Tag: lok sabha 2019 election

  • ‘ರೆಬೆಲ್ ‘ ರಣಭೇರಿ..!

    ‘ರೆಬೆಲ್ ‘ ರಣಭೇರಿ..!

    https://www.youtube.com/watch?v=S5Ed7g_lTcE

  • ನನ್ನ ವಿರುದ್ಧ ಮಾತನಾಡಿದವರಿಗೆ ಉತ್ತರವನ್ನು ನೀವು ನೀಡಿ: ಸುಮಲತಾ

    ನನ್ನ ವಿರುದ್ಧ ಮಾತನಾಡಿದವರಿಗೆ ಉತ್ತರವನ್ನು ನೀವು ನೀಡಿ: ಸುಮಲತಾ

    – ನಾನು ಯಾರೆಂದು ಹೇಳುವ ಸಮಯ ಬಂದಿದೆ
    – ರಾಜಕೀಯದಲ್ಲಿ ನನಗೆ ಎಬಿಸಿಡಿಯೂ ಗೊತ್ತಿಲ್ಲ
    – ಜನರ ಅಭಿಮಾನಕ್ಕೆ ಮಣಿದು ಸ್ಪರ್ಧೆಗೆ ಒಪ್ಪಿಕೊಂಡೆ
    – ಕಾಂಗ್ರೆಸ್-ಜೆಡಿಎಸ್‍ಗೆ ತಿರುಗೇಟು ಕೊಟ್ಟ ಸುಮಲತಾ

    ಮಂಡ್ಯ: ನಾನು ಸ್ಪರ್ಧಿಸುತ್ತೇನೆ ಎಂದು ಹೇಳಿದಾಗ ಮಾತುಗಳ ಬಾಣ ಬಿಡಲು ಆರಂಭಿಸಿದರು. ನಾನು ಅಂತಹ ಮಾತುಗಳಿಗೆ ಉತ್ತರ ಕೊಡುವುದಿಲ್ಲ. ಅವರ ಮಾತುಗಳಿಗೆ ಮತದಾನದ ದಿನ ನೀವು ಉತ್ತರವನ್ನು ನೀಡಬೇಕು ಎಂದು ಸುಮಲತಾ ಹೇಳಿದ್ದಾರೆ.

    ನಾಮಪತ್ರ ಸಲ್ಲಿಸಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮಂಡ್ಯದ ಮೂಲೆ ಮೂಲೆಗೂ ಹೋಗಿ ಜನರನ್ನು ಕೇಳಿದೆ. ನಾನು ರಾಜಕೀಯಕ್ಕೆ ಬರಬಹುದಾ? ಲೋಕಸಭೆಗೆ ನಿಲ್ಲಬಹುದಾ ಎಂದು ಕೇಳಿ ಅಭಿಪ್ರಾಯ ಕಲೆ ಹಾಕಿದೆ. ನೀವು ಯಾವುದೇ ಪಕ್ಷ, ಪಕ್ಷೇತರರಾಗಿ ನಿಂತರೂ ಪರವಾಗಿಲ್ಲ, ಅಂಬರೀಶ್ ಅಣ್ಣನನ್ನ ನೋಡಿ ವೋಟ್ ಹಾಕುತ್ತೇವೆ ಎಂದು ಜಿಲ್ಲೆಯ ಜನತೆ ಹೇಳಿದರು. ಈ ಕಾರಣಕ್ಕೆ ನಾನು ನಿಮ್ಮ ಮುಂದೆ ನಿಂತಿದ್ದೇನೆ ಎಂದು ಹೇಳಿದರು. ಇದನ್ನು ಓದಿ : ಮೈಯಲ್ಲಿರುವ ರಕ್ತವನ್ನ ತೆಗೆದು ನಿಮ್ಮ ಕಾಲು ತೊಳೆದ್ರೂ ಕಡಿಮೆನೇ: ನಟ ದರ್ಶನ್

    ರಾಜಕೀಯಕ್ಕೆ ಬಂದು ಹೆಸರು ಮಾಡುವ ಆಸೆ ನನಗಿರಲಿಲ್ಲ. ಐದಾರು ಭಾಷೆಗಳಲ್ಲಿ 200 ಚಿತ್ರಗಳನ್ನ ಮಾಡಿದ್ದೇನೆ. ಇವತ್ತಿನ ದಿನ ನನ್ನನ್ನ ನಾನು ಪರಿಚಯ ಮಾಡಿಕೊಳ್ಳಬೇಕು. 40 ವರ್ಷಗಳು ಚಿತ್ರರಂಗದಲ್ಲಿದ್ದೆ. 27 ವರ್ಷಗಳ ಕಾಲ ನಿಮ್ಮ ಅಂಬರೀಶ್ ಅಣ್ಣನ ಧರ್ಮ ಪತ್ನಿಯಾಗಿದ್ದೆ. ಯಾರು ನಾನು ಎನ್ನುವ ಕುರಿತು ಅಭಿಪ್ರಾಯ ಹಂಚಿಕೊಳ್ಳುವ ಸಮಯ ಬಂದಿದೆ. ನಾನು ಮಳವಳ್ಳಿ ಹುಚ್ಚೇಗೌಡರ ಸೊಸೆ, ಈ ಮಣ್ಣಿನ ಸೊಸೆ, ಅಂಬರೀಶ್ ಪತ್ನಿ ಮಂಡ್ಯದ ಹೆಣ್ಣು ಮಗಳು. ಈ ಮಣ್ಣಿನ ಮಗ ಅಭಿಷೇಕ್ ತಾಯಿ ಎಂದು ತಿಳಿಸಿದರು. ಇದನ್ನು ಓದಿ : ನಾವು ಮಾಡೋದು ತಪ್ಪು ಅಂದ್ರೆ ಆ ತಪ್ಪನ್ನೇ ಮಾಡ್ತೀವಿ – ನಮ್ ಬಗ್ಗೆ ಕೆಟ್ಟದಾಗಿ ಮಾತನಾಡೋದು ಬಿಡಿ: ಯಶ್

    ನಾನ್ಯಾರು ಎಂದು ಕೇಳುವವರಿಗೆ ನೀವು ಉತ್ತರ ಕೊಟ್ಟಿದ್ದೀರಿ. ಜೀವನದಲ್ಲಿ ಯಾವ ದಿನ ಬರಬಾರದೆಂದು ಅಂದುಕೊಂಡಿದ್ದೇನೋ ಆ ದಿನ ಬಂದಿತ್ತು. ನಾನು ಕಳೆದ ಮೂರ್ನಾಲ್ಕು ತಿಂಗಳಿಂದ ತುಂಬಾ ಕಷ್ಟದಲ್ಲಿದ್ದೆ. ಆಗ ನೀವು ನನಗೆ ಧೈರ್ಯ ತುಂಬಿದಿರಿ. ಸಾಕಷ್ಟು ವರ್ಷ ಅಂಬರೀಶ್ ಕಾಂಗ್ರೆಸ್‍ಗಾಗಿ ದುಡಿದಿದ್ದರು. ನೀವು ನಮ್ಮನ್ನ ಕೈಬಿಟ್ಟರೆ ನೀವು ಮಂಡ್ಯದ ಸೊಸೆಯಲ್ಲ ಎಂದು ಅಂಬರೀಶ್ ಅಭಿಮಾನಿಗಳು ಹೇಳಿದರು. ಆದರೆ ನನಗೆ ರಾಜಕೀಯಲ್ಲಿ ಎಬಿಸಿಡಿ ಕೂಡ ಗೊತ್ತಿಲ್ಲ ಅಂದರೂ ಬಿಡದೇ ಅಂಬರೀಶಣ್ಣ ಮಾಡಿರುವ ಕೆಲಸಗಳು ಬೆನ್ನಿಗಿವೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅಂಬರೀಶ್ ಅಭಿಮಾನಿಗಳು ನನ್ನಲ್ಲಿ ಕೇಳಿಕೊಂಡರು ಎಂದು ಸುಮಲತಾ ಹೇಳಿದರು.

    ಅಂಬರೀಶ್ ಅವರನ್ನ ನಂಬಿದ್ದ ಜನತೆ ಪರ ನಿಂತುಕೊಳ್ಳುವುದು ಸರಿ ಅನಿಸಿತು. ಅಂಬರೀಶ್ ಸಾಕಷ್ಟು ವರ್ಷ ಕಾಂಗ್ರೆಸ್‍ಗಾಗಿ ದುಡಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ಕದ ತಟ್ಟಿದ್ದೆ. ನಿಮಗೆ ಮಂಡ್ಯ ಬೇಡವೇ? ಯಾಕೆ ಬಿಟ್ಟು ಕೊಡುತ್ತಿರುವಿರಿ ಎಂದು ಕೇಳಿದೆ. ಅದಕ್ಕೆ ಅವರು ಮೈತ್ರಿ ಧರ್ಮದ ಕಥೆ ಹೇಳಿದರು ಎಂದು ತಿಳಿಸಿದರು.

    ನಮ್ಮ ಕುಟುಂಬಕ್ಕಿಂತ ಮಂಡ್ಯಕ್ಕೆ ಅಂಬರೀಶ್ ಅವರ ಅಗತ್ಯವಿದೆ. ಅವರಿಗೆ ಹೆಚ್ಚು ಆಯಸ್ಸು ಕೊಡು ಎಂದು ದೇವರಲ್ಲಿ ಪ್ರಾರ್ಥಿಸಿದೆ. ಆದರೆ ದೇವರಿಗೆ ನನ್ನ ಪ್ರಾರ್ಥನೆ ತಲುಪಲಿಲ್ಲ. ಹೀಗಾಗಿ ಅವರನ್ನ ತನ್ನ ಬಳಿಗೆ ಕರೆದುಕೊಂಡುಬಿಟ್ಟ. ನಾನು ಕಣ್ಣೀರು ಹಾಕುವುದಿಲ್ಲ. ಧೈರ್ಯವಾಗಿ ಎಲ್ಲವನ್ನೂ ಎದುರಿಸುತ್ತೇವೆ ಎಂದು ಹೇಳಿ ಮತದಾರರ ಮನ ಒಲಿಸಲು ಪ್ರಯತ್ನಿಸಿದರು.

    ನಾನು ಗೆಲುವು ಸಾಧಿಸಿದರೆ ವಿದೇಶಕ್ಕೆ ಹೋಗುತ್ತೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂಬರೀಶ್ ಅವರೊಂದಿಗೆ ನಾನು ಎಲ್ಲಾ ದೇಶಗಳನ್ನು ನೋಡಿದ್ದೆ. ಈಗ ಮಂಡ್ಯದ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

    ಅಂಬರೀಶ್ ಅವರ ಪರವಾಗಿ ನಿಂತು ಕೆಲಸ ಮಾಡುವ ಅವಕಾಶ ಕೊಡಿ. ನನಗೆ ಯಾವುದೇ ದುರಾಸೆಯಿಲ್ಲ. ಮಂಡ್ಯದಿಂದ ಸ್ಪರ್ಧೆ ಮಾಡುತ್ತಿರುವುದು ಯಾರನ್ನೂ ವಿರೋಧಿಸಲು ಅಲ್ಲ. ಎದುರು ಹಾಕಿಕೊಳ್ಳಲು ಅಲ್ಲ. ಅಂಬರೀಶ್ ಅವರನ್ನು ಬೆಳೆಸಿದ ಜನತೆಗಾಗಿ ನಾನು ಹೋರಾಡುತ್ತಿರುವೆ ಎಂದು ಕಾಂಗ್ರೆಸ್-ಜೆಡಿಎಸ್‍ಗೆ ಟಾಂಗ್ ಕೊಟ್ಟರು.

    ಅಂಬರೀಶ್ ಕಲಿಯುಗದ ಕರ್ಣ. ಅವರದ್ದು ಕೊಡುಗೈ. ಅಂಬರೀಶ್ ಯಾವತ್ತೂ ಸ್ವಾರ್ಥ ರಾಜಕಾರಣ, ಜಾತಿ, ದ್ವೇಷದ ರಾಜಕಾರಣ ಮಾಡಿಲ್ಲ. ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಹೀಗಾಗಿ ನನ್ನ ವಿರುದ್ಧ ವಾಗ್ದಾಳಿ ನಡೆಸಲು ವಿರೋಧಿಗಳಿಗೆ ಅವಕಾಶ ಸಿಗುತ್ತಿಲ್ಲ. ಅವರು ನನ್ನ ವಿರುದ್ಧ ಏನು ಮಾತನಾಡಬೇಕು ಎನ್ನುವುದನ್ನು ಯೋಚಿಸುತ್ತಿದ್ದಾರೆ ಎಂದರು.

    ಕೇಬಲ್ ಕಟ್ ಆಗಿರುವ ವಿಚಾರವನ್ನು ಪ್ರಸ್ತಾಪ ಮಾಡಿದ ಅವರು, ಜನರ ಹಾಗೂ ನಮ್ಮ ಮಧ್ಯೆ ಇರುವ ಪ್ರೀತಿಯನ್ನು ಅವರು ಕಟ್ ಮಾಡಲಿ. ಹೀಗೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ನಿಮ್ಮ ನಡುವೆ ಎಷ್ಟೋ ಜನ್ಮಗಳ ಸಂಬಂಧವಿದೆ ಎಂದು ಹೇಳಿದರು.

    ನನ್ನ ಬೆಂಬಲಕ್ಕೆ ರೈತ ಸಂಘಗಳು ಬೆಂಬಲ ನೀಡಿವೆ. ನಾನು ರೈತರ ಪರವಾಗಿ ಪಾರ್ಲಿಮೆಂಟ್‍ನಲ್ಲಿ ಮಾತನಾಡುತ್ತೇನೆ. ರೈತರ ಹೋರಾಟದ ಜೊತೆಗೆ ಇರುತ್ತೇನೆ ಎಂದು ಅವರು ಹೇಳಿದರು.

    ಉಸಿರು ಉಸಿರಿನಲ್ಲಿ, ಮನ ಮನದಲ್ಲಿ, ಮನೆ ಮನೆಯಲ್ಲಿ ಅಂಬರೀಶ್ ಅಣ್ಣ ಅಂತಾ ಪೂಜಿಸುತ್ತಿರುವ ಮಂಡ್ಯದ ಜನತೆಗೆ ನನ್ನ ತುಂಬು ಹೃದಯದ ನಮಸ್ಕಾರಗಳು. ಇಲ್ಲಿಗೆ ಬಂದಿರುವ ನಟರಾದ ದರ್ಶನ್, ಯಶ್ ಅಭಿಮಾನಿಗಳಿಗೂ ನಮಸ್ಕಾರ  ಎಂದು ಸುಮಲತಾ ಆರಂಭದಲ್ಲಿ ತಿಳಿಸಿ ತಮ್ಮ ಭಾಷಣವನ್ನು ಆರಂಭಿಸಿದರು.

  • ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್‍ಸಿ ಮೈತ್ರಿ

    ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್‍ಸಿ ಮೈತ್ರಿ

    – ಶ್ರೀನಗರದಿಂದ ಎನ್‍ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಸ್ಪರ್ಧೆ
    – ಕಾಂಗ್ರೆಸ್ ಜೊತೆಗೆ ಮೈತ್ರಿಯಿಲ್ಲ: ಮೆಹಬೂಬಾ ಮುಫ್ತಿ

    ಶ್ರೀನಗರ: ಲೋಕಸಭಾ ಚುನಾವಣೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‍ಸಿ) ಮೈತ್ರಿ ಮಾಡಿಕೊಂಡಿವೆ. ಈ ಮೂಲಕ ಪಿಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕಟ್ಟಿಹಾಕಲು ಕಾಂಗ್ರೆಸ್-ಎನ್‍ಸಿ ಭರ್ಜರಿ ರಣತಂತ್ರ ರೂಪಿಸಿವೆ.

    ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜದ್ ಮತ್ತು ನ್ಯಾಷನಲ್ ಕಾನ್ಫರೆನ್ಸಿನ ಫಾರೂಕ್ ಅಬ್ದುಲ್ಲಾ ಜಂಟಿಯಾಗಿ ಮೈತ್ರಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

    ಶ್ರೀನಗರದಿಂದ ಮೈತ್ರಿ ಅಭ್ಯರ್ಥಿಯಾಗಿ ಎನ್‍ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಸ್ಪರ್ಧೆ ಮಾಡಲಿದ್ದಾರೆ. ಇದರಿಂದಾಗಿ ಜಮ್ಮು ಮತ್ತು ಉದಮ್‍ಪುರ ಕ್ಷೇತ್ರಗಳನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲು ನಿರ್ಧರಿಸಲಾಗಿದೆ. ಆದರೆ ಉಳಿದ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಎನ್‍ಸಿ ಫ್ರೆಂಡ್ಲಿ ಫೈಟ್ ನೀಡಲು ನಿರ್ಧರಿಸಿವೆ ಎನ್ನಲಾಗಿದೆ.

    ಇತ್ತ ಪಿಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕಿ ಮೆಹಬೂಬಾ ಮುಫ್ತಿ ಅವರು, ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ತಳ್ಳಿಹಾಕಿದ್ದಾರೆ. ಹೀಗಾಗಿ ಜಮ್ಮು-ಕಾಶ್ಮೀರ ಆರು ಲೋಕಸಭಾ ಕ್ಷೇತ್ರಗಳಿಂದ ಪಿಡಿಪಿ ಅಭ್ಯರ್ಥಿ ಕಣಕ್ಕೆ ಇಳಿಯುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    2014ರ ಲೋಕಸಭಾ ಚುನಾವಣೆಯಲ್ಲಿ ಜಮ್ಮು-ಕಾಶ್ಮೀರದ ಆರು ಕ್ಷೇತ್ರಗಳ ಪೈಕಿ ಪಿಡಿಪಿ 3 ಸ್ಥಾನ ಹಾಗೂ ಬಿಜೆಪಿ 3 ಸ್ಥಾನ ಪಡೆದಿತ್ತು. ಕಾಂಗ್ರೆಸ್ ಮತ್ತು ಎನ್‍ಸಿ ತಮ್ಮ ಅಸ್ಥಿತ್ವವನ್ನೇ ಕಳೆದುಕೊಂಡಿತ್ತು. ಹೀಗಾಗಿ ಈ ಬಾರಿ ಮತ್ತೆ ಜಮ್ಮು-ಕಾಶ್ಮೀರದಲ್ಲಿ ಗೆಲ್ಲಲು ಕಾಂಗ್ರೆಸ್-ಎನ್‍ಸಿ ಮೈತ್ರಿ ಮಾಡಿಕೊಂಡಿವೆ.

  • ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಮಾಯಾವತಿ

    ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಮಾಯಾವತಿ

    ಲಕ್ನೋ: ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ನಾಯಕಿ ಮಾಯಾವತಿ ಸ್ಪಷ್ಟನೆ ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಮಾಯಾವತಿ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ನಿರ್ಧಾರ ಕೈಗೊಂಡಿದ್ದೇನೆ. ನನ್ನ ಈ ನಿರ್ಧಾರವನ್ನು ಪಕ್ಷದ ಕಾರ್ಯಕರ್ತರು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ. ಆದರೆ ಸ್ಪರ್ಧೆ ಅನಿವಾರ್ಯವಾದರೆ ಚುನಾವಣಾ ಕಣಕ್ಕೆ ಇಳಿಯುತ್ತೇನೆ ಎಂದು ತಿಳಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರು ಕಾಂಗ್ರೆಸ್ ಜೊತೆಗೆ ಮೈತ್ರಿ ನಿರಾಕರಿಸಿದ್ದರು. ಹೀಗಾಗಿ ಸಮಾಜವಾದಿ ಪಕ್ಷದ ಜೊತೆಗೆ ಕೈಜೋಡಿಸಿದ್ದು, ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಈಗಾಗಲೇ ಬಿಎಸ್‍ಪಿ-ಎಸ್‍ಪಿ ಸೀಟುಗಳ ಹಂಚಿಕೆ ಕೂಡ ಆಗಿದ್ದು, ಬಿಜೆಪಿಯನ್ನು ಸೋಲಿಸಲು ರಣತಂತ್ರ ರೂಪಿಸಲಾಗಿದೆ. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‍ಗಿಂತ ಬಿಎಸ್‍ಪಿ-ಎಸ್‍ಪಿ ಮೈತ್ರಿ ಬಲಿಷ್ಠವಾಗಿದೆ ಎಂದು ಈ ಹಿಂದೆಯೇ ಮಾಯಾವತಿ ಹೇಳಿದ್ದರು. ಅಷ್ಟೇ ಅಲ್ಲದೆ ಕಾಂಗ್ರೆಸ್ ಜೊತೆಗೆ ಮೈತ್ರಿ ಇಲ್ಲದಿದ್ದರೂ ಉತ್ತರ ಪ್ರದೇಶದ ಅಮೇಠಿ ಹಾಗೂ ರಾಯ್‍ಬರೇಲಿ ಕ್ಷೇತ್ರಗಳನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲಾಗಿದೆ.