Tag: LLB Student

  • #MeToo ಆರೋಪ ಮಾಡಿದ್ದ ಎಲ್‍ಎಲ್‍ಬಿ ವಿದ್ಯಾರ್ಥಿನಿ ಅನುಮಾನಾಸ್ಪದ ಆತ್ಮಹತ್ಯೆ!

    #MeToo ಆರೋಪ ಮಾಡಿದ್ದ ಎಲ್‍ಎಲ್‍ಬಿ ವಿದ್ಯಾರ್ಥಿನಿ ಅನುಮಾನಾಸ್ಪದ ಆತ್ಮಹತ್ಯೆ!

    ಬೆಂಗಳೂರು: ಮೀಟೂ ಆರೋಪ ಮಾಡಿದ್ದ ಎಲ್‍ಎಲ್‍ಬಿ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ರೀತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ಶನಿವಾರ ನಡೆದಿದೆ.

    ಅಂಡಮಾನ್ ಮೂಲದ ಪುಷ್ಪಾ ಅರ್ಚನಲಾಲ್ (26) ಆತ್ಮಹತ್ಯೆ ಮಾಡಿಕೊಂಡ ಎಲ್‍ಎಲ್‍ಬಿ ವಿದ್ಯಾರ್ಥಿನಿ. ಮಲ್ಲೇಶ್ವರಂ 8ನೇ ಅಡ್ಡ ರಸ್ತೆಯ ಲಕ್ಕು ಪಿಜಿಯಲ್ಲಿ ಪುಷ್ಪ ವಾಸವಿದ್ದು, ಅಲ್ಲಿಯ ರೂಮ್‍ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಏನಿದು ಪ್ರಕರಣ?:
    ಪುಷ್ಪಾ ಅರ್ಚನಲಾಲ್ 2017ರಲ್ಲಿ ಎಲ್‍ಎಲ್‍ಬಿ ಪದವಿ ಮುಗಿಸಿ ಟ್ರೈನಿಂಗ್ ಪಡೆಯಲು ಬೆಂಗಳೂರಿಗೆ ಬಂದಿದ್ದಳು. ಇಲ್ಲಿನ ಜಯಂತ್ ಎಂ ಪಟ್ಣಣಶೆಟ್ಟಿ ಅಂಡ್ ಅಸೋಸಿಯೇಟ್ಸ್ ನಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದಳು. ಪುಷ್ಪಾ ಕೆಲಸ ಮಾಡುತ್ತಿದ್ದ ಜಾಗದಲ್ಲಿ ವಕೀಲ ಚಂದ್ರನಾಯ್ಕ್ ಎಂಬವರ ಪರಿಚಯವಾಗಿತ್ತು. ಬಳಿಕ ಆತನ ಸಹಾಯದಿಂದ ಪುಷ್ಪಾ ಮಲ್ಲೇಶ್ವರಂ 8ನೇ ಅಡ್ಡ ರಸ್ತೆಯ ಲಕ್ಕು ಪಿಜಿ ಸೇರಿಕೊಂಡಿದ್ದಳು.

    ಕೆಲ ದಿನಗಳು ಕಳೆದಂತೆ ಚಂದ್ರನಾಯ್ಕ್ ಮೂಲಕ ಹೈಕೋರ್ಟ್ ಸರ್ಕಾರಿ ಅಭಿಯೋಜನಕ ಚೇತನ್ ದೇಸಾಯಿ ಅವರ ಪರಿಚಯವಾಗಿತ್ತು. ನಂತರ ಚಂದ್ರಶೇಖರ್ ಹಾಗೂ ಚೇತನ್ ಇಂದಿರಾನಗರದ ಎಂಜಿ ರಸ್ತೆಯಲ್ಲಿರುವ ಬಾರ್ ಅಂಡ್ ಪಬ್‍ಗೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಲೈಂಗಿಕ ಕಿರುಕುಳ ಕೊಟ್ಟಿದ್ದರು. ಇದಾದ ಬಳಿಕವೂ ವಿವಿಧ ಕಡೆಗಳಿಗೆ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸುತ್ತಿದ್ದರು ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಕುರಿತು ಪುಷ್ಪಾ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ್ ಹಾಗೂ ಚೇತನ್ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದಳು.

    ಪೊಲೀಸರು ಸೆಕ್ಷನ್ 354 (ಮಾನಭಂಗ, ಬಲಪ್ರಯೋಗ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮಗಳು ಪ್ರಕರಣ ದಾಖಲಿಸಿರುವ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪುಷ್ಪಾ ತಂದೆ ಶನಿವಾರ ಅಂಡಮಾನ್‍ನಿಂದ ಬೆಂಗಳೂರಿಗೆ ಬಂದಿದ್ದಾರೆ. ಪೂರ್ವ ವಲಯದ ಡಿಸಿಪಿ ರಾಹುಲ್ ಕುಮಾರ್ ಅವರನ್ನು ಭೇಟಿ ಮಾಡಿ, ಪ್ರಕರಣ ಕೈಬಿಡುವಂತೆ ಕೇಳಿಕೊಂಡಿದ್ದಾರೆ.

    ಪ್ರಕರಣ ವಾಪಾಸ್ ಪಡೆಯಲು ಯುವತಿಯ ಒಪ್ಪಿಗೆ ಬೇಕು ಅಂತ ರಾಹುಲ್ ಕುಮಾರ್ ಅವರು ತಿಳಿಸಿದ್ದಾರೆ. ಹೀಗಾಗಿ ಮಗಳನ್ನು ಕರೆತರುವುದಾಗಿ ತಂದೆ ಅಲ್ಲಿಂದ ತೆರಳಿದ್ದಾರೆ. ಇತ್ತ ಪುಷ್ಪಾ ತಾನು ವಾಸವಿದ್ದ ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರಿಂದಾಗಿ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದೆ.

    ಪುಷ್ಪಾ ಮೃತ ದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪಾಸ್ ಮಾಡಮ್ಮ, ನೀನು ಮಾಡಿದ್ರೆ ಆಗುತ್ತದೆ ಮಾಡುತಾಯಿ: ಹುಂಡಿಯಲ್ಲಿ ಸಿಕ್ತು ವಿದ್ಯಾರ್ಥಿಯ ಪತ್ರ

    ಪಾಸ್ ಮಾಡಮ್ಮ, ನೀನು ಮಾಡಿದ್ರೆ ಆಗುತ್ತದೆ ಮಾಡುತಾಯಿ: ಹುಂಡಿಯಲ್ಲಿ ಸಿಕ್ತು ವಿದ್ಯಾರ್ಥಿಯ ಪತ್ರ

    ದಾವಣಗೆರೆ: ಪರೀಕ್ಷೆಯಲ್ಲಿ ಪಾಸ್ ಮಾಡುವಂತೆ ಅನುಗ್ರಹಿಸು ಎಂದು ಕಾನೂನು ಪದವಿ ಓದುತ್ತಿರುವ ವಿದ್ಯಾರ್ಥಿ ಬರೆದ ಪತ್ರವೊಂದು ತಾಲೂಕಿನ ಮಾರಿಕೊಪ್ಪದ ಹಳದಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿ ಸಿಕ್ಕಿದೆ.

    ಹಳದಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಎಣಿಕೆ ಮಾಡುವ ವೇಳೆ ಈ ಪತ್ರ ಸಿಕ್ಕಿದೆ. ಓಂ ಹಳದಮ್ಮ ನಮಃ ಎಂದು ಶ್ಲೋಕದ ಮೂಲಕ ಪತ್ರ ಪ್ರಾರಂಭವಾಗಿದ್ದು, ದೇವರೇ ಎಲ್‍ಎಲ್‍ಬಿ ಎಲ್ಲ ಪರೀಕ್ಷೆಯು ಪಾಸ್ ಆಗಿಲ್ಲ. ನೀನೆ ಪಾಸ್ ಮಾಡಮ್ಮಾ, ಪಾಸ್ ಮಾಡಬೇಕು. ನೀನು ಮಾಡಿದರೆ ಆಗುತ್ತದೆ ಮಾಡುತಾಯಿ. ನನ್ನಾಸೆಯಂತೆ ಕಾರ್ಯ ನಡೆಸಮ್ಮ ಎಂದು ಬರೆದು ಹುಂಡಿಯಲ್ಲಿ ಹಾಕಲಾಗಿದೆ.

    ಎಣಿಕೆ ವೇಳೆ 9,61,400 ರೂ. ನಗದು, 10 ಲಕ್ಷ ರೂ. ಮೌಲ್ಯದ ಬಂಗಾರ, 10 ಸಾವಿರ ರೂ. ಮೌಲ್ಯದ ಬೆಳ್ಳಿ ಆಭರಣ ಸಿಕ್ಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯುವಕನ ಮೆಸೇಜ್ ನಿಂದಾಗಿ ಯುವತಿ ಆತ್ಮಹತ್ಯೆಗೆ ಶರಣು- ಒನ್ ಸೈಡ್ ಲವ್ ಸ್ಟೋರಿಯಲ್ಲೊಂದು ಟ್ವಿಸ್ಟ್!

    ಯುವಕನ ಮೆಸೇಜ್ ನಿಂದಾಗಿ ಯುವತಿ ಆತ್ಮಹತ್ಯೆಗೆ ಶರಣು- ಒನ್ ಸೈಡ್ ಲವ್ ಸ್ಟೋರಿಯಲ್ಲೊಂದು ಟ್ವಿಸ್ಟ್!

    ಹಾಸನ: ಜಿಲ್ಲೆಯ ಸಕಲೇಶಪುರ ವಿಭಾಗದ ಸಾರಿಗೆ ಬಸ್ ಚಾಲಕನ ಲವ್ ಕಹಾನಿಗೆ ಟ್ವಿಸ್ಟ್ ಸಿಕ್ಕಿದೆ. ತಾಲೂಕಿನ ಆದರಗೆರೆ-ದೊಡ್ಡನಹಳ್ಳಿಯ ಎಲ್‍ಎಲ್‍ಬಿ ವಿದ್ಯಾರ್ಥಿನಿ ತನುಶ್ರೀ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಸಾರಿಗೆ ಬಸ್ ಚಾಲಕ ಸಂತೋಷ್ ಕಾರಣ ಎಂದು ಆರೋಪಿಸಲಾಗಿತ್ತು.

    ತನುಶ್ರೀ ಪೋಷಕರು ನಮ್ಮ ಮಗಳ ಸಾವಿಗೆ ಸಂತೋಷನೇ ಕಾರಣ. ಆತ ನನ್ನನ್ನು ಪ್ರೀತಿಸು, ಮದುವೆಯಾಗು ಎಂದು ತಮ್ಮ ಮಗಳಿಗೆ ಬಲವಂತ ಮಾಡುತ್ತಿದ್ದನು. ಆತನ ಕಿರುಕುಳದಿಂದಲೇ ಮಗಳು ವಿಷ ಕುಡಿದು ಸತ್ತಿದ್ದಾಳೆ ಎಂದು ದೂರಿದ್ದರು. ಮೃತ ತನುಶ್ರೀ ಸಹ ಸಾಯುವ ಮುನ್ನ ಸಂತೋಷನ ವಿರುದ್ಧ ಹೇಳಿಕೆ ನೀಡಿದ್ದಳು.

    ಏನದು ಟ್ವಿಸ್ಟ್?: ಸಂತೋಷನ ಒನ್ ವೇ ಲವ್ ಅಲ್ಲ ಅಥವಾ ಬಲವಂತ ಸಹ ಮಾಡಿಲ್ಲ. ಬದಲಾಗಿ ತನುಶ್ರೀಯೂ ಸಹ ಸಂತೋಷನನ್ನು ಅತಿಯಾಗಿ ಪ್ರೀತಿಸಿದ್ದಳು. ಮಾನಸಿಕವಾಗಿ ಪತಿ ಅಂತಲೇ ಸ್ವೀಕಾರ ಮಾಡಿದ್ದಳು. ನೀನು ನಮ್ಮ ಮನೆಯವರಿಗೆ ಫೋನ್ ಮಾಡಿ ನನ್ನನ್ನು ಮದುವೆ ಮಾಡಿಕೊಡುವಂತೆ ಕೇಳು ಎಂದು ಹೇಳಿದ್ದ ನಿಜ ಸಂಗತಿ ಆಕೆ ಸಂತೋಷ್‍ಗೆ ಮಾಡಿರುವ ಮೆಸೇಜ್‍ಗಳಿಂದ ಬಯಲಾಗಿದೆ.

    2 ವರ್ಷಗಳಿಂದ ಸಂತೋಷ್ ಮತ್ತು ತನುಶ್ರೀ ಪರಸ್ಪರ ಪ್ರೀತಿಸಿ ಮದುವೆಯಾಗಲೂ ನಿರ್ಧರಿಸಿದ್ದರು. ಇದಕ್ಕೆ ಸಂತೋಷ್ ಮನೆಯವರು ಒಪ್ಪಿದ್ದರೆ, ತನುಶ್ರೀ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಯುವತಿ ತಂದೆ ಸುದೇಶ್ ಲವ್ ಕಾರಣಕ್ಕೆ ಮಗಳನ್ನು ನಿಂದಿಸಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ತನುಶ್ರೀ, ತಾನೇ ಸಂತೋಷನಿಗೆ ಮೆಸೇಜ್ ಮಾಡಿ ನಮ್ಮ ಮದುವೆ ಸಾಧ್ಯವಾಗದೇ ಇದ್ರೆ ಸಾಯೋಣ ಎಂದು ನಿರ್ಧರಿಸಿ ಕಳೆದ ಆಗಸ್ಟ್ 3 ರಂದು ಪ್ರತ್ಯೇಕವಾಗಿ ವಿಷ ಕುಡಿದಿದ್ದಾರೆ.

    ಸದ್ಯ ಸಂತೋಷ್ ಬದುಕುಳಿದಿದ್ದರೆ, ತನುಶ್ರೀ ಸಾವನ್ನಪ್ಪಿದ್ದಾಳೆ. ತನುಶ್ರೀ ಸಾವಿಗೆ ನಮ್ಮ ಮಗ ಕಾರಣ ಅಲ್ಲ, ಬದಲಾಗಿ ಆಕೆಯ ತಂದೆಯೇ ನೇರ ಹೊಣೆ. ನಮ್ಮ ಮಗ ಮತ್ತು ತನುಶ್ರೀ ಕೋರಿಕೆಯಂತೆ ನಾವೇ ದೂರವಾಣಿ ಕರೆ ಮಾಡಿ ತನುಶ್ರೀಯನ್ನು ಮಗನಿಗೆ ಮದುವೆ ಮಾಡಿಕೊಡುವಂತೆ ಕೇಳಿದ್ದೆವು.

    ಆದರೆ ಅದಕ್ಕೆ ಅವರು ಒಪ್ಪಲಿಲ್ಲ. ಇದೇ ಕಾರಣಕ್ಕೆ ತನುಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂತೋಷ್ ಪೋಷಕರು ಆರೋಪ ಮಾಡಿದ್ದಾರೆ. ಇದರಿಂದಾಗಿ ತಂದೆಯ ಪ್ರತಿಷ್ಠೆಯೇ ತನುಶ್ರೀ ಸಾವಿಗೆ ಕಾರಣವಾಯಿತೇ ಎಂಬ ಬಲವಾದ ಅನುಮಾನ ಮೂಡಿದೆ. ಆದರೂ ತನುಶ್ರೀ ತಂದೆ, ಮಗಳ ಸಾವಿಗೆ ಸಂತೋಷನೇ ಕಾರಣ, ಆತನನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಮತ್ತೆ ಮನವಿ ಮಾಡಿದ್ದಾರೆ.