Tag: letter

  • ಕ್ಷಮಿಸು ಅಮ್ಮ, ನಾನು ಲವ್ ಮಾಡಿಲ್ಲ ಎಂದು ನೇಣಿಗೆ ಶರಣಾದ ಯುವಕ

    ಕ್ಷಮಿಸು ಅಮ್ಮ, ನಾನು ಲವ್ ಮಾಡಿಲ್ಲ ಎಂದು ನೇಣಿಗೆ ಶರಣಾದ ಯುವಕ

    ಲಕ್ನೋ: ಕ್ಷಮಿಸು ಅಮ್ಮ, ನಾನು ಹೋಗುತ್ತಿದ್ದೇನೆ. ನಾನು ಯಾವುದೇ ಯುವತಿಯನ್ನು ಲವ್ ಮಾಡಿಲ್ಲ ಎಂದು ಯುವಕನೊಬ್ಬ ಡೆತ್ ನೋಟ್ ಬರೆದು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಲಕ್ನೋದ ಜನಕಿಪುರಂನಲ್ಲಿ ಈ ಘಟನೆ ನಡೆದಿದ್ದು, ಭಾನು ಪ್ರತಾಪ್ ಸಿಂಗ್(19) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾನು ಯಾವುದೇ ಯುವತಿಯನ್ನು ಪ್ರೀತಿಸಿಲ್ಲ. ನನ್ನನ್ನು ಕ್ಷಮಿಸು ಅಮ್ಮ, ನಾನು ಹೋಗುತ್ತಿದ್ದೇನೆ ಎಂದು ಡೆಡ್ ನೋಟ್ ಬರೆದಿಟ್ಟು ಪ್ರತಾಪ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ:ಡೇಟಿಂಗ್ ಆ್ಯಪ್ ಮೂಲಕ ಗೆಳೆಯನ ಹುಡುಕಾಟದಲ್ಲಿದ್ದಾರೆ 83ರ ವೃದ್ಧೆ

    ಪ್ರತಾಪ್ ಸೀತಾಪುರ ರಸ್ತೆಯ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದನು. ಆದರೆ ಕೆಲದಿನಗಳಿಂದ ಪ್ರತಾಪ್ ಯಾವಾಗಲೂ ಮಂಕಾಗಿ ಇರುತ್ತಿದ್ದನು. ಇದನ್ನು ಗಮನಿಸಿದ ಮನೆಯವರು ಏನಾಯಿತು ಎಂದು ಪ್ರಶ್ನಿಸಿದರು ಆತ ಏನು ಉತ್ತರ ನೀಡುತ್ತಿರಲಿಲ್ಲ. ಹೀಗಾಗಿ ಮನೆಯವರು ಹೆಚ್ಚು ಒತ್ತಾಯ ಮಾಡಿ ಕೇಳಿ ತೊಂದರೆ ಕೋಡೋದು ಬೇಡ ಎಂದು ಸುಮ್ಮನಾಗಿದ್ದರು.

    ಶುಕ್ರವಾರ ಪ್ರತಾಪ್ ಕಾಲೇಜಿಗೆ ಹೋಗದೆ ಮನೆಯಲ್ಲಿಯೇ ಇದ್ದ. ಮಧ್ಯಾಹ್ನವಾದರೂ ತನ್ನ ಕೊಠಡಿಯಿಂದ ಹೊರಬಾರದ ಕಾರಣ ಕುಟುಂಬಸ್ಥರು ಆತಂಕಕ್ಕೀಡಾದರು. ಎಷ್ಟೇ ಬಾಗಿಲು ಬಡಿದರೂ ಪ್ರತಾಪ್ ತೆರೆಯದಿದ್ದಾಗ ಚಿಂತೆಗೀಡಾದರು. ಮೊಬೈಲ್‍ಗೆ ಕರೆ ಮಾಡಿದರೂ ಫೋನ್ ಎತ್ತುತ್ತಿರಲಿಲ್ಲ. ಆಗ ಮನೆಯವರು ಬಾಗಿಲನ್ನು ಮುರಿದು ಕೊಠಡಿಯೊಳಗೆ ಹೋದಾಗ ಪ್ರತಾಪ್ ಮೃತದೇಹ ಕಂಡು ಆಘಾತಗೊಂಡಿದ್ದಾರೆ.

    ಮನನೊಂದಿದ್ದ ಪ್ರತಾಪ್ ಕೊಠಡಿಯಲ್ಲಿದ್ದ ಫ್ಯಾನಿಗೆ ನೇಣು ಹಾಕಿಕೊಂಡು ಜೀವ ಬಿಟ್ಟಿದ್ದನು. ಮರಣೋತ್ತರ ಪರೀಕ್ಷೆಯಲ್ಲೂ ಸಹ ಯುವಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಪೊಲೀಸರಿಗೆ ಡೆತ್ ನೋಟ್ ಪತ್ತೆಯಾಗಿದ್ದು, ನನ್ನನ್ನು ಕ್ಷಮಿಸು ಅಮ್ಮ, ನಾನು ಹೋಗುತ್ತಿದ್ದೇನೆ, ನಾನು ಯಾವ ಹುಡುಗಿಯನ್ನು ಪ್ರೀತಿ ಮಾಡಿಲ್ಲ ಎಂದು ಬರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರತಾಪ್ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

  • ನೀನೊಬ್ಬ ನಕಲಿ, ಢೋಂಗಿ ಹೋರಾಟಗಾರ- ಭೀಮಾಶಂಕರ್ ಪಾಟೀಲ್‍ಗೆ ಕಟೀಲ್ ಆಪ್ತನಿಂದ ಎಚ್ಚರಿಕೆ

    ನೀನೊಬ್ಬ ನಕಲಿ, ಢೋಂಗಿ ಹೋರಾಟಗಾರ- ಭೀಮಾಶಂಕರ್ ಪಾಟೀಲ್‍ಗೆ ಕಟೀಲ್ ಆಪ್ತನಿಂದ ಎಚ್ಚರಿಕೆ

    ಬೆಂಗಳೂರು: ಆಡಳಿತ ಪಕ್ಷ ಬಿಜೆಪಿಯ ಆಂತರಿಕ ಕಲಹಗಳು ಸ್ಫೋಟಗೊಂಡು ಬಹಿರಂಗವಾಗುತ್ತಿವೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೆಂಬಲಿಗರ ಮಧ್ಯೆ ಪತ್ರ ಸಮರ ಮತ್ತಷ್ಟು ಜೋರಾಗಿದೆ.

    ಸಿಎಂ ಯಡಿಯೂರಪ್ಪ ಅವರ ಪರ ವಹಿಸಿ ನಳಿನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಪತ್ರ ಬರೆದಿದ್ದರು. ಇದೇ ವಿಚಾರವಾಗಿ ಬಿಎಸ್‍ವೈ ಆಪ್ತ ಭೀಮಾಶಂಕರ್ ವಿರುದ್ಧ ನಳಿನ್ ಕುಮಾರ್ ಕಟೀಲ್ ಆಪ್ತ, ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಮಾಡಾಳು ಕೊಟ್ರೇಶ್ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೆ ಪತ್ರದ ಮೂಲಕ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಇದನ್ನು ಓದಿ: ಯಡಿಯೂರಪ್ಪಗೆ ಚೆಕ್ ಮೇಲೆ ಚೆಕ್ ಕೊಡ್ತಿದ್ದಾರೆ ಕಟೀಲ್

    ನಿನ್ನ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರನ್ನು ಪ್ರಶ್ನೆ ಮಾಡುವ ಅಧಿಕಾರ ನಿನಗೆ ಕೊಟ್ಟಿದ್ದು ಯಾರು? ನೀನೊಬ್ಬ ನಕಲಿ, ಢೋಂಗಿ ಹೋರಾಟಗಾರ. ಹಿಂದೊಮ್ಮೆ ಜನರೇ ನಿನಗೆ ಗೂಸಾ ಕೊಟ್ಟಿದ್ದರು. ಪಕ್ಷದಲ್ಲಿ ಯಾರೂ ಯಾರನ್ನೂ ಕಡೆಗಣಿಸಲ್ಲ. ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದಕ್ಕೆ ಸಾಕ್ಷ್ಯ ಇದ್ದರೆ ಬಿಡುಗಡೆ ಮಾಡು. ನೀನು ಬರೆದ ಪತ್ರ ವಾಪಸ್ ಪಡೆದುಕೊಳ್ಳಬೇಕು. ಜೊತೆಗೆ ರಾಜ್ಯಾಧ್ಯಕ್ಷರ ಕ್ಷಮೆ ಕೇಳು. ಇಲ್ಲದಿದ್ದರೆ ಬಿಜೆಪಿ ಕಾರ್ಯಕರ್ತರು ನಿನ್ನ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಡಾಳು ಕೊಟ್ರೇಶ್, ಭೀಮಾಶಂಕರ್ ಪಾಟೀಲ್ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

    ಭೀಮಾಶಂಕರ್ ಪತ್ರದಲ್ಲಿ ಏನಿತ್ತು?
    ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿ ಅಧಿಕಾರಕ್ಕೆ ತಂದ ನಾಯಕ ಯಡಿಯೂರಪ್ಪ ಅವರು, ಅವರನ್ನು ಪಕ್ಷದ ಸಂಘಟನೆ, ಆಡಳಿತಾತ್ಮಕ ವಿಚಾರ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಕಡೆಗಣಿಸುತ್ತಿರುವ ವಿಚಾರವನ್ನು ಬಲವಾಗಿ ಖಂಡಿಸುತ್ತೇನೆ.

    ವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತೀತ ಜನ ನಾಯಕರಾಗಿದ್ದು, ರೈತ, ಕಾರ್ಮಿಕ, ಬಡವರ, ಸರ್ವ ಸಮುದಾಯದ ಜನರು ಬಿಎಸ್‍ವೈ ಅವರ ಸಾಮಾಜಿಕ ಕಳಕಳಿ ಮೆಚ್ಚಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಕ್ಷಕ್ಕೆ ಮತ ಹಾಕಿ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಮುಖ್ಯಮಂತ್ರಿಯಾದ ಸಮಯದಿಂದ ಮತ್ತೆ ಅವರ ವಿರುದ್ಧ ಪಿತೂರಿಗಳು ನಡೆಯುತ್ತಿದೆ. ಪಕ್ಷ ಅಧಿಕಾರಕ್ಕೆ ಬರಲು ಬಿಎಸ್‍ವೈ ಬೇಕು. ಅಧಿಕಾರ ಸಿಕ್ಕ ನಂತರ ಬೇಡ ಎನ್ನುವ ಮನಸ್ಥಿತಿ ನಮ್ಮ ಪಕ್ಷದ ಬುದ್ಧಿವಂತರ ರೀತಿ ಮುಖವಾಡ ಧರಿಸಿರುವವರು ಮಾಡುತ್ತಿದ್ದಾರೆ. ಇಂತಹ ಕನಿಷ್ಠ ಯೋಚನೆ ಪಕ್ಷಕ್ಕೆ ನಿಜಕ್ಕೂ ಅಪಾಯ. ಇದರಿಂದ ನೀವೂ ಸಹ ಹೊರ ಬರಬೇಕು ಎಂದು ಪತ್ರದಲ್ಲಿ ತಿಳಿಸಿದ್ದರು.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ಭೀಮಾಶಂಕರ್ ಅವರು, ಪಕ್ಷ ಹಾಗೂ ಬಿಎಸ್‍ವೈ ಅವರ ವಿರುದ್ಧ ನಿರಂತರವಾಗಿ ಪಿತೂರಿ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಬಿಎಸ್‍ವೈ ಅವರನ್ನು ನೋಡಿ ಪಕ್ಷಕ್ಕೆ ಮತ ನೀಡಲಾಗಿದೆ. ಇದು ಪಕ್ಷದಲ್ಲಿ ಪಿತೂರಿ ನಡೆಸುತ್ತಿರುವವರಿಗೂ ತಿಳಿದಿದೆ. ಇದರ ಬಗ್ಗೆ ಹೊಸ ರಾಜ್ಯಾಧ್ಯಕ್ಷರಿಗೆ ತಿಳಿಸಲು ಪತ್ರ ಬರೆಯಲಾಗಿದೆ. ಕೆಲವರಿಗೆ ಇದನ್ನು ನೇರವಾಗಿ ಹೇಳಿದರೆ ಮಾತ್ರ ತಲುಪುತ್ತದೆ. ಆದ್ದರಿಂದಲೇ ಬಹಿರಂಗ ಪತ್ರ ಬರೆದಿದ್ದೇವೆ. ಇದನ್ನು ಎಚ್ಚರಿಕೆ ಅಥವಾ ಸಲಹೆಯಾಗಿ ತಿಳಿದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದ್ದರು.

  • ತುರ್ತಾಗಿ 2 ಲಕ್ಷ ರೂ, ಸಾಲ ಕೊಡಿಸು – ವಾಯು ಪುತ್ರನಿಗೆ ಪತ್ರ ಬರೆದ ಭಕ್ತ

    ತುರ್ತಾಗಿ 2 ಲಕ್ಷ ರೂ, ಸಾಲ ಕೊಡಿಸು – ವಾಯು ಪುತ್ರನಿಗೆ ಪತ್ರ ಬರೆದ ಭಕ್ತ

    – ನನಗೆ ಸರ್ಕಾರಿ ಕೆಲಸದ ಜೊತೆಗೆ ಮದುವೆಯೂ ಆಗಬೇಕು

    ಕೊಪ್ಪಳ: ತುರ್ತಾಗಿ 2 ಲಕ್ಷ ರೂಪಾಯಿ ಸಾಲ ಕೊಡಿಸು ಎಂದು ಭಕ್ತನೊರ್ವ ದೇವರಿಗೆ ಪತ್ರ ಬರೆದಿದ್ದಾನೆ.

    ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಬೆಟ್ಟದಲ್ಲಿ ಇಂದು ಹುಂಡಿಯಲ್ಲಿರುವ ಹಣವನ್ನು ಎಣಿಸುವ ಕಾರ್ಯ ನೆಡದಿತ್ತು. ಈ ವೇಳೆ ಲಕ್ಷಾಂತರ ರೂಪಾಯಿ ಹಣದ ಜೊತೆಗೆ ಇಬ್ಬರೂ ಭಕ್ತರು ತಮ್ಮ ಕಷ್ಟವನ್ನು ಪತ್ರದ ಮೂಲಕ ಬರೆದು ವಾಯು ಪುತ್ರನಿಗೆ ಮನವಿ ಮಾಡಿರುವ ಪತ್ರಗಳು ಸಿಕ್ಕಿವೆ.

    ದೇವರಿಗೆ ಬರೆದ ಒಂದು ಪತ್ರದಲ್ಲಿ ಭಕ್ತ, ನನ್ನ ಮನೆಯ ಕಟ್ಟಡದ ಕೆಲಸ ಪೂರ್ತಿಯಾಗಬೇಕು. ನಾನು ಕಳೆದುಕೊಂಡ ಶಕ್ತಿ ನನಗೆ ವಾಪಸ್ ಬರಬೇಕು. ಕೇಸ್ ನಿಂದ ಮುಕ್ತಿ ಹೊಂದಬೇಕು. ಈ ಸದ್ಯ ನನಗೆ 2 ಲಕ್ಷ ರೂಪಾಯಿ ಸಾಲ ಕೊಡಿಸು ಬೇಕು ಎಂದು ವಾಯು ಪುತ್ರನಿಗೆ ಮನವಿ ಮಾಡಿದ್ದಾನೆ.

    ಇದೇ ರೀತಿ ಇನ್ನೊಬ್ಬ ಭಕ್ತನೂ ಸಹ ವಿಭಿನ್ನವಾಗಿ ಮನವಿ ಮಾಡಿದ್ದಾನೆ. ನನಗೆ ಸರ್ಕಾರಿ ಕೆಲಸದ ಜೊತೆಗೆ ಮದುವೆಯೂ ಆಗಬೇಕು ಎಂದು ಮನವಿ ಮಾಡಿ ಪತ್ರ ಬರೆದಿದ್ದಾನೆ. ಒಟ್ಟಾರೆ ವಾಯುಪುತ್ರನಿಗೆ ನೊಂದ ಭಕ್ತರ ಪತ್ರ ವ್ಯವಹಾರದ ಮುಖಾಂತರ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಹಣದ ಜೊತೆ ಪತ್ರಗಳನ್ನು ನೋಡಿದ ದೇವಸ್ಥಾನ ಆಡಳಿತ ಮಂಡಳಿ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ.

  • ಎಚ್ಚರಿಕೆಯನ್ನು ನಾನು ಸ್ವೀಕರಿಸುವುದಿಲ್ಲ, ಇತರರಿಗೂ ನೀಡಲ್ಲ: ಸುದೀಪ್

    ಎಚ್ಚರಿಕೆಯನ್ನು ನಾನು ಸ್ವೀಕರಿಸುವುದಿಲ್ಲ, ಇತರರಿಗೂ ನೀಡಲ್ಲ: ಸುದೀಪ್

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಟ್ವಿಟ್ಟರಿನಲ್ಲಿ ಎಚ್ಚರಿಕೆಯನ್ನು ನಾನು ಸ್ವೀಕರಿಸುವುದಿಲ್ಲ, ಇತರರಿಗೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

    ಎಚ್ಚರಿಕೆಯನ್ನು ನಾನು ಸ್ವೀಕರಿಸುವುದಿಲ್ಲ ಹಾಗೂ ಬೇರೆಯವರಿಗೆ ನೀಡುವುದಿಲ್ಲ. ಪದಗಳು ಯುದ್ಧಗಳನ್ನು ಗೆಲ್ಲಲು ಸಾಧ್ಯವಾದರೆ, ಇಂದು ಅನೇಕ ರಾಜರು ಹಾಗೂ ಆಡಳಿತಗಾರರು ಇರುತ್ತಿದ್ದರು. ಆದರೆ ನಾನು ಮನುಷ್ಯತ್ವ ದಾರಿಯಲ್ಲಿ ಹೋಗಲು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಟಂಬ್ಲರ್ ನಲ್ಲಿ ಬರೆದುಕೊಂಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಪೈಲ್ವಾನ್ ಬಿಡುಗಡೆಯಾದ ಕ್ಷಣದಿಂದ ಸುಮಾರು ವಿಷಯಗಳು ಸಂಭವಿಸುತ್ತಿವೆ. ಆದರೆ ಇದು ಒಳ್ಳೆಯ ಲಕ್ಷಣಗಳು ಎಂದು ನನಗೆ ಅನ್ನಿಸುತ್ತಿಲ್ಲ. ಹಾಗೆ ಎಲ್ಲಾ ಸಂದರ್ಭದಲ್ಲೂ, ಎಲ್ಲದ್ದಕ್ಕೂ ಉತ್ತರಿಸುತ್ತಾ ಕೂರುವುದು ಕೂಡ ಒಳ್ಳೆಯದಲ್ಲ. ಕೆಲವು ಬಾರಿ ಕುರುಡನ ಹಾಗೆ, ಕಿವುಡನ ಹಾಗೆ ಇದ್ದು ಬಿಟ್ಟರೆ ಅದೆಷ್ಟೋ ನೆಮ್ಮದಿಯನ್ನು ನಮ್ಮದಾಗಿಸಿಕೊಳ್ಳಬಹುದು. ನಿಮ್ಮ ಬದುಕಿನ ಕಡೆ ಗಮನಹರಿಸಿ, ಒಳ್ಳೆಯದನ್ನು ಮಾಡಿ ಇಂತಹ ವಿಷಯಗಳ ಬಗ್ಗೆ ತಲೆಕೆಡಸಿಕೊಳ್ಳಬೇಡಿ. ಏಕೆಂದರೆ ಇಲ್ಲಿ ಸತ್ಯವೇ ಅಂತಿಮ. ಎಚ್ಚರಿಕೆ, ಬೆದರಿಕೆಗಳಿಂದ ಏನೂ ಆಗುವುದಿಲ್ಲ. ಯಾರೂ ಸಣ್ಣವರಾಗುವುದಿಲ್ಲ.

    ಪೈಲ್ವಾನ್ ಪೈರಸಿಗೆ ಸಂಬಂಧಿಸಿದಂತೆ ನಾವು ಯಾವ ನಟನ ಹೆಸರನ್ನು ಪ್ರಸ್ತಾಪಿಸಿಲ್ಲ. ಸೋಮವಾರ ನಮ್ಮ ನಿರ್ಮಾಪಕರು ಪೈಲ್ವಾನ್ ಪೈರಸಿಗೆ ಆ ನಟನ ಅಭಿಮಾನಿಗಳು ಕಾರಣರಲ್ಲ ಎಂದು ಹೇಳಿದ್ದಾರೆ ಮತ್ತು ಹೇಳುತ್ತಿದ್ದಾರೆ. ಹಾಗಂತ ಪೈರಸಿ ಆಗಿಲ್ಲ ಎಂದು ಅರ್ಥವಲ್ಲ. ತುಂಬಾ ದೊಡ್ಡ ಮಟ್ಟದಲ್ಲಿ ಪೈರಸಿಯಾಗಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ಲಿಂಕ್ ಗಳನ್ನು ಹರಿಬಿಟ್ಟಿದ್ದಾರೆ. ಅವರೆಲ್ಲರ ಹೆಸರುಗಳನ್ನು ನಾವು ಸೈಬರ್ ಪೊಲೀಸರಿಗೆ ನೀಡಿದ್ದೇವೆ. ಆದರೆ ಇದರಿಂದ ಕನ್ನಡ ಸಿನಿಮಾವೊಂದಕ್ಕೆ ಆದ ನಷ್ಟವೆಷ್ಟು? ಉತ್ಸಾಹ ಕಳೆದುಕೊಂಡ ಸಿನಿಮಾ ಕರ್ಮಿಗಳೆಷ್ಟು? ಎಂಬುದನ್ನು ಯಾರಾದರೂ ಯೋಚಿಸಿದ್ದಾರಾ? ಇಲ್ಲ ಅವರಿಗೆ ಮತ್ತೊಬ್ಬರ ಅವಸಾನವನ್ನು ನೋಡಲು ಇರುವಷ್ಟು ಕಾತುರ ಒಳ್ಳೆಯದನ್ನು ಮಾಡುವಾಗ ಇರುವುದಿಲ್ಲ. ನನ್ನ ಹೆಸರನ್ನು ತಮಾಷೆಯಾಗಿ ಮಾಡಿಕೊಂಡಾಗ ಸಿಗುವಷ್ಟು ಸಮಾಧಾನ ಎತ್ತರದಲ್ಲಿ ನಿಂತಾಗ ಸಿಗುವುದಿಲ್ಲ. ಇಂತಹ ವಿಷಯಗಳನ್ನು ನೋಡಿದಾಗ ನಿಮ್ಮೆಲ್ಲರಿಗೂ ನೋವಾಗುತ್ತದೆ ಎಂದು ನನಗೆ ಗೊತ್ತು. ಆದರೆ ನೆನಪಿರಲಿ ನಾನು ಇಂತಹ ವಿಷಯಗಳಿಂದ ಸಣ್ಣವನಾಗುವುದಿಲ್ಲ.

    ನನ್ನ ಸಿನಿಮಾ ಮತ್ತು ನಿರ್ಮಾಪಕರನ್ನು ಕಾಪಾಡಿಕೊಳ್ಳುವುದಕ್ಕೆ ನಾನು ಟ್ವೀಟ್ ಮಾಡಿರುವುದು ನಿಜ. ಆದರೆ ಅದು ಯಾವುದೇ ನಟನ ಬಗ್ಗೆ ಅಲ್ಲ. ನಮ್ಮ ಸಿನಿಮಾದ ಪೈರಸಿ ಮಾಡಿದವರ ಬಗ್ಗೆ. ಅದನ್ನು ಇವರು ತಮಗೆ ಯಾಕೆ ಅನ್ವಯಿಸಿಕೊಂಡರೋ ಎಂದು ನನಗೆ ಅರ್ಥವಾಗುತ್ತಿಲ್ಲ. ನನ್ನ ಪೈಲ್ವಾನ್ ಸಿನಿಮಾಗೆ ಅಭಿಮಾನಿ ಸ್ನೇಹಿತರಾದ ನೀವು ತೋರಿದ ಪ್ರೀತಿ. ಇಂಡಸ್ಟ್ರಿಯ ಸಹೋದ್ಯೋಗಿಗಳು ತೋರಿದ ಪ್ರೋತ್ಸಾಹವನ್ನು ಖಂಡಿತವಾಗಿಯೂ ಮರೆಯಲಾಗುವುದಿಲ್ಲ. ಇನ್ನೂ ನಾನು ಏನಾದರೂ ಪ್ರೂವ್ ಮಾಡಿಕೊಳ್ಳುವ ಅಗತ್ಯವಿದೆ ಎಂದು ನನಗೆ ಈಗ ಅನಿಸುತ್ತಿಲ್ಲ.

    ಸಿನಿಮಾದ ಹೀರೋ ರೀತಿ ನಾನು ಯಾರಿಗೂ ಎಚ್ಚರಿಕೆ ಕೊಡುವುದಿಲ್ಲ. ಏಕೆಂದರೆ ಅದು ಈಗ ನನ್ನ ಸ್ವಭಾವವಲ್ಲ. ಹೌದು. ಒಂದು ಕಾಲದಲ್ಲಿ ನಾನೂ ಆ ರೀತಿ ಇದ್ದೆ. ತುಂಬಾ ವಿಷಯಗಳಲ್ಲಿ ಖಾರವಾಗಿಯೇ ಮಾತನಾಡುತ್ತಿದ್ದೆ. ಕೆಲವರ ಬಗ್ಗೆ ರೋಷದಿಂದಲೂ ಟೀಕಿಸಿದ್ದೆ. ಆದರೆ ಬದುಕಿನ ಪಯಣ ನನ್ನ ಅರಿವಿನ ಮಿತಿಯನ್ನು ವಿಸ್ತರಿಸುತ್ತಾ ಹೋದಂತೆ ನಾನೂ ಬದಲಾಗುತ್ತಾ ಹೋದೆ. ನನ್ನ ಖಾಸಗಿ ಬದುಕಿನಲ್ಲೇ ಅನೇಕ ತೊಂದರೆಗಳಿದ್ದವು. ಅವನ್ನು ಕೂಡ ಸರಿಪಡಿಸಿಕೊಂಡು ಮುನ್ನುಡಿ ಇಡುವ ಪ್ರಯತ್ನವನ್ನು ಮಾಡಿದೆ. ತಪ್ಪನ್ನು ಎಲ್ಲರೂ ಮಾಡ್ತಾರೆ. ಆದರೆ ತಿದ್ದಿಕೊಂಡು ಹೋಗುವುದು ತಾನೇ ಮನುಷ್ಯತ್ವ. ನಾನೂ ಹಾಗೇ ಒಬ್ಬ ಉತ್ತಮ ವ್ಯಕ್ತಿಯಾಗಬೇಕೆಂಬ ಹಂಬಲದಿಂದ ದ್ವೇಷ, ರೋಷಗಳ ಜಾಗದಲ್ಲಿ ಪ್ರೀತಿ, ವಿಶ್ವಾಸಗಳ ಬೆಳೆಯನ್ನು ಬಿತ್ತಿದೆ. ನಾನು ಕ್ಷಮೆ ಕೇಳಲು ಮತ್ತು ಕ್ಷಮೆಯನ್ನು ಒಪ್ಪಿಕೊಳ್ಳಲು ಯಾವತ್ತೂ ಮುಜುಗರಪಡಲಿಲ್ಲ.

    ನನ್ನ ಆ ನಿರ್ಧಾರ ಫಲ ಕೊಡುವ ಸಂದರ್ಭದಲ್ಲಿ ಮತ್ತೆ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುವ ಅಗತ್ಯವಿದೆಯೇ ನೀವೇ ಹೇಳಿ. ಅಂದು ಕೆಲವರನ್ನು ಟೀಕಿಸಿದ್ದೂ ಸಾರ್ವಜನಿಕವಾಗಿಯೇ. ಇಂದು ಅವರನ್ನು ಒಪ್ಪಿ, ಅಪ್ಪಿರುವುದೂ ಸಾರ್ವಜನಿಕವಾಗಿಯೇ. ನಾನು ಇದುವರೆಗೆ ಏನು ಸಂಪಾದಿಸಿದ್ದೇನೆಯೋ ಅದೆಲ್ಲವೂ ನನ್ನ ಕೆಲಸ, ಪ್ರೀತಿ, ವಿಶ್ವಾಸಗಳಿಂದಲೇ ಎಂಬುದು ಎಲ್ಲರಿಗೂ ಗೊತ್ತು. ಪರಸ್ಪರ ಪ್ರೀತಿ, ವಿಶ್ವಾಸವನ್ನು ಹಂಚಿಕೊಳ್ಳುವುದರಲ್ಲಿ ನನಗೆ ಆನಂದವಿದೆ. ಅದನ್ನೇ ಮುಂದುವರಿಸುತ್ತೇನೆ. ತುಂಬಾ ಕಡಿಮೆ ಸಮಯ ನಾವು ಈ ಭೂಮಿಯಲ್ಲಿರುತ್ತೇವೆ. ಆ ಸಮಯವನ್ನು ಹೆಚ್ಚು ಅರ್ಥಪೂರ್ಣಗೊಳಿಸುವ ಜವಾಬ್ದಾರಿ ನನ್ನ ಮೇಲಿದೆ. ಆದ್ದರಿಂದ ಎಲ್ಲವನ್ನೂ ಮರೆತು ಹೊಸ ಉತ್ಸಾಹದಿಂದ ಮುನ್ನುಗ್ಗಿ. ಹರಿಯುವ ನದಿ ನಿಲ್ಲಬಾರದಲ್ಲವೇ ಸ್ನೇಹಿತರೇ.

    ಈ ಸಂದರ್ಭದಲ್ಲಿ “ಜಗತ್ತನ್ನೇ ಗೆದ್ದು ಬರಿಗೈನಲ್ಲಿ ಹೊರಟ” ಅಲೆಗ್ಸಾಂಡರ್ ನೆನಪಾಗುತ್ತಿದ್ದಾನೆ. ಅಲೆಗ್ಸಾಂಡರ್ ಬದುಕಿನ ನೀತಿಯನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ. ಈ ಜಗತ್ತಿಗೆ ನಾವು ಕೊಟ್ಟು ಹೋಗುವುದು ನಮ್ಮ ನೆನಪುಗಳೇ ಹೊರತು ಮತ್ತೇನಲ್ಲ. ಆದರೆ ಆ ನೆನಪುಗಳು ಒಳ್ಳೆಯದಾಗಿರಬೇಕು ಎಂಬುದು ನನ್ನ ಆಸೆ” ಎಂದು ಪತ್ರದಲ್ಲಿ ಬರೆದಿದ್ದಾರೆ.

  • ಸೆ.17ರಂದು ದೆಹಲಿಗೆ ಬರಬೇಡಿ – ಬೆಂಬಲಿಗರಿಗೆ ಡಿಕೆ ಸುರೇಶ್ ಮನವಿ

    ಸೆ.17ರಂದು ದೆಹಲಿಗೆ ಬರಬೇಡಿ – ಬೆಂಬಲಿಗರಿಗೆ ಡಿಕೆ ಸುರೇಶ್ ಮನವಿ

    ಬೆಂಗಳೂರು: ಸೆಪ್ಟೆಂಬರ್ 17 ಕ್ಕೆ ಮಾಜಿ ಸಚಿವ ಡಿಕೆ ಶಿವಕುಮಾರ್ ಇಡಿ ಕಸ್ಟಡಿ ಮುಗಿಯುವ ಹಿನ್ನೆಲೆ, ಅಂದು ದೆಹಲಿಗೆ ಬಾರದಂತೆ ಡಿಕೆಶಿ ಬೆಂಬಲಿಗರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಪತ್ರದ ಮೂಲಕ ಸಂಸದ ಡಿ ಕೆ ಸುರೇಶ್ ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ಕೋರ್ಟ್ ಕಲಾಪದ ವೇಳೆ ಡಿ.ಕೆ ಶಿವಕುಮಾರ್ ಬೆಂಬಲಿಗರು ಗದ್ದಲ ಮಾಡಿದ್ದರು. ಈ ವಿಚಾರಕ್ಕೆ ಬೆಂಬಲಿಗರ ವರ್ತನೆ ಕಂಡು ನ್ಯಾಯಾಧೀಶರು ಗರಂ ಆಗಿದ್ದರು. ಅದ್ದರಿಂದ ಈ ಸಲ ಕೋರ್ಟ್ ಕಲಾಪದ ವೇಳೆ ಈ ರೀತಿಯ ಘಟನೆ ನಡೆಯಬಾರದು ಎಂದು ಡಿಕೆ ಸುರೇಶ್ ಸೋದರನ ಪರವಾಗಿ ಈ ಮನವಿ ಮಾಡಿಕೊಂಡಿದ್ದಾರೆ.

     

    ಈ ವಿಚಾರವಾಗಿ ಪತ್ರ ಬರೆದಿರುವ ಡಿಕೆ ಸುರೇಶ್, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಸೆಪ್ಟಂಬರ್ 17ರ ಗುರುವಾರ ಯಾರು ದೆಹಲಿಗೆ ಬಾರದಂತೆ ಡಿಕೆ. ಶಿವಕುಮಾರ್ ಅವರ ಪರವಾಗಿ ಕೋರಿಕೊಳ್ಳುತ್ತೇನೆ. ತುಂಬಾ ಜನ ಬೆಂಬಲಿಗರು ಬರುವುದರಿಂದ ಕೋರ್ಟ್ ಕಲಾಪದ ವೇಳೆ ಗದ್ದಲವಾಗುತ್ತದೆ. ಕೋರ್ಟ್‍ನಲ್ಲಿ ವಿಚಾರಣೆಗೆ ಯಾವ ತೊಂದರೆಯಾಗದೆ ಸುಗಮವಾಗಿ ಕಲಾಪ ನಡೆಯುವಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಅದ್ದರಿಂದ ನಾನು ನಿಮ್ಮಲ್ಲಿ ಕೋರಿಕೊಳ್ಳುತ್ತೇನೆ ಮತ್ತು ಎಲ್ಲರೂ ಇದಕ್ಕೆ ಬೆಂಬಲ ಸೂಚಿಸುತ್ತೀರಾ ಎಂದು ನಂಬಿದ್ದೇನೆ ಎಂದು ಪತ್ರ ಬರೆದಿದ್ದಾರೆ.

  • ನನಗೆ ರಾಜಕೀಯದಲ್ಲಿ ಮೂಗು ತೂರಿಸುವ ಅನಿವಾರ್ಯತೆ ಇಲ್ಲ: ವಿಜಯೇಂದ್ರ ಸ್ಪಷ್ಟನೆ

    ನನಗೆ ರಾಜಕೀಯದಲ್ಲಿ ಮೂಗು ತೂರಿಸುವ ಅನಿವಾರ್ಯತೆ ಇಲ್ಲ: ವಿಜಯೇಂದ್ರ ಸ್ಪಷ್ಟನೆ

    ಬೆಂಗಳೂರು: ತಮ್ಮ ವಿರುದ್ಧ ಕೇಳಿಬಂದ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ನನಗೆ ರಾಜಕೀಯದಲ್ಲಿ ಮೂಗು ತೂರಿಸುವ ಅನಿವಾರ್ಯತೆ ಇಲ್ಲ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.

    ತಮ್ಮ ಮೇಲೆ ಆಡಳಿತ ಮತ್ತು ವರ್ಗಾವಣೆ ವಿಚಾರವಾಗಿ ಹಸ್ತಕ್ಷೇಪ ಮಾಡಿರುವ ಆರೋಪದ ಬಗ್ಗೆ ವಿಜಯೇಂದ್ರ ಎರಡು ಪುಟದ ಪತ್ರದ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಕೆಲ ಪಟ್ಟಭದ್ರ ಹಿತಾಸಕ್ತ ಶಕ್ತಿಗಳು ನನ್ನ ವಿರುದ್ಧ ಷಢ್ಯಂತ್ರ ರೂಪಿಸಿವೆ. ಆದರೆ ನನಗೆ ರಾಜಕೀಯದಲ್ಲಿ ಮೂಗು ತೂರಿಸುವ ಅನಿವಾರ್ಯತೆ ಇಲ್ಲ ಎಂದಿದ್ದಾರೆ. ನನ್ನ ಬಗ್ಗೆ ಕಪೋಲಕಲ್ಪಿತ ಸುದ್ದಿಗಳನ್ನು ಮಾಡಲಾಗುತ್ತಿದೆ. ನಾನು ಯಾವುದೇ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ನನ್ನನ್ನು ನಾನು ಪಕ್ಷ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ. ಕೆಲವರು ಹತಾಷೆ ಮತ್ತು ಅಸೂಯೆಯಿಂದ ನನ್ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡ್ತಿದ್ದಾರೆ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ. ಇದನ್ನೂ ಓದಿ:ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿತು: ಎಚ್‍ಡಿಕೆಗೆ ಸಿಎಂ ಪುತ್ರ ಟಾಂಗ್

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಭಾಗದ ಜನರ ಪ್ರೀತಿಗೆ ತಲೆಬಾಗಿ ಸಾರ್ವಜನಿಕ ಜೀವನಕ್ಕೆ ಬರಬೇಕಾಯ್ತು. ನನ್ನ ಏಳಿಗೆ ಸಹಿಸಲಾಗದೆ ಕೆಲವರಿಂದ ಪಿತೂರಿ ನಡೆಯುತ್ತಿದೆ. ಪಕ್ಷಕ್ಕೆ ಮುಜುಗರ ಉಂಟು ಮಾಡಲು ಕೆಲವರಿಂದ ಸಂಚು ರೂಪಿಸಲಾಗುತ್ತಿದೆ. ಇದರಿಂದ ನಾನಾಗಲೀ, ಪಕ್ಷವಾಗಲೀ ಎದೆಗುಂದುವ ಮಾತೇ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಯಡಿಯೂರಪ್ಪನವರೇ ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಿ: ಹೆಚ್‍ಡಿಕೆ

    ಈ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ನೇರವಾಗಿಯೇ ವಿಜಯೇಂದ್ರ ಬಗ್ಗೆ ಗಂಭೀರ ಆರೋಪ ಮಾಡಿ ಬಿಎಸ್‍ವೈ ಪುತ್ರ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಹಲವು ಬಾರಿ ಯಡಿಯೂರಪ್ಪನವರ ಜೊತೆಗೆ ವಿಜಯೇಂದ್ರ ಕಾಣಿಸಿಕೊಳ್ಳುತ್ತಿದ್ದರು. ಈ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ವಿಜಯೇಂದ್ರ ಯಡಿಯೂರಪ್ಪನವರಿಂದ ಅಂತರ ಕಾಯ್ದುಕೊಂಡಿದ್ದಾರೆ.

  • ಜಿಡಿಪಿ ಇಳಿಕೆಗೆ ಚಿದಂಬರಂ ಕಾರಣ – ಪತ್ರ ಬರೆದು ಐಎಎಫ್ ಮಾಜಿ ಅಧಿಕಾರಿ ಆತ್ಮಹತ್ಯೆ

    ಜಿಡಿಪಿ ಇಳಿಕೆಗೆ ಚಿದಂಬರಂ ಕಾರಣ – ಪತ್ರ ಬರೆದು ಐಎಎಫ್ ಮಾಜಿ ಅಧಿಕಾರಿ ಆತ್ಮಹತ್ಯೆ

    ಲಕ್ನೋ: ಅಸ್ಸಾಂ ಮೂಲದ ನಿವೃತ್ತ ವಾಯುಪಡೆಯ ಅಧಿಕಾರಿಯೊಬ್ಬರು ಉತ್ತರ ಪ್ರದೇಶದ ಅಲಹಾಬಾದ್‍ನ ಹೋಟೆಲ್‍ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದಿನ ಭಾರತದ ಆರ್ಥಿಕ ಪರಿಸ್ಥಿತಿಗೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಕಾರಣ ಎಂದು ಪತ್ರ ಬರೆದಿದ್ದಾರೆ.

    55 ವರ್ಷದ ನಿವೃತ್ತ ವಾಯುಪಡೆಯ ಅಧಿಕಾರಿ ಬಿಜಾನ್ ದಾಸ್ ಅಲಹಾಬಾದ್‍ನ ಖುಲ್ದಾಬಾದ್ ಪ್ರದೇಶದ ಹೋಟೆಲ್ ರೂಮ್‍ನಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಸೆಪ್ಟೆಂಬರ್ 6 ರಿಂದ ಬಿಜಾನ್ ದಾಸ್ ಅವರು ಪ್ರಯಾಗ್‍ನ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು. ಆದರೆ ಭಾನುವಾರ ತಮ್ಮ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಇಡೀ ದಿನ ದಾಸ್ ಕೋಣೆಯಿಂದ ಹೊರಗೆ ಬಂದಿಲ್ಲ ಎಂದು ಕೆಲಸ ಮಾಡುವವರು ಮ್ಯಾನೇಜರ್ ಅವರಿಗೆ ತಿಳಿಸಿದ್ದಾರೆ. ಸಂಜೆಯಾದರೂ ಬಾರದೇ ಇದ್ದಾಗ ಸಿಬ್ಬಂದಿ ಕೋಣೆಯ ಕಿಟಿಕಿಯಿಂದ ನೋಡಿದಾಗ ಅವರು ಸೀಲಿಂಗ್ ಫ್ಯಾನ್‍ಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ.

    ನಂತರ ಒಳಗೆ ಹೋಗಿ ನೋಡಿದಾಗ ಅವರಿಗೆ ಡೆತ್ ನೋಟ್ ಸಿಕ್ಕಿದೆ. 5 ಪುಟಗಳ ಸುದೀರ್ಘ ಪತ್ರ ಬರೆದಿರುವ ಮಾಜಿ ಐಎಎಫ್ ಅಧಿಕಾರಿ ಬಿಜಾನ್ ದಾಸ್, ಆ ಪತ್ರದಲ್ಲಿ ದೇಶದ ಪ್ರಸ್ತುತ ಆರ್ಥಿಕ ಸ್ಥಿತಿಗೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ದೂಷಿಸಿದ್ದಾರೆ ಮತ್ತು ಮಂದಗತಿಗೆ ಸಾಗುತ್ತಿರುವ ಭಾರತದ ಆರ್ಥಿಕ ಪರಿಸ್ಥಿತಿಗೆ ಮೋದಿ ಸರ್ಕಾರವನ್ನು ದೂಷಿಸಬಾರದು ಎಂದು ಹೇಳಿದ್ದಾರೆ.

    ನಾವು ಈ ಹಿಂದೆ ಮಾಡಿರುವ ತಪ್ಪುಗಳು ನಮ್ಮ ದೇಶದ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿವೆ. ಇದ್ದರಿಂದ ಈಗಿನ ದೇಶದ ಆರ್ಥಿಕ ಪರಿಸ್ಥಿತಿಗೆ ಮೋದಿ ಅವರ ಸರ್ಕಾರ ಹೊಣೆಯಲ್ಲ. ಈ ಸರ್ಕಾರವನ್ನು ದೂಷಿಸುವುದು ತಪ್ಪು. ನೋಟ್ ಬ್ಯಾನ್ ಮತ್ತು ಜಿಎಸ್‍ಟಿ ಆರ್ಥಿಕತೆಯ ಮೇಲೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಈಗ ಸೃಷ್ಟಿಯಾಗಿರುವ ಸಮಸ್ಯೆ ತಾತ್ಕಾಲಿಕ. ಈಗಿನ ಆರ್ಥಿಕ ಪರಿಸ್ಥಿತಿಗೆ ಹಿಂದಿನ ಸರ್ಕಾರ ಮತ್ತು ಆಗಿನ ಹಣಕಾಸು ಸಚಿವ ಕಾರಣ ಎಂದು ಪತ್ರದಲ್ಲಿ ಬರೆದಿದ್ದಾರೆ.

    ಈ ಪತ್ರದಲ್ಲಿ ತನ್ನ ವೈಯಕ್ತಿಕ ವೈಫಲ್ಯಗಳ ಬಗ್ಗೆ ಬರೆದಿರುವ ಬಿಜಾನ್ ದಾಸ್ ಅವರು, ತಮ್ಮ ಚಿಕ್ಕ ಮಗನಿಗಾಗಿ ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಅವನು ಗಾಯಕ ಮತ್ತು ರಿಯಾಲಿಟಿ ಶೋ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಭಾಗವಹಿಸಿದ್ದನು. ಗಾಯಕನಾಗುವ ಕನಸುಗಳನ್ನು ಪೂರ್ಣ ಮಾಡಲು ತಮ್ಮ ಮಗ ವಿವೇಕ್ ದಾಸ್ ಅವರಿಗೆ ಸಹಾಯ ಮಾಡುವಂತೆ ಪಿಎಂ ಮೋದಿಯವರನ್ನು ಬಿಜನ್ ದಾಸ್ ಕೇಳಿಕೊಂಡಿದ್ದಾರೆ.

    ತನ್ನ ಮಗ ತನ್ನ ದೇಹವನ್ನು ನೋಡಬೇಕೆಂದು ನಾನು ಬಯಸುವುದಿಲ್ಲವಾದ್ದರಿಂದ ತನ್ನ ಶವಸಂಸ್ಕಾರಕ್ಕಾಗಿ ತನ್ನ ಕುಟುಂಬವನ್ನು ಕರೆಯದಂತೆ ಅಲಹಾಬಾದ್ ಆಡಳಿತವನ್ನು ಕೋರಿಕೊಂಡಿದ್ದಾರೆ. ನನ್ನ ಶವವನ್ನು ಅಲಹಾಬಾದ್‍ನಲ್ಲಿಯೇ ಹೂಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಪೊಲೀಸರು ಕುಟುಂಬವನ್ನು ಸಂಪರ್ಕಿಸಿದ್ದಾರೆ.

    ಈ ಪತ್ರದ ಜೊತೆಗೆ ಸ್ವಂತ ಶವ ಸಂಸ್ಕಾರಕ್ಕಾಗಿ 1500 ರೂ ಮತ್ತು ರೂಮ್‍ಗೆ ಬಾಕಿ ಕೊಡಬೇಕಾದ 500 ರೂಗಳನ್ನು ಬಿಜಾನ್ ದಾಸ್ ಇಟ್ಟಿದ್ದಾರೆ. ಭಾರತದ ಆರ್ಥಿಕ ಸ್ಥಿತಿ ಸರಿ ಇಲ್ಲದ ಕಾರಣದಿಂದಾಗಿ ಅಂತ್ಯಸಂಸ್ಕಾರ ಮಾಡುವವರಿಗೆ ಹೆಚ್ಚಿನ ಹಣವನ್ನು ನೀಡಲು ಸಾಧ್ಯವಿಲ್ಲ ಎಂದು ದಾಸ್ ಪತ್ರದಲ್ಲಿ ಬರೆದಿದ್ದಾರೆ.

  • ಸತ್ತು ಹೋಗಿದ್ದೇನೆ ರಜೆ ಕೊಡಿ ಎಂದು ಪತ್ರ – ಮಂಜೂರು ಮಾಡಿದ ಪ್ರಾಂಶುಪಾಲ

    ಸತ್ತು ಹೋಗಿದ್ದೇನೆ ರಜೆ ಕೊಡಿ ಎಂದು ಪತ್ರ – ಮಂಜೂರು ಮಾಡಿದ ಪ್ರಾಂಶುಪಾಲ

    ಲಕ್ನೋ: ಸತ್ತು ಹೋಗಿದ್ದೇನೆ ರಜೆ ಕೊಡಿ ಎಂದು ಪತ್ರ ಬರೆದ ವಿದ್ಯಾರ್ಥಿಗೆ ಪ್ರಾಂಶುಪಾಲ ರಜೆ ಮಂಜೂರು ಮಾಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

    8ನೇ ತರಗತಿ ವಿದ್ಯಾರ್ಥಿಯೊಬ್ಬ ರಜೆ ಕೇಳಲು ಪತ್ರದಲ್ಲಿ ತಪ್ಪಾಗಿ ತಾನು ಸತ್ತು ಹೋಗಿದ್ದೇನೆ ಎಂದು ಬರೆದಿದ್ದಾನೆ. ಆಶ್ಚರ್ಯದ ವಿಷಯ ಏನೆಂದರೆ ಪ್ರಾಂಶುಪಾಲ ವಿದ್ಯಾರ್ಥಿಗೆ ರಜೆಯನ್ನು ಮಂಜೂರು ಮಾಡಿದ್ದಾರೆ. ಸದ್ಯ ವಿದ್ಯಾರ್ಥಿ ಬರೆದ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವಿದ್ಯಾರ್ಥಿ ಪತ್ರದಲ್ಲಿ ತನ್ನ ಅಜ್ಜಿ ಮೃತಪಟ್ಟಿದ್ದಾರೆ ಎಂದು ಬರೆಯುವ ಬದಲು ತಾನು ಸತ್ತು ಹೋಗಿದ್ದೇನೆ ಎಂದು ತಪ್ಪಾಗಿ ಬರೆದಿದ್ದಾನೆ. ರಜೆ ಮಂಜೂರು ಆದ ಬಳಿಕ ವಿದ್ಯಾರ್ಥಿ ತನ್ನ ಅಜ್ಜಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾನೆ. ಈ ಪತ್ರ ವೈರಲ್ ಆಗುತ್ತಿದ್ದಂತೆ ಭಾರೀ ಚರ್ಚೆಗೆ ಕಾರಣವಾಗಿದೆ.

    ಪತ್ರದಲ್ಲಿ ವಿದ್ಯಾರ್ಥಿ, “ಮಾನ್ಯ ಪ್ರಾಂಶುಪಾಲರೇ, ಇಂದು(ಅಗಸ್ಟ್ 20) ಬೆಳಗ್ಗೆ ಸುಮಾರು 10 ಗಂಟೆಗೆ ನಾನು ಸತ್ತು ಹೋಗಿದ್ದೇನೆ. ದಯವಿಟ್ಟು ನನಗೆ ಅರ್ಧ ದಿನ ರಜೆ ಕೊಡಿ” ಎಂದು ಬರೆದಿದ್ದಾನೆ. ಪತ್ರವನ್ನು ಓದದೇ ಪ್ರಾಂಶುಪಾಲ ರೆಡ್ ಪೆನ್‍ನಲ್ಲಿ ಸಹಿ ಮಾಡಿ ರಜೆ ಮಂಜೂರು ಮಾಡಿದ್ದಾರೆ.

    ಶಾಲೆಯ ವ್ಯಕ್ತಿಯೊಬ್ಬ ಈ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಂತೆ ಈ ಪತ್ರ ಭಾರೀ ವೈರಲ್ ಆಗಿದ್ದು, ಜನರು ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  • ಯಾರಾದ್ರೂ ಹುಚ್ಚ ವೆಂಕಟ್‍ಗೆ ಸಹಾಯ ಮಾಡ್ಬೇಕಂದ್ರೆ ಇಷ್ಟು ಮಾಡಿ ಸಾಕು: ಪ್ರಥಮ್ ಮನವಿ

    ಯಾರಾದ್ರೂ ಹುಚ್ಚ ವೆಂಕಟ್‍ಗೆ ಸಹಾಯ ಮಾಡ್ಬೇಕಂದ್ರೆ ಇಷ್ಟು ಮಾಡಿ ಸಾಕು: ಪ್ರಥಮ್ ಮನವಿ

    ಬೆಂಗಳೂರು: ಒಂದು ಕಡೆ ಹುಚ್ಚವೆಂಕಟ್ ಅವರಿಗೆ ಚಿಕಿತ್ಸೆಯ ಸಹಾಯವಿದೆ ಎಂದು ನಟ ಭುವನ್ ಮನವಿ ಮಾಡಿಕೊಂಡಿದ್ರೆ, ಇತ್ತ ಬಿಗ್‍ಬಾಸ್ ವಿನ್ನರ್ ಪ್ರಥಮ್, ನಾವು ಹುಚ್ಚವೆಂಕಟ್ ಎಂದು ಹೇಳುವ ಬದಲು ವೆಂಕಟ್ ಆಗಿ ಬಿಟ್ಟು ಬಿಡುವುದೇ ನಾವೆಲ್ಲರೂ ಅವರಿಗೆ ಮಾಡುವ ದೊಡ್ಡ ಸಹಾಯವಾಗಿದೆ ಎಂದು ತಿಳಿಸಿದ್ದಾರೆ.

    ನಟ ಪ್ರಥಮ್ ಹುಚ್ಚವೆಂಕಟ್ ಸ್ಥಿತಿ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪತ್ರವನ್ನು ಬರೆದು ಅದರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ “ಯಾರಾದರೂ ಹುಚ್ಚವೆಂಕಟ್ ಅವರಿಗೆ ಸಹಾಯ ಮಾಡಬೇಕು ಅಂತ ಇದ್ದರೆ ಇಷ್ಟು ಮಾಡಿ ಸಾಕು. ಅದೇ ದೊಡ್ಡ ಉಪಕಾರ. ಇದನ್ನೂ ಎಲ್ಲರೂ ಶೇರ್ ಮಾಡಿ. ಒಂದು ಒಳ್ಳೆಯ ವಿಚಾರ ನಾಲ್ಕು ಜನಕ್ಕೆ ತಲುಪಿಸಿದರೆ ಅದೇ ನಾವೆಲ್ಲರೂ ಅವರಿಗೆ ಮಾಡುವ ದೊಡ್ಡ ಸಹಾಯ” ಎಂದು ಬರೆದುಕೊಂಡಿದ್ದಾರೆ.

    ಪತ್ರದಲ್ಲಿ ಏನಿದೆ?
    ನೆನ್ನೆ ರಾತ್ರಿ ನನ್ನ ಗೆಳತಿಯೊಬ್ಬರು ಮೆಸೇಜ್ ಮಾಡಿ, “ಏನ್ರೀ ಪ್ರಥಮ್, ಹುಚ್ಚವೆಂಕಟ್‍ಗೆ ಸಹಾಯ ಮಾಡ್ರಿ ಪಾಪ” ಎಂದರು. ತಕ್ಷಣ ನಾನು ಹೌದು ವೆಂಕಟ್ ಅವರಿಗೆ ಸಹಾಯ ಮಾಡುತ್ತೀನಿ. ಈಗಾಗಲೇ ನಾನು ಸಹಾಯ ಮಾಡಿದ್ದೀನಿ ಎಂದೆ. ಅದಕ್ಕೆ ಅವರು ಯಾವಾಗ ಸಹಾಯ ಮಾಡಿದ್ದೀರಿ ಎಂದು ಕೇಳಿದರು. ಅದಕ್ಕೆ ನಾನು “ನಾನು ಅವರನ್ನು ವೆಂಕಟ್ ಅಂತ ಕರೆಯುವುದೇ ನಾನು ಅವರಿಗೆ ಮಾಡುವ ಸಹಾಯ ಎಂದೆ. ಅವರನ್ನು ಹುಚ್ಚವೆಂಕಟ್ ಅಂತ ಪ್ರಚೋದಿಸುವ ಬದಲು ವೆಂಕಟ್ ಆಗಿ ಬಿಟ್ಟು ಬಿಡುವುದೆ ನಾವೆಲ್ಲರೂ ಅವರಿಗೆ ಮಾಡುವ ದೊಡ್ಡ ಸಹಾಯ” ಎಂದರು.

    ನಾವೆಲ್ಲರೂ ಅವರನ್ನು ವೆಂಕಟ್ ಆಗೇ ನೋಡೋಣ, ಅವರಿಗೆ ಅನುಕಂಪ ತೋರಿಸುವ ಬದಲು ಅವಮಾನ ಮಾಡದೇ ಅವರನ್ನು ಅವರಷ್ಟಕ್ಕೆ ಬಿಡೋಣ. ಇದೇ ನಾವೆಲ್ಲರೂ ಅವರಿಗೆ ಮಾಡುವ ದೊಡ್ಡ ಸಹಾಯ ಎಂದು ಪ್ರಥಮ್ ಮನವಿ ಮಾಡಿಕೊಂಡಿದ್ದಾರೆ.

  • ಸೇಫ್ ಗೇಮ್‍ನತ್ತ ಅನರ್ಹ ಶಾಸಕರು

    ಸೇಫ್ ಗೇಮ್‍ನತ್ತ ಅನರ್ಹ ಶಾಸಕರು

    ಬೆಂಗಳೂರು: ರಾಜಕೀಯ ಭವಿಷ್ಯದ ಬಗ್ಗೆ ಆತಂಕಗೊಂಡ ಅನರ್ಹ ಶಾಸಕರು ಸೇಫ್ ಗೇಮ್ ಪ್ಲಾನ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿಗು ಮುನ್ನ ಅನರ್ಹರು ಚುನಾವಣೆ ಆಯೋಗದ ಮೊರೆ ಹೋಗಿದ್ದಾರೆ.

    ಅನರ್ಹಗೊಂಡ 17 ಶಾಸಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಬರೋತನಕ ಉಪ ಚುನಾವಣೆ ನಡೆಸದಂತೆ ಚುನಾವಣೆ ಆಯೋಗಕ್ಕೆ ಅನರ್ಹರು ಮನವಿ ಮಾಡಿದ್ದಾರೆ. ಈ ಮೂಲಕ ಅತೃಪ್ತ ನಾಯಕರು ಸೇಫ್ ಗೇಮ್‍ಗಿಳಿದಿದ್ದಾರೆ.

    ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ ಪಡಿಸುವಂತೆ ಅನರ್ಹ ಶಾಸಕರು ನ್ಯಾ. ಎನ್.ವಿ.ರಮಣ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಮನವಿ ಮಾಡಿಕೊಂಡಿದ್ದರು. ತುರ್ತು ಅರ್ಜಿ ವಿಚಾರಣೆ ಸಾಧ್ಯವಿಲ್ಲ ಎಂದು ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಶಾಕ್ ನೀಡಿತ್ತು.

    ಈ ಹಿಂದೆ ಅನರ್ಹ ಶಾಸಕರು ನ್ಯಾ.ಅರುಣ್ ಮಿಶ್ರಾ ದ್ವಿಸದಸ್ಯ ಪೀಠದ ಮುಂದೆ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ನ್ಯಾ.ಅರುಣ್ ಮಿಶ್ರಾ ದ್ವಿಸದಸ್ಯ ಪೀಠ ತುರ್ತು ವಿಚಾರಣೆಗೆ ಒಪ್ಪಿರಲಿಲ್ಲ. ಮತ್ತೊಮ್ಮೆ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಮನವಿ ಮಾಡಿಕೊಂಡಿದ್ದರು. ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಅನರ್ಹ ಶಾಸಕರ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಮಂಗಳವಾರ ತ್ರಿಸದಸ್ಯ ಪೀಠ ಅನರ್ಹರ ತುರ್ತು ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ.

    ಆದ್ದರಿಂದ ಅನರ್ಹ ಶಾಸಕರಾದ ಕಾಂಗ್ರೆಸ್ಸಿನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ರಾಣೆಬೆನ್ನೂರು ಶಾಸಕ ಆರ್ ಶಂಕರ್, ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಕಾಗವಾಡದ ಶ್ರೀಮಂತ್ ಪಾಟೀಲ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್. ಜೆಡಿಎಸ್ ಶಾಸಕರಾದ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡ ಅವರು ಸೇಫ್ ಗೇಮ್‍ನತ್ತ ತಮ್ಮ ಚಿತ್ತ ಹರಿಸಿದ್ದಾರೆ.