Tag: loan

  • ಬಡ್ಡಿ ಕಟ್ಟು, ಇಲ್ಲ ಹೆಂಡ್ತಿನ ಕಳಿಸು ಎಂದ ದಂಧೆಕೋರ- ಮನನೊಂದು ಆ್ಯಸಿಡ್ ಕುಡಿದು ಪತಿ ಆತ್ಮಹತ್ಯೆ

    ಬಡ್ಡಿ ಕಟ್ಟು, ಇಲ್ಲ ಹೆಂಡ್ತಿನ ಕಳಿಸು ಎಂದ ದಂಧೆಕೋರ- ಮನನೊಂದು ಆ್ಯಸಿಡ್ ಕುಡಿದು ಪತಿ ಆತ್ಮಹತ್ಯೆ

    ಶಿವಮೊಗ್ಗ: ಬಡ್ಡಿ ಕಟ್ಟು, ಇಲ್ಲ ನಿನ್ನ ಹೆಂಡತಿಯನ್ನ ಕಳಿಸು ಎಂಬ ಮೀಟರ್ ಬಡ್ಡಿ ಮಾಫಿಯಾದವನ ಮಾತಿಗೆ ಮನನೊಂದ ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಿಪ್ಪನ್ ಪೇಟೆಯಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ ಕಲ್ಯಾಣ್ ಸಿಂಗ್ ಚೌಧರಿ ಆತ್ಮಹತ್ಯೆ ಮಾಡಿಕೊಂಡ ಬಟ್ಟೆ ವ್ಯಾಪಾರಿ. ಕಲ್ಯಾಣ್ ಸಿಂಗ್ ಹದಿನೈದು ವರ್ಷದಿಂದ ರಿಪ್ಪನ್‍ ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಇವರು ಆತ್ಮಹತ್ಯೆ ಮಾಡಿಕೊಳ್ಳಲು ಮಹ್ಮದ್ ರಫಿ ಆಲಿಯಾಸ್ ಬಡ್ಡಿ ಮಾಮು ಕಾರಣ ಎಂದು ಕಲ್ಯಾಣ್ ಸಿಂಗ್ ಚೌಧರಿ ಪತ್ನಿ ರೇಖಾ ಚೌಧರಿ ರಿಪ್ಪನ್‍ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕಲ್ಯಾಣ್ ಸಿಂಗ್ ತಮ್ಮ ವ್ಯವಹಾರಕ್ಕಾಗಿ ಮೀಟರ್ ಬಡ್ಡಿಯಂತೆ ಹಣ ಪಡೆದಿದ್ದರು. ಆದರೆ ಬಡ್ಡಿ ಹಣ ಹಿಂತಿರುಗಿಸುವಲ್ಲಿ ವಿಳಂಬವಾಗಿತ್ತು. ಇದರಿಂದಾಗಿ ಅಂಗಡಿಗೆ ಬಂದ ಬಡ್ಡಿ ಮಾಮು ಮತ್ತು ಇನ್ನಿತರರು ಗ್ರಾಹಕರ ಎದುರೇ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಅಲ್ಲದೆ ನಾಳೆಯೊಳಗಾಗಿ ಬಡ್ಡಿ ಕಟ್ಟು, ಇಲ್ಲದಿದ್ದರೆ ಹೆಂಡತಿ ಕಳಿಸು ಅಂತ ಹೇಳಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.

    ಬಡ್ಡಿ ಮಾಮುವಿನ ಚುಚ್ಚು ಮಾತುಗಳಿಂದ ಮನನೊಂದ ಕಲ್ಯಾಣ್ ಸಿಂಗ್ ಚೌಧರಿ ಮನೆಗೆ ಬಂದು ಟೈಲ್ಸ್ ಸ್ವಚ್ಛ ಮಾಡುವ ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲ್ಯಾಣ್ ಸಿಂಗ್ ಶವ ಪರೀಕ್ಷೆ ಮಾಡಿಸಿ, ಅಂತ್ಯ ಸಂಸ್ಕಾರಕ್ಕಾಗಿ ರಾಜಸ್ಥಾನಕ್ಕೆ ಕಳುಹಿಸಲಾಗಿದೆ.

    ಇದನ್ನೂ ಓದಿ: ಸಾಲ ಮಾಡ್ಬೇಡಿ ಫ್ರೆಂಡ್ಸ್- ವಿಡಿಯೋ ರೆಕಾರ್ಡ್ ಮಾಡಿ ಕ್ಯಾಬ್ ಚಾಲಕ ಆತ್ಮಹತ್ಯೆ

  • ಕಡಿಮೆ ದರದಲ್ಲಿ ಬಡ್ಡಿಗೆ ಸಾಲ ನೀಡೋದಾಗಿ ನಂಬಿಸಿ ತಮಿಳುನಾಡು ಕಂಪನಿಯಿಂದ ನೂರಾರು ಜನರಿಗೆ ಮೋಸ

    ಕಡಿಮೆ ದರದಲ್ಲಿ ಬಡ್ಡಿಗೆ ಸಾಲ ನೀಡೋದಾಗಿ ನಂಬಿಸಿ ತಮಿಳುನಾಡು ಕಂಪನಿಯಿಂದ ನೂರಾರು ಜನರಿಗೆ ಮೋಸ

    ಕೋಲಾರ: ಕಡಿಮೆ ದರದಲ್ಲಿ ಬಡ್ಡಿಗೆ ಸಾಲ ನೀಡೋದಾಗಿ ನಂಬಿಸಿ ತಮಿಳುನಾಡು ಮೂಲದ ಕಂಪನಿಯೊಂದು ನೂರಾರು ಜನರಿಗೆ ಮೋಸ ಮಾಡಿರುವ ಘಟನೆ ಕೋಲಾರ ತಾಲೂಕು ಕಿತ್ತಂಡೂರು ಗ್ರಾಮದಲ್ಲಿ ನಡೆದಿದೆ.

    ತಮಿಳುನಾಡು ತಂಜಾವೂರಿನ ಕ್ರೈಸ್ಟ್ ಇಂಟರ್ ನ್ಯಾಷನಲ್ ಟೂರಿಸಂ ಅಂಡ್ ಫೈನಾನ್ಸ್ ಗ್ರೂಪ್ ಆಫ್ ಕಂಪನಿ ಕಳೆದ ಮೂರು ತಿಂಗಳಿನಿಂದ ರೈತರಿಂದ 50 ಲಕ್ಷ ಹಣ ವಸೂಲಿ ಮಾಡಿ ಪರಾರಿಯಾಗಿದ್ದರು. ತಲೆಮರೆಸಿಕೊಂಡಿದ್ದ ಕಂಪನಿ ಮಾಲೀಕ ಸೆಂದಿಲ್ ಜಾಮೀನಿಗಾಗಿ ಕೋರ್ಟ್‍ಗೆ ಬಂದಿದ್ದು, ಈ ವೇಳೆ ಮೋಸ ಹೋಗಿದ್ದ ನೂರಾರು ಜನರು ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು. ತಮ್ಮ ಹಣ ತಮಗೆ ವಾಪಸ್ ನೀಡುವಂತೆ ಆಗ್ರಹಿಸಿದ್ರು.

    ಈ ಬಗ್ಗೆ ಫೈನಾನ್ಸ್ ಕಂಪನಿ ಮಾಲೀಕ ಸೆಂದಿಲ್ ಮಾತನಾಡಿ ನನ್ನ ಸಿಬ್ಬಂದಿ ಮೋಸ ಮಾಡಿದ್ದಾರೆ. ನನಗೆ ಜಾಮೀನು ಸಿಕ್ಕಿದೆ. ಒಂದು ತಿಂಗಳು ಕಾಲಾವಕಾಶ ಕೇಳಿದ್ದು ಜನರ ಹಣ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದಾನೆ.

    ಸದ್ಯ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬ್ಲೇಡ್ ಕಂಪನಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

  • ಸಾಲ ತೀರಿಸುವಂತೆ ಬ್ಯಾಂಕ್‍ ನಿಂದ ನೋಟಿಸ್- ಹೃದಯಾಘಾತವಾಗಿ ರೈತ ಸಾವು

    ಸಾಲ ತೀರಿಸುವಂತೆ ಬ್ಯಾಂಕ್‍ ನಿಂದ ನೋಟಿಸ್- ಹೃದಯಾಘಾತವಾಗಿ ರೈತ ಸಾವು

    ತುಮಕೂರು: ಸಾಲ ತೀರಿಸುವಂತೆ ಬ್ಯಾಂಕ್ ನವರು ಕಳಿಸಿದ ನೋಟಿಸ್ ನೋಡಿ ಹೃದಯಾಘಾತಕ್ಕೊಳಗಾಗಿ ರೈತರೊಬ್ಬರು ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಜಿಲ್ಲೆಯ ಶಿರಾ ತಾಲೂಕಿನ ಎಂ. ದಾಸರಹಳ್ಳಿಯ 65 ವರ್ಷದ ಬಡಯ್ಯ ಮೃತ ರೈತ. ವಿವಿಧ ಬ್ಯಾಂಕ್ ಗಳಲ್ಲಿ 6 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಮಾಡಿದ್ದರು. ಆದರೆ ಬೆಳೆ ಹಾಳಾಗಿ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ.

    ಸೋಮವಾರ ಮಧ್ಯಾಹ್ನ ಬಡಯ್ಯನಿಗೆ ಸಾಲ ತೀರಿಸುವಂತೆ ಬ್ಯಾಂಕಿನಿಂದ ನೋಟಿಸ್ ಬಂದಿತ್ತು. ಅದನ್ನು ನೋಡಿ ಹೃದಯಾಘಾತಕ್ಕೆ ಒಳಗಾಗಿದ್ದರು. ಬಡಯ್ಯ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

  • ತಂದೆ ಮಾಡಿದ ಸಾಲಕ್ಕೆ ಮಗನ ಕಿಡ್ನಾಪ್- ಇಬ್ಬರ ಬಂಧನ

    ತಂದೆ ಮಾಡಿದ ಸಾಲಕ್ಕೆ ಮಗನ ಕಿಡ್ನಾಪ್- ಇಬ್ಬರ ಬಂಧನ

    ಕಲಬುರಗಿ: ತಂದೆ ಮಾಡಿದ ಸಾಲಕ್ಕಾಗಿ ಮಗನನ್ನು ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಇಬ್ಬರು ಆರೋಪಿಗಳನ್ನ ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.

    ಅಳಂದ ತಾಲೂಕಿನ ಮಾಡ್ಯಾಳ ಗ್ರಾಮದ ಧನ್ ರಾಜ್ ಮತ್ತು ಸೀತಾರಾಂ ಬಂಧಿತ ಆರೋಪಿಗಳಾಗಿದ್ದಾರೆ. ಮಹಾರಾಷ್ಟ್ರ ಮೂಲದ ಇಟ್ಟಿಗೆ ವ್ಯಾಪಾರಿಯೊಬ್ಬರ ಬಳಿ ಕಾಶೀನಾಥ್ ಎಂಬಾತ ಕೆಲಸಕ್ಕೆ ಬರುತ್ತೇನೆ ಎಂದು 1 ಲಕ್ಷ ರೂಪಾಯಿ ಹಣ ಪಡೆದಿದನು.

    ಕೆಲಸಕ್ಕೂ ಬಾರದೇ ಹಣವನ್ನು ವಾಪಸ್ ನೀಡದ ಹಿನ್ನಲೆಯಲ್ಲಿ ಮಧ್ಯವರ್ತಿಗಳಾದ ಧನ್ ರಾಜ್ ಮತ್ತು ಸೀತಾರಾಂ ಇಬ್ಬರೂ ಸೇರಿ ಕಾಶೀನಾಥನ ಮಗ ಕುಮಾರ್ ಎಂಬ ಬಾಲಕನನ್ನು ನವೆಂಬರ್ 12 ರಂದು ಕಿಡ್ನಾಪ್ ಮಾಡಿದರು. ನಂತರ ಮಹಾರಾಷ್ಟ್ರಕ್ಕೆ ಕರೆದೊಯ್ದು ಹಣ ತಗೊಂಡು ಬಾ ಇಲ್ಲದಿದ್ದರೆ ಮಗನನ್ನು ಮುಗಿಸ್ತೇವೆ ಎಂದು ಫೋನ್ ಮಾಡಿದ್ದಾರೆ.

    ಈ ವೇಳೆ ಪ್ರಕರಣ ದಾಖಲಿಸಿಕೊಂಡ ನಿಂಬರ್ಗಾ ಪೊಲೀಸರು ಹಣ ನೀಡುವ ವೇಳೆಯಲ್ಲಿಯೇ ಆರೋಪಿಗಳನ್ನು ಬಂಧಿಸಿ ಬಾಲಕನನ್ನು ಕಾಪಾಡಿದ್ದು, ಆರೋಪಿಗಳಿಬ್ಬರನ್ನು ಜೈಲಿಗೆ ಕಳುಹಿಸಿದ್ದಾರೆ.

  • ಸಾಲ ಹಿಂದಿರುಗಿಸಿಲ್ಲವೆಂದು ವ್ಯಕ್ತಿಯ ಮನೆಯಲ್ಲೇ ಠಿಕಾಣಿ ಹೂಡಿದ ಮಹಿಳೆ

    ಸಾಲ ಹಿಂದಿರುಗಿಸಿಲ್ಲವೆಂದು ವ್ಯಕ್ತಿಯ ಮನೆಯಲ್ಲೇ ಠಿಕಾಣಿ ಹೂಡಿದ ಮಹಿಳೆ

    ಕೊಪ್ಪಳ: ಸಾಲ ಕೊಟ್ಟ ಮಹಿಳೆಯೊಬ್ಬಳು ಮನೆ ಹೊಕ್ಕು ಸಾಲ ಪಡೆದವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೊಪ್ಪಳದಲ್ಲಿ ಕೇಳಿಬಂದಿದೆ.

    ಕೊಪ್ಪಳದ ಗಂಗಾವತಿ ತಾಲೂಕಿನ ಯರಡೋಣ ಗ್ರಾಮದ ಅಮೃತ ಹಾಗೂ ಕಿಂದಿ ಕ್ಯಾಂಪ್ ನಿವಾಸಿ ಶ್ರೀನಿವಾಸ್ ನಡುವಿನ ಹಣಕಾಸು ತಗಾದೆ ವಿಚಿತ್ರ ತಿರುವು ಪಡೆದುಕೊಂಡಿದೆ. ಅಮೃತ ಶ್ರೀನಿವಾಸ್‍ ಗೆ 12 ಲಕ್ಷ ರೂಪಾಯಿ ಸಾಲಕೊಟ್ಟಿದ್ದು, ಪಡೆದ ಸಾಲದ ಹಣ ವಾಪಸ್ ಕೊಡುವವರೆಗೂ ಶ್ರೀನಿವಾಸ್ ಮನೆಯಲ್ಲಿ ಠಿಕಾಣಿ ಹೂಡಿದ್ದಾರೆ.

    ಒಟ್ಟು 12 ಲಕ್ಷಕ್ಕೆ ಬಡ್ಡಿ ಸೇರಿ 15 ಲಕ್ಷ ಕೊಡುವಂತೆ ಅಮೃತಾ ಕೋರ್ಟ್ ನಿಂದ ಕಾನೂನು ರೀತಿ ನೋಟಿಸ್ ಕೊಡಿಸಿದ್ದಾಳೆ. ಆದರೆ ಆಗ ಶ್ರೀನಿವಾಸ್ ಚೆಕ್ ಕೊಟ್ಟಿದ್ದು ಬೌನ್ಸ್ ಆಗಿದೆಯಂತೆ. ಹೀಗಾಗಿ ಸಾಲ ಕೊಟ್ಟ ಅಮೃತಾ, ಶ್ರೀನಿವಾಸ್ ನ ಮನೆಯಲ್ಲಿ ಕಳೆದ ಒಂದು ತಿಂಗಳನಿಂದ ಠಿಕಾಣಿ ಹೂಡಿ ಶ್ರೀನಿವಾಸ್ ತಾಯಿಗೆ ಕಿರುಕುಳ ನೀಡುತ್ತಿರೋ ಆರೋಪ ಕೇಳಿಬಂದಿದೆ.

    ಆದರೆ ಸಾಲ ಪಡೆದ ಶ್ರೀನಿವಾಸ್ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಇದರಿಂದ ಶ್ರೀನಿವಾಸ್ ಮನೆಯಲ್ಲಿ ಅಮೃತಾಳ ಅಂಧಾ ದರ್ಬಾರ್ ಶುರುವಾಗಿದೆ. ಅಮೃತಾಳ ಕಿರುಕುಳಕ್ಕೆ ರೋಸಿ ಹೋದ ಶ್ರೀನಿವಾಸ್ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

     

  • ಎಂಬಿಎ ವ್ಯಾಸಂಗಕ್ಕೆ ಲೋನ್ ನೀಡಿ ಸಹಾಯ ಮಾಡಿದ್ದ ಪ್ರಧಾನಿಗೆ ಮಂಡ್ಯದ ಯುವತಿ ವಿಶ್ ನೊಂದಿಗೆ ಅಭಿನಂದನೆ

    ಎಂಬಿಎ ವ್ಯಾಸಂಗಕ್ಕೆ ಲೋನ್ ನೀಡಿ ಸಹಾಯ ಮಾಡಿದ್ದ ಪ್ರಧಾನಿಗೆ ಮಂಡ್ಯದ ಯುವತಿ ವಿಶ್ ನೊಂದಿಗೆ ಅಭಿನಂದನೆ

    ಮಂಡ್ಯ: ಪ್ರಧಾನಿ ಕುರ್ಚಿಯಲ್ಲಿ ಕೂತಿರೋ ಮೋದಿಗೆ ಯಾರಾದ್ರೂ ಸಮಸ್ಯೆ ಹೇಳಿ ಪತ್ರ ಬರೆದ್ರೆ ಅದಕ್ಕೆ ತಕ್ಷಣ ಸ್ಪಂದಿಸ್ತಾರೆ. ಹೀಗೆ ಮಂಡ್ಯದ ಯುವತಿ ಸಾರಾ ಎಂಬಾಕೆಯ ಮನಸ್ಸುನ್ನು ಮೋದಿ ಗೆದ್ದಿದ್ದಾರೆ.

    ಸಾರಾ ತನ್ನ ಎಂಬಿಎ ವ್ಯಾಸಂಗಕ್ಕೆ ಲೋನ್ ಕೊಡೋಕೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದವರು ನಿರಾಕರಿಸಿದಾಗ ಆಕೆ ಸಹಾಯ ಯಾಚಿಸಿ ಮೋದಿಗೆ ಪತ್ರ ಬರೆದಿದ್ದರು. ಹತ್ತೇ ದಿನದಲ್ಲಿ ಪ್ರಧಾನಿ ಕಚೇರಿಯಿಂದ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಸಹಾಯ ಮಾಡುವಂತೆ ಪತ್ರ ಬಂದಿತ್ತು. ಆದ್ರೂ ಸೆಂಟ್ರಲ್ ಬ್ಯಾಂಕ್‍ನವರು ಸಾಲ ಕೊಟ್ಟಿರಲಿಲ್ಲ. ಕೊನೆಗೆ ಮೋದಿ ಪತ್ರ ಗಮನಿಸಿದ ವಿಜಯ್ ಬ್ಯಾಂಕ್‍ನವರು ಸಾರಾಗೆ ಲೋನ್ ಕೊಟ್ರು.

    ಸದ್ಯ ಸಾರಾ ಎಂಬಿಎ ಪದವಿ ಓದುತ್ತಿದ್ದು, ಇಂದು ಹುಟ್ಟು ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಾ, ಪ್ರಧಾನಿಯವರು ಸಹಾಯ ಮಾಡಿರುವುದು ನನಗೊಬ್ಬಳಿಗೆ ಅಲ್ಲ. ಇಂತಹ ಅನೇಕ ಉದಾಹರಣೆಗಳಿವೆ. 125 ಕೋಟಿ ಜನ ಇರೋ ಈ ದೇಶದಲ್ಲಿ ಪ್ರತಿಯೊಬ್ಬರ ಪತ್ರಕ್ಕೆ ಪ್ರತಿಕ್ರಿಯಿಸುತ್ತಾರೆ ಅಂದ್ರೆ ನಿಜಕ್ಕೂ ಅವರೊಬ್ಬರು ಗ್ರೇಟ್ ಲೀಡರ್. ಇದೇ ರೀತಿ ನಾಲ್ಕು ಮಂದಿ ಲೀಡರ್ ಆದ್ರೆ ಭಾರತ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತ ಹೇಳಿದ್ರು.

    ಹುಟ್ಟುಹಬ್ಬ ಆಚರಣೆ: ಇನ್ನು ಪ್ರಧಾನಿಯವರ ಹುಟ್ಟು ಹಬ್ಬದ ಪ್ರಯುಕತ ಮಂಡ್ಯ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯವನ್ನು ಸ್ವಚ್ಚಗೊಳಿಸುವ ಮೂಲಕ ಮಂಡ್ಯ ಬಿಜೆಪಿ ಕಾರ್ಯಕರ್ತರು ವಿಶೇಷವಾಗಿ ಪ್ರಧಾನಿ ಮೋದಿಯವರ ಹುಟ್ಟು ಹಬ್ಬ ಆಚರಿಸಿದ್ರು.

    ಬೆಳ್ಳಂಬೆಳಗ್ಗಯೇ ಬಸ್ ನಿಲ್ದಾಣಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಮೋದಿಯವರಿಗೆ ಜೈಕಾರ ಕೂಗಿ ಹುಟ್ಟು ಹಬ್ಬದ ಶುಭ ಕೋರಿದ್ರು. ನಂತ್ರ ಶೌಚಾಲಯಕ್ಕೆ ತೆರಳಿ ಸ್ವಚ್ಚಗೊಳಿಸಿದ್ರು. ಶೌಚಾಲಯ ಸ್ವಚ್ಚಗೊಳಿಸಿದ ನಂತ್ರ ಪ್ರಯಾಣಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದ್ರು.

  • ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಪರಿಹಾರ ಕೊಡದೇ ಸತಾಯಿಸ್ತಿದ್ದಾರೆ ಅಧಿಕಾರಿಗಳು!

    ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಪರಿಹಾರ ಕೊಡದೇ ಸತಾಯಿಸ್ತಿದ್ದಾರೆ ಅಧಿಕಾರಿಗಳು!

    ನೆಲಮಂಗಲ: ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಕುಟುಂಬಕ್ಕೆ ಪರಿಹಾರದ ಭರವಸೆ ನೀಡಿದ್ದ ಅಧಿಕಾರಿಗಳು ಈಗ ಕುಂಟು ನೆಪ ಹೇಳಿ ಕಚೇರಿಯಿಂದ ಮನೆಗೆ, ಮನೆಯಿಂದ ಕಚೇರಿಗೆ ಅಲೆದಾಡಿಸುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ.

    ನೆಲಮಂಗಲ ತಾಲೂಕಿನ ಅರಳೇದಿಬ್ಬದ ನಿವಾಸಿ ಹನುಮಯ್ಯ ಎಂಬುವವರು ಸಹಕಾರಿ ಬ್ಯಾಂಕ್‍ನಲ್ಲಿ ಕೃಷಿಗಾಗಿ 25 ಸಾವಿರ ರೂಪಾಯಿ ಸಾಲ ಮಾಡಿದ್ದರು. ತೀವ್ರ ಬರಗಾಲವಿದ್ದ ಹಿನ್ನೆಲೆಯಲ್ಲಿ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದ ಹನುಮಯ್ಯ 2016ರ ಮೇ 29ನೇ ತಾರೀಕಿನಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಗಂಡನ ಆತ್ಮಹತ್ಯೆ ವಿಚಾರ ತಿಳಿದ ರೈತನ ಹೆಂಡತಿ ತಿಮ್ಮವ್ವ ಹೃದಯಾಘಾತದಿಂದ ಮೃತಪಟ್ಟಿದ್ದರು.

    ನೆಲಮಂಗಲ ಸರ್ಕಾರಿ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ವಿಷ ಸೇವಿಸಿರುವುದಾಗಿ ದೃಢಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತನ ಕುಟುಂಬದವರು ಕೃಷಿ ಇಲಾಖೆಯಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ನೆಲಮಂಗಲದ ಕೃಷಿ ಇಲಾಖೆಯ ಅಧಿಕಾರಿಗಳು ರೈತ ವಿಷ ಸೇವನೆಯಿಂದ ಮೃತಪಟ್ಟಿಲ್ಲ ಅವರಿಗೆ 75 ವರ್ಷ ವಯಸ್ಸಾಗಿ ಮೃತ ಪಟ್ಟಿದ್ದಾರೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

    ಸರ್ಕಾರ ಮೃತ ರೈತರಿಗೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಡ ರೈತನ ಕುಟುಂಬಗಳಿಗೆ ಪರಿಹಾರ ಸಿಗದೆ ಪರದಾಡುತ್ತಿದ್ದಾರೆ. ಒಟ್ಟಿನಲ್ಲಿ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎನ್ನುವಂತಾಗಿದೆ ಈ ರೈತನ ಕುಟುಂಬಸ್ಥರ ಪರಿಸ್ಥಿತಿ.

  • ಬರಗಾಲದ ಕರಿನೆರಳು: ಮರೀಚಿಕೆಯಾದ ಮುಂಗಾರು, ಮಳೆಗಾಗಿ ರೈತರಿಂದ ಸಪ್ತಭಜನೆ

    ಬರಗಾಲದ ಕರಿನೆರಳು: ಮರೀಚಿಕೆಯಾದ ಮುಂಗಾರು, ಮಳೆಗಾಗಿ ರೈತರಿಂದ ಸಪ್ತಭಜನೆ

    ರಾಯಚೂರು: ಮುಂಗಾರು ಮಳೆಯ ಆರಂಭದ ಅಬ್ಬರಕ್ಕೆ ಖುಷಿಯಾಗಿದ್ದ ರಾಯಚೂರು ಜಿಲ್ಲೆಯ ರೈತರು ಈಗ ಬರೀ ಮೋಡಗಳನ್ನ ನೋಡುತ್ತ ಮಳೆಗಾಗಿ ಕಾಯುತ್ತ ಕುಳಿತಿದ್ದಾರೆ. ಈ ಬಾರಿಯು ಬರಗಾಲದ ಹೆದರಿಕೆ ಶುರುವಾಗುತ್ತಿದೆ. ಬಿತ್ತನೆ ಮಾಡಿದ ರೈತರದ್ದು ಒಂದು ಚಿಂತೆಯಾದ್ರೆ, ಬಿತ್ತನೆ ಮಾಡದೇ ಖಾಲಿ ಕುಳಿತ ರೈತರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ರೈತರೆಲ್ಲಾ ದೇವರ ಮೊರೆ ಹೋಗುತ್ತಿದ್ದು ಭಜನೆ, ಪ್ರಾರ್ಥನೆಗಳ ಮೂಲಕ ಮಳೆ ತರಿಸಲು ಮುಂದಾಗಿದ್ದಾರೆ.

    ಜೂನ್ ತಿಂಗಳ ಆರಂಭದಲ್ಲಿ ಇಡೀ ರಾಯಚೂರು ಜಿಲ್ಲೆಯಾದ್ಯಂತ ಸುರಿದ ಮಳೆ ಈ ಬಾರಿ ಬಂಪರ್ ಬೆಳೆಯ ನಿರೀಕ್ಷೆಯನ್ನ ಹುಟ್ಟಿಸಿತ್ತು. ಜಿಲ್ಲೆಯ ಶೇಕಡ 60 ರಷ್ಟು ರೈತರು ಸಹ ಹತ್ತಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನ ಬಿತ್ತನೆ ಮಾಡಿದ್ದಾರೆ. ಆಷಾಡ ಗಾಳಿ ಹಿನ್ನೆಲೆ ಶೇಕಡಾ 40 ರಷ್ಟು ರೈತರು ಇನ್ನೊಂದು ಮಳೆಗೆ ಕಾಯುತ್ತಿದ್ದರು.

    ಮಳೆ ಮಾತ್ರ ಒಂದು ತಿಂಗಳಾದ್ರೂ ಇನ್ನೂ ಸುಳಿದಿಲ್ಲ. ಜೂನ್ ತಿಂಗಳಲ್ಲಿ ವಾಡಿಕೆ ಮಳೆ 80.7 ಮಿಮೀ ಇದ್ರೆ, 121.8 ಮಿಮೀ ಮಳೆ ಬಂದಿತ್ತು. ಆದ್ರೆ ಜುಲೈ ತಿಂಗಳಲ್ಲಿ ಈವರೆಗೆ ವಾಡಿಕೆ ಮಳೆ ಪ್ರಮಾಣ 72.4 ಮಿಮೀ ಇದ್ದರೆ, ಮಳೆಯಾಗಿರೋದು ಮಾತ್ರ ಕೇವಲ 17.6 ಮಿಮೀ. ಅಂದ್ರೆ ಶೇಕಡಾ 76 ರಷ್ಟು ಮಳೆ ಕೊರತೆಯಾಗಿದೆ. ಹೀಗಾಗಿ ರೈತರು ಭಜನೆ ಮೂಲಕ ದೇವರ ಮೊರೆ ಹೋಗಿದ್ದಾರೆ.

    ಜಿಲ್ಲೆಯ ಉಡಮಗಲ್ ಖಾನಾಪುರ ಗ್ರಾಮದಲ್ಲಿ ಮಳೆಗಾಗಿ ಗ್ರಾಮದ ಭೀಮೇಶ್ವರ ದೇವಾಲಯದಲ್ಲಿ ರೈತರು ಸಪ್ತಭಜನೆ ಆರಂಭಿಸಿದ್ದಾರೆ. ಸತತ ಏಳು ದಿನಕಾಲ ಮಡಿ ಬಟ್ಟೆ ಒಣಗದಂತೆ 49 ಜನರ 7 ತಂಡ ನಿರಂತರ ಭಜನೆ ಆರಂಭಿಸಿದೆ. 2015 ರಿಂದ ಸಪ್ತಭಜನೆ ಆರಂಭಿಸಿದ್ದು ಈ ಹಿಂದೆ ಮಳೆ ಬಂದಿದೆ ಅನ್ನೋ ನಂಬಿಕೆಯಲ್ಲಿ ಭಜನೆ ಮುಂದುವರೆಸಿದ್ದಾರೆ.

    ಒಟ್ನಲ್ಲಿ, ಈ ಬಾರಿ ಬಹು ನಿರೀಕ್ಷೆ ಹುಟ್ಟಿಸಿದ್ದ ಮುಂಗಾರು ರೈತರ ಜೊತೆ ಆಟವಾಡಲು ಶುರುಮಾಡಿದೆ. ಬಿತ್ತನೆಯಾದ ಬೆಳೆ ನೀರಿಲ್ಲದೆ ಒಣಗುತ್ತಿದೆ. ಬೀಜ, ಗೊಬ್ಬರ ಅಂತೆಲ್ಲಾ ಸಾವಿರಾರು ರೂಪಾಯಿ ಖರ್ಚುಮಾಡಿದ ರೈತರು ಪುನಃ ಸಾಲಗಾರರಾಗುತ್ತಿದ್ದಾರೆ. ಈಗಲಾದ್ರೂ ವರುಣದೇವ ಕೃಪೆ ತೋರಬೇಕಿದೆ.

  • ಕಾರಿನ ಲೋನ್ ಹಣ ತೀರಿಸಲು 4 ವರ್ಷದ ಬಾಲಕಿಯನ್ನ ಕಿಡ್ನ್ಯಾಪ್ ಮಾಡಿ ಕೊಲೆ ಮಾಡ್ದ

    ಕಾರಿನ ಲೋನ್ ಹಣ ತೀರಿಸಲು 4 ವರ್ಷದ ಬಾಲಕಿಯನ್ನ ಕಿಡ್ನ್ಯಾಪ್ ಮಾಡಿ ಕೊಲೆ ಮಾಡ್ದ

    ಮುಂಬೈ: ಕಾರಿನ ಲೋನ್ ಹಣ ತೀರಿಸುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಮಾಲೀಕನ 4 ವರ್ಷದ ಮಗಳನ್ನೇ ಅಪಹರಣ ಮಾಡಿ ಕೊಲೆ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ.

    4 ವರ್ಷದ ತನಿಷ್ಕಾ ಕೊಲೆಯಾದ ಬಾಲಕಿ. ತನಿಷ್ಕಾ ಶವ ಅಕೋಲಾದಲ್ಲಿ ಪತ್ತೆಯಾಗಿದ್ದು, ಆರೋಪಿಗಳಾದ ಶುಭಂ ಜಮ್ನಿಕ್ ಹಾಗೂ ಆತನ ಸ್ನೇಹಿತ ಪ್ರತೀಕ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ಬಾಲಕಿ ತನಿಷ್ಕಾ ಕಿರಾಣಿ ಅಂಗಡಿ ಮಾಲೀಕರಾದ ಅಮೋಲ್ ಅರುಡೆ ಎಂಬವರ ಮಗಳು. ಇವರು ಕೆಲವು ಮನೆಗಳನ್ನ ಬಾಡಿಗೆಗೂ ಕೊಟ್ಟಿದ್ರು. ಆರೋಪಿ ಶುಭಂ ಕಾರ್‍ವೊಂದನ್ನ ಖರೀದಿಸಿದ್ದು ಅದರ ಲೋನ್ ಹಣ ತೀರಿಸಲಾಗಿರಲಿಲ್ಲ. ಹೀಗಾಗಿ 5 ಲಕ್ಷ ರೂ. ಹಣ ಹೊಂದಿಸಲು ತನ್ನ ಸ್ನೇಹಿತನ ಜೊತೆಗೂಡಿ ಈ ಕಿಡ್ನ್ಯಾಪ್ ಪ್ಲಾನ್ ರೂಪಿಸಿದ್ದ. ಜೂನ್ 28ರಂದು ತನ್ನ ಮಾಲೀಕನ ಮಗಳಾದ ತನಿಷ್ಕಾಳನ್ನ ದಿಗಿ ನಗರದ ಮನೆಯಿಂದ ಕಿಡ್ನ್ಯಾಪ್ ಮಾಡಿದ್ದ.

    ನನ್ನ ಮಗಳು ಬುದ್ಧಿವಂತೆ. ಆಕೆ ಅಪರಿಚಿತರು ಕರೆದರೆ ಹೋಗುವಂತವಳಲ್ಲ. ಆದ್ದರಿಂದ ಆಕೆ ಕಾಣೆಯಾದಾಗ ಇದು ಅಪರಿಚಿತರ ಕೃತ್ಯವಲ್ಲ ಎಂದು ನನಗೆ ತಿಳಿದಿತ್ತು. ಆದ್ದರಿಂದ ನಾನು ಕೂಡಲೇ ಪೊಲೀಸ್ ಠಾಣೆಗೆ ಹೋದೆ. ಆದ್ರೆ ಅಕೆಯನ್ನ ಉಳಿಸಿಕೊಳ್ಳಲು ಆಗಲಿಲ್ಲ. ಆರೋಪಿಗಳು ಈಗಾಗಲೇ ಬಂಧಿತರಾಗಿದ್ದಾರೆ. ಆದ್ರೆ ಇದು ಶುಭಂನ ಕೆಲಸ ಎಂದು ತಿಳಿದು ನನಗೆ ಶಾಕ್ ಆಯಿತು. ತನಿಷ್ಕಾ ಕಾಣೆಯಾದಾಗ ಆಕೆಯನ್ನು ಪತ್ತೆಹಚ್ಚಲು ಅವನೂ ಕೂಡ ನಮ್ಮೊಂದಿಗಿದ್ದ. ಆದರೆ ಈಗ ಅವನೇ ನನ್ನ ಮಗಳ ಕೊಲೆಗಾರನಾಗಿದ್ದಾನೆ. ನಾನು ಅಸಹಾಯಕನಾಗಿದ್ದೇನೆ. ಅವನನ್ನ ಎಷ್ಟೆಲ್ಲಾ ಚೆನ್ನಾಗಿ ನೋಡಿಕೊಂಡೆವು. ಆದ್ರೆ ಅವನು ನಮಗೆ ಈ ರೀತಿ ಮಾಡಿದ್ದಾನೆ ಎಂದು ತನಿಷ್ಕಾ ತಂದೆ ದುಃಖಿತರಾಗಿದ್ದಾರೆ.

    ದಿಗಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹರೀಶ್ ಮಾನೆ ಈ ಬಗ್ಗೆ ಹೇಳಿಕೆ ನೀಡಿದ್ದು, ನಾವು ಎಲ್ಲಾ ಕಡೆ ಹುಡುಕಾಡಿದ ನಂತರ ಹಾಗೂ ಬಾಲಕಿಯ ತಂದೆ ಅಂದುಕೊಂಡಂತೆ ಇದು ಅಪರಿಚಿತರ ಕೃತ್ಯವಲ್ಲ ಎಂಬ ಭರವಸೆ ಇದ್ದಿದ್ದರಿಂದ ನಮಗೆ ಶುಭಂ ಮೇಲೆ ಅನುಮಾನ ಮೂಡಿತು. ನಾಲ್ಕು ದಿನಗಳ ಕಾಲ ಆತ ನಮ್ಮ ದಿಕ್ಕು ತಪ್ಪಿಸಿದ್ದ. ಆದ್ರೆ ನಂತರ ಒಂದೊಂದೇ ವಿಚಾರ ಬಾಯ್ಬಿಟ್ಟ. ಆತ ಕಾರ್‍ವೊಂದನ್ನ ಖರೀದಿಸಿದ್ದು, ಲೋನ್ ಹಣ ತೀರಿಸಿರಲಿಲ್ಲ. ಹೀಗಾಗಿ ತನ್ನ ಸ್ನೇಹಿತನ ಜೊತೆಗೂಡಿ ಕಿಡ್ನ್ಯಾಪ್ ಪ್ಲಾನ್ ಮಾಡಿ 5 ಲಕ್ಷ ರೂ.ಗಾಗಿ ಬೇಡಿಕೆ ಇಡಬೇಕು ಎಂದುಕೊಂಡಿದ್ದ. ಆದ್ರೆ ತನಿಷ್ಕಾಳನ್ನ ಕಿಡ್ನ್ಯಾಪ್ ಮಾಡಿದ ನಂತರ ಆಕೆ ಗಲಾಟೆ ಮಡಿದ್ದಳು. ಹೀಗಾಗಿ ಇವರು ಪ್ಲಾಸ್ಟಿಕ್ ಬ್ಯಾಗ್‍ವೊಂದನ್ನ ಆಕೆಯ ಮುಖದ ಮೇಲೆ ಹಾಕಿ ಆಕೆಯ ಬಾಯಿ ಮುಚ್ಚಿಸಿದ್ದರು. ನಂತರ ಮುರ್ತಿಜಾಪುರಕ್ಕೆ ಕೊಂಡೊಯ್ದು ಒಂದು ಗೋಣಿಚೀಲದಲ್ಲಿ ಬಾಲಕಿಯನ್ನ ಹಾಕಿ ಬೆಂಕಿ ಹಚ್ಚಿದ್ದರು. ನಂತರ ಅರೆಬೆಂದ ದೇಹವನ್ನ ಅಲ್ಲೇ ಒಂದು ನಿರ್ಜನ ಪ್ರದೇಶದಲ್ಲಿ ಗುಂಡಿ ತೋಡಿ ಮುಚ್ಚಿದ್ದರು ಎಂದು ತಿಳಿಸಿದ್ದಾರೆ.

  • ಸಾಲ ಮನ್ನಾ ಖುಷಿಯಲ್ಲಿರೋ ಸಿಎಂಗೆ ಕೇಂದ್ರದಿಂದ ಖಡಕ್ ಎಚ್ಚರಿಕೆ

    ಸಾಲ ಮನ್ನಾ ಖುಷಿಯಲ್ಲಿರೋ ಸಿಎಂಗೆ ಕೇಂದ್ರದಿಂದ ಖಡಕ್ ಎಚ್ಚರಿಕೆ

    ಬೆಂಗಳೂರು: ರೈತರ ಸಾಲ ಮನ್ನಾ ಖುಷಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಖಡಕ್ ವಾರ್ನಿಂಗ್ ಕೊಟ್ಟಿದೆ.

    ರೈತರ ಉದ್ದಾರಕ್ಕಾಗಿ, ಉತ್ತಮ ರಸ್ತೆಗಳ ನಿರ್ಮಾಣದ ಹೆಸರಿನಲ್ಲಿ ಬಹುರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ತೆಗೆದುಕೊಂಡಿರುವ ಸಾಲವನ್ನೇ ಸರಿಯಾಗಿಯೇ ಬಳಸಿಕೊಂಡಿಲ್ಲ ಅಂತ ಗರಂ ಆಗಿ ಪತ್ರ ಬರೆದಿದೆ.

    ಮಿಲಿಯನ್ ಗಟ್ಲೆ ಸಾಲವಿದೆ.  ಆದರೆ ಆ ಯೋಜನೆಗಳು ಮಾತ್ರ ಶೇ.20ರಷ್ಟು ಮುಗಿದಿಲ್ಲ. ಇನ್ನು ಆ ಯೋಜನೆಗೆ ನಿಗದಿಪಡಿಸಿರುವ ಸಮಯ ಶೇ. 60ರಷ್ಟು ಮುಗಿದಿದೆ ಅಂತಾ ಖಾರವಾಗಿ ಪತ್ರಬರೆಯಲಾಗಿದೆ.

    ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯು ಕಾರ್ಯದರ್ಶಿ ಪತ್ರ ಬರೆದಿದ್ದು ಈ ಕೂಡಲೇ ಆ ವಿಳಂಬವನ್ನು ತಪ್ಪಿಸಲು ಕ್ರಮ ಕೈಗೊಳ್ಳಿ ಅಂಥ ತಾಕಿತು ಮಾಡಿದ್ದಾರೆ.

    ಡ್ಯಾಂ ಪುನರ್ ವಸತಿ ಮತ್ತು ನಿರ್ವಹಣೆ ಯೋಜನೆ, ಸಮಗ್ರ ಕರ್ನಾಟಕ ಜಲಸಂಪನ್ಮೂಲ ನಿರ್ವಹಣಾ ಯೋಜನೆಗಳಲ್ಲಿ ಪ್ರಗತಿಯಾಗಿಲ್ಲ ಅಂತ ತಿಳಿಸಲಾಗಿದೆ. 2011ರಲ್ಲಿ 1357 ಮಿಲಿಯನ್ ಡಾಲರ್‍ಗಳು ಸಾಲ ಪಡೆಯಲಾಗಿದೆ.ಇದರಲ್ಲಿ ಶೇ. ಅರ್ಧದಷ್ಟು ಹಣ ಕೂಡ ಬಿಡುಗಡೆಯಾಗಿದೆ. ಆದ್ರೆ ಯೋಜನೆಗಳು ಮಾತ್ರ ಶೇ.20ರಷ್ಟು ಪ್ರಗತಿಯಾಗಿಲ್ಲ ತಿಳಿಸಿದೆ.

    ರಸ್ತೆಯ ನಿರ್ಮಾಣ ಯೋಜನೆಗಳಿಗೂ ಎಡಿಬಿ, ಐಬಿಆರ್‍ಡಿ ಹಣಕಾಸು ಸಂಸ್ಥೆಗಳಿಂದ 750 ಕೋಟಿ ಸಾಲ ಪಡೆಯಲಾಗಿದೆ. ಇದನ್ನು ಕೂಡಲೇ ಸರಿಪಡಿಸಿ ಅಂತ ರಾಜ್ಯ ಮುಖ್ಯಕಾರ್ಯದರ್ಶಿಗೆ ಕೇಂದ್ರ ತಾಕಿತು ಮಾಡಿದೆ.