Tag: Lockdowns

  • ಚಳಿಗಾಲದಲ್ಲಿ ಕೊರೊನಾ ಎರಡನೇ ಅಲೆ – ಯಾವ ದೇಶದಲ್ಲಿ ಲಾಕ್‌ಡೌನ್‌, ನಿರ್ಬಂಧ ಹೇರಲಾಗಿದೆ?

    ಚಳಿಗಾಲದಲ್ಲಿ ಕೊರೊನಾ ಎರಡನೇ ಅಲೆ – ಯಾವ ದೇಶದಲ್ಲಿ ಲಾಕ್‌ಡೌನ್‌, ನಿರ್ಬಂಧ ಹೇರಲಾಗಿದೆ?

    ಪ್ಯಾರಿಸ್‌: ಚಳಿಗಾಲ ಬರುತ್ತಿದ್ದಂತೆ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಭಾರತದಂತೆಯೇ ಯೂರೋಪ್‍ನಲ್ಲೂ ಚಳಿಗಾಲ ಘನಘೋರ ಸ್ಥಿತಿ ನಿರ್ಮಿಸುವ ಸಾಧ್ಯತೆ ಇದೆ.

    ಈ ವಿಚಾರ ಮನಗಂಡಿರುವ ಫ್ರಾನ್ಸ್, ಜರ್ಮನಿ ಸೇರಿದಂತೆ ಆದರೆ, ವಿಶ್ವದ ಹಲವು ದೇಶಗಳಲ್ಲಿ ಈಗಾಗಲೇ 2ನೇ ಅಲೆ ಕಂಪನ ಎಬ್ಬಿಸಿಬಿಟ್ಟಿದೆ. ಹಾಗಾಗಿ 2ನೇ ಹಂತದ ಲಾಕ್‍ಡೌನ್, ಜನತಾ ಕರ್ಫ್ಯೂ ಹೇರಿಕೊಂಡಿವೆ.

    ಯಾವ ದೇಶದಲ್ಲಿ ಏನು?
    ಫ್ರಾನ್ಸ್‌:
    2ನೇ ಹಂತದ ಲಾಕ್‍ಡೌನ್ ಫ್ರಾನ್ಸ್‌ನಲ್ಲಿ ಘೋಷಣೆಯಾಗಿದೆ. ಅ.6ರಿಂದ 4 ವಾರ ಲಾಕ್‍ಡೌನ್ ಆಗಲಿದೆ. ಫ್ರಾನ್ಸಿನಲ್ಲಿ 12.35 ಲಕ್ಷ ಮಂದಿಗೆ ಸೋಂಕು ಬಂದಿದ್ದು ವಿಶ್ವದಲ್ಲೇ 5ನೇ ಸ್ಥಾನದಲ್ಲಿದೆ. ಒಟ್ಟು 35 ಸಾವಿರ ಮಂದಿ ಸಾವನ್ನಪ್ಪಿದ್ದಾರೆ.

    ಜರ್ಮನಿ:
    2ನೇ ಹಂತದ ಲಾಕ್‍ಡೌನ್ ನವೆಂಬರ್‌ 2 ರಿಂದ 30ರ ವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಇರಲಿದೆ. 4.81 ಲಕ್ಷ ಮಂದಿಗೆ ಸೋಂಕು ಬಂದಿದ್ದು ವಿಶ್ವದಲ್ಲಿ 16ನೇ ಸ್ಥಾನದಲ್ಲಿದೆ. ಒಟ್ಟು 10,359 ಮಂದಿ ಸಾವನ್ನಪ್ಪಿದ್ದಾರೆ.

    ಇಸ್ರೇಲ್:
    2ನೇ ಹಂತದ ಲಾಕ್‍ಡೌನ್ 3 ವಾರ ಕಾಲ ಇರಲಿದೆ. 3.12 ಲಕ್ಷ ಮಂದಿಗೆ ಸೋಂಕು ಬಂದಿದ್ದು ವಿಶ್ವದಲ್ಲಿ 28ನೇ ಸ್ಥಾನದಲ್ಲಿದೆ. 2,494 ಮಂದಿ ಸಾವನ್ನಪ್ಪಿದ್ದಾರೆ,

    ಅಮೆರಿಕ:
    ಲಾಕ್‍ಡೌನ್ ಘೋಷಣೆಯಾಗಿಲ್ಲ. ತೆರೆಯಲಾಗಿದ್ದ ಶಾಲಾ-ಕಾಲೇಜ್ ಮತ್ತೆ ಬಂದ್ ಮಾಡಲಾಗಿದೆ . 91.21 ಲಕ್ಷ ಮಂದಿಗೆ ಸೋಂಕು ಬಂದಿದ್ದು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. 2.33 ಲಕ್ಷ ಮಂದಿ ಮೃತಪಟ್ಟಿದ್ದಾರೆ.

    ಸ್ಪೇನ್
    9 ನಗರಗಳಲ್ಲಿ ಜನತಾ ಕರ್ಫ್ಯೂ ಘೋಷಣೆಯಾಗಿದೆ. 11.91 ಲಕ್ಷ ಮಂದಿಗೆ ಸೋಂಕು ಬಂದಿದ್ದು 6ನೇ ಸ್ಥಾನದಲ್ಲಿದೆ. 35,785 ಮಂದಿ ಬಲಿಯಾಗಿದ್ದಾರೆ.

    ನೆದರ್‌ಲ್ಯಾಂಡ್‌:
    ಜನತಾ ಕರ್ಫ್ಯೂ ಹೇರಲಾಗಿದ್ದು 3.19 ಲಕ್ಷ ಮಂದಿಗೆ ಸೋಂಕು ಬಂದಿದೆ. ವಿಶ್ವದಲ್ಲೇ 26ನೇ ಸ್ಥಾನದಲ್ಲಿದ್ದು, 7,202 ಮಂದಿ ಬಲಿಯಾಗಿದ್ದಾರೆ.

    ಇಟಲಿ:
    ನೈಟ್‍ಕ್ಲಬ್‍ಗಳನ್ನು ಮುಚ್ಚಲಾಗಿದ್ದು 5.89 ಲಕ್ಷ ಮಂದಿಗೆ ಸೋಂಕು ಬಂದಿದೆ. 13ನೇ ಸ್ಥಾನದಲ್ಲಿರುವ ಇಟಲಿಯಲ್ಲಿ 37,905 ಮಂದಿ ಮೃತಪಟ್ಟಿದ್ದಾರೆ.

  • ದೇವಾಲಯಗಳು ಮುಚ್ಚಿರುವುದರಿಂದ ಬೀದಿಗೆ ಬಂದ ಅರ್ಚಕರು

    ದೇವಾಲಯಗಳು ಮುಚ್ಚಿರುವುದರಿಂದ ಬೀದಿಗೆ ಬಂದ ಅರ್ಚಕರು

    – ಆಹಾರ ಕಿಟ್‍ಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ

    ರಾಯಚೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ರಾಯಚೂರಿನ ಬಹಳಷ್ಟು ದೇವಾಲಯಗಳ ಅರ್ಚಕರು ಅಕ್ಷರಶಃ ಬೀದಿಗೆ ಬಂದಿದ್ದಾರೆ. ದೇವಾಲಯಕ್ಕೆ ಬರುವ ಭಕ್ತರ ಕಾಣಿಕೆಯಿಂದ ಬದುಕುತ್ತಿದ್ದ ಅರ್ಚಕರ ಕುಟುಂಬಗಳು ಈಗ ಕಷ್ಟವನ್ನು ಎದುರಿಸುತ್ತಿವೆ.

    ಹೀಗಾಗಿ ಮುಜರಾಯಿ ಇಲಾಖೆ ಆಯುಕ್ತರು ಸೂಚಿಸಿದಂತೆ ಆಹಾರ ಕಿಟ್‍ಗಳನ್ನು ವಿತರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಅರ್ಚಕರು ಮನವಿ ಸಲ್ಲಿಸಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಮುಜರಾಯಿ ಇಲಾಖೆ ಆಯುಕ್ತರು ಆಹಾರ ಕಿಟ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದು ಇದುವರೆಗೂ ಕಿಟ್ ವಿತರಿಸಿಲ್ಲ ಎಂದು ಅರ್ಚಕರು ಆರೋಪಿಸಿದ್ದಾರೆ.

    ಕಾಣಿಕೆ ತಟ್ಟೆಯಲ್ಲಿ ಬೀಳುವ ಕಾಣಿಕೆಯಿಂದ ಜೀವನ ನಡೆಯುತ್ತಿತ್ತು. ಆದರೆ ಈಗ ದೇವಾಲಯಗಳಿಗೆ ಬೀಗ ಹಾಕಿರುವುದರಿಂದ ಮದುವೆಗಳಿಲ್ಲ, ವಿಶೇಷ ಪೂಜೆಗಳಿಲ್ಲ, ಭಕ್ತರಿಲ್ಲ ಹೀಗಾಗಿ ಕಾಣಿಕೆ ತಟ್ಟೆಯ ಕಾಣಿಕೆಯೂ ನಮಗೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯ ಸಿ ವರ್ಗದ ದೇವಾಲಯಗಳ ಅರ್ಚಕರ ಸ್ಥಿತಿಯಂತೂ ತುಂಬಾ ಕಷ್ಟದಾಯಕವಾಗಿದೆ. ಸರ್ಕಾರ ದೇವಾಲಯಗಳನ್ನೇ ನಂಬಿ ಬದುಕುತ್ತಿರುವ ನಮಗೆ ಸಹಾಯಧನ ನೀಡಬೇಕು. ಕಿಟ್ ವಿತರಿಸಬೇಕು ಅಂತ ಅರ್ಚಕರು ಒತ್ತಾಯಿಸಿದ್ದಾರೆ.