ ಪ್ರತಾಪ್ ಯಾದವ್ ಎಲೆಕ್ಟ್ರಿಕ್ ರಿಕ್ಷಾ ಮೂಲಕ ಮತ ಚಲಾಯಿಸಿ ಹೊರಟಿದ್ದರು. ಈ ವೇಳೆ ಕ್ಯಾಮೆರಾಮನ್ ರಂಜನ್ ಎಂಬವರ ಕಾಲಿಗೆ ರಿಕ್ಷಾದ ಗಾಲಿ ತಾಗಿದೆ. ಈ ವೇಳೆ ರಿಕ್ಷಾ ಚಾಲಕನಿಗೆ ಸ್ವಲ್ಪ ಹಿಂದೆ ಹೋಗುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಯಾದವ್ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ.

    ಹಲ್ಲೆಯ ಬಳಿಕ ಮಾತನಾಡಿದ ತೇಜ್ ಪ್ರತಾಪ್ ಯಾದವ್, ಮಾಧ್ಯಮದವರ ಮೇಲೆ ಆಕ್ರೋಶ ಹೊರಹಾಕಿದರು. ನನ್ನ ಭದ್ರತಾ ಸಿಬ್ಬಂದಿ ಯಾವುದೇ ತಪ್ಪು ಮಾಡಿಲ್ಲ. ಮತ ಹಾಕಿ ಬಂದಾಗ ಎಲ್ಲ ಫೋಟೋಗ್ರಾಫರ್ ಗಳು ನನ್ನ ಕಾರ್ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿತೊಡಗಿದರು. ಹೀಗಾಗಿ ನನ್ನ ಕಾರಿನ ಗ್ಲಾಸ್ ಸಹ ಒಡೆದಿದೆ. ನನ್ನ ಕೊಲೆಗೆ ಕೆಲವರು ಸಂಚು ರೂಪಿಸುತ್ತಿದ್ದಾರೆ. ಈ ಗಲಾಟೆಯ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ.

  • ಮೋದಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಮೆಗಾ ತಂತ್ರ!

    ಮೋದಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಮೆಗಾ ತಂತ್ರ!

    -ಕೇಂದ್ರದಲ್ಲಿ ಕರ್ನಾಟಕ ಫಾರ್ಮುಲಾ..?

    ನವದೆಹಲಿ: ಈ ಬಾರಿ ಲೋಕಸಭಾ ಚುನಾವಣೆ ಕೊನೆಯ ಹಂತದಲ್ಲಿದ್ದು, ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ತಂತ್ರಗಳನ್ನು ರಚಿಸುತ್ತಿದೆ. ಇದೀಗ ಯಾವ ಪಕ್ಷಕ್ಕೂ ಬಹುಮತ ಸಿಗದೇ ಇದ್ದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಕರ್ನಾಟಕದ ಫಾರ್ಮೂಲಾ ಜಾರಿಗೆ ತರಲು ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

    2018ರಲ್ಲ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಟ್ರೆಂಡ್ ಗೊತ್ತಾಗುತ್ತಿದ್ದಂತೆ ಜೆಡಿಎಸ್ ಬಾಗಿಲನ್ನು ಕಾಂಗ್ರೆಸ್ ತಟ್ಟಿತ್ತು. ಕಾಂಗ್ರೆಸ್ 80 ಕ್ಷೇತ್ರಗಳನ್ನು ಗೆದ್ದಿದ್ದರೂ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್ ಬಿಟ್ಟುಕೊಟ್ಟು ಮೈತ್ರಿ ಮೂಲಕ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದೆ. ಇದೇ ಫಾರ್ಮೂಲಾವನ್ನು ಕೇಂದ್ರದಲ್ಲಿ ತರಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಮೆಗಾ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಲು ಸೋನಿಯಾ ಗಾಂಧಿ ಮುಂದಾಗಿದ್ದು, ಈಗಾಗಲೇ ಜಗನ್, ಕೆಸಿಆರ್, ನವೀನ್ ಪಟ್ನಾಯಕ್ ರಿಗೆ ಪತ್ರ ಬರೆದಿದ್ದಾರೆ. ಫಲಿತಾಂಶ ಬರೋ ಸಮಯದಲ್ಲಿ ಎಲ್ಲರನ್ನು ಒಗ್ಗೂಡಿಸಿ ಮೋದಿ ವಿರುದ್ಧ ರಣತಂತ್ರಕ್ಕೆ ಕಾಂಗ್ರೆಸ್ ಮುಂದಾಗಿದೆ. ಒಂದು ವೇಳೆ ಬಿಜೆಪಿಯೇತರ ಪಕ್ಷಗಳು ರಾಹುಲ್ ಗಾಂಧಿ ಪ್ರಧಾನಿ ಆಗೋದನ್ನು ವಿರೋಧಿಸಿದ್ರೆ ಬಿಎಸ್‍ಪಿ ನಾಯಕಿ ಉಮಾವತಿ ಅಥವಾ ಪಶ್ವಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಪಿಎಂ ಸ್ಥಾನ ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿದೆ.

  • ಮೋದಿ ಎಂಜಿನೀಯರ್ ಪದವೀಧರರಾ? ಮರುಜೀವ ಪಡೆದುಕೊಂಡ ಪ್ರಧಾನಿ ಶೈಕ್ಷಣಿಕ ಚರ್ಚೆ

    ಮೋದಿ ಎಂಜಿನೀಯರ್ ಪದವೀಧರರಾ? ಮರುಜೀವ ಪಡೆದುಕೊಂಡ ಪ್ರಧಾನಿ ಶೈಕ್ಷಣಿಕ ಚರ್ಚೆ

    -ವೈರಲ್ ಪೇಪರ್ ತುಣುಕಿನ ರಹಸ್ಯ ರಿವೀಲ್

    ಉಡುಪಿ: ಪ್ರಧಾನಿ ನರೇಂದ್ರ ಮೋದಿಯ ಕುಟುಂಬ ಮತ್ತು ಶಿಕ್ಷಣ ಸಾಕಷ್ಟು ಚರ್ಚೆಗೆ ಗ್ರಾಸವಾದ ವಿಚಾರ. ಪ್ರತಿಪಕ್ಷಗಳು ಇವತ್ತಿಗೂ ಈ ಎರಡು ವಿಚಾರವನ್ನಿಟ್ಟುಕೊಂಡು ಬಿಜೆಪಿ ಮೇಲೆ ಟೀಕಾಸ್ತ್ರ ಪ್ರಯೋಗ ಮಾಡುತ್ತಿದೆ. ಈ ನಡುವೆ ನರೇಂದ್ರ ಮೋದಿ ಇಂಜಿನಿಯರಿಂಗ್ ಪದವೀಧರರೇ..? ಅನ್ನೋ ಚರ್ಚೆಗೆ ಮರುಜೀವ ಬಂದಿದೆ.

    ಮೋದಿ ಚಹಾ ಮಾರುತ್ತಿದ್ದರಂತೆ, ಮೋದಿ ಹಿಮಾಲಯದಲ್ಲಿ ನಾಲ್ಕು ವರ್ಷ ತಪಸ್ಸು ಮಾಡಿದ್ದರಂತೆ, ಮೋದಿ ಹಾಗೆ ಮಾಡಿದ್ರಂತೆ, ಮೋದಿ ಹೀಗೆ ಮಾಡಿದ್ರಂತೆ. ಪ್ರಧಾನಿ ನರೇಂದ್ರ ಮೋದಿಯ ಜೀವನದ ಸಾಕಷ್ಟು ವಿಷಯಗಳು ಚರ್ಚೆಯಲ್ಲಿದೆ. ಕೆಲವು ವಿಷಯಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ. ಇನ್ನು ಕೆಲವಕ್ಕೆ ಸಿಕ್ಕಿಲ್ಲ. ಈ ನಡುವೆ ಮೋದಿ ಇಂಜಿನಿಯರಿಂಗ್ ಪದವೀಧರ ಅನ್ನೋ ವಿಚಾರ ಚರ್ಚೆಗೆ ಬಂದಿದೆ.

    ಈ ಇಂಜಿನಿಯರ್ ವಿಚಾರ ಚರ್ಚೆಗೆ ಬರಲು ಕಾರಣ ತರಂಗ ವಾರಪತ್ರಿಕೆಯ ವರದಿಯೊಂದರ ತುಣುಕು. 1992ರಲ್ಲಿ ಪ್ರಕಟವಾಗಿದ್ದ ಲೇಖನವೊಂದರಲ್ಲಿ ನರೇಂದ್ರ ಮೋದಿ ಉಡುಪಿಗೆ ಬಂದಿದ್ದರ ಬಗ್ಗೆ ಮಾಹಿತಿಗಳಿವೆ. ಈ ಸಂದರ್ಭ ತರಂಗದ ವರದಿಗಾರರು ಮೋದಿ ಅವರ ಸಂದರ್ಶನ ಮಾಡಿದ್ದಾರೆ. ಆರ್ ಎಸ್‍ಎಸ್ ನ ಸೌರಾಷ್ಟ್ರದ ಕಾರ್ಯಾವಾಹಕ, ಸಂಘಟನಾ ಚತುರ, ಇಂಜಿನಿಯರ್ ಪದವೀಧರ, ಅವಿವಾಹಿತ ಅಂತ ಉಲ್ಲೇಖ ಮಾಡಿದ್ದಾರೆ.

    2019ರ ಲೋಕಸಮರ ಸಂದರ್ಭ ಈ ಪೇಪರ್ ಕಟ್ಟಿಂಗ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದೆ. ಇದರ ಸತ್ಯಾಸತ್ಯತೆ ಹುಡುಕಲು ಹೋದ ಪಬ್ಲಿಕ್ ಟಿವಿಗೆ ಕೆಲವಷ್ಟು ಮಾಹಿತಿಗಳು ಸಿಕ್ಕಿದೆ. ನರೇಂದ್ರ ಮೋದಿ ಇಂಜಿನಿಯರ್ ಪದವೀಧರರಲ್ಲ. ಇದು ಪ್ರಮಾದದಿಂದಾದ ವರದಿ ಎಂಬುದನ್ನು ಮೋದಿ ಜೊತೆಗಿದ್ದ ಉಡುಪಿ ನಗರಸಭೆಯ ಆಗಿನ ಅಧ್ಯಕ್ಷ ಗುಜ್ವಾಡಿ ಪ್ರಭಾಕರ ನಾಯಕ್ ಸ್ಪಷ್ಟಪಡಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ 1992ರಲ್ಲಿ ಉಡುಪಿಗೆ ಬಂದದ್ದು ಹೌದು. ಎಲ್.ಕೆ. ಅಡ್ವಾಣಿಯವರ ರಥಯಾತ್ರೆಯ ಉಸ್ತುವಾರಿಯನ್ನು ಮೋದಿಯವರು ನೋಡಿಕೊಂಡಿದ್ದರು. ಯಾತ್ರೆಯ ರೂಪುರೇಷೆಯ ಸಭೆ ಆದದ್ದು ಗೃಹಸಚಿವರಾಗಿದ್ದ, ದಿವಂಗತ ವಿಎಸ್ ಆಚಾರ್ಯರ ಮನೆಯಲ್ಲಿ. ಅಲ್ಲೇ ಈ ಫೋಟೋ ಕ್ಲಿಕ್ ಆಗಿದ್ದು. ಮೋದಿಯವರ ಸಂದರ್ಶನ ಮಾಡುತ್ತಿರುವಾಗ ಅವರ ಜೊತೆಗೆ ಎಂಜಿನಿಯರ್ ಒಬ್ಬರಿದ್ದರು. ಅವರ ಕ್ವಾಲಿಫಿಕೇಶನ್ ಮೋದಿ ಹೆಸರಿನ ಮುಂದೆ ಬಿದ್ದಿದ್ದಂತೆ. ಆದ್ರೆ ಸಂದರ್ಶನ ಮಾತ್ರ ಡಾ. ವಿಎಸ್ ಆಚಾರ್ಯ ಮನೆ ಮುಂದೆ ನಡೆದಿತ್ತು. ಇದನ್ನು ವಿಎಸ್ ಆಚಾರ್ಯ ಪತ್ನಿ ಶಾಂತಾ ಆಚಾರ್ಯ ಕೂಡಾ ಒಪ್ಪಿಕೊಳ್ಳುತ್ತಾರೆ. ಆ ಫೋಟೋ ಅವರ ಬಳಿಯೂ ಇದೆ.

    ಮೋದಿ ರಾಜ್ಯ ಶಾಸ್ತ್ರದಲ್ಲಿ ಎಂಎ ಮಾಡಿದ್ದಾರೆ ಅಂತ ಗೂಗಲ್ ಹೇಳುತ್ತಿದೆ. ಅವರ ನಾಮಪತ್ರದಲ್ಲೂ ಉಲ್ಲೇಖವಿದೆ. ವರದಿಯ ತುಣುಕನ್ನು ಮೋದಿ ವಿರೋಧಿಗಳು ಗೇಲಿ ಮಾಡಲು- ಟೀಕಿಸಲು ಬಳಸುತ್ತಿದ್ದಾರೆ.

  • ಮೋದಿ ರೆಡಾರ್ ಹೇಳಿಕೆಯನ್ನ ಅಸ್ತ್ರವಾಗಿಸಿಕೊಂಡ ರಾಹುಲ್-ಪ್ರಿಯಾಂಕ

    ಮೋದಿ ರೆಡಾರ್ ಹೇಳಿಕೆಯನ್ನ ಅಸ್ತ್ರವಾಗಿಸಿಕೊಂಡ ರಾಹುಲ್-ಪ್ರಿಯಾಂಕ

    ನವದೆಹಲಿ: 2019ರ ಲೋಕಸಭಾ ಚುನಾವಣೆಯ ಅಂತಿಮಘಟ್ಟ ತಲುಪಿದ್ದು, ಮೇ 19ರಂದು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಕೊನೆಯ ಹಂತದ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ತಮ್ಮ ಭಾಷಣಗಳಲ್ಲಿ ಪ್ರಧಾನಿ ಮೋದಿಯವರ ಹೇಳಿಕೆಗಳನ್ನು ಬಳಸಿ ಕುಟುಕುತ್ತಿದ್ದಾರೆ.

    ವಾತಾವರಣ ಸರಿ ಇಲ್ಲದಿದ್ರೆ ವಿಮಾನಗಳು ರೆಡಾರ್ ಸಂಪರ್ಕವನ್ನು ಕಳೆದುಕೊಳ್ಳುತ್ತವೆ ಎಂದು ಪ್ರಧಾನಿ ಮೋದಿ ಹೇಳ್ತಾರೆ. ಭಾರತದಲ್ಲಿ ಮಳೆಯಿಂದಾಗಿ ಹವಾಮಾನದಲ್ಲಿ ವೈಪರೀತ್ಯ ಉಂಟಾದ್ರೆ ನಮ್ಮ ವಿಮಾನಗಳು ರೆಡಾರ್ ಸಂಪರ್ಕವನ್ನ ಕಳೆದುಕೊಳ್ಳುತ್ತವಾ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದರು.

    ಮಧ್ಯ ಪ್ರದೇಶದ ಸಮಾವೇಶದಲ್ಲಿ ಮಾತನಾಡುತ್ತಾ, ಮೋದಿಜೀ ಅಧಿಕಾರಿಗಳಿಗೆ ಮತ್ತು ವಾಯಸೇನೆಯ ಮುಖ್ಯಸ್ಥರಿಗೆ ಹವಾಮಾನ ವೈಪರೀತ್ಯ ನಮಗೆ ಲಾಭದಾಯಕವಾಗಿರಲಿದೆ. ಪಾಕಿಸ್ತಾನದ ರೆಡಾರ್ ನಮ್ಮ ವಿಮಾನಗಳನ್ನು ಟಾರ್ಗೆಟ್ ಮಾಡಲ್ಲ ಎಂದು ಹೇಳುತ್ತಾರೆ. ಕಳೆದ ಐದು ವರ್ಷಗಳಲ್ಲಿ ಏನು ಯುವಕರಿಗೆ ಉದ್ಯೋಗ ನೀಡಲು ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದರು.

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕ ಗಾಂಧಿ, ಪ್ರಧಾನಿಗಳ ಹೇಳಿಕೆಯನ್ನು ಗೇಲಿ ಮಾಡಿದ್ದಾರೆ. ತಾನೇ ದೊಡ್ಡ ರಕ್ಷಣಾತಜ್ಞ ಎಂದು ಹೇಳುವ ವಿಶೇಷ ವ್ಯಕ್ತಿ ಯುದ್ಧ ವಿಮಾನ ತಯಾರಿಕೆಯನ್ನು ಯಾರಿಗೆ ನೀಡಬೇಕೆಂದು ನಿರ್ಧರಿಸುತ್ತಾರೆ. ಇದೂವರೆಗೂ ವಿಮಾನ ನಿರ್ಮಿಸದ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ಭೂಮಿ ನೀಡುತ್ತಾರೆ. ಕಳೆದ 50 ವರ್ಷಗಳಿಂದ ವಿಮಾನಗಳನ್ನ ತಯಾರಿಸಿಕೊಂಡಿರುವ ಹೆಚ್‍ಎಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲ್ಲ ಎಂದು ರಫೇಲ್ ವಿಚಾರ ಪ್ರಸ್ತಾಸಿದರು.

    ಇಷ್ಟು ದೊಡ್ಡ ವಿಶೇಷ ರಕ್ಷಣಾತಜ್ಞ, ಮೋಡ ಮುಸುಕಿದ ವಾತಾವರಣವಿದೆ, ವಿಮಾನಗಳು ರೆಡಾರ್ ಸಂಪರ್ಕಕ್ಕೆ ಸಿಗಲ್ಲ ಎಂದು ಹೇಳುತ್ತಾರೆ. ಮಳೆಯ ವಾತಾವರಣವೇ ಇರಲಿ, ಬಿಸಿಲೇ ಇರಲಿ. ಎಲ್ಲರೂ ನಿಮ್ಮ ರಾಜನೀತಿಯ ಮರ್ಮವನ್ನು ಅರಿತುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಮೋದಿ ಹೇಳಿದ್ದೇನು?
    ದಾಳಿಯ ಮುನ್ನ ರಾತ್ರಿ 9 ಗಂಟೆಗೆ ರಿವ್ಯೂವ್ ಮಾಡಿದೆ. ಮತ್ತೊಮ್ಮೆ ರಾತ್ರಿ 12 ಗಂಟೆಗೆ ದಾಳಿಯ ಪ್ಲಾನ್ ನೋಡಿದೆ. ಅಂದು ರಾತ್ರಿ ಹೆಚ್ಚು ಮಳೆಯಾಗಿದ್ದರಿಂದ ನಮ್ಮ ರೆಡಾರ್ ಕೆಟ್ಟಿತ್ತು. ದಾಳಿಗೆ ವಾತಾವರಣ ಸಹಕರಿಸುತ್ತಿಲ್ಲ. ಹಾಗಾಗಿ ಸರ್ಜಿಕಲ್ ಸ್ಟ್ರೈಕ್ ದಾಳಿಯ ದಿನಾಂಕ ಬದಲಿಸೋಣ ಎಂಬ ಸಲಹೆಯನ್ನು ತಜ್ಞರು ನೀಡಿದರು. ದಾಳಿಯ ರಹಸ್ಯವನ್ನು ಎಲ್ಲಿಯೂ ಲೀಕ್ ಆಗಿರಲಿಲ್ಲ. ಒಂದು ವೇಳೆ ದಿನಾಂಕ ಮುಂದೂಡಿದ್ರೆ ದಾಳಿಯ ರಹಸ್ಯ ಲೀಕ್ ಆದ್ರೆ ಹೇಗೆ ಎಂಬ ಸಂಶಯ ಕಾಡಿತ್ತು. ಮೋಡಗಳಿಂದ ನಮ್ಮ ರೆಡಾರ್ ಕೆಲಸ ಮಾಡುತ್ತಿಲ್ಲ. ಹಾಗೆ ಶತ್ರುಗಳ ರೆಡಾರ್ ಸಹ ಕೆಲಸ ಮಾಡುತ್ತಿರಲ್ಲ. ಕೆಲವು ಸಾರಿ ಮೋಡಗಳು ಸಹಾಯ ಮಾಡುತ್ತವೆ. ನಾವು ರೆಡಾರ್ ನಿಂದ ಸಲೀಸಾಗಿ ತಪ್ಪಿಸಿಕೊಳ್ಳಬಹುದು. ಎಲ್ಲ ಅಧಿಕಾರಿಗಳು ಗೊಂದಲದಲ್ಲಿದ್ದಾಗ ಹೋಗಿ ದಾಳಿ ನಡೆಸಿ ಎಂದು ಅದೇಶಿಸಿದೆ ಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದರು.

  • ಮಾರ್ಗ ಮಧ್ಯೆ ಮೋದಿ ಘೋಷಣೆ- ಬಿಜೆಪಿ ಬೆಂಬಲಿಗರಿಗೆ ಸರ್ಪ್ರೈಸ್ ನೀಡಿದ ಪ್ರಿಯಾಂಕ ಗಾಂಧಿ

    ಮಾರ್ಗ ಮಧ್ಯೆ ಮೋದಿ ಘೋಷಣೆ- ಬಿಜೆಪಿ ಬೆಂಬಲಿಗರಿಗೆ ಸರ್ಪ್ರೈಸ್ ನೀಡಿದ ಪ್ರಿಯಾಂಕ ಗಾಂಧಿ

    ಭೋಪಾಲ್: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮಧ್ಯ ಪ್ರದೇಶದ ಇಂದೋರ್ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಸೋಮವಾರ ಭಾಗಿಯಾಗಿದ್ದರು. ಈ ವೇಳೆ ಕೆಲ ಬಿಜೆಪಿ ಬೆಂಬಲಿಗರು ಮಾರ್ಗ ಮಧ್ಯೆ ‘ಮೋದಿ.. ಮೋದಿ..’ ಎಂದು ಘೋಷಣೆ ಕೂಗುತ್ತಿದ್ದರು. ದಿಢೀರ್ ಅಂತಾ ಕಾರಿನಿಂದ ಇಳಿದು ಬಂದು ಪ್ರಿಯಾಂಕ ಎಲ್ಲರ ಕೈ ಕುಲುಕಿ ಆಲ್ ದಿ ಬೆಸ್ಟ್ ಹೇಳಿ ಎಲ್ಲ ಬಿಜೆಪಿ ಬೆಂಬಲಿಗರಿಗೆ ಅಚ್ಚರಿ ಮೂಡಿಸಿದ್ದಾರೆ.

    ಈ ವಿಡಿಯೋವನ್ನು ಮಧ್ಯಪ್ರದೇಶ ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದೆ. ಕಾರಿನಿಂದ ಹೊರಬಂದ ಪ್ರಿಯಾಂಕ ಗಾಂಧಿ, ನೀವು ನಿಮ್ಮ ಜಾಗದಲ್ಲಿ, ನಾನು ನನ್ನ ಜಾಗದಲ್ಲಿ ಸರಿಯಾಗಿದ್ದೇವೆ. ನಿಮಗೆಲ್ಲರಿಗೂ ಒಳ್ಳೆಯದಾಗಲಿ ಎಂದು ಕೈ ಕುಲುಕಿದ್ದಾರೆ. ಒಂದು ಕ್ಷಣ ಗಲಿಬಿಲಿಗೊಂಡ ಬಿಜೆಪಿ ಕಾರ್ಯಕರ್ತರು ಕೈ ಕುಲುಕುತ್ತಾ ನಿಮಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಟ್ವೀಟ್ ಮೂಲಕ ಬಿಜೆಪಿಯ ಕಾಲೆಳೆದಿರುವ ಮಧ್ಯ ಪ್ರದೇಶ ಕಾಂಗ್ರೆಸ್, ಇಂದೋರ್ ನಲ್ಲಿ ಎಂದಿನಂತೆ ಬಿಜೆಪಿ ಬೆಂಬಲಿತ ಕೆಲವರು ಮೋದಿ ಘೋಷಣೆ ಕೂಗಿದರು. ಎಲ್ಲರ ಕೈ ಕುಲುಕಿ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಇದು ನಮ್ಮ ದೇಶದಲ್ಲಿರುವ ಮಣ್ಣಿನ ಗುಣ ಮತ್ತು ದೇಶದಲ್ಲಿಯ ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣುವಂತೆ ತೋರಿಸುತ್ತದೆ. ಬಹುಶಃ ಮೋದಿ ನಮ್ಮ ದೇಶವನ್ನು ಅರ್ಥ ಮಾಡಿಕೊಳ್ಳಬಹುದಿತ್ತು ಎಂದು ಬರೆದುಕೊಂಡಿದೆ.

    ಸೋಮವಾರ ಪ್ರಚಾರಕ್ಕೂ ಮುನ್ನ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರನಿಗೆ ಪ್ರಿಯಾಂಕ ಗಾಂಧಿ ವಿಶೇಷ ಪೂಜೆ ಸಲ್ಲಿಸಿದ್ದರು. ಪೂಜೆಯ ಬಳಿಕ ನೇರವಾಗಿ ರತ್ಲಂ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು. ಕೊನೆಯ ಹಂತದ ಮತದಾನವು ಮೇ 19ರಂದು ನಡೆಯಲಿದೆ. ಅಂದು ಮಧ್ಯಪ್ರದೇಶದ ಇಂದೋರ್, ಉಜ್ಜೈನಿ, ರತ್ಲಂ ಸೇರಿದಂತೆ 8 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಲೋಕಸಭಾ ಚುನಾವಣೆ ಫಲಿತಾಂಶ ಮೇ 23ರಂದು ಹೊರ ಬೀಳಲಿದೆ.

    ಈ ಹಿಂದೆ ರಾಹುಲ್ ಗಾಂಧಿ ಅವರ ಸಮಾವೇಶಕ್ಕೆ ಕೆಲ ಯುವಕರು ‘ಮೈ ಭೀ ಚೌಕಿದಾರ್’ ಬರಹವುಳ್ಳ ಟೀ ಶರ್ಟ್ ಧರಿಸಿ ಬಂದಿದ್ದರು. ಬೃಹತ್ ಸಮಾವೇಶದಲ್ಲಿ ಯುವಕರನ್ನ ಗುರಿಯಾಗಿಸಿಕೊಂಡು, ‘ಮೈ ಭೀ ಚೌಕಿದಾರ್’ ಟೀ ಶರ್ಟ್ ಧರಿಸಿ ಕಾಂಗ್ರೆಸ್ ಸಮಾವೇಶಕ್ಕೆ ಬಂದಿರುವ ಯುವಕರನ್ನು ಸ್ವಾಗತ ಮಾಡಿಕೊಳ್ಳುತ್ತೇನೆ. ನಿಮ್ಮ ಚೌಕಿದಾರ್ ಜೀ, 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಅಂತ ಹೇಳಿದ್ದರು. ಆ ಎರಡು ಕೋಟಿ ಉದ್ಯೋಗ ಎಲ್ಲಿವೆ? ನಿಮ್ಮ ಖಾತೆಗೆ 15 ಲಕ್ಷ ರೂ. ಬಂದಿದೆಯಾ ಎಂದು ಪ್ರಶ್ನಿಸಿದ್ದರು.