Tag: loc

  • ಕಾಶ್ಮೀರದಲ್ಲಿ ಪಾಕ್ ಸೈನಿಕರ ಗುಂಡಿನ ದಾಳಿ: ಯೋಧ, ಪತ್ನಿ ಸಾವು – ಮಕ್ಕಳಿಗೆ ಗಾಯ

    ಕಾಶ್ಮೀರದಲ್ಲಿ ಪಾಕ್ ಸೈನಿಕರ ಗುಂಡಿನ ದಾಳಿ: ಯೋಧ, ಪತ್ನಿ ಸಾವು – ಮಕ್ಕಳಿಗೆ ಗಾಯ

     

    ಶ್ರೀನಗರ: ಕಾಶ್ಮೀರದ ಪೂಂಚ್ ಸೆಕ್ಟರ್‍ನಲ್ಲಿ ಗಡಿ ನಿಯಂತ್ರಣಾ ರೇಖೆಯ ಬಳಿ ಪಾಕಿಸ್ತಾನ ಸೈನಿಕರು ಗಡಿ ನಿಯಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಓರ್ವ ಸೈನಿಕ ಹಾಗೂ ಅವರ ಪತ್ನಿ ಮೃತಪಟ್ಟಿದ್ದಾರೆ.

    ಇಲ್ಲಿನ ಚಕ್ಕಾ ದಾ ಭಾಗ್ ಹಾಗೂ ಖರ್ರಿ ಕರ್ಮಾರಾ ಪ್ರದೇಶದ ಗ್ರಾಮಗಳಲ್ಲಿರುವ ಭಾರತೀಯ ನೆಲೆಗಳನ್ನ ಗುರಿಯಾಗಿಸಿಕೊಂಡು ಇಂದು ಬೆಳಿಗ್ಗೆ 6.30ರ ವೇಳೆಗೆ ಪಾಕ್ ಸೇನೆ ಮಾರ್ಟರ್ ಶೆಲ್ ದಾಳಿ ನಡೆಸಿದೆ.

    ಘಟನೆಯಲ್ಲಿ ಯೋಧ ಮೊಹಮ್ಮದ್ ಶೌಕತ್ ಹಾಗೂ ಅವರ ಪತ್ನಿ ಸಾಫಿಯಾ ಬೀ ಮೃತಪಟ್ಟಿದ್ದು, ಅವರ ಇಬ್ಬರು ಮಕ್ಕಳಿಗೆ ಗಂಭಿರವಾಗಿ ಗಾಯವಾಗಿದೆ.

    ಅಪ್ರಚೋದಿತ ದಾಳಿಗೆ ಭಾರತೀಯ ಸೈನಿಕರು ಕೂಡ ಪ್ರತ್ಯುತ್ತರ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಸೇನಾ ಮೂಲಗಳ ಮಾಹಿತಿಯ ಪ್ರಕಾರ ಪಾಕಿಸ್ತಾನಿ ಸೈನಿಕರು 82 ಎಮ್‍ಎಮ್ ಹಾಗೂ 120 ಎಮ್‍ಎಮ್ ನ ಮಾರ್ಟರ್ ಶೆಲ್‍ಗಳನ್ನ ಬಳಸುತ್ತಿದ್ದಾರೆ. ಗುಪ್ತಚರ ಮಾಹಿತಿಯ ಪ್ರಕಾರ ಪಾಕಿಸ್ತಾನ ಈ ದಾಳಿಯನ್ನ ಬಳಸಿಕೊಂಡು ಉಗ್ರರನ್ನು ಗಡಿಯಿಂದ ಮತ್ತೊಂದು ಭಾಗಕ್ಕೆ ಕಳಿಸಬೇಕೆಂದಿದೆ ಎನ್ನಲಾಗಿದೆ.

  • ಯುದ್ಧ ಸಿದ್ಧತೆಯಲ್ಲಿ ಪಾಕ್ ? ಸಿಯಾಚಿನ್ ಪ್ರದೇಶದಲ್ಲಿ ಈಗ ಏನಾಗುತ್ತಿದೆ?

    ಯುದ್ಧ ಸಿದ್ಧತೆಯಲ್ಲಿ ಪಾಕ್ ? ಸಿಯಾಚಿನ್ ಪ್ರದೇಶದಲ್ಲಿ ಈಗ ಏನಾಗುತ್ತಿದೆ?

    ನವದೆಹಲಿ: ಭಾರತ ನಿನ್ನೆ ಕೊಟ್ಟ ಏಟಿಗೆ ಬೆಚ್ಚಿ ಬಿದ್ದಿರೋ ಪಾಕಿಸ್ತಾನ ಮತ್ತೊಮ್ಮೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದೆ. ಸರ್ಜಿಕಲ್ ಸ್ಟ್ರೈಕ್ ಹಾಗೂ ಬಂಕರ್‍ಗಳ ನಾಶದಿಂದ ಕಂಗೆಟ್ಟಿರುವ ಪಾಕಿಸ್ತಾನ, ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧತೆ ನಡೆಸ್ತಿದೆಯಾ ಎನ್ನುವ ಪ್ರಶ್ನೆ ಈಗ ಬಲವಾಗುತ್ತಿದೆ.

    ಸಿಯಾಚಿನ್ ಪ್ರದೇಶದಲ್ಲಿ ಪಾಕ್ ಸೇನಾ ಚಟುವಟಿಕೆಗಳು ಚುರುಕಾಗಿವೆ. ಸಿಯಾಚಿನ್ ಗ್ಲೇಸಿಯರ್ ಬಳಿ ಪಾಕಿಸ್ತಾನದ ಜೆಟ್ ವಿಮಾನವೊಂದು ಹಾರಾಟ ನಡೆಸಿದೆ. ಅಲ್ಲದೇ ವಾಯುಪಡೆ ಸಮರಾಭ್ಯಾಸ ನಡೆಸುತ್ತಿದ್ದು ಎಲ್ಲಾ ಸೇನಾ ನೆಲೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.

    ಸಿಯಾಚಿನ್ ಬಳಿಯ ಸ್ಕಾರ್ದುವಿನಲ್ಲಿರುವ ಖಾದ್ರಿ ವಾಯುನೆಲೆಗೆ ಭೇಟಿ ನೀಡಿದ್ದ ಪಾಕ್‍ನ ವಾಯುಪಡೆ ಮುಖ್ಯಸ್ಥ ಸೊಯೇಲ್ ಅಮಾನ್, ಮಿರಾಜ್ ಯುದ್ಧ ವಿಮಾನದ ಸಮರಭ್ಯಾಸವನ್ನೂ ವೀಕ್ಷಿಸಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮಾನ್, ವಿರೋಧಿಗಳ ಯಾವುದೇ ಬೆದರಿಕೆಗಳಿಗೆ ದೇಶದ ಜನರು ವಿಚಲಿತರಾಗಬೇಕಿಲ್ಲ. ಎಲ್ಲ ಸವಾಲುಗಳನ್ನು ಸ್ವೀಕರಿಸಲು ನಮ್ಮ ಸೇನೆ ಸನ್ನದ್ಧವಾಗಿದೆ. ಅವರು ತಲೆಮಾರು ನೆನಪಿಟ್ಟುಕೊಳ್ಳುವಂತೆ ಉತ್ತರ ನೀಡ್ತೇವೆ ಅಂತಾ ಧಿಮಾಕಿನ ಮಾತಾಡಿದ್ದಾರೆ.

    ಈ ಎಲ್ಲಾ ಬೆಳವಣಿಗೆಗಳಿಂದಾಗಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಯುದ್ಧದ ವಾತಾವರಣವೇ ಸೃಷ್ಟಿಯಾದಂತಾಗಿದೆ. ಆದರೆ ಪಾಕಿಸ್ತಾನದಿಂದ ಗಡಿ ಉಲ್ಲಂಘನೆ ಆಗಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ.

    ಮುಂಬೈಗೆ ಉಗ್ರರು: ಈ ನಡುವೆ 20 ಲಷ್ಕರ್ ಉಗ್ರರು ಮುಂಬೈಗೆ ನುಗ್ಗಿದ್ದಾರೆ. ಯಾವುದೇ ಸಮಯದಲ್ಲೂ ದೆಹಲಿ ಹಾಗೂ ಮುಂಬೈನಲ್ಲಿ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರ ಕೂಡಾ ಹೈ ಅಲರ್ಟ್ ಆಗಿದ್ದು, ಎಲ್ಲಾ ಕಡೆ ಬಿಗಿ ಬಂದೋ ಬಸ್ತ್ ಘೋಷಿಸಿದೆ. ಇನ್ನು ನಾಪತ್ತೆಯಾಗಿರೋ ಸುಖೋಯ್ ವಿಮಾನದ ಬಗ್ಗೆ ನಮಗೆ ಮಾಹಿತಿ ಇಲ್ಲ. ಜನರ ಶಾಂತಿ ಕದಡಬೇಡಿ ಅಂತಾ ಚೀನಾ ಭಾರತಕ್ಕೆ ಹೇಳಿದೆ.

    ಇದನ್ನೂ ಓದಿ: 54 ಮುಸ್ಲಿಂ ರಾಷ್ಟ್ರಗಳಿಂದ ಪಾಕ್ ಪ್ರಧಾನಿಗೆ ಅವಮಾನ!

    https://twitter.com/miqazi/status/867342209493991425

     

  • ಅಪ್ಪನ ಸಾವಿಗೆ ಪ್ರತೀಕಾರವಾಗಿ 50 ತಲೆಗಳು ಬೇಕು: ಪಾ(ಪಿ)ಕಿಗಳಿಂದ ಶಿರಚ್ಛೇದನಗೊಂಡ ಯೋಧನ ಮಗಳ ಮಾತು

    ಅಪ್ಪನ ಸಾವಿಗೆ ಪ್ರತೀಕಾರವಾಗಿ 50 ತಲೆಗಳು ಬೇಕು: ಪಾ(ಪಿ)ಕಿಗಳಿಂದ ಶಿರಚ್ಛೇದನಗೊಂಡ ಯೋಧನ ಮಗಳ ಮಾತು

    ನವದೆಹಲಿ: ನನ್ನ ತಂದೆಯ ಸಾವಿಗೆ ಪ್ರತೀಕಾರವಾಗಿ 50 ತಲೆಗಳು ಬೇಕು ಎಂದು ಪಾಕಿಸ್ತಾನದ ಸೈನಿಕರ ಪೈಶಾಚಿಕ ಕೃತ್ಯದಿಂದ ಹುತಾತ್ಮರಾದ ಯೋಧರೊಬ್ಬರ ಮಗಳು ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.

    ಸೋಮವಾರದಂದು ಪಾಕಿಸ್ತಾನದ ಸೈನಿಕರು ಕಾಶ್ಮೀರದಲ್ಲಿ ಭಾರತದೊಳಗೆ ನುಗ್ಗಿ ಇಬ್ಬರು ಯೋಧರನ್ನು ಕೊಂದು ಅವರ ಶಿರಚ್ಛೇದನ ಮಾಡಿದ್ದರು. ಮೃತರಲ್ಲಿ ಬಿಎಸ್‍ಎಫ್ ಯೋಧ ಪ್ರೇಮ್ ಸಾಗರ ಕೂಡ ಒಬ್ಬರಾಗಿದ್ದು, ಅವರ ಮಗಳು ತನ್ನ ತಂದೆಯ ಬಲಿದಾನಕ್ಕೆ ಭಾರತ ಹೇಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂಬುದನ್ನ ಈ ಮಾತುಗಳ ಮೂಲಕ ಹೇಳಿದ್ದಾರೆ.

    ಪಾಕಿಸ್ತಾನಿ ಸೈನಿಕರ ಈ ಅಮಾನವೀಯ ಕೃತ್ಯಕ್ಕೆ ಹುತಾತ್ಮರಾದ ಮತ್ತೊಬ್ಬ ಯೋಧ ಪರಮ್‍ಜೀತ್ ಸಿಂಗ್ ಅವರ ಮೃತದೇಹವನ್ನು ಇಂದು ಪಂಜಾಬ್‍ನ ಸ್ವಗ್ರಾಮ ಟಾರ್ನ್ ಟರಾನ್‍ಗೆ ಕೊಂಡೊಯ್ಯಲಾಯ್ತು. ಆಕ್ರೋಶಗೊಂಡ ಪರಮ್‍ಜೀತ್ ಅವರ ಸಂಬಂಧಿಕರು, ನಾವು ಅವರ ಮುಖವನ್ನು ನೋಡುವವರೆಗೂ ದೇಹವನ್ನು ಅಂತ್ಯಕ್ರಿಯೆ ಮಾಡುವುದಿಲ್ಲ. ಯಾರ ದೇಹ ಇದು? ಬಾಕ್ಸ್‍ನೊಳಗೆ ಮುಚ್ಚಲಾಗಿದೆ ಎಂದು ರಾಷ್ಟ್ರಧ್ವಜವನ್ನು ಹೊದಿಸಿದ್ದ ಶವಪೆಟ್ಟಿಗೆಯನ್ನು ತೋರಿಸುತ್ತಾ ಹೇಳಿ ದುಃಖಿತರಾದ್ರು. ನಮಗೆ ದೇಹವನ್ನು ತೋರುಸುತ್ತಿಲ್ಲವಲ್ಲ ಯಾಕೆ? ಎಂದು ಪ್ರಶ್ನಿಸಿದ್ರು.

    ಸೋಮವಾರ ಬೆಳಿಗ್ಗೆ 8.30ರ ವೇಳೆಗೆ ಪೂಂಚ್ ಸೆಕ್ಟರ್‍ನ ಗಡಿ ನಿಯಂತ್ರಣಾ ರೇಖೆಯ ಬಳಿ ಭಾರತೀಯ ಯೋಧರು ಎರಡು ಪೋಸ್ಟ್‍ಗಳ ನಡುವೆ ಗಸ್ತು ತಿರುಗುತ್ತಿದ್ದ ವೇಳೆ ಅವರ ಮೇಲೆ ಪಾಕಿಸ್ತಾನಿಗಳು ಮಾರ್ಟರ್ ಬಾಂಬ್‍ಗಳಿಂದ ದಾಳಿ ನೆಡೆಸಿದ್ದರು. ಈ ವೇಳೆ ಇಬ್ಬರು ಯೋಧರು ರಕ್ಷಣೆಗಾಗಿ ಓಡಿದ್ರು. ಇನ್ನುಳಿದ ಇಬ್ಬರ ಮೇಲೆ ಪಾಕಿಸ್ತಾನಿಗಳು ದಾಳಿ ಮಾಡಿ ಶಿರಚ್ಛೇದನ ಮಾಡಿದ್ದರು.

  • ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಯಾರೆಲ್ಲ ಇದ್ದರು ಅನ್ನೋದು ಈಗ ಬಹಿರಂಗವಾಯ್ತು

    ನವದೆಹಲಿ: ಕಳೆದ ವರ್ಷ ಉರಿ ಸೇನಾನೆಲೆಯ ಮೇಲೆ ಪ್ರತೀಕಾರ ತೀರಿಸಿಕೊಳ್ಳೊಲು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರನ್ನು ಸದೆಬಡಿದ ಸರ್ಜಿಕಲ್ ಸ್ಟ್ರೈಕ್ ಯೋಧರಿಗೆ ಕೇಂದ್ರ ಸರ್ಕಾರ ಗಣರಾಜ್ಯೋತ್ಸವದಂದು ಶೌರ್ಯ ಪ್ರಶಸ್ತಿ ನೀಡಿದೆ. ಆದ್ರೆ 19 ಮಂದಿ ಯೋಧರ ಬಗ್ಗೆ ಮಾಹಿತಿಗಳನ್ನ ನೀಡಿರಲಿಲ್ಲ. ಈಗ ವೀರ ಯೋಧರ ಬಗ್ಗೆ ಮಾಹಿತಿ ಹೊರಬಂದಿದೆ.

    ಇದನ್ನೂ ಓದಿ: ಸರ್ಜಿಕಲ್ ಸ್ಟ್ರೈಕ್‍ಗೆ ಹೆದರಿ ಪಿಓಕೆಯಿಂದ ಕಾಲ್ಕಿತ್ತ 300 ಉಗ್ರರು

    ಸೆಪ್ಟೆಂಬರ್ 29ರಂದು ನಡೆಸಿದ ಸರ್ಜಿಕಲ್ ಸ್ಟ್ರೈಕ್‍ನಲ್ಲಿ 4 ಹಾಗೂ 9ನೇ ಪ್ಯಾರಾ ರೆಜಿಮೆಂಟ್‍ನ ಒಬ್ಬರು ಕರ್ನಲ್, ಐವರು ಮೇಜರ್, ಇಬ್ಬರು ಕ್ಯಾಪ್ಟನ್, ಒಬ್ರು ಸುಬೇದಾರ್, ಇಬ್ಬರು ನೈಬ್ ಸುಬೇದಾರ್, ಮೂವರು ಹವಾಲ್ದಾರ್, ಒಬ್ರು ಲ್ಯಾನ್ಸ್ ನಾಯ್ಕ್, ನಾಲ್ವರು ಪ್ಯಾರಟ್ರೂಪರ್ಸ್ ಸೇರಿ ಒಟ್ಟು 19 ಮಂದಿ ಭಾಗಿಯಾಗಿದ್ದರು ಎಂದು ಪತ್ರಿಕೆಯೊಂದು ವರದಿ ಪ್ರಕಟಿಸಿದೆ.

    ಇದನ್ನೂ ಓದಿ: ಸರ್ಜಿಕಲ್ ಸ್ಟ್ರೈಕ್ ಹೇಗಿತ್ತು ಬಳಿಕ ಏನಾಯ್ತು? ಪಾಕಿಸ್ತಾನ ಎಸ್‍ಪಿ ಹೇಳ್ತಾರೆ

    ಈ ದಾಳಿಯಲ್ಲಿ ಮೇಜರ್ ರೋಹಿತ್ ಸೂರಿಯದ್ದೇ ಮುಖ್ಯ ಪಾತ್ರ. ಉರಿ ದಾಳಿಗೆ ಸೇಡು ತೀರಿಸಿಕೊಳ್ಳೋಕೆ ಸ್ಕೆಚ್ ಹಾಕಿದ್ದ ನಮ್ಮ ಸೇನೆ ಸೆಪ್ಟೆಂಬರ್ 29ರಂದು ಅಮಾವಾಸ್ಯೆ ರಾತ್ರಿ ಸರ್ಜಿಕಲ್ ಸ್ಟ್ರೈಕ್‍ಗೆ ಮುಹೂರ್ತ ಫಿಕ್ಸ್ ಮಾಡಿದ್ರು. 8 ಮಂದಿ ಯೋಧರ ಜೊತೆ ತೆರಳಿದ್ದ ಸೂರಿ, ಉಗ್ರರ ಗುಂಡಿಗೆಗೆ ಪಿಸುಗುಟ್ಟುವ ದೂರದಿಂದಲೇ ಗುಂಡು ಹೊಕ್ಕಿಸಿದ್ದರು. ಯಾವುದೇ ಕ್ಷಣದಲ್ಲೂ ತನ್ನ ಜೊತೆಗಿದ್ದವರ ಪ್ರಾಣಕ್ಕೆ ಸಂಚಕಾರ ಎದುರಾಗದಂತೆ ಹಾಗೂ ಉಗ್ರರು ಮೇಲ್ಗೈ ಸಾಧಿಸಲು ಆಸ್ಪದ ನೀಡದಂತೆ ಸರ್ಜಿಕಲ್ ಸ್ಟ್ರೈಕ್‍ನ ಯಶಸ್ವಿಯಾಗಿ ಮುಗಿಸಿದ್ರು. ರೋಹಿತ್ ಸೂರಿ ಅವರಿಗೆ ಕೀರ್ತಿ ಚಕ್ರ, ಕರ್ನಲ್ ಹರ್‍ಪ್ರೀತ್ ಸಂಧು ಅವಧಿಗೆ ಯುದ್ಧ ಸೇವಾ ಪದಕ ಸಿಕ್ಕಿದೆ.

    ಇದನ್ನೂ ಓದಿ: ಆ 4 ಗಂಟೆಗಳ ಆಪರೇಷನ್ ಟೆರರ್ ಕಾರ್ಯಾಚರಣೆ ನಡೆದಿದ್ದು ಹೀಗೆ…

    ಸರ್ಜಿಕಲ್ ಸ್ಟ್ರೈಕ್ ತುಂಬಾ ಕಠಿಣವಾಗಿದ್ದು, ಉಗ್ರರು ಸಹ ಗುಂಡಿನ ದಾಳಿ ನಡೆಸಿದ್ದರು. ಅಟೋಮ್ಯಾಟಿಕ್ ಶಸ್ತ್ರಾಸ್ತ್ರಗಳನ್ನ ಬಳಸಿದ್ದ ಭಾರತೀಯ ಯೋಧರು ಉಗ್ರರ ಅಡುಗುತಾಣಗಳನ್ನ ಧ್ವಂಸ ಮಾಡಿದ್ದರು.

    ಇದನ್ನೂ ಓದಿ: ಏನಿದು ಸರ್ಜಿಕಲ್ ಕಾರ್ಯಾಚರಣೆ? ಹೇಗೆ ನಡೆಯುತ್ತದೆ?