Tag: Leader

  • ಸಿರಿಯಾ ಘರ್ಷಣೆಯಲ್ಲಿ ಐಸಿಸ್ ನಾಯಕ ಸಾವು

    ಸಿರಿಯಾ ಘರ್ಷಣೆಯಲ್ಲಿ ಐಸಿಸ್ ನಾಯಕ ಸಾವು

    ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಗ್ರೂಪ್ ಗುರುವಾರ ತನ್ನ ನಾಯಕ ಅಬು ಹುಸೇನಿ ಅಲ್ ಖುರೇಶಿ (Abu al-Hussein al-Husseini al-Qurashi) ಸಾವನ್ನಪ್ಪಿರುವುದಾಗಿ ದೃಢಪಡಿಸಿದೆ. ವಾಯುವ್ಯ ಸಿರಿಯಾದಲ್ಲಿ (Syria) ನಡೆದ ಘರ್ಷಣೆಯಲ್ಲಿ ಐಸಿಸ್ ನಾಯಕ (ISIS Leader) ಸಾವನ್ನಪ್ಪಿರುವುದಾಗಿ ತಿಳಿಸಿದೆ.

    ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸಂಘಟನೆ ವಕ್ತಾರರು, ಇಡ್ಲಿಬ್ ಪ್ರಾಂತ್ಯದಲ್ಲಿ ಜಿಹಾದಿ ಗುಂಪು ಹಯಾತ್ ತಹ್ರೀರ್ ಅಲ್ ಶಾಮ್‌ನೊಂದಿಗೆ ನಾಯಕ ನೇರ ಸಂರ್ಘರ್ಷ ನಡೆಸುತ್ತಿದ್ದ ವೇಳೆ ಗುಂಡಿನ ದಾಳಿಗೆ ಕೊಲ್ಲಲ್ಪಟ್ಟಿರುವುದಾಗಿ ತಿಳಿಸಿದ್ದಾರೆ.

    ನಾಯಕನ ಸಾವಿನ ಬಳಿಕ ಉಗ್ರ ಸಂಘಟನೆ ಹೊಸ ನಾಯಕನನ್ನು ಘೋಷಿಸಿದೆ. ಅಬು ಹಫ್ಸನ್ ಅಲ್ ಹಶಿಮಿ ಅಲ್ ಖುರೇಶಿ ಸಂಘಟನೆಯ 5ನೇ ನಾಯಕನಾಗಿ ಮುಂದುವರಿಯಲಿದ್ದಾನೆ ಎಂದು ಹೇಳಿದೆ. ಇದನ್ನೂ ಓದಿ: Expressway ರೂಲ್ಸ್ ಬ್ರೇಕ್ – ಚಾಲಕರಿಂದ 7 ಲಕ್ಷ ರೂ. ದಂಡ ವಸೂಲಿ

    ಅಬು ಹುಸೇನಿ ಅಲ್ ಖುರೇಶಿ ಸಾವಿಗೂ ಮುನ್ನ ಇನ್ನೂ ಮೂವರು ಐಸಿಸ್ ನಾಯಕರು ಸಾವನ್ನಪ್ಪಿದ್ದಾರೆ. ಅಬು ಹಸನ್ ಅಲ್ ಹಶಿಮಿ ಅಲ್ ಖುರೇಶಿ ಕಳೆದ ನವೆಂಬರ್‌ನಲ್ಲಿ, ಅಬು ಇಬ್ರಾಹಿಂ ಅಲ್ ಖುರೇಶಿಯನ್ನು 2022ರ ಏಪ್ರಿಲ್‌ನಲ್ಲಿ ಹಾಗೂ ಅಬು ಬಕರ್ ಅಲ್ ಬಗ್ದಾದಿ 2019ರ ಅಕ್ಟೋಬರ್‌ನಲ್ಲಿ ಕೊಲ್ಲಲಾಗಿತ್ತು. ಇದನ್ನೂ ಓದಿ: ಪೊಲೀಸ್‌ ವರ್ಗಾವಣೆ ಸಭೆಯಲ್ಲಿ ವೈಎಸ್‌ಟಿ ಟ್ಯಾಕ್ಸ್‌ನವರಿಗೆ ಏನು ಕೆಲಸ? – ಹೆಚ್‌ಡಿಕೆಯಿಂದ ಮಿಡ್‌ನೈಟ್‌ ಬಾಂಬ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಿಮ್‍ನಲ್ಲಿದ್ದ ಎಎಪಿ ಮುಖಂಡನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

    ಜಿಮ್‍ನಲ್ಲಿದ್ದ ಎಎಪಿ ಮುಖಂಡನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

    ಚಂಡೀಗಢ: ಪಂಜಾಬ್‍ನ ಮಲೇರ್‍ಕೋಟ್ಲಾ ಜಿಲ್ಲೆಯ ಜಿಮ್‍ನಲ್ಲಿ ಆಮ್ ಆದ್ಮಿ ಪಕ್ಷದ ಮುನ್ಸಿಪಲ್ ಕೌನ್ಸಿಲರ್‌ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೊಹಮ್ಮದ್ ಅಕ್ಬರ್ ಮೃತ ಮುನ್ಸಿಪಲ್ ಕೌನ್ಸಿಲರ್‌. ಇಬ್ಬರು ದುಷ್ಕರ್ಮಿಗಳು ಜಿಮ್‍ಗೆ ಬಂದು ಅಕ್ಬರ್‌ಗೆ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಒಂದು ಗುಂಡು ಅಕ್ಬರ್‌ಗೆ ತಗುಲಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಮಲೇರ್‍ಕೋಟ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅವನೀತ್ ಕೌರ್ ಸಿಧು ಹೇಳಿದ್ದಾರೆ. ಇದನ್ನೂ ಓದಿ:  ದ.ಕನ್ನಡದಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆ ಇದ್ದು, ಹೆಚ್ಚಿಸಬೇಕು: ಡಿಜಿಪಿ ಪ್ರವೀಣ್ ಸೂದ್ 

    ವೈಯಕ್ತಿಕ ದ್ವೇಷದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ತೋರುತ್ತಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೋದಲ್ಲಿ, ಅಕ್ಬರ್ ಜಿಮ್‍ನೊಳಗೆ ಅಪರಿಚಿತ ವ್ಯಕ್ತಿಯ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ. ಅಕ್ಬರ್ ಹತ್ತಿರ ಬರುತ್ತಿದ್ದಂತೆಯೇ ದುಷ್ಕರ್ಮಿ ಬಂದೂಕು ತೆಗೆದು ಆತನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ವಿವರಿಸಿದ್ದಾರೆ.

    ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದು, ಅವರನ್ನು ಪತ್ತೆ ಹಚ್ಚುವ ಪ್ರಯತ್ನ ಮುಂದುವರಿದಿದೆ ಎಂದರು. ಇದನ್ನೂ ಓದಿ: ಜ್ಞಾನವಾಪಿ ಪ್ರಕರಣದಲ್ಲಿ ಮಸೀದಿ ಪರ ವಾದ ಮಂಡಿಸಿದ್ದ ವಕೀಲ ಹೃದಯಾಘಾತದಿಂದ ಸಾವು

    ಪ್ರಸ್ತುತ ಪಂಜಾಬ್‍ನಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಪಕ್ಷ ಅಧಿಕಾರದಲ್ಲಿದ್ದು, ಕೊಲೆ ಕುರಿತು ಬಾರಿ ಚರ್ಚೆಯಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಉತ್ತರ ಪ್ರದೇಶದಲ್ಲಿ ಎಸ್‍ಪಿ ನಾಯಕನ ಬರ್ಬರ ಹತ್ಯೆ

    ಉತ್ತರ ಪ್ರದೇಶದಲ್ಲಿ ಎಸ್‍ಪಿ ನಾಯಕನ ಬರ್ಬರ ಹತ್ಯೆ

    ಲಕ್ನೋ: ಉತ್ತರ ಪ್ರದೇಶದ ಪಿಜಿಐ ಪೊಲೀಸ್ ಠಾಣಾ ವ್ಯಾಪ್ತಿಯ ರೇವ್ತಾಪುರ್ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ (ಎಸ್‍ಪಿ) ಮುಖಂಡರೊಬ್ಬರನ್ನು ಬರ್ಬರವಾಗಿ ಥಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗಂಭೀರ ಗಾಯಗೊಂಡಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತ ರೋಹಿತ್ (26) ಮೇಲೆ ಸಚಿನ್ ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆ. ಕಬ್ಬಿಣದ ಕೋಲುಗಳು, ಹರಿತವಾದ ಆಯುಧಗಳು ಮತ್ತು ಲಾಠಿಗಳಿಂದ ತೀವ್ರವಾಗಿ ಥಳಿಸಿದ್ದಾರೆ. ಈ ವೇಳೆ ಅವರನ್ನು ತಕ್ಷಣ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹೆಸರಿನಲ್ಲಿ ಅಶ್ಲೀಲ ವೀಡಿಯೋ ಪೋಸ್ಟ್: ದೂರು ದಾಖಲು

    ಮೃತರ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಸಚಿನ್ ಮತ್ತು ಐವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ರೋಹಿತ್ ಎಸ್‌ಪಿ ಯುವ ಘಟಕದ ಮಾಜಿ ಜಿಲ್ಲಾ ಕಾರ್ಯದರ್ಶಿಯಾಗಿದ್ದರು. ಸಚಿನ್, ಶಿವಕುಮಾರ್ ಮತ್ತು ಇತರರು ತನ್ನ ಮಗನ ಮೇಲೆ ಹಲ್ಲೆ ನಡೆಸಿ ಅಮಾನುಷವಾಗಿ ಥಳಿಸಿದ್ದಾರೆ ಎಂದು ಮೃತರ ತಾಯಿ ಊರ್ಮಿಳಾ ದೇವಿ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ ತಂದೆ, ಅಣ್ಣನಿಂದ ಅತ್ಯಾಚಾರ – ಅಜ್ಜ, ಚಿಕ್ಕಪ್ಪನಿಂದ ಕಿರುಕುಳ

    ಸಚಿನ್‍ಗೆ ರೋಹಿತ್ ಜೊತೆ ಹಳೆ ವೈಷಮ್ಯವಿದ್ದು, ಹಲವು ಬಾರಿ ಬೆದರಿಕೆ ಹಾಕಿದ್ದ ಎಂದು ಅವರ ತಾಯಿ ಆರೋಪಿಸಿದ್ದಾರೆ. ರೋಹಿತ್ ಆರು ತಿಂಗಳ ಹಿಂದೆ ಮದುವೆಯಾಗಿದ್ದರು.

    ಆರೋಪಿಗಳನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕಂಟೋನ್ಮೆಂಟ್ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಅರ್ಚನಾ ಸಿಂಗ್ ತಿಳಿಸಿದ್ದಾರೆ.

  • ಜೈ ಶ್ರೀರಾಮ್ ಅನ್ನೋರು ರಾಕ್ಷಸರು: ರಶೀದ್ ಅಲ್ವಿ

    ಜೈ ಶ್ರೀರಾಮ್ ಅನ್ನೋರು ರಾಕ್ಷಸರು: ರಶೀದ್ ಅಲ್ವಿ

    ನವದೆಹಲಿ: ರಾಮರಾಜ್ಯ, ಜೈ ಶ್ರೀರಾಮ್ ಘೋಷಣೆ ಕೂಗುವವರು ರಾಕ್ಷಸರು ಎಂದು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ರಶೀದ್ ಅಲ್ವಿ, ಈ ದೇಶದಲ್ಲಿ ರಾಮರಾಜ್ಯ ಆಗಬೇಕು ಎನ್ನುವುದು ನಮಗೂ ಇದೆ. ಮೇಕೆಗಳು ಮತ್ತು ಸಿಂಹಗಳು ನೀರು ಕುಡಿಯುವ ರಾಜ್ಯದಲ್ಲಿ ದ್ವೇಷ ಹೇಗೆ ಉಂಟಾಗುತ್ತದೆ? ಈ ದೇಶದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಮೂಲಕಜನರನ್ನು ದಾರಿ ತಪ್ಪಿಸುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ಇದನ್ನೂ ಓದಿ  ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ನಾಯಕರೇ ಕಾರಣ: ಓವೈಸಿ

    ರಾಮರಾಜ್ಯ ಇದೆ ಎಂದು ಹೇಳುತ್ತೇವೆ. ಆದರೆ ರಾಮರಾಜ್ಯ ಹೇಗೆ ಇರಬೇಕು? ಜೈ ಶ್ರೀರಾಮ್ ಎಂದು ಘೋಷಣೆ ಕೂಗುವವರು ರಾಮಾಯಣದ ಕಾಲನೇಮಿ ರಾಕ್ಷಸರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಅಲ್ವಿ ಹೇಳಿಕೆಯ ವೀಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ, ಸಲ್ಮಾನ್ ಖುರ್ಷಿದ್ ನಂತರ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಜೈ ಶ್ರೀರಾಮ್ ಹೇಳುವವರನ್ನು ನಿಶಾಚರರು ಎಂದು ಕರೆಯುತ್ತಾರೆ. ಭಕ್ತರ ಬಗ್ಗೆ ಕಾಂಗ್ರೆಸ್ಸಿನ ಚಿಂತನೆಗಳಲ್ಲಿ ಎಷು ವಿಷ ಬೆರೆತಿದೆ ಎಂದು ಆಕ್ರೋಶವನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೇಂಟಿಂಗ್‌ ಕೆಲಸಕ್ಕೆ ಬಂದು ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ- ಖತರ್ನಾಕ್‌ ಕಳ್ಳ ಅಂದರ್‌!

  • ಸಿದ್ದರಾಮಯ್ಯ ನಿಜವಾದ ಜನ ನಾಯಕ, ನೀವೆಂತ ಜನ ನಾಯಕ – ಹೆಚ್‍ಡಿಕೆಗೆ ಜಮೀರ್ ಗೇಲಿ

    ಸಿದ್ದರಾಮಯ್ಯ ನಿಜವಾದ ಜನ ನಾಯಕ, ನೀವೆಂತ ಜನ ನಾಯಕ – ಹೆಚ್‍ಡಿಕೆಗೆ ಜಮೀರ್ ಗೇಲಿ

    – ತೋಟದ ಮನೆ ಸೇರಿಕೊಳ್ಳಲು ಜನ ಎರಡೆರಡು ಬಾರಿ ಸಿಎಂ ಮಾಡಿದ್ದಾ..?

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ನಿಜವಾದ ಜನ ನಾಯಕ. ನೀವೆಂತ ಜನ ನಾಯಕ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರಿಗೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಟಕ್ಕರ್ ನೀಡಿದ್ದಾರೆ.

    ಚಾಮರಾಜಪೇಟೆಯಲ್ಲಿ ಮಾತನಾಡಿದ ಜಮೀರ್ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರನ್ನು ಹೋಲಿಕೆ ಮಾಡಿ ಕುಮಾರಸ್ವಾಮಿಯವರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ನಿಜವಾದ ಜನ ನಾಯಕ ಎಂದು ಹಾಡಿ ಹೊಗಳಿದ್ದಾರೆ. ಜೆಡಿಎಸ್ ಕ್ವಾರಂಟೈನ್ ಆಗಿದೆ. ಏನಾಗಿದೆ ಜೆಡಿಎಸ್ ಹೋಂ ಕ್ವಾರಂಟೈನ್ ಆಗಿದೆ. ಒಂದು ಮಾತು ಹೇಳ್ತೀನಿ ಮೊದಲಿಂದ ನಾನು ಕುಮಾರಸ್ವಾಮಿ ಹೋಗು ಬಾ ಅಂತ ಏಕವಚನದಲ್ಲೇ ಮಾತನಾಡುತ್ತಾ ಇದ್ದಿದ್ದು. ಈಗ ಅವರು ಎರಡೆರಡು ಬಾರಿ ಸಿಎಂ ಆಗಿದ್ದಾರೆ ಅವರನ್ನು ಕುಮಾರಣ್ಣ ಅಂತಾನೆ ಕರಿಯೋಣ ಬಿಡಿ ಎಂದು ಕಿಚಾಯಿಸಿದ್ದಾರೆ. ಇದನ್ನೂ ಓದಿ: ಫ್ರೀ ವ್ಯಾಕ್ಸಿನ್ ನೀಡ್ತಿರೋದು ನಾನು, ನನ್ನ ಫೋಟೋ ಹಾಕಬೇಕು ಅಲ್ವಾ?- ಜಮೀರ್

    ಕುಮಾರಸ್ವಾಮಿಯವರು ಮೊನ್ನೆ ಹೇಳಿದ್ದಾರೆ ಎಲ್ಲಾ ಸಹವಾಸ ಬಿಟ್ಟು ತೋಟದ ಮನೆ ಸೇರಿಕೊಂಡಿದ್ದೀನಿ ಅಂತ. ತೋಟದ ಮನೆ ಸೇರಿಕೊಳ್ಳಿ ಅಂತ ಜನ ಎರೆಡೆರಡು ಬಾರಿ ಸಿಎಂ ಮಾಡಿದ್ದ ನಿಮ್ಮನ್ನು, ಜನರ ಕಷ್ಟಕ್ಕೆ ಸ್ಪಂದಿಸಬೇಕಾದ ಈ ಸಂದರ್ಭದಲ್ಲಿ ತೋಟ ಸೇರಿಕೊಳ್ಳೋದ. ನಮ್ಮ ನಾಯಕ ಸಿದ್ದರಾಮಯ್ಯ ನೋಡಿ ಜನರ ಮಧ್ಯೆ ಇದ್ದಾರೆ. ಅವರಿಗು ಎರಡೆರಡು ಬಾರಿ ಆರೋಗ್ಯ ಸರಿ ಇರಲಿಲ್ಲ. ನೀವು ಹೊರಗೆ ಬರಬೇಡಿ ಎಂದು ಹೇಳಿದ್ದೆವು. ಆದರೂಕೇಳಲಿಲ್ಲ ಆಸ್ಪತ್ರೆಗೆ ಹೋಗಿ ಬಂದ ಎರಡೇ ದಿನಕ್ಕೆ ಹೊರಗೆ ಬಂದರು. ಇದು ಜನ ನಾಯಕ ಅಂದರೆ. ಹೀಗೆ ಇರಬೇಕು ಹೆದರಿ ಮನೆಯಲ್ಲಿ ಕೂರೋದಲ್ಲ ಜನರ ಮಧ್ಯೆ ಬಂದು ಕಷ್ಟ ಸುಖ ಕೇಳಬೇಕು ಎಂದರು.

    ಬನ್ನಿ ಸಾರ್ ಹೋಗೋಣ ಜನರ ಮಧ್ಯೆ. ನಾನು ನಿಮ್ಮನ್ನು ಕರೀತಿಲ್ಲ ಜನರೇ ನಿಮ್ಮನ್ನ ಕರಿಬೇಕು ಅಂತಾರೆ. ಅದಕ್ಕೆ ನಿಮ್ಮನ್ನೆ ಕರಿತೀನಿ ಬೇರೆಯವರನ್ನು ಕರಿರಿ ಅಂದ್ರೆ ಅವರನ್ನೇ ಕರೀತಿನಿ. ಆದರೆ ಜನ ಸಿದ್ದರಾಮಯ್ಯ ಅವರನ್ನು ಕರಿರಿ ಅಂತಾರೆ. ನನ್ನ ಹಾಗೂ ಕುಮಾರಸ್ವಾಮಿ ನಡುವಿನ ಫ್ಲ್ಯಾಟ್ ಗಲಾಟೆಯಲ್ಲಿ ನನಗೆ ಯಾರು ಎಚ್ಚರಿಕೆ ಕೊಟ್ಟಿಲ್ಲ ಆ ವಿವಾಧ ಬಗೆಹರಿದಿದೆ ಎಂದು ಸ್ಪಷ್ಟನೆ ನೀಡಿದರು.

  • ಉಚಿತವಾಗಿ ಬಿಡಲು ಒಪ್ಪದ ಟೋಲ್ ಸಿಬ್ಬಂದಿ- ಬಿಜೆಪಿ ಮುಖಂಡನಿಂದ ಹಲ್ಲೆ

    ಉಚಿತವಾಗಿ ಬಿಡಲು ಒಪ್ಪದ ಟೋಲ್ ಸಿಬ್ಬಂದಿ- ಬಿಜೆಪಿ ಮುಖಂಡನಿಂದ ಹಲ್ಲೆ

    ಕೋಲಾರ: ನಗರದ ಗಡಿಯಲ್ಲಿರುವ ಟೋಲ್‍ನಲ್ಲಿ ಉಚಿತವಾಗಿ ತಮ್ಮ ಕಾರನ್ನು ಬಿಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಮುಖಂಡ ಟೋಲ್ ಸಿಬ್ಬಂದಿ ಹಾಗೂ ನಿವೃತ್ತ ಯೋಧನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

    ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಟೋಲ್ ಬಳಿ ಘಟನೆ ನಡೆದಿದ್ದು, ಬಿಜೆಪಿ ಮುಖಂಡ ಹಲ್ಲೆ ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಿಜೆಪಿ ಸ್ಥಳೀಯ ಮುಖಂಡ ವಿಶ್ವನಾಥ ರೆಡ್ಡಿ ಹಾಗೂ ಆತನ ಸಹಚರರು ತಮ್ಮ ಪರಿಚಯದ ಪ್ರಭಾವಿ ವ್ಯಕ್ತಿಯೊಬ್ಬರ ಕಾರನ್ನು ಟೋಲ್ ಕಟ್ಟಿಸಿಕೊಳ್ಳದೆ ಉಚಿತವಾಗಿ ಬಿಡಲು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಉಚಿತವಾಗಿ ಬಿಡಲು ಟೋಲ್ ಸಿಬ್ಬಂದಿ ಒಪ್ಪಿಲ್ಲ, ಹೀಗಾಗಿ ಟೋಲ್ ಭದ್ರತೆಗೆ ನಿಯೋಜನೆ ಮಾಡಲಾಗಿದ್ದ ನಿವೃತ್ತ ಯೋಧ ವಿಜಯ್ ಮೇಲೆ ಹಲ್ಲೆ ಮಾಡಲಾಗಿದೆ.

    ಯೋಧನ ಮೇಲೆ ಹಲ್ಲೆ ಮಾಡಿರುವ ವೀಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದದಲ್ಲಿ ವೈರಲ್ ಅಗಿದೆ. ಟೋಲ್ ಸಿಬ್ಬಂದಿಯೊಂದಿಗೆ ಸ್ಥಳೀಯ ಮುಖಂಡರ ನಡೆದುಕೊಂಡ ರೀತಿಗೆ ಆಕ್ರೊಶ ವ್ಯಕ್ತವಾಗಿದೆ.

  • ಟಿಡಿಪಿ ಮುಖಂಡನ ಬರ್ಬರ ಹತ್ಯೆ – ಆರೋಪಿಗಳಿಗಾಗಿ ಪೊಲೀಸರ ಶೋಧ

    ಟಿಡಿಪಿ ಮುಖಂಡನ ಬರ್ಬರ ಹತ್ಯೆ – ಆರೋಪಿಗಳಿಗಾಗಿ ಪೊಲೀಸರ ಶೋಧ

    ಹೈದರಾಬಾದ್: ತೆಲುಗು ದೇಶಂ ಪಕ್ಷದ ಮುಖಂಡನನ್ನು ಅಪರಿಚಿತ ವ್ಯಕ್ತಿಗಳು ಕೊಂದಿರುವ ಘಟನೆ ತೆಲಂಗಾಣದ ಜಂಗಾಂವ್ ನಲ್ಲಿ ನಡೆದಿದೆ. ಜಂಗಾಂವ್ ಹೈದರಾಬಾದ್ ನಿಂದ 85 ಕಿ.ಮೀ ದೂರದಲ್ಲಿದೆ.

     

    ಮೃತಪಟ್ಟ ವ್ಯಕ್ತಿ ಜಂಗಾಂವ್ ಪುರಸಭೆಯ ಮಾಜಿ ಕೌನ್ಸಿಲರ್ ಪುಲಿ ಸ್ವಾಮಿ(53) ಎಂದು ಗುರುತಿಸಲಾಗಿದೆ. ಮುಂಜಾನೆ ಹೈದರಾಬಾದ್-ವಾರಂಗಲ್ ಹೆದ್ದಾರಿಯಲ್ಲಿರುವ ಸಮಾಜ ಕಲ್ಯಾಣ ವಸತಿ ಶಾಲೆಯ ಬಳಿ ವಾಕಿಂಗ್ ಮಾಡುತ್ತಿದ್ದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಕೊಡಲಿಯಿಂದ ಪುಲಿ ಸ್ವಾಮಿಯವರ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ವರದಿ ಪ್ರಕಾರ ಭೂ ವಿವಾದಕ್ಕೆ ಸಂಬಂಧಿಸಿದಂತೆ ಹಳೆಯ ದ್ವೇಷ ಹಿನ್ನೆಲೆ ಪುಲಿ ಸ್ವಾಮಿಯನ್ನು ಆರೋಪಿಗಳು ಕೊಂದಿದ್ದಾರೆ ಎಂದು ಶಂಕಿಸಲಾಗುತ್ತಿದೆ. ಅಲ್ಲದೆ ಇತ್ತೀಚೆಗಷ್ಟೇ ಇದೇ ವಿಚಾರವಾಗಿ ಸ್ಥಳೀಯ ನ್ಯಾಯಾಲಯ ಟಿಡಿಪಿ ನಾಯಕರ ಪರವಾಗಿ ತೀರ್ಮಾನ ನೀಡಿತ್ತು.

    ಈ ವಿಚಾರವಾಗಿ ಮಾತನಾಡಿದ ಸಹಾಯಕ ಪೊಲೀಸ್ ಆಯುಕ್ತ ನಿನೋದ್ ಕುಮಾರ್, ಆರೋಪಿಗಳು ಕೊಲೆ ಮಾಡಿ ತಕ್ಷಣ ಹೊರಡಲು ಬೈಸಿಕಲ್ ನಲ್ಲಿ ಹಿಂದಿರುಗಲು ಸ್ಟಾರ್ಟ್ ಮಾಡಿದ್ದಾರೆ. ಆದರೆ ಬೈಸಿಕಲ್ ಸ್ಟಾರ್ಟ್ ಆಗದ ಕಾರಣ ಗಾಡಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಇದೀಗ ವಾಹನದ ಮಾಲೀಕರನ ಹುಡುಕಾಡುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಕೂಡ ಬಂಧಿಸಲಾಗುತ್ತದೆ ಎಂದು ತಿಳಿಸಿದರು

  • ಪಿಪಿಇ ಕಿಟ್ ಧರಿಸಿ ಬೈಕಿನಲ್ಲಿ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ದ ಟಿಎಂಸಿ ನಾಯಕ!

    ಪಿಪಿಇ ಕಿಟ್ ಧರಿಸಿ ಬೈಕಿನಲ್ಲಿ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ದ ಟಿಎಂಸಿ ನಾಯಕ!

    – ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಪಿಪಿಇ ಕಿಟ್ ಧರಿಸಿ ಬೈಕಿನಲ್ಲಿ ಕೊರೊನಾ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ದ ಘಟನೆ ಪಶ್ಚಿಮ ಬಂಗಾಳದ ಜಾಗ್ರ್ರಾಮ್ ಜಿಲ್ಲೆಯಲ್ಲಿ ನಡೆದಿದೆ.

    ಗೋಪಿಬಲ್ಲವ್ ಪುರದ ಪಕ್ಷದ ಯುವ ವಿಭಾಗದ ಅಧ್ಯಕ್ಷ ಸತ್ಯಕಂ ಪಟ್ನಾಯಕ್ ಅವರಿಗೆ ತಮ್ಮ ಪಕ್ಷದ ಕಾರ್ಯಕರ್ತರಿಂದಾಗಿ ವ್ಯಕ್ತಿಯೊಬ್ಬ ಅಂಬುಲೆನ್ಸ್ ವ್ಯವಸ್ಥೆ ಸಿಗದೆ ಪರದಾಡುತ್ತಿದ್ದಾರೆ ಎಂಬ ವಿಚಾರ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಗ್ರಾಮಕ್ಕೆ ತೆರಳಿದಾಗ ವಲಸೆ ಕಾರ್ಮಿಕ ಐದಾರು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿರುವುದನ್ನು ಕಂಡರು.

    ಇತ್ತ ಕಾರ್ಮಿಕನ ಕುಟುಂಬಸ್ಥರಿಗೆ ಅಂಬುಲೆನ್ಸ್ ಅಥವಾ ವಾಹನ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ಅಲ್ಲದೆ ಈ ಕುಟುಂಬಕ್ಕೆ ಸಹಾಯ ಮಾಡಲು ಕೂಡ ಯಾರೂ ಮುಂದೆ ಬರುತ್ತಿರಲಿಲ್ಲ. ಕಾರ್ಮಿಕನಿಗೆ ಕೊರೊನಾ ವೈರಸ್ ತಗಲಿರಬಹುದೆಂಬ ಶಂಕೆಯಿಂದ ಯಾರೂ ಸಹಾಯಕ್ಕೆ ಬಂದಿರಲಿಲ್ಲ.

    ಈ ಬಗ್ಗೆ ತಿಳಿದುಕೊಂಡು, ಒಬ್ಬ ವ್ಯಕ್ತಿಯನ್ನು ಇಂತಹ ಪರಿಸ್ಥಿಯಲ್ಲಿ ಹೀಗೆ ಬಿಡುವುದು ಸರಿಯಲ್ಲ ಎಂದು ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ಬೈಕ್ ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಂಡೆ. ಅಲ್ಲದೆ ಮೆಡಿಕಲ್ ಶಾಪ್ ಗೆ ತೆರಳಿ ಪಿಪಿಇ ಕಿಟ್ ಖರೀದಿಸಿದೆ. ಬಳಿಕ ವ್ಯಕ್ತಿಯ ಮನೆಗೆ ತೆರಳಿ ಆತನನ್ನು ಆಸ್ಪತ್ರೆಗೆ ಕರೆದೊಯ್ದೆ ಎಂದು ಪಟ್ನಾಯಕ್ ತಿಳಿಸಿದರು.

     

    ಕಾರ್ಮಿಕನ ಪತ್ನಿ ಹಾಗೂ ಮಕ್ಕಳು ಸ್ಥಿತಿಯ ಬಗ್ಗೆ ಕಣ್ಣೀರು ಹಾಕಿದರು. ಅಲ್ಲದೆ ಪತ್ನಿ ಕಾರ್ಮಿಕನ ಜೊತೆ ಆಸ್ಪತ್ರೆಗೆ ಹೋಗಬೇಕು ಎಂದು ಮನವಿ ಮಾಡಿಕೊಂಡರು. ಆದರೆ ನಾನು ಅವರ ಮನವೊಲಿಸಿ ಕಾರ್ಮಿಕನನ್ನು ಬೈಕಿನಲ್ಲಿ ಕೂರಿಸಿಕೊಂಡು ಗೋಪಿಬಲ್ಲವಪುರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿರುವುದಾಗಿ ಹೇಳಿದರು.

    ಆಸ್ಪತ್ರೆಯಲ್ಲಿ ವೈದ್ಯರು ಕಾರ್ಮಿಕನನ್ನು ಪರೀಕ್ಷಿಸಿ, ಕೆಲವೊಂದು ಔಷಧಿಗಳನ್ನು ನಿಡಿ ಮನೆಯಲ್ಲಿರುವಂತೆ ಸೂಚಿಸಿದರು. ನಂತರ ಪುನಃ ಕಾರ್ಮಿಕನನ್ನು ಅವರ ಮನೆಗೆ ಬಿಟ್ಟು ಬಂದೆ ಎಂದರು. ಸದ್ಯ ಪಟ್ನಾಯಕ್ ಅವರು ಪಿಪಿಇ ಕಿಟ್ ಧರಿಸಿ ಬೈಕಿನಲ್ಲಿ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಯಕನ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಕೊಹ್ಲಿ ನಾಯಕನಾಗಿ ಏನನ್ನೂ ಗೆದ್ದಿಲ್ಲ, ಗೆಲ್ಲೋದು ತುಂಬಾ ಇದೆ: ಗಂಭೀರ್

    ಕೊಹ್ಲಿ ನಾಯಕನಾಗಿ ಏನನ್ನೂ ಗೆದ್ದಿಲ್ಲ, ಗೆಲ್ಲೋದು ತುಂಬಾ ಇದೆ: ಗಂಭೀರ್

    ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಾಯಕನಾಗಿ ಏನನ್ನೂ ಗೆದ್ದಿಲ್ಲ. ಆತ ಸಾಧಿಸುವುದು ಇನ್ನೂ ತುಂಬಾ ಇದೆ ಎಂದು ಭಾರತ ತಂಡದ ಮಾಜಿ ಆಟಗಾರ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.

    ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಗಂಭೀರ್, ಕೇವಲ ವೈಯಕ್ತಿಕವಾಗಿ ಉತ್ತಮವಾಗಿ ಆಡುವುದರಿಂದ ಟೀಮ್ ಅನ್ನು ಗೆಲ್ಲಿಸಲು ಆಗುವುದಿಲ್ಲ. ನಾಯಕ ವೈಯಕ್ತಿಕ ಆಟದ ಜೊತೆಗೆ ತಂಡದ ಸದಸ್ಯರನ್ನು ಹುರಿದುಂಬಿಸಬೇಕು ಎಂದು ಕೊಹ್ಲಿ ಅವವರಿಗೆ ಸಲಹೆ ನೀಡಿದ್ದಾರೆ.

    ಕ್ರಿಕೆಟ್ ಒಂದು ಟೀಮ್ ಸೇರಿ ಆಡಬೇಕಾದ ಕ್ರೀಡೆ. ನೀವು ವೈಯಕ್ತಿಕವಾಗಿಯೂ ಸ್ಕೋರ್ ಮಾಡಬೇಕು. ಆದರ ಜೊತೆ ತಂಡವನ್ನು ದೊಡ್ಡ ದೊಡ್ಡ ಟೂರ್ನಿಯಲ್ಲಿ ಗೆಲ್ಲಿಸಬೇಕು. ವೆಸ್ಟ್ ಇಂಡೀಸ್ ಬ್ರಿಯಾನ್ ಲಾರಾ, ಸೌತ್ ಆಫ್ರಿಕಾದ ಜಾಕ್ ಕಾಲಿಸ್ ಬಹಳ ರನ್ ಹೊಡೆದರು. ಆದರೆ ಅವರು ಟ್ರೋಫಿ ಗೆಲ್ಲಲಿಲ್ಲ. ಹಾಗೆಯೇ ಕೊಹ್ಲಿ ಕೂಡ ನಾಯಕನಾಗಿ ಏನನ್ನೂ ಗೆದ್ದಿಲ್ಲ. ಇನ್ನೂ ಸಾಧಿಸಬೇಕಿರುವುದು ತುಂಬಾ ಇದೆ ಎಂದು ಹೇಳಿದ್ದಾರೆ.

    ನೀವು ಎಷ್ಟೇ ದೊಡ್ಡ ಮಟ್ಟದ ರನ್ ಹೊಳೆಯನ್ನೇ ಹರಿಸಿ, ಆದರೆ ನನ್ನ ಪ್ರಕಾರ ದೊಡ್ಡ ಟ್ರೋಫಿಯನ್ನು ಗೆಲ್ಲದೇ ಇದ್ದರೆ, ನಿಮ್ಮ ಕ್ರೀಡಾ ಜೀವನ ಪೂರ್ಣಗೊಳ್ಳಲ್ಲ. ಹಾಗಾಗಿ ಕೊಹ್ಲಿ ತಮ್ಮ ತಂಡವನ್ನು ಸರಿಯಾದ ದಾರಿಯಲ್ಲಿ ನಡೆಸಿಕೊಂಡು ಹೋಗಬೇಕು. ಬೇರೆ ಆಟಗಾರರನ್ನು ಇವರಿಗೆ ಹೋಲಿಸಬಾರದು. ಎಲ್ಲ ಆಟಗಾರರಿಗೂ ಅವರದ್ದೇ ಆದ ಸ್ಕಿಲ್ ಇರುತ್ತದೆ. ಈ ನಿಟ್ಟಿನಲ್ಲಿ ಕೊಹ್ಲಿ ತಂಡದ ಆಟಗಾರರನ್ನು ಹುರಿದುಂಬಿಸಿ ಆಡಬೇಕು ಎಂದು ಗೌತಮ್ ತಿಳಿಸಿದ್ದಾರೆ.

    ತಂಡದಲ್ಲಿರುವ ಯುವ ಆಟಗಾರರನ್ನು ಕೊಹ್ಲಿ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ದೊಡ್ಡ ದೊಡ್ಡ ಐಸಿಸಿ ಟೂರ್ನಿಗಳಲ್ಲಿ ಕೊಹ್ಲಿ ತಂಡವನ್ನು ಸರಿಯಾಗಿ ನಿರ್ವಹಣೆ ಮಾಡುವುದರಲ್ಲಿ ಎಡವಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಎಂಎಸ್ ಧೋನಿ ನಂತರ ಕೊಹ್ಲಿ 2017ರಲ್ಲಿ ಭಾರತದ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು 2019ರ ವಿಶ್ವಕಪ್ ನಲ್ಲಿ ತಂಡವನ್ನು ಮುನ್ನಡೆಸಿದರು. ಆದರೆ ತಂಡ ಟ್ರೋಫಿಯನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ನಾಕೌಟ್ ಹಂತದಲ್ಲಿ ಟೂರ್ನಿಯಿಂದ ಔಟ್ ಆಗಿತ್ತು.

    ಭಾರತದ ರನ್ ಮಷಿನ್ ಎಂದೇ ಖ್ಯಾತಿಯಾಗಿರುವ ಕೊಹ್ಲಿ ವೈಯಕ್ತಿಕವಾಗಿ ಉತ್ತಮವಾಗಿ ಆಡುತ್ತಿದ್ದಾರೆ. ಟಿ-20 ಮಾದರಿಯಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಜೊತೆಗೆ ಏಕದಿನ ಮಾದರಿಯಲ್ಲಿ ಈಗಾಗಲೇ ಒಟ್ಟು 11,867 ರನ್ ಸಿಡಿಸಿರುವ ಕೊಹ್ಲಿ, 205 ಪಂದ್ಯಗಳಲ್ಲೇ 10,000 ರನ್ ಪೂರೈಸಿ 2018ರಲ್ಲಿ ಅತೀ ಬೇಗ 10 ಸಾವಿರ ರನ್ ಗಳಿಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದರು. ಜೊತೆಗೆ ಟೆಸ್ಟ್ ಮಾದರಿಯಲ್ಲಿ ಐಸಿಸಿ ರ‍್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಆದರೆ ನಾಯಕನಾಗಿ ಇಲ್ಲಿಯವರೆಗೂ ಒಂದು ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ.

  • ಈರಣ್ಣ ಕಡಾಡಿಗೆ ರಾಜ್ಯಸಭಾ ಟಿಕೆಟ್ – ಬಿಜೆಪಿ ತಂತ್ರಗಾರಿಕೆ ಏನು?

    ಈರಣ್ಣ ಕಡಾಡಿಗೆ ರಾಜ್ಯಸಭಾ ಟಿಕೆಟ್ – ಬಿಜೆಪಿ ತಂತ್ರಗಾರಿಕೆ ಏನು?

    ಬೆಳಗಾವಿ: ಬಿಜೆಪಿ ಹೈ ಕಮಾಂಡ್ ಬೆಳಗಾವಿಯ ಈರಣ್ಣ ಕಡಾಡಿ ಅವರಿಗೆ ರಾಜ್ಯಸಭಾ ಟಿಕೆಟ್ ಘೋಷಣೆ ಮಾಡಿದೆ. ಈ ಮೂಲಕ ಬೆಳಗಾವಿ ವಿಭಾಗದಲ್ಲಿ ಪಕ್ಷವನ್ನು ಬಲ ಪಡಿಸಲು ಮುಂದಾಗಿದೆ.

    ಈರಣ್ಣ ಕಡಾಡಿ ಅವರು ಆರ್‍ಎಸ್‍ಎಸ್ ಹಾಗೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಆರ್‍ಎಸ್‍ಎಸ್ ಕಳುಹಿಸಿದ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಓಕೆ ಮಾಡಿತಾ ಎಂಬ ಪ್ರಶ್ನೆ ಎದ್ದಿದೆ. ಈ ಮೂಲಕ ಬೆಳಗಾವಿಯಿಂದ ಒಂದು ಸ್ಥಾನಕ್ಕೆ ಪ್ರಭಾಕರ್ ಕೋರೆ ಹಾಗೂ ರಮೇಶ ಕತ್ತಿ ನಡುವೆ ತೀವ್ರ ಪೈಪೋಟಿಗೆ ಹೈಕಮಾಂಡ್ ಫುಲ್‍ಸ್ಟಾಪ್ ಇಟ್ಟಿದೆ.

    ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಗ್ರಾಮದಲ್ಲಿ ಈರಣ್ಣ ಕಡಾಡಿ ಅವರು 1966ರ ಜೂನ್ 1ರಂದು ಜನಿಸಿದ್ದು, 1989ರಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಅರಭಾಂವಿ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಸಿದ ಅವರು, ಗೋಕಾಕ್ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

    ಈರಣ್ಣ ಕಡಾಡಿ ಅವರು ಬಿಜೆಪಿಯ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿದ್ದರು. 1994ರಲ್ಲಿ ಅರಭಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಮಾಜಿ ಸಚಿವ ವಿ.ಎಸ್.ಕೌಜಲಗಿ ಅವರ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. 2004ರಲ್ಲಿ ಬೆಳಗಾವಿ ಗ್ರಾಮೀಣ ಘಟಕದ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು. ಬಳಿಕ 2010ರಲ್ಲಿ ಬೆಳಗಾವಿ ಜಿ.ಪಂ.ಅಧ್ಯಕ್ಷರಾಗಿದ್ದರು.

    ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಈರಣ್ಣ ಕಡಾಡಿ ಸೇವೆ ಸಲ್ಲಿಸಿದ್ದಾರೆ. ಮೊದಲಿನಿಂದಲೂ ಆರ್‍ಎಸ್‍ಎಸ್, ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಈರಣ್ಣ ಕಡಾಡಿ ಸದ್ಯ ಬಿಜೆಪಿ ವಿಭಾಗೀಯ ಪ್ರಭಾರಿ ಆಗಿದ್ದಾರೆ. ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಭಾಗದ ಬಿಜೆಪಿ ವಿಭಾಗೀಯ ಪ್ರಭಾರಿಯಾಗಿದ್ದಾರೆ.